ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧೯ ನೇ ಸಾಲು: ೧೯ ನೇ ಸಾಲು:
* ಆರಗಂ,
* ಆರಗಂ,
* ಅನಂತಯ್ಯ, ಮೊದಲಾದವರು.
* ಅನಂತಯ್ಯ, ಮೊದಲಾದವರು.
=ಕನ್ನಡಿಗರು ಅದರ ಮಹತ್ವವನ್ನು ಕಂಡುಕೊಳ್ಳಲಿಲ್ಲ==
==ಕನ್ನಡಿಗರು ಅದರ ಮಹತ್ವವನ್ನು ಕಂಡುಕೊಳ್ಳಲಿಲ್ಲ==
ಆದರೆ ಕೊರವಂಜಿಯನ್ನು ಕನ್ನಡದ ಓದುಗರು ಕಾಪಾಡಿಕೊಳ್ಳಲಿಲ್ಲ. ೧೯೬೬ರಲ್ಲಿ 'ಕೊರವಂಜಿ' ಕಾಡಿಗೆ ಹೋದಳು. ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, "[[ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ?]] [[ನೀನು ಇದ್ದದೇ ಗೊತಾಗ್ಲಿಲ್ಲವಲ್ಲೇ!]]" ಎಂದ. ಇದು ಆಗಿನ ಕಾಲದಲ್ಲಿ ಕನ್ನಡ ಪತ್ರಿಕೆಗಿದ್ದ ಪರಿಸ್ಥಿತಿ. ಕೊಂಡು ಓದುವ ಹವ್ಯಾಸ ಕನ್ನಡಿಗರಿಗೆ ಇರಲಿಲ್ಲ. ಆರ್ಥಿಕವಾಗಿ ಬಹಳ ಹಿಂದುಳಿದಿದ್ದರು. ಅವರೆಲ್ಲಾ ಪುಸ್ತಕಾಲಯ, ಅಥವಾ 'ಗ್ರಂಥ ಭಂಡಾರ'ಗಳಲ್ಲಿ ಸಿಕ್ಕ ಪುಸ್ತಕಗಳು ದೈನಿಕಗಳು ಮತ್ತು ಬೇರೆ ಪುಸ್ತಕಗಳನ್ನು ಓದುತ್ತಿದ್ದರು.
ಆದರೆ ಕೊರವಂಜಿಯನ್ನು ಕನ್ನಡದ ಓದುಗರು ಕಾಪಾಡಿಕೊಳ್ಳಲಿಲ್ಲ. ೧೯೬೬ರಲ್ಲಿ 'ಕೊರವಂಜಿ' ಕಾಡಿಗೆ ಹೋದಳು. ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, "[[ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ?]] [[ನೀನು ಇದ್ದದೇ ಗೊತಾಗ್ಲಿಲ್ಲವಲ್ಲೇ!]]" ಎಂದ. ಇದು ಆಗಿನ ಕಾಲದಲ್ಲಿ ಕನ್ನಡ ಪತ್ರಿಕೆಗಿದ್ದ ಪರಿಸ್ಥಿತಿ. ಕೊಂಡು ಓದುವ ಹವ್ಯಾಸ ಕನ್ನಡಿಗರಿಗೆ ಇರಲಿಲ್ಲ. ಆರ್ಥಿಕವಾಗಿ ಬಹಳ ಹಿಂದುಳಿದಿದ್ದರು. ಅವರೆಲ್ಲಾ ಪುಸ್ತಕಾಲಯ, ಅಥವಾ 'ಗ್ರಂಥ ಭಂಡಾರ'ಗಳಲ್ಲಿ ಸಿಕ್ಕ ಪುಸ್ತಕಗಳು ದೈನಿಕಗಳು ಮತ್ತು ಬೇರೆ ಪುಸ್ತಕಗಳನ್ನು ಓದುತ್ತಿದ್ದರು.
==ನಗೆ-ಗೆರೆ ಚಿತ್ರಗಳು==
==ನಗೆ-ಗೆರೆ ಚಿತ್ರಗಳು==

