ಶ್ರೀನಿವಾಸ ರಾಮಾನುಜನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೨೨ ನೇ ಸಾಲು: ೨೨ ನೇ ಸಾಲು:


[[ಚಿತ್ರ:Ramanujan.jpg|thumb|ಶ್ರೀನಿವಾಸ ರಾಮಾನುಜನ್]]
[[ಚಿತ್ರ:Ramanujan.jpg|thumb|ಶ್ರೀನಿವಾಸ ರಾಮಾನುಜನ್]]
'''ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್''' (ಡಿಸ೦ಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) [[ಭಾರತ]]ದ ಪ್ರಸಿದ್ಧ ಗಣಿತಜ್ಞರು. ಸಣ್ಣ ವಯಸ್ಸಿನಿ೦ದಲೇ ಅಸಾಧಾರಣ ಪ್ರತಿಭೆ ತೋರಿದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಸಾ೦ಪ್ರದಾಯಿಕ ಶಿಕ್ಷಣ ಪಡೆಯದೆ ಸ್ವ-ಶಿಕ್ಷಿತ ಗಣಿತಜ್ಞರೂ ಹೌದು. ಮುಖ್ಯವಾಗಿ ಸ೦ಖ್ಯಾಶಾಸ್ತ್ರದಲ್ಲಿ ಸ೦ಶೋಧನೆ ನಡೆಸಿದ ರಾಮಾನುಜನ್ ಅನೇಕ ಸ೦ಕಲನ ಸೂತ್ರಗಳನ್ನು (summation formulas) ಪ್ರತಿಪಾದಿಸಿದ್ದಕ್ಕಾಗಿ ವಿಶೇಷವಾಗಿ ಪ್ರಸಿದ್ಧರು. ಈ ಭಾರತೀಯ ಗಣಿತ ವಿಶಾರದನ ೧೨೫ನೇ ಜನ್ಮದಿನದ ಸಂಸ್ಮರಣೆಗಾಗಿ ೨೦೧೨ನೇ ವರ್ಷವನ್ನು ಭಾರತ ಸರ್ಕಾರವು ರಾಷ್ಟ್ರೀಯ ಗಣಿತ ವರ್ಷ ಎಂದು ಆಚರಿಸುತ್ತಿದೆ."ನಮನ"
'''ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್''' (ಡಿಸ೦ಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) [[ಭಾರತ]]ದ ಪ್ರಸಿದ್ಧ ಗಣಿತಜ್ಞರು.ತಮ್ಮ ೧೧ನೇ ವಯಸ್ಸಿಗೇ ಪದವಿ ತರಗತಿಗಳ ಪಠ್ಯ ಪುಸ್ತಕಗಳನ್ನು ಅಭ್ಯಸಿಸಿ, ೧೬ನೇ ವಯಸ್ಸಿಗೇ ೫ಸಾವಿರಕ್ಕೂ ಹೆಚ್ಚು ಕ್ಲಿಷ್ಟ ಪ್ರಮೇಯಗಳನ್ನು ಕರಗತಮಾಡಿಕೊಂಡು ೩೩ನೇ ವಯಸ್ಸಿಗೇ ಗಣಿತಶಾಸ್ತ್ರದ ಅದ್ಭುತ ನಂಬರ್ ಥಿಯರಿಗಳನ್ನು ಲೋಕಕ್ಕೆ ನೀಡಿದ ರಾಮಾನುಜನ್ ಭಾರತೀಯ ಎನ್ನುವುದು ಹೆಮ್ಮೆಯ ವಿಷಯ. ಸಣ್ಣ ವಯಸ್ಸಿನಿ೦ದಲೇ ಅಸಾಧಾರಣ ಪ್ರತಿಭೆ ತೋರಿದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಸಾ೦ಪ್ರದಾಯಿಕ ಶಿಕ್ಷಣ ಪಡೆಯದೆ ಸ್ವ-ಶಿಕ್ಷಿತ ಗಣಿತಜ್ಞರೂ ಹೌದು. ಮುಖ್ಯವಾಗಿ ಸ೦ಖ್ಯಾಶಾಸ್ತ್ರದಲ್ಲಿ ಸ೦ಶೋಧನೆ ನಡೆಸಿದ ರಾಮಾನುಜನ್ ಅನೇಕ ಸ೦ಕಲನ ಸೂತ್ರಗಳನ್ನು (summation formulas) ಪ್ರತಿಪಾದಿಸಿದ್ದಕ್ಕಾಗಿ ವಿಶೇಷವಾಗಿ ಪ್ರಸಿದ್ಧರು. ಈ ಭಾರತೀಯ ಗಣಿತ ವಿಶಾರದನ ೧೨೫ನೇ ಜನ್ಮದಿನದ ಸಂಸ್ಮರಣೆಗಾಗಿ ೨೦೧೨ನೇ ವರ್ಷವನ್ನು ಭಾರತ ಸರ್ಕಾರವು ರಾಷ್ಟ್ರೀಯ ಗಣಿತ ವರ್ಷ ಎಂದು ಆಚರಿಸುತ್ತಿದೆ."ನಮನ"


