ಮಲ್ಲಿಯಾಬಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಮಲ್ಲಿಯಾಬಾದ್
Country ಭಾರತ
Stateಕರ್ನಾಟಕ
Regionಬಯಲುಸೀಮೆ
Districtರಾಯಚೂರು
Languages
ಸಮಯ ವಲಯಯುಟಿಸಿ+೫:೩೦ (IST)
PIN
೫೮೪೧೦೧
Telephone code೯೧೮೫೩೨
ವಾಹನ ನೋಂದಣಿKA-36
ಜಾಲತಾಣraichur.nic.in

ಮಲ್ಲಿಯಾಬಾದ್ ರಾಯಚೂರಿನಿಂದ ೫ ಕಿಮೀ ಇದ್ದು, ಇದು ಐತಿಹಾಸಿಕ ಕೋಟೆ ಮತ್ತು ಸ್ಮಾರಕಗಳನ್ನು ಹೊಂದಿದೆ. ಇಲ್ಲಿ ಪುರಾತತ್ವ ಇಲಾಖೆಯ ಉತ್ಖನನ, ಸಂಶೋಧನೆ, ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿವೆ.

ಮಲ್ಲಿಯಾಬಾದ್ ಕೋಟೆ[ಬದಲಾಯಿಸಿ]

ಮಲ್ಲಿಯಾಬಾದ್ ಕೋಟೆಯು ರಾಯಚೂರು ಮತ್ತು ಉತ್ತರ ಕರ್ನಾಟಕ ಜಿಲ್ಲೆಯ ಇತಿಹಾಸದಲ್ಲಿ ಪ್ರಮುಖವಾಗಿದೆ. ಪಾಳುಬಿದ್ದ ವಿಷ್ಣು ದೇವಾಲಯ ಮತ್ತು ಬಿಳಿ ಗ್ರಾನೈಟ್‌ನಲ್ಲಿ ಕೆತ್ತಿದ ದೊಡ್ಡ ಗಾತ್ರದ ಜೋಡಿ ಆನೆಗಳು ಕೋಟೆಯಲ್ಲಿವೆ. ರಾಜ್ಯ ಪುರಾತತ್ವ ಇಲಾಖೆಯು ಸಂರಕ್ಷಿತ ಐತಿಹಾಸಿಕ ಸ್ಮಾರಕವೆಂದು ಘೋಷಿಸಿದೆ. ಈ ಕೋಟೆಯು ೧೩ ನೇ ಶತಮಾನದಲ್ಲಿ (ಕ್ರಿ.ಶ. ೧೨೯೪) ವಾರಂಗಲ್‌ನ ಕಾಕತೀಯರಿಂದ ನಿರ್ಮಿಸಲ್ಪಟ್ಟಿತು ಮತ್ತು ವಿಜಯನಗರ ಸಾಮ್ರಾಜ್ಯದೊಂದಿಗೆ ಸಹ ಸಂಬಂಧ ಹೊಂದಿತ್ತು. ಕ್ರಿ.ಶ ೧೫೨೦ ರಲ್ಲಿ ಆದಿಲ್ ಶಾಹಿ ವಿರುದ್ಧ ರಾಯಚೂರು ಕದನದ ಸಮಯದಲ್ಲಿ ಕೃಷ್ಣದೇವರಾಯನು ತನ್ನ ಸೈನ್ಯದೊಂದಿಗೆ ಇಲ್ಲಿಯೇ ತಂಗಿದ್ದನು. [೧]

ದೊಡ್ಡ ಗಾತ್ರದ ಆನೆಗಳು[ಬದಲಾಯಿಸಿ]

ಬಿಳಿ ಗ್ರಾನೈಟ್ [೨] [೩] ನಲ್ಲಿ ಕೆತ್ತಿದ ಎರಡು ದೊಡ್ಡ ಆನೆಗಳು ಮಲ್ಲಿಯಾಬಾದ್ ಕೋಟೆಯಲ್ಲಿ ಕಂಡುಬಂದಿವೆ ಮತ್ತು ಇವುಗಳು ಸರ್ಕಾರಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿವೆ. ಆನೆಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿದ್ದವು. ಮೊದಲಿಗೆ ಆನೆಗಳನ್ನು ವಿಷ್ಣು ದೇವಾಲಯದ ಮುಂಭಾಗದಲ್ಲಿ ಇರಿಸಲಾಗಿತ್ತು ಮತ್ತು ಒಮ್ಮೆ ಮಲ್ಲಿಯಾಬಾದ್ ಕೋಟೆಯ ಹೆಬ್ಬಾಗಿಲಿನಲ್ಲಿ ಇರಿಸಲಾಗಿತ್ತು. [೪]

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Research on fort in Malliabad soon". The Hindu. 2011-01-01. Archived from the original on 2013-06-16. Retrieved 2013-04-24.
  2. "Marred by vandalism and neglect". The Hindu. Retrieved 2013-04-24.
  3. "Monuments in a state of neglect". The Hindu. 2006-12-04. Archived from the original on 2008-10-05. Retrieved 2013-04-24.
  4. "Provide security to historical monuments, says sangha". The Hindu. 2006-12-10. Archived from the original on 2006-12-12. Retrieved 2013-04-25.