ಸದಸ್ಯ:Srinivas ujire: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨೬ ನೇ ಸಾಲು: ೧೨೬ ನೇ ಸಾಲು:
ಕಲ್ಪ ಆದಿ ಗತ:೧೯೭,೨೬,೪೯,೧೧೦ (ವರ್ಷಗಳ ಹಿಂದೆ)ಕಲಿ ಗತ ೫೧೧೦ವರ್ಷ (೨೦೦೯ಕ್ಕೆ) ಸೃಷ್ಟಿಯ ಆದಿ ಗತ:೧೯೫,೫೮,೮೫೨೧೦,; ವವಸ್ವತ ಮನು ಗತ : ೧,೮೬,೧೮,೮೫೦ (ಮೈಸೂರು ಪಂಚಾಂಗ ರೀತ್ಯಾ). ಇದು ಬ್ರಹ್ಮನ ದ್ವಿತೀಯ ಪರಾರ್ಧ (ಮಧ್ಯಾಹ್ನ ) ಶ್ವೇತ ವರಾಹ ಕಲ್ಪ ( ಅನೇಕ ಯುಗಗಳು ಮತ್ತು ಮನ್ವಂತರಗಳು) ಈಗ ವೈವಸ್ವತ ಮನ್ವಂತರ.
ಕಲ್ಪ ಆದಿ ಗತ:೧೯೭,೨೬,೪೯,೧೧೦ (ವರ್ಷಗಳ ಹಿಂದೆ)ಕಲಿ ಗತ ೫೧೧೦ವರ್ಷ (೨೦೦೯ಕ್ಕೆ) ಸೃಷ್ಟಿಯ ಆದಿ ಗತ:೧೯೫,೫೮,೮೫೨೧೦,; ವವಸ್ವತ ಮನು ಗತ : ೧,೮೬,೧೮,೮೫೦ (ಮೈಸೂರು ಪಂಚಾಂಗ ರೀತ್ಯಾ). ಇದು ಬ್ರಹ್ಮನ ದ್ವಿತೀಯ ಪರಾರ್ಧ (ಮಧ್ಯಾಹ್ನ ) ಶ್ವೇತ ವರಾಹ ಕಲ್ಪ ( ಅನೇಕ ಯುಗಗಳು ಮತ್ತು ಮನ್ವಂತರಗಳು) ಈಗ ವೈವಸ್ವತ ಮನ್ವಂತರ.


ಭೂಮಿಯ ಪವಿತ್ರತೆಯಲ್ಲಿ ನೀರು:-
ಭೂಮಿಯ ಪವಿತ್ರತೆಯಲ್ಲಿ ನೀರು,ಜಲ ಮಾಲಿನ್ಯ ಮತ್ತು ಜಲ ಸಂರಕ್ಷಣೆ :-
Main article: ಜಲ ಮಾಲಿನ್ಯ
ಇಂದಿನ ಜಗತ್ತಿಗೆ ಭಾರೀ ತಳಮಳದ ಸಂಗತಿ ಎಂದರೆ ಜಲ ಮಾಲಿನ್ಯ. ಈ ಜಲ ಮಾಲಿನ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳ ಸರಕಾರಗಳು ಹೆಣಗಾಡುತ್ತಿವೆ. ಹಲವಾರು ಮಲಿನ ಪದಾರ್ಥಗಳು ನೀರಿನ ಪೂರೈಕೆ ಮಾಡುವಲ್ಲಿ ಬೆದರಿಕೆಯನ್ನೇ ಒಡ್ಡುತ್ತಿವೆ. ಮಲ ಮೂತ್ರಾದಿಯಾಗಿ ಊರಿನ ರೊಚ್ಚನ್ನು ಯಾವ ಸಂಸ್ಕರಣೆಗೂ ಒಳಪಡಿಸದೇ ನಿಸರ್ಗ ದತ್ತ ಸ್ವಚ್ಛ ನೀರಿಗೆ ಹರಿ ಬಿಡುವುದು ಇವುಗಳಲ್ಲೆಲ್ಲಾ ಅತ್ಯಂತ ಭಯಾನಕ. ಜನ ಸಾಮಾನ್ಯರು ಸಾರ್ವಜನಿಕರು ಸಂಚಾರ ಮಾಡುವ ಮಾರ್ಗ,ಮುಖ್ಯ ರಸ್ತೆ,ಒಳರಸ್ತೆಗಳ ಬದಿಗಳ(ಪಕ್ಕದ)ಲ್ಲಿರುವ ಇನ್ನೂ
ಮುಚ್ಚದೆ ಇರುವ ಚರಂಡಿಗಳು,ಹಾಗೂ ಅವುಗಳಲ್ಲಿ ಉಂಟಾಗುವ,ಉತ್ಪತ್ತಿಯಾಗುವ ಕ್ರಿಮಿಗಳು ಕೀಟಗಳು,ಇವುಗಳಿಂದ ಪರಿಸರದಲ್ಲಿ ಉಂಟು ಮಾಡುವ ಭಯಾನಕ ರೋಗ ರುಜಿನಗಳಿಗೂ ಕಾರಣವಾಗಿರುವುದು ಮಾತ್ರವಲ್ಲ ಇವುಗಳಿಂದ ಉತ್ಪತ್ತಿಯಾಗುವ ಕೆಟ್ಟವಾಸನೆ(ದುರ್ನಾಥ)ಯ ಫಲವಾಗಿ ಪರಿಸರದಲ್ಲಿ ನಡೆದಾಡುವ ಸಾರ್ವಜನಿಕರ
ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾಗಿ ವ್ಯಾಪಿಸಿಕೊಂಡಿರುವ ಈ ಭೀಕರ ಸಮಸ್ಯೆ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡುಬರುವುದು ಹೆಚ್ಚು.ಅಭಿವೃದ್ಧಿ ಹೊಂದದ ದೇಶಗಳಲ್ಲಂತೂ ಊರಿನ ಹೊಲಸನ್ನು ಈ ರೀತಿಯಾಗಿ ಬಿಡುಗಡೆ ಮಾಡುವುದು ಸರ್ವೇಸಾಮಾನ್ಯ; ಈ ಬಗೆಯಲ್ಲಿ ತ್ಯಾಜ್ಯ ಬಿಡುಗಡೆ ಮಾಡುವುದನ್ನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಚೀನಾ,ಭಾರತ ಮತ್ತು ಇರಾನ್‌ಗಳೂ ರೂಢಿಸಿಕೊಂಡಿವೆ.
ಊರಿನ ಹೊಲಸು, ಜಿಗುಟು ರಾಡಿ, ಕಸ ಮತ್ತು ವಿಷಯುಕ್ತ ಪದಾರ್ಥಗಳನ್ನೂ ಚರಂಡಿಗೆ, ನೀರಿಗೆ ಎಸೆಯಲಾಗುತ್ತದೆ. ಊರಿನ ಹೊಲಸನ್ನು ಸಂಸ್ಕರಿಸಿದರೂ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಸಂಸ್ಕರಣೆಯ ನಂತರ ದೊರೆಯುವ ಹೊಲಸು ಗಟ್ಟಿಗಳು ಅಥವಾ ಪುಡಿ ಪದಾರ್ಥವನ್ನು ಗುಂಡಿಗಳಲ್ಲಿ ತುಂಬಬೇಕು, ಇಲ್ಲವೇ ನೆಲದ ಮೇಲೆ ಹರಡ ಬೇಕು ಅಥವಾ ಸಮುದ್ರಕ್ಕೆ ಎಸೆಯಬೇಕು.[೮]
ಊರಿನ ಹೊಲಸಷ್ಟೇ ಅಲ್ಲದೇ ಜಮೀನುಗಳಿಂದ ಕೊಚ್ಚಿ ಹರಿದು ಬರುವ ಮಾಲಿನ್ಯ,ಚಂಡಮಾರುತದಿಂದ ಅಪ್ಪಳಿಸುವ ಭಾರೀ ಮಳೆಯಿಂದ ಹರಿದು ಬರುವ ಮಲಿನ ಪದಾರ್ಥ, ಮತ್ತು ಸರಕಾರ ಹಾಗೂ ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯದ ಸುರಿತ-ಇವೆಲ್ಲವೂ ಜಲ ಮೂಲಿನ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳು.

೧೧:೦೭, ೬ ಮೇ ೨೦೧೮ ನಂತೆ ಪರಿಷ್ಕರಣೆ

ಭೂಮಿಯ ಪವಿತ್ರತೆ:

ರಾಮಾಯಣದಲ್ಲಿ ಭೂಮಿ:-

ಸೀತಾ ಪರಿತ್ಯಾಗ:-

ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ, ಸಮೃದ್ಧಿಗಳು ನೆಲಸಿದ್ದವು. ಪ್ರಜೆಗಳು ಆನಂದದಿಂದಿದ್ದರು. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯಲಿಲ್ಲ. ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡ ತೊಡಗಿದರು. ಈ ವಿಷಯ ಗೂಢಚಾರರಿಂದ ರಾಮನಿಗೂ ತಿಳಿದು ಬಂದಿತು. ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾತಾಡ ತೊಡಗಿದರು. ತನ್ನ ಪ್ರಜೆಗಳನ್ನು ಸಂತೋಷ ಪಡಿಸಲು ರಾಮ ಸೀತೆಯನ್ನು ತ್ಯಜಿಸಲು ನಿರ್ಧರಿಸಿದನು. ಸೀತೆಯು ವನವಾಸ ಕಾಲದಲ್ಲಿ ರಾಮನೊಡನೆ ಸಂತೋಷದಿಂದ ಕಾಲಕಳೆದ ಅರಣ್ಯಕ್ಕೆ ಮತ್ತೊಮ್ಮೆ ಹೋಗಬೇಕಾಯಿತು. ತುಂಬು ಗರ್ಭಿಣಿಯಾದ ಸೀತೆಯನ್ನು, ವಿಹಾರದ ನೆಪ ಹೇಳಿ ರಾಮ ಲಕ್ಷ್ಮಣನೊಂದಿಗೆ ಅವಳನ್ನು ಕಾಡಿಗೆ ಕಳುಹಿಸಿ ಅವಳನ್ನು ಅಲ್ಲೆ ಬಿಟ್ಟು ಬರುವಂತೆ ತಿಳಿಸಿ ಪ್ರಜಾಪ್ರೇಮವನ್ನು ಮೆರೆಯುತ್ತಾನೆ. ಜನಾಪವಾದದಿಂದ ರಾಮ ತನ್ನನ್ನು ತ್ಯಜಿಸಿರುವನೆಂಬ ಸುದ್ದಿಯಿಂದ ಸೀತೆ ದು:ಖತಪ್ತ ಳಾಗಿ ಕಲ್ಲು ಕರಗುವಂತೆ ರೋದಿಸುತ್ತಾಳೆ. ನಂತರ ರಾಮನಿಂದ ಪರಿತ್ಯಕ್ತೆಯಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿ-ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಸಹಾಯದಿಂದ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾಳೆ. ವಾಲ್ಮೀಕಿ ಲವ-ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾನೆ. ಲವ-ಕುಶರು ಬೆಳೆದು ಯುವಕ ರಾಗಿದ್ದರು. ಅದೇ ಸಮಯದಲ್ಲಿ ರಾಮನನ್ನು ಒಂದು ಚಿಂತೆ ಕಾಡುತ್ತಿತ್ತು. ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ ಬಂದಿರಬಹುದಾದ ಬ್ರಹ್ಮ ಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು. ಅದಕ್ಕಾಗಿ ಅಶ್ವಮೇಧ ಯಾಗ ಮಾಡಬೇಕೆಂದು ನಿರ್ಧರಿಸಿದನು. ಈ ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳಿಗೂ, ಋಷಿ ಮುನಿಗಳಿಗೂ ಆಹ್ವಾನವಿರುತ್ತದೆ. ವಾಲ್ಮೀಕಿ ಮುನಿಗಳು ಲವ-ಕುಶರೊಡನೆ ಈ ಯಾಗಕ್ಕೆ ಹೋಗಿರುತ್ತಾರೆ. ಯಾಗದ ದಿನ ಲವ-ಕುಶರಿಬ್ಬರು ರಾಮನ ಎದುರು ವಾಲ್ಮೀಕಿ ಋಷಿಗಳಿಂದ ಕಲಿತ ರಾಮಾಯಣವನ್ನು ಹಾಡುತ್ತಾರೆ. ರಾಮನಿಗೆ ಆ ಗಾಯನದ ಮೂಲಕ ತನ್ನದೇ ಕಥೆಯನ್ನು ಕೇಳಿ ಸೋಜಿಗವಾಗುತ್ತದೆ. ವಾಲ್ಮೀಕಿಯಿಂದ ರಾಮನಿಗೆ ಲವ,ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ. ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ಹೇಳಿ ಕಳಿಸುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮ ದಿಂದ ಕರೆದು ಕೊಂಡು ಬರುತ್ತಾನೆ. ಆಗ ರಾಮ ಸೀತೆಯು ಮತ್ತೊಂದು ಪರೀಕ್ಷೆಯ ಮೂಲಕ ತನ್ನ ಮೇಲಿರುವ ಕಳಂಕದಿಂದ ಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯನ್ನು ದು:ಖ ಆವರಿಸುತ್ತದೆ. ಆಗ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾಳೆ - ತಾನು ಪತಿವ್ರತೆಯೇ ಆಗಿದ್ದಲ್ಲಿ, ಭೂಮಿ ಬಾಯಿ ಬಿರಿಯಲಿ, ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಅಲ್ಲಿ ಸೀತೆಗಾಗಿ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ. ಈ ದೃಶ್ಯವನ್ನು ಕಂಡು ರಾಮ ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಹೋಗಿದ್ದಾಳೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ.

ಹೀಗೇ ಭೂಮಿಯಮೇಲಿನ ಜನರು ರಾಮಾಯಣ ಕಾಲದಿಂದಲೂ ಸೀತಾಮಾತೆ ಯನ್ನು ಭೂಮಿ ತಾಯಿಯ ಮಗಳಾಗಿ ಪವಿತ್ರಳೆಂಬ ಭಾವನೆಯಿಂದ ನಂಬಿಕೆಯಿರಿಸಿಕೊಂಡಿರುತ್ತಾರೆ.

ಆಧ್ಯಾತ್ಮಿಕವಾಗಿ ಭೂಮಿಯ ಪವಿತ್ರತೆ:-

"ವಂದಿಪೆನು ಈ ಭೂಮಿಗೆ ಭೂಮಿಯ ಸಮಸ್ತ ಜನತೆಗೆ ನಮಿಪೆನು ಭೂಮಿ ತಾಯಿಗೆ"

• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. • ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ. ಸ್ವಾಮಿ ವಿವೇಕಾನಂದರ ದಿವ್ಯ ವಾಣಿ ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ‘ಸ್ವಾಮಿ ವಿವೇಕಾನಂದ’ರು ಜನವರಿ 12, 1863ರಲ್ಲಿ, ಇದೇ ನಾವು ಹುಟ್ಟಿರುವ ಈ ಪುಣ್ಯಭೂಮಿ - ಭರತಭೂಮಿಯಲ್ಲಿ ಜನಿಸಿದರು. ನಮ್ಮ ಭರತ ಭೂಮಿಯಲ್ಲಿ ಅಂತದ್ದೇನಿದೆ ಎಂಬುದನ್ನು ಸ್ವಾಮಿ ವಿವೇಕಾನಂದರ ಮಾತುಗಳಲ್ಲೇ ಅರಿಯುವುದು ಶ್ರೇಷ್ಠವಾದುದು. ಅವರು ನುಡಿಯುತ್ತಾರೆ “ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ, ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿಯೊಬ್ಬ ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರೈಸುವುದಕ್ಕೆ ಒಂದು ಕರ್ಮಭೂಮಿಗೆ ಬರಬೇಕಾಗಿದ್ದರೆ, ಯಾವುದಾದರೂ ದೇಶದಲ್ಲಿ ಮಾನವ ಕೋಟಿಯ ಮಾಧುರ್ಯ, ಔದಾರ್ಯ, ಪಾವಿತ್ರ್ಯ, ಶಾಂತಿ – ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮತ್ತು ಅಂತರ್ಮುಖ ಜೀವನದಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದ್ದರೆ ಅದು ಭರತಖಂಡವೇ ಆಗಿದೆ.” ಇಂಥಹ ಅದಮ್ಯ ನಂಬಿಕೆಯನ್ನು ತಮ್ಮಲ್ಲಿ ತುಂಬಿಕೊಂಡಿದ್ದ ಸ್ವಾಮೀಜಿಯವರು ತಮ್ಮ ಬದುಕಿನ ಮೂಲಕ ಅದನ್ನು ವಿಶ್ವಕ್ಕೆಲ್ಲಾ ಸಾಬೀತು ಮಾಡಿಕೊಟ್ಟರು. ಸ್ವಾಮಿ ವಿವೇಕಾನಂದರ ಬಗ್ಗೆ ಈ ದೇಶದ ಮಹಿಮಾನ್ವಿತರ ಮಾತುಗಳು ಹೀಗಿವೆ. “ನೀವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು. ನೇತ್ಯಾತ್ಮಕವಾದುದು ಯಾವುದೂ ಇಲ್ಲ” – ರವೀಂದ್ರನಾಥ ಠಾಕೂರ್ “ನಾನು ಸ್ವಾಮೀಜಿಯವರ ಕೃತಿಗಳನ್ನು ಅಮೂಲಾಗ್ರವಾಗಿ ಓದಿದ್ದೇನೆ. ಅವುಗಳ ಅಧ್ಯಯನದ ನಂತರ ಭಾರತದ ಬಗೆಗಿದ್ದ ನನ್ನ ಪ್ರೀತಿ ಸಾವಿರ ಪಾಲು ಹೆಚ್ಚಿತು” – ಮಹಾತ್ಮ ಗಾಂಧಿ “ಸ್ವಾಮೀಜಿಯವರ ನುಡಿಗಳಿಂದ ನಮ್ಮ ದೇಶದ ಜನ ಹಿಂದೆಂದೂ ಕಾಣದ ಆತ್ಮ ಗೌರವವನ್ನೂ, ಆತ್ಮವಿಶ್ವಾಸವನ್ನೂ ಹಾಗೂ ಆತ್ಮಬಲವನ್ನೂ ಪಡೆದಿದ್ದಾರೆ” – ಸುಭಾಷ್ ಚಂದ್ರಬೋಸ್ “ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು; ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು; ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು; ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಲಾಸ – ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲಿಷಿನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ವಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯ ವಿದ್ರಾವಕವಾದ ಗಾನಮಾಧುರ್ಯ ಇವೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದವು. ಈ ನಾನಾ ಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದುದು ಶ್ರೀರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ.” - ಡಿ.ವಿ.ಜಿ. “ಸ್ವಾಮೀಜಿಯವರ ತಪಃಪೂರ್ಣವಾದ ಶಕ್ತಿವಾಣಿ ಒಂದು ಅಮೃತದ ಮಡು! ಇದರಲ್ಲಿ ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ” – ಕುವೆಂಪು. ಸ್ವಾಮಿ ವಿವೇಕಾನಂದರ ಬಗ್ಗೆ ನಾವು ಹೇಳುವುದಕ್ಕಿಂತ ಅವರನ್ನು ಕೇಳುವುದೇ ಸರಿಯಾದದ್ದು. ಬನ್ನಿ ರಾಷ್ಟ್ರಕವಿ ಕುವೆಂಪು ಅವರು ಹೇಳುವ ಹಾಗೆ, ಅವರು ನಮಗೆ ನೀಡಿರುವ ಜ್ಞಾನ ಜ್ಯೋತಿಯ ಖನಿಯಲ್ಲಿ ಒಂದಷ್ಟು ಹೊಕ್ಕು ಪ್ರಬುದ್ಧತೆಯನ್ನು ಬೇಡೋಣ. ಈ ಭಕ್ತಿಭಾವಗಳೊಂದಿಗೆ ಸ್ವಾಮಿ ವಿವೇಕಾನಂದರ ಹಲವು ಮನೋಜ್ಞ ಮಾತುಗಳನ್ನು ತಮ್ಮೊಡನೆ ನೆನಪಿಸಿಕೊಳ್ಳ ಬಯಸುತ್ತೇನೆ. • ಯಾವುದಕ್ಕೂ ಅಂಜದಿರು; ಅದ್ಭುತ ಕಾರ್ಯವನ್ನು ಮಾಡಲು ಶಕ್ತನಾಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿ ಕ್ಷಣಮಾತ್ರದಲ್ಲಿ ಸ್ವರ್ಗವನ್ನೇ ಕೊಡಬಲ್ಲದು. ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ತಲುಪುವವರೆಗೂ ನಿಲ್ಲದಿರು. • ನಿಮ್ಮೊಬ್ಬರ ಮೇಲೇ ಸಮಸ್ತ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ. • ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು – ಇದೇ ಧರ್ಮದ ಸರ್ವಸ್ವ. • ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ. • ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ. • ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು. • ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ. • ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ಇಂತಹ ಶಕ್ತಿಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ. • ಪ್ರತಿಯಾಗಿ ಏನನ್ನೂ ಬಯಸಬೇಡಿ. ನೀವು ಹೆಚ್ಚು ಕೊಟ್ಟಷ್ಟೂ ನಿಮಗೇ ಹೆಚ್ಚು ಬರುತ್ತದೆ. • ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ. • ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ. • ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ; ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು? • ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು. • ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ. • ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ. • ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ. • ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು. • ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು. • ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು. • ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ. • ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. • ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ , ಸಹಾನುಭೂತಿಯುಳ್ಳವರಾಗಿ. • ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ. • ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು. • ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. • ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ. • ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ. • ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ: 1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ 2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ 3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ. • ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ. • ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ಸ್ವತ: ನಾವೇ ಆಗಿರುತ್ತೇವೆ. • ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ. • ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ? • ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು. • ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವುದೇ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು. • ನಿಮ್ಮೊಳಗಿರುವುದನ್ನು ಪ್ರಯತ್ನಪೂರ್ವಕವಾಗಿ ಹೊರಹೊಮ್ಮಿಸಿ. ಆದರೆ ಅನುಕರಿಸಬೇಡಿ. ಇತರರಿಂದ ಒಳ್ಳೆಯದನ್ನೆಲ್ಲವನ್ನೂ ಸ್ವೀಕರಿಸಿ. • ಇತರರಿಗೆ ಸ್ವಾತ್ಯಂತ್ರ್ಯವನ್ನು ಕೊಡಲು ಇಚ್ಚಿಸದವನು ಸ್ವಾತ್ಯಂತ್ರ್ಯಕ್ಕೆ ಯೋಗ್ಯನಲ್ಲವೇ ಅಲ್ಲ. • ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದೂ ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳೂ ಬಿದ್ದುಹೊಗುತ್ತವೆ. • ಮಹಾಮೂರ್ಖನು ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ. ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು. • ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ನಿಮಗೆ ಬರುತ್ತದೆ. • ಒಂದು ಸಾಮಾನ್ಯ ಕೆಲಸವನ್ನೂ ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ. • ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಯು ಪರಿಶುದ್ಧನಾಗಿರದಿದ್ದರೆ ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದು ಯಾವ ಪ್ರಯೋಜನಕ್ಕೂ ಬಾರದು. • ನೀವು ಆಧ್ಯಾತ್ಮೀಕರಾಗದೆ ಭಾರತದ ಪುನರುದ್ಧಾರ ಅಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಳ್ಳಿ; • ಅವಿದ್ಯಾವಂತರಿಗೆ ಬೆಳಕು ತನ್ನಿ, ವಿದ್ಯಾವಂತರಿಗೆ ಹೆಚ್ಚು ಬೆಳಕು ತನ್ನಿ. ಏಕೆಂದರೆ ವಿದ್ಯಾಮಧ ಇಂದು ಹೆಚ್ಚು ಭಯಂಕರವಾಗಿದೆ.

"ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಭೋಧತ" - ಎಚ್ಚರಗೊಳ್ಳಿ, ಜಾಗೃತರಾಗಿ, ಎಲ್ಲಕ್ಕಿಂತ ಮಹತ್ವವಾದುದಕ್ಕೆ ನಿಮ್ಮನ್ನು ಅನುವುಗೊಳಿಸಿಕೊಳ್ಳಿ. ಸ್ವಾಮಿ ವಿವೇಕಾನಂದರ ದಿವ್ಯಚರಣಗಳಿಗೆ ಸಾಷ್ಟಾಂಗ ನಮನಗಳು

ಭೂಕಾಲ/ದೇಹಕಾಲ (Earth time/Body-time) ಎಂದರೆ ನಾವು ಈ ಭೂಮಿಯ ಮೇಲೆ ಮಾನವ ಶರೀರವನ್ನು ಪಡೆದು ಕಳೆಯುವ ಸಮಯ. ಈ ಸಮಯದಲ್ಲಿ ನಾವು ಸ್ವಚ್ಛವಲ್ಲದ, ಸ್ಪಷ್ಟವಲ್ಲದ, ಮಸುಕಾದ ಅನುಭವಗಳನ್ನು ಪಡೆಯುತ್ತೇವೆ. ನಮ್ಮ ನೈಜಸ್ವಭಾವವನ್ನು ನಾವು ಮರೆತುಬಿಡುತ್ತೇವೆ. ಇದೆಲ್ಲವು ಕೇವಲ ಲೋಕದಾಟದಲ್ಲಿ ಪುಳಕಿತಗೊಳ್ಳುವಂಥ ಅನುಭವಕ್ಕಾಗಿಯೇ ಮಾಡುತ್ತೇವೆ.

ಈ ಪ್ರಪಂಚವು ಒಂದು ರಂಗಭೂಮಿಯಿದ್ದಂತೆ. ನಾವೆಲ್ಲರೂ ಕೇವಲ ಪಾತ್ರಧಾರಿಗಳು. ನಮ್ಮ ಪಾತ್ರವನ್ನು ನಟಿಸಿ ಹೊರಡುತ್ತೇವೆ. ನಾವು ಮೊಳಕೆಯೊಡೆದು ನಮ್ಮ ತನವನ್ನು ಪಸರಿಸುತ್ತೇವೆ.

ನಾವು ಮಾನವ ಶರೀರವನ್ನು ಧರಿಸಿ ರಂಗಭೂಮಿಯನ್ನು ಏರುವುದು ವಿಭಿನ್ನ ಪಾತ್ರಾಭಿನಯಕ್ಕಾಗಿ, ವಿಭಿನ್ನ ಅಭಿಪ್ರಾಯಗಳಿಂದ ವಿವಿಧ ಅನುಭವಗಳನ್ನು ಪಡೆದು ವಿವಿಧ ರೋಮಾಂಚಕ ವಿನೋದಭರಿತ ಆಟ ಆಡಲೆಂದು. ಇಲ್ಲಿ ಯಾವ ಪಾತ್ರವೂ ಇನ್ನೊಂದು ಪಾತ್ರಕ್ಕಿಂತ ಉತ್ಕೃಷ್ಟವಾದದ್ದಲ್ಲ. ನಾವೆಲ್ಲ ಕೇವಲ ಪಾತ್ರಧಾರಿಗಳು ಅಷ್ಟೇ!

ಈ ಪ್ರಪಂಚವು ಒಂದು ನಾಟಕರಂಗ. ಇದೊಂದು ಜಗನ್ನಾಟಕ. ನಾವೆಲ್ಲ ನಟನಟಿಯರು. ನಮ್ಮ ಪಾತ್ರಾಭಿನಯ ಮುಗಿದ ನಂತರ ಹೊರಡಲೇಬೇಕು. ಪುನಃ ಬರುತ್ತೇವೆ. ಹೀಗೆ ಎಷ್ಟೋ ಬಾರಿ ಬರುತ್ತಿರುತ್ತೇವೆ. ‘ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನಂ ಪುನರಪಿ ಮರಣಂ.’

ವೈಜ್ನಾನಿಕವಾಗಿ ಭೂಮಿಯ ಪವಿತ್ರತೆ:-

ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ವೈಜ್ಞಾನಿಕ ಇತಿಹಾಸವನ್ನು ವಿಜ್ಞಾನಿಗಳು ಮರುರೂಪಿಸಿದ್ದಾರೆ. ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು solar nebula ನೀಹಾರಿಕೆಯಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು. ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರ ರೂಪುಗೊಂಡಿತು. ಇದು ಮಂಗಳ ಗ್ರಹದಷ್ಟು ಗಾತ್ರದ ಥೀಯ ಎಂಬ ಕಾಯ ಭೂಮಿಯನ್ನು ತಾಡಿಸಿದ್ದರಿಂದ ಮೈದಳೆದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳಿಂದ ಆದಿಮ ವಾಯುಮಂಡಲವು ಸೃಷ್ಟಿಯಾಯಿತು; ಧೂಮಕೇತುಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ ನೀರಾವಿಗಳಿಂದ, ಮೊದಲ ಸಾಗರಗಳು ರೂಪುಗೊಂಡವು.[೨] ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆ ಜರುಗಿ ಜೀವಾಧಾರವಾದ ಕಾರ್ಬನ್ ಮೈದಳೆಯಿತು. ಮುಂದೆ ಇದೇ ಜೀವಕೋಶಕ್ಕೆ ಎಡೆಗೊಟ್ಟು ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಉಗಮವಾಯಿತು.

ಭೂಮಿ 🜨
ಅಪೋಲೊ ೧೭ರಿಂದ ಕಂಡಂತೆ ಭೂಮಿಯ ಚಿತ್ರ.
ನೀಲಿ ಗೋಲಿಯಂತೆ ಕಾಣುವ ಭೂಮಿ; ಅಪೋಲೊ ೧೭ ತೆಗೆದ ಚಿತ್ರ.
ಕಕ್ಷೆಯ ಗುಣಗಳು
ಅಪರವಿ ೧೫೨,೦೯೭,೭೦೧ ಕಿ.ಮೀ.
(೧.೦೧೬ ೭೧೦ ೩೩೩ ೫ AU)
ಪುರರವಿ ೧೪೭,೦೯೮,೦೭೪ ಕಿ.ಮೀ.
(೦.೯೮೩ ೨೮೯ ೮೯೧ ೨ AU)
ದೀರ್ಘಾರ್ಧ ಅಕ್ಷ ೧೪೯,೫೯೭,೮೮೭.೫ ಕಿ.ಮೀ.
(೧.೦೦೦ ೦೦೦ ೧೧೨ ೪ AU)
ಹ್ರಸ್ವಾರ್ಧ ಅಕ್ಷ ೧೪೯,೫೭೬,೯೯೯.೮೨೬ ಕಿ.ಮೀ.
(೦.೯೯೯ ೮೬೦ ೪೮೬ ೯ AU)
ಕಕ್ಷೆಯ ಪರಿಧಿ ೯೨೪,೩೭೫,೭೦೦ ಕಿ.ಮೀ.
( ೬.೧೭೯ ೦೬೯ ೯೦೦ ೭ AU)
ಕಕ್ಷೀಯ ಕೇಂದ್ರ ಚ್ಯುತಿ ೦.೦೧೬ ೭೧೦ ೨೧೯
ನಾಕ್ಷತ್ರಿಕ ವರ್ಷ ೩೬೫.೨೫೬ ೩೬೬ ದಿನ
(೧.೦೦೦ ೦೧೭ ೫ a)
ಯುತಿ ಅವಧಿ n/a
ಗರಿಷ್ಠ ಕಕ್ಷಾ ವೇಗ ೩೦.೨೮೭ ಕಿ.ಮೀ./ಪ್ರತಿ ಕ್ಷಣ
(೧೦೯,೦೩೩ ಕಿ.ಮೀ./ಘಂ.)
ಸರಾಸರಿ ಕಕ್ಷಾ ವೇಗ ೨೯.೭೮೩ ಕಿ.ಮೀ./ಪ್ರತಿ ಕ್ಷಣ
(೧೦೭,೨೧೮ ಕಿ.ಮೀ./ಘಂ.)
ಕನಿಷ್ಠ ಕಕ್ಷಾ ವೇಗ ೨೯.೨೯೧ ಕಿ.ಮೀ./ಪ್ರತಿ ಕ್ಷಣ
(೧೦೫,೪೪೮ ಕಿ.ಮೀ./ಘಂ.)
ಓರೆ
(ಸೂರ್ಯನ ಸಮಭಾಜಕ ರೇಖೆಗೆ ೭.೨೫°)
ಆರೋಹಣ ಸಂಪಾತದ ರೇಖಾಂಶ ೩೪೮.೭೩೯ ೩೬°
Argument of the perihelion ೧೧೪.೨೦೭ ೮೩°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ ೧ (ಚಂದ್ರ)
(3753 Cruithne ಲೇಖನವನ್ನೂ ನೋಡಿ)
Aspect Ratio ೦.೯೯೬ ೬೪೭ ೧
ದೀರ್ಘವೃತ್ತೀಯತೆ ೦.೦೦೩ ೩೫೨ ೯
ಸಮಭಾಜಕ ರೇಖೆಯ ವ್ಯಾಸ ೧೨,೭೫೬.೨೭೪ ಕಿ.ಮೀ.
ಧ್ರುವಗಳ ಮೂಲಕ ವ್ಯಾಸ ೧೨,೭೧೩.೫೦೪ ಕಿ.ಮೀ.
ಸರಾಸರಿ ತ್ರಿಜ್ಯ ೬,೩೭೨.೭೯೭ ಕಿ.ಮೀ.
ಸಮಭಾಜಕದ ಪರಿಧಿ ೪೦,೦೭೫.೦೨ ಕಿ.ಮೀ.
Meridional circumference ೪೦,೦೦೭.೮೬ ಕಿ.ಮೀ.
ಸರಾಸರಿ ಪರಿಧಿ ೪೦,೦೪೧.೪೭ ಕಿ.ಮೀ.
ಮೇಲ್ಮೈ ವಿಸ್ತೀರ್ಣ ೫೧೦,೦೬೫,೬೦೦ ಕಿ.ಮೀ.²
ನೆಲದ ವಿಸ್ತೀರ್ಣ ೧೪೮,೯೩೯,೧೦೦ ಕಿ.ಮೀ.² (೨೯.೨ %)
ನೀರಿನ ವಿಸ್ತೀರ್ಣ ೩೬೧,೧೨೬,೪೦೦ ಕಿ.ಮೀ.² (೭೦.೮ %)
ಗಾತ್ರ ೧.೦೮೩ ೨೦೭ ೩×೧೦೧೨ ಕಿ.ಮೀ.³
ದ್ರವ್ಯರಾಶಿ ೫.೯೭೪೨×೧೦೨೪ kg
ಸರಾಸರಿ ಸಾಂದ್ರತೆ ೫,೫೧೫.೩ kg/m³
ಸಮಭಾಜಕದ ಬಳಿ ಗುರುತ್ವ ೯.೭೮೦ ೧ m/s²
(೦.೯೯೭ ೩೨ g)
ಮುಕ್ತಿ ವೇಗ ೧೧.೧೮೬ ಕಿ.ಮೀ./ಪ್ರತಿ ಕ್ಷಣ

೩೯,೬೦೦ ಕಿ.ಮೀ./ಘಂ.≅

ನಾಕ್ಷತ್ರಿಕ ದಿನ ೦.೯೯೭ ೨೫೮ ದಿನ (೨೩.೯೩೪ ಘಂಟೆ)
ಅಕ್ಷೀಯ ಪರಿಭ್ರಮಣ ವೇಗ ೪೬೫.೧೧ ಮೀ./ಪ್ರತಿ ಕ್ಷಣ (ಸಮಭಾಜಕದಲ್ಲಿ)
ಅಕ್ಷದ ಓರೆ ೨೩.೪೩೯ ೨೮೧°
ಉತ್ತರ ಧ್ರುವದ ವಿಷುವದಂಶ ೦° (೦ ಘಂಟೆ ೦ ನಿಮಿಷ ೦ ಕ್ಷಣ)
ಘಂಟಾವೃತ್ತಾಂಶ +೯೦°
ಪ್ರತಿಫಲನಾಂಶ ೦.೩೬೭
ಮೇಲ್ಮೈ ತಾಪಮಾನ
ಕನಿಷ್ಠ ಸರಾಸರಿ ಗರಿಷ್ಠ
೧೮೫ ಕೆ ೨೮೭ ಕೆ ೩೩೧ ಕೆ
-೮೮.೩ °ಸೆ. ೧೪ °ಸೆ. ೫೭.೭ °ಸೆ.
ವಾತಾವರಣದ ಒತ್ತಡ ೧೦೧.೩ kPa (MSL)
Adjective Terrestrial, Terran, Telluric, Tellurian, Earthly, Earthling (lifeforms)
Atmospheric constituents
ಸಾರಜನಕ ೭೮.೦೮ %
ಆಮ್ಲಜನಕ ೨೦.೯೪ %
ಆರ್ಗಾನ್ ೦.೯೩ %
ಇಂಗಾಲದ ಡೈಆಕ್ಸೈಡ್ ೦.೦೩೮ %
ನೀರಾವಿ ಅತ್ಯಲ್ಪ ಪ್ರಮಾಣ (ಪ್ರಮಾಣವು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ.)

ಭೂಮಿ - ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ, ಇದಲ್ಲದೆ, ಮಾನವರಿಗೆ ಈಗ ತಿಳಿದಿರು ವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ. ಅಷ್ಟೇ ಅಲ್ಲ, ಇದರ ಸಾಂದ್ರತೆಯೂ ಅತಿ ಹೆಚ್ಚು.

ವಾಸ್ತುವಿನ ಪ್ರಕಾರ ಭೂಮಿಯ ಮೇಲೆ ಒಂದು ಹೊಸ ಮನೆ ಕಟ್ಟುವಾಗ:- ವಾಸ್ತು ಪೂಜೆ

ಮನೆಯ ನಿರ್ಮಾಣದ ಬಗ್ಗೆ ನಾವು ವಾಸ್ತು ಪರವಾಗಿ ಚಿಂತಿಸುವಾಗ, ಸಾಧಾರಣ ನಾವು ಅಡಿಪಾಯ (ಅಡಿ ಕಲ್ಲು) ಹಾಕುವುದರ ಬಗ್ಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಅಡಿಕಲ್ಲಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದರಿಂದ ಮನೆಯು ಸುದೃಢವಾಗಿರುತ್ತದೆ. ಮನೆ ಕಟ್ಟಲು ಅಡಿಕಲ್ಲು ಹಾಕುವ ಮೊದಲು ಭೂಮಿ ಪೂಜೆ ನಡೆಸಿ ವಾಸ್ತು ಪುರುಷನನ್ನು ಸಂತೋಷಗೊಳಿಸಬೇಕು. ಪೂಜೆ ನಡೆಸಿದ ನಂತರವೂ ಕೆಲವು ಕಾರ್ಯಗಳ ಬಗ್ಗೆ ಹೆಚ್ಚು ಶ್ರದ್ಧೆ ವಹಿಸ ಬೇಕೆಂದು ವಾಸ್ತುಶಾಸ್ತ್ರವು ಹೇಳುತ್ತದೆ. ಕೆಲವು ಅಶುಭಕರವಾದ ಶಬ್ದ ಅಥವಾ ಸನ್ನಿವೇಷಗಳು ಈ ಸಮಯದಲ್ಲಿ ತಲೆದೋರಿದರೆ ಈ ಸಮಾರಂಭವನ್ನು ಇನ್ನೊಂದು ಮುಹೂರ್ತಕ್ಕೆ ಮುಂದೂಡುವುದು ಒಳ್ಳೆಯದು ಎಂದು ವಾಸ್ತು ತಜ್ನರ ಅಭಿಪ್ರಾಯ. ವಾಸ್ತು ಪುರುಷಮಂಡಲವನ್ನು ನಮ್ಮ ಭ-ಚಕ್ರಕ್ಕೆ ಹೋಲಿಸಿದರೆ ಈಶಾನ್ಯ ಕೋನದಲ್ಲಿ ಈಶಾನ್ಯದ ಗ್ರಹಗಳಾದ ಗುರುಗ್ರಹ ಗುರು ಪುತ್ರಕಾರಕ, ಪೂರ್ವದ ಅಧಿಪತಿ ಸೂರ್ಯ ಮತ್ತು ಕುಬೇರ ಸ್ಥಾನದ ಅಧಿಪತಿ ಬುಧ.

