ಸಿ. ಸುಬ್ರಮಣ್ಯಮ್
ಸಿ. ಸುಬ್ರಮಣ್ಯಮ್(ಜನವರಿ ೩೦,೧೯೧೦ –ನವೆಂಬರ್ ೭,೨೦೦೦),ಭಾರತೀಯ ಮುತ್ಸದ್ದಿ,ಸ್ವಾತಂತ್ರ್ಯ ಹೋರಾಟಗಾರ. ಇವರು ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ, ವಿತ್ತ ಸಚಿವರಾಗಿ ಕೆಲಸ ಮಾಡಿದ್ದರು. ಭಾರತವು ಆಹಾರ ಸ್ವಾವಲಂಬನೆಯನ್ನು ಹೊಂದಲು ಇವರ ಕೊಡುಗೆ ಗಮನಾರ್ಹ. ಇವರಿಗೆ ೧೯೯೮ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು..