ಸಿದ್ಧರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿದ್ಧರಾಮ
ಜನನಸಿದ್ಧರಾಮ /ಧೂಳಿಮಾಕಾಳ
೧೧೬೦
ಸೊನ್ನಲಿಗೆ
ಅಂಕಿತನಾಮಕಪಿಲಸಿದ್ಧ ಮಲ್ಲಿಕಾರ್ಜುನ


ಸಿದ್ಧರಾಮ ೧೨ನೇ ಶತಮಾನದಲ್ಲಿ ಸೊನ್ನಲಿಗೆಯಲ್ಲಿದ್ದ ಪ್ರಸಿದ್ಧ ವಚನಕಾರ. ೧೨ನೇ ಶತಮಾನದಲ್ಲಿ ಶಿವಶರಣರು ಶ್ರಮದಾನ, ಸ್ವಯಂಸೇವೆಯನ್ನು ಕಾರ್ಯರೂಪಕ್ಕೆ ತಂದಿದ್ದರು. ಆ ಕಾಲಘಟ್ಟದ 'ಕಾಯಕ ಪ್ರತಿನಿಧಿ'ಯಾಗಿ ಸಿದ್ಧರಾಮ ನಿಲ್ಲತ್ತಾನೆ.

ಸಿದ್ಧರಾಮನ ಹುಟ್ಟು/ಬಾಲ್ಯ[ಬದಲಾಯಿಸಿ]

  • ಮುದ್ಧಗೌಡ ಮತ್ತು ಸುಗ್ಗವ್ವೆಗೆ ಸುಮಾರು ೫೦ವರ್ಷಗಳಾದ ಮೇಲೆ ತೇಜಸ್ವಿಯಾದ ಗಂಡು ಮಗುವೊಂದು ಜನಿಸುತ್ತದೆ. ಸಿದ್ಧರಾಮ ಮುದ್ಧಗೌಡ ಮತ್ತು ಸುಗ್ಗವ್ವೆಯರಲ್ಲಿ ತಾರುಣ್ಯದ ರಾಗ-ದ್ವೇಷ, ಕಾಮ-ಕ್ರೋಧಗಳು ವಿಜೃಂಭಿಸುವಾಗ ಹುಟ್ಟದೆ, ಅರಿಷಡ್ವರ್ಗಗಳೆಲ್ಲ ಶರೀರದಲ್ಲಿ ಆರುತ್ತಾ, ಪ್ರೇಮದಿಂದ ಪಕ್ವಗೊಂಡ ಅಪರ ವಯಸ್ಸಿನ ದೇಹದಲ್ಲಿ ಹುಟ್ಟುತ್ತಾನೆ. ಈತನ ಕಾಲ ೧೧೫೦(12ನೇ ಶತಮಾನ)
  • ಮಗುವಿಗೆ ತಾಯಿ ಸಿದ್ಧರಾಮನೆಂಬ ಹೆಸರಿಡಬೇಕೆಂದರೆ, ತಂದೆ ಮಗನಿಗೆ 'ಧೂಳಿಮಾಕಾಳ'ನೆಂದು ಹೆಸರಿಡಲು ಆಲೊಚಿಸುತ್ತಾನೆ. ಸಿದ್ಧರಾಮ ಬಾಲ್ಯದಲ್ಲಿ ಮೌನದ ಅಪರಾವತಾರವೇ ಆಗಿದ್ದ. ಅವನೊಳಗಿನ ತೇಜಸ್ಸು 'ತಿಲದೊಳಗಿನ ತೈಲದಂತೆ, ಹಾಲಿನ ಮರೆಯ ತುಪ್ಪದಂತೆ' ಅಂತರಂಗದಲ್ಲಿ ಸುಪ್ತವಾಗಿದ್ದು, ಮೆಲ್ಲ ಮೆಲ್ಲನೆ ಮಾವಿನ ಮರದಡಿಯಲ್ಲಿ ಪಶುಪತಿಯ ಆರಾಧನೆಯೊಂದಿಗೆ ವಿಕಾಸಗೊಳ್ಳುತ್ತಾ ಸಾಗುತ್ತದೆ.

ಸಿದ್ಧರಾಮನ ಸತ್ವಪರೀಕ್ಷೆ/ಪವಾಡ/ಅಲ್ಲಮರ ಜೊತೆಗೆ ಸಂವಾದ[ಬದಲಾಯಿಸಿ]

  • ಸೊನ್ನಲಿಗೆಯ ಜನ ಸಿದ್ಧರಾಮ ಪವಾಡ ಪುರುಷನೆಂದು ನಂಬುವುದರಲ್ಲೇ ಹೆಚ್ಚು ಖುಷಿ ಪಡುತ್ತಾರೆ.ಅವರ ದೃಷ್ಟಿಯಲ್ಲಿ ಸಿದ್ಧರಾಮ ದಿನಾ ರಾತ್ರಿ ಕೈಲಾಸಕ್ಕೆ ಹೋಗಿ, ಬೆಳಿಗ್ಗೆ ಅಲ್ಲಿಂದಲೇ ಬರೋದು.
  • ಸಿದ್ಧರ ಸಿದ್ಧ ಕುಟಿಲ ವಿದ್ಯಾಸಾಗರ ಸಿದ್ಧರಾಮನ ಪವಾಡವನ್ನು ಕೇಳಿ ಬಂದು ಅವನನ್ನು ನೇರವಾಗಿ ಪರೀಕ್ಷಿಸುತ್ತಾನೆ. ಕುಟಿಲ ವಿದ್ಯಾಸಾಗರನ ಶಿಷ್ಯರು ಸಿದ್ಧರಾಮನ ಶಿಷ್ಯರನ್ನು ಸಾಯಿಸಲು ಗುಗ್ಗರಿಯಲ್ಲಿ ಭಯಂಕರ ವಿಷ ಬೆರೆಸಿಟ್ಟುರುವುದು ಸಿದ್ಧರಾಮನಿಗೆ ಗೊತ್ತಾಗುತ್ತದೆ. ಭಯಂಕರ ವಿಷ ಮಿಶ್ರಿತ ಆಹಾರವನ್ನು ಮಲ್ಲಿಕಾರ್ಜುನನ ಕೃಪೆಯಿಂದ ಸಿದ್ಧರಾಮ ಅಮೃತವನ್ನಾಗಿಸಿ ತನ್ನ ಶಿಷ್ಯರಿಗೆ ಅದನ್ನು ಹಂಚುತ್ತಾನೆ.
  • ಮತ್ತೊಮ್ಮೆ ಸಿದ್ಧರಾಮ ಕೆಂಪಗೆ ಕಾದ ಪಂಚಲೋಹದ ಗುಂಡನ್ನು ಬರಿಗೈನಲ್ಲಿ ಹಿಡಿದು ತನ್ನ ಶಿಷ್ಯರಿಗೆ ತೋರಿಸುತ್ತಾನೆ.
  • ಅಲ್ಲಮಪ್ರಭುಗಳು ಹಾಗೂ ಸಿದ್ದರಾಮರ ಸಂವಾದ:ಕೆರೆ ಕಟ್ಟುವ ಸಂದರ್ಭದಲ್ಲಿ ಅಲ್ಲಮಪ್ರಭುಗಳು ಬಂದು ಅಲ್ಲಿರುವ ಶಿಷ್ಯರನ್ನು ಕರೆದು ಎಲ್ಲಿ ನಿಮ್ಮ ಒಡ್ಡರ ಸಿದ್ದರಾಮ, ಒಡ್ಡರಾಮ ಎನ್ನುವರು.ಒಡ್ಡರಾಮ ಎಂದಕೂಡಲೇ ಶಿಷ್ಯರು ಕಲ್ಲು ಕೋಲುಗಳಿಂದ ಹೊಡೆದರು, ಬೀಸಿರುವ ಕಲ್ಲುಗಳು ಹೂವು ಪತ್ರೆಗಳಾಗಿ, ಕೋಲುಗಳು ಹೂಮಾಲೆಗಳಾಗಿ ಪ್ರಭುವಿನ ಪಾದದ ಮೇಲೆ ಬಿದ್ದವು, ಸಿದ್ದರಾಮರ ಶಿಷ್ಯರು ಆಶ್ಚರ್ಯಚಕಿತರಾಗಿ ಇವನನ್ನ ನಮ್ಮ ಕಡೆಯಿಂದ ಮಣಿಸಲು ಸಾಧ್ಯವಿಲ್ಲ ನಮ್ಮ ಒಡೆಯ ಆದರೂ ಸರಿ ಅಂತ ಸಿದ್ದರಾಮರ ಕಡೆ ಹೋಗಿ ದೂರನ್ನು ಸಲ್ಲಿಸಿದರು. ಯಾವನೋ ಒಬ್ಬ ಸನ್ಯಾಸಿ ಮಾಯಾವಿ ಬಂದು ನಿಮ್ಮನ್ನ ಒಡ್ಡರಾಮ, ಒಡ್ಡ, ದಡ್ಡ ಒಡ್ಡ, ಮೂರ್ಖ ಒಡ್ಡ ಎಂದು ಅವಮಾನಿಸಿತ್ತಿರುವನು ಎಂದಾಗ ಸಿದ್ದರಾಮರಿಗೆ ಎಲ್ಲಿಲ್ಲದ ಕೋಪ ಬಂತು, ಕೋಪದಲ್ಲಿ ಯಾರವನು ಕಾಮಾರಿಯೋ, ದನುಜಾರಿಯೋ ತೋರವನ ನಾಲಿಗೆಯನ್ನ ಬೇರುಸಮೇತ ಕೀಳುಬಿಡುವೆನು. ದಾಪುಗಾಲು ಹಾಕುತ್ತಾ ಬಂದು ಅಲ್ಲಮರ ಎದುರುಗಡೆ ನಿಂತು, ನೀನೆ ಏನು ನನ್ನ ದಡ್ಡ ಒಡ್ಡ ಎಂದದ್ದು ಎಂದಾಗ, ಅಲ್ಲಮರು ಹೌದು ನಾನೇ ಎಂದರು, ಇಬ್ಬರ ನಡುವೆ ವಾದವಿವಾದಗಳು ನಡೆದವು, ಕೊನೆಗೆ ಸಿದ್ದರಾಮರು ಶಿವನು ಕೊಟ್ಟ ಮೂರನೇಯ ಕಣ್ಣನ್ನು ತೆರದರು, ಅಲ್ಲಿರುವ ಜನ ಗಾಬರಿಗೊಂಡರು, ಧಗಧಗಿಸುತ್ತ ಉರಿ ಬಂತು, ಇನ್ನೇನು ಇಡಿ ಸೊನ್ನಲಿಗೆ ಸುಡುವಂತಿತ್ತು ಅಲ್ಲಮರ ಕಡೆ ಧಗಧಗಿಸುತ್ತ ಉರಿಬಂತು ಪ್ರಭುವಿನ ಪಾದದೊಳಗೆ ಐಕ್ಯವಾಯಿತು. ಸಿದ್ದರಾಮರಿಗೆ ತಮ್ಮ ತಪ್ಪಿನ ಅರಿವಾಗಿ ಪ್ರಭುವಿನ ಪಾದಕ್ಕೆ ಎರಗಿದರು. ಕೊನೆಗೆ ಕಲ್ಯಾಣಕ್ಕೆ ತೆರಳಿದರು.ಮತ್ತೆ ಮುಂದುವರೆದು ಅಲ್ಲಿರುವ ಪ್ರತಿಯೊಬ್ಬರ ಜಾತಿ ಹೆಸರಿನೊಂದಿಗೆ ಅವರ ಹೆಸರನ್ನ ತೆಗೆದುಕೊಳ್ಳುತ್ತಾ ಹಾವಿನಾಳ ಕಲ್ಲಯ್ಯನವರ ಜಾತಿಯೊಂದಿಗೆ ಅವರ ಹೆಸರನ್ನು ತೆಗೆದುಕೊಳ್ಳುತ್ತಾ, ಮತ್ತೆ ಸಿದ್ದರಾಮರ ಕಡೆ ತಿರುಗಿ ಪ್ರೀತಿಯಿಂದ ಯೋಗಿಗಳ ಯೋಗಿ ಒಡ್ಡ ಸಿದ್ದರಾಮ ಎಂದಾಗ ಶಿಷ್ಯರೆಲ್ಲರೂ ತಲೆಬಾಗಿ ನಮಸ್ಕರಿಸಿದರು. ಕೊನೆಗೆ ಜ್ಞಾನೋದಯವಾಗಿ ಸಿದ್ದರಾಮರು ಕಲ್ಯಾಣಕ್ಕೆ ಹೊರಡಲು ಸಿದ್ದರಾದರು.

ಸಿದ್ಧರಾಮನ ವಚನ[ಬದಲಾಯಿಸಿ]

ಹಸಿವುದೋರದ ಮುನ್ನ, ತೃಷೆದೋರದ ಮುನ್ನ
ವ್ಯಾಧಿ ವಿಪತ್ತುಗಳು ಬಂದಡರದ ಮುನ್ನ
ಕಪಿಲಸಿದ್ದ ಮಲ್ಲಿಕಾರ್ಜುನ ಲಿಂಗವ ಪೂಜಿಸೋ ಮುನ್ನ ಮುನ್ನ|