ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೨೧ ನೇ ಸಾಲು: ೨೨೧ ನೇ ಸಾಲು:
:::: @[[User:Anoop Rao|ಅನೂಪ್]] ಉತ್ತಮ ಸ್ಥಿತಿಯಲ್ಲಿ ಎಂದರೆ ಪತ್ರಿಕಾ ವರದಿಯ ಹಾಗಲ್ಲ. ಈ ಲೇಖನ ಪತ್ರಿಕಾ ವರದಿಯಂತಿದೆ. ಹೆಚ್ಚಿನ ಭಾಗವು ಪತ್ರಿಕಾ ವರದಿಗಳಾಗಿದೆ. ನೀವು ಕೊಟ್ಟ ಉಲ್ಲೇಖಗಳಲ್ಲಿ ನೋಡಿದರೆ ನೇರವಾಗಿ ಪತ್ರಿಕೆಗಳಿಂದ ನಕಲು ಪಡಿಸಿದ್ದಾಗಿದೆ. ಅದು ವಿಶ್ವಕೋಶಕ್ಕೆ ಅನಗತ್ಯ ಎಂದು ನನ್ನ ಅಭಿಪ್ರಾಯ. ಮತ್ತು ನೀವು ಮೇಲೆ ಹೇಳಿದಿರಲ್ಲ ಎಲ್ಲಾ ಲೇಖನಗಳು [[ವಿಕಿಪೀಡಿಯ:ಉತ್ತಮ ಲೇಖನ|ಪುಟದಲ್ಲಿ]] ಹೇಳಿದ ಹಾಗೆ ಹೊಂದಾಣಿಕೆಯಾಗುವುದಿಲ್ಲ ಎಂದು. ಉದಾಹರಣೆಗಳನ್ನು ಕೊಡಬಹುದೇ? --[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೧೦:೨೩, ೩೧ ಜುಲೈ ೨೦೧೭ (UTC)
:::: @[[User:Anoop Rao|ಅನೂಪ್]] ಉತ್ತಮ ಸ್ಥಿತಿಯಲ್ಲಿ ಎಂದರೆ ಪತ್ರಿಕಾ ವರದಿಯ ಹಾಗಲ್ಲ. ಈ ಲೇಖನ ಪತ್ರಿಕಾ ವರದಿಯಂತಿದೆ. ಹೆಚ್ಚಿನ ಭಾಗವು ಪತ್ರಿಕಾ ವರದಿಗಳಾಗಿದೆ. ನೀವು ಕೊಟ್ಟ ಉಲ್ಲೇಖಗಳಲ್ಲಿ ನೋಡಿದರೆ ನೇರವಾಗಿ ಪತ್ರಿಕೆಗಳಿಂದ ನಕಲು ಪಡಿಸಿದ್ದಾಗಿದೆ. ಅದು ವಿಶ್ವಕೋಶಕ್ಕೆ ಅನಗತ್ಯ ಎಂದು ನನ್ನ ಅಭಿಪ್ರಾಯ. ಮತ್ತು ನೀವು ಮೇಲೆ ಹೇಳಿದಿರಲ್ಲ ಎಲ್ಲಾ ಲೇಖನಗಳು [[ವಿಕಿಪೀಡಿಯ:ಉತ್ತಮ ಲೇಖನ|ಪುಟದಲ್ಲಿ]] ಹೇಳಿದ ಹಾಗೆ ಹೊಂದಾಣಿಕೆಯಾಗುವುದಿಲ್ಲ ಎಂದು. ಉದಾಹರಣೆಗಳನ್ನು ಕೊಡಬಹುದೇ? --[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೧೦:೨೩, ೩೧ ಜುಲೈ ೨೦೧೭ (UTC)


* ಕನ್ನಡ ವಿಕಿಪೀಡಿಯದಲ್ಲಿರುವ [[ಭಯೋತ್ಪಾದನೆ]] ಲೇಖನದಲ್ಲಿ [[:en:Terrorism|ಆಂಗ್ಲ ವಿಕಿಪೀಡಿಯದ]] ಪುಟದಲ್ಲಿರುವಂತೆ ಸಮಗ್ರ ಮಾಹಿತಿ ಕಂಡುಬರುತ್ತಿಲ್ಲ. ಗೋಪಾಲಕೃಷ್ಣ ಅವರು ಹೇಳಿದಂತೆ ಕೇವಲ ಭಯೋತ್ಪಾದಕ ದಾಳಿಗಳ ಪಟ್ಟಿಯಂತೆ ಕಂಡುಬರುತ್ತಿದೆ. ಆದರೆ, ಈಗಿರುವ ಲೇಖನಕ್ಕೆ ಹೆಚ್ಚುವರಿಯಾಗಿ ಆಂಗ್ಲ ಲೇಖನದಲ್ಲಿರುವಂತೆಯೇ ಭಯೋತ್ಪಾದನೆಯ ಬೇರೆ ಬೇರೆ ವ್ಯಾಖ್ಯಾನಗಳು, ಇತಿಹಾಸ, ವಿಧಗಳು ಇತ್ಯಾದಿ ವಿವರಗಳನ್ನು ಸೇರಿಸಿ ಉತ್ತಮಗೊಳಿಸಬಹುದು. ಹಾಗಾಗಿ ಈ ಲೇಖನವನ್ನು ಅಳಿಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ.
* ಕನ್ನಡ ವಿಕಿಪೀಡಿಯದಲ್ಲಿರುವ [[ಭಯೋತ್ಪಾದನೆ]] ಲೇಖನದಲ್ಲಿ [[:en:Terrorism|ಆಂಗ್ಲ ವಿಕಿಪೀಡಿಯದ]] ಪುಟದಲ್ಲಿರುವಂತೆ ಸಮಗ್ರ ಮಾಹಿತಿ ಕಂಡುಬರುತ್ತಿಲ್ಲ. ಗೋಪಾಲಕೃಷ್ಣ ಅವರು ಹೇಳಿದಂತೆ ಕೇವಲ ಭಯೋತ್ಪಾದಕ ದಾಳಿಗಳ ಪಟ್ಟಿಯಂತೆ ಕಂಡುಬರುತ್ತಿದೆ. ಆದರೆ, ಈಗಿರುವ ಲೇಖನಕ್ಕೆ ಹೆಚ್ಚುವರಿಯಾಗಿ ಆಂಗ್ಲ ಲೇಖನದಲ್ಲಿರುವಂತೆಯೇ ಭಯೋತ್ಪಾದನೆಯ ಬೇರೆ ಬೇರೆ ವ್ಯಾಖ್ಯಾನಗಳು, ಇತಿಹಾಸ, ವಿಧಗಳು ಇತ್ಯಾದಿ ವಿವರಗಳನ್ನು ಸೇರಿಸಿ ಉತ್ತಮಗೊಳಿಸಬಹುದು. ಹಾಗಾಗಿ ಈ ಲೇಖನವನ್ನು ಅಳಿಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ. ~ [[User:M G Harish|ಹರೀಶ]] <sup>/ [[User talk:M G Harish|ಚರ್ಚೆ]] / [[Special:Contributions/M_G_Harish|ಕಾಣಿಕೆಗಳು]] </sup> ೧೧:೩೮, ೩೧ ಜುಲೈ ೨೦೧೭ (UTC)

೧೭:೦೮, ೩೧ ಜುಲೈ ೨೦೧೭ ನಂತೆ ಪರಿಷ್ಕರಣೆ

ವಿಕಿಪೀಡಿಯದಲ್ಲಿ ಅಳಿಸುವಿಕೆಗಾಗಿ ಗುರುತು ಮಾಡಲಾಗಿರುವ ಲೇಖನಗಳ ಪಟ್ಟಿಗಾಗಿ ವರ್ಗ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟವನ್ನು ನೋಡಿ. ಅಳಿಸುವಿಕೆಗೆ ಗುರುತು ಮಾಡಲಾಗಿರುವ ಯಾವುದಾದರೂ ಲೇಖನ ಅಥವಾ ಪುಟದ ಬಗ್ಗೆ ನಿಮ್ಮ ವಿರೋಧವಿದ್ದಲ್ಲಿ ವಿರೋಧದ ಕಾರಣ ಸಮೇತ ನಿಮ್ಮ ಸಂದೇಶ ಈ ಪುಟದಲ್ಲಿ ಸೇರಿಸಿ.

ಗಮನಿಸಿ:

  • ಈ ಚರ್ಚೆ ಪುಟದಲ್ಲಿ ಅನಾಮಿಕ ಕಾಮೆಂಟುಗಳನ್ನು, ಸಹಿ ಹಾಕದೆ ಸೇರಿಸಲಾಗಿರುವ ಚರ್ಚೆಗಳನ್ನು ಪರಿಗಣಿಸಲಾಗುವುದಿಲ್ಲ.
  • ಯಾವ ಲೇಖನದ ಅಳಿಸುವಿಕೆಯ ಬಗ್ಗೆ ನಿಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು.

ಹಸುರ ಮೇದುದು ಕವಿ ಪ್ರಾಣಕೋಶ!

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಇಲ್ಲಿ ಕವಿತೆ ಯ ವಿಮರ್ಶೆ ಮಾಡಿಲ್ಲ. ಕೇವಲ ಕವಿತೆ ಹುಟ್ಟಿನ ಹಿನ್ನೆಲೆಯನ್ನು ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ನೋಡಲಾಗಿದೆ. ಆದ್ದರಿಂದ ಈ ಲೇಖನವನ್ನು ಅಳಿಸುವ ಅಗತ್ಯವಿಲ್ಲ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಇದು ಆ ಕವಿತೆಯ ವಿಮರ್ಶೆಯಲ್ಲ.

ಮಾನ್ಯರೆ, ಕುವೆಂಪು ಅವರ ಕೆಲವು ಕವಿತೆಗಳ ಹಿನ್ನೆಲಯೆನ್ನು ಅವುಗಳ ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ದಾಖಲಿಸಲಾಗಿದೆ. ವಿಕಿಯಲ್ಲಿ ಸುಮಾರು ಐವತ್ತು ಲೇಖನಗಳಿವೆ. ಆದರೆ ಈ ಮೂರನ್ನು ಅಳಿಸುವಿಕೆಗೆ ಗುರುತು ಮಾಡಿರುವ ಉದ್ದೇಶ ತಿಳಿಯಲಿಲ್ಲ. ದಯಮಾಡಿ ಮಹಾಕವಿಯೊಬ್ಬರ ಕವಿತೆಯೊಂದರ ಹಿನ್ನೆಲೆ ಸಾಹಿತ್ಯದ ಅಭ್ಯಾಸಿಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಈ ಮೂರೂ ಲೇಖನಗಳ ಅಳಿಸುವಿಕೆಗೆ ನನ್ನ ವಿರೋಧವಿದೆ.

ಕುವೆಂಪು ಕವಿತೆ - ಸಿಡ್ಲೆಹಳ್ಳಿ ಮತ್ತು ತಾರಿಣಿಯ ಪ್ರಾರ್ಥನೆ

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಇಲ್ಲಿ ಕವಿತೆ ಯ ವಿಮರ್ಶೆ ಮಾಡಿಲ್ಲ. ಕೇವಲ ಕವಿತೆ ಹುಟ್ಟಿನ ಹಿನ್ನೆಲೆಯನ್ನು ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ನೋಡಲಾಗಿದೆ. ಆದ್ದರಿಂದ ಈ ಲೇಖನವನ್ನು ಅಳಿಸುವ ಅಗತ್ಯವಿಲ್ಲ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಇದು ಆ ಕವಿತೆಯ ವಿಮರ್ಶೆಯಲ್ಲ. --Satyanbr (talk)

ಕುವೆಂಪು ಕವಿತೆ : ದೇವರು ರುಜು ಮಾಡಿದನು

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಇಲ್ಲಿ ಕವಿತೆ ಯ ವಿಮರ್ಶೆ ಮಾಡಿಲ್ಲ. ಕೇವಲ ಕವಿತೆ ಹುಟ್ಟಿನ ಹಿನ್ನೆಲೆಯನ್ನು ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ನೋಡಲಾಗಿದೆ. ಆದ್ದರಿಂದ ಈ ಲೇಖನವನ್ನು ಅಳಿಸುವ ಅಗತ್ಯವಿಲ್ಲ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಇದು ಆ ಕವಿತೆಯ ವಿಮರ್ಶೆಯಲ್ಲ --Satyanbr (talk)

(ಮೆಕಿನ್ಸೆ & ಕಂಪನಿ)

ಯಾಕೆ ಅಳಿಸುವಿರಿ? ಕಾರಣವೇನು? ಸತ್ಯಪ್ರಕಾಶ್ ೯೮೮೬೩ ೩೪೬೬೭ arogyasathya@yahoo.co.in

ಯಾವ ಲೇಖನವನ್ನು ಉದ್ದೇಶಿಸುತ್ತಿದ್ದೀರೆಂಬುದನ್ನ ನೀವು ಇಲ್ಲಿ ತಿಳಿಸಿದರೆ ಉತ್ತಮ. ಹಾಗೆಯೇ, ವಿಕಿಯಲ್ಲಿ ಚರ್ಚೆಪುಟಗಳಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ. ಸಹಿ ಹಾಕಲು --~~~~ ಬಳಸಿ. ಹೆಚ್ಚಿನ ಮಾಹಿತಿಗೆ ಸಹಾಯ ಪುಟಗಳನ್ನೋದಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೩೬, ೨೩ May ೨೦೦೬ (UTC)

Template:ಕನ್ನಡ

ಕನ್ನಡ ಲೇಖನ ಕನ್ನಡ ಭಾಷೆಗೆ ಸಂಬಂದಿಸಿದ ಸಾಕಷ್ಟು ಮಾಹಿತಿ ನೀಡುತ್ತದೆ. ಇದನ್ನು ಅಳಿಸುವಲ್ಲಿ ನನ್ನ ತೀವ್ರ ವಿರೋಧವಿದೆ.

