ಚಾರ್ವಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೯ ನೇ ಸಾಲು: ೨೯ ನೇ ಸಾಲು:
ಅನುಮಾನ (iಟಿಜಿeಡಿeಟಿಛಿe ) ಶಾಸ್ತ್ರ, ಶಬ್ದ (ಅನುಭವಿಗಳಮಾತು), ನಮಗೆ ಸ್ವತಂತ್ರವಾಗಿ ಜ್ಞಾನವನ್ನು ಕೊಡಲಾರವು.
ಅನುಮಾನ (iಟಿಜಿeಡಿeಟಿಛಿe ) ಶಾಸ್ತ್ರ, ಶಬ್ದ (ಅನುಭವಿಗಳಮಾತು), ನಮಗೆ ಸ್ವತಂತ್ರವಾಗಿ ಜ್ಞಾನವನ್ನು ಕೊಡಲಾರವು.
ಅನುಮಾನಕ್ಕೆ ಉದಾಹರಣೆ : ದೂರದಲ್ಲಿ ಹೊಗೆಯನ್ನು ಅಲ್ಲಿ ಬೆಂಕಿ ಇದೆ ಎಂದು ಊಹಿಸುವುದು. ಒಂದು ಅಗಳು ಅನ್ನವನ್ನು ಹಿಚುಕಿ ನೋಡಿ ಬೆಂದಿದ್ದರೆ , ಎಲ್ಲವೂಬೆಂದಿದೆ ಎಂದು ತಿಳಿಯುವುದು. ಚವಾಕರು ಇದನ್ನು ಲೋಕ ವ್ಯವಹಾರಕ್ಕೆ ಸೀಮಿತ ಎನ್ನುತ್ತಾರೆ. ತತ್ವ ನಿರ್ಣಯಕ್ಕೆ ಪ್ರಯೋಜನವಿಲ್ಲವೆನ್ನುತ್ತಾರೆ. ಏಕೆಂದರೆ ಇದು ಸಂಭಾವನಾರೂಪದ್ದು ಙ(ಊಹೆ). ನಿಜವಾದರೂ ಆಗಬಹುದು ಅಥವಾ ಆಗದಿರಬಹುದು
ಅನುಮಾನಕ್ಕೆ ಉದಾಹರಣೆ : ದೂರದಲ್ಲಿ ಹೊಗೆಯನ್ನು ಅಲ್ಲಿ ಬೆಂಕಿ ಇದೆ ಎಂದು ಊಹಿಸುವುದು. ಒಂದು ಅಗಳು ಅನ್ನವನ್ನು ಹಿಚುಕಿ ನೋಡಿ ಬೆಂದಿದ್ದರೆ , ಎಲ್ಲವೂಬೆಂದಿದೆ ಎಂದು ತಿಳಿಯುವುದು. ಚವಾಕರು ಇದನ್ನು ಲೋಕ ವ್ಯವಹಾರಕ್ಕೆ ಸೀಮಿತ ಎನ್ನುತ್ತಾರೆ. ತತ್ವ ನಿರ್ಣಯಕ್ಕೆ ಪ್ರಯೋಜನವಿಲ್ಲವೆನ್ನುತ್ತಾರೆ. ಏಕೆಂದರೆ ಇದು ಸಂಭಾವನಾರೂಪದ್ದು ಙ(ಊಹೆ). ನಿಜವಾದರೂ ಆಗಬಹುದು ಅಥವಾ ಆಗದಿರಬಹುದು
೨. ಚರ್ವಾಕರು - ಜಗತ್ತಿನ ನಿಯಮಗಳು ಕಾರ್ಯ ಕಾರಣ ನಿಮಿತ್ತವೆಂದು ಒಪ್ಪಲಾರರು. (ಕಾರಣವಿಲ್ಲದೆ -ಕಾರ್ಯವಿಲ್ಲ ಎಂಬ ನಿಯಮ); ಈ ಕಾರಣಕ್ಕಾಗಿ - ಈಕಾರ್ಯವಗುತ್ತದೆ ಎಂಬ ನಿಯಮ. ಏಕೆಂದರೆ ಪ್ರಕೃತಿಯು ಕಾರ್ಯ ಕಾರಣ ನಿಯಮದಂತೆ ನಡೆಯುವುದಿಲ್ಲ. ಪ್ರತಿಯೊಂದೂ ಅದರ ಸ್ವಭಾವದಂತೆ ನಡೆಯುವುದು.
*೨. ಚರ್ವಾಕರು - ಜಗತ್ತಿನ ನಿಯಮಗಳು ಕಾರ್ಯ ಕಾರಣ ನಿಮಿತ್ತವೆಂದು ಒಪ್ಪಲಾರರು. (ಕಾರಣವಿಲ್ಲದೆ -ಕಾರ್ಯವಿಲ್ಲ ಎಂಬ ನಿಯಮ); ಈ ಕಾರಣಕ್ಕಾಗಿ - ಈಕಾರ್ಯವಗುತ್ತದೆ ಎಂಬ ನಿಯಮ. ಏಕೆಂದರೆ ಪ್ರಕೃತಿಯು ಕಾರ್ಯ ಕಾರಣ ನಿಯಮದಂತೆ ನಡೆಯುವುದಿಲ್ಲ. ಪ್ರತಿಯೊಂದೂ ಅದರ ಸ್ವಭಾವದಂತೆ ನಡೆಯುವುದು.
