ದೇವನೂರು ಮಹಾದೇವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Removing link(s) to deleted page Mysore district (TW)
೪ ನೇ ಸಾಲು: ೪ ನೇ ಸಾಲು:
| image_size =130px
| image_size =130px
|birth_date = 1948
|birth_date = 1948
|birth_place = ದೇವನೂರು, [[Mysore district]],ಕರ್ನಾಟಕ
|birth_place = ದೇವನೂರು, Mysore district,ಕರ್ನಾಟಕ
|death_date =
|death_date =
|pseudonym =
|pseudonym =

೨೩:೦೧, ೧೭ ನವೆಂಬರ್ ೨೦೧೮ ನಂತೆ ಪರಿಷ್ಕರಣೆ

Devanura Mahadeva (ದೇವನೂರ ಮಹಾದೇವ)
ಜನನ1948
ದೇವನೂರು, Mysore district,ಕರ್ನಾಟಕ
ವೃತ್ತಿಅಧ್ಯಾಪಕ,ಬರಹಗಾರ
ರಾಷ್ಟ್ರೀಯತೆಭಾರತ
ವಿಷಯಕನ್ನಡ ಸಾಹಿತ್ಯ
ಸಾಹಿತ್ಯ ಚಳುವಳಿಬಂಡಾಯ ಚಳುವಳಿ, ದಲಿತ ಸಂಘರ್ಷ ಸಮಿತಿ

ಪ್ರಭಾವಗಳು
  • ರಾಮ್ ಮನೋಹರ್ ಲೋಹಿಯಾ,ಬಾ ಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್

ಪ್ರಭಾವಿತರು
  • ದಲಿತ ಸಾಹಿತ್ಯ

`

ದೇವನೂರು ಮಹಾದೇವ ಇವರು ಕನ್ನಡದ ಸಾಹಿತಿ.

ಪರಿಚಯ

ದೇವನೂರು ಹುಟ್ಟಿದ್ದು 1948ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಕೆಲಕಾಲ ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಕೆಲಸ ಮಾಡಿ ಅಲ್ಲಿಯ ವೃತ್ತಿಗೆ ರಾಜೀನಾಮೆ ನೀಡಿ ವ್ಯವಸಾಯದಲ್ಲಿ ತೊಡಗಿದರು. ಇವರ ‘ಒಡಲಾಳ ‘ ಕೃತಿಯನ್ನು ಕಲ್ಕತ್ತಾದ ಭಾರತೀಯ ಪರಿಷತ್ 1984ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿತು. 1991ರಲ್ಲಿ ಇವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿತು. ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ದೇವನೂರ ಮಹಾದೇವ 1989ರಲ್ಲಿ ಅಮೆರಿಕಾದಲ್ಲಿ ನಡೆದ ‘ಇಂಟರ್‌ನ್ಯಾಶನಲ್ ರೈಟಿಂಗ್ ಪ್ರೋಗ್ರಾಂ’ನಲ್ಲಿ ಭಾಗವಹಿಸಿದ್ದರು. ವರ್ಷದ ಹಿಂದೆ ದೇವನೂರು ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ಲಭಿಸಿತು.[೧] ಇವರ ಕೃತಿಗಳು ‘ದ್ಯಾವನೂರು’, ‘ಒಡಲಾಳ’ ಮತ್ತು ‘ಕುಸುಮಬಾಲೆ’.

ಬಾಲ್ಯ

ದೇವನೂರು ಮಹಾದೇವ ಇವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಜನನ ೧೯೪೮ರಲ್ಲಿ. ತಂದೆ ಸಿ.ನಂಜಯ್ಯ (ಪೋಲಿಸ್ ಕಾನ್ಸ್ ಟೇಬಲ್), ತಾಯಿ ನಂಜಮ್ಮ. ನಂಜನಗೂಡು, ಹುಣಸೂರು ಹಾಗು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು. ಪತ್ನಿ ಕೆ.ಸುಮಿತ್ರಬಾಯಿ, ಇಬ್ಬರು ಮಕ್ಕಳು-ಉಜ್ವಲ ಮತ್ತು ಮಿತಾ. ಫೋರ್ಡ ಫೌಂಡೇಶನ್ ಕೊಡಮಾಡಿದ ಸಂಶೋಧನವೇತನವನ್ನು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು, ಹಾಸನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು, [೨] .

ಸಾಹಿತ್ಯ ಕೃತಿಗಳು

ಕಥಾಸಂಕಲನಗಳು

  1. ದ್ಯಾವನೂರು

ಕಿರು ಕಾದಂಬರಿ

  • ಒಡಲಾಳ

ಕಾದಂಬರಿ

  • ಕುಸುಮಬಾಲೆ,ಒಡಲಾಳ

ಬಿಡಿ ಬರಹಗಳು

  • ಎದೆಗೆ ಬಿದ್ದ ಅಕ್ಷರ

ವಯಸ್ಕರ ಶಿಕ್ಷಣ

  • ನೋಡು ಮತ್ತು ಕೂಡು4

ಅನುವಾದ

  • ಗಾಂಧಿ ಮತ್ತು ಮಾವೋ
  • ಕುಸುಮಬಾಲೆ ಇವರು ಬರೆದ ಕಾದಂಬರಿ. ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” , ಮತ್ತೊಬ್ಬ ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಅಷ್ಟರ ಮಟ್ಟಿಗೆ ಮೈಸೂರಿನ ಹಳ್ಳಿ ನುಡಿಗಟ್ಟುಗಳು ಆ ಕೃತಿಯಲ್ಲಿದ್ದವು.

ದೇವನೂರು ಸಾಹಿತ್ಯ ಕುರಿತ ಇತರೆ ಕೃತಿಗಳು

  • ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ "ಯಾರ ಜಪ್ತಿಗೂ ಸಿಗದ ನವಿಲು" ಎಂಬ ಕೃತಿಯನ್ನು ಅಭಿನವ ಪ್ರಕಾಶನ ಹೊರತಂದಿದೆ.
  • ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು - ಉದಯಕುಮಾರ ಹುಬ್ಬು
  • ದೇವನೂರು ಮಹಾದೇವ - ಎನ್.ಪಿ. ಶಂಕರನಾರಾಯಣರಾವ್

ನಿರ್ವಹಿಸಿದ ಜವಾಬ್ದಾರಿಗಳು

  1. ದೇವನೂರು ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು.
  2. ಅಧ್ಯಕ್ಷರು -ಜೆ.ಪಿ.ಸ್ವಾಗತ ಸಮಿತಿ ಮತ್ತು ಸರ್ವೋದಯ ಕರ್ನಾಟಕ ಪಕ್ಷ
  3. ಸಂಚಾಲಕರು - ದಲಿತ ಸಂಘರ್ಷ ಸಮಿತಿ
  4. ಸದಸ್ಯರು - ಅಂಬೇಡ್ಕರ್ ಸಾಹಿತ್ಯ ಅನುವಾದ ಮಂಡಲಿ, ಕನ್ನಡ ಕಾವಲು ಸಮಿತಿ
  5. ಅಧ್ಯಾಪಕರು- ಮೈಸೂರಿನ ಭಾರತೀಯ ಭಾಷಾ ಸಂಸ್ಥೆ
  6. ಸಂದರ್ಶನ ಪ್ರಾಧ್ಯಪಕರು- ಹಂಪಿ ವಿಶ್ವವಿದ್ಯಾನಿಲಯ[ಸೂಕ್ತ ಉಲ್ಲೇಖನ ಬೇಕು]

ಸಾಮಾಜಿಕ

ದೇವನೂರು ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತುತ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರಾಗಿದ್ದಾರೆ.

ಗೌರವ, ಪುರಸ್ಕಾರ

[ಸೂಕ್ತ ಉಲ್ಲೇಖನ ಬೇಕು]

  1. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  2. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  3. ೧೯೯೧ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[೩]
  4. ಅಲ್ಲಮಪ್ರಭು ಪ್ರಶಸ್ತಿ-೨೦೧೩
  5. ಬೋಧಿವೃಕ್ಷ ಪ್ತಶಸ್ತಿ -೨೦೧೩
  6. ವಿ,ಎಂ.ಇನಾಂದಾರ್ ಪ್ರಶಸ್ತಿ - ಎದೆಗೆ ಬಿದ್ದ ಅಕ್ಷರ ಕೃತಿಗೆ
  7. ಇವರ ಒಡಲಾಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ.
  8. ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿ ಯನ್ನು ಕೊಟ್ಟೂ ಗೌರವಿಸಿದೆ,[೪]
  9. ಗೌರವ ಡಾಕ್ಟರೇಟ್, ಮೈಸೂರು ವಿಶ್ವವಿದ್ಯಾನಿಲಯ - ೨೦೧೪
  10. ಇದಲ್ಲದೆ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಷನಲ್ ರೈಟಿಂಗ್ ಪ್ರೋಗ್ರಾಮ'ದಲ್ಲಿ ಭಾಗವಹಿಸಿದ್ದಾರೆ.
  11. ಕುವೆಂಪು ರಾಷ್ಟ್ರೀಯ ಪ್ರಶಸ್ತಿ[೫]

ಉಲ್ಲೇಖಗಳು

  1. ಪ್ರಜಾವಾಣಿ. "128 ಗಣ್ಯರಿಗೆ ಪದ್ಮ ಪ್ರಶಸ್ತಿ".
  2. http://www.newindianexpress.com/states/karnataka/Devanoor-rejected-hon-degrees-V-C/2013/06/09/article 1626864.ece
  3. ಕನ್ನಡ ಪ್ರಭ
  4. "Padma award winners from Karnataka".
  5. ಕನ್ನಡ ಪ್ರಭ ಪತ್ರಿಕಾ ವರದಿ

ಬಾಹ್ಯ ಸಂಪರ್ಕಗಳು