ಸದಸ್ಯ:Shivakumara kote/sandbox1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೭ ನೇ ಸಾಲು: ೭ ನೇ ಸಾಲು:
*ತ್ರೈಲೋಕ್ಯಚೂಢಾಮಣಿ ಸ್ತೋತ್ರ
*ತ್ರೈಲೋಕ್ಯಚೂಢಾಮಣಿ ಸ್ತೋತ್ರ
*ಸಮಯಪರೀಕ್ಷೆ
*ಸಮಯಪರೀಕ್ಷೆ
#
==ಉಲ್ಲೇಖ==
==ಉಲ್ಲೇಖ==

೧೪:೧೦, ೧೨ ಜನವರಿ ೨೦೧೬ ನಂತೆ ಪರಿಷ್ಕರಣೆ

ಬ್ರಹ್ಮಶಿವ

ಪೀಠಿಕೆ

ಕವಿರಾಜಮಾರ್ಗ ಕನ್ನಡದಲ್ಲಿ ಉಪಲಬ್ದವಿರುವ ಮೊದಲ ಕೃತಿ.ಇದು ಲಾಕ್ಷಣಿಕ ಗ್ರಂಥ. ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯ ಕಾವ್ಯಗಳು ಕನ್ನಡದಲ್ಲಿ ದೊರೆತ ಮೊದಲ ಮಹಾಕಾವ್ಯಗಳು.ಇವುಗಳಿಗೂ ಮುನ್ನ ಕನ್ನಡದಲ್ಲಿ ಸಾಹಿತ್ಯ ನಿರ್ಮಾಣವಾಗಿತ್ತು ಎಂಬುದಕ್ಕೆ ಪಂಪನ ಮಹಾಕಾವ್ಯಗಳಲ್ಲಿಯೇ ಉಲ್ಲೇಖಗಳು ದೊರೆಯುತ್ತವೆ.ಆದರೆ ಅವುಗಳ್ಯಾವು ದೊರೆತಿಲ್ಲವಾದುದರಿಂದ ಸಧ್ಯದ ಮಟ್ಟಿಗೆ ಪಂಪನೇ ಆದಿಕವಿ ಎಂಬುದಾಗಿ ವಿದ್ವಾಂಸರು ತೀರ್ಮಾನಿಸಿದ್ದಾರೆ. ಹಾಗೂ ಹತ್ತನೆಯ ಶತಮಾನದಿಂದ ಹನ್ನೆರಡನೆಯ ಶತಮಾನದ ಮದ್ಯಭಾಗದವರೆಗಿನ ಕಾಲವನ್ನು ಪಂಪಯುಗ ಎಂದು ಗುರುತಿಸಿದ್ದಾರೆ. ಬ್ರಹ್ಮಶಿವನನ್ನು ಈ ಯುಗದ ವ್ಯಾಪ್ತಿಯಲ್ಲಿ ಸೇರಿಸಿದ್ದಾರೆ.

ಪರಿಚಯ

ಬ್ರಹ್ಮಶಿವ ಹನ್ನೆರಡನೆಯ ಶತಮಾನದ ಮಧ್ಯಭಾಗದಲ್ಲಿ ಬರುವ ಮಹತ್ವದ ಕವಿಗಳಲ್ಲಿ ಒಬ್ಬ. ಈತನ ಮೂಲ ಹೆಸರು ಬ್ರಹ್ಮದೇವ. ಇವನು ಚಾಲುಕ್ಯತ್ರೈಲೋಕ್ಯಮಲ್ಲಸುತ ಕೀರ್ತಿವರ್ಮನನ್ನು ಸ್ತುತಿಸುವುದರಿಂದ ಈತನ ಕಾಲವನ್ನು ಸು.೧೧೦೦ ಎಂಬುದಾಗಿ ಕವಿಚರಿತೆಕಾರರು ನಿರ್ಧರಿಸಿದ್ದಾರೆ.ಅಗ್ಗಳದೇವನ ಕೆಳೆಯಂ ಎಂದು ತಾನೆ ಹೇಳಿಕೊಂಡಿರುವುದರಿಂದ ಅಗ್ಗಳನ ಕಾಲ ಕ್ರಿ.ಶ.೧೧೮೯ ಆಗಿರುವುದರಿಂದ ಹನ್ನೆರಡನೆಯ ಶತಮಾನದ ಉತ್ತರಾರ್ಧದಲ್ಲಿ ಇದ್ದನೆಂಬ ಅಭಿಪ್ರಾಯವೂ ಇದೆ.ಹಾಗೆಯೆ ಬ್ರಹ್ಮಶುವ ತನ್ನ ಗುರು ಎಂದು ಹೇಳಿಕೊಂಡಿರುವ ವೀರಣಂದಿ ಸು.೧೧೫೩ರ ಹೊತ್ತಿಗೆ ಆಚಾರಸಾರ ಕರ್ನಾಟಕವೃತ್ತಿಯನ್ನು ರಚಿಸಿದ್ದರಿಂದ ಆ ಕಾಲದ ನಂತರ ಬ್ರಹ್ಮಶಿವ ಇದ್ದಿರಬೇಕೆಂದೂ ತೋರುತ್ತದೆ.ಆದರೆ ರಂ.ಶ್ರೀ.ಮುಗಳಿಯವರು ಈತನ ಕಾಲವನ್ನು ಹನ್ನೆರಡನೆಯ ಶತಮಾನದ ಮಧ್ಯವೇ ಈತನ ಜೇವಿತಾವದಿ ಎಂಬುದಾಗಿ ಉಲ್ಲೇಖಿಸಿದ್ದಾರೆ.[೧]ಇವನ ಮತ ಜೈನ ಧರ್ಮ ಇವನು ಮೊದಲು ಶಯವ ಪೋಥದವನಾಗಿದ್ದು ಆಮೇಲೆ ಜೈನ ಮತಾವಲಮಭಿಯಾದನೆಂಬುದಾಗಿ ಸಾಹಿತ್ಯ ಚರಿತ್ರಕಾರರು ಅಬಿಪ್ರಾಉಪಟ್ಟಿದ್ದಾರೆ. ಇವನ ಕೃತಿಗಳಲ್ಲಿ ಎಲ್ಲಿಯೂ ವೀರಶೈವ ಮತದ ಬಗ್ಗೆ ಉಲ್ಲೇಖಗಳಿಲ್ಲ.ಅಂದಿನ ಧಾರ್ಮಿಕ ಕ್ರಾಂತಿಗೆ ಕಾರಣನಾದ ಬಸವಣ್ಣ ಮತ್ತು ಆತನ ತರುವಾಯದ ಯಾವ ವಚನಕಾರರ ಬಗ್ಗೆಯೂ ಉಲ್ಲೇಖವಿಲ್ಲದಿರುವುದರಿಂದ ಹಾಗೂ ಬಸವಣ್ಣನಿಗೂ ಹಿರಿಯನಾದ ಜೇಡರ ದಾಸೀಮಯ್ಯನ ಬಗ್ಗೆ ಉಲ್ಲೇಖವಿರುವುದರಿಮದ ಈತ ವೀರಶೈವಕ್ಕೂ ಪೂರ್ವದ ಶಯವ ಮತಕ್ಕೆ ಸೇರಿದವನಾಗಿದ್ದಯ ಅದರಲ್ಲಿ ಒಲ್ಪು ಕಾಣದೆ ಜೈನ ಮತಾವಲಂಭಿಯಾದಂಥೆ ಕಾಣುತ್ತದೆ.ಈತನ ಕಾವ್ಯಗಳಲ್ಲಿ ಅನ್ಯಮತ ವಿಡಂಬನೆ ಸ್ವ-ಮತ ಮಂಡನೆ ಪ್ರಮುಖವಾದ ಉದ್ದೇಶವಾಗಿದೆ.ಅನ್ಯಮತ ಧೂಷಣೆ ಇವನಲ್ಲಿ ಅಧಿಕವಾಗಿ ಕಾಣುತ್ತದೆ.

ಬ್ರಹ್ಮಶಿವನ ಕೃತಿಗಳು

  • ತ್ರೈಲೋಕ್ಯಚೂಢಾಮಣಿ ಸ್ತೋತ್ರ
  • ಸಮಯಪರೀಕ್ಷೆ

ಉಲ್ಲೇಖ

  1. ಮುಗಳಿ ರಂ.ಶ್ರೀ.,ಕನ್ನಡ ಸಾಹಿತ್ಯ ಚರಿತ್ರೆ,ಗೀತಾ ಬುಕ್ ಹೌಸ್:ಪ್ರಕಾಶಕರು:ಮೈಸೂರು.,ಪ್ರತಮ ಪ್ರಕಾಶನ ೧೯೫೩,ಇಪ್ಪತ್ತ ಮೂರನೆಯ ಸಂಸ್ಕರಣ ೧೦೧೪