ಭಾರತೀಯ ಜನತಾಪಕ್ಷ

ಸದರಿ ಲೇಖನವು ಒಂದು ಪ್ರಮುಖ ರಾಷ್ಟ್ರೀಯ ಪಕ್ಷದ ಬಗ್ಗೆ ಮಾಹಿತಿ ನೀಡುವಂತಹದಾಗಿದ್ದು, ಲೇಖನದಲ್ಲಿ ಸುಧಾರಣೆಯಾಗಬೇಕಾಗಿದೆ. ಆದರೆ ಲೇಖನವನ್ನು ಅಳಿಸುವಿಕೆಗೆ ಹಾಕಲಾಗಿರುವುದಕ್ಕೆ ಸಕಾರಣವಿಲ್ಲ. ಆದ್ದರಿಂದ ಭಾರತೀಯ ಜನತಾಪಕ್ಷ ಲೇಖನವನ್ನು ಅಳಿಸುವುದಕ್ಕೆ ನನ್ನ ವಿರೋಧವಿದೆ. --ರಾಜಾ ಹುಸೇನ್ ೦೪:೧೧, ೨೪ May ೨೦೦೬ (UTC)

ಲೇಖನವನ್ನು ಭಾರತೀಯ ಜನತಾ ಪಕ್ಷ - ಮುಂಚೆ ಇದ್ದ ಈ ಲೇಖನದೊಂದಿಗೆ ವಿಲೀನಗೊಳಿಸಲಾಗಿದೆ. ಆದ್ದರಿಂದ ಲೇಖನ ಅಳಿಸುವಿಕೆಗೆ ಹಾಕಿರುವುದು ಅರ್ಥಪೂರ್ಣ - -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೫೮, ೨೪ May ೨೦೦೬ (UTC)

mangalore

We are the kannada teachers of "vidya shilp" academy. your sites are very useful and informative. The information about "Mangalore" is informative and it gives the basic knowledge about that place. So we request you to add up more information for this site instead of deleting it. Thanking you,

Dear teachers from "Vidya Shilp Academy": I assume you can read Kannada, based on your comments above.
ಮಂಗಳೂರು ಬಗೆಗಿನ ಲೇಖನ ಅಳಿಸುತ್ತಿಲ್ಲ. ಆ ಲೇಖನ ಖಂಡಿತಾ ವಿಕಿಯಲ್ಲಿ ಇದ್ದೇ ಇರುತ್ತದೆ. ಲೇಖನ: ಮಂಗಳೂರು
ಈಗ ಅಳಿಸುವಿಕೆಗೆ ಹಾಕಿರುವುದು ಮ೦ಗಳೂರು ಲೇಖನವನ್ನು. ಲೇಖನದ ಹೆಸರು ತಪ್ಪಿದೆ, ಹಾಗು ಇದನ್ನು ವಿಕಿಯಲ್ಲಿ ಇರಲು ಬಿಡಬಾರದು ಎಂಬ ಕಾರಣಕ್ಕೆ ಅಳಿಸುವಿಕೆಗೆ ಹಾಕಲಾಗಿದೆ. ಎರಡೂ ಲೇಖನಗಳ ಹೆಸರಿನಲ್ಲಿರುವ ವ್ಯತ್ಯಾಸ, ಅನುಸ್ವಾರಕ್ಕೆ ಬದಲಾಗಿ ಸೊನ್ನೆಯನ್ನು ಬಳಸಿರುವುದು.
ಆಂಗ್ಲದಲ್ಲಿ ಬರೆದರೆ ಹೀಗೆ ಅರ್ಥೈಸಬಹುದು: ಸರಿಯಾದ ಲೇಖನ - Mangalore ಅಳಿಸುವಿಕೆಗೆ ಹಾಕಲಾಗಿರುವ ಲೇಖನ - Ma0galore
- ಮನ | Mana ೧೬:೧೧, ೨೦ June ೨೦೦೬ (UTC)

ಲೇಖನ:ಅಂತರ್ಜಾಲ

ನನ್ನ ಅಭಿಪ್ರಾಯದಂತೆ, ಅಂತರ್ಜಾಲ ಲೇಖನವನ್ನು ಅಳಿಸುವ ಬದಲು ಅಂತರಜಾಲ ಲೇಖನಕ್ಕೆ ರೀ-ಡೈರೆಕ್ಟ್ ಮಾಡುವುದು ಸೂಕ್ತವೆನಿಸುತ್ತದೆ. Internetಗೆ ಸಮಾನ್ಯವಾಗಿ ಗೂಗಲ್ ಒಳಗೊಂಡಂತೆ ಅನೇಕ ಕಡೆ ಅಂತರ್ಜಾಲಪದದ ಪ್ರಯೋಗ ಕಂಡುಬರುತ್ತದೆ. Naveenbm ೧೫:೧೦, ೨೪ July ೨೦೦೬ (UTC)ನವೀನ್

ನವೀನ್, ಅಂತರ ಜಾಲ, ಅಂತರ್ಜಾಲ, ಅಂತರಜಾಲ ಈ ಮೂರೂ ಹೆಸರುಗಳನ್ನು ಒಂದೇ ಲೇಖನಕ್ಕೆ ರೀ-ಡೈರೆಕ್ಟ್ ಮಾಡುವುದು ಸೂಕ್ತವಾಗಿಯೇ ಇದೆ. ಆದರೆ ಅಳಿಸುವಿಕೆಗೆ ಹಾಕಿರುವ ಲೇಖನ ಅ೦ತರಜಾಲ. ಅನುಸ್ವಾರದ ಬದಲಿಗೆ ಸೊನ್ನೆಯನ್ನು ಉಪಯೋಗಿಸಲಾಗಿದೆ, ಲೇಖನದ ಹೆಸರಿನಲ್ಲಿ. - ಮನ|Mana Talk - Contribs ೧೬:೨೭, ೨೪ July ೨೦೦೬ (UTC)

ಭಾರತದ ಮೊದಲ ಪ್ರಧಾನಿಯವರ ಲೇಖನವು ಜವಾಹರಲಾಲ್ ನೆಹರು ಎಂದು ಇದೆ. ಆಂಗ್ಲದಲ್ಲಿ Jawaharlal Nehru ಎನ್ನಲಾಗುತ್ತದೆ.

  • ಕನ್ನಡದಲ್ಲಿ, ಆಡುಮಾತಿನಲ್ಲಿ ಮತ್ತು ಬರೆವಣಿಗೆಯಲ್ಲಿ ಜವಾಹರಲಾಲ್ ನೆಹರು, ಜವಹರಲಾಲ್ ನೆಹರು ಎರಡನ್ನೂ ಉಪಯೋಗಿಸಲಾಗುತ್ತದೆ. ಜವಹರಲಾಲ್ ನೆಹರು ಎಂದು ಹೊಸ ಓದುಗರೊಬ್ಬರು ವಿಕಿಪೀಡಿಯದಲ್ಲಿ ಹುಡುಕುವ ಸಾಧ್ಯತೆಗಳು ಇಲ್ಲದಿಲ್ಲ. ಅವರಿಗೆ ಲೇಖನ ಸಿಗುವಂತಾಗಬೇಕು.
  • ಜೊತೆಗೆ ಜವಹರಲಾಲ್ ನೆಹರು ಎಂದು ಕೆಲವು ಲೇಖನಗಳಲ್ಲಿಯೂ ಸಂಪರ್ಕ ಹೊಂದಿದೆ.

ಈ ಕಾರಣಗಳಿಂದ ಜವಹರಲಾಲ್ ನೆಹರು ರೀಡೈರೆಕ್ಟ್ ಪುಟವನ್ನು ಅಳಿಸಿಹಾಕುವುದು ಬೇಡ. ಜವಾಹರಲಾಲ್ ನೆಹರು ಲೇಖನವು ದೊರಕುವಂತೆ ಜವಹರಲಾಲ್ ನೆಹರು ಲೇಖನದಿಂದ ರೀಡೈರೆಕ್ಟ್ ಕೊಡುವುದು ಸೂಕ್ತ. - ಮನ|Mana Talk - Contribs ೧೭:೨೭, ೨೮ ಆಗಸ್ಟ್ ೨೦೦೬ (UTC)

ಮೇಲೆ ತಿಳಿಸಿರುವ ಕಾರಣಗಳೇ ರೆಗಿನಾಲ್ಡ್ ಡೈಯರ್ ಲೇಖನಕ್ಕೂ ಅನ್ವಯಿಸುತ್ತದೆ. ರೆಗಿನಾಲ್ಡ್ ಡೈಯರ್ ಲೇಖನದಿಂದ ರೆಜಿನಾಲ್ಡ್ ಡೈಯರ್ ಲೇಖನಕ್ಕೆ ರೀಡೈರೆಕ್ಟ್ ಕೊಡುವುದು ಸೂಕ್ತ. - ಮನ|Mana Talk - Contribs ೧೯:೨೪, ೯ September ೨೦೦೬ (UTC)

ಈ ಪುಟಗಳು ಖಾಲಿಯಿವೆ. ಮತ್ತು ಇವುಗಳ ಲೇಖನಗಳನ್ನು ಆಗಲೇ ಅಳಿಸಿಹಾಕಲಾಗಿದೆ. ಇವೆರಡು ಪುಟಗಳನ್ನು ಕೂಡ ಅಳಿಸಿಹಾಕಬೇಕು ಎಂದು ಕೋರುತ್ತೇನೆ. - ಮನ|Mana Talk - Contribs ೧೭:೪೩, ೨೮ ಆಗಸ್ಟ್ ೨೦೦೬ (UTC)

ಇದೊಂದು ತಾಂತ್ರಿಕ ಸಮಸ್ಯೆ. ಸಾಧ್ಯವಾದರೆ ಇದರ ಬಗ್ಗೆ ವಿಕಿಮೀಡಿಯ ಬಗ್-ಝಿಲಾದಲ್ಲಿ ಒಂದು ರಿಪೋರ್ಟು ಸೇರಿಸಿ. ಸದ್ಯಕ್ಕೆ ಚರ್ಚೆ ಪುಟಗಳು ಹಾಗೆಯೇ ಇದ್ದರೆ ತೊಂದರೆಯೇನಿಲ್ಲ - ಅಧಿಕೃತ ಲೇಖನಗಳ ಅಂಕಿಗೆ ಚರ್ಚೆಪುಟಗಳು ಸೇರ್ಪಡೆಯಾಗವು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೧೧, ೨೯ ಆಗಸ್ಟ್ ೨೦೦೬ (UTC)

Comment by anon

The comment below was added by an anon in the middle of the page. So I have shifted it down here. ಶುಶ್ರುತ \ಮಾತು \ಕತೆ ೦೨:೧೯, ೨೬ February ೨೦೦೭ (UTC)

davangere benne dose famous because do't delete this item - umesh

(sunkadavar ೦೧:೧೨, ೨೧ ಜೂನ್ ೨೦೦೮ (UTC)) ವರ್ಗ : ಲಿಪಿಕಾರ,ಸಂಪಾದಕ,ಅನುವಾದಕ, ಡಾ.ಚಂದ್ರಶೇಖರ್, ನಿಮಗೆ ಆಪತ್ತು ಜನಕವೆಂದು ತೋರಿಬಂದರೆ, ಅದನ್ನು ತೆಗೆದುಹಾಕಿ. [['