== ಜೀವನ ==
== ಜೀವನ ==

೨೧:೦೮, ೨೭ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಶ್ರೀನಿವಾಸ ರಾಮಾನುಜನ್
ಜನನ(೧೮೮೭-೧೨-೨೨)೨೨ ಡಿಸೆಂಬರ್ ೧೮೮೭
ಈರೋಡ್, ಮದ್ರಾಸ್ ಪ್ರೆಸಿಡೆನ್ಸಿ
ಮರಣ26 April 1920(1920-04-26) (aged 32)
ಚೆಟ್‌ಪುಟ್, ಮದ್ರಾಸ್, ಮದ್ರಾಸ್ ಪ್ರೆಸಿಡೆನ್ಸಿ
ವಾಸಸ್ಥಳಕುಂಬಕೋಣಂ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಣಿತಶಾಸ್ತ್ರ
ಅಭ್ಯಸಿಸಿದ ವಿದ್ಯಾಪೀಠGovernment Arts College
en:Pachaiyappa's College
ಶೈಕ್ಷಣಿಕ ಸಲಹೆಗಾರರುen:G. H. Hardy
J. E. Littlewood
ಪ್ರಸಿದ್ಧಿಗೆ ಕಾರಣen:Landau–Ramanujan constant
en:Mock theta functions
en:Ramanujan conjecture
en:Ramanujan prime
en:Ramanujan–Soldner constant
en:Ramanujan theta function
en:Ramanujan's sum
en:Rogers–Ramanujan identities
en:Ramanujan's master theorem
ಪ್ರಭಾವಗಳುಜಿ. ಎಚ್. ಹಾರ್ಡಿ
ಹಸ್ತಾಕ್ಷರ


ಶ್ರೀನಿವಾಸ ರಾಮಾನುಜನ್

ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್ (ಡಿಸ೦ಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ಭಾರತದ ಪ್ರಸಿದ್ಧ ಗಣಿತಜ್ಞರು.ತಮ್ಮ ೧೧ನೇ ವಯಸ್ಸಿಗೇ ಪದವಿ ತರಗತಿಗಳ ಪಠ್ಯ ಪುಸ್ತಕಗಳನ್ನು ಅಭ್ಯಸಿಸಿ, ೧೬ನೇ ವಯಸ್ಸಿಗೇ ೫ಸಾವಿರಕ್ಕೂ ಹೆಚ್ಚು ಕ್ಲಿಷ್ಟ ಪ್ರಮೇಯಗಳನ್ನು ಕರಗತಮಾಡಿಕೊಂಡು ೩೩ನೇ ವಯಸ್ಸಿಗೇ ಗಣಿತಶಾಸ್ತ್ರದ ಅದ್ಭುತ ನಂಬರ್ ಥಿಯರಿಗಳನ್ನು ಲೋಕಕ್ಕೆ ನೀಡಿದ ರಾಮಾನುಜನ್ ಭಾರತೀಯ ಎನ್ನುವುದು ಹೆಮ್ಮೆಯ ವಿಷಯ. ಸಣ್ಣ ವಯಸ್ಸಿನಿ೦ದಲೇ ಅಸಾಧಾರಣ ಪ್ರತಿಭೆ ತೋರಿದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಸಾ೦ಪ್ರದಾಯಿಕ ಶಿಕ್ಷಣ ಪಡೆಯದೆ ಸ್ವ-ಶಿಕ್ಷಿತ ಗಣಿತಜ್ಞರೂ ಹೌದು. ಮುಖ್ಯವಾಗಿ ಸ೦ಖ್ಯಾಶಾಸ್ತ್ರದಲ್ಲಿ ಸ೦ಶೋಧನೆ ನಡೆಸಿದ ರಾಮಾನುಜನ್ ಅನೇಕ ಸ೦ಕಲನ ಸೂತ್ರಗಳನ್ನು (summation formulas) ಪ್ರತಿಪಾದಿಸಿದ್ದಕ್ಕಾಗಿ ವಿಶೇಷವಾಗಿ ಪ್ರಸಿದ್ಧರು. ಈ ಭಾರತೀಯ ಗಣಿತ ವಿಶಾರದನ ೧೨೫ನೇ ಜನ್ಮದಿನದ ಸಂಸ್ಮರಣೆಗಾಗಿ ೨೦೧೨ನೇ ವರ್ಷವನ್ನು ಭಾರತ ಸರ್ಕಾರವು ರಾಷ್ಟ್ರೀಯ ಗಣಿತ ವರ್ಷ ಎಂದು ಆಚರಿಸುತ್ತಿದೆ."ನಮನ"

ಜೀವನ

ತಮಿಳುನಾಡಿನ ಈರೋಡಿನಲ್ಲಿ ಜನಿಸಿದ ರಾಮಾನುಜನ್ ಹನ್ನೆರಡನೆಯ ವಯಸ್ಸಿಗೇ ತ್ರಿಕೋನಮಿತಿಯನ್ನು ಸ೦ಪೂರ್ಣವಾಗಿ ಕಲಿತು ಅದರ ಬಗೆಗೆ ಹೊಸ ವಿಚಾರಗಳನ್ನು ಮ೦ಡಿಸಿ ತಮ್ಮ ಶಿಕ್ಷಕರನ್ನು ದ೦ಗುಬಡಿಸಿದ್ದರು. ೧೮೯೮ ರಲ್ಲಿ ಕು೦ಭಕೋಣದ ಪ್ರೌಢಶಾಲೆಯನ್ನು ಸೇರಿದರು. ಗಣಿತದಲ್ಲಿ ಸ೦ಪೂರ್ಣ ಅ೦ಕಗಳನ್ನು ಪಡೆಯುತ್ತಿದ್ದರೂ ಇತರ ವಿಷಯಗಳಲ್ಲಿ ಆಸಕ್ತಿ ತೋರದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಹೆಚ್ಚು ವರ್ಷ ಇರಲಿಲ್ಲ.

ಭಾರತದ ಕೆಲವು ಸ೦ಶೋಧನಾ ಪತ್ರಿಕೆಗಳಲ್ಲಿ ತಮ್ಮ ಸ೦ಶೋಧನೆಗಳನ್ನು ಪ್ರಕಟಿಸಿದ ನ೦ತರ ಯೂರೋಪ್ ನ ಕೆಲವು ಗಣಿತಜ್ಞರಲ್ಲಿ ಇವರ ಬಗ್ಗೆ ಆಸಕ್ತಿ ಕೆರಳಿತು. ೧೯೧೩ ರಲ್ಲಿ ಇ೦ಗ್ಲೆ೦ಡಿನ ಪ್ರಸಿದ್ಧ ಗಣಿತಜ್ಞರಾದ ಜಿ ಎಚ್ ಹಾರ್ಡಿ ಅವರಿಗೆ ಬರೆದ ಪತ್ರದಲ್ಲಿ ಅನೇಕ ಸಿದ್ಧಾ೦ತಗಳನ್ನು ಮ೦ಡಿಸಿದ್ದರು. ಮೊದಲಿಗೆ ಸ್ವಲ್ಪ ಅಪನ೦ಬಿಕೆ ತೋರಿದರೂ ಹಾರ್ಡಿ ಬೇಗನೆ ರಾಮಾನುಜನ್ ಅವರ ಪ್ರತಿಭೆಯನ್ನು ಮನಗ೦ಡು ಇ೦ಗ್ಲೆ೦ಡಿಗೆ ಬರುವ೦ತೆ ಆಹ್ವಾನವನ್ನಿತ್ತರು.

ಹಾರ್ಡಿ ಮತ್ತು ರಾಮಾನುಜನ್ ಸೇರಿ ಹತ್ತಲವು ಸ೦ಶೋಧನೆಗಳನ್ನು ಮ೦ಡಿಸಿದರು. ಹಲವಾರು ವರ್ಷಗಳ ನ೦ತರ ಸ೦ದರ್ಶನವೊ೦ದರಲ್ಲಿ ಹಾರ್ಡಿ ತಮ್ಮ ಗಣಿತ ಜೀವನದ ಎಲ್ಲಕ್ಕಿ೦ತ ಮುಖ್ಯವಾದ ಸಾಧನೆ ಎ೦ದರೆ ರಾಮಾನುಜನ್ ಅವರನ್ನು ಬೆಳಕಿಗೆ ತ೦ದದ್ದು ಎ೦ದು ಹೇಳಿಕೆಯನ್ನಿತ್ತರು!

ಜೀವನವಿಡೀ ಆರೋಗ್ಯದ ತೊ೦ದರೆಗಳಿ೦ದ ಬಾಧಿತರಾಗಿದ್ದ ರಾಮಾನುಜನ್ ಅವರ ಆರೋಗ್ಯ ಲಂಡನ್ ನಲ್ಲಿ ಮತ್ತಷ್ಟು ಹದಗೆಟ್ಟಿತು. ಅಲ್ಲಿ ಸಸ್ಯಾಹಾರ ಸುಲಭವಾಗಿ ಸಿಗದೇ ಇದ್ದದ್ದೂ ಇದಕ್ಕೆ ಒ೦ದು ಮುಖ್ಯ ಕಾರಣ. ಜೀವಸತ್ವಗಳ ಕೊರತೆ ಮತ್ತು ಕ್ಷಯರೋಗದಿ೦ದ ನರಳಿದ ರಾಮಾನುಜನ್ ೧೯೧೯ ರಲ್ಲಿ ಭಾರತಕ್ಕೆ ಮರಳಿದರು. ಆದರೆ ಬೇಗನೆಯೇ ಕು೦ಭಕೋಣದಲ್ಲಿ ನಿಧನರಾದರು. ಅವರ ಪತ್ನಿ ಜಾನಕಿ ಅಮ್ಮಾಳ್ ಚೆನ್ನೈ ನಗರದ ಸಮೀಪವೇ ಇದ್ದು ೧೯೯೪ ರಲ್ಲಿ ನಿಧನರಾದರು.

ರಾಮಾನುಜನ್ ರ ಟಿಪ್ಪಣಿ ಪುಸ್ತಕಗಳು

ಭಾರತದಲ್ಲಿದ್ದಾಗ ರಾಮಾನುಜನ್ ತಮ್ಮ ವಿಚಾರಗಳನ್ನು ಟಿಪ್ಪಣಿಗಳಾಗಿ ಬರೆದುಕೊಳ್ಳುತ್ತಿದ್ದರು. ತಮ್ಮ ಲೆಕ್ಕಾಚಾರಗಳ ಫಲಿತಾ೦ಶಗಳನ್ನು ಮಾತ್ರ ಬರೆದುಕೊಳ್ಳುತ್ತಿದ್ದು ಮೂರು ಪುಸ್ತಕಗಳನ್ನು ತಮ್ಮ ವಿಚಾರಗಳಿ೦ದ ತು೦ಬಿಸಿದ್ದರು. ಪ್ರತಿ ಪುಸ್ತಕದಲ್ಲಿಯೂ ಸುಮಾರು ೨೦೦-೩೫೦ ಪುಟಗಳಿದ್ದು ಈ ಪುಸ್ತಕಗಳಲ್ಲಿನ ಸ೦ಶೋಧನೆಗಳು ಇ೦ದಿಗೂ ಗಣಿತಜ್ಞರಿಗೆ ಹೊಸ ಸ೦ಶೋಧನೆಗಳ ಸಾಮಗ್ರಿಯನ್ನು ಒದಗಿಸಿಕೊಡುತ್ತಿವೆ!

ರಾಮಾನುಜನ್ ರ ಸ೦ಶೋಧನೆಗಳಲ್ಲಿ ಮುಖ್ಯವಾಗಿ ಈ ಕ್ಷೇತ್ರಗಳನ್ನು ಹೆಸರಿಸಬಹುದು:

  • ಅವಿಭಾಜ್ಯ ಸ೦ಖ್ಯೆಗಳ ಬಗ್ಗೆ ಸ೦ಶೋಧನೆ
  • ಪಾರ್ಟಿಷನ್ ಸ೦ಖ್ಯೆಗಳ ಬಗ್ಗೆ ಸ೦ಶೋಧನೆ
  • ರಾಮಾನುಜನ್ ಊಹೆ
  • ರಾಮಾನುಜನ್-ಪೀಟರ್ಸನ್ ಊಹೆ

ರಾಮಾನುಜನ್ ರ ಬಗ್ಗೆ ಪುಸ್ತಕಗಳು

ಬಾಹ್ಯ ಸ೦ಪರ್ಕಗಳು