ಸಂಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Map

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಧ್ಯಭಾಗದಲ್ಲಿ ಬರುವ ತಾಲೂಕಿನ ಅತಿದೊಡ್ಡ ಗ್ರಾಮ ಸಂಶಿ (ತಾಪಸಿ), ಕುಂದಗೋಳದಿಂದ ೧೦ ಕಿ.ಮೀ. ಅಂತರದಲ್ಲಿದೆ. ೧೯೪೮ರಲ್ಲಿ ಧಾರವಾಡ ಜಿಲ್ಲೆಯೊಲಳಗೆ ಸೇರುವ ಮೊದಲು ಜಮಖಂಡಿ ಸಂಸ್ಥಾನದ ಆಡಳಿತದಲ್ಲಿತ್ತು.

ಜನಸಂಖ್ಯೆ[ಬದಲಾಯಿಸಿ]

ಜನಸಂಖ್ಯೆ ೧೨,೨೪೮ (೨೦೦೧ರ ಜನಗಣತಿ ಪ್ರಕಾರ)

ಹವಾಗುಣ[ಬದಲಾಯಿಸಿ]

ಇಲ್ಲಿಯದು ಶುಷ್ಕ ವಾಯುಗುಣ; ಕಪ್ಪುಮಿಶ್ರಿತ ಮಣ್ಣು. ತುಂಬ ಫಲವತ್ತಾಗಿದೆ. ಹತ್ತಿ ಮತ್ತು ಜೋಳ ಇಲ್ಲಿಯ ಮುಖ್ಯ ಬೆಳೆಗಳು. ಮಳೆ ಸಾಮಾನ್ಯವಾಗಿ 25"-30".

ವಾಣಿಜ್ಯ/ಕೃಷಿ[ಬದಲಾಯಿಸಿ]

ಬಯಲು ಸೀಮೆಯ ನಾಡಾದ ಸಂಶಿ ಕಪ್ಪು (ಎರಿ) ಮಣ್ಣಿನ ಭೂಮಿಯನ್ನು ಹೊಂದಿದ್ದು, ಹತ್ತಿ, ಗೋಧಿ, ಜೋಳ, ಹೆಸರು, ಕಡಲೆ, ಕುಸುಬಿ, ಶೇಂಗಾ, ಮುಂತಾದ ಬೆಳೆಗಳನ್ನು ಬೆಳೆಯುವರು. ವ್ಯವಸಾಯವೇ ಮೂಲ ಉದ್ಯೋಗವಾಗಿದೆ. ಸುತ್ತಲಿನ ಸಣ್ಣ ಹಳ್ಳಿಗಳಿಗೆ ಹತ್ತಿರದ ವ್ಯಾಪಾರ, ವ್ಯವಹಾರದ ಸ್ಥಳವಾಗಿದೆ.

ಇತಿಹಾಸ[ಬದಲಾಯಿಸಿ]

ಪುರಾಣ ಪ್ರಸಿದ್ಧವಾದ ತಾಪಸಿಪುರ, ಸಾಹಸಪುರ ಎಂಬ ನಾಮಾಕಿಂತದಿಂದ ಕೂಡಿದ ಸಂಶಿ ಗ್ರಾಮವು ಮಹಾಭಾರತ ಕಾಲದ ಪಾಂಡವರು ಈ ಮಾರ್ಗವಾಗಿ ವಿರಾಟ ನಗರಕ್ಕೆ (ಹಾನಗಲ್‌) ಹೋದ ವದಂತಿ ಇದ್ದು ಇಲ್ಲಿ ಕ್ರಿ.ಶ. ೧೨ನೇ ಶತಮಾನದ ಚಾಲುಕ್ಯ ಅರಸರ ಇಮ್ಮಡಿ ಸೋಮೇಶ್ವರ ೬ ನೇ ವಿಕ್ರಮಾದಿತ್ಯ ಹಾಗೂ ೨ನೇ ಜಕದೇಕಮಲ್ಲರ ಕಾಲದಲ್ಲಿ ಜಕ್ಕಣರಿಂದ ನಿರ್ಮಿತವಾದ ಚಾಲುಕ್ಯ ಶೈಲಿಯ ಶ್ರೀ ಸಿದ್ದೇಶ್ವರ ದೇವಾಲಯವು ಇದ್ದು ಹಾಗೂ ಅದೇ ಕಾಲದ ನಾಲ್ಕು ಶಿಲಾ ಶಾಸನಗಳು ಮತ್ತು ಶ್ರೀ ಶಂಕರಲಿಂಗ ದೇವಾಲಯ ಕಂಡುಬರುತ್ತವೆ.ಬ್ರಿಟಿಷರ ಕಾಲದಲ್ಲಿ ಜಮಖಂಡಿ ಸಂಸ್ಥಾನಕ್ಕೆ ಒಳಪಟ್ಟ ಸಂಶಿಯಲ್ಲಿ ಪೂರ್ವ ಕಾಲದಿಂದಲೂ ೪ ಬಣಗಳಿದ್ದವು. ಅವು ಯಾವುವೆಂದರೆ ೧ ಹಾರುಬಣ ೨ ಹಿರೇಬಣ ೩ ಚಿಕ್ಕ ಬಣ ೪ ಮುಡಸಿ ಬಣ. ಹಾರುಬಣ ಮತ್ತು ಚಿಕ್ಕ ಬಣ ಇವೆರೆಡು ಬಣಗಳ ಪ್ರಮುಖರು ಬ್ರಾಹ್ಮಣ ಸಮಾಜಕ್ಕೆ ಸೇರಿದವರು. ಇನ್ನುಳಿದ ಹಿರೇಬಣ ಹಾಗೂ ಮುಡಸಿಬಣ ಇವು ಲಿಂಗಾಯತ ಪ್ರಮುಖರ ಬಣಗಳು. ಈ ನಾಲ್ವರಿಗೆ ಒಂದೊಂದು ನಿಟ್ಟಿನಲ್ಲಿ ಆ ಹಾದ್ದಿನ ಜಮೀನುಗಳಿರುತ್ತವೆ.[೧]

ಪ್ರಸ್ತುತ[ಬದಲಾಯಿಸಿ]

ಸಂಶಿಯಲ್ಲಿ ಬ್ರಹ್ಮಾನಂದ ಆಶ್ರಮ ಹಾಗೂ ಶ್ರೀ ಶಿರಹಟ್ಟಿ ಫಕ್ಕಿರೇಶ್ವರರ ಶಾಖಾ ಮಠ, ಸಿದ್ದೇಶ್ವರ ಮಠ ಹಾಗೂ ಸಿದ್ದಾರೂಢ ಮಠ, ಶಂಕರ ಲಿಂಗ ದೇವಾಲಯ ಅಲ್ಲದೇ ಅನೇಕ ದೇವಾಲಯಗಳಿಂದ ಕೂಡಿದ ಧಾರ್ಮಿಕ ಸ್ಥಳವಾಗಿದೆ. ಬ್ರಹ್ಮಾನಂದ ಆಶ್ರಮದ ಮಾದರಿಯ ದೇವಾಲಯಗಳು ರಬಕವಿ(ಬನಹಟ್ಟಿ), ತೇರದಾಳ,ಪರಮಾನಂದವಾಡಿ ಹಾಗೂ ಹುಬ್ಬಳ್ಳಿಯ ರಾಯಾಪುರದಲ್ಲಿವೆ. ಇಂದು ಸಂಶಿಯು ಅನೇಕ ಸರ್ಕಾರಿ ಶಾಲೆಗಳು, ಫಕ್ಕಿರೇಶ್ವರ ಸಂಸ್ಥಾನದ ಪ್ರೌಢಶಾಲೆ, ಬ್ರಹ್ಮಾನಂದ ಸಂಸ್ಥೆಯ ಶಾಲೆಗಳು, ಕೆ.ಎಲ್‌.ಇ. ಸಂಸ್ಥೆಯ ಕಾಲೇಜುಗಳಿಂದ ಕೂಡಿದ ಶೈಕ್ಷಣಿಕ ತವರೂರಾಗಿದೆ.

"https://kn.wikipedia.org/w/index.php?title=ಸಂಶಿ&oldid=1087268" ಇಂದ ಪಡೆಯಲ್ಪಟ್ಟಿದೆ