ಗುರುಗ್ರಹ ಭ-ಚಕ್ರದ ನವಮ ಮತ್ತು ದ್ವಾದಶ ಸ್ಥಾನದ ರಾಶ್ಯಾದಿಪತಿ, ವಾಸ್ತುಪುರುಷಸ್ಥಾನದ ಯಜಮಾನನ ತಲೆಯ ಸ್ಥಾನ, ಈ ಯಜಮಾನ ತನ್ನ ಬಾಳಿನಲ್ಲಿ ಮತ್ತು ಉದ್ಯೋಗದಲ್ಲಿ ತನಗೆ ತೃಪ್ತಿ ಸಿಗಬೇಕಾದರೆ ಪುತ್ರಕಾರಕ ಗುರುವಿನ ಅನುಗ್ರಹಬೇಕು, ಅಂತೆಯೇ ಸೂರ್ಯಗ್ರಹ ತಂದೆಯ ಬಗ್ಗೆ ತಿಳಿಸುತ್ತದೆ.

ವಾಸ್ತು ಶಾಸ್ತ್ರದಲ್ಲಿ ಜಲ ಸ್ಥಾನವನ್ನು ಪುತ್ರನ ಸ್ಥಾನ ಎನ್ನುತ್ತಾರೆ. ಪೂರ್ವ ಜನ್ಮಪುಣ್ಯಸ್ಥಾನ ಸಹಾಯವಿಲ್ಲದೆ, ಪುತ್ರಸ್ಥಾನದ ಯೋಗ ಸಿಗುವುದಿಲ್ಲ. ಈ ಸ್ಥಾನಕ್ಕೆ ಜಠರ ಅಗ್ನಿಯ ಸ್ಥಾನವೆನ್ನುತ್ತಾರೆ.

ಸೂರ್ಯ ಗ್ರಹವು ಶ್ರೀಸಾಮಾನ್ಯನಿಗೆ ಆರೋಗ್ಯವನ್ನು ನೀಡುವ ಗ್ರಹವಾಗಿದೆ, ಆರೋಗ್ಯವಿಲ್ಲದಿದ್ದರೆ ಮನುಷ್ಯನ ವೀರ್ಯ ಬೆಳೆಯುವುದಿಲ್ಲ, ಅಂತೆಯ ಭ-ಚಕ್ರದ ಮೇಷರಾಶಿಯನ್ನು ಧರ್ಮಸ್ಥಾನ, ವೃಷಭರಾಶಿಯನ್ನು ಅರ್ಥಸ್ಥಾನ, ಮಿಥುನ ರಾಶಿಯನ್ನು ಕಾಮಸ್ಥಾನ ಮತ್ತು ಕಟಕರಾಶಿಯನ್ನು ಜಲಸ್ಥಾನವೆಂದು ಕರೆಯುತ್ತಾರೆ.

ಭೂಮಿಯ ಕಂಪನದ ಕಾರಣಗಳು :-

ಬಹುತೇಕ ಭೂಕಂಪಗಳು ಸಂಭವಿಸುತ್ತವೆಯಾದರೂ, ಮಾನವನ ಚಟುವಟಿಕೆಯೂ ಸಹ ಭೂಕಂಪವನ್ನು ಉಂಟುಮಾಡಬಲ್ಲದು. ಈ ವಿದ್ಯಮಾನಕ್ಕೆ ನಾಲ್ಕು ಪ್ರಮುಖ ಕಾರಣಗಳು ಕೊಡುಗೆಯನ್ನು ನೀಡುತ್ತವೆ. ಅವುಗಳೆಂದರೆ,

(1) ಬೃಹತ್ ಅಣೆಕಟ್ಟುಗಳು ಹಾಗೂ (2) ಕಟ್ಟಡಗಳನ್ನು ಕಟ್ಟುವುದು, (3)ಬಾವಿಗಳನ್ನು ಕೊರೆಯುವುದು ಹಾಗೂ ಅವುಗಳಿಗೆ ದ್ರವಪದಾರ್ಥವನ್ನು ಸೇರಿಸುವುದು, ಮತ್ತು (4) ಕಲ್ಲಿದ್ದಲು ಗಣಿಕಾರಿಕೆ ಹಾಗೂ ತೈಲ ನಿಕ್ಷೇಪಗಳಿಗಾಗಿ ಕೊರೆಯುವುದು.

ಚೈನಾದ ಸಿಚುವಾನ್ ಪ್ರಾಂತ್ಯದಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ 2008ರ ಸಿಚುವಾನ್ ಭೂಕಂಪ ಪ್ರಾಯಶಃ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಬಲ್ಲದು. ಈ ಕಂಪನದಿಂದಾಗಿ ೬೯,೨೨೭ ಸಾವುಗಳು ಸಂಭವಿಸಿದ್ದು, ಇದು ಇದುವರೆಗಿನ ಭೂಕಂಪಗಳ ಪೈಕಿ 19ನೇ ಅತ್ಯಂತ ಮಾರಣಾಂತಿಕ ಭೂಕಂಪವಾಗಿದೆ. ದೋಷದ ಒತ್ತಡವನ್ನು1,650 feet (503 m) ಝಿಪಿಂಗ್‌ಪು ಅಣೆಕಟ್ಟು ಹೊಯ್ದಾಡಿಸಿ ತಳ್ಳಿದೆ ಎಂದು ನಂಬಲಾಗಿದ್ದು, ಈ ಒತ್ತಡವೇ ಪ್ರಾಯಶಃ ಭೂಕಂಪದ ಶಕ್ತಿಯನ್ನು ಹೆಚ್ಚಿಸಿ, ಸದರಿ ದೋಷದ ಚಲನೆಯ ದರವನ್ನು ಉತ್ಕರ್ಷಿಸಿದೆ ಎಂದು ಭಾವಿಸಲಾಗಿದೆ.[೨೧] ಆಸ್ಟ್ರೇಲಿಯಾದ ಇತಿಹಾಸದಲ್ಲಿನ ಅತ್ಯಂತ ದೊಡ್ಡ ಭೂಕಂಪಕ್ಕೂ ಮಾನವನ ಪ್ರಚೋದನೆ ಇತ್ತು. ಕಲ್ಲಿದ್ದಲ ಗಣಿಕಾರಿಕೆ ಈ ಭೂಕಂಪಕ್ಕೆ ಕಾರಣವಾಗಿತ್ತು. ನ್ಯೂಕ್ಯಾಸಲ್ ನಗರವನ್ನು ಕಲ್ಲಿದ್ದಲು ಗಣಿಪ್ರದೇಶಗಳ ಬೃಹತ್ ವಿಭಾಗವೊಂದರ ಮೇಲೆ ಕಟ್ಟಲಾಗಿತ್ತು.ದೋಷವೊಂದರಿಂದ ಹುಟ್ಟಿದ ಭೂಕಂಪವು, ಗಣಿಕಾರಿಕೆ ಪ್ರಕ್ರಿಯೆಯಲ್ಲಿ ತೆಗೆದುಹಾಕಲ್ಪಟ್ಟ ಮಿಲಿಯಗಟ್ಟಲೆ ಕಲ್ಲುಬಂಡೆಗಳ ಕಾರಣದಿಂದ ಪುನಶ್ಚೇತನಗೊಂಡಿತು.