ಅಣ್ಣಾ ಬಾಂಡ್

ಇದು ಕನ್ನಡದ ಪ್ರಮುಖ ನಟ ಪುನೀತ್ ರಾಜ್ ಕುಮಾರ್ ರವರ ಚಿತ್ರ. ಈ ಚಿತ್ರ ಇದೀಗ ಬಿಡುಗಡೆ ಆಗಿದೆ. ಯಾವುದೇ ಚಿತ್ರ ಬಿಡುಗಡೆ ಆಗುವ ಮೊದಲೇ ಆ ಚಿತ್ರದ ಪುಟವನ್ನು ತೆಗೆದು ಹಾಕುವುದು ಸರಿಯಲ್ಲ. User:vchetans ಚೇತನ್,


ಪುಟ ಮತ್ತು ಈಶಾವಾಸ್ಯ ಉಪನಿಷತ್ ಈ ಪುಟಗಳಲ್ಲಿ ಪುಟ ದಲ್ಲಿ ಇರುವ ಪದ್ಯಗಳು ಈಶಾವಾಸ್ಯ ಉಪನಿಷತ್ ನಲ್ಲಿ ಸೇರಿಸಲಾಗಿದೆ. ಆದ್ದರಿಂದ ಪುಟ ದಲ್ಲಿರುವ ಲೇಖನವನ್ನು ಅಳಿಸಬಹುದು. ಮೊದಲಿಗೆ ಪ್ರಯೋಗಾರ್ಥವಾಗಿ ಪುಟ ದಲ್ಲಿ ತುಂಬಲಾಗಿತ್ತು. ಬಿ.ಎಸ್. ಚಂದ್ರಶೇಖರ ಸಾಗರ :Bschandrasgr ೧೩:೫೨, ೨೯ ಮೇ ೨೦೧೨ (UTC)


ಪರುಪಳ್ಳಿ ಕಶ್ಯಪ್

ಈಗಿನ್ನೂ ಈ ಪುಟವನ್ನು ಸಿಧ್ಧಪಡಿಸಿ ಮಾಹಿತಿ ಅಚ್ಚಿಸುತ್ತಿದ್ದೆ. ಅಷ್ಟರಲ್ಲಿ ಅಳಿಸುವಿಕೆಗೆ ಗುರುತಿಸಲಾಗಿದೆ. ಯಾಕೆ ಹೀಗೆ ? ಒಂದೆರೆಡು ದಿನ ಕಾದು ನೋಡಬೇಕಲ್ಲವೆ ? Subrahmanyahs

  • ಪುಟದಲ್ಲಿದ್ದ ಅಳಿಸುವಿಕೆ ತೆಗಿಯಲಾಗಿದೆ.ಗಮನಿಸಿರಿ.ಲೇಖನಗಳನ್ನು ಬರೆಯುವಾಗ ಲೇಖನ ಪ್ರಮಾಣ ಕನಿಷ್ಟ ೩ಸಾವಿರ ಬೈಟ್ ಗಳು ಇದ್ದೆಹಾಗೇ ಬರೆಯುವುಡು ಉತ್ತಮಾ.ಈಗಾಗೆಲೇ ನಮ್ಮ ವಿಕೀಪಿಡಿಯಾದಲ್ಲಿ ಚುಟುಕುಗಳು ಹೆಚ್ಚಿನ ಸಂಖ್ಯಯಲ್ಲಿವೆ.ನಿಮ್ಮಿಂದ ಇನ್ನೂ ತೇಖನಗಳು ಬರಬೇಕಂತ ಆಶಿಸುತ್ತಾನೆ.ಪಾಲಗಿರಿ (talk) ೦೨:೨೩, ೨೪ ಆಗಸ್ಟ್ ೨೦೧೩ (UTC)

ರಮ್ಯ ಕಾವ್ಯ-ನವೋದಯ ಕಾವ್ಯ

ಅಳಿಸುವಿಕೆಗೆ ? ಮಾನ್ಯ ಹರೀಷರವರೇ, ಕಾವ್ಯ ಪ್ರಕಾರಗಳಲ್ಲಿ ಕವನ ಮಾದರಿಗಳನ್ನು ಅಳಿಸುವಿಕೆಗೆ ಹಾಕುತ್ತಿದ್ದೀರಿ - ಮಾದರಿ ಹಾಕದಿದ್ದರೆ ತಿಳಿಯುವುದು ಹೆಗೆ? ಶ್ರೀ ಪವನಜ ಅವರು ಮಾದರಿ ಹಾಕಬಹುದು ಎಂದಿದ್ದಾರೆ. ಬೇರೆಯವರ ಕವನ ಹಾಕಿದರೆ ಅದಕ್ಕೆ ಕಾಪೀರೈಟ್ ಸಮಸ್ಯೆ ಇರುತ್ತದೆ. ಅದಕ್ಕೆ ಉದಾಹರಣೆಗೆ ಒಂದೆರೆಡು ಕವನ /ಲೇಖನ ಹಾಕಬೇಕಾಗುವುದು-ಅದಿಲ್ಲದೆ ಲೇಖನ ವ್ಯರ್ಥ.ನೀವೇ ಮಾದರಿ ಕವನ/ ಲೇಖನ ಹಾಕಿ. ಬರೆಯುವವರಿಗೆ ಡಿಸ್ಕರೇಜ್ ಆದರೆ ವಿಕಿಪೀಡಿಯಾಕ್ಕೇ- ಕನ್ನಡಕ್ಕೇ ನಷ್ಟ!! ನೀವು ಹೆಸರು ಕೊಡದೆ ಎಡಿಟ್ ಮಾಡುವುದು ತಪ್ಪಲ್ಲವೇ?Bschandrasgr ೧೬:೪೨, ೧೫ ಜುಲೈ ೨೦೧೪ (UTC) ಸದಸ್ಯ:Bschandrasgr

ಪಟಾಕಿ

ಪಟಾಕಿ ಕುರಿತಾದ ಪುಟದಲ್ಲಿ ಪಟಾಕಿ ಸಂಸ್ಕೃತಿ ಹಾಗೂ ವಿಜ್ಞಾನ ವಿಷಯಗಳ ಕುರಿತು ಹಲವಾರು ಮಾಹಿತಿಗಳನ್ನು ಬರೆಯಬಹುದು. ~ ಗುರುಪಾದ ಹೆಗಡೆ\ಚರ್ಚೆ \ಕಾಣಿಕೆಗಳು

ಗುರುಪಾದ ಹೆಗಡೆ ಪುಟವನ್ನು ಸೃಷ್ಟಿಸುವ ಬಗ್ಗೆ ಅಳಿಸುವಿಕೆಗೆ ಹಾಕಲಾಗಿರುವ ಲೇಖನ ವಿಭಾಗದಲ್ಲಿ ಬರೆಯುವ ಅವಶ್ಯಕತೆ ಇಲ್ಲ ಅಲ್ಲವೇ? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೦೫, ೨೬ ಏಪ್ರಿಲ್ ೨೦೧೫ (UTC)
ಓಂಶಿವಪ್ರಕಾಶ್/Omshivaprakash, ಅಸಂಬದ್ಧ ವಿಷಯ ಎಂದು ಗುರುತು ಮಾಡಿರುವುದರಿಂದ ಈ ಪುಟದಲ್ಲಿ ಉಲ್ಲೋಖಿಸುವುದು ಸಹಜ ಎಂದು ಕೊಂಡಿದ್ದೇನೆ. ತಪ್ಪಿದ್ದರೆ ಕ್ಷಮಿಸಿ: ಗುರುಪಾದ ಹೆಗಡೆ
ಸಂದೇಶದಲ್ಲಿ ಪುಟದ ಕೊಂಡಿ ಇಲ್ಲದಿದ್ದುದರಿಂದ ತಕ್ಷಣ ನೀವು ಬರೆದ ಮಾಹಿತಿ ಹೊಸ ಪುಟದ ಕೋರಿಕೆ ಎಂದೆನಿಸಿತು :). ಅಳಿಸುವಿಕೆಯ ಟೆಂಪ್ಲೇಟು ತೆಗೆಯದೆ ಇಂಗ್ಲೀಷ್‌ನ ಪುಟದಲ್ಲಿನ ಮಾಹಿತಿ ಅನುವಾದ ಮಾಡಲು ಪ್ರಯತ್ನಿಸಿ, ಇಲ್ಲಿ ಮತ್ತೊಮ್ಮೆ ಮಾಹಿತಿ ಹಾಕಿ, ಅಳಿಸುವಿಕೆ ತೆಗೆಯೋಣ. ಸಧ್ಯಕ್ಕೆ ಪುಟದಲ್ಲಿ ಮಾಹಿತಿ ಸರಿಯಿಲ್ಲ ಜೊತೆಗೆ ಅವಶ್ಯಕವಾದ ಉಲ್ಲೇಖಗಳೂ ಇಲ್ಲ. ಅನುವಾದಕ್ಕೆ ವಿಷಯ ಅನುವಾದಕವನ್ನೂ ಬಳಸಬಹುದು ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೩೨, ೨೬ ಏಪ್ರಿಲ್ ೨೦೧೫ (UTC)

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಈ ಪುಟ ಅಭಿವ್ರುದ್ಧಿ ಮಾಡಿ

ಶೃಂಗೇರಿ ಲೇಖನ ಈಗಾಗಲೇ ಇದೆ. ಅದನ್ನೇ ವಿಸ್ತರಿಸಬಹುದು. ಮಲೆನಾಡ ಮಡಿಲ ಶಾರದೆಯ ನೆಲೆವೀಡು ಎಂಬ ಕಾವ್ಯಮಯ ಶೀರ್ಷಿಕೆ ವಿಶ್ವಕೋಶಕ್ಕೆ ಸರಿಹೊಂದುವುದೂ ಇಲ್ಲ.--Pavanaja (ಚರ್ಚೆ) ೦೨:೩೩, ೨೯ ಏಪ್ರಿಲ್ ೨೦೧೫ (UTC)

ಸುಲಭ ಕುಲಕರ್ಣಿ

ಈ ಲೇಖನವನ್ನು ಅಳಿಸುವುದಕ್ಕಿಂತ ಇಂಗ್ಲಿಷ್ ವಿಕಿಪೀಡಿಯದಲ್ಲಿರುವ Sulabha K Kulkarni ಲೇಖನದಲ್ಲಿರುವ ಮಾಹಿತಿಗಳನ್ನು ಸೇರಿಸಿ ಉತ್ತಮಪಡಿಸುವುದು ಸೂಕ್ತ.--Pavanaja (ಚರ್ಚೆ) ೧೫:೩೯, ೨೬ ಮೇ ೨೦೧೫ (UTC)

ಲೇಖನಕ್ಕೆ ಉಲ್ಲೇಖಗಳನ್ನು ಸೇರಿಸಿ ವಿಸ್ತರಿಸಲಾಗಿದೆ. ಅಳಿಸುವ ಅಗತ್ಯವಿಲ್ಲ--Pavanaja (ಚರ್ಚೆ) ೦೯:೩೭, ೨೬ ಜೂನ್ ೨೦೧೫ (UTC)

ಇದು ಖಂಡಿತ 'Google Translated Text' ಅಲ್ಲ. 'ಅಧ್ಯಾತ್ಮ' ಎನ್ನುವುದು ಅತ್ಯಂತ ಮಹತ್ವಪೂರ್ಣವಾದ ವಿಷಯ. ಇಂಗ್ಲಿಷಿನ 'Philosophy' ಎಂಬ ಪದಕ್ಕೆ ಸಮಾನ ಪದವಾದ ಈ ಪದಕ್ಕೆ ಬಹು ದೊಡ್ಡ ವ್ಯಾಪ್ತಿಯಿದೆ. ದಯಮಾಡಿ ನೋಡಿ https://en.wikipedia.org/wiki/Philosophy. ಬರುವ ದಿನಗಳಲ್ಲಿ ಈ ಲೇಖನ ಬೆಳೆಯಬೇಕಾಗಿದೆ. ಜೊತೆಗೆ ತತ್ತ್ವಶಾಸ್ತ್ರಕ್ಕೆ ಸಂಬಂಧ ಪಟ್ಟ ಅನೇಕ ಪುಟಗಳು ಈಗಾಗಲೇ ವಿಕಿಪೀಡಿಯಾದಲ್ಲಿ ಇದೇ ಹೆಸರಿನ ವರ್ಗದೊಂದಿಗೆ ಸೃಷ್ಟಿಸಲ್ಪಟ್ಟಿವೆ. ಹಾಗಾಗಿ ಈ ವಿಷಯವನ್ನು ಅಳಿಸುವುದು ಸರಿಯಲ್ಲ. ಬದಲಾಗಿ ಇದನ್ನು 'ಚುಟುಕು ಲೇಖನ' ಎಂದು ಪರಿಗಣಿಸಬಹುದು. --Asvija b (ಚರ್ಚೆ) ೦೮:೪೪, ೧೯ ಆಗಸ್ಟ್ ೨೦೧೫ (UTC)

ಸೂಳೆ ಸಂಕವ್ವ

ಕನ್ನಡ ಸಾಹಿತ್ಯವನ್ನು ಓದಿದವರಾರು ನಿಮ್ಮ ಮಾತನ್ನು ಒಪ್ಪುವುದಿಲ್ಲ. ೧೨ನೇ ಶತಮಾನದ ವಚನಕಾರರ ಕಾಲದಲ್ಲಿ "ಸೂಳೆ ಸಂಕವ್ವ" ಎನ್ನುವ ಮಹಿಳೆ ತನ್ನ ಕಾಯಕ ವೃತ್ತಿಯ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಸೂಳೆ ಸಂಕವ್ವ ಎಂದು ಹೇಳುವ ದೈರ್ಯ ಮಾಡಿದ್ದಾಳೆ. ಈ ಲೇಖನವನ್ನು ಅಳಿಸುವಿಕೆಗೆ ಹಾಕಿರುವ ಬಗ್ಗೆ ನನ್ನ ಸಂಪೂರ್ಣ ವಿರೋಧವಿದೆ. ದಯವಿಟ್ಟು ಯಾರೇ ಆಗಲಿ ಎಳಸೆಳಸಾಗಿ ಕನ್ನಡ ಸಾಹಿತ್ಯವನ್ನು ನೋಡುವ ಪ್ರಯತ್ನ ಮಾಡಬೇಡಿ. ಅಶ್ಲೀಲತೆ ಇರುವುದು ಆಕೆಯ ಹೆಸರಿನಲ್ಲಿ ಅಲ್ಲ. ನಿಮ್ಮ ಮನಸ್ಸಿನಲ್ಲಿ.

ಮೆಚ್ಚಿಗೆಪೂರ್ಣ ವಿಚಾರಣೆ

ಈ ಲೇಖನ ನಮ್ಮ ಕಾಲೇಜ್ ಪ್ರಾಜೆಕ್ಟ್ಗಾಗಿ ಬರಿಯಲ್ಪಟ್ಟಿದೆ. ಆದ ಕಾರಣ ಈ ಲೇಖನ ಪ್ರಬಂಧ ಮಾದಿರಿಯಲ್ಲಿದೆ. ಏದನ್ನು ನಮ್ಮ ಉಪಾಧ್ಯಾಯರು ಅನುಮಡಿಸಿದ ಮೇಲೆ ಇನ್ನೂ ಹೆಚ್ಚು ವಿಚಾರ ಬರಯಲಾಗುತದೆ. ದಯವಿಟ್ಟು ಈ ಲೇಖನವನ್ನು ಅಳಿಸಿಬೀಡಿ

Aashitha6

ಈ ಲೇಖನ ನನ್ನ ಕಾಲೇಜ್ನಲ್ಲಿ ಕೊಟ್ಟಿದ ಒಂದು ಕಾರಿಯ. ನಾನು ಈ https://en.wikipedia.org/wiki/Learning_theory_(education) ಇಂಗ್ಲೀಷ್ ಲೇಖನದ ಒಂದು ಭಾಗವನು ಕನ್ನಡಕೆ ಭಾಷಾಂತರಿಸಿದೆನೆ. ಈ ಲೇಖನದಲ್ಲಿ ತಪ್ಪುಗಳು ಇದಾಲ್ಲಿ ದೈಯಿವಿಟು ಪರೀಕ್ಷಿಶಿ ಸುಧಾರಿಸಲು ಅವ್ಕಾಶ ಮಾಡಿಕೊಡಿ. ದೈಯಿವಿಟು ಲೇಖನವನ ಅಳ್ಲಿಸಬೇಡಿ.

ದಯವಿಟ್ಟು ನಿಮ್ಮ ಲೇಖನವನ್ನು ನಿಮ್ಮ ಪ್ರಯೋಗಪುಟದಲ್ಲಿ ತಯಾರಿಸಿ. ಅದು ಸರಿಯಿದೆ ಎಂದು ನಿಮ್ಮ ಶಿಕ್ಷಕರು ಮತ್ತು ವಿಕಿಪೀಡಿಯ ಸಮುದಾಯ ಒಪ್ಪಿದ ಮೇಲೆ ಲೇಖನವನ್ನು ವಿಕಿಪೀಡಿಯಕ್ಕೆ ಸೇರಿಸಿ--Pavanaja (ಚರ್ಚೆ) ೧೧:೨೨, ೨೨ ಸೆಪ್ಟೆಂಬರ್ ೨೦೧೫ (UTC)

A number of copyrigthed files

I have tagged a number of copyrigthed files with ಟೆಂಪ್ಲೇಟು:Di-no license:

--° (Gradzeichen) ೦೬:೪೭, ೨ ಫೆಬ್ರುವರಿ ೨೦೧೬ (UTC)

ಪುಟವನ್ನು ಪೂರ್ಣ ಕನ್ನಡಕ್ಕೆ ಅನುವಾದ ಮಾದಿದೆ - ಅಳಿಸುವಿಕೆ ಟೆಂಪ್ಲೇಟ್ ತೆಗೆಯಬಹುದು. Bschandrasgr (ಚರ್ಚೆ) ೧೩:೪೭, ೩ ಫೆಬ್ರುವರಿ ೨೦೧೬ (UTC)

ಅಂಜನಾ

೧೯೯೦ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಕನ್ನಡ ನಟಿ ಅಂಜನಾ ಕುರಿತು ಇರುವ ವಿಕಿಪೀಡಿಯ ಪುಟವನ್ನು ಸರಿಯಾದ ಮಾಹಿತಿಗಳ ಕೊರತೆ ಎನ್ನುವ ಕಾರಣಕ್ಕೆ ಅಳಿಸುವಿಕೆಗೆ ಹಾಕಲಾಗಿದೆ. ಅಂಜನಾ ಕುರಿತು ಯಾವುದೇ ಜಾಲತಾಣಗಳಲ್ಲಿ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ಯಾವುದೇ ಉಲ್ಲೇಖಗಳನ್ನು ಸೇರಿಸಲಾಗಿಲ್ಲ. ಆದರೆ ಅಂಜನಾ ೧೯೯೦ರ ದಶಕದಲ್ಲಿ ಅನೇಕ ಕನ್ನಡ ಚಿತ್ರಗಳಲ್ಲಿ ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್, ಅನಂತ್ ನಾಗ್ ಮತ್ತು ದೇವರಾಜ್ ಮುಂತಾದ ಮೇರು ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ ಎಂಬುದು ೯೦ರ ದಶಕದ ಕನ್ನಡ ಪ್ರೇಕ್ಷಕರಿಗೆ ತಿಳಿದಿರುವ ವಿಷಯ. ಮಾಹಿತಿಗಳ ಕೊರತೆ ಎನ್ನುವ ಒಂದೇ ಕಾರಣಕ್ಕೆ ಪುಟವನ್ನು ಅಳಿಸಿ ಹಾಕುವುದು ಎಷ್ಟು ಸರಿ?. ಚಿಲೋಕ.ಕಾಮ್ ಜಾಲತಾಣದಲ್ಲಿರುವ ನಟಿ ಅಂಜನಾ ಕುರಿತು ಇರುವ ಪುಟದ ಉಲ್ಲೇಖ ಮಾಡಿದ್ದಾಗ್ಯೂ ಪುಟವನ್ನು ಅಳಿಸುವಿಕೆಗೆ ಹಾಕಿದ್ದೀರಿ. ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಇನ್ನೊಂದು ಉಲ್ಲೇಖವನ್ನೂ ಸೇರಿಸಿದ್ದೇನೆ. ದಯಮಾಡಿ ಪುಟವನ್ನು ಅಳಿಸಬೇಡಿ. ಈಗಾಗಲೇ ಮರೆತು ಹೋಗಿರುವ ನಟಿಯ ಕೆಲವು ವಿವರಗಳು ಕೊನೆಪಕ್ಷ ವಿಶ್ವಕೋಶವಾದ ವಿಕಿಪೀಡಿಯದಲ್ಲಿಯಾದರೂ ಉಳಿದರೆ ಚಲನಚಿತ್ರಗಳ ಬಗ್ಗೆ ಆಸಕ್ತಿ ಇರುವ ಮುಂದಿನ ಪೀಳಿಗೆಗೆ ಸಿಗಬಹುದೆಂಬ ಸದುದ್ದೇಶವಷ್ಟೆ. ಧನ್ಯವಾದಗಳು.Kannadacinema

  • ನಮ್ಮ ದೇಶದಲ್ಲಿರುವ ಸಾಧನೆ ಮಾಡಿದ ಕ್ರೀಡಾಪಟುಗಳ ಮತ್ತು ಅವರ ಸಾಧನೆಗಳ ಒಂದು ಪಟ್ಟಿ ಇದ್ದರೆ ಅದು ವಿಶ್ವಕೋಶದ ಆಶಯಕ್ಕೆ ಪೂರಕವೆಂದು ಭಾವಿಸುತ್ತೇನೆ. ಇಂಗ್ಲಿಷ್ ವಿಭಾಗದಲ್ಲಿರುವಂತೆ ಪ್ರತಿಯೊಂದು ಕ್ರೀಡೆ-ಆಟೋಟಗಳಿಗೆ, ಮತ್ತು ಕ್ರೀಡಾಪಟುವಿಗೆ ಕನ್ನಡದಲ್ಲಿ ಪುಟ ತೆರೆದು ವಿವರ ತುಂಬಲು ಸಾದ್ಯವಿಲ್ಲವೆಂದು ಭಾವಿಸಿದ್ದೇನೆ. ಅದಕ್ಕಾಗಿ ನಮ್ಮದೇಶದ ಕ್ರೀಡಾಪಟುಗಳು ಮತ್ತು ಅವರ ಸಾಧನೆಯ ಒಂದು ಪುಟವಿದ್ದರೆ ಅದು ಯಾವುದೇ ಕ್ರೀಡಾಪಟುವಿನ ಕ್ರೀಡೆ ಮತ್ತು ಸಾಧನೆ ತಿಳಿಯಲು ಅನುಕೂಲ. ಆ ಬಗೆಯ ಮಾಹಿತಿಯನ್ನು ಇನ್ನೆಲ್ಲಿ ಎಲ್ಲಾ ಕನ್ನಡಿಗರಿಗೂ ಸಿಗುವಂತೆ ಮಾಡಬಹುದು? ಈಗ ಒಲಂಪಿಕ್‍ಗೆ ಹೋಗುವವರಲ್ಲದೆ, ಇತರೆ ಉತ್ತಮ ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದವರಿದ್ದಾರೆ. ಅವರೆಲ್ಲರ ಹೆಸರು ಒಂದುಕಡೆ ಸಿಗುವಂತಿದ್ದರೆ ಒಳ್ಳೆಯದು.
  • ಅದೇ ರೀತಿ ಕರ್ನಾಟಕದ ಉತ್ತಮ ಕ್ರೀಡಾಪಟುಗಳ ಒಂದು ಪುಟವನ್ನೂ ತೆರೆಯಬೇಕೆಂದಿದ್ದೇನೆ. ವಿಶ್ವಕೋಶ ಎಲ್ಲದರ ಮಾಹಿತಿ ಎಂದು ನನ್ನ ಭಾವನೆ. "ರಾಜ್ಯ ಮುಖ್ಯ ಮಂತ್ರಿಗಳ ಪಟ್ಟಿಯ ಪುಟ" ಇರುವುದಾದರೆ ಕ್ರೀಡಾ ಸಾಧಕರ ಪಟ್ಟಿ ಇರಬಹುದಲ್ಲವೇ. ವಿಶ್ವಕೋಶದಲ್ಲಿ ಯಾವುದೇ ಅಸಂಬದ್ಧತೆಯಿಲ್ಲದ ಪೂರ್ವಾಗ್ರವಿಲ್ಲದ ಎಲ್ಲಾ ಮಾಹಿತಿಗೂ ಅವಕಾಶವಿರಬೇಕೆಂದು ನನ್ನ ಅನಿಸಿಕೆ. "ಕೇಂದ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದವರ ಪಟ್ಟಿ"ಗೆ ಅವಕಾಶವಿದ್ದರೆ ರಾಷ್ಟ್ರಮಟ್ಟದ ಸಾಧನೆ ಮಾಡಿದ ಕ್ರೀಡಾಪಟುಗಳ ಪಟ್ಟಿ ಇದ್ದರೆ ವಿಶ್ವಕೋಶದ ನಿಯಮಕ್ಕೆ ವಿರೋಧವಾಗುವುದೇ? ವಿಶ್ವ ಕೋಶಕ್ಕೆ ಓದುಗರ ಅನುಕೂಲ-ಅಗತ್ಯಗಳ ಮಾಹಿತಿಯ ಸಾಮಾನ್ಯ (commonsense rule & utility oriented motto) ನಿಯಮದ ಕಟ್ಟು, ಅತಿ ಶಾಸ್ತ್ರೀಯ ನಿಯಮದ ಕಟ್ಟಿಗಿಂತ (hard & fast rule) ಒಳ್ಳೆಯದು ಎಂದು ನನ್ನ ಬಾವನೆ. ಸಮಾಜಮುಖಿ ನಿಯಮ ಉತ್ತಮವೆಂದು ನನ್ನ ಅನಿಸಿಕೆ. ದೀಪಿಕಾ ಮತ್ತು ಘೋಷಾಲ್ ಸ್ಕ್ವಾಷ್‍ನಲ್ಲಿ ನಿನ್ನೆ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದುದನ್ನು ಈ ಪುಟದಲ್ಲಿ ಹಾಕಬೇಕೆಂದಿದ್ದೆ, ಆದರೆ ಪುಟವನ್ನು ರದ್ದಿಗೆ ಹಾಕಿದ್ದು ನೋಡಿ ಬಿಟ್ಟೆ! ನಿಮ್ಮವ,Bschandrasgr (ಚರ್ಚೆ) ೧೦:೫೭, ೧೮ ಜುಲೈ ೨೦೧೬ (UTC)

ಮಾನ್ಯ, ಪವನಜರವರೇ, ಈಬಗೆಯ ಪದ್ಯಗಳನ್ನೂ ಅದರ ಸೌಂದರ್ಯ ವಿವರಿಸುವ ವಿಮರ್ಶೆಯನ್ನೂ ವಿಕಿಯಲ್ಲಿ ಹಾಕಬಹುದು. ಎಲ್ಲದಕ್ಕೂ ವಿಕಿಸೋರ್ಸ್ ಅಲ್ಲ! ಹೆಚ್ಚು ಪದ್ಯಗಳಿದ್ದು ಅವುಗಳನ್ನೇ ತುಂಬುವುದಾದರೆ ಅಥವಾ ಒಂದು ಕವನ ಸಂಕಲನವನ್ನೇ ತುಂಬುವುದಾದರೆ ವಿಕಿಸೋರ್ಸಿಗೆ ಹಕ್ಕಿನ ವಿನಾಯತಿ ಇದ್ದರೆ ಹಾಕಬಹುದು. ದಯವಿಟ್ಟು ನೀವೂ ವಿಕಾಸ ಹೆಗಡೆಯವರೂ ಕುರುಡಾಗಿ ನಿಯಮ ಅನುಸುವ ಕ್ರಮ ಸರಿಯಲ್ಲವೆಂದು ವಿನಯಪೂರ್ವಕ ಹೇಳಬಯಸುತ್ತೇನೆ. ನಾನು ಹಾಕಿದ 'ಮಕ್ಕಳ ಕವನ'ದ ಪುಟವನ್ನೂ ಅಳಿಸಿದ್ದೀರಿ -ಅದನ್ನು ವಿಕಿಸೋರ್ಸಿಗೆ ಹಾಕಿದಂತೆಯೂ ಕಾಣಿಸಲಿಲ್ಲ. ನಿಮ್ಮ ತಪ್ಪು ತಿಳುವಳಿಕೆಗೆ ನಾವು ಸಂಪಾದಕರು ಬಲಿಪಶು. ವಿಕಿಸೋರ್ಸಿ ಹಾಕಬೇಕೆಂದಿದ್ದರೆ ನೀವೇ ಅದನ್ನು ಸುಲಭವಾಗಿ ಅಲ್ಲಿಗೆ ವರ್ಗಾವಣೆ ಮಾಡಬಹುದು ಮತ್ತು ಆ ಸಂದೇಶ ಹಾಕಬಹುದು. ಸಂಪಾದನೆ ಮಾಡಿದವರಿಗೆ ಉತ್ಸಾಹ ಭಂಗವಾಗುವುದಿಲ್ಲ.

ವಿಕಿಪೀಡಿಯ ಒಂದು ವಿಶ್ವಕೋಶ. ಕಥೆ, ಕವನ, ಕಾದಂಬರಿ ಇತ್ಯಾದಿ ಕಥನ ಸಾಹಿತ್ಯಕ್ಕೆ ಇಲ್ಲಿ ಜಾಗವಿಲ್ಲ. ಇಲ್ಲಿ ಮಾಹಿತಿ ಸಾಹಿತ್ಯಕ್ಕೆ ಮಾತ್ರ ಪ್ರಾಶಸ್ತ್ಯ. ಐತಿಹಾಸಿಕವಾಗಿ ಪ್ರಸಿದ್ಧ ಕವನಗಳ ಬಗೆಗೆ ವಿವರ ಬರೆಯಬಹುದು. ಕವನ ಹುಟ್ಟಿದ ಬಗೆ, ಅದು ಎಷ್ಟು ಜನಪ್ರಿಯವಾಗಿತ್ತು, ಅದರ ಅರ್ಥವೇನು, ಇತ್ಯಾದಿ ಬರೆಯಬಹುದು. ಅಂದರೆ ಕವನದ ಬಗೆಗೆ ವಿವರ ನೀಡುವ ಲೇಖನ, ವಿಮರ್ಶೆ ಅಲ್ಲ. ವಿಕಿಸೋರ್ಸ್‍ನಲ್ಲಿ ಹಕ್ಕುಸ್ವಾಮ್ಯ ಇಲ್ಲದ ಕವನ, ಕಥೆ, ಕಾದಂಬರಿ ಎಲ್ಲ ಸೇರಿಸಬಹುದು. ಭಾರತೀಯ ಕಾಪಿರೈಟ್ ಆಕ್ಟ್ ಪ್ರಕಾರ ಕರ್ತೃ ಸತ್ತು ೬೦ ವರ್ಷಗಳ ನಂತರ ಅದು ಹಕ್ಕುಸ್ವಾಮ್ಯದಿಂದ ಮುಕ್ತವಾಗುತ್ತದೆ. ಪಂಜೆ ಮಂಗೇಶರಾಯರು ೧೯೩೭ರಲ್ಲಿ ನಿಧನರಾದದ್ದು. ಅಂದರೆ ಈ ಹಾಡು ಈಗ ಹಕ್ಕುಸ್ವಾಮ್ಯದಿಂದ ಮುಕ್ತವಾಗಿದೆ. ಧಾರಾಳವಾಗಿ ವಿಕಿಸೋರ್ಸ್‍ನಲ್ಲಿ ಸೇರಿಸಬಹುದು.--ಪವನಜ (ಚರ್ಚೆ) ೦೮:೧೬, ೧೨ ಡಿಸೆಂಬರ್ ೨೦೧೬ (UTC)
ನೀವು ಯಾವ "ಮಕ್ಕಳ ಕವನ"ದ ಬಗೆಗೆ ಮಾತನಾಡುತ್ತಿದ್ದೀರಿ ಎಂಬುದು ತಿಳಿಯುತ್ತಿಲ್ಲ. ಈಗಾಗಲೇ ತಿಳಿಸಿದಂತೆ ಅದು ಹಕ್ಕುಸ್ವಾಮ್ಯದಿಂದ ಮುಕ್ತವಾಗಿದ್ದಲ್ಲಿ ಅದನ್ನು ವಿಕಿಸೋರ್ಸ್‍ಗೆ ಸೇರಿಸಬಹುದು.--ಪವನಜ (ಚರ್ಚೆ) ೦೮:೧೬, ೧೨ ಡಿಸೆಂಬರ್ ೨೦೧೬ (UTC)

[ನಿಯಮದ ಬಗ್ಗೆ ವಿಕಿ ಸಂದೇಶ ಈ ಟೆಂಪ್ಲೇಟ್ ನೋಡಿ:(ಟೆಂಪ್ಲೇಟ್ ಇದೆ-ಕೆಟ್ಟಿದೆ: This guideline is a part of the English Wikipedia's Manual of Style. Use common sense in applying it; it will have occasional exceptions. ]

  • ಎರಡನೆಯದು ಯಾವುದೇ ಹೊಗಳಿಕೆಯ ಯಾ ತೆಗಳಿಕೆಯ ಗುಣವಾಚಕ ಉಪಯೋಗಿಸಬಾರದೆಂಬ ವಿಚಾರ: ಅನಾವಶ್ಯಕ ಅಲಂಕಾರಕ್ಕಾಗಿ ಉತ್ಪ್ರೇಕ್ಷೆಮಾಡಿ ಉಪಯೋಗಿಸಬಾರದು. ಹಿತವಾದ ಸತ್ಯವಾದುದನ್ನು ಬರೆಯಯದಿದ್ದರೆ 'ಸತ್ಯಕ್ಕೆ ಅಪಚಾರ',ವ್ಯಕ್ತಿಗೆ ಅಪಚಾರ, ಲೇಖನಕ್ಕೇ ಅಪಚಾರ ಓದುಗರಿಗಾಗಿ ಇರುವುದು ಬರವಣಿಗೆ,ಅವರಿಗೆ ಸತ್ಯ ತಿಳಿಸದೇ ಅಪಚಾರ.ನೊಬೆಲ್ ಬಹುಮಾನ ಬಂದವರಿಗೆ, ಭಾರತ ರತ್ನ ಗಳಿಸಿದವರಿಗೆ ಅವರ ಶ್ರೇಷ್ಠತೆಯನ್ನು ಬರೆಯದಿದ್ದರೆಹೇಗೆ? (ಅಪ್ರಿಯವಾದ ಸತ್ಯವನ್ನು ಬರೆಯದಿರುವುದು ಸರಿ) ನಿಯಮದ ಬಗ್ಗೆ dogmatism ಸರಿಯಲ್ಲವೆಂದು ನಾನು ನಂಬಿದ್ದೇನೆ. ಇದನ್ನು ಬರೆಯಲ್ಲು ಕಾರಣ "ಜಯಲಲಿತಾ ಅಸಾಧಾರಣ ಜನಪ್ರಯತೆಯುಳ್ಳವರು ಅವರಿಗೆ ಶಿಕ್ಷಯಾದುದನ್ನು ಕೇಳಿಯೇ ೨೫ ಜನ ಹೃದಯಾಘಾತದಿಂದ ಸತ್ತರು,ಕೆಲವರು ಆತ್ಮಹತ್ಯೆ ಮಾಡಿಕೊಂಡರು" ಎಂದು ಬರೆದಿದ್ದೆ. ಅದನ್ನು ವಿಕಾಸ ಹೆಗಡೆಯವರು ಅಳಿಸಿದ್ದಾರೆ. ವಿಷಯ-ಅದು "ಸತ್ಯ". ಸತ್ಯವನ್ನು ಬರೆಯುವುದು ನಿಯಮ ಭಂಗವೇ? ಅದರಿಂದ ವಿಕಿ ನಿಯಮಕ್ಕೆ ಭಂಗವಿಲ್ಲ. ಹಾಗೆಯೇ ಸುಬ್ಬಲಕ್ಷ್ಮಿ ಅತಿಜನಪ್ರಿಯ ಗಾಯಕಿ ಎಂದು ಬರೆಯುವುದು ತಪ್ಪಂತೆ- (ವಿಕಾಸಹೆಗಡೆ) (ಇಂಗ್ಲಿಷ್ ವಿಕಿಯಲ್ಲಿ:Carnatic classical vocalist Subbulakshmi, often hailed as "Queen of songs", is the first Indian musician to receive the Ramon Magsaysay award.) ಇಲ್ಲಿ dogmatism conservatism ಸರಿಯಲ್ಲ, ಸತ್ಯಕ್ಕಾಗಿ, ಲೇಖನದ ಘನತೆಗಾಗಿ ಸತ್ವನ್ನು ಬರೆಯೋಣ; ನಿಯಮವಲ್ಲದಿದ್ದರೆ ನ್ಯಾಯಕ್ಕಾಗಿ ಒಂದು ಹೆಜ್ಜೆ ಮೋದುವರಿಯೋಣ. ನೀವು ಅಳಿಸಿದ ಮಕ್ಕಳ ಕವನ ದ ಈಗ ಅಳಿಸಲು ಹಾಕಿರುವ 'ನಾಗರಹಾವೆ'ಈ ಬಗ್ಗೆ ಒಂದು ಜನಪ್ರಿಯ ಇಂಗ್ಲಿಷ್ ಮಕ್ಕಳ ಕವನವನ್ನು ಉದಾಹರಣೆಯಾಗಿ ಹಾಕಿದ್ದೇನೆ.
೨೫ ಜನ ಸತ್ತಿದ್ದಕ್ಕೆ ನಂಬಲರ್ಹವಾದ, ಪರಿಶೀಲಿಸಬಹುದಾದ (verifiable) ದಾಖಲೆ, ಉಲ್ಲೇಖ ನೀಡಬೇಕು.--ಪವನಜ (ಚರ್ಚೆ) ೦೮:೨೩, ೧೨ ಡಿಸೆಂಬರ್ ೨೦೧೬ (UTC)
ಪತ್ರಿಕಾ ವರದಿಯೇ ದಾಖಲೆ; ೨-೩ ಪತ್ರಿಕೆಗಳಲ್ಲಿ ಅದು ಬಂದಿದ್ದರೆ ಸಾಕೆಂದು ನನ್ನ ಭಾವನೆ. ನಾನು ಒಂದು ಪತ್ರಿಕೆಯ -ಪ್ರಜಾವಾಣಿ- ಸಮತೋಲ ಸುದ್ದಯ ಪತ್ರಿಕೆ-ಅದರ ಆಧಾರ ಹಾಕಿದ್ದೆನೆಂದು ನೆನಪು.ಆ ಬಗೆಯ ವಿಷಯಗಳನ್ನು ಆಧಾರವಿಲ್ಲದೆ ಹಾಕಲು ಆಗದು. ಅವರಿಗೆ ಅದು ಪ್ರಚಾರಕ್ಕೆ ಉಪಯೋಗಿಸುವ ಸುದ್ದಿಯಂತೆ ಕಂಡಿರಬಹುದು. ನನಗೆ ಜಯಲಲಿತಾಬಗ್ಗೆ ಪರ-ವಿರೋಧ ಎರಡೂ ಇಲ್ಲ. ಆದರೆ ಓದುಗರಿಗೆ ಅವಳ ವಿಶಿಷ್ಟ ( + -)ಅದ್ಭುತ ವ್ಯಕ್ತಿತ್ವ ಗೊತ್ತಾಗಬೇಕು- ಇದು ನನ್ನ ವಿಚಾರ. Bschandrasgr (ಚರ್ಚೆ) ೦೯:೪೭, ೧೨ ಡಿಸೆಂಬರ್ ೨೦೧೬ (UTC)
ಪತ್ರಿಕಾ ವರದಿಯ ಜಾಲತಾಣದ ಪುಟಕ್ಕೆ ಕೊಂಡಿ ನೀಡಿದ್ದಿರಾ? ಪತ್ರಿಕೆಯಲ್ಲಿ ಬಂದಿತ್ತು ಎಂದು ಆ ದಿನ ನಿಮಗೆ ಗೊತ್ತಿದ್ದಿರಬಹುದು. ಹಲವು ವರ್ಷಗಳ ನಂತರ ಆ ಲೇಖನವನ್ನು ಓದುವಾಗ ಉಲ್ಲೇಖದ ಕೊಂಡಿ ಇದ್ದರೆ ಮಾತ್ರ ಅದು ಅಧಿಕೃತವಾಗುತ್ತದೆ.--ಪವನಜ (ಚರ್ಚೆ) ೧೪:೫೫, ೧೨ ಡಿಸೆಂಬರ್ ೨೦೧೬ (UTC)
  • ಪುಟ: Twinkle, Twinkle, Little Star ಇದು ಇಂಗ್ಲಿಷಿನಲ್ಲಿ ಇರಬಹುದಾದರೆ ಕನ್ನಡದಲ್ಲಿ 'ನಾಗರಹಾವು 'ಇರಬಾರದೆ? ಕುರುಡಾಗಿ ಇಂಗ್ಲಿಷ್ ವಿಕಿ ಅನುಸರಿಸುವುದೂ ಸರಿಯಲ್ಲ. ಅವರ ಭಾವನೆ-ರೀತಿ ಬಾರತೀಯ ಸಂಸ್ಕೃತಿಗೆ ಕೆಲವು ಹೊಂದದಿರಬಹುದು.
ಇಂಗ್ಲಿಶ್ ವಿಕಿಯಲ್ಲಿ, ನಾನು ಮೇಲೆ ಬರೆದಂತೆ, ಹಾಡಿನ ಉಗಮ, ಇತಿಹಾಸ, ಎಲ್ಲ ವಿವರಗಳಿವೆ. ಅದೇ ರೀತಿ ಬರೆಯಬಹುದು ಎಂದು ನಾನು ಈಗಾಗಲೇ ತಿಳಿಸಿದ್ದೇನೆ. ಕೇವಲ ಹಾಡಿನ ಸಾಹಿತ್ಯವಾದರೆ ಅದನ್ನು ವಿಕಿಸೋರ್ಸ್‍ಗೆ ಸೇರಿಸಬಹುದು.--ಪವನಜ (ಚರ್ಚೆ) ೦೮:೨೧, ೧೨ ಡಿಸೆಂಬರ್ ೨೦೧೬ (UTC)
  • ಇದಕ್ಕೆ ಸಂಬಂದಪಟ್ಟಂತೆ: ಅದೇ ವಾಜಪೇಯಿ ಮತ್ತು ಮೋದಿಯವರನ್ನು ಈ ವಿಕಿಯಲ್ಲಿ ಎಷ್ಟು ಹೊಗಳಿದ್ದಾರೆಂದು ನೋಡಿ! ಅವರು ಮಾಡಿದ ದೇಶ ಸೇವೆ ಅಭಿವೃದ್ಧಿ ಕೆಲಸ ಅದರಲ್ಲಿ ಇಲ್ಲ. ನಿಮ್ಮವBschandrasgr (ಚರ್ಚೆ) ೦೭:೩೮, ೧೦ ಡಿಸೆಂಬರ್ ೨೦೧೬ (UTC)


ಈ ಚರ್ಚೆ ಬೇರೆಯ ಕೆಲವು ಪ್ರಶ್ನೆಗಳನ್ನೂ ನಮ್ಮ ಮುಂದಿಡುತ್ತಿದೆ. "ಇಂತಿಷ್ಟು ಜನರು ಇಂತಹ ರಾಜಕೀಯ ನಾಯಕರಿಗೆ ಜೈಲಾದರೆ ಸತ್ತರು" ಎಂಬುದು ಅವರ ಜನಪ್ರಿಯತೆಯ ಬಗೆಗೆ ನಿರ್ಣಯಕ್ಕೆ ಬರಲಷ್ಟೆ ಬಳಸಬಹುದೇ, ನಮ್ಮ ನ್ಯಾಯವ್ಯವಸ್ಥೆಯ ಬಗೆಗೆನ ಜನರ ಅವಜ್ಞೆ ಬಗೆಗೆ ಅದು ಏನನ್ನೂ ಹೇಳುವುದಿಲ್ಲವೇ? ಅಥವಾ ಅವರೇನಾದರೂ ಸಾರ್ವಜನಿಕರಿಗೆ ಸಂಬಂಧಿಸಿದ ಕಾರಣಕ್ಕೆ ಜೈಲಿಗೆ ಹೋದರೆಂದು ಅರ್ಥಮಾಡಿಕೊಳ್ಳ ಬೇಕೆ? ಇಂತಹ ಹೇಳಿಕೆ ಹೇಗೆ ತಟಸ್ಥ ದೋರಣೆಯಾಗಬಲ್ಲದು?

ಹಲವು ಅಂಶಗಳನ್ನು ಬಿಡಿಬಿಡಿಯಾಗಿ ಇಲ್ಲಿ ಚರ್ಚಿಸಿದಲ್ಲಿ ಗೊಂದಲ ಹೆಚ್ಚಾಗ ಬಹುದು (ಇದು ತಮಿಳುನಾಡು ಸರ್ಕಾರದ ಚರ್ಚೆ ಪುಟದ ಮುಂದುವರಿಕೆಯಂತೆ ಭಾಸವಾಗುವುದರಿಂದ). ಒಂದು ಸರಕಾರ ಬಗೆಗಿನ ಲೇಖನದಲ್ಲಿ ಅದರ ರೂಪರೇಖೆ ಚರ್ಚಿಸುವುದು ಮುಖ್ಯ. ಆದರೆ "ಹಿಂದಿನ ಮುಖ್ಯಮಂತ್ರಿಗಳ ಯೋಜನೆಗಳ ಪಟ್ಟಿ" ಹೇಗೆ ಸಂಬಂಧಿಸುತ್ತದೆ. ಈ ಬಗೆಗೆ Wikipedia:Relevance_of_content ಹೀಗೆ ಹೇಳುತ್ತದೆ.

Wikipedia's size is effectively unlimited. Individual articles, however, should be of finite size and stay focused on a small number of topics for ease of reading and navigation. An article that is dense with information only tenuously connected to its subject does little to inform readers about that subject. (ಒತ್ತು ನನ್ನದು)

ಇಂದಿನ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆ ಬೇಕಾದರೆ "ಇತ್ತೀಚೆಗಷ್ಟೇ ಅವರು ತಮ್ಮ ಜನಪ್ರಿಯ ಯೋಜನೆಗಳ ಮೂಲಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದರು" ಸಾಕಾಗುತ್ತದೆಯಲ್ಲವೇ?

ಆದರೆ ಪವನಜ ಅವರು ಹೇಳುವ ಉಲ್ಲೇಖ ಬಗೆಗಿನ ನಿಲುವು "ಲೇಖನವನ್ನು ಓದುವಾಗ ಉಲ್ಲೇಖದ ಕೊಂಡಿ ಇದ್ದರೆ ಮಾತ್ರ ಅದು ಅಧಿಕೃತವಾಗುತ್ತದೆ" ಸರಿಯೇ ಎಂದು ನನ್ನ ಅನುಮಾನ. ಇರುವಿಕೆಯನ್ನು ವಿಕಿಪೀಡೀಯದ Wikipedia:No_original_research ಹೀಗೆ ವ್ಯಾಖ್ಯಾನಿಸುತ್ತದೆ.

By "exists", the community means that the reliable source must have been published and still exist—somewhere in the world, in any language, whether or not it is reachable online—even if no source is currently named in the article.

ಹೀಗಾಗಿ ಪ್ರಕಟವಾಗಿರ ಬಹುದಾದ ಮಾಹಿತಿಯ ವೆಬ್ ಆವೃತ್ತಿ (ಉದಾ. ನಂಬಲರ್ಹ ಪತ್ರಿಕೆಯದು) ಬಳಸುವುದು ತಪ್ಪಾಗಲಾರದು. ಪ್ರದೀಪ್ ಬೆಳಗಲ್ (ಚರ್ಚೆ) ೧೬:೫೦, ೧೩ ಡಿಸೆಂಬರ್ ೨೦೧೬ (UTC)

ನಾನು ಆ ನಿರ್ದಿಷ್ಟ ವಿಷಯಕ್ಕೆ, ಪುಟಕ್ಕೆ, ಸಂದರ್ಭಕ್ಕೆ ಮತ್ತು ನಿರೂಪಣಾ ಶೈಲಿಯ ಚರ್ಚೆಯಲ್ಲಿ ತಿಳಿಸಿದ ಕೆಲವು ಮಾಹಿತಿಗಳನ್ನು ಸುಖಾಸುಮ್ಮನೇ ನನ್ನ ಹೆಸರನ್ನು ಬಳಸಿಕೊಂಡು ತಪ್ಪು ಅರ್ಥ ಬರುವಂತೆ ನನ್ನ ಹೆಸರು ಹಾಕಿ ನಾನು ಹೇಳುತ್ತೇನೆ ಎಂಬಂತೆ ಹೇಳುವುದನ್ನು ಖಂಡಿಸುತ್ತೇನೆ. --Vikas Hegde (ಚರ್ಚೆ) ೧೪:೪೩, ೨೬ ಏಪ್ರಿಲ್ ೨೦೧೭ (UTC)
  • Gopala Krishna A (ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ) ‎ವಿಕಿಪೀಡಿಯಕ್ಕೆ ತಕ್ಕುದಾದ ಲೇಖನ ಅಲ್ಲ ಎಂದಿದ್ದೀರಿ. ವಿಕಿಪೀಡಿಯಾ ಒಂದು ಮಹಿತಿ ಕಣಜ. ಅದು ಇದ್ದರೆ ತೊಂದರೆ ಏನು? ಆಧಾರವಿಲ್ಲದ್ದನ್ನು ಮಾತ್ರಾ ತೆಗೆಯಬಹುದು. ಕುರುಡಾಗಿ ನಿಯಮಗಳನ್ನು ಅನುಸರಿಸಬೇಡಿ; ವಿಕಿಯ - ನಿಯಮದಲ್ಲೇ ಕಾಮನ್‍ಸೆನ್ಸ್ ಉಪಯೋಗಿಸಿ ಎಂದಿದೆ, ಮತ್ತೊಮ್ಮೆ ಓದಿ. ಇಂಗ್ಲಿಷ್‍ನಲ್ಲಿ ಎಷ್ಟು ಬಗೆಯ ಲೇಖನಗಳಿವೆ ನೋಡಿ. ಇರುವುದನ್ನು ಅಳಿಸುವುದಕ್ಕಿಂತ ಬಿಡುವು ಇದ್ದರೆ, ಉತ್ತಮ ಹೊಸ ಲೇಖನ ಬರೆದು ಹಾಕಿ.
  • ಇದೇ ವಿಷಯವನ್ನು ಇಂಗ್ಲಿಷ್‍ನಲ್ಲಿ "Ripley's Believe It or Not!" ಎಂದು ಹಾಕಿದೆ. Ripley's Believe It or Not! is an American franchise, founded by Robert Ripley, which deals in bizarre events and items so strange and unusual that readers might question the claims. The Believe It or Not panel proved popular and was later adapted into a wide variety of formats, including radio, television, comic books, a chain of museums, and a book series.

Bschandrasgr (ಚರ್ಚೆ) ೦೯:೩೦, ೨೪ ಏಪ್ರಿಲ್ ೨೦೧೭ (UTC)

Ripley's Believe It or Not! ಒಂದು ಟೆಲಿವಿಶನ್ ಕಾರ್ಯಕ್ರಮ. ಇಂಗ್ಲಿಶ್ ವಿಕಿಯಲ್ಲಿರುವುದು ಆ ಕಾರ್ಯಕ್ರಮದ ಬಗೆಗಿನ ಪುಟ. ಆ ಕಾರ್ಯಕ್ರಮದಲ್ಲಿ ತೋರಿಸಿದ ಎಲ್ಲ ವಿಷಯಗಳು ಸತ್ಯ ಎಂದು ಆ ವಿಕಿ ಪುಟದಲ್ಲಿ ಎಲ್ಲೂ ಹೇಳಿಲ್ಲ. ಆಶ್ಚರ್ಯ ಮತ್ತು ಅದ್ಭುತಗಳು ಎಂಬ ಪುಟದಲ್ಲಿರುವುದು ಪತ್ರಿಕಾ ವರದಿಗಳ ಸಂಗ್ರಹ. ದಟ್ಟರಿಗೆ /ಮೂರ್ಖರಿಗೆ 'ಕತ್ತೆ' ಎಂದು ಬೈಯ್ಯುವುದು ರೂಢಿ, ಆದರೆ ಕತ್ತೆ ಅಷ್ಟೇನೂ ದಡ್ಡ ಪ್ರಾಣಿಯಲ್ಲ. ಆದರೆ ಅದರ ಹಾಲಿಗೆ ಅತ್ಯುನ್ನತ ಬೆಲೆ !! -ಇಂತಹ ವಾಕ್ಯಗಳು ವಿಕಿಪೀಡಿಯಕ್ಕೆ ಸರಿಹೊಂದುವುದಿಲ್ಲ. ವಿಕಿಪೀಡಿಯ ಇರುವುದು ಪತ್ರಿಕಾವರದಿಗಳನ್ನು ಸಂಗ್ರಹಿಸಿ ನೀಡಲು ಅಲ್ಲ. ಅದೊಂದು ವಿಶ್ವಕೋಶ. ಅದರಲ್ಲಿ ವಿಶ್ವಕೋಶದ ಮಾದರಿಯ ಲೇಖನಗಳು ಮಾತ್ರ ಇರತಕ್ಕದ್ದು--ಪವನಜ (ಚರ್ಚೆ) ೧೨:೨೩, ೨೪ ಏಪ್ರಿಲ್ ೨೦೧೭ (UTC)
ಹೌದು. ಪವನಜರು ಹೇಳಿದ ವಿಷಯಗಳನ್ನು ಗಮನದಲ್ಲಿರಿಸಿಯೇ ಅಳಿಸುವಿಕೆಗೆ ಗುರುತಿಸಿದ್ದು. --Gopala Krishna A|(talk) ೦೯:೨೧, ೨೬ ಏಪ್ರಿಲ್ ೨೦೧೭ (UTC)
ಪವನಜರು ಹೇಳಿರುವ ಅಂಶಗಳು ಸರಿಯಾಗಿವೆ. ಮೊದಲಿಗೆ ಪುಟದ ಹೆಸರೇ ವಿಕಿಗೆ ತಕ್ಕುದಾಗಿಲ್ಲ. ’ಆಶ್ಚರ್ಯ ಮತ್ತು ಅದ್ಭುತ’ ಅಂತೆಲ್ಲಾ ಲೇಖನ ಮಾಡುವುದೇ ಹಾಸ್ಯಾಸ್ಪದ. ಇಂಗ್ಲೀಶಲ್ಲಿದೆ ಅದಕ್ಕೇ ಮಾಡಿದ್ದೆ ಅಂತ ಸಮರ್ಥನೆಗಳನ್ನು ಕೊಡುವ ಮುಂಚೆ ಅದರಲ್ಲಿ ಏನಿದೆ ಅಂತ ನೋಡಬೇಕು. ವಿಕಿಯಲ್ಲಿ ಇಂತಹ ಅಪ್ರಯೋಜಕ ಪುಟಗಳು ಲೇಖನ ಸಂಖ್ಯೆ ಹೆಚ್ಚಿಸಬಲ್ಲವೇ ಹೊರತು ಗುಣಮಟ್ಟ ಹಳ್ಳ ಹಿಡಿಸುತ್ತವೆ.--Vikas Hegde (ಚರ್ಚೆ) ೧೪:೩೯, ೨೬ ಏಪ್ರಿಲ್ ೨೦೧೭ (UTC)


  • ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಲೇಖನವನ್ನು ಅಳಿಸಲಾಗಿದೆ --ಪವನಜ (ಚರ್ಚೆ) ೧೪:೪೬, ೧೭ ಮೇ ೨೦೧೭ (UTC)
  • ಇಂಗ್ಲಿಷನಲ್ಲಿ en:Terrorism ಎಂದು ಇರುವ ಪುಟವನ್ನು ಬಹಳ ಹಿಂದೆಯೇ 'ಚುಟುಕ'ವಾಗಿ ಆರಂಭಿಸಿ ಬಿಟ್ಟಿದ್ದರು. ಅದನ್ನು ನಾನು ಮುಂದುವರಿಸಿದ್ದೇನೆ. ಇಂಗ್ಲಿಷ್‍ನಲ್ಲಿರಬಹುದಾದರೆ ಕನ್ನಡದಲ್ಲಿ ಏಕೆ ಇರಬಾರದು? ಅದರಲ್ಲಿಯೂ ಪತ್ರಿಕಾ ವರದಿಯಿಂದಲೇ ಎಲ್ಲಾ ಆಯ್ದು ಬರೆಯಲಾಗಿದೆ. ಕೆಲವು ಅವರ ಆಯ್ಕೆ ಬೇರೆ ಇರಬಹುದು-ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಅನುಗುಣವಾಗಿ. ಅದರಲ್ಲಿ ಅನೇಕ ಐತಿಹಾಸಿಕ ದಾಖಲೆಗಳಿವೆ. ಆದ್ದರಿಂದ ಇದನ್ನು ಅಳಿಸುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ. ಇತಿಹಾಸದಲ್ಲಿ ಕೆಡುಕಿನ ವಿಷಯ ಇದ್ದರೆ ಅದನ್ನು ದಾಖಲಿಸುವುದು ತಪ್ಪೇ. ಮೊನ್ನೆ ಮಸೂಲಿನ ಯುದ್ಧದಲ್ಲಿ ಸಅಔಇರಾರುಜನ ಸತ್ತರು. ಇಸ್ಲಾಮಿಕ್ ಸ್ಟೇಟ್ ವಿಭಾಗದಲ್ಲಿ ಇಂಗ್ಲಿಷ್ ನಲ್ಲಿ ಅದನ್ನು ದಾಖಲಿಸುತ್ತಾರೆ - ಅಲ್ಲಿ ಮಾಡಿದರೆ ಸರಿ; ಅದೇ ಇಲ್ಲಿದ್ದರೆ ಅದು ತಪ್ಪು. ಭಯೋತ್ಪಾದನೆ ಒಂದು ಮುಖ್ಯ ವಿಷಯ. ಮುಖ್ಯವಾಗಿ ಪ್ರಸ್ತುತ ಇತಿಹಾಸ ಪತ್ರಿಕಾವರದಿಗಳಿಂದಲೇ ದಾಖಲಾಗುವುದು, ಅದು "ಇಂಗ್ಲಿಷ್ ವಿಕಿಯ ವಿಶೇಷ". ಇದರಲ್ಲಿ ಹಿಂದಿನ ಮುದ್ರಿತ ವಿಶ್ವಕೋಶಕ್ಕೂ ಇದಕ್ಕೂ ಪ್ರಸ್ತುತವಿಷಯಗಳನ್ನು ತೆಗೆದುಕೊಳ್ಳುವುದೇ ವಿಷೇಶವಾದದ್ದು. ನಿಮಗೆ ಬಿಡುವಿದ್ದರ ಕನ್ನಡ ವಿಕಿಯಲ್ಲಿ ಆಧಾರ ಹಾಕದ ಅರ್ಥವಾಗದ ಅನೇಕ ಲೇಖನಗಳಿವೆ. ಅವನ್ನು ಹುಡುಕಬಹುದು. ದಯವಿಟ್ಟು ಅಳಿಸುವುದು ಹವ್ಯಾಸಕ್ಕಾಗಿ ಆಗುವುದು ತರವಲ್ಲವೆಂದು ನ್ನ ವಿನಯ ಪೂರ್ವಕ ಸಲಹೆ.
  • ಮಾನ್ಯ ಗೋಪಲಕೃಷ್ಣರವರೇ ಅಳಿಸುವ ಘನ ಕಾರ್ಯಕ್ಕಿಂತ ಯಾವುದಾದರೂ ಉತ್ತಮ ಲೇಖನ ತಯಾರಿಸಿ ಹಾಕಿದರೆ ಕನ್ನಡ ವಿಕಿಸೇವೆಯನ್ನು ಅರ್ಥಪೂರ್ಣವಾಗಿ ಮಾಡಿದಂತೆ ಆಗುವುದು. ಆಧಾರವಿಲ್ಲದ ಕೊಂಡಿಗಳಿಲ್ಲದ ನೂರಾರು ಲೇಖನಗಳ ಪಟ್ಟಿಯನ್ನು ನಿಮಗೆ ಕೊಡಬಲ್ಲೆ - ನಿಮಗೆ ಅದೇ ಅಳಿಸುವುದೇ ಪ್ರಾಮುಖ್ಯವಾದ ವಿಕಿಸೇವೆ ಅನಿಸಿದರೆ. ತಪ್ಪು ಕಂಡರೆ ತಿದ್ದಿ ಸರಿಪಡಿಸಿ. ವಿಕಿಗೆ ಲೇಖನ ಹಾಕುವವರೇ ಕಡಿಮೆ! ಸಾದ್ಯವಾದರೆ ಉತ್ತಮ ಲೇಖನ ಹಾಕಿ ವಿಕಿ-ಬೆಳೆಸಿ; ನಿರುತ್ಸಾಹಗೊಳಿಸುವುದು ಸರಿಯಲ್ಲ! (ಬೇಜಾರಾದಾಗ ಕಲ್ಲು ಹೊಡೆದಂತೆ) Bschandrasgr (ಚರ್ಚೆ) ೦೭:೪೭, ೧೧ ಜುಲೈ ೨೦೧೭ (UTC)
Bschandrasgrರವರೆ ನಿಮ್ಮ ಲೇಖನ ಕೆಳಗಿನ ವಿಷಗಳನ್ನು ಹೊಂದಿಲ್ಲ.ಬರಿ ಸಾವಿನ ಸುದ್ದಿ ಮಾತ್ರ ಹೊಂದಿದೆ.ಆದ್ದರಿಂದ ಅಳಿಸುವಿಕೆಗೆ ಹಾಕಲಾಗಿದೆ ಎಂದು ನನ್ನ ಅನಿಸಿಕೆ.Sangappadyamani (ಚರ್ಚೆ) ೦೯:೪೨, ೧೧ ಜುಲೈ ೨೦೧೭ (UTC)

ಪರಿವಿಡಿ 1 ಪರಿಭಾಷೆ 1.1 ಪದದ ಮೂಲ 1.2 ವ್ಯಾಖ್ಯಾನ 1.3 ಭೀಕರವಾದ ಬಳಕೆ 2 ಇತಿಹಾಸ 3 ಇನ್ಫೋಗ್ರಾಫಿಕ್ಸ್ 4 ವಿಧಗಳು ಭಯೋತ್ಪಾದಕರ 5 ಪ್ರೇರಣೆಗಳು 6 ಪ್ರಜಾಪ್ರಭುತ್ವ ಮತ್ತು ಪ್ರಾದೇಶಿಕ ಭಯೋತ್ಪಾದನೆಯ 7 ಧಾರ್ಮಿಕ ಭಯೋತ್ಪಾದನೆ 8 ಅಪರಾಧಿಗಳು 8.1 ನಾನ್-ಸ್ಟೇಟ್ ಗುಂಪುಗಳು 8.2 ರಾಜ್ಯ ಪ್ರಾಯೋಜಕರು 8.3 ರಾಜ್ಯ ಭಯೋತ್ಪಾದನೆ 9 ಪ್ರವಾಸೋದ್ಯಮದೊಂದಿಗಿನ ಸಂಪರ್ಕ 10 ಫಂಡಿಂಗ್ 11 ಟ್ಯಾಕ್ಟಿಕ್ಸ್ 12 ಪ್ರತಿಸ್ಪಂದನಗಳು 12.1 ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರತಿಕ್ರಿಯೆ 12.2 ಭಯೋತ್ಪಾದನೆ ಸಂಶೋಧನೆ ಮಾಸ್ ಮಾಧ್ಯಮ 14 ಭಯೋತ್ಪಾದಕ ಗುಂಪುಗಳ ಫಲಿತಾಂಶ 15 ಡೇಟಾಬೇಸ್ಗಳು 16 ಇದನ್ನೂ ನೋಡಿ 17 ಟಿಪ್ಪಣಿಗಳು 18 ಉಲ್ಲೇಖಗಳು 19 ಹೆಚ್ಚಿನ ಓದಿಗಾಗಿ

ಉತ್ತರ ಮತ್ತು ಸೂಚನೆ

  • ನೀವು ಜಾಣರು; ನಿಮಗೆ ಸಾದ್ಯವಿದ್ದರೆ ಸರಿಪಡಿಸಿ, ; ದೋಷಗಳನ್ನು ಕಂಡುಹಿಡಿಯುವುದು- ಅಳಿಸುವುದು ದೊಡ್ಡ ಯಾ ಕಷ್ಟದ ಕೆಲದಸವಲ್ಲ. ನೀವು ಹೇಳುವುದು ವಿಮರ್ಶಾತ್ಮಕ ಸಂಶೋದನಾ ಲೇಖನ. ಇತಿಹಾಸದ ಇತಿಹಾಸಿಕ ಘಟನೆಗಳ ವಿವರ ಬೇರೆ ಸಂಶೋಧನೆ ಮತ್ತು ವಿಮರ್ಶೆಯ ಲೇಖನ ಬೇರೆ. ನೀವು ದಯವಿಟ್ಟು ಆ ಬಗೆಯ ಹೊಸ ಲೇಖನ ಬರೆದು ವಿಕಿಯನ್ನು ಅಭಿವೃದ್ಧಪಡಿಸಿ.Bschandrasgr (ಚರ್ಚೆ) ೦೯:೫೫, ೧೧ ಜುಲೈ ೨೦೧೭ (UTC)
ಉತ್ತಮ ಲೇಖನ ಹೇಗಿರಬೆಕು ಎಂಬುದನ್ನು ಈ ಪುಟದಲ್ಲಿ ವಿವರಿಸಲಾಗಿದೆ.--ಪವನಜ (ಚರ್ಚೆ) ೧೪:೧೬, ೧೧ ಜುಲೈ ೨೦೧೭ (UTC)
  • ಈ ಲೇಖನ ಕೆಲವು ಇಂಗ್ಲಿಷ್ ಲೇಖನಗಳಂತೆ ಕೇವಲ ಐತಿಹಾಸಿಕ ದಾಖಲೆಯನ್ನೊಳಗೊಂಡಿದೆ. ಅಲ್ಲಿ ದಿನಾಂಕ ಹಾಕಿ ಪಟ್ಟಿಗಳನ್ನು ಕೊಟ್ಟು ಕೊಮಡಿಗಳ ಮೂಲಕ ವಿವರಣೆ ಕೊಟ್ಟಿದೆ. ಇಲ್ಲಿ ಸಂಕ್ಷಿಪ್ತ ವಿವರಣೆ ಇದೆ. ಪ್ರತ್ಯೇಕ ಲೇಖನ ಮಾಡಿಲ್ಲ.ಇದು ಸಾಂಪ್ರದಾಯಿಕ ವಿಶ್ವಕೋಶವಲ್ಲದೆ, ಪ್ರಸ್ತುತ ಘಟನೆಗಳ ವಿಷಯವನ್ನೂ ಒಳಗೊಂಡಿದೆ; ಅದೇ ಅಂತರ್ಜಾಲವಿಕಿಯ ವಿಶೇಷತೆ ಎಂದು ಕೊಂಡಿದ್ದೇನೆ. ಅದಿಲ್ಲದಿದ್ದರೆ ನಮ್ಮ ನಕಲುಮಾಡವ ವಿಶಿಷ್ಟ ಸಂಸ್ಕೃತಿಯಂತೆ ಕೊನೆಯಲ್ಲಿ ಇಂಗ್ಲಿಷ್ ವಿಕಿಯಲ್ಲಿ ಮಾಡಿದ ಪಟ್ಟಿಯನ್ನು ಕೊಂಡಿಗಳ ಲೇಖನಗಳಿಲ್ಲದಿದ್ದರೂ ಕೊಂಡಿಗಳನ್ನು ಹಾಕಿ ನಕಲು ಮಾಡಬೇಕಷ್ಟೆ! Bschandrasgr (ಚರ್ಚೆ) ೦೫:೨೧, ೨೮ ಜುಲೈ ೨೦೧೭ (UTC)
ಭಯೋತ್ಪಾದನೆ ಲೇಖನ ಉತ್ತಮವಾಗಿದೆ ಎಂದು ನನ್ನ ಅನಿಸಿಕೆ ಅದ್ದರಿಂದ ಈ ಲೇಖನವನ್ನು ಅಳಿಸುವಿಕೆಗೆ ಹಾಕಲಾಗುವ ವರ್ಗ ದಿಂದ ತೆಗೆದು ಹಾಕ್ಕಿದ್ದೆನೆ.★ Anoop/ಅನೂಪ್ (Talk)(Edits) ೦೫:೪೨, ೨೮ ಜುಲೈ ೨೦೧೭ (UTC)
@ಅನೂಪ್ ಅವರೇ ದಯವಿಟ್ಟು ಮೇಲೆ ಪವನಜರು ತಿಳಿಸಿದ ಉತ್ತಮ ಲೇಖನ ಹೇಗಿರಬೇಕೆಂಬ ನಿಯಮಗಳನ್ನು ಮತ್ತು ಈ ಲೇಖನವನ್ನು ತುಲನೆ ಮಾಡಿ ನೋಡಿ. ಗೋಪಾಲಕೃಷ್ಣ (ಚರ್ಚೆ) ೦೭:೩೬, ೩೦ ಜುಲೈ ೨೦೧೭ (UTC)
ಗೋಪಾಲಕೃಷ್ಣ ಪ್ರಸ್ತುತ ಲೇಖನ ಉತ್ತಮ ಸ್ಥಿತಿಯಲ್ಲಿದೆ, ನೀವು ಯಾಕೆ ಅಳಿಸಲು ಆ ಲೇಖನವನ್ನು ಪ್ರಸ್ತಾಪಿಸುತ್ತೀರಿ ಎಂದು ನನಗೆ ಗೊತ್ತಿಲ್ಲ, ಮತ್ತು ಕನ್ನಡ ವಿಕಿಪೀಡಿಯ ಮೇಲಿನ ಎಲ್ಲಾ ಲೇಖನಗಳು ಪುಟದಲ್ಲಿ ಹೇಳಿದ ಹಾಗೆ ಹೊಂದಾಣಿಕೆಯಾಗುವುದಿಲ್ಲ. ★ Anoop/ಅನೂಪ್ (Talk)(Edits) ೧೫:೨೫, ೩೦ ಜುಲೈ ೨೦೧೭ (UTC)
@ಅನೂಪ್ ಉತ್ತಮ ಸ್ಥಿತಿಯಲ್ಲಿ ಎಂದರೆ ಪತ್ರಿಕಾ ವರದಿಯ ಹಾಗಲ್ಲ. ಈ ಲೇಖನ ಪತ್ರಿಕಾ ವರದಿಯಂತಿದೆ. ಹೆಚ್ಚಿನ ಭಾಗವು ಪತ್ರಿಕಾ ವರದಿಗಳಾಗಿದೆ. ನೀವು ಕೊಟ್ಟ ಉಲ್ಲೇಖಗಳಲ್ಲಿ ನೋಡಿದರೆ ನೇರವಾಗಿ ಪತ್ರಿಕೆಗಳಿಂದ ನಕಲು ಪಡಿಸಿದ್ದಾಗಿದೆ. ಅದು ವಿಶ್ವಕೋಶಕ್ಕೆ ಅನಗತ್ಯ ಎಂದು ನನ್ನ ಅಭಿಪ್ರಾಯ. ಮತ್ತು ನೀವು ಮೇಲೆ ಹೇಳಿದಿರಲ್ಲ ಎಲ್ಲಾ ಲೇಖನಗಳು ಪುಟದಲ್ಲಿ ಹೇಳಿದ ಹಾಗೆ ಹೊಂದಾಣಿಕೆಯಾಗುವುದಿಲ್ಲ ಎಂದು. ಉದಾಹರಣೆಗಳನ್ನು ಕೊಡಬಹುದೇ? --ಗೋಪಾಲಕೃಷ್ಣ (ಚರ್ಚೆ) ೧೦:೨೩, ೩೧ ಜುಲೈ ೨೦೧೭ (UTC)
  • ಕನ್ನಡ ವಿಕಿಪೀಡಿಯದಲ್ಲಿರುವ ಭಯೋತ್ಪಾದನೆ ಲೇಖನದಲ್ಲಿ ಆಂಗ್ಲ ವಿಕಿಪೀಡಿಯದ ಪುಟದಲ್ಲಿರುವಂತೆ ಸಮಗ್ರ ಮಾಹಿತಿ ಕಂಡುಬರುತ್ತಿಲ್ಲ. ಗೋಪಾಲಕೃಷ್ಣ ಅವರು ಹೇಳಿದಂತೆ ಕೇವಲ ಭಯೋತ್ಪಾದಕ ದಾಳಿಗಳ ಪಟ್ಟಿಯಂತೆ ಕಂಡುಬರುತ್ತಿದೆ. ಆದರೆ, ಈಗಿರುವ ಲೇಖನಕ್ಕೆ ಹೆಚ್ಚುವರಿಯಾಗಿ ಆಂಗ್ಲ ಲೇಖನದಲ್ಲಿರುವಂತೆಯೇ ಭಯೋತ್ಪಾದನೆಯ ಬೇರೆ ಬೇರೆ ವ್ಯಾಖ್ಯಾನಗಳು, ಇತಿಹಾಸ, ವಿಧಗಳು ಇತ್ಯಾದಿ ವಿವರಗಳನ್ನು ಸೇರಿಸಿ ಉತ್ತಮಗೊಳಿಸಬಹುದು. ಹಾಗಾಗಿ ಈ ಲೇಖನವನ್ನು ಅಳಿಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೧:೩೮, ೩೧ ಜುಲೈ ೨೦೧೭ (UTC)