ಚಂದ್ರಶೇಖರ ವೆಂಕಟರಾಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
ಚು ರೋಬೋಟ್:ಸೇರಿಸುವುದರಿಂದ {{authority control}} |
||
೭೫ ನೇ ಸಾಲು: | ೭೫ ನೇ ಸಾಲು: | ||
* [http://www.oldindianphotos.in/2011/12/c-v-raman-great-indian-physicist.html 'C.V.RAMAN-THE GREAT INDIAN PHYSICIST,hISTORICAL PHOTOGRAPHS OF INDIAN SUBCONTINENT] |
* [http://www.oldindianphotos.in/2011/12/c-v-raman-great-indian-physicist.html 'C.V.RAMAN-THE GREAT INDIAN PHYSICIST,hISTORICAL PHOTOGRAPHS OF INDIAN SUBCONTINENT] |
||
* [http://vijaykarnataka.indiatimes.com/state/vk-special/vk-special-c-v-raman-today-national-science-day/articleshow/51172165.cms ವಿಜಯ ಕರ್ನಾಟಕ, ಅನುದಿನವೂ ವಿಜ್ಞಾನ ದಿನವಾಗಲಿ, Feb,28,2016] |
* [http://vijaykarnataka.indiatimes.com/state/vk-special/vk-special-c-v-raman-today-national-science-day/articleshow/51172165.cms ವಿಜಯ ಕರ್ನಾಟಕ, ಅನುದಿನವೂ ವಿಜ್ಞಾನ ದಿನವಾಗಲಿ, Feb,28,2016] |
||
⚫ | |||
{{authority control}} |
|||
[[ವರ್ಗ:ಭಾರತದ ವಿಜ್ಞಾನಿಗಳು]] |
[[ವರ್ಗ:ಭಾರತದ ವಿಜ್ಞಾನಿಗಳು]] |
||
೮೧ ನೇ ಸಾಲು: | ೮೪ ನೇ ಸಾಲು: | ||
[[ವರ್ಗ:ಭಾರತ ರತ್ನ ಪುರಸ್ಕೃತರು]] |
[[ವರ್ಗ:ಭಾರತ ರತ್ನ ಪುರಸ್ಕೃತರು]] |
||
[[ವರ್ಗ:ವಿಜ್ಞಾನಿಗಳು]] |
[[ವರ್ಗ:ವಿಜ್ಞಾನಿಗಳು]] |
||
⚫ |
೧೦:೫೭, ೧೪ ಅಕ್ಟೋಬರ್ ೨೦೧೮ ನಂತೆ ಪರಿಷ್ಕರಣೆ
ಸರ್ ಚಂದ್ರಶೇಖರ ವೆಂಕಟರಾಮನ್ | |
---|---|
ಸ್ಥಳೀಯ ಹೆಸರು | 'ರಾಮನ್', சந்திரசேகர வெங்கட ராமன் |
ಜನನ | Thiruvanaikoil, ಟ್ರಿಚಿನೋಪೋಲಿ, ಮಡ್ರಾಸ್ ಪ್ರಾವಿನ್ಸ್, ಬ್ರಿಟಿಷ್ ಭಾರತ | ೭ ನವೆಂಬರ್ ೧೮೮೮
ಮರಣ | 21 November 1970 ಬೆಂಗಳೂರು, ಕರ್ನಾಟಕ, ಭಾರತ | (aged 82)
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತ ಶಾಸ್ತ್ರ |
ಸಂಸ್ಥೆಗಳು | Indian Finance Department[೧] University of Calcutta Indian Association for the Cultivation of Science Indian Institute of Science Central College, Bangalore University Raman Research Institute |
ಅಭ್ಯಸಿಸಿದ ವಿದ್ಯಾಪೀಠ | ಮದ್ರಾಸ್ ವಿಶ್ವವಿದ್ಯಾಲಯ |
ಡಾಕ್ಟರೇಟ್ ವಿದ್ಯಾರ್ಥಿಗಳು | ಜಿ.ಎನ್.ರಾಮಚಂದ್ರನ್ ವಿಕ್ರಂ ಅಂಬಾಲಾಲ್ ಸಾರಾಭಾಯ್ |
ಪ್ರಸಿದ್ಧಿಗೆ ಕಾರಣ | ರಾಮನ್ ಪರಿಣಾಮ |
ಗಮನಾರ್ಹ ಪ್ರಶಸ್ತಿಗಳು | Knight Bachelor (1929) Nobel Prize in Physics (1930) Bharat Ratna (1954) Lenin Peace Prize (1957) |
ಸಂಗಾತಿ | ಲೋಕಸುಂದರಿ ಅಮ್ಮಾಳ್ (೧೯೦೭–೧೯೮೦) |
ಮಕ್ಕಳು | ಚಂದ್ರಶೇಖರ್ ಮತ್ತು ರಾಧಾಕೃಷ್ಣನ್, |
ಜಾಲತಾಣ www |
ಸರ್.ಸಿ.ವಿ.ರಾಮನ್',ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ,'ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ.[೨] ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.
ಬಾಲ್ಯ ಹಾಗೂ ವಿದ್ಯಾಭ್ಯಾಸ
ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ ೭, ೧೮೮೮ ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು.[೩] ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, 'ಪಾರ್ವತಿ ಅಮ್ಮಾಳ್'. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು :
- ತಮ್ಮ ೧೨ ನೆ ವಯಸ್ಸಿನಲ್ಲೇ 'ಮೆಟ್ರಿಕ್ಯುಲೆಶನ್' ಮುಗಿಸಿದರು.
- 'ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿ'ನಲ್ಲಿ ಬಿ.ಎಸ್ಸಿ(೧೯೦೪) ಪದವಿ,
- ಎಂ.ಎಸ್ಸಿ (೧೯೦೭) ಪದವಿಗಳನ್ನು ಗಳಿಸಿದರು.
- ೧೯೦೭ರಲ್ಲಿ 'ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾಗಿ 'ಕಲ್ಕತ್ತೆ'ಯಲ್ಲಿ 'ಡೆಪ್ಯುಟಿ ಅಕೌಂಟೆಂಟ್ ಜನರಲ್' ಆಗಿ ವೃತ್ತಿ-ಜೀವನ ಆರಂಭಿಸಿದರು, ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.
- ೧೯೧೭ರಲ್ಲಿ 'ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯ'ರಾದರು.
- ೧೯೨೪ರಲ್ಲಿ 'ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ'ಗೆ ರಾಮನ್ ಆಯ್ಕೆಯಾದರು.
- ಮಾರ್ಚ್ ೧೬ ೧೯೨೮ರಲ್ಲಿ ತಮ್ಮ ಶೋಧನೆ, 'ರಾಮನ್ ಎಫೆಕ್ಟ್'ನ್ನು 'ಬೆಂಗಳೂರಿ'ನಲ್ಲಿ ಬಹಿರಂಗ ಪಡಿಸಿದ ರಾಮನ್, ೧೯೩೦ರಲ್ಲಿ ಅದಕ್ಕಾಗಿ 'ನೋಬೆಲ್ ಪ್ರಶಸ್ತಿ'ಗಳಿಸಿದರು.
ಮದುವೆ
ಡಾ.ರಾಮನ್, ೬, ಮೇ, ೧೯೦೭ ರಲ್ಲಿ 'ಲೋಕಸುಂದರಿ ಅಮ್ಮಾಳ್'ಎಂಬ ಹುಡಿಗಿಯೊಂದಿಗೆ ವಿವಾಹವಾದರು.(೧೮೯೨–೧೯೮೦ [೨೧]). 'ರಾಮನ್,' 'ಲೋಕಸುಂದರಿ ಅಮ್ಮಾಳ್' ದಂಪತಿಗಳಿಗೆ ಚಂದ್ರಶೇಖರ್, ಮತ್ತು ರಾಧಾಕೃಷ್ಣನ್, ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.
ರಾಮನ್ ಪರಿಣಾಮ
ಎಂಬ ತತ್ತ್ವವು ವಿಜ್ಞಾನಕ್ಕೆ ಸರ್ ಸಿ.ವಿ. ರಾಮನ್ ರ ಒಂದು ದೊಡ್ಡ ಕೊಡುಗೆಯಾಗಿದೆ. “ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು'. ಅದು ಹೇಗೆ ಸಾಧ್ಯ ? ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನತುಂಬ ಅಲೆದಾಡುತ್ತಿದ್ದರು. ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪುಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ ” ಎಂದು ಕರೆಯಲಾಗುತ್ತದೆ. ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ.[೪]
ಟಾಟ ಇನ್ಸ್ಟಿ ಟ್ಯೂಟ್ ನ ನಿರ್ದೇಶಕರಾಗಿ
೧೯೩೪ರಲ್ಲಿ 'ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ ನ ನಿರ್ದೇಶಕ,' ರಾಗಿ ಅಧಿಕಾರ ವಹಿಸಿಕೊಂಡ 'ಡಾ. ರಾಮನ್', ತದನಂತರ ೧೯೪೩ರಲ್ಲಿ 'ರಾಮನ್ ಸಂಶೋಧನಾ ಕೆಂದ್ರ'ವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಪ್ರೊ. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು “ರಾಮನ್ ರೀಸರ್ಚ್ ಇನ್ ಸ್ಟಿಟ್ಯೂಟ್ ” ಎಂಬ ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಅವರ ಜೀವಿತ ಕಾಲದಲ್ಲೇ ಸ್ಥಾಪಿಸಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು. ಭಾವಿ ಸಂಶೋಧಕರಿಗೆ ಬಿಟ್ಟುಹೋಗಿರುವ ಈ ಸಂಸ್ಥೆ ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನ ಸಂಸ್ಥೆಯಾಗಿದೆ.
ಗೌರವ, ಪ್ರಶಸ್ತಿಗಳು
- 'ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ' (೧೯೨೪)
- 'ನೈಟ್ ಹುಡ್ ಪ್ರಶಸ್ತಿ' (೧೯೨೯)
- 'ನೋಬೆಲ್ ಪ್ರಶಸ್ತಿ (೧೯೩೦)
- 'ಮೈಸೂರು ಮಹಾರಾಜ' ರಿಂದ, 'ರಾಜ ಸಭಾ ಭೂಷಣ ಗೌರವ' (೧೯೩೫)
- 'ಭಾರತ ರತ್ನ ಪ್ರಶಸ್ತಿ (೧೯೫೪)
ಮರಣ
ನವೆಂಬರ್ ೨೧ ೧೯೭೦ ರಲ್ಲಿ, 'ಪ್ರೊ.ರಾಮನ್' ರವರು,ದೇಮಹಳ್ಳಿಯಲ್ಲಿ ನಿಧನರಾದರು.
ಉಲ್ಲೇಖಗಳು
- ↑ The Nobel Prize in Physics 1930 Sir Venkata Raman, Official Nobel prize biography, nobelprize.org
- ↑ Documentary on Sir C.V. Raman
- ↑ C.V.Raman, Biography
- ↑ 'ರಾಮನ್ ಪರಿಣಾಮದ ಬಗ್ಗೆ ಯೂಟ್ಯೂಬ್'
- Raman Effect: From Studying Cells to Detecting Bombs, Page :14, Author:Murthy, M.S.S., Science Reporter, Feb, 2016
ಬಾಹ್ಯ ಸಂಪರ್ಕಗಳು
- 'ಐ ಲವ್ ಇಂಡಿಯ,'ಸರ್.ಸಿ.ವಿ.ರಾಮನ್,'
- 'ಜನಶಕ್ತಿ', 'ರಾಮನ್ ಪರಿಣಾಮ: ಇದು ಬರೀ ಬೆಳಕಲ್ಲೋ ಅಣ್ಣಾ' 27 JAN, (ಸಂಪುಟ 9, ಸಂಚಿಕೆ 5, 1 ಬ್ರವರಿ 2015) 'ಜ್ಞಾನ-ವಿಜ್ಞಾನ'– ಜಯ0
- 'C.V.RAMAN-THE GREAT INDIAN PHYSICIST,hISTORICAL PHOTOGRAPHS OF INDIAN SUBCONTINENT
- ವಿಜಯ ಕರ್ನಾಟಕ, ಅನುದಿನವೂ ವಿಜ್ಞಾನ ದಿನವಾಗಲಿ, Feb,28,2016
ಪುರಸ್ಕೃತವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ನಿಮ್ಮನ್ನು ಪಡೆದ ನಾವೇ ಧನ್ಯರು
- Commons link is locally defined
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat identifiers
- Articles with BIBSYS identifiers
- Articles with BNF identifiers
- Articles with BNFdata identifiers
- Articles with GND identifiers
- Articles with J9U identifiers
- Articles with LCCN identifiers
- Articles with NDL identifiers
- Articles with NKC identifiers
- Articles with NLA identifiers
- Articles with NTA identifiers
- Articles with PLWABN identifiers
- Articles with ZBMATH identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- ಭಾರತದ ವಿಜ್ಞಾನಿಗಳು
- ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರು
- ನೊಬೆಲ್ ಪ್ರಶಸ್ತಿ ಪುರಸ್ಕೃತರು
- ಭಾರತ ರತ್ನ ಪುರಸ್ಕೃತರು
- ವಿಜ್ಞಾನಿಗಳು