ಸದಸ್ಯ:Anivaasi/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
 
೧ ನೇ ಸಾಲು: ೧ ನೇ ಸಾಲು:
{{Infobox person
{{Infobox person
| name = ಎಸ್. ರಾಮಚಂದ್ರ
| name = ಎಸ್. ರಾಮಚಂದ್ರ
| image = [[File:S Ramachandra.jpg|thumb]]
| image = S Ramachandra.jpg|thumb
| birth_date = {{birth date|1948|11|16|}}
| birth_date = {{birth date|1948|11|16|}}
| birth_place = [[ಬೆಂಗಳೂರು]], [[ಕರ್ನಾಟಕ]]
| birth_place = [[ಬೆಂಗಳೂರು]], [[ಕರ್ನಾಟಕ]]

೦೮:೪೪, ೩ ಜೂನ್ ೨೦೧೫ ದ ಇತ್ತೀಚಿನ ಆವೃತ್ತಿ

ಎಸ್. ರಾಮಚಂದ್ರ
ಜನನ(೧೯೪೮-೧೧-೧೬)೧೬ ನವೆಂಬರ್ ೧೯೪೮
ಮರಣಜನವರಿ 10, 2011(2011-01-10)
ಉದ್ಯೋಗಛಾಯಾಗ್ರಾಹಕ

ಎಸ್. ರಾಮಚಂದ್ರ ಎಂದೇ ಖ್ಯಾತರಾದ ಶಿವರಾಮಯ್ಯ ರಾಮಚಂದ್ರ ಐತಾಳ ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಪ್ರತಿಭಾನ್ವಿತ ಹಾಗು ಪ್ರಸಿದ್ಧ ಹಿರಿಯ ಛಾಯಾಗ್ರಾಹಕ.

ಪರಿಚಯ[ಬದಲಾಯಿಸಿ]

ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.

ವೃತ್ತಿ[ಬದಲಾಯಿಸಿ]

ರಾಮಚಂದ್ರರವರು ಪೂನಾ ಫಿಲ್ಮ್ ಇನ್‌ಸಿrಟ್ಯೂಟ್‌ನ ಕೊಡುಗೆ. ಅವರು ೧೯೬೭-೧೯೭೦ರಲ್ಲಿ ಛಾಯಾಗ್ರಹಣದ ವ್ಯಾಸಂಗ ಮಾಡಿದ ಮೊದಲ ತಲೆಮಾರಿನ ಗುಂಪಿಗೆ ಸೇರಿದವರು . ಅಲ್ಲಿಂದ ಬಂದ ನಂತರ ಅವರು ಗಿರೀಶ್‌ ಕಾರ್ನಾಡರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನು ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು. ನಂತರ ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧವಲ್ಲದೆ, ನಂತರ ಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ್ದಾರೆ. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ. ಶಂಕರ್ ನಾಗ್ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್‌' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು. ನಿರ್ದೇಶಕ ರಾಮದಾಸ್‌ ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ. ಚಿಕ್ಕ ವಯಸ್ಸಿನಿಂದಲೇ ಪೋಲಿಯೋದ ಕಾರಣ ತುಸು ಕುಂಟುನಡಿಗೆಯಿದ್ದರೂ ಅದನ್ನು ಮೆಟ್ಟಿ ನಿಂತು ಅವರು ಸಾಧನೆಯ ಶಿಖರವೇರಿದರು.

ಪ್ರಶಸ್ತಿ[ಬದಲಾಯಿಸಿ]

೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ (ಚಂದ್ರಶೇಖರ ಕಂಬಾರ ಕಥೆಯಾಧಾರಿತ ‘ಋಷ್ಯಶೃಂಗ’) ಪ್ರಶಸ್ತಿ, ಹಲವು ಬಾರಿ ರಾಜ್ಯಪ್ರಶಸ್ತಿ, ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ.

ನಿಧನ[ಬದಲಾಯಿಸಿ]

ಇವರು ಕ್ಯಾನ್ಸರಿನಿಂದ ಬಳಲುತ್ತಿದ್ದು ಜನವರಿ 10, 2011(2011-01-10)ರಂದು ನಿಧನರಾದರು. ಇವರ ಪತ್ಮಿಯ ಹೆಸರು ಮೀನಾಕ್ಷಿ ಹಾಗು ಪುತ್ರಿಯರು ಚೈತ್ರಾ ಮತ್ತು ವರ್ಷಾ.

ಚಿತ್ರಪಟ್ಟಿ[ಬದಲಾಯಿಸಿ]

ಚಲನಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ ಭಾಷೆ ಇತರ ಸಂಗತಿ
1972 ವಂಶವೃಕ್ಷ ಕನ್ನಡ ಸಹಾಯಕ ಛಾಯಾಗ್ರಾಹಕ
1972 ಸಂಕಲ್ಪ ಕನ್ನಡ ವಿಜೇತರು : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ[೨]
1974 ಕಂಕಣ ಕನ್ನಡ
1975 ಚೋಮನ ದುಡಿ ಕನ್ನಡ
1976 ಪಲ್ಲವಿ ಕನ್ನಡ
1976 ಋಷ್ಯಶೃಂಗ ಕನ್ನಡ ವಿಜೇತರು : ಅತ್ಯುತ್ತಮ ಛಾಯಾಗ್ರಾಹಕ ರಾಷ್ಟ್ರ ಪ್ರಶಸ್ತಿ
1977 ಘಟಶ್ರಾದ್ಧ ಕನ್ನಡ
1978 ಗ್ರಹಣ ಕನ್ನಡ Winner : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ (ಕಪ್ಪು ಬಿಳುಪು)
1978 ಗೀಜಗನ ಗೂಡು ಕನ್ನಡ
1978 ಹೊಂಬಿಸಿಲು ಕನ್ನಡ
1978 ಮಲಯ ಮಕ್ಕಳು ಕನ್ನಡ
1978 ಪರಸಂಗದ ಗೆಂಡೆತಿಮ್ಮ ಕನ್ನಡ
1979 ಆಕ್ರಮಣ ಕನ್ನಡ
1979 ದಂಗೆ ಎದ್ದ ಮಕ್ಕಳು ಕನ್ನಡ
1979 ನಮ್ಮಮ್ಮನ ಸೊಸೆ ಕನ್ನಡ
1980 ಬಂಗಾರದ ಜಿಂಕೆ ಕನ್ನಡ
1980 ವಾತ್ಸಲ್ಯ ಪಥ ಕನ್ನಡ
1980 ಸಂಗೀತಾ ಕನ್ನಡ
1981 ಜಾಲ ಕನ್ನಡ
1981 ಚದುರಿದ ಚಿತ್ರಗಳು ಕನ್ನಡ
1983 ಬ್ಯಾಂಕರ್ ಮಾರ್ಗಯ್ಯ ಕನ್ನಡ
1983 ಅನ್ವೇಷಣೆ ಕನ್ನಡ
1983 ಗಂಧರ್ವಗಿರಿ ಕನ್ನಡ
1983 ಮುದುಡಿದ ತಾವರೆ ಅರಳಿತು ಕನ್ನಡ
1983 ನ್ಯಾಯ ಗೆದ್ದಿತು ಕನ್ನಡ
1983 ಪ್ರೇಮಯುದ್ಧ ಕನ್ನಡ
1983 ಸಿಂಹಾಸನ ಕನ್ನಡ
1984 ಒಲವೆ ಬದುಕು ಕನ್ನಡ
1986 ಪ್ರೇಮ ಜಾಲ ಕನ್ನಡ
1987 ಹುಲಿ ಹೆಬ್ಬುಲಿ ಕನ್ನಡ
1987 ಅವಸ್ಥೆ ಕನ್ನಡ
1987 ನ್ಯಾಯ ಶಿಕ್ಷೆ ಕನ್ನಡ
1987 ರೋಮಾಂಚನ ಕನ್ನಡ
1987 ಸಂಪ್ರದಾಯ ಕನ್ನಡ
1988 ಭುಜಂಗಯ್ಯನ ದಶಾವತಾರ ಕನ್ನಡ
1988 ಆಸ್ಪೋಟ ಕನ್ನಡ
1988 ಮಾತೃದೇವೋಭವ ಕನ್ನಡ
1989 ಹಾಂಕಾಂಗಿನಲ್ಲಿ ಏಜಂಟ್ ಅಮರ್ ಕನ್ನಡ
1989 ಸಿಂಗಾರಿ ಬಂಗಾರಿ ಕನ್ನಡ
1990 ಸಂತ ಶಿಶುನಾಳ ಶರೀಫ ಕನ್ನಡ
1991 ಮನೆ ಕನ್ನಡ ವಿಜೇತರು : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
1991 ಎಕ್ ಘರ್ ಹಿಂದಿ
1992 ಉಂಡು ಹೋದ ಕೊಂಡು ಹೋದ ಕನ್ನಡ
1993 ಕಾದಂಬರಿ ಕನ್ನಡ
1994 ಯಾರಿಗು ಹೇಳ್ಬೇಡಿ ಕನ್ನಡ
1995 ನಿಲುಕದ ನಕ್ಷತ್ರ ಕನ್ನಡ
1996 ಜನನಿ ಕನ್ನಡ
1996 ಪೂಜ ಕನ್ನಡ
1999 ದೇವೀರಿ ಕನ್ನಡ
1999 ಕಾನೂರು ಹೆಗ್ಗಡತಿ ಕನ್ನಡ
2003 ಅರ್ಥ ಕನ್ನಡ
2004 ಹಸೀನಾ ಕನ್ನಡ
2004 ಬೇರು ಕನ್ನಡ
2004 ಪ್ರವಾಹ ಕನ್ನಡ
2005 ನಾಯಿ ನೆರಳು ಕನ್ನಡ
2005 ಮುಖಾಮುಖಿ ಕನ್ನಡ
2006 ಬನದ ನೆರಳು ಕನ್ನಡ
2007 ಗುಲಾಬಿ ಟಾಕೀಸು ಕನ್ನಡ
2008 ವಿಮುಕ್ತಿ ಕನ್ನಡ
2008 ಮೊಗ್ಗಿನ ಜಡೆ ಕನ್ನಡ
2008 ಹಾರು ಹಕ್ಕಿಯನೇರಿ ಕನ್ನಡ
2009 ದಾಟು ಕನ್ನಡ
2009 ಮುಖಪುಟ ಕನ್ನಡ
2010 ಗಾಂಧಿ ಸ್ಮೈಲ್ಸ್ ಕನ್ನಡ
2010 ಬೇಲಿ ಮತ್ತು ಹೊಲ ಕನ್ನಡ
2010 ಹೆಜ್ಜೆಗಳು ಕನ್ನಡ
2010 ಪ್ರಾರ್ಥನೆ ಕನ್ನಡ

ಟಿವಿ ಚಿತ್ರ[ಬದಲಾಯಿಸಿ]

ವರ್ಷ ಚಿತ್ರ ಭಾಷೆ ಇತರ ಸಂಗತಿ
1987 ಮಾಲ್ಗುಡಿ ಡೇಸ್ (ಟಿವಿ ಸರಣಿ) ಹಿಂದಿ ಛಾಯಾಗ್ರಹಣ
1988 ಸ್ಟೋನ್ ಬಾಯ್ (ಟಿವಿ ಸರಣಿ) ಹಿಂದಿ ಛಾಯಾಗ್ರಹಣ
2002 ಒಂದು ಸಾವಿನ ಸುತ್ತ (ಟೆಲಿ ಚಿತ್ರ) ಕನ್ನಡ ಛಾಯಾಗ್ರಹಣ
2002 ಸಾಕ್ಷಿ (ಟೆಲಿ ಚಿತ್ರ) ಕನ್ನಡ ಚಿತ್ರಕತೆ, ನಿರ್ದೇಶನ, ಛಾಯಾಗ್ರಹಣ
2003 ಗೃಹಭಂಗ (ಟಿವಿ ಸರಣಿ) ಕನ್ನಡ ಛಾಯಾಗ್ರಹಣ

ಆಕರ[ಬದಲಾಯಿಸಿ]

[೧]

  1. ೧.೦ ೧.೧ Award winning cameraman S.Ramachandra dead
  2. http://www.thehindu.com/todays-paper/tp-features/tp-fridayreview/hero-behind-the-frame/article1131752.ece