ಕಾವ್ಯರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ==ಕಾವ್ಯರಂಗ== ===ಪೀಠಿಕೆ=== ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ...
 
No edit summary
೧ ನೇ ಸಾಲು: ೧ ನೇ ಸಾಲು:
==ಕಾವ್ಯರಂಗ==
===ಪೀಠಿಕೆ===
===ಪೀಠಿಕೆ===
ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆ ಇವೆಲ್ಲವನ್ನು ಓದುವ ಮತ್ತು ಅರ್ಥೈಸುವ ಸರಳ ವಿಧಾನವೇ ಕಾವ್ಯರಂಗ.
ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆ ಇವೆಲ್ಲವನ್ನು ಓದುವ ಮತ್ತು ಅರ್ಥೈಸುವ ಸರಳ ವಿಧಾನವೇ ಕಾವ್ಯರಂಗ.
೧೦ ನೇ ಸಾಲು: ೯ ನೇ ಸಾಲು:
ಹಾಡುವುದರಿಂದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯಲ್ಲಿ ಅದರ ಆಶಯಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗುತ್ತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಂಜರ, ತಾಳಗಳನ್ನು ಉಪಯೋಗಿಸುತ್ತಾರೆ.
ಹಾಡುವುದರಿಂದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯಲ್ಲಿ ಅದರ ಆಶಯಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗುತ್ತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಂಜರ, ತಾಳಗಳನ್ನು ಉಪಯೋಗಿಸುತ್ತಾರೆ.
===ಉಲ್ಲೇಖಗಳು===
===ಉಲ್ಲೇಖಗಳು===
#ಕಾವ್ಯರಂಗ ರಂಗ ಪ್ರಯೋಗ ಅಧ್ಯಾಯ-೬, ಡಾ.ಆರ್ ಸಿ ಹಿರೇಮಠ ಕನ್ನಡ ಅಧ್ಯಾಯನ ವಿಭಾಗ ಕ.ವಿ.ವಿ ಧಾರವಾಡ,
#ಡಾ.ಆರ್ ಸಿ ಹಿರೇಮಠ, ಕಾವ್ಯರಂಗ ರಂಗ ಪ್ರಯೋಗ, ಅಧ್ಯಾಯ-೬, ಕನ್ನಡ ಅಧ್ಯಾಯನ ವಿಭಾಗ, ಕ.ವಿ.ವಿ ಧಾರವಾಡ,

೦೯:೫೭, ೨೮ ಜನವರಿ ೨೦೨೦ ನಂತೆ ಪರಿಷ್ಕರಣೆ

ಪೀಠಿಕೆ

ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆ ಇವೆಲ್ಲವನ್ನು ಓದುವ ಮತ್ತು ಅರ್ಥೈಸುವ ಸರಳ ವಿಧಾನವೇ ಕಾವ್ಯರಂಗ.

ಇತಿಹಾಸ

ಒಂದು ಕಾವ್ಯವನ್ನು ಹೇಗೆ ಓದಬೇಕು, ಯಾವ ದಿಕ್ಕಿನಿಂದ ಓದಬೇಕು, ಓದಿಗೆ ಮುಂಚಿನ ಪೂರ್ವ ತಯಾರಿಗಳು ಹೇಗೆ, ಇವೆಲ್ಲವನ್ನು ಮೊದಲು ಅರಿತುಕೊಳ್ಳಬೇಕು, ಓದು ಬರೀ ಲಿಖಿತ ಓದಾಗಬಾರದು. ಕಾವ್ಯದ ಭಾಷೆಯು ಮೊದಲು ನಮ್ಮ ದೇಹದೊಳಕ್ಕೆ ಇಳಿಯಬೇಕು. ಆ ಭಾಷೆ ದೇಹದೊಳಕ್ಕೆ ಇಳಿದು ಅದರೊಳಗೆ ಅಂತರ್ಗತವಾಗಿರುವ ಅರ್ಥ, ಮಹತ್ವ ಮನಸ್ಸಿಗೂ ಹೃದಯಕ್ಕೂ ಬೇಕಾದರೆ ಅದು ರಂಗಭೂಮಿಯಿಂದ ಮಾತ್ರ ಸಾಧ್ಯ. ಆಶು ಮತ್ತು ಭಾಷೆ ಇವೆರಡು ನಮ್ಮೊಳಗೆ ಇಳಿಯಲು ಸಾಧ್ಯ. ರಂಗಭೂಮಿಗೆ ಒಂದು ಶೈಕ್ಷಣಿಕ ಸ್ವರೂಪ ಇದೆ. ರಂಗಭೂಮಿ ಕೇವಲ ಭೌತಿಕ ಪರಿಕರವಲ್ಲ. ಅದು ತನ್ನೊಳಗೆ ಅಮೂರ್ತವಾದ ರೂಪವನ್ನು ಪಡೆದುಕೊಂಡಿದೆ ನಾವು ಅದರೊಳಗೆ ಇಳಿದು ಅದನ್ನು ಮೈಗೂಡಿಸಿಕೊಂಡಾಗ ಮಾತ್ರ ಅಮೃತದ ಸವಿ ಸವಿಯಲು ಸಾಧ್ಯ. ಇದು ನಾಡಿನೆಲ್ಲೆಡೆ ಹತ್ತು ಜನ ನಟರನ್ನು ಒಳಗೊಂಡು ತಿರುಗಾಟ ಮಾಡಿ ಎಲ್ಲಾ ಕಾಲೇಜು ಮನಸ್ಸುಗಳಿಗೆ ಕನ್ನಡತನವನ್ನು ತುಂಬುವ ಕೆಲಸವನ್ನು ಮಾಡುತ್ತಿದೆ.

