ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Robot: Adding pa:ਇਸਲਾਮ
ಚು r2.7.3) (Robot: Adding kaa:İslam dini
೨೬೦ ನೇ ಸಾಲು: ೨೬೦ ನೇ ಸಾಲು:
[[jv:Islam]]
[[jv:Islam]]
[[ka:ისლამი]]
[[ka:ისლამი]]
[[kaa:İslam dini]]
[[kab:Islam]]
[[kab:Islam]]
[[kg:Kisilamu]]
[[kg:Kisilamu]]

೨೩:೫೩, ೧೬ ಜನವರಿ ೨೦೧೩ ನಂತೆ ಪರಿಷ್ಕರಣೆ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಇಸ್ಲಾಂ ಧರ್ಮವು ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾಗಿದೆ.

ಇಸ್ಲಾಂ ಎಂದರೇನು?

ಅರಬೀ ಭಾಷೆಯ'ಇಸ್ಲಾಂ'ಎಂಬ ಪದಕ್ಕೆ ನಿಘಂಟುಗಳಲ್ಲಿ ಅನುಸರಣೆ, ವಿಧೇಯತೆ,ಸಮರ್ಪಣೆ ಎಂಬರ್ಥಗಳಿವೆ. ಅಲ್ಲಾಹನ ಅನುಸರಣೆ ಮಾಡುವುದು, ಆತನಿಗೆ ವಿಧೇಯತೆ ತೋರುವುದು ಮತ್ತು ಸರ್ವಸ್ವವನ್ನೂ ಆತನಿಗಾಗಿ ಸಮರ್ಪಿಸುವುದನ್ನು ಇಲ್ಲಿ ಇಸ್ಲಾಂ ಎಂದು ಕರೆಯಲಾಯಿತು. ಹೌದು,ಅಲ್ಲಾಹನ ಸಾನಿಧ್ಯದಲ್ಲಿ ಸಂಪೂರ್ಣ ಸಮರ್ಪಣೆಯ ಹೆಸರೇ ಇಸ್ಲಾಂ ಆಗಿದೆ. ಆತ್ಮ ಮತ್ತು ಶರೀರದ ಸಂಪೂರ್ಣ ಸಮರ್ಪಣೆ.ಮನುಷ್ಯ ತನ್ನ ಜೀವನದ ಪ್ರತಿಯೊಂದು ರಂಗದಲ್ಲಿಯೂ ಅಲ್ಲಾಹನ ಆದೇಶ, ನಿರ್ದೇಶಗಳನ್ನು ಪಾಲಿಸಬೇಕೆಂದು ಇಸ್ಲಾಂ ಆಶಿಸುತ್ತದೆ. ಶಿರವನ್ನು ಬಾಗಿಸಿದವನು ಮನವನ್ನೂ ಬಾಗಿಸಬೇಕೆಂದು ಅದು ಹೇಳುತ್ತದೆ. ಅಲ್ಲಾಹನ ಆದೇಶ ಗಳಿಗೆ ವಿರುದ್ಧವಾಗಿರುವ ಎಲ್ಲ ವಿಧ ಆಚಾರ-ವಿಚಾರ,ಸಂಪ್ರದಾಯ ಮತ್ತು ದೇಹೇಚ್ಛೆಗಳನ್ನೂ ಮೆಟ್ಟಿ ನಿಲ್ಲಬೇಕೆಂದು ಇಸ್ಲಾಂ ಆದೇಶಿಸುತ್ತದೆ. ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ ಅವನ ಕಾನೂನುಗಳಿಗೆ ಬದ್ಧನಾಗಿ ಜೀವಿಸಬೇಕು. ವಿಧೇಯತೆಗೆ ಅರ್ಹ ಅಲ್ಲಾಹನು ಮಾತ್ರನಾಗಿದ್ದಾನೆ. ಇಸ್ಲಾಂ ಸ್ವೀಕರಿಸುವುದೆಂದರೆ ತನ್ನನ್ನು ದೇಹೇಚ್ಛೆಗಳಿಂದಲೂ,ಅಲ್ಲಾಹೇತರ ದೈವಿಕ ಶಕ್ತಿಗಳ ನಂಬಿಕೆಯಿಂದಲೂ ಮುಕ್ತಗೊಳಿಸಿ ಅಲ್ಲಾಹನ ಮಾತ್ರ ಅಧೀನತೆಯನ್ನು ಸ್ವೀಕರಿಸುವುದಾಗಿದೆ. ಇಸ್ಲಾಮನ್ನು ಪ್ರವೇಶಿಸುವಾಗ ಹೇಳುವ 'ಲಾ ಇಲಾಹ ಇಲ್ಲಲ್ಲಾಹು'ಎಂಬ ಪವಿತ್ರ ವಚನದ ತಾತ್ಪರ್ಯವೂ ಇದೇ ಆಗಿರುತ್ತದೆ.

ಇಸ್ಲಾಂ ಎಂಬ ಪದಕ್ಕಿರುವ ಇನ್ನೊಂದರ್ಥ ಶಾಂತಿ ಮತ್ತು ಸಮಾಧಾನ ಎಂದಾಗಿದೆ. ಅಲ್ಲಾಹನ ನಿಯಮ ಗಳ ಪಾಲನೆ ಮತ್ತು ಆತನ ಕಲ್ಪನೆಗಳ ಅನುಸರಣೆ ಸಂಘರ್ಷ ರಹಿತ ಜೀವನ ನಡೆಸಲು ಅನುಕೂಲಕರ ವಾತಾವರಣವನ್ನು ಸ್ರಷ್ಟಿ ಸುತ್ತದೆ. ಕುಟುಂಬ, ಸಮಾಜ ಮತ್ತು ರಾಷ್ಟ್ರದಲ್ಲೂ ಸಮಾಧಾನ ನೆಲೆಸುತ್ತದೆ. ಹ್ರದಯವು ನೆಮ್ಮದಿಯ ತಾಣವಾಗಿ ಬಿಡುತ್ತದೆ. ಸ್ವಲ್ಪತನ್ನ ಸುತ್ತಮುತ್ತಲಿನ ಜಗತ್ತನ್ನೊಮ್ಮೆ ಗಮನಿಸಿ ನೋಡಿ ಸೂರ್ಯ, ಚಂದ್ರ, ಭೂಮಿ, ನಕ್ಷತ್ರ ಮತ್ತು ವಿಶ್ವದಲ್ಲಿರುವ ಅಸಂಖ್ಯ ಅಂಗಗಳೆಲ್ಲವೂ ಸೌಹಾರ್ದ ಯುತ ವಾಗಿ,ಶಾಂತ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆಯಾದರೆ ಅವೆಲ್ಲವೂ ಮುಸ್ಲಿಂ ಆಗಿದೆಯೆಂದರ್ಥ ಇದು ಅವೆಲ್ಲವೂ ಒಬ್ಬನೇ ದೇವನ ನಿಯಂತ್ರಣದಲ್ಲಿರುವುದನ್ನು ಸಾಬೀತು ಪಡಿಸುತ್ತದೆ . ಆತನಿಗೆ ವಿಧೇಯತೆ ತೋರಿ ಅವನನ್ನು ಅನುಸರಿಸುವುದರಿಂದಲೇ ಇಲ್ಲಿ ಶಾಂತಿ ನೆಲೆಸಿರುವುದು.ಇದೇ ವಾಸ್ತವಿಕತೆ ಯನ್ನು ಪವಿತ್ರ ಕುರ್ಆನ್ ಅತ್ಯಂತ ಮನೋಜ್ಞವಾಗಿ ಈ ರೀತಿ ವಿವರಿಸುತ್ತದೆ.

"ಭೂಮಿ ಆಕಾಶಗಳಲ್ಲಿ ಏಕೈಕ ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಇವೆರಡರ ವ್ಯವಸ್ಥೆಯೂ ಕೆಟ್ಟು ಹೋಗುತ್ತಿತ್ತು. ಆದುದರಿಂದ ವಿಶ್ವ ಸಿಂಹಾಸನದ ಪ್ರಭುವಾಗಿರುವ ಅಲ್ಲಾಹ್ ಇವರು ಹೊರಿಸುವ ಆರೋಪಗಳಿಂದ ಪರಿಶುದ್ಧನಾಗಿರುತ್ತಾನೆ.
ಪವಿತ್ರಕುರ್ಆನ್:ಅಧ್ಯಾಯ21,ಸೂಕ್ತ 22)

ಭೂಮಿಯ ಮೇಲೆ ಈಗ ತಾಂಡವಾಡುತ್ತಿರುವ ಅರಾಜಕತೆ,ಅಶಾಂತಿ ಮತ್ತು ಅಸಮಾಧಾನಕ್ಕೆ ಅಲ್ಲಾಹೇತರ ನಿಯಮ, ನಿರ್ದೇಶ ಮತ್ತು ಮನುಷ್ಯ ನಿರ್ಮಿತ ಕಾನೂನುಗಳೇ ಮೂಲ ಕಾರಣ ವಾಗಿದೆ. ನಿಯಮ ನಿರ್ಮಿಸುವ ಅಧಿಕಾರ ಕೇವಲ ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುತ್ತದೆ. 'ಯಾರೂ ಯಾರಿಗೂ ನಿಯಮ ನಿರ್ಮಿಸದಿರಿ, ಎಲ್ಲರೂ ಸ್ರಷ್ಟಿಕರ್ತನೂ,ಜಗದೊಡೆಯನೂ ಆದ ಅಲ್ಲಾಹನ ನಿಯಮಗಳನ್ನು ಮಾತ್ರ ಪಾಲಿಸಿರಿ' ಎಂದು ಇಸ್ಲಾಂ ಸಾರಿ ಹೇಳುತ್ತದೆ. ಅಲ್ಲಾಹನು ನೀಡಿದ ಜೀವನ ವ್ಯವಸ್ಥೆಯನ್ನು ಮನಃ ಪೂರ್ವಕ,ಪೂರ್ಣ ಸ್ವತಂತ್ರನಾಗಿ ಸ್ವೀಕರಿಸಿ ಅದನ್ನನುಸರಿಸುವ ಪ್ರತಿಜ್ಞೆ ಮಾಡಿದವನೇ ಯಥಾರ್ಥದಲ್ಲಿ ಮುಸ್ಲಿಂ ಆಗಿರುತ್ತಾನೆ.

ಮೂಲಭೂತ ವಿಶ್ವಾಸಗಳು

ಏಕದೇವ ವಿಶ್ವಾಸ

ಏಕದೇವ ವಿಶ್ವಾಸವು ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಮೊದಲನೆ ಯದಾಗಿದೆ.ಈ ಜಗತ್ತು ಮತ್ತದರಲ್ಲಿರುವ ಸಕಲ ವಸ್ತುಗಳೂ ಏಕ ಸ್ರಷ್ಟಿಕರ್ತನ ಸ್ರಷ್ಟಿಗಳಾಗಿವೆ, ಸಮಸ್ತ ವಿಶ್ವದ ಪರಿಪಾಲಕನೂ, ಒಡೆಯನೂ, ಅಧಿಪತಿಯೂ ಅವನೇ ಆಗಿರುತ್ತಾನೆ. ಆದುದರಿಂದ ಅವನೊಬ್ಬನೇ ಎಲ್ಲ ವಿಧ ಆರಾಧನೆ ಮತ್ತು ಅರ್ಪಣೆಗಳಿಗೆ ಅರ್ಹನಾದವನು, ಅವನ ಹೊರತು ಪೂಜೆ ಮತ್ತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ.ಅವನಲ್ಲದೆ ದಾಸ್ಯ ಮತ್ತು ಅನುಸರಣೆಗೆ ಯೋಗ್ಯ ಯಾರೂ ಇಲ್ಲ. ಅವನೊಂದಿಗೆ ಭಾಗೀ ದಾರನಾಗಿ ಯಾರೂ ಇಲ್ಲ. ಎಲ್ಲರೂ ಆತನ ಆಶ್ರಿತರು,ಅವನಿಂದ ಸಹಾಯ ಯಾಚಿಸಲು ನಿರ್ಬಂಧಿತರು. ಅವನು ಭೌತಿಕವಾದ ಒಂದು ವಸ್ತು ಅಲ್ಲದಿರುವುದರಿಂದ ಅವನಿಗೆ ನಿರ್ದಿಷ್ಟ ಬಣ್ಣ,ರೂಪ ಮತ್ತು ಸ್ಥಳ ಎಂಬ ಬಂಧನಗಳಿಲ್ಲ.ಆದ್ದರಿಂದ ಮಾನವ ಕಣ್ಣಿಗೆ ಆತನನ್ನು ನೋಡಲು ಸಾಧ್ಯವಿಲ್ಲ . ಪ್ರವಾದಿ ಇಬ್ರಾಹೀಂ(ಅ)ರ ಘಟನೆಯನ್ನು ಲ್ಲೇಖಿಸಿ ಪವಿತ್ರ ಕುರ್ಆನ್ ಹೇಳುತ್ತದೆ:

"ನಾವು ಇಬ್ರಾಹೀಮರಿಗೆ ಇದೇ ರೀತಿಯಲ್ಲಿ ಭೂಮಿ-ಆಕಾಶಗಳ ಸಾಮ್ರಾ‎ಜ್ಯ ವ್ಯವಸ್ಥೆಯನ್ನು ತೋರಿಸಿ ಕೊಡುತ್ತಿದ್ದೆವು.ಅವರು ದೃಢ ವಿಶ್ವಾಸವುಳ್ಳವರಾಗಬೇಕೆಂದು. ಒಮ್ಮೆ ರಾತ್ರಿಕಾಲವು ಅವರನ್ನಾವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು.'ಇದು ನನ್ನ ಪ್ರಭು 'ಎಂದರು.ಆದರೆ ಅದು ಅಸ್ತಮಿಸಿದಾಗ 'ನಾನು ಅಸ್ತಮಿಸುವವರಿಗೆ ಮಾರು ಹೋಗುವುದಿಲ್ಲ '

ಎಂದರು. ಅನಂತರ ಚಂದ್ರವು ಪ್ರಕಾಶಿಸುತ್ತಿರುವುದನ್ನು ಕಂಡಾಗ'ಇದು ನನ್ನ ಪ್ರಭು'ಎಂದರು.ಆದರೆ ಅದೂ ಮುಳುಗಿ ದಾಗ'ನನ್ನ ಪ್ರಭು ನನಗೆ ಮಾರ್ಗದರ್ಶನ ವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ ಎಂದರು' ತರುವಾಯ ಸೂರ್ಯನನ್ನು ಪ್ರಕಾಶಮಯವಾಗಿ ಕಂಡಾಗ 'ಇದು ನನ್ನ ಪ್ರಭು, ಇದು ಎಲ್ಲಕ್ಕಿಂತ ದೊಡ್ಡ ದಾಗಿದೆ' ಎಂದರು. ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರು ಉದ್ಗರಿಸಿದರು:

"ಓ,ನನ್ನ ಜನಾಂಗ ಬಾಂಧವರೆ ನೀವು ಯಾವುದನ್ನೆಲ್ಲಾ ದೇವನೊಂದಿಗೆ ಸಹಭಾಗಿಗಳನ್ನಾಗಿಸುತ್ತೀರಿ ಅವುಗಳಿಂದ ನಾನು ವಿರಕ್ತನಾಗುವೆನು.(ನಂತರ ಹೇಳಿದರು) ನಾನು ಏಕನಿಷ್ಥೆಯಿಂದ ನನ್ನ ಮುಖವನ್ನು ಭೂಮಿ-ಆಕಾಶಗಳನ್ನು ಸ್ರಷ್ಟಿಸಿದವನ ಕಡೆಗೆ ತಿರುಗಿಸಿದೆನು.ನಾನು ಎಷ್ಟುಮಾತ್ರಕ್ಕೂ ಅಲ್ಲಾಹ ನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ" (ಪವಿತ್ರಕುರ್ಆನ್ :ಅಧ್ಯಾಯ 66,ಸೂಕ್ತ 25-29)

ಪವಿತ್ರ ಕುರ್ಆನ್ ನೈಜ ಆರಾಧ್ಯನ ವಿವರಣೆ ನೀಡುತ್ತಾ ಹೇಳುತ್ತದೆ."ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಗೋಚರವಾಗಿರುವ ಮತ್ತು ಅಗೋಚರವಾಗಿರುವ ಎಲ್ಲವನ್ನೂ ಬಲ್ಲವನು. ಅವನು ಪರಮದಯಾಮಯನೂ ಕರುಣಾನಿಧಿಯೂ ಆಗಿರುತ್ತಾನೆ. ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ.ಅವನು ಸಾಮ್ರಾಟನು, ಪರಮ ಪಾವನನು. ಸಾಧ್ಯಂತ ಮಂಗಲಮಯನು. ಶಾಂತಿದಾತನು, ಸಂರಕ್ಷಕನು,ಪ್ರಬಲನು, ತನ್ನ ಆಜ್ಞೆಯನ್ನು ಶಕ್ತಿಯಿಂದ ಅನುಷ್ಥಾನಿಸಿ ಬಿಡುವವನು, ಸದಾ ಸರ್ವೊನ್ನತನಾಗಿಯೇ ಇರುವವನು,ಜನರು ಮಾಡುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು ಸ್ರಷ್ಟಿಯ ಯೋಜನೆ ಮಾಡುವವನೂ ಅದನ್ನು ಜಾರಿ ಗೊಳಿಸುವವನೂ ಅದರಂತೆ ರೂಪ ಕೊಡುವವನೂ ಅಲ್ಲಾಹನೇ.ಅವನಿಗೆ ಅತ್ಯುತ್ತಮವಾದ ನಾಮಗಳಿವೆ. ಭೂಮಿ ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನನ್ನು ಜಪಿಸುತ್ತದೆ. ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. (ಪವಿತ್ರಕುರ್ಆನ್ :ಅಧ್ಯಾಯ ೫೯,ಸೂಕ್ತ ೨೨-೨೪)

ಅಣ್ಣಾದೊರೈಯವರು ತನ್ನ ಭಾಷಣದಲ್ಲಿ ಅವರು ಇಸ್ಲಾಮಿನ ಏಕ ದೇವತ್ವವನ್ನು ವಿವರಿಸುತ್ತಾ ಹೇಳಿದ್ದರು

"ದೇವನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡಬಾರದು" ಎಂಬುದು ಪ್ರವಾದಿವರ್ಯರ ಶಿಕ್ಷಣ ಗಳಲ್ಲಿ ಅತಿ ಪ್ರಾಮುಖ್ಯವಾದುದು.ಈ ಶಿಕ್ಷಣವನ್ನು ನಾನು ಮನಸಾರೆ ಗೌರವಿಸುತ್ತೇನೆ ಮತ್ತು ಅದನ್ನು ಮೆಚ್ಚುತ್ತೇನೆ.ಈ ಶಿಕ್ಷಣವನ್ನು ಏಕೆ ಇಷ್ಟೊಂದು ಗೌರವಿಸಬೇಕು? ಏಕೆಂದರೆ ಈ ಶಿಕ್ಷಣವು ಮನುಷ್ಯನನ್ನು ವಿಚಾರ ಮಾಡಲು ಪ್ರಚೋದಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ಮುಂದೆ ಹೇಳುತ್ತಾರೆ:ದೇವನೊಂದಿಗೆ ಇತರರನ್ನು ಸಹಭಾಗಿಗಳಾಗಿಸುವು ದೆಂದರೆ ಅವರನ್ನು ದೇವನಿಗೆ ಸಮಾನರೆಂದು ಪರಿಗಣಿಸಿದಂತಾಗುವುದು. ದೇವನ ಸಹಭಾಗಿ ಯಾರು ತಾನೇ ಆಗಲು ಸಾಧ್ಯ? ಆದುದರಿಂದಲೇ ಪ್ರವಾದಿವರ್ಯರು ಬಹುದೇವಾರಾಧನೆಯಿಂದ ಜನರನ್ನು ತಡೆದರು. ಇತರ ಧರ್ಮಗಳಲ್ಲಿ ಬಹುದೇವಾರಾಧನೆಯ ಶಿಕ್ಷಣ ಮತ್ತು ಅನುಮತಿಯಿರುವು ದರಿಂದ ನಮ್ಮಂಥವರು ಅನೇಕ ತರದ ನಷ್ಟಗಳಿಗೆ ಗುರಿಯಾಗಿದ್ದಾರೆ. ಬಹುದೇವಾರಾಧನೆಯ ಎಲ್ಲ ದಾರಿಗಳನ್ನು ಮುಚ್ಚುವ ಮೂಲಕ ಇಸ್ಲಾಂ ಮನುಷ್ಯನಿಗೆ ಹಿರಿಮೆ ಮತ್ತು ಔನ್ನತ್ಯವನ್ನು ನೀಡಿದೆಯಲ್ಲದೆ ನೀಚತೆ ಮತ್ತದರ ಪರಿಣಾಮಗಳಿಂದ ಅವನನ್ನು ರಕ್ಷಿಸಿದೆ." [೧]

ಪ್ರವಾದಿತ್ವದ ಮೇಲಿನ ವಿಶ್ವಾಸ

ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಎರಡೆನೆಯದು ಪ್ರವಾದಿತ್ವದ ಮೇಲಿನ ವಿಶ್ವಾಸವಾಗಿದೆ. ಮನುಷ್ಯ ಇತಿಹಾಸದ ಆರಂಭ ಕಾಲದಿಂದಲೂ ಅಲ್ಲಾಹನು ಕೆಲವು ಚುನಾಯಿತ ವ್ಯಕ್ತಿಗಳನ್ನು ಮಾನವರ ಮಾರ್ಗದರ್ಶನಕ್ಕಾಗಿ ನಿಯೋಜಿಸುತ್ತಿದ್ದನು. ಇವರನ್ನೇ ಪ್ರವಾದಿ ಗಳೆಂದು ಕರೆಯಲಾಯಿತು. ಈ ಎಲ್ಲ ಪ್ರವಾದಿಗಳ ಮೇಲೆ ವಿಶ್ವಾಸವಿಡುವುದು ಪ್ರತಿಯೊಬ್ಬ ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಇವರ ಪೈಕಿ ಯಾವುದಾದರೊಂದು ಪ್ರವಾದಿಯನ್ನು ನಿರಾಕರಿಸಿದರೆ ಅವನು ಮುಸ್ಲಿಮನಾಗಲು ಸಾಧ್ಯವಿಲ್ಲ. ಮನುಷ್ಯ ಪ್ರಕ್ರತಿಯನ್ನು ಗ್ರಹಿಸಲು ಮತ್ತವರ ಅವಶ್ಯಕತೆಗಳನ್ನರಿಯಲು ದೇವಚರರಿಗೋ ಅಥವಾ ಮನುಷ್ಯೇತರ ಇತರ ಜೀವಿಗಳಿಗೋ ಸಾಧ್ಯವಿಲ್ಲ. ಆದರಿಂದಲೇ ಅಲ್ಲಾಹನು ಮಾನವರನ್ನೇ ಮಾನವಸುಧಾರಕರಾಗಿ ನೇಮಿಸಿದನು. ಮನುಷ್ಯರಾಗಿದ್ದರೂ ಪ್ರವಾದಿಗಳು ಶ್ರೇಷ್ಠ ಸ್ವಭಾವದವರಾಗಿದ್ದರು. ಉತ್ತಮ ಚಾರಿತ್ರ್ಯದ ಉತ್ತುಂಗಕ್ಕೇರಿದವರಾಗಿದ್ದರು. ಇತರರಂತೆ ಅವರೂ ಆಹಾರವನ್ನು ಸೇವಿಸುತ್ತಿದ್ದರು .ಮಲಮೂತ್ರ ವಿಸರ್ಜನೆ ಮಾಡುತ್ತಿದ್ದರು. ವೈವಾಹಿಕ ಜೀವನ ನಡೆಸುತ್ತಿದ್ದರು. ಸಾರ್ವಜನಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇತರರಿಗೆ ನೀಡದ ಪ್ರತ್ಯೇಕತೆಯೊಂದನ್ನು ಅಲ್ಲಾಹನು ಅವರಿಗೆ ನೀಡಿದ್ದನು. ಅಗೋಚರವಾಗಿ ದೇವಚರರು ಬಂದು ಮಾನವರ ಮಾರ್ಗದರ್ಶನಕ್ಕಾಗಿ ಅಲ್ಲಾಹನ ಸಂದೇಶಗಳನ್ನು ನೀಡುತ್ತಿದ್ದರು. ದೇವ ಮಾರ್ಗದಿಂದ ದೂರ ಸರಿಯುತ್ತಿದ್ದ ಮಾನವಸಮೂಹವನ್ನು ದೇವಸಾನಿಧ್ಯಕ್ಕೆ ಕರೆತರಲು ಪ್ರತ್ಯೇಕ ಕಾಲ ಮತ್ತು ವಿಭಿನ್ನ ಸಮುದಾಯಗಳಲ್ಲಿ ಪ್ರವಾದಿಗಳನ್ನು ನಿಯೋಜಿಸುವುದು ಅನಿ ವಾರ್ಯವಾಗಿತ್ತು. ಹೀಗೆ ನಿಯೋಜಿಸಲ್ಪಟ್ಟ ಪ್ರವಾದಿಗಳ ಪೈಕಿ ಹ.ಮುಹಮ್ಮದ್(ಸ) ಕೊನೆಯ ಮತ್ತು ಅಂತಿಮ ಪ್ರವಾದಿಯಾಗಿರುವರು. ಇನ್ನು ಅಂತ್ಯ ದಿನದವರೆಗೆ ಬೇರೆ ಯಾವ ಪ್ರವಾದಿಯೂ ಆಗಮಿಸ ಲಿಕ್ಕಿಲ್ಲ . ಎಲ್ಲ ಪ್ರವಾದಿಗಳ ಮೇಲೆ ವಿಶ್ವಾಸವಿಡುವುದು ಕಡ್ದಾಯವಾಗಿದೆಯಾದರೂ ಪ್ರವಾದಿ ಮುಹಮ್ಮದ್(ಸ)ರನ್ನು ಮಾತ್ರ ಅನುಸರಿಸಬೇಕೆಂದು ಇಸ್ಲಾಂ ಆದೇಶಿಸುತ್ತದೆ. ಇಸ್ಲಾಮನ್ನು ಪ್ರವೇಶಿಸುವಾಗ 'ಮುಹಮ್ಮದುರ್ರಸೂಲುಲ್ಲಾಹಿ 'ಎಂದು ಹೇಳಿ ಇದನ್ನೇ ಪ್ರಖ್ಯಾಪಿಸಲಾಗುತ್ತದೆ.

ಪರಲೋಕ ವಿಶ್ವಾಸ

ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಪರಲೋಕ ವಿಶ್ವಾಸವ ಒಂದಾಗಿದೆ. ಇಹಲೋಕಜೀವನ ನಶ್ವರ ಯಥಾರ್ಥ ಜೀವನ ಇದರ ನಂತರ ಬರುವ ಪರಲೋಕದ ಜೀವನವಾಗಿದೆ.ಮನುಷ್ಯ ಇಲ್ಲಿ ಮಾಡಿದ ಪ್ರತಿಯೊಂದು ಕರ್ಮದ ಮರಣಾ ನಂತರ ಜೀವನದಲ್ಲಿ ಅಲ್ಲಾಹನು ವಿಚಾರಣೆ ನಡೆಸುವನು,ಇಲ್ಲಿ ಯಾರು ಅಲ್ಲಾಹನನ್ನು ತನ್ನ ಏಕೈಕ ನೈಜಆರಾಧ್ಯನೆಂದು ಅಂಗೀಕರಿಸಿ ಆತನಿಗೆ ವಿಧೇಯತೆ ತೋರಿ ಅವನ ಅನು ಸರಣೆ ಮಾಡಿ,ಸತ್ಕರ್ಮಗಳನ್ನು ಮಾಡುತ್ತಾ ಜೀವಿಸಿರುವವರು ತಮ್ಮ ಕರ್ಮಗಳಿಗೆ ಅರ್ಹವಾದ ಪ್ರತಿಫಲ 'ಸ್ವರ್ಗ'ವನ್ನು ಪಡೆಯುವರು.ಅವರು ತಮ್ಮ ತಮ್ಮ ಕರ್ಮಗಳಿಗನುಸಾರ ಸ್ವರ್ಗದಲ್ಲಿ ಉನ್ನತ ಪದವಿ ಗಳಲ್ಲಿ ಅಲಂಕರಿಸಲ್ಪಡುವರು.ಅಲ್ಲಿ ಅವರಿಗಾಗಿ ಅವರು ಬಯಸಿದ್ದೆಲ್ಲವೂ ಇರುವುದು. ಅಲ್ಲಿ ಅವರಿಗೆ ಚಿಲುಮೆಗಳು ಹರಿಯುತ್ತಿರುವ ಉದ್ಯಾನಗಳಿರುವುವು. ಹಚ್ಚ ಹಸುರಾದ ಮರಗಳಿರುವ ಉದ್ಯಾನವದು.ಅಲ್ಲಿ ಅವರು ದಪ್ಪ ಗಿನ ರೇಷ್ಮೆಯ ಕವಚಗಳಿರುವ ಹಾಸುಗಳ ಮೇಲೆ ದಿಂಬಿಗೊರಗಿ ಕುಳಿತಿರುವರು.ಅಲ್ಲಿಯ ಮರಗಳು ಫಲ ಗಳ ಭಾರದಿಂದ ಬಾಗುತ್ತಿರುವುವು. ಈ ಸ್ವರ್ಗನಿವಾಸಿಗಳಿಗೆ ಮಾನವನಾಗಲಿ ಅಥವಾ ಜಿನ್ನ್ ಆಗಲೀ ಹಿಂದೆಂದೂ ಸ್ಪರ್ಶಿಸಿರದಂತಹ ವಜ್ರ ಮತ್ತು ಮುತ್ತುಗಳಂತೆ ಸೌಂದರ್ಯವುಳ್ಳ ಲಜ್ಜಾಪೂರ್ಣ ನಯನೆಯರಿರುವರು. ಇನ್ನು ಯಾರು ಅಲ್ಲಾಹನಿಗೆ ಅವಿಧೇಯತೆ ತೋರಿ ದುಷ್ಕರ್ಮಗಳನ್ನೆಸಗಿರುವರೋ ಅವರು ತಮ್ಮ ಕರ್ಮ ಗಳಿಗೆ ತಕ್ಕ ಶಿಕ್ಷೆಯನ್ನೂ ಪಡೆಯುವರು.ಶರೀರವನ್ನು ಮಾತ್ರವಲ್ಲ ಮನ ಮಸ್ತಿಷ್ಕವನ್ನೂ ಸುಟ್ಟು ಕರಕಲಾಗಿ ಸುವ 'ನರಕ' ವೆಂಬ ಅಗ್ನಿಕುಂಡವಾಗಿರುವುದು ಅವರ ವಾಸಸ್ಥಳ.ಸತ್ಯವನ್ನು ನಿಷೆಧಿಸಿದವರನ್ನು ಅಗ್ನಿಜ್ವಾಲೆ ಗಳು ಆವರಿಸಿರುವುದು.ಅಲ್ಲಿ ಅವರು ದಾಹವನ್ನು ಸಹಿಸಲಾಗದೆ ನೀರನ್ನು ಕೇಳುವರು ಆಗ ಅವರ ಬಾಯನ್ನು ಸುಟ್ಟುಹಾಕುವಂಥ ಎಣ್ಣೆಯ ಮಡ್ಡಿಯನ್ತಿರುವ ನೀರಿನಿಂದ ಅವರನ್ನು ಸತ್ಕರಿಸ ಲಾಗು ವುದು. ಅಲ್ಲಿ ಅನುಕಂಪ ತೋರುವವರಾರೂ ಇರಲಾರರು. ಗಾಯದ ಕೀವು ಇವರ ಆಹಾರವಾಗಿರುವುದು

ಇಸ್ಲಾಮಿನ ಅಧಾರ ಸ್ತಂಭಗಳು

ಇಸ್ಲಾಮಿನ ಮಹಾ ಸೌಧವು ಐದು ಅಧಾರ ಸ್ತಂಭಗಳ ಮೇಲೆ ನಿಂತಿದೆ.ಅವುಗಳಲ್ಲಿ

  1. ಸತ್ಯದ ಸಾಕ್ಷ್ಯ ವಹಿಸುವುದು
  2. ನಮಾಜ್ ನಿರ್ವಹಿಸುವುದು
  3. ಝಕಾತ್ ನೀಡುವುದು
  4. ರಂಜಾನ್ ತಿಂಗಳ ವ್ರತಾಚರಣೆ
  5. ಹಜ್ಜ್ ನಿರ್ವಹಿಸುವುದು

ಇನ್ನು ಪ್ರತಿಯೊಂದನ್ನೂ ಸವಿಸ್ತಾರವಾಗಿ ತಿಳಿಯೋಣ

ಸತ್ಯದ ಸಾಕ್ಷ್ಯ ವಹಿಸುವುದು

ಈಗ ತಾನೆ ವಿವರಿಸಿ ಬಂದಂತೆ ಇಸ್ಲಾಂ ಏಕದೇವತ್ವ,ಪ್ರವಾದಿತ್ವ ಮತ್ತು ಪರಲೋಕವಿಶ್ವಾಸಗಳಂತಹ ಮೂಲಭೂತ ನಂಬಿಕೆಗಳನ್ನೊಳಗೊಂಡಿದೆ.ಈ ನಂಬಿಕೆಗಳ ಅಂಗೀಕಾರ ಪ್ರಖ್ಯಾಪನೆಯನ್ನೇ ಸತ್ಯದ ಸಾಕ್ಷ್ಯ ವಹಿಸುವುದೆಂದು ಹೇಳಲಾಗುತ್ತದೆ. "ಸ್ರಷ್ಟಿಕರ್ತನೂ,ಪರಿಪಾಲಕನೂ ಆದ ಏಕಅಲ್ಲಾಹನ ಹೊರತು ಆರಾಧನೆ,ವಿಧೇಯತೆ ಮತ್ತು ಅನುಸರಣೆಗೆ ಅರ್ಹರಾದವರು ಬೇರಾರೂ ಇಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ದಾಸರೂ ಅಂತಿಮ ದೂತರೂ ಆಗಿರುವರು" ಎಂದಾಗಿದೆ ಈ ಪ್ರಖ್ಯಾಪನೆಯ ಸಾರ.

ನಮಾಜ್ ನಿರ್ವಹಿಸುವುದು

ಎರಡೆನೆಯ ಕರ್ಮ ನಮಾಜ್ ನಿರ್ವಹಿಸುವುದಾಗಿದೆ.ಪ್ರತಿ ದಿನ ಹಗಲು ರಾತ್ರಿ ಯಾಗಿ ಐದುಬಾರಿ ತನ್ನ ಸ್ರಷ್ಟಿಕರ್ತನೊಂದಿಗೆ ನೇರಸಂಪರ್ಕ ಸಾಧಿಸ ಬಹುದಾದ ಆರಾಧನೆಯಾಗಿದೆ ಈ ನಮಾಜ್. ನಿಜ ಜೀವ ನದ ಪ್ರತಿ ಘಳಿಗೆಯಲ್ಲೂ ಅಲ್ಲಾಹನೊಂದಿಗೆ ನಿರಂತರ ಸಂಪರ್ಕ ಸಾಧಿಸುವುದೂ ಇದರ ಮೂಲೋದ್ದೇಶ ಗಳಲ್ಲೊಂದು. ನಮಾಜ್ ಮನುಷ್ಯನ ಅಂತರಂಗವನ್ನೂ ಬಹಿರಂಗವನ್ನೂ ಕೊಳಕು ಮತ್ತು ಮಾಲಿನ್ಯ ಗಳಿಂದ ಶುಚಿಗೊಳಿಸುವ ಸಾಧನವೂ ಹೌದು.ಅಂಗಾಂಗಗಳನ್ನು ಶುಚಿಗೊಳಿಸದೆ ನಮಾಜ್ ನಿರ್ವಹಿಸಲು ಸಾಧ್ಯವೇ ಇಲ್ಲ.ಪವಿತ್ರ ಕುರ್ಆನ್ ಹೇಳುತ್ತದೆ: "ಓ,ಸತ್ಯ ವಿಶ್ವಾಸಿಗಳೇ!ನೀವು ನಮಾಜಿಗೆಂದು ಹೊರಟಾಗ ನಿಮ್ಮಮುಖಗಳನ್ನು ಮತ್ತು ಮೊಣಕೈ ಗಂಟುಗಳವರೆಗೆ ಕೈಗಳನ್ನು ತೊಳೆದು ಕೊಳ್ಳಿರಿ. ಜನಾಬತ್ ಅಥವಾ ವೀರ್ಯಸ್ಖಲನಾ ನಂತರದ ಮಾಲಿನ್ಯದ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ಧ ರಾಗಿ ಕೊಳ್ಳಿರಿ. ನೀವು ಅನಾರೋಗ್ಯದಿಂದಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲಾರಾದರೂ ಮಲ ಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತ್ರೀಯರನ್ನು ಸ್ಪರ್ಶಿಸಿದ್ದರೆ ಮತ್ತು ಆಬಳಿಕ ನೀರು ಸಿಗದೇ ಹೋದರೆ ಶುದ್ಧ ಮಣ್ಣನ್ನು ಉಪಯೋಗಿಸಿ ಕೊಳ್ಳಿರಿ. ಅದರ ಮೇಲೆ ಹಸ್ತಗಳನ್ನು ಬಡಿದು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿಕೊಳ್ಳಿರಿ. ಅಲ್ಲಾಹ್ ನಿಮ್ಮ ಜೀವನ ವನ್ನು ಸಂಕುಚಿತಗೊಳಿಸಲಿಚ್ಚಿಸುವುದಿಲ್ಲ.ಬದಲಾಗಿನೀವು ಕ್ರತಜ್ಞರಾಗಲೆಂದು.ಅವನು ನಿಮ್ಮನ್ನು ಪರಿಶುದ್ಧಗೊಳಿಸಲಿಕ್ಕೂ ನಿಮ್ಮಮೇಲೆ ತನ್ನ ಕೊಡುಗೆಗಳನ್ನು ಪರಿಪೂರ್ಣಗೊಳಿಸಲಿಕ್ಕೂಇಚ್ಚಿಸುತ್ತಾನೆ. (ಪವಿತ್ರಕುರ್ಆನ್:ಅಧ್ಯಾಯ೫ಸೂಕ್ತ ೬) ಪ್ರವಾದಿ ಮುಹಮ್ಮದ್(ಸ)ಈ ರೀತಿ ಹೇಳಿರುವರು: "ನಿಮ್ಮ ಪೈಕಿ ಒಬ್ಬಾತನ ಮನೆಯ ಮುಂದೆ ಒಂದು ನದಿ ಹರಿಯುತ್ತಿದೆ, ಅದರಲ್ಲಿ ಅವನು ಪ್ರತಿ ದಿನ ಐದುಬಾರಿ ಸ್ನಾನ ಮಾಡುತ್ತಾನೆಂದಾದರೆ ಅವನ ಕುರಿತು ನಿಮ್ಮ ಅಭಿಪ್ರಾಯವೇನು?ಆತನ ಶರೀರದಲ್ಲಿ ಅಲ್ಪವಾದರೂ ಮಲಿನತೆ ಅಥವಾ ಕೊಳಕು ಬಾಕಿಯಿರುವುದೇ? ಸಹಚರರು ಉತ್ತರಿಸಿದರು, ಇಲ್ಲ, ಅವನ ಶರೀರದಲ್ಲಿ ಸ್ವಲಪವೂ ಮಲಿನತೆ ಅಥವಾ ಕೊಳಕು ಬಾಕಿಯಿರ ಲಾರದು. ಆಗ ಪ್ರವಾದಿ(ಸ) ಹೇಳಿದರು ಇದೇತರ ಐದು ಸಮಯದ ನಮಾಜ್ ಗಳಿಂದಲೂ ಅಲ್ಲಾಹನು ವ್ಯಕ್ತಿಯ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ" ಹೌದು, ನಮಾಜ್ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ.

ಝಕಾತ್ ನೀಡುವುದು

ಇಸ್ಲಾಮಿನ ಮೂರನೇ ಕಡ್ಡಾಯ ಕರ್ಮ ಝಕಾತ್ ಆಗಿದೆ.ನಮಾಜ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ದೇವ ಸಂಪ್ರೀತಿಯನ್ನು ಗಳಿಸುವ ಮಾರ್ಗವಾಗಿದೆ.ಒಬ್ಬ ಸ್ಥಿತಿವಂತ ಮುಸ್ಲಿಂ ತನ್ನ ಸಂಪಾದನೆಯ ನಿರ್ದಿಷ್ಟ ಭಾಗವನ್ನು ಅರ್ಹರಿಗೆ ನಿರ್ಬಂಧಿತವಾಗಿ ಕೊಡಲೇ ಬೇಕು.ಝಕಾತ್ ಸಿರಿವಂತರು ತೋರುವ ಔದಾರ್ಯವಲ್ಲದೆ ಅದು ಬಡವರ ಹಕ್ಕಾಗಿದೆ ಎಂದು ಇಸ್ಲಾಂ ತಿಳಿಸುತ್ತದೆ.ಸಂಪತ್ತಿನ ಒಡೆಯ ಅಲ್ಲಾಹನಾಗಿರುತ್ತಾನೆ.ಮನುಷ್ಯಅದರ ಮೇಲ್ವಿಚಾರಕ ಮಾತ್ರನಾಗಿರುತ್ತನೆಂದೂ ಅದು ನೆನಪಿಸುತ್ತದೆ.ಸಮಾಜಿಕ ಜೀವನದ ಕೆಲವು ಮಹತ್ತರವಾದ ಉದ್ದೇಶಗಳನ್ನು ಈಡೇರಿಸುವುದೂ ಝಕಾತಿನ ಔಚಿತ್ಯಗಳಲ್ಲೊಂದು.ಅವುಗಳಲ್ಲಿ ಮುಖ್ಯವಾದುದನ್ನು ನಾನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ೧. ಸಂಪತ್ತನ್ನು ಶುಚಿಗೊಳಿಸುವುದು.ಅದನ್ನು ವ್ರದ್ಧಿಸುವುದು ಮತ್ತು ಅಲ್ಲಾಹನ ಆಜ್ಞಾಪಾಲನೆಯಿಂದ ಸಂಭವನೀಯ ವಿಪತ್ತುಗಳಿಂದ ಅದನ್ನು ರಕ್ಷಿಸಿಕೊಳ್ಳುವುದು. ೨. ಲೋಭ,ಜಿಪುಣತೆ ಮತ್ತು ದುರಾಸೆಗಳಂತಹ ದುಶ್ಚಟಗಳಿಂದ ಮನುಷ್ಯ ಮನಸ್ಸನ್ನು ಸ್ವಚ್ಛಗೊಳಿಸುವುದು. ೩. ಬಡವರು ಮತ್ತು ನಿರ್ಗತಿಕರೊಂದಿಗೆ ಸಹಾನುಭೂತಿ ತೋರುವುದರ ಜೊತೆಗೆ ದರಿದ್ರರ,ವಂಚಿತರ ಮತ್ತು ಹಸಿದವರ ಅವಶ್ಯಕತೆಗಳನ್ನು ಪೂರೈಸುವುದು. ೪. ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಸಮಾಜವನ್ನು ಬಲಿಷ್ಠಗೊಳಿಸುವುದು. ಇದೇ ಕಾರಣದಿಂದ ಝಕಾತ್ ನೀಡದವರಿಗೆ ಮತ್ತು ಅದನ್ನು ತಡೆಹಿಡಿದವರಿಗೆ ಕಠಿಣ ಶಿಕ್ಷೆಯಾಗುವುದೆಂದು ಪವಿತ್ರಕುರ್ಆನ್ ಎಚ್ಚರಿಕೆ ನೀಡುತ್ತದೆ. ಅದು ಹೇಳುತ್ತದೆ: " ಓ ಸತ್ಯ ವಿಶ್ವಾಸಿಗಳೇ! ಗ್ರಂಥದವರ ಅಧಿಕಾಂಶ ವಿಧ್ವಾಂಸರೂ ಸಂತರೂ ಜನರ ಸಂಪತ್ತನ್ನು ಅನಧಿಕ್ರತ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನು ದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ.ಈ ಚಿನ್ನ ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು.ತರುವಾಯ ಅದರಿಂದಲೇ ಅವರ ಹಣೆಗಳಿಗೂ,ಪಾರ್ಶ್ವಗಳಿಗೂ ಮತ್ತು ಬೆನ್ನುಗಳಿಗೂ ಬರೆ ಹಾಕಲಾಗು ವುದು.ನೀವು ನಿಮಗಾಗಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದುವೇ,ಈಗ ನೀವು ಕೂಡಿ ಹಾಕಿದ್ದ ಸಂಪತ್ತನ್ನು ಸವಿಯಿರಿ"(ಎನ್ನಲಾಗುವುದು)(ಪವಿತ್ರಕುರ್ಆನ್:ಅಧ್ಯಾಯ ೯ಸೂಕ್ತ ೩೪-೩೬) ಮಾನ್ಯರೇ! ಒಂದು ವಿಭಾಗ ಜನರು ಸಂಪತ್ತನ್ನು ಶೇಖರಿಸಿಡುವುದು ಮತ್ತೊಂದು ವಿಭಾಗ ಜನರು ನಿರ್ಗತಿಕರಾಗಿರುವುದಕ್ಕೆ ಇಸ್ಲಾಂ ಎಂದಿಗೂ ಆಸ್ಪದ ಕೊಡುವುದಿಲ್ಲ.

ರಂಜಾನ್ ತಿಂಗಳ ವ್ರತಾಚರಣೆ

ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಂಜಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ.ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ,ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯ ಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.

ಹಜ್ಜ್ ನಿರ್ವಹಿಸುವುದು

ಐದನೆಯ ಮತ್ತು ಕೊನೆಯ ಕಡ್ಡಾಯಕರ್ಮ ಹಜ್ಜ್ ನಿರ್ವಹಿಸುವುದಾಗಿದೆ. ಆರ್ಥಿಕವಾಗಿಯೂ ದೈಹಿಕವಾಗಿಯೂ ಸಾಮರ್ಥ್ಯವುಳ್ಳವರು ನಿರ್ಬಂಧಿತರಾಗಿ ಕೈಗೊಳ್ಳಲೇಬೇಕಾದ ಅರೇಬಿಯಾದಲ್ಲಿರುವ ಮಕ್ಕಾನಗರದ ತೀರ್ಥಯಾತ್ರೆಯ ಹೆಸರೇ ಹಜ್ಜ್ ಆಗಿರುತ್ತದೆ. ಹಜ್ಜ್ ವಿಶ್ವಸಹೋದರತೆಯನ್ನು ಪ್ರತಿಪಾದಿಸುವ ಮಹಾ ಸಮ್ಮೇಳನವಾಗಿದೆ.ಸಕಲ ಮನುಷ್ಯರೂ ಅಲ್ಲಾಹನ ದಾಸರು ಮತ್ತು ಅವನ ಅನುಸರಣೆ ಮಾಡಬೇಕಾದವರು ಮತ್ತು ಆತನ ಅನುಸರಣೆಯಲ್ಲಿಯೇ ಸಮಾನತೆ ಮತ್ತು ಸಮಾಧಾನ ಕಂಡುಕೊಳ್ಳಬೇಕಾದವರು ಎಂಬ ತಾತ್ಪರ್ಯ ವನ್ನು ಹಜ್ಜ್ ನೀಡುತ್ತದೆ.ಯತಾರ್ಥದಲ್ಲಿ ಏಕದೇವತ್ವವನ್ನು ಬಲವಾಗಿ ಪ್ರತಿಪಾದಿ ಸುವ ಇಸ್ಲಾಂ,ಮಾನವೀಯ ಏಕತೆಯನ್ನು ಸಾಧಿಸಿ ತೋರಿಸಿದ ಏಕೈಕ ಧರ್ಮವಾಗಿದೆ. ಇದೇ ಕಾರಣದಿಂದ 'ಮಾನವ ಸಮಾನತೆಯ ಯಾವ ಎತ್ತರಕ್ಕೆ ಇಸ್ಲಾಂ ತಲುಪಿರುತ್ತದೆ ಅಲ್ಲಿಗೆ ತಲುಪಲು ಇತರ ಯಾವ ಧರ್ಮಕ್ಕೂ ಸಾಧ್ಯವಾಗಿಲ್ಲವೆಂದು' ಸ್ವಾಮಿ ವಿವೇಕಾನಂದರಿಗೆ ಹೇಳಬೇಕಾಯಿತು.

ಪ್ರಮುಖ ಪಂಗಡಗಳು

ಪ್ರಮುಖ ಹಬ್ಬಗಳು


ಜಿಹಾದ್

ಇಸ್ಲಾಮ್ ಧರ್ಮದಲ್ಲಿ ಜಿಹಾದ್ ಅಂದರೆ ಹೋರಾಡು ಎಂದರ್ಥ. ತನ್ನ ಕಾಮನೆಗಳ ವಿರುದ್ಧ ಹೋರಾಡುವುದು ಒಂದು ಜಿಹಾದ್ ಆಗಿದೆ. ಈಗಿರುವಂತೆ ಭಯೋತ್ಪಾದನಾ ಕೃತ್ಯಗಳಿಗೂ ಜಿಹಾದಿಗೆ ಯಾವುದೆ ಸಂಬಂಧವಿಲ್ಲ. ಜಿಹಾದ್ ಎಂಬ ಪದವು ಬಹಳ ಗಾಢವಾದ ಅರ್ಥವನ್ನು ಹೊಂದಿದೆ.


ಇಸ್ಲಾಂ ತುಳಿದು ಬಂದ ಹಾದಿ

ಸರಿಸುಮಾರು ೧೪೫೦ ವರ್ಷಗಳ ಹಿಂದೆ ಅರೇಬಿಯಾ ಮರುಭೂಮಿಯಲ್ಲಿರುವ ಮಕ್ಕಾನಗರಿಯ ಇತಿಹಾಸವು ಅತ್ಯದ್ಭುತ ತಿರುವನ್ನು ಕಂಡಿತು. ತನ್ನ ಬಾಲ್ಯದಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದವನೊಬ್ಬ ತನ್ನ ೪೦ನೇ ವಯಸ್ಸಿನಲ್ಲಿ ಮರಳುಗಾಡಿನಲ್ಲಿ ಕ್ರಾಂತಿಯ ಬಿರುಗಾಳಿಯನ್ನೆಬ್ಬಿಸಿದ ರೋಚಕ ಕಥೆಯಿದು. ಅಚ್ಚರಿ ಮೂಡಿಸುವ ಈ ಕ್ರಾಂತಿಯು ಬಿರುಗಾಳಿಯಂತೆ ಅಖಂಡ ಅರಬ್ ದೇಶ ಮಾತ್ರವಲ್ಲ ಇಡೀ ಜಗತ್ತನ್ನೇ ವ್ಯಾಪಿಸಿತು.ತಂದೆಯ ಮುಖವನ್ನು ನೋಡದ ಬಾಲ್ಯದಲ್ಲೇ ತಾಯಿಯ ವಿಯೋಗದ ವೇದನೆ ಯನ್ನನುಭ ವಿಸಿದ ಮತ್ತದರ ಬೆನ್ನಲ್ಲೇ ಪ್ರೀತಿಯ ತಾತರನ್ನೂ ಕಳಕೊಂಡು ಒಬ್ಬಂಟಿಗನಾಗಿ ಸಂಕಷ್ಟದಲ್ಲಿ ಸಿಲುಕಿದ ಓರ್ವ ನಿರಕ್ಷರಿ ಅನಾಥನ ಮೂಲಕ ಮಾನವ ಜಗತ್ತಿಗೆ ದೊರೆತ ಅನುಗ್ರಹೀತ ಹಾಗೂ ಅವಿಸ್ಮರಣೀಯ ಕ್ರಾಂತಿಯ ಕಥೆಯಿದು.ಈ ಕ್ರಾಂತಿಯ ಹೆಸರೇ'ಇಸ್ಲಾಂ'ಆಗಿದೆ. ಆದಿ ಮಾನವನೂ ಮೊತ್ತ ಮೊದಲ ಪ್ರವಾದಿಯೂ ಆದ ಹ.ಆದಮ್ (ಅ)ರಿಂದ ಹಿಡಿದು ಮಾನವ ಮಾರ್ಗದರ್ಶನಕ್ಕಾಗಿ ಹಂತ ಹಂತವಾಗಿ ಆಗಮಿಸುತ್ತಿದ್ದ ಪ್ರವಾದಿಗಳ ಸರಪಳಿಯ ಕೊನೆಯ ಕೊಂಡಿಯಾಗಿ ಈ ಮಹಾನ್ ಕ್ರಾಂತಿಕಾರಿ ಪ್ರವಾದಿಯು ಜಗತ್ತಿಗಾಗಮಿಸಿದರು. ಅವರೇನೂ ಹೊಸ ಸಂದೇಶವನ್ನು ನೀಡಲಿಲ್ಲ ಬದಲಾಗಿ ತನಗಿಂತ ಮುಂಚೆ ಪ್ರತ್ಯೇಕ ಕಾಲ ಮತ್ತು ಸಮುದಾಯಗಳಲ್ಲಿ ಆಗಮಿಸುತ್ತಿದ್ದ, ಪ್ರವಾದಿಗಳೆಂದು ಕರೆಯಲ್ಪಡುತ್ತಿದ್ದ ಸತ್ಪುರುಷರು ನೀಡಿದ "ಏಕ ಮತ್ತು ನೈಜ ಆರಾಧ್ಯನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ" ಎಂಬ ಸಂದೇಶವನ್ನೇ ಅವರೂ ಸಾರಿದರು. ಆಡಮ್ ಎಂದು ನಾಮಾಂಕಿತರಾದ ಹ.ಆದಂ, ನೋಹಾ ಎಂದು ಕರೆಯಲ್ಪಡುವ ಹ.ನೂಹ್,ಅಬ್ರಹಾಂ ಎಂದು ಪ್ರಸಿದ್ಧರಾದ ಹ.ಇಬ್ರಾಹೀಂ, ಡೇವಿಡ್ ಎಂದು ಪ್ರಖ್ಯಾತ ರಾದ ಹ.ದಾವೂದ್, ಮೋಸೆಸ್ ಎಂದು ನಾಮಪಡೆದ ಹ.ಮೂಸಾ, ಏಸುಕ್ರಿಸ್ತ ಎಂದು ಆರಾಧ್ಯ ಪಟ್ಟಕ್ಕೇರಿ ಸಲ್ಪಟ್ಟ ಹ.ಈಸಾ ಈಎಲ್ಲ ಗತಕಾಲದ ಪ್ರವಾದಿಗಳೂ ಇದೇ ಸಂದೇಶವನ್ನು ತನ್ನ ತನ್ನ ಸಮುದಾಯ ಗಳ ಮುಂದಿಟ್ಟಿದ್ದರು.

ನಲ್ವತ್ತು ವರ್ಷಗಳ ಕಾಲ ಪ್ರತಿಯೊಂದು ನಿಮಿಷವನ್ನೂ ತನ್ನದೇ ಸಮಾಜದಲ್ಲಿ ಅವರು ಕಳೆದಿದ್ದರು. ತನ್ನ ಉತ್ತಮ ಗುಣನಡತೆ ಮತ್ತು ಪಾವನ, ಪರಿಶುದ್ಧ ಸ್ವಭಾವದಿಂದಾಗಿ ಬಾಲ್ಯದಿಂದಲೇ ಸಮಾಜದ ಪ್ರತಿ ಯೊಬ್ಬ ಸದಸ್ಯನ ಕಣ್ಮಣಿಯಾಗಿದ್ದ ಇವರ ಪ್ರಾಮಾಣಿಕತೆ ಮತ್ತು ಸತ್ಯವಂತಿಕೆ ಜನಜನಿತವಾಗಿತ್ತು, ಆದ್ದರಿಂದಲೇ ಇಡೀ ಜನಾಂಗವೇ ಅವರನ್ನು'ಅಲ್ ಅಮೀನ್' ಅರ್ಥಾತ್ ಪ್ರಾಮಾಣಿಕ ಮತ್ತು 'ಅಸ್ಸಾದಿಕ್' ಅರ್ಥಾತ್ ಸತ್ಯವಂತ ಎಂಬ ಬಿರುದಿನಿಂದ ಕರೆಯುತ್ತಿತ್ತು. ಎಂದೂ ಯಾರನ್ನೂ ದುಖಿಸದ ಇವರು ಸ್ವಯಂ ಇತರರಿಗಾಗಿ ದುಃಖವನ್ನು ಸಹಿಸುತ್ತಿದ್ದರು. ಅವರು ಮೂರ್ತಿಪೂಜಕರ ಜನಾಂಗ ದಲ್ಲಿದ್ದರು.ಆದರೆ ಅವ ರೆಂದೂ ಮೂರ್ತಿಪೂಜೆ ಮಾಡಿದವರಲ್ಲ.ವಿಗ್ರಹಾರಾಧನೆಯನ್ನು ಅವರು ದ್ವೇಷಿಸುತ್ತಿದ್ದರು.ಯಾವ ವಸ್ತುವೂ ಪೂಜಾರ್ಹ ವಲ್ಲವೆಂದು ಅವರ ಅಂತರಾತ್ಮವೇ ಹೇಳುತ್ತಿತ್ತು.ದೇವನು ಕೇವಲ ಒಬ್ಬನೇ ಆಗಿರಲು ಸಾಧ್ಯ ಎಂದು ಅವರ ಮನಸ್ಸು ಸ್ವಯಂ ಸಾಕ್ಷ್ಯ ವಹಿಸುತ್ತಿತ್ತು.ಆ ಅಜ್ಞಾನಿ ಜನಾಂಗದ ಮಧ್ಯೆ ಅವರು ಕಲ್ಲಿನ ರಾಶಿ ಯಲ್ಲಿರುವ ವಜ್ರದಂತೆ ಮಿನುಗುತ್ತಿದ್ದರು ಅಥವಾ ಗಾಢ ಅಂಧಕಾರದಲ್ಲಿ ಅವರೊಂದು ಪ್ರಾಕಾಶಮಾನ ದೀಪವಾಗಿದ್ದರು.

ನಲವತ್ತನೇ ವಯಸ್ಸಿನಲ್ಲಿ ಅವರು ತನ್ನ ಸುತ್ತಲಿರುವ ಅಂಧಕಾರವನ್ನು ಕಂಡು ಗಾಬರಿ ಗೊಳ್ಳುತ್ತಾರೆ. ಅಜ್ಞಾನ,ಅನೀತಿ, ದುರ್ನಡತೆ,ಅಶಿಸ್ತು, ಬಹುದೇವ ವಿಶ್ವಾಸ ಮತ್ತು ವಿಗ್ರಹಾರಾಧನೆಯ ಒಂದು ಭಯಂಕರ ಸಮುದ್ರವು ಅವರನ್ನು ಸುತ್ತುವರಿದಿತ್ತು. ಈ ಉಸಿರು ಕಟ್ಟುವ ವಾತಾವರಣದಿಂದ ಅವರು ಹೊರ ಬರ ಬಯಸುತ್ತಿದ್ದರು ಮಾತ್ರವಲ್ಲ ತನ್ನಸುತ್ತ ಕವಿದಿರುವ ಅಂಧಕಾರವನ್ನು ದೂರೀಕರಿಸುವ ಜ್ಯೋತಿಯೊಂದನ್ನು ಶೋಧಿಸುತ್ತಿದ್ದರು. ಈ ಕೆಟ್ಟು ಹೋದ ವಿಶ್ವವನ್ನು ಅಳಿಸಿ ಒಂದು ಹೊಸ ವಿಶ್ವವನ್ನು ಕಟ್ಟಿ ಬೆಳೆಸ ಬಯಸುತ್ತಿದ್ದರು. ಅದಕ್ಕಾಗಿ ಅವರು ಜನವಾಸ ದಿಂದ ದೂರ ಮಕ್ಕಾನಗರಿಯ ಹೊರ ಭಾಗದ ಲ್ಲಿದ್ದ ಒಂದು ಬೆಟ್ಟದ ಗವಿಯಲ್ಲಿ ಏಕಾಂತ ಮತ್ತು ಪ್ರಶಾಂತ ವಾತಾವರಣದಲ್ಲಿ ದಿನಕಳೆಯ ತೊಡಗಿದರು. ಅಲ್ಲಿ ಉಪವಾಸವಿದ್ದು ತಮ್ಮ ಆತ್ಮ,ಮನಸ್ಸು ಮತ್ತು ಮಸ್ತಿಷ್ಕವನ್ನು ಇನ್ನಷ್ಟು ಶುದ್ಧವೂ ಪಾವನವೂ ಆಗಿ ಮಾರ್ಪಡಿಸುತ್ತಿದ್ದರು. ಧ್ಯಾನ ಚಿಂತನೆಗಳಲ್ಲಿ ನಿರತ ರಾಗುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಅವರ ಬಳಿ ದೇವಚರರಾದ'ಜಿಬ್ರೀಲ್'ಬಂದು ತಾವು ಸ್ರಷ್ಟಿಕರ್ತನ ಕಡೆಯಿಂದ ಆತನ ಸಂದೇಶವಾಹಕರಾಗಿದ್ದೀರೆಂದು ಹೇಳಿ ಅವರಿಗೆ ದೇವನಿದರ್ಶನಗಳನ್ನು ನೀಡಿದರು. ಹೀಗೆ ಅವರು ಗುಹೆಯ ಏಕಾಂತದಿಂದ ಹೊರ ಬರುತ್ತಾರೆ.ಮತ್ತು ತಮ್ಮ ಜನಾಂಗದ ಮುಂದೆ ಹೋಗಿ "ಈ ವಿಗ್ರಹಗಳು ಯಾವ ಕೆಲಸಕ್ಕೂ ಬರಲಾರವು. ಇವುಗಳನ್ನು ಬಿಟ್ಟು ಬಿಡಿ.ಈ ಭೂಮಿ,ಈ ಸೂರ್ಯ, ಈ ನಕ್ಷತ್ರಗಳು,ಈ ಭೂಮಿ-ಆಕಾಶಗಳಲ್ಲಿರುವ ಎಲ್ಲ ಶಕ್ತಿಗಳು ಒಬ್ಬ ದೇವನ ಸ್ರಷ್ಟಿಗಳು. ಅವನೇ ನಿಮ್ಮ ಸ್ರಷ್ಟಿಕರ್ತನು,ಪರಿಪಾಲಕನು, ಅನ್ನದಾತನು, ಜೀವನ ಮರಣಗಳನ್ನು ನೀಡುವವನು. ಎಲ್ಲವನ್ನೂ ತೊರೆದು ಆತನನ್ನೇ ಪೂಜಿಸಿರಿ. ಎಲ್ಲರನ್ನೂ ಬಿಟ್ಟು ಅವನಲ್ಲೇ ನಿಮ್ಮ ಅಗತ್ಯಗಳನ್ನು ಬೇಡಿರಿ. ನೀವು ಮಾಡುತ್ತಿರುವ ಈ ಕಳ್ಳತನ,ಲೂಟಿ ,ಮದ್ಯಪಾನ, ಜೂಜಾಟ ,ವ್ಯಭಿಚಾರ ಎಲ್ಲವೂ ಮಹಾಪಾಪಗಳಾಗಿವೆ, ಅವುಗಳನ್ನು ತೊರೆಯಿರಿ" ಎಂದು ಹೇಳುತ್ತಾರೆ. [೨] . ಸತ್ಯಪಥದ ಸಂದೇಶವಾಹಕರಾಗಿ ಕಾರ್ಯರಂಗಕ್ಕಿಳಿದ ಈ ಪ್ರವಾದಿಯನ್ನು ಕುಟುಂಬ ಸಮೇತ ಇಡೀ ಸಮುದಾಯವೇ ಪ್ರತಿರೋಧಿಸಿತು. ಈ ಪ್ರತಿರೋಧವೇ ಕ್ರಮೇಣ ದ್ವೇಷ ಮತ್ತು ಹಿಂಸೆಯ ರೂಪ ತಾಳಿತು. ಪ್ರವಾದಿ ಮತ್ತು ಅವರ ಅನುಯಾಯಿಗಳೂ ಸಮಾಜದ ಹಿಂಸೆ ಮತ್ತು ಅತಿಕ್ರಮಣಕ್ಕೆ ಗುರಿಯಾದರು. ಹಿಂಸೆಯು ಅತಿರೇಕಕ್ಕೆ ತಲುಪಿದಾಗ ಅವರಪೈಕಿ ಕೆಲವರು ಪ್ರವಾದಿಯವರ ಆದೇಶದ ಮೇರೆಗೆ ಸಮುದ್ರದಾಚಿನ ದೇಶವಾದ ಅಬಿಸೀನಿಯಾಕ್ಕೆ ವಲಸೆ ಹೋಗುತ್ತಾರೆ ಆದರೆ ಶತ್ರುಗಳು ಅಲ್ಲೂ ಇವರನ್ನು ಹಿಂಬಾಲಿಸಿ ಕೊಂಡು ಹೋಗುತ್ತಾರೆ. ಕ್ರೈಸ್ತ ಧರ್ಮಾನುಯಾಯಿಯಾದ ಅಲ್ಲಿಯ ಅರಸ ನಜ್ಜಾಶಿಯ ಮುಂದೆ ಮುಸಲ್ಮಾನರ ವಿರುದ್ಧ ದೂರನ್ನು ನೀಡಿ ಇವರನ್ನು ನಮಗೆ ಹಿಂತಿರುಗಿಸಬೇಕೆಂದು ವಿನಂತಿಸುತ್ತಾರೆ. ಆಗ ಸ್ತ್ರೀ-ಪುರುಷ ರನ್ನೊಳಗೊಂಡ ಸರಿಸುಮಾರು ನೂರು ಜನರ ತಂಡವನ್ನು ಪ್ರತಿನಿಧಿಸುತ್ತಾ ಪ್ರವಾದಿ ಯವರ ಪ್ರೀತಿಯ ಚಿಕ್ಕಪ್ಪರಾದ ಅಬೂತಾಲಿಬರ ಮಗನಾದ ಹ.ಜಾಫರ್(ರ)ರಾಜನ ಮುಂದೆ ಒಂದು ಭಾಷಣ ಮಾಡುತ್ತಾರೆ. ಅವರು ಹೇಳಿದರು,

"ಹೇ ಮಹಾರಾಜರುಗಳೇ! ನಾವು ಅಜ್ಞಾನದಲ್ಲಿದ್ದೆವು, ವಿಗ್ರಹಗಳನ್ನು ಪೂಜಿಸುತ್ತಿದ್ದೆವು ಸತ್ತ ಪ್ರಾಣಿಗಳನ್ನು ತಿನ್ನುತ್ತಿದ್ದೆವು, ದುಷ್ಕ್ರತ್ಯಗಳನ್ನೆಸಗುತ್ತಿದ್ದೆವು, ವ್ಯಭಿಚಾರ ಮತ್ತು ಅತ್ಯಾಚಾರಗಳಲ್ಲಿ ತಲ್ಲೀನರಾಗಿದ್ದೆವು, ನೆರೆಯವರನ್ನು ಉಪದ್ರವಿಸುತ್ತಿದ್ದೆವು,ಸ್ವತಃ ನಮ್ಮ ಸಹೋದರನನ್ನೇ ಅಕ್ರಮ ಮತ್ತು ಅನ್ಯಾಯಕ್ಕೆ ಗುರಿಪಡಿಸುತ್ತಿದ್ದೆವು,ನಮ್ಮ ಪೈಕಿಯ ಬಲಾಡ್ಯರು ದುರ್ಬಲರನ್ನು ತಿಂದೇಬಿಡುತ್ತಿದ್ದರು,ನಾವು ವ್ಯರ್ಥ ಮಾತುಗಳನ್ನಾಡುತ್ತಿದ್ದೆವು,ಯಾವುದೇ ಕಾನೂನು ಮತ್ತು ನಿಯಮಗಳಿಗೆ ನಾವು ಬದ್ಧರಾಗಿರಲಿಲ್ಲ, ಹೀಗಿರುವಾಗ ಅಲ್ಲಾಹನು ನಮ್ಮ ಬಳಿ ನ ಮ್ಮಿಂದಲೇ ಒಬ್ಬ ಮಹಾತ್ಮರನ್ನು ಕಳುಹಿಸಿದನು. ಅವರು ಕುಲೀನರೂ ಉತ್ತಮ ವಂಶ ಪರಂಪರೆಯುಳ್ಳವರೂ ಆಗಿದ್ದರು. ಅವರ ಸತ್ಯ ಸಂಧತೆ, ಪ್ರಾಮಾಣಿಕತೆ, ಪಾವಿತ್ರ್ಯತೆ ಮತ್ತು ಪರಿಶುದ್ಧತೆಯನ್ನು ನಾವೆಲ್ಲರೂ ಚೆನ್ನಾಗಿ ಅರಿತಿದ್ದೆವು, ಅವರು ನಮಗೆ ಏಕದೇವ ವಿಶ್ವಾಸದ ಸಂದೇಶವನ್ನು ನೀಡಿದರು. ಆ ಏಕ ನೈಜ ಆರಾಧ್ಯ ನೊಂದಿಗೆ ಯಾರನ್ನೂ ಸಹಭಾಗಿಯನ್ನಾ ಗಿಸಬಾರದು, ಕಲ್ಲುಗಳನ್ನೂ, ಮೂರ್ತಿಗಳನ್ನೂ ಪೂಜಿಸಬಾರದು ಎಂದವರು ನಮಗೆ ತಿಳಿ ಹೇಳಿದರು. ಸತ್ಯವನ್ನೇ ನುಡಿಯಿರಿ, ಕೆಡುಕುಗಳಿಂದ ಮತ್ತು ದುಶ್ಚಟಗಳಿಂದ ದೂರವಿರಿ, ವಾಗ್ಧಾನವನ್ನು ಪಾಲಿಸಿರಿ ಎಂದವರು ನಮಗೆ ಉಪದೇಶಿಸಿದರು. ಅವರು ನಮಗೆ ವಿನಮ್ರನಾಗುವ, ನಮಾಜ್ ನಿರ್ವಹಿಸುವ,ದಾನ ಧರ್ಮ ನೀಡುವ ಮತ್ತು ವ್ರತಾಚರಿಸುವ ಆದೇಶಗಳನ್ನು ನೀಡಿದರು.ಈ ಮಾತುಗಳಿಂದಲೇ ನಮ್ಮ ಸಮುದಾಯ ನಮ್ಮ ಶತ್ರುವಾಯಿತು ಅವರು ನಮ್ಮನ್ನು ದ್ವೇಷಿಸತೊಡಗಿದರು ಮತ್ತು ಸಾಧ್ಯವಾದಷ್ಟು ನಮ್ಮನ್ನು ಹಿಂಸಿಸಿದರು.ಏಕ ಅಲ್ಲಾಹನನ್ನು ಆರಾಧಿಸುವುದನ್ನು ಬಿಟ್ಟು ಪುನಃ ಕಲ್ಲು,ಮರ ಮತ್ತು ಅವುಗಳಿಂದ ಸ್ವತಃ ನಾವೇ ತಯಾರಿಸಿದ ಮೂರ್ತಿಗಳನ್ನು ಪೂಜಿಸುವಂತೆ ಈಗ ಅವರು ನಮ್ಮನ್ನು ಬಲಾತ್ಕರಿಸುತ್ತಿದ್ದಾರೆ. ಹೇ ಮಹಾರಾಜರುಗಳೇ ! ನಾವು ಅವರಿಂದ ಬಹಳ ಕಷ್ಟ ಹಾಗೂ ತೊಂದರೆಗಳನ್ನು ಅನುಭವಿಸಿದ್ದೇವೆ. ಸಹಿಸಲಸಾಧ್ಯವಾದ ಹಿಂಸೆಗೆ ಗುರಿಯಾಗಿದ್ದೇವೆ. ಕೊನೆಗೆ ತಮ್ಮ ದೇಶದಲ್ಲಿ ಆಶ್ರಯ ಪಡೆಯಲೆಂದು ವಲಸೆ ಬಂದಿದ್ದೇವೆ......"

ಪವಿತ್ರ ಕುರ್ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ :

"ಹೇ ಜನರೇ! ನಿಮ್ಮನ್ನೂ ನಿಮ್ಮ ಪೂರ್ವಿಕರನ್ನೂ ಸ್ರಷ್ಟಿಸಿದ ನಿಮ್ಮ ಪ್ರಭುವಿನ ದಾಸ್ಯಾರಾಧನೆ ಮಾಡಿರಿ. ಹೀಗೆ ಮಾಡಿದರೆ ನೀವು ರಕ್ಷಣೆ ಹೊಂದಬಹುದು. ಅವನೇ ಭೂಮಿಯನ್ನುನಿಮಗೆ ಹಾಸನ್ನಾಗಿ ಹಾಸಿದನು. ನಿಮಗಾಗಿ ಆಕಾಶವನ್ನು ಮೇಲ್ಛಾವಣಿ ಮಾಡಿದನು. ಮೇಲ್ಭಾಗದಿಂದ ಮಳೆ ಸುರಿಸಿದನು.ಅದರ ಮೂಲಕ ತರತರದ ಬೆಳೆಗಳನ್ನು ಉತ್ಪಾದಿಸಿ ನಿಮಗೆ ಆಹಾರ ಒದಗಿಸಿದನು. ಇದನ್ನು ನೀವು ಅರಿತಿರುತ್ತ ಇತರ ರನ್ನು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನಾಗಿ ಮಾಡದಿರಿ.
ಪವಿತ್ರಕುರ್ಆನ್:ಅಧ್ಯಾಯ 2,ಸೂಕ್ತ 22


ಪ್ರಸಿದ್ಧ ವ್ಯಕ್ತಿಗಳು ಕಂಡಂತೆ

ಅಣ್ಣಾದೊರೈ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀ ಅಣ್ಣಾದೊರೈಯವರು ೧೯೫೭ ರ ಅಕ್ಟೋಬರ್ ೭ ರಂದು ಪ್ರವಾದಿಜೀವನ ಕುರಿತು ಒಂದು ಭಾಷಣ ಮಾಡಿದ್ದರು ಅದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ವೆನಿಸುತ್ತದೆ.ತನ್ನಭಾಷಣದಲ್ಲಿ ಅಣ್ಣಾದೊರೈಯವರು ಈ ರೀತಿ ಹೇಳಿದ್ದರು.

"ಇಸ್ಲಾಂ ಧರ್ಮದ ತತ್ವಗಳು ಮತ್ತು ವಿಶ್ವಾಸಗಳ ಅಗತ್ಯ ಆರನೇ ಶತಮಾನದಲ್ಲಿದ್ದಂತೆಯೇ ಇಂದಿನ ಜಗತ್ತಿಗೂ ಇದೆ. ಇಂದು ಜಗತ್ತು ಅನೇಕ ಸಿದ್ಧಾಂತಗಳ ಹುಡುಕಾಟದಲ್ಲಿ ಎಡವಿ ಬೀಳುತ್ತಿದೆ; ಎಲ್ಲಿಯೂ ಅದಕ್ಕೆ ತ್ರಪ್ತಿ ಲಭಿಸಿಲ್ಲ. ಇಸ್ಲಾಂ ಕೇವಲ ಒಂದು ಧರ್ಮವಲ್ಲ. ಅದು ಒಂದು ಜೀವನ ಸಿದ್ಧಾಂತ ಮತ್ತು ಅತ್ಯುತ್ತಮ ಜೀವನ ವ್ಯವಸ್ಥೆ ಯಾಗಿದೆ.ಈ ಜೀವನ ಕ್ರಮವನ್ನು ಲೋಕದ ಅನೇಕ ರಾಷ್ಟ್ರಗಳು ಪಾಲಿಸುತ್ತಿವೆ."

ಇಸ್ಲಾಮೀ ಜೀವನ ಸಿದ್ಧಾಂತ ಮತ್ತು ಇಸ್ಲಾಮೀ ಜೀವನ ವ್ಯವಸ್ಥೆಯನ್ನು ನಾವು ಹೊಗಳುವುದು ಏಕೆ? ಅಣ್ಣಾದೊರೈಯವರು ಹೇಳುತ್ತಾರೆ

"..ಇಸ್ಲಾಮೀ ಜೀವನ ಸಿದ್ಧಾಂತವು ಮನುಷ್ಯ ಮನಸ್ಸಿನಲ್ಲಿ ಏಳುವ ಎಲ್ಲ ಸಂಶಯಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರನೀಡುತ್ತದೆ ಎಂಬುದಕ್ಕಾಗಿ ಮಾತ್ರ." [೩]

ಇಸ್ಲಾಮಿನ ಇನ್ನೊಂದು ಗುಣ ವಿಶೇಷತೆಯೇನಂದರೆ ಯಾರು ಆ ಧರ್ಮವನ್ನು ಸ್ವೀಕರಿಸದನೋ ಅವನು ಕುಲ-ಗೋತ್ರಗಳ ಭೇದಭಾವವನ್ನು ಮರೆತೇ ಬಿಟ್ಟನು.ಮುದಗತ್ತೂರಿನಲ್ಲಿ (ತಮಿಳುನಾಡಿನ ಒಂದು ಊರು) ಪರಸ್ಪರ ಕತ್ತು ಕೊಯ್ಯುತ್ತಿದ್ದ ಜನರು ಇಸ್ಲಾಂ ಸ್ವೀಕರಿಸ ತೊಡಗಿದಾಗ ಇಸ್ಲಾಂ ಅವರನ್ನು ಅಣ್ಣ ತಮ್ಮಂದಿರಾಗಿ ಮಾರ್ಪಡಿಸಿತು.ಎಲ್ಲ ಭೇದಭಾವವೂ ಕೊನೆಗೊಂಡಿತು.ನೀಚ ಕುಲದವರು ನೀಚರಾಗಿ ಉಳಿಯಲಿಲ್ಲ.ಎಲ್ಲರೂ ಸನ್ಮಾನ್ಯರೂ ಗೌರವಾನ್ವಿತರೂ ಆಗಿ ಮಾರ್ಪಟ್ಟರು. ಎಲ್ಲರೂ ಸಮಾನ ಹಕ್ಕುಗಳನ್ನೂ ಹೊಂದಿದವರಾಗಿ ಪರಸ್ಪರ ಸಹೋದರತೆಯ ಬಂಧನದಲ್ಲಿ ಬಿಗಿಯಲ್ಪಟ್ಟಿತು.[೪]

ಗಾಂಧೀಜಿಯ

ಇದೇರೀತಿ ಮಹಾತ್ಮ ಗಾಂಧೀಜಿಯವರೊಮ್ಮೆ ಹೇಳಿದ್ದರು

"ಒಂದು ವೇಳೆ ನಾನು ಭಾರತದ ಸರ್ವಾಧಿ ಕಾರಿ ಯಾದರೆ ಒಂದು ಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯದ ಖಲೀಫರಾಗಿದ್ದ ಉಮರ್ ರಂತೆ ಆಡಳಿತ ನಡೆಸುತ್ತೇನೆ"

ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್(ರ) ರವರ ಆಡಳಿತಾವಧಿಯು ಎಲ್ಲ ವಿಧ ದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು'ಖಲೀಫ'ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು.

ಡಾ .ಹೆಚ್ ಮೈಕಲ್ ಹಾರ್ಟ್

ಡಾ .ಹೆಚ್ ಮೈಕಲ್ ಹಾರ್ಟ್ ಮನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ ಆದರೆ ಅವರೆಲ್ಲರ ಪೈಕಿ ಮುಹಮ್ಮದ್(ಸ)ರಿಗೆ ಮೊದಲ ಸ್ಥಾನ ಕೊಡಲು ಅವರು ನಿರ್ಬಂಧಿತರಾಗುತ್ತಾರೆ. ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂ ಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣ ಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದ ಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್(ಸ)ರಿಗೆ ಮಾತ್ರ ಸೇರಿದ್ದಾಗಿದೆ. ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್(ರ) ರವರ ಆಡಳಿತಾವಧಿಯು ಎಲ್ಲ ವಿಧ ದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು'ಖಲೀಫ'ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು.

ಡಾ .ಹೆಚ್ ಮೈಕಲ್ ಹಾರ್ಟ್

ಡಾ .ಹೆಚ್ ಮೈಕಲ್ ಹಾರ್ಟ್ ಮನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ ಆದರೆ ಅವರೆಲ್ಲರ ಪೈಕಿ ಮುಹಮ್ಮದ್(ಸ)ರಿಗೆ ಮೊದಲ ಸ್ಥಾನ ಕೊಡಲು ಅವರು ನಿರ್ಬಂಧಿತರಾಗುತ್ತಾರೆ. ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂ ಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣ ಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದ ಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್(ಸ)ರಿಗೆ ಮಾತ್ರ ಸೇರಿದ್ದಾಗಿದೆ.

ಬರ್ನಾಡ್ ಷಾ

ಪ್ರಸಿದ್ಧ ತತ್ವಜ್ಞಾನಿ ಹಾಗೂ ಖ್ಯಾತ ಚಿಂತಕನಾದ ಬರ್ನಾಡ್ ಷಾ ಹೇಳುವಂತೆ

"ಆಧುನಿಕ ಲೋಕದ ಎಲ್ಲ ವಿಧ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಅದಕ್ಕಿರುವ ಒಂದೇ ಒಂದು ಮಾರ್ಗ ಮುಹಮ್ಮದರಂತಹ ಓರ್ವ ವ್ಯಕ್ತಿಯನ್ನು ಸರ್ವಾಧಿಕಾರಿಯನ್ನಾಗಿ ಮಾಡುವುದಾಗಿದೆ."

ಅದೇ ಪ್ರಕಾರ


ಅದೇ ಪ್ರಕಾರ

"ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಒಂದು ಧರ್ಮವಿದ್ದರೆ ಅದು ಇಸ್ಲಾಂ ಮಾತ್ರ ವಾಗಿದೆ ."

ಎಂದೂ ಬರ್ನಾಡ್ ಷಾ ಹೇಳಿರುತ್ತಾನೆ.


ಉಲ್ಲೇಖಗಳು

  1. ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"(ನಾನು ಪ್ರೀತಿಸುವ ಇಸ್ಲಾಂ )ಪುಟ 39.ಅನುವಾದಕರು:ಇಬ್ರಾಹೀಂ ಸಯೀದ್
  2. ಸಯ್ಯದ್ ಅಬುಲ್ ಆಲಾಮೌದೂದಿಯವರ ಪುಸ್ತಕ'ಇಸ್ಲಾಂ ಧರ್ಮ' ಅನುವಾದಕರು:ಇಬ್ರಾಹೀಂ ಸಯೀದ್
  3. ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"(ನಾನು ಪ್ರೀತಿಸುವ ಇಸ್ಲಾಂ )ಪುಟ 38.ಅನುವಾದಕರು:ಇಬ್ರಾಹೀಂ ಸಯೀದ್
  4. ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ ಇಸ್ಲಾಂ"ನಾನು ಪ್ರೀತಿಸುವ ಇಸ್ಲಾಂ, ಪುಟ 40. ಅನುವಾದಕರು:ಇಬ್ರಾಹೀಂ ಸಯೀದ್

ಬಾಹ್ಯ ಕೊಂಡಿಗಳು

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA