೨೦೧೯ ರ ಬಂಡೀಪುರದ ಕಾಡ್ಗಿಚ್ಚು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(೨೦೧೯ ರ ಬಂಡೀಪುರ ಕಾಡ್ಗಿಚ್ಚು ಇಂದ ಪುನರ್ನಿರ್ದೇಶಿತ)
ಬಂಡೀಪುರದ ಕಾಡ್ಗಿಚ್ಚು
ಕಾಡ್ಗಿಚ್ಚು ಬಂಡೀಪುರದ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿತ್ತಿರುವುದು
ಸ್ಥಳಚಾಮರಾಜನಗರ ಜಿಲ್ಲೆ, ಕರ್ನಾಟಕ, ಭಾರತದಲ್ಲಿ
ಅಂಕಿ ಅಂಶಗಳು
ದಿನಾಂಕ(ಗಳು)21 ಫೆಬ್ರವರಿ 2019 (2019-02-21) – 25 ಫೆಬ್ರವರಿ 2019 (2019-02-25)[೧]
ಸುಟ್ಟ ಸ್ಥಳ4,419.54 hectares (10,920.9 acres)[೧]
ಕಾರಣವಿಧ್ವಂಸಕ ಕೃತ್ಯ
ಸಾವಿನ ಸಂಖ್ಯೆಅನೇಕ ಜೀವಿಗಳು
ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿರುವ ಉಪಗ್ರಹ ಚಿತ್ರ; ಹೊಗೆ ಕೇರಳದ ಮೇಲೆ ನೈಋತ್ಯಕ್ಕೆ ಹಿಂಬಾಲಿಸುತ್ತಿರುವುದು

ಫೆಬ್ರವರಿ ೨೦೧೯ ರಲ್ಲಿ, ಭಾರತದ ಕರ್ನಾಟಕ ರಾಜ್ಯದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಾದ್ಯಂತ ಹಲವಾರು ಸ್ಥಳಗಳಲ್ಲಿ ಭಾರೀ ಕಾಡ್ಗಿಚ್ಚುಗಳು ಸಂಭವಿಸಿದವು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಬೆಂಕಿಯಿಂದ ಹಾನಿಗೊಳಗಾದ ಒಟ್ಟು ಪ್ರದೇಶದ ಮೌಲ್ಯಮಾಪನವನ್ನು ನಡೆಸಿತು. ೨೧ ಫೆಬ್ರವರಿ ೨೦೧೯ ರಿಂದ ೨೫ ಫೆಬ್ರವರಿ ೨೦೧೯ ರವರ ವರೆಗೆ ಕಳೆದ ಐದು ದಿನಗಳಲ್ಲಿ ಸುಟ್ಟ ಪ್ರದೇಶದ ವಿಸ್ತೀರ್ಣವು ಸುಮಾರು ೧೦,೯೨೦ ಎಕರೆ ಎಂದು ಅಂದಾಜಿಸಿದೆ [೨] [೩] [೪]

೨೪ ಫೆಬ್ರವರಿ ೨೦೧೯ ರ ವೇಳೆಗೆ ದೊಡ್ಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತಾದರೂ, ಕೆಲವು ಪ್ರದೇಶಗಳಲ್ಲಿ ಉರಿಯುತ್ತಲೇ ಇತ್ತು. ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿ ಸುಮಾರು ೪೦ ಎಕರೆ ಪ್ರದೇಶದಲ್ಲಿ ಹಾನಿಯಾಯಿತು. ಇದು ಮತ್ತಷ್ಟು ಹರಡದಂತೆ ತಮಿಳುನಾಡು ಅರಣ್ಯ ಇಲಾಖೆ ಕ್ರಮ ಕೈಗೊಂಡಿತು. [೩]

ಹಿನ್ನೆಲೆ[ಬದಲಾಯಿಸಿ]

೨೧ ಫೆಬ್ರವರಿ ೨೦೧೯ ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತು. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಹಠಾತ್ ಹವಾಮಾನ ಬದಲಾವಣೆ ಮತ್ತು ಒಣ ಹುಲ್ಲು ಮತ್ತು ಲಂಟಾನ ಕ್ಷಿಪ್ರ ಬೆಳವಣಿಗೆಯಿಂದಾಗಿ ಬಂಡೀಪುರದಲ್ಲಿ ಕಾಡ್ಗಿಚ್ಚು ಮೊದಲ ಬಾರಿಗೆ ಕಾಣಿಸಿಕೊಂಡಿತು. ಉದ್ಯಾನದಲ್ಲಿ ಕಾಡೆಮ್ಮೆ, ಆನೆಗಳು, ಚಿರತೆ ಮತ್ತು ಹುಲಿಗಳಂತಹ ದೊಡ್ಡ ಸಸ್ತನಿಗಳ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. [೫]

ಬಂಡೀಪುರ ಪ್ರದೇಶದಲ್ಲಿ ೧೯ ಸಾವಿರ ಎಕರೆ ಅರಣ್ಯ ನಾಶವಾಯಿತು. ಗಾಳಿಯಿಂದಾಗಿ ಬೆಂಕಿ ವೇಗವಾಗಿ ಹರಡುತ್ತಿದ್ದು, ಅಧಿಕಾರಿಗಳು ಗುಂಡ್ಲುಪೇಟೆ - ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದರು, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಯನ್ನೂ ರದ್ದುಗೊಳಿಸಲಾಗಿತ್ತು. ಬಲವಾದ ಗಾಳಿಯು ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಮತ್ತು ಸ್ವಯಂಸೇವಕರ ಕೆಲಸವನ್ನು ಹೆಚ್ಚು ಕಷ್ಟಕರವಾಗಿಸಿತು. [೬]

ಕುಂದಕೆರೆ ಶ್ರೇಣಿಯನ್ನು ನಾಶಪಡಿಸಿದ ಬೆಂಕಿಯು ಬಾರಕಟ್ಟೆ ಮತ್ತು ಗುಡ್ಡಕೆರೆ, ನಂತರ ಹಿಮವತಿ ಗೋಪಾಲಸ್ವಾಮಿ ಬೆಟ್ಟಗಳಿಗೆ ವ್ಯಾಪಿಸಿತು. ಇದು ಜಾರ್ಕಲ್ ಕೆರೆ ಮತ್ತು ಗೌರಿಕಾಳು ಬೆಟ್ಟಗಳಲ್ಲಿನ ಕಾಡುಗಳನ್ನು ನಾಶಪಡಿಸಿತು. ಸಾವಿರಾರು ಮರಗಳ ಜೊತೆಗೆ ಅನೇಕ ಸಣ್ಣ ಸಸ್ತನಿಗಳು ಮತ್ತು ಸರೀಸೃಪಗಳು ಸತ್ತವು. ಹಿಂದಿನ ಎರಡು ವರ್ಷಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಯಾವುದೇ ಕಾಡ್ಗಿಚ್ಚಿನ ಘಟನೆಗಳು ಕಂಡುಬಂದಿರಲಿಲ್ಲ. [೬]

ಅಗ್ನಿಶಾಮಕ ಪ್ರಯತ್ನಗಳು[ಬದಲಾಯಿಸಿ]

೨೪ ಫೆಬ್ರವರಿ ೨೦೧೯ ರಂದು ಬಂಡೀಪುರ ಕಾಡ್ಗಿಚ್ಚು ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯ ಜನರು ಸಹಾಯ ಮಾಡುತ್ತಿರುವುದು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳಿಂದ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ೨೫ ಫೆಬ್ರವರಿ ೨೦೧೯ ರ ಮಧ್ಯಾಹ್ನ ಎರಡು Mi-17 ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು. ೨೫ ಫೆಬ್ರವರಿ ೨೦೧೯ ರಂದು ಕಾರ್ಯಾಚರಣೆಯು ಪ್ರಾಥಮಿಕವಾಗಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗೋಪಾಲಸ್ವಾಮಿ ಬೆಟ್ಟಗಳ ಶ್ರೇಣಿಗೆ ಸೀಮಿತವಾಗಿತ್ತು. ಕುಂದಕೆರೆ ಮತ್ತು ಬಂಡೀಪುರ ಇತರ ಎರಡು ರೇಂಜ್‌ಗಳು ಗಂಭೀರವಾಗಿ ಪರಿಣಾಮ ಬೀರಿತ್ತು. [೭] ಆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಭಾರತೀಯ ವಾಯುಪಡೆಯನ್ನು ಸಹಾಯಕ್ಕಾಗಿ ಕರೆದ ನಂತರ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತು. [೮] ಒಬ್ಬರು ಕರಡಿಕಲ್ ಬೆಟ್ಟದ ಸಾಲುಗಳತ್ತ ಸಾಗಿದರೆ ಮತ್ತೊಬ್ಬರು ಚಮ್ಮನ ಹಳ್ಳದ ಮೇಲಿನ ಸಾಮಾನ್ಯ ಪ್ರದೇಶದಲ್ಲಿ ಬೆಂಕಿಯನ್ನು ನಂದಿಸಿದರು.

ಬೋಳಗುಡ್ಡ ಮತ್ತು ಕಣಿವೆ ದೇವಸ್ಥಾನದ ಪ್ರದೇಶಗಳು ಹೆಲಿಕಾಪ್ಟರ್ ಅಗ್ನಿಶಾಮಕ ನಿಯಂತ್ರಣಕ್ಕೆ ಒಳಪಟ್ಟಿವೆ [೯] ಒಟ್ಟು ೧೦ ಹೆಲಿಕಾಪ್ಟರ್‌ ಹಾರಿಸಲಾಯಿತು, ಸರಿಸುಮಾರು ೩೦,೦೦೦ ಲೀಟರ್ ನೀರನ್ನು ಬಿಡಲಾಗಿತ್ತು. [೭]

ಹಾನಿ ಮೌಲ್ಯಮಾಪನ[ಬದಲಾಯಿಸಿ]

ಕಾಡ್ಗಿಚ್ಚು ಪೀಡಿತ ಪ್ರದೇಶದ ಸೆಂಟಿನೆಲ್-2 ಉಪಗ್ರಹ ಚಿತ್ರಗಳು

ಉಪಗ್ರಹ ಚಿತ್ರಗಳು ಕಾಡ್ಗಿಚ್ಚಿನಿಂದ ಉಂಟಾದ ಹಾನಿಯ ಪ್ರಮಾಣವನ್ನು ತೋರಿಸಿದವು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೈದರಾಬಾದ್‌ನ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಸೆಂಟಿನೆಲ್-2 ಉಪಗ್ರಹದ ದತ್ತಾಂಶವನ್ನು ಆಧರಿಸಿ ವರದಿಯನ್ನು ಬಿಡುಗಡೆ ಮಾಡಿತು, ಇದು ಬಂಡೀಪುರದಲ್ಲಿ ೨೩ ಫೆಬ್ರವರಿ ೨೦೧೯ ಮತ್ತು ೨೫ ಫೆಬ್ರವರಿ ೨೦೧೯ ರ ನಡುವೆ ೧೫,೪೪೩.೨೭ ಎಕರೆ ಅರಣ್ಯ ಪ್ರದೇಶವು ಬೆಂಕಿಯಿಂದ ಹಾನಿಯಾಗಿದೆ ಎಂದು ವರದಿ ಮಾಡಿತು. ಅರಣ್ಯ ಪ್ರದೇಶ ಮಾತ್ರ. ನೇಚರ್ ಕನ್ಸರ್ವೇಶನ್ ಫೌಂಡೇಶನ್‌ನ ವನ್ಯಜೀವಿ ವಿಜ್ಞಾನಿ ಮೈಸೂರು ದೊರೆಸ್ವಾಮಿ ಮಧುಸೂದನ್, ಬಂಡೀಪುರದ (ಕಂದಾಯ ಭೂಮಿ) ಆಡಳಿತಾತ್ಮಕವಾಗಿ ಭಾಗದಲ್ಲಿ ಹಾನಿಯನ್ನು ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ ಹೊರತುಪಡಿಸಿದ ನಂತರ ೧೭,೦೦೦೦ ಎಕರೆ ಹಾನಿಗೊಳಗಾಗಬಹುದು ಎಂದು ಅಂದಾಜಿಸಿದ್ದಾರೆ. [೧೦]

ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಅಂದಾಜಿಸಿರಲಿಲ್ಲ. ನಿಧಾನವಾಗಿ ಚಲಿಸುವ ಸಣ್ಣ ಪ್ರಾಣಿಗಳು, ಸರೀಸೃಪಗಳು ಕಾಟವನ್ನು ಅನುಭವಿಸಿದರೆ, ಚಿರತೆ ಮತ್ತು ಹುಲಿಗಳಂತಹ ದೊಡ್ಡ ಸಸ್ತನಿಗಳು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಓಡಿಹೋಗಿ ಹತ್ತಿರದ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ ಎಂದು ವನ್ಯಜೀವಿ ಅಧಿಕಾರಿಗಳು ಹೇಳುತ್ತಾರೆ. [೧೦]

ತನಿಖೆ[ಬದಲಾಯಿಸಿ]

"ವಿಧ್ವಂಸಕ ಕೃತ್ಯ" ಬೆಂಕಿ ಶುರುವಾಗಲು ಕಾರಣ ಎಂದು ಕರ್ನಾಟಕದ ಉನ್ನತ ಅರಣ್ಯಾಧಿಕಾರಿ ಖಚಿತಪಡಿಸಿದರು. [೧೧] ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪದ ಮೇಲೆ ಇಬ್ಬರು ಕುರಿಗಾಹಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು. ಬಂಡೀಪುರದಲ್ಲಿ ತಮ್ಮ ಜಾನುವಾರುಗಳ ಮೇಲೆ ಹುಲಿ ದಾಳಿಗೆ ಹೆದರಿ, ಫೆಬ್ರವರಿ ೨೨, ೨೦೧೯ ರಂದು ಅವರು ಸುಮಾರು ಒಂದು ತಿಂಗಳ ಕಾಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಓಡಿಸಲು ಬೆಂಕಿ ಹಚ್ಚಿದ್ದರು, ಇದು ಭಾರಿ ಬೆಂಕಿಗೆ ಕಾರಣವಾಯಿತು, ಇದು ಬಂಡೀಪುರ ಅರಣ್ಯ ಪ್ರದೇಶವನ್ನು ನಾಶಪಡಿಸಿತು. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ ರ ಭಾರತೀಯ ಸೆಕ್ಷನ್ ೨೭, ೨೯, ೩೦, ೩೧, ೪೦, ೫೦ ಮತ್ತು ೫೧ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. [೧೨] [೧೩]

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "CM's aerial survey of Bandipur today". Deccan Herald. 27 Feb 2019.
  2. "Core areas of Bandipur hit by forest fire, say experts". Hindustan Times. 26 Feb 2019.
  3. ೩.೦ ೩.೧ "Wildfire destroys over 10,000 acres of Bandipur forest". The Indian Express. 25 Feb 2019.
  4. "Estimates of Bandipur fire damage vary". The Hindu. 25 Feb 2019.
  5. "Karnataka Continues To Battle Wildfire In Bandipur Forest Area". NDTV. 25 Feb 2019.
  6. ೬.೦ ೬.೧ "Fire turns 2,500 acres of Bandipur forest to ashes". The Indian Express. 24 Feb 2019.
  7. ೭.೦ ೭.೧ "Bandipur fire: IAF helicopters pressed into service". All India Radio. 25 Feb 2019. Archived from the original on 4 ಜೂನ್ 2020. Retrieved 7 ಮಾರ್ಚ್ 2023.
  8. "Bandipur forest fire: IAF to help Karnataka govt douse fire in Bandipur Tiger Reserve". Times Now. 25 Feb 2019.
  9. "Bandipur fire: Air Force choppers join efforts to douse blaze at tiger reserve". Scroll. 25 Feb 2019.
  10. ೧೦.೦ ೧೦.೧ "When Bandipur burned". The Hindu. 9 Mar 2019.
  11. "karnataka: Bandipur fire doused, forest official confirm'act of sabotage'". Times Of India. 25 Feb 2019.
  12. "Bandipur blaze: Two shepherds arrested". Bangalore Mirror. 3 March 2019.
  13. "The Massive Wildfire That Burnt Down Bandipur Tiger Reserve Was Ignited By Shepherds To Keep Tigers Away". Indiatimes. 3 March 2019.

ಬಾಹ್ಯ ಕೊಂಡಿಗಳು[ಬದಲಾಯಿಸಿ]