ಉದ್ದೇಶ

ಕಾವ್ಯರಂಗ ರಂಗ ಪ್ರಯೋಗದ ಮೂಲ ಉದ್ದೇಶ ಎಲ್ಲಾ ಕನ್ನಡ ಸಾಹಿತ್ಯ ಅಭಿರುಚಿ ಜೊತೆಗೆ ನಮ್ಮ ಸಾಹಿತ್ಯ ಪ್ರಾಚೀನತೆ ನಡೆದು ಬಂದ ದಾರಿಯನ್ನು ತಿಳಿಸಿ ಕೊಡುವುದಾಗಿದೆ. ಊರಿನಿಂದ ಊರಿಗೆ ತಿರುಗಾಟ ಮಾಡಲು ಅನುವಾಗುವಂತೆ ಅತ್ಯಂತ ಸರಳವಾದ ರಂಗಸಜ್ಜಿಕೆಯನ್ನು ಹೊಂದಿಸಲಾಗುವುದು. ಒಂದು ಹಿಂಪರದೆ ಇಲ್ಲಿ ಹೊತ್ತಿಗೆಯ ಮಧ್ಯದಿಂದ ಜ್ಞಾನ ಎಂಬ ಜ್ಯೋತಿ ಪ್ರಕಾರವಾದ ಬೆಳಗಿ ಅದರಲ್ಲಿನ ವಿಚಾರಗಳನ್ನು ಪತಂಗಗಳಾಗಿ ಎಲ್ಲೆಡೆ ಪಸರಿಸುತ್ತದೆ ಎಂಬ ಉದಾತ್ತ ದೇಹದ ಚಿತ್ರ ಬರೆಯಲಾಗುವುದು. ಇನ್ನುಳಿದಂತೆ ಕಲಾವಿದರು ವೇದಿಕೆಯಲ್ಲಿ ಕುಳಿತುಕೊಳ್ಳಲು ಅನುವಾಗುವಂತೆ ಕುರ್ಚಿ ಉಪಯೋಗಿಸಲಾಗುವುದು.

ವಿಧಾನ

ಕಲಾವಿದರು ಎಲ್ಲರೂ ಒಂದೇ ವಿಧವಾದ ವಸ್ತ್ರವನ್ನು ಧರಿಸುತ್ತಾರೆ. ಆಯಾ ಪಾತ್ರಗಳಿಗೆ ತಕ್ಕಂತೆ ಶಾಲುಗಳನ್ನು ಮತ್ತು ಕಲಾವಿದರು ತಮ್ಮ ದೇಹ, ಭಾವ, ಭಾಷೆಗಳನ್ನು ಬಳಸಿಕೊಳ್ಳುತ್ತಾರೆ. ಇಲ್ಲಿ ಹೊಸ ತರನಾದ ಬೆಳಕಿನ ವಿನ್ಯಾಸವಿರುವುದಿಲ್ಲ. ಇದು ಕಾಲೇಜು ಕೊಠಡಿ ಹೀಗೆ ಎಲ್ಲಾ ಕಡೆಗೂ ಬೆಳಗಿನ ಹೊತ್ತಲ್ಲಿ ಪ್ರಸ್ತುತ ಪಡಿಸುವುದರಿಂದ ಕಾವ್ಯ ಕಥೆ ನಾಟಕಗಳು ಬೆಳಕಿನ ಹಾಗೆ ಇರುವುದರಿಂದ ಕೃತಕ ಬೆಳಕನ್ನು ಬಳಸುವುದಿಲ್ಲ. ಯಾವುದೇ ಮುಖವರ್ಣಿಕೆ ಸಾಧನಗಳನ್ನು ಉಪಯೋಗಿಸುವುದಿಲ್ಲ. ಕೆಲವು ಪಾತ್ರಗಳ ಗಾಂಭೀರ್ಯತೆ ಮುಖವಾಡಗಳನ್ನು ಬಳಸುತ್ತಾರೆ. ಇಲ್ಲಿ ನಿರೂಪಣೆಗೆ ಪೂರಕವಾದ ಸಂಗೀತವನ್ನು ಅಳವಡಿಸಲಾಗುವುದು. ಹಳೆಗನ್ನಡ ಬಹಳ ಕಷ್ಟ ಎನ್ನುವವರಿಗೆ ಹಳೆಗನ್ನಡದ ಹಾಡುಗಳಿಗೆ ಆಧುನಿಕ ಲಯಗಳನ್ನು ಸೇರಿಸಿ ಹಾಡನ್ನು ಹಾಡುವುದರಿಂದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯಲ್ಲಿ ಅದರ ಆಶಯಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗುತ್ತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಂಜರ, ತಾಳಗಳನ್ನು ಉಪಯೋಗಿಸುತ್ತಾರೆ.

ಉಲ್ಲೇಖಗಳು

  1. ಡಾ.ಆರ್ ಸಿ ಹಿರೇಮಠ, ಕಾವ್ಯರಂಗ ರಂಗ ಪ್ರಯೋಗ, ಅಧ್ಯಾಯ-೬, ಕನ್ನಡ ಅಧ್ಯಾಯನ ವಿಭಾಗ, ಕ.ವಿ.ವಿ ಧಾರವಾಡ,