೧೭:೪೧, ೪ ಜುಲೈ ೨೦೧೧ ನಂತೆ ಪರಿಷ್ಕರಣೆ

ಚಿತ್ರ:Image-asp.jpg
'ಕೊರವಂಜಿ ಹಾಸ್ಯಪತ್ರಿಕೆ'
ಹೆಚ್.ಆರ್.ನಾಗೇಶರಾವ್ ಸಂಗ್ರಹದ ಜುಲೈ 1947ರ ಸಂಚಿಕೆ
ಹೆಚ್.ಆರ್.ನಾಗೇಶರಾವ್ ಸಂಗ್ರಹದ ಜುಲೈ 1947ರ ಸಂಚಿಕೆ

ಕೊರವಂಜಿಯು ಬಹುಶಃ ಕನ್ನಡದ ಮೊದಲ ಹಾಸ್ಯ ಪತ್ರಿಕೆ. ೧೯೪೨ರಲ್ಲಿ ಇದನ್ನು ಕನ್ನಡದ ಖ್ಯಾತ ಸಾಹಿತಿ "ರಾಶಿ," (ಡಾ ಎಮ್ ಶಿವರಾಂ) ಅವರು ಸ್ಥಾಪಿಸಿದರು.ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬ ಕಳಕಳಿಯ ಹಾಗೂ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಸಾಹಿತಿಗಳನ್ನು ಹಾಗೂ ಕಲಾವಿದರನ್ನು ಜೊತೆಗೂಡಿಸಿಕೊಂಡು 'ಕೊರವಂಜಿ ಪತ್ರಿಕೆಯನ್ನು ಹೊರ ತಂದರು. ಆ ಕಾಲದಲ್ಲಿ ಹಾಸ್ಯಪತ್ರಿಕೆಗಳು ಕನ್ನಡದಲ್ಲಿ ಇರಲೇ ಇಲ್ಲ. ಆ ಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ ಆರ್.ಕೆ.ಲಕ್ಷ್ಮಣ್. ಲಕ್ಷ್ಮಣ್,ಅಂದಿನ ದಿನಗಳಲ್ಲಿ ಹಿಂದೂ ಪತ್ರಿಕೆಗೆ ತಮ್ಮ ಅಣ್ಣ, ಆರ್. ಕೆ. ನಾರಾಯಣ್ ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.

'ಕೊರವಂಜಿ’ಯ ಕೆಲವು ಪ್ರಮುಖ ಬರಹಗಾರರು

ಪ್ರಮುಖ ಹಾಸ್ಯಚಿತ್ರ ಕಲಾವಿದರಲ್ಲಿ ಕೆಲವರು

  • ಆರ್ ಕೆ ಲಕ್ಷ್ಮಣ್,
  • ಎಸ್ ಕೆ ನಾಡಿಗ್,
  • ಪಿ ಆರ್ ತಿಪ್ಪೆಸ್ವಾಮಿ,
  • ಆರಗಂ,
  • ಅನಂತಯ್ಯ, ಮೊದಲಾದವರು.

ಕನ್ನಡಿಗರು ಅದರ ಮಹತ್ವವನ್ನು ಕಂಡುಕೊಳ್ಳಲಿಲ್ಲ

ಆದರೆ ಕೊರವಂಜಿಯನ್ನು ಕನ್ನಡದ ಓದುಗರು ಕಾಪಾಡಿಕೊಳ್ಳಲಿಲ್ಲ. ೧೯೬೬ರಲ್ಲಿ 'ಕೊರವಂಜಿ' ಕಾಡಿಗೆ ಹೋದಳು. ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, "ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ? ನೀನು ಇದ್ದದೇ ಗೊತಾಗ್ಲಿಲ್ಲವಲ್ಲೇ!" ಎಂದ. ಇದು ಆಗಿನ ಕಾಲದಲ್ಲಿ ಕನ್ನಡ ಪತ್ರಿಕೆಗಿದ್ದ ಪರಿಸ್ಥಿತಿ. ಕೊಂಡು ಓದುವ ಹವ್ಯಾಸ ಕನ್ನಡಿಗರಿಗೆ ಇರಲಿಲ್ಲ. ಆರ್ಥಿಕವಾಗಿ ಬಹಳ ಹಿಂದುಳಿದಿದ್ದರು. ಅವರೆಲ್ಲಾ ಪುಸ್ತಕಾಲಯ, ಅಥವಾ 'ಗ್ರಂಥ ಭಂಡಾರ'ಗಳಲ್ಲಿ ಸಿಕ್ಕ ಪುಸ್ತಕಗಳು ದೈನಿಕಗಳು ಮತ್ತು ಬೇರೆ ಪುಸ್ತಕಗಳನ್ನು ಓದುತ್ತಿದ್ದರು.

ನಗೆ-ಗೆರೆ ಚಿತ್ರಗಳು

೧೯೭೪ರಲ್ಲಿಯೇ ರಾಶಿಯವರೇ,"೨೫ ವರ್ಷಗಳ ಕಾಲ ಕೊರವಂಜಿಯಲ್ಲಿ ಕಾಣಿಸಿಕೊಂಡ ನಗೆ-ಗೆರೆ ಚಿತ್ರಗಳಲ್ಲಿ ಅಷ್ಟೋತ್ತರಗಳನ್ನು ಆಯ್ದು, ಕಾಲಕ್ಕೆ ತಕ್ಕಂತೆ ತುಸು ಒಗ್ಗರಣೆ ಹಾಕಿ...", ನಗೆ ಗೆರೆ ಚಿತ್ರಗಳು ಎಂಬ ಸಣ್ಣ ಪುಸ್ತಕವನ್ನು ಬೆಂಗಳೂರಿನ ರಾಜಾಜಿ ನಗರದ ವಿಜ್ಞಾನ ವಿಶ್ವ ಪ್ರಕಾಶನದ ಮೂಲಕ ಪ್ರಕಟಿಸಿದರು.

'ಅಪರಂಜಿ ಪತ್ರಿಕೆಯ ಉದಯ'

೧೯೯೯ರಲ್ಲಿ ರಾಶಿಯವರ ಪುತ್ರ, ಅಪರಂಜಿ ಶಿವು ಅವರು ಕೊರವಂಜಿಯ ಸಂಚಿಕೆಗಳಿಂದ ಲೇಖನಗಳನ್ನು ಆಯ್ದು ಬೆಸ್ಟ್ ಆಫ್ ಕೊರವಂಜಿ ಎಂಬ ಸಂಕಲನವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ 'ಅಂಕಿತ ಪುಸ್ತಕ ಪ್ರಕಾಶಕ'ರ ಮೂಲಕ ಪ್ರಕಟಿಸಿದ್ದು, ೨೦೦೮ರಲ್ಲಿ ಇದು ಎರಡನೇ ಮುದ್ರಣವನ್ನು ಕಂಡಿದೆ.

ಕುಹಕಿಡಿಗಳು

ರಾಜಕಾರಣಿಗಳೂ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನು ಹಾಸ್ಯದ ಮೊನಚಿನಲ್ಲಿ ವಿಶ್ಲೇಷಿಸುವ ಅಂಕಣಕ್ಕೆ ‘ಕೊರವಂಜಿ’ಯ ಮೊದಲ ಎರಡು ಪುಟಗಳು ಮೀಸಲಿದ್ದವು. ಟಿ.ಎಸ್.ರಾಮಚಂದ್ರರಾವ್, ಹೆಚ್.ಆರ್.ನಾಗೇಶರಾವ್ ನಿಯಮಿತವಾಗಿ ತಮ್ಮ ಬರಹಗಳನ್ನು ಈ ಅಂಕಣಕ್ಕೆ ಕಳುಹಿಸುತ್ತಿದ್ದರು.