ಅವರ ತತ್ವ : ಸುಖಕ್ಕೆ ಧರ್ಮವೇ ಕಾರಣವೆಂದಾಗಲೀ ದುಃಖಕ್ಕೆ ಅಧರ್ಮವೇ ಕಾರಣವೆಂದಾಗಲೀ ಹೇಲುವಂತಿಲ್ಲ. ಸುಖ ದುಃಖಗಳಿಗೆ ಸ್ವಭಾವವೇ ಕಾರಣ, ಕೋಗಿಲೆಯ ಮಧುರ ಸ್ವರಕ್ಕೆ : ನವಿಲಿನ ಚೆಂದಕ್ಕೆ ; ಹೂವಿನ ಸುವಾಸನೆಗೆ - ಸ್ವಭಾವವೇ ಕಾರಣ .
ಅವರ ತತ್ವ : ಸುಖಕ್ಕೆ ಧರ್ಮವೇ ಕಾರಣವೆಂದಾಗಲೀ ದುಃಖಕ್ಕೆ ಅಧರ್ಮವೇ ಕಾರಣವೆಂದಾಗಲೀ ಹೇಲುವಂತಿಲ್ಲ. ಸುಖ ದುಃಖಗಳಿಗೆ ಸ್ವಭಾವವೇ ಕಾರಣ, ಕೋಗಿಲೆಯ ಮಧುರ ಸ್ವರಕ್ಕೆ : ನವಿಲಿನ ಚೆಂದಕ್ಕೆ ; ಹೂವಿನ ಸುವಾಸನೆಗೆ - ಸ್ವಭಾವವೇ ಕಾರಣ .
೩. ಪ್ರತ್ಯಕ್ಷ ಮಾಡಿ ತೋರಿಸಬಹುದಾದ ಅನುಮಾನವನ್ನು ಒಪ್ಪಬಹುದು.
*೩. ಪ್ರತ್ಯಕ್ಷ ಮಾಡಿ ತೋರಿಸಬಹುದಾದ ಅನುಮಾನವನ್ನು ಒಪ್ಪಬಹುದು.
೪. ಆಪ್ತ ವ್ಯಕ್ತಿಯ ಮಾತನ್ನು ಪ್ರಮಾಣವೆಂದು ಕೆಲವರು ಒಪ್ಪುವರು. ಆದರೆ ಚರ್ವಾಕರು ಒಪ್ಪುವುದಿಲ್ಲ. ಏಕೆಂದರೆ ಅದು ಪ್ರತ್ಯಕ್ಷದಿಂದಲೇ (ನೋಡಿದಾಗಲೇ ನಿಜವೆಂದು ಹೇಳಬಹುದು) ಸಿದ್ಧಿಸುತ್ತದೆ. ಉದಾಹರಣೆ : ಒಬ್ಬನು ಆಕಳು ಹಾಯುವುದಿಲ್ಲವೆಂದು ಹೇಳಿದರೆ. ಹತ್ತಿರ ಹೋದಾಗಲೇ ಸತಯ ಗೊತ್ತಾಗುವುದು.
*೪. ಆಪ್ತ ವ್ಯಕ್ತಿಯ ಮಾತನ್ನು ಪ್ರಮಾಣವೆಂದು ಕೆಲವರು ಒಪ್ಪುವರು. ಆದರೆ ಚರ್ವಾಕರು ಒಪ್ಪುವುದಿಲ್ಲ. ಏಕೆಂದರೆ ಅದು ಪ್ರತ್ಯಕ್ಷದಿಂದಲೇ (ನೋಡಿದಾಗಲೇ ನಿಜವೆಂದು ಹೇಳಬಹುದು) ಸಿದ್ಧಿಸುತ್ತದೆ. ಉದಾಹರಣೆ : ಒಬ್ಬನು ಆಕಳು ಹಾಯುವುದಿಲ್ಲವೆಂದು ಹೇಳಿದರೆ. ಹತ್ತಿರ ಹೋದಾಗಲೇ ಸತಯ ಗೊತ್ತಾಗುವುದು.
ಆದ್ದರಿಂದ ಶಾಸ್ತ್ರ ಪುರಾಣಗಳನ್ನು ನಂಬುವುದಿಲ್ಲ ಅವು ಪ್ರಮಾಣವಾಗಲಾರವು. ಅವುಗಳನ್ನು ಪ್ರತ್ಯಕ್ಞ ತೋರಿಸುವಂತಿದ್ದರೆ ಮಾತ್ರ ಒಪ್ಪಬಹುದು.
*ಆದ್ದರಿಂದ ಶಾಸ್ತ್ರ ಪುರಾಣಗಳನ್ನು ನಂಬುವುದಿಲ್ಲ ಅವು ಪ್ರಮಾಣವಾಗಲಾರವು. ಅವುಗಳನ್ನು ಪ್ರತ್ಯಕ್ಞ ತೋರಿಸುವಂತಿದ್ದರೆ ಮಾತ್ರ ಒಪ್ಪಬಹುದು.


== ಜೀವನದ ಗುರಿ (ಆಚಾರ -ವಿಚಾರ) ==
== ಜೀವನದ ಗುರಿ (ಆಚಾರ -ವಿಚಾರ) ==

೨೧:೨೩, ೨೩ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ

ಪೀಠಿಕೆ

ಚಾರ್ವಾಕ ಭಾರತದಲ್ಲಿ ಬೆಳೆದು ಬಂದ ಸಿದ್ದ್ದಾಂತಗಳಲ್ಲೊಂದು.ಕ್ರಿ.ಪೂ ೬೦೦ಕ್ಕಿಂತಲೂ ಹಿಂದಿನಿಂದಲೇ ಈ ಪರಂಪರೆ ಬೆಳೆದು ಬಂದಿದೆ ಎಂದು ನಂಬಲಾಗಿದೆ.ಚಾರ್ವಾಕ ಮತದ ಮೂಲಗ್ರಂಥಗಳು ಇಂದು ದೊರೆಯದ ಕಾರಣ ೧೩-೧೪ನೇ ಶತಮಾನದಲ್ಲಿದ್ದ ಮಾಧವಾಚಾರ್ಯಎಂಬ ತತ್ವಶಾಸ್ತ್ರಜ್ಞನ 'ಸರ್ವ ದರ್ಶನ ಸಂಗ್ರಹ'ಎಂಬ ಗ್ರಂಥದಲ್ಲಿರುವ ಚಾರ್ವಾಕ ದರ್ಶನ ಎಂಬ ಅಧ್ಯಾಯವೇ ಆಧಾರವಾಗಿದೆ.ಹಿಂದೂ ಧರ್ಮ ಗ್ರಂಥಗಳಲ್ಲಿ ಹೇಳಲ್ಪಟ್ಟ 'ಪ್ರತ್ಯಕ್ಷ ಪ್ರಮಾಣ' ಒಂದನ್ನು ಮಾತ್ರಾ ಚಾರ್ವಾಕಮತ ಅಂಗೀಕರಿಸಿದೆ.ಚಾರ್ವಾಕ ದರ್ಶನವನ್ನು ಕೆಲವೊಮ್ಮೆ 'ಲೋಕಾಯತ'ದರ್ಶನ ಎಂದೂ ಕರೆಯುತ್ತಾರೆ.

