ದಶರಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚು Robot: Modifying hi:राजा दशरथ→hi:दशरथ |
LaaknorBot (ಚರ್ಚೆ | ಕಾಣಿಕೆಗಳು) ಚು r2.7.3rc2) (Robot: Adding nn:Dasaratha |
||
೬೧ ನೇ ಸಾಲು: | ೬೧ ನೇ ಸಾಲು: | ||
[[ml:ദശരഥൻ]] |
[[ml:ദശരഥൻ]] |
||
[[mr:दशरथ]] |
[[mr:दशरथ]] |
||
[[nn:Dasaratha]] |
|||
[[pt:Dasharatha]] |
[[pt:Dasharatha]] |
||
[[ru:Дашаратха]] |
[[ru:Дашаратха]] |
೧೭:೧೨, ೨೫ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ
ಇಕ್ಷ್ವಾಕುವಂಶದಲ್ಲಿ ಬಂದ ಮಹಾರಾಜ ದಶರಥ. ಅವನಾಳಿದ ರಾಜ್ಯದ ಹೆಸನು ಅಯೋಧ್ಯೆ. ಸರಯೂ ನದಿತೀರದಲ್ಲಿದೆ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ)
ಸಮೃದ್ಧವಾದ ರಾಜ್ಯ, ಸಮರ್ಥ ಮಂತ್ರಿಗಳು, ವಸಿಷ್ಠ ವಾಮದೇವರು ತಪಸ್ವಿಗಳಾದ ಗುರುಗಳು, ಪುರೋಹಿತರು. ಮನಮೆಚ್ಚಿದ ಮೂವರು ಮಡದಿಯರು. ಕೌಸಲ್ಯಾ, ಸುಮಿತ್ರಾ, ಕೈಕೇಯಿ.
ಇಷ್ಟೆಲ್ಲ ಇದ್ದರೂ ರಾಜನಿಗೆ ಮಕ್ಕಳಿಲ್ಲ ಎಂಬ ಚಿಂತೆ ಸದಾ ಕಾಡುತ್ತಿತ್ತು. ಅದರ ಪರಿಹಾರಕ್ಕಾಗಿ ಗುರುಗಳನ್ನು ಪ್ರಾರ್ಥಿಸಿದ. ಗುರುಗಳು ಸೂಚಿಸಿದ ಉಪಾಯದಂತೆ ಯಾಗ ಮಾಡಿದ. ಅದರ ಫಲದಿಂದ ಮಕ್ಕಳಾದರು. ರಾಮ. ಲಕ್ಷಣ. ಭರತ. ಶತ್ರುಘ್ನ. ರಾಜ ರಾಣಿಯರು ಪರಮಾನಂದ ಭರಿತರಾದರು. ಮಕ್ಕಳು ದೊಡ್ಡವರಾದರು. ಅವರ ವಿವಾಹವಾಯಿತು. ಎಲ್ಲರು ಸಂತೋಷದಿಂದ ಇದ್ದರು.
ಈ ಪ್ರಸಂಗದಲ್ಲಿ ರಾಮನಿಗೆ ಯುವರಾಜನ ಪಟ್ಟಕಟ್ಟಲು ಸಂಕಲ್ಪಿಸಿದ. ಆದರೆ ಹಿಂದೆ ತಾನೇ ತನ್ನ ಹೆಂಡತಿ ಕೈಕೇಯಿಗೆ ಕೊಟ್ಟ ವಚನವನ್ನು ನಡೆಸಿಕೊಡಲು ಅವಳು ಕೇಳಿದಳು. ನಡೆಸಿದರೆ ರಾಜ್ಯದವಿರೋಧ, ನಡೆಸಿದರೆ ಕೊಟ್ಟ ಮಾತು ಅಸತ್ಯವಾಗುತ್ತದೆ. ಆದರೆ ಅವನ ರಾಜ್ಯದಲ್ಲಿ ಇರುವ ಯಾರೂ ಕೂಡ ಅಸತ್ಯವನ್ನು ಮಾತನಾಡುತ್ತಿರಲಿಲ್ಲ . ಕ್ರೋಧಾತ್ ಕಾಮಾರ್ಥಹೇತೋರ್ವಾ ನ ಬ್ರೂಯಿರನೃತಂ ವಚಃ ಹೀಗಿರುವಾಗ ರಾಜನಾದ ತಾನು ಕೊಟ್ಟ ಮಾತಿಗೆ ತಪ್ಪುವದು ಹೇಗೆ ಸಾಧ್ಯ? ಹೀಗೆ ಅನೇಕ ಕಾರಣಗಳಿ೦ದ ರಾಮನಿಗೆ ಯೌವರಾಜ್ಯವನ್ನು ಕೊಡುವದು ಸಾಧ್ಯವಾಗಲಿಲ್ಲ. ರಾಮಕಾಡಿಗೆ ಹೋದ. ಅದೇ ದುಃಖದಲ್ಲಿ ದಶರಥರಾದ ಮೃತನಾದ.
ಮಹಾಬ್ರಾಹ್ಮಣ ಕುಮಾರನಾದ ಶ್ರವಣಕುಮಾರನ ಶಾಪವೇ ಇದಕ್ಕೆಲ್ಲ ನಿಮಿತ್ತ.
ದಶರಥರಾಜನ ಜೀವನದಲ್ಲಿ ನಡೆದ ಕೆಲವೊಂದು ಅದೃಷ್ಟ ದುರದೃಷ್ಟದ ಕೆಲವು ಪ್ರಸಂಗಗಳು (ನನಗೆ ತಿಳಿದಂತೆ)
1 - ಹತ್ತೂ ದಿಕ್ಕುಗಳಿಗೆ ರಥವನ್ನು ಓಡಿಸುವ ಸಾಮರ್ಥ್ಯ ಪಡೆದದ್ದು ಅದೃಷ್ಟವೋ? ದುರದೃಷ್ಟವೋ?
(ಹತ್ತೂ ದಿಕ್ಕುಗಳಿಗೆ ರಥವನ್ನು ಓಡಿಸುವ ಸಾಮರ್ಥ್ಯ ಇರುವದರಿಂದಲೇ ದಾನವರೊಡನೆ ಯುದ್ಧವಾಡಲು ಹೋಗಿ, ಕೈಕೇಯಿಯ ಸಹಾಯ ಪಡೆದು, ಅಲ್ಲಿಯೇ ಅವಳಿಗೆ ವಚನವನ್ನು ಕೊಟ್ಟದ್ದು)
2 - ಸಕಲಚರಾಚರ ಸೃಷ್ಟಿಕರ್ತೃವಾದ ಜಗದೊಡೆಯನನ್ನು ಮಗನಾಗಿ ಪಡೆದದ್ದು ಅದೃಷ್ಟವಲ್ಲವೇ?
3 - ಜಗನ್ನಾಥನನ್ನು ಹಿರಿಯ ಮಗನಾಗಿ ಪಡೆದಮೇಲೇ ಯೌವರಾಜ್ಯವನ್ನು ಕೊಡಲೂ ಆಗಲಿಲ್ಲ. ಇದು ದುರದೃಷ್ಟವಲ್ಲವೇ?
4 - ಅತ್ಯಂತ ವೈಭವೋಪೇತವಾದ, ಸಮೃದ್ಧವಾದ, ಸಮುದ್ರಯಪರ್ಯಂತವಾದ, ಇಕ್ಷ್ವಾಕುವಿನಿಂದ ಬಂದ ಮಹಾರಾಜ್ಯ ಹೊರೆತದ್ದು ಅದೃಷ್ಟವಲ್ಲವೇ?
5 - ಸಾತ್ವಿಕಗುಣದ, ಮೆತ್ತನೆಯ ಸ್ವಭಾವದ, ಕೊನೆಯವರೆಗೂ ಗಂಡನ ಸೇವೆ ಮಾಡಿ ಮಹಾಪತಿವೃತೆ ಎನಿಸಿಕೊಂಡ ಕೌಸಲ್ಯೆ ಸುಮಿತ್ರೆಯಂತಹ ಮುದ್ದು ಮಡದಿಯರು ದೊರೆತದ್ದು ಅದೃಷ್ಟವೇ ಸರಿ.
6 - ಮೊದಲೆಲ್ಲ ಪ್ರೀತಿಮಾಡಿ, ರಾಜನ ಮನವೊಲಿಸಿ, ಅವನ ಪ್ರೀತಿಪಾತ್ರಳಾಗಿ, ಅವನಿಂದ ರಾಜ್ಯದ ಸಕಲ ಸುಖಗಳನ್ನು ಸೂರೆಗೈದು, ಮುಂದೊಂದು ದಿನ ಗಂಡ ಯುದ್ಧಕ್ಕೆ ಹೋದಾಗ ಅವನ ಜೊತೆಗೆ ಹೋಗಿ ಪಟ್ಟದರಸಿಯಾಗದಿದ್ದರೂ ದಿಟ್ಟ ವೀರಳಾಗಿ ಹೋರಾಡಿ ಗೆಲುವು ತಂದಿತ್ತು, ಪ್ರಿಯೆ ನಿನ್ನ ಎರಡು ಆಸೆಗಳನ್ನು ನಾನು ಪೂರೈಸುತ್ತೇನೆ ಎಂಬುದಾಗಿ ವಚನ ಪಡೆದು, ಕೊನೆಗೊಂದು ದಿನ ಕ್ರುದ್ರದಾಸಿಯ ಪ್ರೇರಣೆಯಂತೆ ಹೇ ರಾಜ ನೀನು ನನಗೆ ಕೊಟ್ಟ ವಚನವನ್ನು ಸತ್ಯ ಮಾಡು ಎಂಬುದಾಗಿ ಆಗ್ರಹಿಸಿ, ಕೇಳಬಾರದ್ದನ್ನು ಕೇಳಿ, ವಿಶ್ವವೆಲ್ಲ ಖಂಡಿಸುವ, ಇಂಥದೊಂದು ನಡೆಯಬಹುದೆಂದು ಯಾರೂ ನಿರೀಕ್ಷಿಸಿರಲಾರದ ಘಟನೆಗೆ ಪ್ರಧಾನ ಕಾರಣಳಾಗಿ, ಅಯೋಧ್ಯೆಯ ಸಂತೋಷವನ್ನೆಲ್ಲ ಮುಂದೆ ಶ್ರೀರಾಮನು ರಾಜನಾಗುವವರೆಗೆ ಯಾರಿಗೂ ಸಿಗದಂತೆ ಅಪಹಾರ ಮಾಡಿದ, ದಶರಥನೆಂಬ ಅಯೋಧ್ಯೆಯ ಮುಕುಟಮಣಿಯನ್ನು, ಅದಕ್ಕಿಂತ ಮುಖ್ಯವಾಗಿ ತನ್ನ ಸೌಭಾಗ್ಯದ ಪ್ರತೀಕವಾದ ಮಾಂಗಲ್ಯವನ್ನು ತನ್ನ ಕೈಯಾರೆ ತಾನೇ ಕಳೆದುಕೊಂಡ, ಆಳಿನ ಮಾತು ಕೇಳಿ ಬಾಳನ್ನು ಹಾಳು ಮಾಡಿಕೊಂಡ ಕೈಕೇಯಿಯಂತಹ ಮಡದಿಯನ್ನು ಪಡೆದದ್ದು ದುರದೃಷ್ಟವಲ್ಲವೇ?
ಇಷ್ಟೆಲ್ಲ ಇದ್ದರೂ ಶ್ರೀರಾಮದೇವರ ಅನುಗ್ರಹದಿಂದ ಅವನು ಸದ್ಗತಿಯನ್ನು ಹೊಂದಿದ.
ಪ೦. ಸತ್ಯಧ್ಯಾನಾಚಾರ್ಯ ಜೊಶಿ, ಸತ್ಯಧ್ಯಾನ ವಿದ್ಯಾಪೀಠ, ಡಾ. ಅ೦ಬೇಡಕರ್ ರೋಡ, ಮು೦ಬಯಿ.