ಭೂಮಿಯ ಕಂಪನ ಧರ್ಮ ಮತ್ತು ನಂಬಿಕೆ:- ಪುರಾಣ ಮತ್ತು ಧರ್ಮ ನಾರ್ವೆ ಭಾಷೆಯ ಪುರಾಣದಲ್ಲಿ, ಭೂಕಂಪಗಳನ್ನು ಲೋಕಿ ದೇವರ ಬಿರುಸಾದ ಹೆಣಗಾಟ ಎಂಬಂತೆ ವಿವರಿಸಲಾಗಿತ್ತು. ಕಿರುಕುಳದ ಮತ್ತು ಸೆಣಸಾಟದ ದೇವರಾದ ಲೋಕಿಯು, ಸೌಂದರ್ಯ ಮತ್ತು ಜ್ಞಾನದ ದೇವರಾದ ಬಾಲ್ದ್‌ರ್‌ನನ್ನು ಕೊಂದಾಗ ಅವನನ್ನು ಗುಹೆಯೊಂದರಲ್ಲಿ ಬಂಧಿಸಿಟ್ಟು, ನಂಜನ್ನು ಕಕ್ಕುತ್ತಿರುವ ವಿಷಯುಕ್ತ ಸರ್ಪವೊಂದನ್ನು ಅವನ ತಲೆಯ ಮೇಲೆ ಇರಿಸುವ ಮೂಲಕ ಅವನನ್ನು ಶಿಕ್ಷಿಸಲಾಯಿತು. ಲೋಕಿಯ ಹೆಂಡತಿಯಾದ ಸೈಜಿನ್ ಅವನ ಪಕ್ಕದಲ್ಲಿ ನಿಂತು, ವಿಷವನ್ನು ಸಂಗ್ರಹಿಸಲು ಕೈನಲ್ಲಿ ಬೋಗುಣಿಯೊಂದನ್ನು ಹಿಡಿದುಕೊಂಡಿರುತ್ತಾಳೆ. ಆದರೆ ಅವಳು ಬೋಗುಣಿಯನ್ನು ಖಾಲಿಮಾಡಬೇಕಾಗಿ ಬಂದಾಗಲೆಲ್ಲಾ, ಲೋಕಿಯ ಮುಖದಮೇಲೆ ವಿಷವು ಜಿನುಗಿ, ಅದರಿಂದ ತಪ್ಪಿಸಿಕೊಳ್ಳಲು ಆತ ತಲೆಯನ್ನು ಎಳೆದುಕೊಳ್ಳಬೇಕಾಗಿ ಬರುವುದರಿಂದ ಹಾಗೂ ಆತನಿಗೆ ಕಟ್ಟಲಾಗಿರುವ ಕಟ್ಟುಗಳಿಂದ ಬಿಡಿಸಿಕೊಳ್ಳಲು ಬಡಿದಾಡುವುದರಿಂದ ಅದು ಭೂಮಿಯ ಕಂಪನಕ್ಕೆ ಕಾರಣವಾಗುತ್ತದೆ.[೩೫] ಗ್ರೀಕ್ ಪುರಾಣದಲ್ಲಿರುವಂತೆ, ಪಾಸಿಡಾನ್‌ ಭೂಕಂಪಗಳಿಗೆ ಕಾರಣನಾಗಿದ್ದ ಮತ್ತು ಅವುಗಳ ದೇವರಾಗಿದ್ದ.ಆತ ಕೆಟ್ಟ ಮನಸ್ಥಿತಿಯಲ್ಲಿದ್ದಾಗ, ನೆಲವನ್ನು ತ್ರಿಶೂಲವೊಂದರಿಂದ ಚುಚ್ಚುತ್ತಿದ್ದ. ಇದರಿಂದಾಗಿ ಭೂಕಂಪ ಮತ್ತು ಇತರ ವಿಕೋಪಗಳು ಉಂಟಾಗುತ್ತಿದ್ದವು. ಜನರನ್ನು ಶಿಕ್ಷಿಸಲು ಹಾಗೂ ಅವರ ಮೇಲೆ ಭಯವನ್ನು ಹೇರಲು ಆತ ಭೂಕಂಪವನ್ನು ಪ್ರತೀಕಾರದ ರೂಪದಲ್ಲಿಯೂ ಬಳಸಿಕೊಂಡ.[೩೬] ಜಪಾನೀಯರ ಪುರಾಣದಲ್ಲಿ, ನಮಝು (鯰) ಒಂದು ದೈತ್ಯ ಬೆಕ್ಕುಮೀನು ಆಗಿದ್ದು ಅದು ಭೂಕಂಪಗಳನ್ನು ಉಂಟುಮಾಡುತ್ತದೆ.ಭೂಮಿಯ ಅಡಿಯಲ್ಲಿನ ಕೆಸರಿನಲ್ಲಿ ನಮಝು ವಾಸಿಸುತ್ತದೆ. ಒಂದು ಕಲ್ಲನ್ನಿಟ್ಟುಕೊಂಡು ಮೀನನ್ನು ಅಂಕೆಯಲ್ಲಿಡುವ ದೇವರಾದ ಕಶಿಮಾ ಈ ನಮಝುವನ್ನು ರಕ್ಷಿಸುತ್ತದೆ. ಕಶಿಮಾ ತನ್ನ ರಕ್ಷಣಾ ಕಾಪನ್ನು ಕೆಳಗೆ ಬೀಳಿಸಿದಾಗ, ನಮಝು ಹೊಯ್ದಾಡಲು ಅಥವಾ ಬಡಿದಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಿರುಸಾದ ಭೂಕಂಪಗಳು ಸಂಭವಿಸುತ್ತವೆ, ಮುಂತಾದ ನಂಬಿಕೆಗಳಿದ್ದವು.

ಮಹಾಭಾರತದಲ್ಲಿ ಭೂಮಿ ಮತ್ತು ಸೃಷ್ಟಿ:-

ಮಹಾಭಾರತದ ಈಗಿನ ಕಾವ್ಯವು ಸುಮಾರು ಕ್ರಿಪೂ 4000 ವರ್ಷಗಳ ಹಿಂದೆ ಬರಹರೂಪಕ್ಕೆ ಬಂದಿರಬೇಕೆಂದು ಇತಿಹಾಸಕಾರರು ತೀರ್ಮಾನಿಸಿದ್ದಾರೆ. ಮೂಲಮಹಾಭಾರತ ಪಾಠವು ಸುಮಾರು ಕ್ರಿ ಪೂ. ೮ /೯ ನೇ ಶತಮಾನದಲ್ಲಿ ರಚನೆಯಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಕ್ರಿಶ. ೩೦೦/೪೦೦ ರ ಗುಪ್ತರಕಾಲದಲ್ಲಿ ಈಗಿನ ತಿದ್ದಿದ ಗ್ರಂಥ ರಚನೆ ಯಾಗಿರಬಹುದೆಂಬುದು ಭಾಷಾತಜ್ಞರ ಅಭಿಪ್ರಾಯ. ಖಗೋಲ ವಿಜ್ಞಾನಿ ಆರ್ಯಭಟ್ಟರು (ಕ್ರಿ ಶ.೬ ನೇ ಶತಮಾನ) ಕಲಿಯುಗಾದಿಯನ್ನು ಕ್ರಿ.ಪೂ. ೩೧೦೨ ಫೆಬ್ರವರಿ ೧೮ ಎಂದು ನಿರ್ಧರಿಸಿದ್ದಾರೆ ಮಹಾಭಾರತಯುದ್ಧವು ಅದಕ್ಕಿಂತ ೫೦/೬೦ವರ್ಷಹಿಂದೆ ಆಗಿರಬೇಕು. ೨ನೇ ಪುಲಕೇಶಿಯ ಕಾಲದ ಐಹೊಳೆ ಶಾಸನದಲ್ಲಿ ಶಕ ೫೫೬= ಕಿಪೂ.೬೩೪ ಎಂದರೆ ಭಾರತ (ಕುರುಕ್ಷೇತ್ರ ಯುದ್ಧವು) ನಡೆದು ೩೭೩೫ ವರ್ಷಗಳಾದವೆಂದು ಹೇಳಿದೆ. ಖಗೋಲ ಶಾಸ್ರಜ್ಞರ ವೃದ್ಧ ವರ್ಗ, ವರಾಹಮಿಹಿರರು ಮತ್ತು ಹಿಂದಿನ ಇತಿಹಾಸ ಕಾರ ಕಲ್ಹಣ ರು ಆ ಯುದ್ಧವು ಕ್ರಿ ಪೂ ೨೪೪೯ ವರ್ಷದಲ್ಲಿ (೨೪೪೯+೨೦೧೨ = ೪೪೬೧ ವರ್ಷದ ಹಿಂದೆ) ಆಯಿತೆಂದು ಹೇಳುತ್ತಾರೆ. ಆದರೆ ಈಗಿನ ಇತಿಹಾಸ ಕಾರರು ಮಹಾಭಾರತ ಯುದ್ಧವು ಕ್ರಿ ಪೂ.೧೨ ನೇ ಶತಮಾನ ದಿಂದ ಕ್ರಿ ಪೂ. ೮ ನೇ ಶತಮಾನದ ನಡುವೆ ಕಬ್ಬಿಣ ಯುಗದ ಆರಂಭದಲ್ಲಿ ನಡೆದಿರಬೇಕೆಂದು ಅಭಿಪ್ರಾಯ ಪಡುತ್ತಾರೆ. (ವಿಕಿಪೀಡಿಯಾ ಇಂಗ್ಲಿಷ್- ಮಹಾಭಾರತ) ಹಿಂದೂ ಪಂಚಾಂಗಗಳ ಪ್ರಕಾರ ಕಲಿಯುಗ ಆರಂಭವಾಗಿ ೫೧೦೦ ವರ್ಷ ವಾಗಿದೆ ಪ್ರಸಿದ್ಧವಾದ ೧೮ ಪುರಾಣಗಳು ಮಹಾಭಾರತ ಕಾವ್ಯ ಅಥವಾ ಇತಿಹಾಸಕ್ಕಿಂತ ಈಚೆಗೆ ರಚನೆಯಾದದ್ದೆಂದು ಇತಿಹಾಸಕಾರರ ಅಭಿಪ್ರಾಯ. ಕಾಲ ಗಣನೆ ಸಂಪಾದಿಸಿ ಕಾಲ ೧೯೭,೨೬,೪೯,೧೧೦ ವರ್ಷಗಳ ಹಿಂದೆ (೨೦೦೯ ಕ್ಕೆ) ೧ ನೇ ಸ್ವಾಯಂಭೂ ಮನುವಿನ ಕಾಲ ? ದೇವಗಣ ಸೃಷ್ಟಿ (ಮಹಾಭಾರತ ಆದಿಪರ್ವ ಅದ್ಯಾಯ ೬೫ ಶ್ಲೋಕ ೨೫೭೪/೧೦) ರಿಂದ) ಕಲ್ಪ ಆದಿ ಗತ:೧೯೭,೨೬,೪೯,೧೧೦ (ವರ್ಷಗಳ ಹಿಂದೆ)ಕಲಿ ಗತ ೫೧೧೦ವರ್ಷ (೨೦೦೯ಕ್ಕೆ) ಸೃಷ್ಟಿಯ ಆದಿ ಗತ:೧೯೫,೫೮,೮೫೨೧೦,; ವವಸ್ವತ ಮನು ಗತ : ೧,೮೬,೧೮,೮೫೦ (ಮೈಸೂರು ಪಂಚಾಂಗ ರೀತ್ಯಾ). ಇದು ಬ್ರಹ್ಮನ ದ್ವಿತೀಯ ಪರಾರ್ಧ (ಮಧ್ಯಾಹ್ನ ) ಶ್ವೇತ ವರಾಹ ಕಲ್ಪ ( ಅನೇಕ ಯುಗಗಳು ಮತ್ತು ಮನ್ವಂತರಗಳು) ಈಗ ವೈವಸ್ವತ ಮನ್ವಂತರ.

ಭೂಮಿಯ ಪವಿತ್ರತೆಯಲ್ಲಿ ನೀರು,ಜಲ ಮಾಲಿನ್ಯ ಮತ್ತು ಜಲ ಸಂರಕ್ಷಣೆ :-

Main article: ಜಲ ಮಾಲಿನ್ಯ ಇಂದಿನ ಜಗತ್ತಿಗೆ ಭಾರೀ ತಳಮಳದ ಸಂಗತಿ ಎಂದರೆ ಜಲ ಮಾಲಿನ್ಯ. ಈ ಜಲ ಮಾಲಿನ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳ ಸರಕಾರಗಳು ಹೆಣಗಾಡುತ್ತಿವೆ. ಹಲವಾರು ಮಲಿನ ಪದಾರ್ಥಗಳು ನೀರಿನ ಪೂರೈಕೆ ಮಾಡುವಲ್ಲಿ ಬೆದರಿಕೆಯನ್ನೇ ಒಡ್ಡುತ್ತಿವೆ. ಮಲ ಮೂತ್ರಾದಿಯಾಗಿ ಊರಿನ ರೊಚ್ಚನ್ನು ಯಾವ ಸಂಸ್ಕರಣೆಗೂ ಒಳಪಡಿಸದೇ ನಿಸರ್ಗ ದತ್ತ ಸ್ವಚ್ಛ ನೀರಿಗೆ ಹರಿ ಬಿಡುವುದು ಇವುಗಳಲ್ಲೆಲ್ಲಾ ಅತ್ಯಂತ ಭಯಾನಕ. ಜನ ಸಾಮಾನ್ಯರು ಸಾರ್ವಜನಿಕರು ಸಂಚಾರ ಮಾಡುವ ಮಾರ್ಗ,ಮುಖ್ಯ ರಸ್ತೆ,ಒಳರಸ್ತೆಗಳ ಬದಿಗಳ(ಪಕ್ಕದ)ಲ್ಲಿರುವ ಇನ್ನೂ ಮುಚ್ಚದೆ ಇರುವ ಚರಂಡಿಗಳು,ಹಾಗೂ ಅವುಗಳಲ್ಲಿ ಉಂಟಾಗುವ,ಉತ್ಪತ್ತಿಯಾಗುವ ಕ್ರಿಮಿಗಳು ಕೀಟಗಳು,ಇವುಗಳಿಂದ ಪರಿಸರದಲ್ಲಿ ಉಂಟು ಮಾಡುವ ಭಯಾನಕ ರೋಗ ರುಜಿನಗಳಿಗೂ ಕಾರಣವಾಗಿರುವುದು ಮಾತ್ರವಲ್ಲ ಇವುಗಳಿಂದ ಉತ್ಪತ್ತಿಯಾಗುವ ಕೆಟ್ಟವಾಸನೆ(ದುರ್ನಾಥ)ಯ ಫಲವಾಗಿ ಪರಿಸರದಲ್ಲಿ ನಡೆದಾಡುವ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾಗಿ ವ್ಯಾಪಿಸಿಕೊಂಡಿರುವ ಈ ಭೀಕರ ಸಮಸ್ಯೆ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡುಬರುವುದು ಹೆಚ್ಚು.ಅಭಿವೃದ್ಧಿ ಹೊಂದದ ದೇಶಗಳಲ್ಲಂತೂ ಊರಿನ ಹೊಲಸನ್ನು ಈ ರೀತಿಯಾಗಿ ಬಿಡುಗಡೆ ಮಾಡುವುದು ಸರ್ವೇಸಾಮಾನ್ಯ; ಈ ಬಗೆಯಲ್ಲಿ ತ್ಯಾಜ್ಯ ಬಿಡುಗಡೆ ಮಾಡುವುದನ್ನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಚೀನಾ,ಭಾರತ ಮತ್ತು ಇರಾನ್‌ಗಳೂ ರೂಢಿಸಿಕೊಂಡಿವೆ. ಊರಿನ ಹೊಲಸು, ಜಿಗುಟು ರಾಡಿ, ಕಸ ಮತ್ತು ವಿಷಯುಕ್ತ ಪದಾರ್ಥಗಳನ್ನೂ ಚರಂಡಿಗೆ, ನೀರಿಗೆ ಎಸೆಯಲಾಗುತ್ತದೆ. ಊರಿನ ಹೊಲಸನ್ನು ಸಂಸ್ಕರಿಸಿದರೂ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಸಂಸ್ಕರಣೆಯ ನಂತರ ದೊರೆಯುವ ಹೊಲಸು ಗಟ್ಟಿಗಳು ಅಥವಾ ಪುಡಿ ಪದಾರ್ಥವನ್ನು ಗುಂಡಿಗಳಲ್ಲಿ ತುಂಬಬೇಕು, ಇಲ್ಲವೇ ನೆಲದ ಮೇಲೆ ಹರಡ ಬೇಕು ಅಥವಾ ಸಮುದ್ರಕ್ಕೆ ಎಸೆಯಬೇಕು.[೮] ಊರಿನ ಹೊಲಸಷ್ಟೇ ಅಲ್ಲದೇ ಜಮೀನುಗಳಿಂದ ಕೊಚ್ಚಿ ಹರಿದು ಬರುವ ಮಾಲಿನ್ಯ,ಚಂಡಮಾರುತದಿಂದ ಅಪ್ಪಳಿಸುವ ಭಾರೀ ಮಳೆಯಿಂದ ಹರಿದು ಬರುವ ಮಲಿನ ಪದಾರ್ಥ, ಮತ್ತು ಸರಕಾರ ಹಾಗೂ ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯದ ಸುರಿತ-ಇವೆಲ್ಲವೂ ಜಲ ಮೂಲಿನ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳು.