ಬಿ.ಎಸ್.ರಂಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
credit
೭೬ ನೇ ಸಾಲು: ೭೬ ನೇ ಸಾಲು:
|--
|--
|}
|}

==ಆಕರಗಳು==

* [http://vijaykarnatakaepaper.com/login.php ಮಾಹಿತಿ ನೆರವು - ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ]



{{ಕನ್ನಡ ಚಿತ್ರ ನಿರ್ದೇಶಕರು}}
{{ಕನ್ನಡ ಚಿತ್ರ ನಿರ್ದೇಶಕರು}}

೨೨:೫೨, ೨೨ ಫೆಬ್ರವರಿ ೨೦೦೭ ನಂತೆ ಪರಿಷ್ಕರಣೆ

ಬಿ.ಎಸ್.ರಂಗಾ

ಬಿ.ಎಸ್.ರಂಗಾ - ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭಾವಂತರಲ್ಲಿ ಪ್ರಮುಖರು.

ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹೀಗೆ ಮೂರು ವಿಭಾಗಗಳಲ್ಲಿ ರಂಗಾ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸುರುವ ಸೇವೆ ಅಮೂಲ್ಯವಾದದ್ದು. ಚಲನಚಿತ್ರವೆಂಬ ಕಲ್ಪನೆ ಇನ್ನೂ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ನಿರ್ಮಿಸಿ, ಸ್ಟುಡಿಯೊ ಸ್ಥಾಪಿಸಿ, ಚಿತ್ರೋದ್ಯಮದ ಆತ್ಮವಿಶ್ವಾಸ ಹೆಚ್ಚಿಸಿದರು.

೧೯೩೭ರಲ್ಲಿ ಕಾಲೇಜು ತೊರೆದು, ತಂದೆ ಬಿ.ಶ್ರೀನಿವಾಸ ಅಯ್ಯಂಗಾರ್ಯರ ಮುದ್ರಣ ಕಾರ್ಯದಲ್ಲಿ ಸಹಾಯಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ತಂದೆ ಅಮೆಚೂರ್ ಡ್ರಾಮಾಟಿಕ್ ಅಸೋಸಿಯೇಷನ್ ಹುಟ್ಟುಹಾಕಿದವರು. ಈ ಅಸೋಸಿಯೇಷನ್ ಮೂಲಕ ರಂಗಾ ಅವರಿಗೆ ಹಲವಾರು ಸಾಹಿತಿಗಳ, ರಂಗಪಟುಗಳ ಪರಿಚಯವಾಯಿತು. ಅದು ಅವರಲ್ಲಿ ಚಲನಚಿತ್ರರಂಗದಲ್ಲಿ ಆಸಕ್ತಿ ರೂಪುಗೊಳ್ಳುವಂತೆ ಮಾಡಿತು.

ಎಲ್ಲಾ ವಿಭಾಗಗಳಿಗಿಂತ ಛಾಯಾಗ್ರಹಣದತ್ತ ಆಸಕ್ತರಾದ ಅವರು ಮುಂಬಯಿಗೆ ತೆರಳಿ ಭಾರತದ ಪ್ರಥಮ ಆಟೋಮ್ಯಾಟಿಕ್ ಪ್ರೊಸೆಸಿಂಗ್ ಲ್ಯಾಬೋರೇಟರಿ ಸ್ಥಾಪಕರಾದ ಕೃಷ್ಣಗೋಪಾಲ್ ಅವರ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಹಿಂದಿ ಚಿತ್ರರಂಗದ ದಿಗ್ಗಜರ ಒಡನಾಟ ಲಭ್ಯವಾಯಿತು. ಹಲವು ಚಿತ್ರಗಳಿಗೆ ಸಹಾಯಕ ಛಾಯಾಗ್ರಹಕರಾಗಿ ದುಡಿಯುವ ಅವಕಾಶವೂ ದೊರೆಯಿತು. ರಂಗಾ ಅವರು ಸ್ವತಂತ್ರ ಛಾಯಾಗ್ರಹಕರಾಗಿ ದುಡಿದದ್ದು ಭಕ್ತ ನಾರದರ್ ಎಂಬ ತಮಿಳು ಚಲನಚಿತ್ರ.

ಯಶಸ್ವಿ ಛಾಯಾಗ್ರಾಹಕ ವೃತ್ತಿಯ ನಂತರ ವಿಕ್ರಂ ಪ್ರೊಡಕ್ಷನ್ ಸಂಸ್ಥೆ ಸ್ಥಾಪಿಸಿದರು. ೧೯೫೦ರಲ್ಲಿ ಅದರ ವಿಸ್ತರಣವಾಗಿ ವಿಕ್ರಂ ಸ್ಟುಡಿಯೊಸ್ ಅಂಡ್ ಲಯಾಬ್ ಸ್ಥಾಪನೆಯಾಯಿತು. ೧೯೫೫ರಲ್ಲಿ ಮದ್ರಾಸಿನಲ್ಲಿ ಸುಸಜ್ಜಿತ ಸ್ಟುಡಿಯೊ ಸ್ಥಾಪಿಸಿದರು.

ರಂಗಾ ನಿರ್ದೇಶಿಸಿ, ನಿರ್ಮಿಸಿದ ಮೊದಲ ಚಿತ್ರ ಭಕ್ತ ಮಾರ್ಕಂಡೇಯ. ನಂತರ ಮಹಿಷಾಸುರ ಮರ್ಧಿನಿ ಹಾಗು ಅಮರಶಿಲ್ಪಿ ಜಕಣಾಚಾರಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದರು. ಅಮರಶಿಲ್ಪಿ ಜಕಣಾಚಾರಿ ಚಿತ್ರವು ಕನ್ನಡ ಚಿತ್ರರಂಗದಲ್ಲಿಯೇ ಪ್ರಪ್ರಥಮವಾಗಿ ಸಂಪೂರ್ಣವಾಗಿ ವರ್ಣಚಿತ್ರವಾಗಿ ನಿರ್ಮಾಣಗೊಂಡಿತು. ಗೀತೆಗಳು ಅತ್ಯಂತ ಯಶಸ್ವಿಯಾದುದಲ್ಲದೆ ಗಳಿಕೆ ದೃಷ್ಟಿಯಿಂದಲೂ ದಾಖಲೆಯನ್ನು ನಿರ್ಮಿಸಿತು.

ನಂತರ ಮಹಾಸತಿ ಅನುಸೂಯ, ಪಾರ್ವತಿ ಕಲ್ಯಾಣ, ಮಿಸ್ಟರ್ ರಾಜ್‍ಕುಮಾರ್ ಮುಂತಾದ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಸುಳಿ ಚಿತ್ರದ ನಂತರ ಅಲ್ಪಕಾಲ ದೂರ ಉಳಿದಿದ್ದ ರಂಗಾ, ನಂತರ ೧೯೮೨ರಲ್ಲಿ ಹಾಸ್ಯರತ್ನ ರಾಮಕೃಷ್ಣ ಎಂಬ ಹಾಸ್ಯಪ್ರಧಾನ ಚಿತ್ರವನ್ನು ನಿರ್ಮಿಸಿದರು.

ರಂಗಾ ಅವರು ಕೆಲಕಾಲ ಕನ್ನಡ ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದರು.

ಕನ್ನಡ ಚಿತ್ರರಂಗಕ್ಕೆ ರಂಗಾ ಅವರ ಸೇವೆಯನ್ನು ಪರಿಗಣಿಸಿದ ಕರ್ನಾಟಕ ರಾಜ್ಯ ಸರ್ಕಾರ ೧೯೮೮-೮೯ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಬಿ.ಎಸ್.ರಂಗಾ ನಿರ್ದೇಶನದ ಚಲನಚಿತ್ರಗಳು

ವರ್ಷ ಚಿತ್ರ
೧೯೫೬ ಭಕ್ತ ಮಾರ್ಕಂಡೇಯ
೧೯೫೯ ಮಹಿಷಾಸುರಮರ್ಧಿನಿ
೧೯೬೪ ಅಮರಶಿಲ್ಪಿ ಜಕಣಾಚಾರಿ
೧೯೬೪ ಪ್ರತಿಜ್ಞೆ
೧೯೬೫ ಚಂದ್ರಹಾಸ
೧೯೬೫ ಮಹಾಸತಿ ಅನುಸೂಯ
೧೯೬೭ ಪಾರ್ವತಿ ಕಲ್ಯಾಣ
೧೯೬೯ ಭಲೇ ಬಸವ
೧೯೭೦ ಮಿಸ್ಟರ್ ರಾಜ್‌ಕುಮಾರ್
೧೯೭೧ ಸಿಡಿಲ ಮರಿ
೧೯೭೪ ಮಣ್ಣಿನ ಮಗಳು
೧೯೭೮ ಸುಳಿ
೧೯೮೨ ಹಾಸ್ಯರತ್ನ ರಾಮಕೃಷ್ಣ
೧೯೮೪ ಹುಲಿಯಾದ ಕಾಳ
೧೯೮೭ ಶಿವಭಕ್ತ ಮಾರ್ಕಂಡೇಯ
೧೯೮೯ ಬಂಗಾರದ ಬದುಕು

ಆಕರಗಳು