ಚಾರ್ವಾಕ ದರ್ಶನ ಸಾರಾಂಶ

'ಸರ್ವ ದರ್ಶನ ಸಂಗ್ರಹ'ದಲ್ಲಿ ಉದ್ದರಿಸಿದಂತೆ ಚಾರ್ವಾಕ ಮತದ ಮುಖ್ಯ ತತ್ವಗಳು ಇಂತಿವೆ.ಸಂತೋಷವೇ ಬದುಕಿನ ಮುಖ್ಯ ಗುರಿ.ಈ ಪ್ರಪಂಚದ ನಂತರ ಇನ್ನೊಂದು ಪ್ರಪಂಚ (ಸ್ವರ್ಗ ಯಾ ನರಕ)ಎಂದು ಏನೂ ಇಲ್ಲ.ಸ್ವರ್ಗ ಹಾಗೂ 'ಹುಟ್ಟು ಸಾವುಗಳಿಂದ ಬಿಡುಗಡೆ' ಎಂದು ಹೇಳಲ್ಪಟ್ಟವುಗಳೆಲ್ಲವೂ ಕೇವಲ ಭ್ರಮಾಧೀನ ಆದರ್ಶಗಳೆಷ್ಟೆ.ಸಾವು ಎಲ್ಲರಿಗೂ ನಿಶ್ಚಿತ.ಮರುಜನ್ಮ ಎಂಬುದಿಲ್ಲ.ಆದುದರಿಂದ ಎಲ್ಲರೂ ಬದುಕಿರುವಷ್ಟು ದಿನ ಸುಖವಾಗಿರಲು ಪ್ರಯತ್ನಿಸಬೇಕು. ಬದುಕಿನಲ್ಲಿ ದುಖ ಇದೆ ಎಂದು ಸುಖವನ್ನು ತ್ಯಜಿಸುವುದು ಸರಿಯಲ್ಲ. ಅಕ್ಕಿಯನ್ನು ಪಡೆಯುವಾಗ ಭತ್ತದ ಹೊಟ್ಟು ಮತ್ತು ದೂಳು ದೊರೆಯುತ್ತದೆ ಎಂದು ಅಕ್ಕಿಯನ್ನು ತ್ಯಜಿಸಲು ಸಾದ್ಯವೇ? ಅಂತೆಯೇ ದುಖಕ್ಕಾಗಿ ಸುಖ ತ್ಯಜಿಸುವುದು ಯುಕ್ತವಲ್ಲ. ಭೂಮಿ,ಆಕಾಶ,ನೀರು ಹಾಗೂ ಬೆಂಕಿ ಮೂಲಭೂತ ವಸ್ತುಗಳು.ಪ್ರಜ್ಞೆಯು ಈ ನಾಲ್ಕು ಮೂಲಭೂತ ವಸ್ತುಗಳಿಂದಲೇ ಪ್ರಾಪ್ತಿಯಾಗುತ್ತದೆ.ಹೇಗೆ ಕೆಲವು ಅಮಲೇರಿಸುವ ಗುಣಗಳಿಲ್ಲದ ವಸ್ತುಗಳನ್ನು ಬೆರೆಸಿದಾಗ ಅಮೆಲೇರಿಸುವ ಗುಣವುಳ್ಳ ವಸ್ತುವಾಗುವುದೋ ಅಂತೆಯೇ ಪ್ರಜ್ಞೆಯು ಈ ನಾಲ್ಕು ವಸ್ತುಗಳಿಂದಾಗುತ್ತದೆ. ದೇಹವಿಲ್ಲದೆ ಆತ್ಮಎಂಬುದು ಇಲ್ಲ.'ನಾನು ತೆಳ್ಳಗಿದ್ದೇನೆ' 'ನಾನು ದಪ್ಪಗಿದ್ದೇನೆ' ಎಂದು ಮುಂತಾಗಿ ನಾವು ಹೇಳುವುದೆಲ್ಲವೂ ಈ ದೇಹಕ್ಕೇನೆ ಹೊರತು ಆತ್ಮಕ್ಕಲ್ಲ. ಬೆಂಕಿಯ ಬಿಸಿ,ಗಾಳಿಯ ತಂಪು ಎಲ್ಲವೂ ಪ್ರಕೃತಿದತ್ತವಾದವುಗಳೇ.ಎಲ್ಲಾ ವೈವಿದ್ಯಮಯ ವಸ್ತುಗಳೂ ಈ ಪ್ರಕೃತಿಯಿಂದಲೇ ಉಂಟಾಗಿದೆ ಮತ್ತು ಪ್ರಕೃತಿ ನಿಯಮದಂತೆಯೇ ನಡೆಯುತ್ತದೆ. ವೇದಗಳು ಹಾಗೂ ಅವುಗಳಲ್ಲಿ ಹೇಳಲಾದ ಯಾಗ,ಯಜ್ಞಾದಿಗಳು ಕೇವಲ ಕೆಲವು ಜನರ ಹೊಟ್ಟೆಪಾಡಿಗಾಗಿವೆಯಲ್ಲದೆ ಅವುಗಳಿಂದ ಪ್ರಯೋಜನವೇನೂ ಇಲ್ಲ.ವೇದಗಳಲ್ಲಿ ವಿವೇಕವಾಗಲೀ ಪ್ರಾಮಾಣಿಕತೆಯಾಗಲೀ ಇಲ್ಲವಾದುದರಿಂದ ಅವುಗಳು ಸ್ವೀಕಾರಾರ್ಹವಲ್ಲ

ಇತಿಹಾಸ

ಚಾರ್ವಾಕ ದರ್ಶನ-ವಿವರ

  • ಚಾರ್ವಾಕ ದರ್ಶನಕ್ಕೆ ಬೃಹಸ್ಪತಿ ಆಚಾರ್ಯರು ಮೂಲ ಪುರುಷರು . ಆದ್ದರಿಂದ ಇದಕ್ಕೆ ಬಾರ್ಹಪತ್ಯ ದರ್ಶನ ಎಂದೂ ಹೆಸರುಂಟು. ಇವರ ಶಿಷ್ಯರೇ ಚಾರ್ವಾಕರು -ಈದರ್ಶನದ ವ್ಯಾಕ್ಯಾನಕಾರರು. ಕಂಬಲಾಶ್ವತರ (ಕಂಬಲೇಶ) , ಪುರಂಧರ, ಮೊದಲಾದವರು ಪ್ರವರ್ತಕರು. ರಾಮಾಯಣ, ಮಹಾಭಾರತ, ಕಠ, ಬೃಹದಾರಣ್ಯಕ ಉಪನಿಷತ್ ಗಳಲ್ಲಿ ಇವರ ವಿಷಯ ಬಂದಿರುವುದರಿಂದ ಇದು ಪ್ರಾಚೀನ ದರ್ಶನ ಎಂದು ಹೇಳಬಹುದು.

ಚಾರ್ವಾಕ ದರ್ಶನ ಎಲ್ಲಾ ದರ್ಶನಗಳ ಪ್ರತಿಕಕ್ಷಿ ಅಥವಾ ವಿರೋಧಿ.

ತತ್ವ ಮೀಮಾಂಸೆ :

  • ೧ : ಭೂಮಿ, ವಾಯು, ಜಲ, ತೇಜಸ್ (ಅಗ್ನಿ) ಮೂಲ ತತ್ವಗಳು (ನಾಲ್ಕೇ ಮೂಲ ತತ್ವಗಳು -ಉಳಿದ ಎಲ್ಲಾ ದರ್ಶನಗಳಲ್ಲಿ ಆಕಾಶವೂ ಸೇರಿ ಐದು ತತ್ವಗಳು ;ಪಂಚ ಭೂತಗಳು) ಆಕಾಶ ೦ ಅಥವಾ ಶೂನ್ಯವಾದ್ದರಿಂದ ತತ್ವವಲ್ಲ. ಪೃಥಿವ್ಯಪ್ ತೇಜೋ ವಾಯುರಿತಿ ತತ್ವಾನಿ

ತತ್ಸಮುದಾಯೋ ಶರೀರೇಂದ್ರಿಯ ವಿಷಯ ಸಂಜ್ಞಾ ಇವುಗಳ ಸಂಯೋಗದಿಂದ ಮಾತ್ರಾ ಶರೀರ ಇಂದ್ರಿಯಗಳು. ಪ್ರತ್ಯೇಕ ಚೇತನದ ಅವಶ್ಯಕತೆ ಇಲ್ಲ. ಅದು ತನ್ನ ಸ್ವಭಾವದಿಂದ ಹುಟ್ಟುತ್ತದೆ. ಜಗತ್ತು ತಾನಾಗಿ ಹುಟ್ಟಿದೆ. ಶರೀರಕ್ಕಿಂತ ಬೇರೆಯಾದ ಆತ್ಮನಿಲ್ಲ. ; ಶರೀರವೇ ಆತ್ಮ ; ಉದಾಹರಣೆಗೆ -ನಾನು ದಪ್ಪಗಿದ್ದೇನೆ -(ಶರೀರವನ್ನೇನಾನುಎಂದು ಭಾವಿಸಿ ಹೇಳುತ್ತಾರೆ ,

ಚಾರ್ವಾಕರ ತರ್ಕ :-

೧. ಶರೀರದಿಂದಲೇ ಚೈತನ್ಯ ಉಂಟಾಗುವುದು. ಅನ್ನ ಪಾನದಿಂದ ಚೈತನ್ಯ ಹೆಚ್ಚುತ್ತದೆ. ಇಲ್ಲದಿದ್ದರೆ ಕ್ಷೀಣಿಸುತ್ತದೆ. ದೇಹ ಹುಟ್ಟಿದಾಗ ಚೈತನ್ಯ ಹುಟ್ಟಿ ಸತ್ತಾಗ ಅದೂ ಸಾಯುತ್ತದೆ. ಆದ್ದರಿಂದ ಪೂಜಾದಿಗಳಿಗೂ , ವೇದಗಳಿಗೂ ಅರ್ಥವಿಲ್ಲ. ೨. ಶ್ರಾದ್ಧದಲ್ಲಿ ಹಾಕಿದ ಪಿಂಡವು ಪರಲೋಕದಲ್ಲಿರುವವರಿಗೆ ತಲುಪುವುದಾದರೆ, ಪರ ಊರಿಗೆ ಹೋದವರಿಗೆ ಇಲ್ಲಿಯೇಊಟ ಹಾಕಬಹುದಲ್ಲವೇ? ೩. ಯಜ್ಞದಲ್ಲಿ ಕೊಲ್ಲಲ್ಪಟ್ಟ ಪ್ರಾಣಿಯು ಸ್ವರ್ಗಕ್ಕೆ ಹೋಗಬಹುದಾದರೆ ಯಜ್ಞದ ಯಜಮಾನನು. ತನ್ನ ತಂದೆಯನ್ನೇ ಏಕೆ ಯಜ್ಞಕ್ಕೆ ಬಲಿಕೊಡಬಾರದು ?

ಪ್ರಮಾಣಗಳು : (ತರ್ಕಕ್ಕೆ ಆಧಾರ)

  • (Epistemology)

೧. ಚಾರ್ವಾಕರಿಗೆ ಪ್ರತ್ಯಕ್ಷವೇ ಪ್ರಮಾಣ. ಏಕೆಂದರೆ ಇಂದ್ರಿಯಗಳಿಗೆ , ಅನುಭವಕ್ಕೆ ನಿಲುಕುವ ಸಂಗತಿಗಳಷ್ಟೇ ಪ್ರಧಾನ ಪ್ರಮಾಣ ಅಥವಾ ಆಧಾರ. ಅನುಮಾನ (iಟಿಜಿeಡಿeಟಿಛಿe ) ಶಾಸ್ತ್ರ, ಶಬ್ದ (ಅನುಭವಿಗಳಮಾತು), ನಮಗೆ ಸ್ವತಂತ್ರವಾಗಿ ಜ್ಞಾನವನ್ನು ಕೊಡಲಾರವು. ಅನುಮಾನಕ್ಕೆ ಉದಾಹರಣೆ : ದೂರದಲ್ಲಿ ಹೊಗೆಯನ್ನು ಅಲ್ಲಿ ಬೆಂಕಿ ಇದೆ ಎಂದು ಊಹಿಸುವುದು. ಒಂದು ಅಗಳು ಅನ್ನವನ್ನು ಹಿಚುಕಿ ನೋಡಿ ಬೆಂದಿದ್ದರೆ , ಎಲ್ಲವೂಬೆಂದಿದೆ ಎಂದು ತಿಳಿಯುವುದು. ಚವಾಕರು ಇದನ್ನು ಲೋಕ ವ್ಯವಹಾರಕ್ಕೆ ಸೀಮಿತ ಎನ್ನುತ್ತಾರೆ. ತತ್ವ ನಿರ್ಣಯಕ್ಕೆ ಪ್ರಯೋಜನವಿಲ್ಲವೆನ್ನುತ್ತಾರೆ. ಏಕೆಂದರೆ ಇದು ಸಂಭಾವನಾರೂಪದ್ದು ಙ(ಊಹೆ). ನಿಜವಾದರೂ ಆಗಬಹುದು ಅಥವಾ ಆಗದಿರಬಹುದು

  • ೨. ಚರ್ವಾಕರು - ಜಗತ್ತಿನ ನಿಯಮಗಳು ಕಾರ್ಯ ಕಾರಣ ನಿಮಿತ್ತವೆಂದು ಒಪ್ಪಲಾರರು. (ಕಾರಣವಿಲ್ಲದೆ -ಕಾರ್ಯವಿಲ್ಲ ಎಂಬ ನಿಯಮ); ಈ ಕಾರಣಕ್ಕಾಗಿ - ಈಕಾರ್ಯವಗುತ್ತದೆ ಎಂಬ ನಿಯಮ. ಏಕೆಂದರೆ ಪ್ರಕೃತಿಯು ಕಾರ್ಯ ಕಾರಣ ನಿಯಮದಂತೆ ನಡೆಯುವುದಿಲ್ಲ. ಪ್ರತಿಯೊಂದೂ ಅದರ ಸ್ವಭಾವದಂತೆ ನಡೆಯುವುದು.

ಅವರ ತತ್ವ : ಸುಖಕ್ಕೆ ಧರ್ಮವೇ ಕಾರಣವೆಂದಾಗಲೀ ದುಃಖಕ್ಕೆ ಅಧರ್ಮವೇ ಕಾರಣವೆಂದಾಗಲೀ ಹೇಲುವಂತಿಲ್ಲ. ಸುಖ ದುಃಖಗಳಿಗೆ ಸ್ವಭಾವವೇ ಕಾರಣ, ಕೋಗಿಲೆಯ ಮಧುರ ಸ್ವರಕ್ಕೆ : ನವಿಲಿನ ಚೆಂದಕ್ಕೆ ; ಹೂವಿನ ಸುವಾಸನೆಗೆ - ಸ್ವಭಾವವೇ ಕಾರಣ .

  • ೩. ಪ್ರತ್ಯಕ್ಷ ಮಾಡಿ ತೋರಿಸಬಹುದಾದ ಅನುಮಾನವನ್ನು ಒಪ್ಪಬಹುದು.
  • ೪. ಆಪ್ತ ವ್ಯಕ್ತಿಯ ಮಾತನ್ನು ಪ್ರಮಾಣವೆಂದು ಕೆಲವರು ಒಪ್ಪುವರು. ಆದರೆ ಚರ್ವಾಕರು ಒಪ್ಪುವುದಿಲ್ಲ. ಏಕೆಂದರೆ ಅದು ಪ್ರತ್ಯಕ್ಷದಿಂದಲೇ (ನೋಡಿದಾಗಲೇ ನಿಜವೆಂದು ಹೇಳಬಹುದು) ಸಿದ್ಧಿಸುತ್ತದೆ. ಉದಾಹರಣೆ : ಒಬ್ಬನು ಆಕಳು ಹಾಯುವುದಿಲ್ಲವೆಂದು ಹೇಳಿದರೆ. ಹತ್ತಿರ ಹೋದಾಗಲೇ ಸತಯ ಗೊತ್ತಾಗುವುದು.
  • ಆದ್ದರಿಂದ ಶಾಸ್ತ್ರ ಪುರಾಣಗಳನ್ನು ನಂಬುವುದಿಲ್ಲ ಅವು ಪ್ರಮಾಣವಾಗಲಾರವು. ಅವುಗಳನ್ನು ಪ್ರತ್ಯಕ್ಞ ತೋರಿಸುವಂತಿದ್ದರೆ ಮಾತ್ರ ಒಪ್ಪಬಹುದು.

ಜೀವನದ ಗುರಿ (ಆಚಾರ -ವಿಚಾರ)

  • ಕಾಮ ಏಕೈಕ ಪುರುಷಾರ್ಥ: ಕಾಮ ಎಂದರೆ ಆಸೆ ; ಆಸೆಗಳನ್ನು ಪೂರೈಸಿಕೊಂಡು ಸುಖವಾಗಿ ಬಾಳುವುದೇ ಜೀವನದ ಗುರಿ.

ಪ್ರಸಿದ್ಧ ಶ್ಲೋಕ :

ಯಾವಜ್ಜೀವೇತ್ ಸುಖಂ ಜೀವೇತ್ |
ಋಣಂ ಕೃತ್ವಾ ಘೃತಂ ಪಿಬೇತ್ ||
ಭಸ್ಮೀಭೂತಸ್ಯ ದೇಹಸ್ಯ |
ಪುನರಾಗಮನಂ ಕುತಃ ||
  • ಬದುಕಿರುವವರೆಗೂ ಸುಖವಾಗಿ ಬದುಕಬೇಕು. ಸಾಲವನ್ನು ಮಾಡಿಯಾದರೂ ತುಪ್ಪವನ್ನು ಕುಡಿಯಬೇಕು. (ಸತ್ತು) ಶರೀರವು ಸುಟ್ಟುಹೋದ ಮೇಲೆ ಮರಳಿಬಂದವರಾರು. ( ಮರಳಿಬಂದವರು ಇಲ್ಲ )
  • ಪ್ರಾಣಿಗಳ ಕಾಟವಿದೆಯೆಂದು ಬೀಜವನ್ನು ಬಿತ್ತದೆ ಇರುವುದಿಲ್ಲ. ದುಃಖಕ್ಕೆ ಹೆದರಿ ಸುಖವನ್ನು ತ್ಯಾಗ ಮಾಡಬಾರದು. ಪರಲೋಕದಲ್ಲಿ ಸುಖ ಸಿಗುವುದೆಂದು ಈಲೋಕದಲ್ಲಿಸುಖವನ್ನು ತ್ಯಾಗ ಮಾಡುವುದು ವ್ಯರ್ಥ .

ತಾತ್ಪರ್ಯ :

  • ಚಾರ್ವಾಕರು ಅನೀತಿಯಿಂದಾದರೂ ಸುಖವನ್ನು ಪಡೆಯಬೇಕೆಂದು ಉಪದೇಶಿಸುತ್ತಾರೆಂದು ಅಪವಾದವಿದೆ. ಆದರೆ ಹಾಗೆಂದುಹೇಳಲು ಬರುವುದಿಲ್ಲ.
(ಮುಂದುವರೆಯುವುದು)

ಬಾಹ್ಯ ಸಂಪರ್ಕಗಳು

ಆಧಾರ ಗ್ರಂಥಗಳು

೧.ಹಿಂದೂಧರ್ಮದ ಪರಿಚಯ: ಎದುರ್ಕಳ ಶಂಕರನಾರಾಯಣ ಭಟ್

  • ೧. ವಿಕಿಪೀಡಿಯಾ ತತ್ವ ಶಾಸ್ತ್ರದ ಫೈಲುಗಳು
  • ೨. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.]]
"https://kn.wikipedia.org/w/index.php?title=ಚಾರ್ವಾಕ&oldid=369057" ಇಂದ ಪಡೆಯಲ್ಪಟ್ಟಿದೆ