ಮಿರ್ಜಾನ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ವರ್ಗೀಕರಿಸಿ ಆಕರವನ್ನು ಸೇರಿಸಿದೆ. ಈ ಲೇಖನವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ. |
ಚು Anivaasi ಮಿರ್ಜಾನ ಕೋಟೆ ಪುಟವನ್ನು ಮೀರ್ಜನ್ ಕೋಟೆ ಕ್ಕೆ ಸರಿಸಿದ್ದಾರೆ: ಕೋಟೆಯ ಹೆಸರು ಸರಿಮಾಡಿದೆ |
( ಯಾವುದೇ ವ್ಯತ್ಯಾಸವಿಲ್ಲ )
|
೧೮:೫೮, ೬ ಜೂನ್ ೨೦೧೫ ನಂತೆ ಪರಿಷ್ಕರಣೆ
ಮೀರ್ಜನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಗೋಕರ್ಣದಿಂದ ೯ ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಸುಮಾರು ೦.೫ ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ.
ಕೋಟೆಯ ನಿರ್ಮಾಣ
ಪೆಪ್ಪರ್ ರಾಣಿ ಎಂದೇ ಪ್ರಖ್ಯಾತಳಾಗಿರುವ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು ೧೬೦೮-೧೬೪೦ರ ನಡುವೆ ಕಟ್ಟಿದಳು ಎಂದು ನಂಬಲಾಗಿದೆ. [೧]
ಕೋಟೆಯ ಲಕ್ಷಣಗಳು
ಮೀರ್ಜನ್ ಕೋಟೆಯು ತನ್ನ ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕೆಲವೆ ಕೋಟೆಗಳಲ್ಲಿ ಒಂದು. ಈ ಕೋಟೆಯು ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದನ್ನು ನಿರ್ಮಿಸಲು ಕೆಂಪು ಕಲ್ಲುಗಳನ್ನು ಬಳಸಲಾಗಿದೆ. ಕೋಟೆಯು ನಾಲ್ಕು ದ್ವಾರಗಳನ್ನು ಹೊಂದಿದ್ದು, ಪ್ರತಿಯೊಂದು ದ್ವಾರದಲ್ಲು ಅಗಲವಾದ ಮೆಟ್ಟಿಲುಗಳಿವೆ. ಕೊಟೆಯ ಒಳಗಡೆ ಒಂದು ಮುಖ್ಯ ದ್ವಾರ, ಒಂದು ಗುಪ್ತ ದ್ವಾರ, ಒಂಬತ್ತು ಬಾವಿ, ಹಾಳು ಬಿದ್ದ ದೊಡ್ಡ ದರ್ಬಾರ್ ಹಾಲ್ ಮತ್ತು ಬಹಳ ವಿಸ್ತಾರವಾದ ಮಾರುಕಟ್ಟೆ ಜಾಗವಿದೆ ಮತ್ತು ಕೊಟೆಯ ಸುತ್ತ ೧೨ ಬುರುಜುಗಳಿವೆ.