ತುಮಕೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
No edit summary |
||
೩೪ ನೇ ಸಾಲು: | ೩೪ ನೇ ಸಾಲು: | ||
* ಹಾಸ್ಯ ಲೇಖಕ [[ಗೌಡನಕಟ್ಟೆ ತಿಮ್ಮಯ್ಯ]] |
* ಹಾಸ್ಯ ಲೇಖಕ [[ಗೌಡನಕಟ್ಟೆ ತಿಮ್ಮಯ್ಯ]] |
||
* ಚಲನಚಿತ್ರ ಸಾಹಿತಿ [[ಕುಣಿಗಲ್ ನಾಗಭೂಷಣ್]] |
* ಚಲನಚಿತ್ರ ಸಾಹಿತಿ [[ಕುಣಿಗಲ್ ನಾಗಭೂಷಣ್]] |
||
* ಚಲನಚಿತ್ರ ಸಾಹಿತಿ [[ಚಿ ಉದಯಶಂಕರ್]] |
* ಚಲನಚಿತ್ರ ಸಾಹಿತಿ [[ಚಿ. ಉದಯಶಂಕರ್]] |
||
* ಸಹ ನಟ [[ಕುಣಿಗಲ್ ರಾಮನಾಥ್]] |
* ಸಹ ನಟ [[ಕುಣಿಗಲ್ ರಾಮನಾಥ್]] |
||
* ತುಮಕೂರಿನ ಸುಪ್ರಸಿದ್ದ ಪ್ರಾಮಾಣಿಕ ವಕೀಲರಾದ ಕಾನೂನು ಭೀಷ್ಮ ಪಿತಾಮಹ ಹೆಚ್.ಎಸ್.ಶೇಷಾದ್ರಿ |
* ತುಮಕೂರಿನ ಸುಪ್ರಸಿದ್ದ ಪ್ರಾಮಾಣಿಕ ವಕೀಲರಾದ ಕಾನೂನು ಭೀಷ್ಮ ಪಿತಾಮಹ ಹೆಚ್.ಎಸ್.ಶೇಷಾದ್ರಿ |
೧೩:೦೪, ೪ ನವೆಂಬರ್ ೨೦೧೦ ನಂತೆ ಪರಿಷ್ಕರಣೆ
ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ.
ತುಮಕೂರು-ಬೆಂಗಳೂರಿನ ಹೆದ್ದಾರಿಯಲ್ಲಿರುವ ಕ್ಯಾತಸಂದ್ರದ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಸಿದ್ದಗಂಗಾ ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೨ ವರ್ಷದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ.
ಸಿದ್ಧಗಂಗಾ ಮಠದ ಸಮೀಪ ಇರುವ ಕ್ಯಾತ್ಸಂದ್ರ, ತಟ್ಟೆಇಡ್ಲಿ ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ ಸಿದ್ದರ ಬೆಟ್ಟವು ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಮತ್ತು ಕಗ್ಗೆರೆ ನಾಡಿನ ಪ್ರಮುಖ ವೀರಶೈವ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ತೆಂಗಿನ ಕೃಷಿಗೆ ಹೆಸರಾಗಿದ್ದು ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ದೇವರಾಯನ ದುರ್ಗ ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ.
ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು ಹೆಚ್.ಎಂ.ಟಿ, ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ.
ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. ತುಮಕೂರು ವಿಶ್ವವಿದ್ಯಾಲಯ ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ ಗುಬ್ಬಿಯವರು.
ತುಮಕೂರು ಜಿಲ್ಲೆಯ ತಾಲ್ಲೂಕುಗಳು
ತುಮಕೂರು ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳು/ಪ್ರಮುಖರು/ಸ್ಠಳಗಳು
- ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರರು
- ಶ್ರೀ ಸಿದ್ದಗಂಗಾ ಕ್ಷೇತ್ರದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮಿಗಳು
- ಟಿ ವಿ ಎನ್ ಮೂರ್ತಿ, ಭಾರತೀಯ ಜೇಸಿಸ್ ನ ೨೦೦೫ರ ರಾಷ್ಠ್ರೀಯ ಅಧ್ಯಕ್ಷರು ಹಾಗೂ ತುಮಕೂರು ಜಿಲ್ಲಾ ಗೌರವ ವನ್ಯಜೀವಿ ಪಾಲಕರು
- ಕರ್ನಾಟಕದಲ್ಲಿನ ನಾಟಕಗಳ ಹರಿಕಾರ, ಪ್ರಸಿದ್ಧ ಗುಬ್ಬಿ ಕಂಪನಿಯ ಸಂಸ್ಥಾಪಕ ಗುಬ್ಬಿ ವೀರಣ್ಣ
- ಬ೦ಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ(ಹುಟ್ಟಿದ್ದು ಸಿರಾ ತಾಲ್ಲೂಕಿನ ಬರಗೂರಿನಲ್ಲಿ)
- ಚಲನಚಿತ್ರ ನಟ, ಜಗ್ಗೇಶ್ (ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದವರು)
- ಕವಿ, ಸಾಹಿತಿ, ಶಿಕ್ಷಣತಜ್ಞ ಕವಿತಾಕೃಷ್ಣ
- ಪತ್ತೇದಾರಿ ಕಾದಂಬರಿಕಾರ ಕ್ಯಾತ್ಸಂದ್ರ ಚಂದ್ರಶೇಖರ್
- ಹಾಸ್ಯ ಲೇಖಕ ಗೌಡನಕಟ್ಟೆ ತಿಮ್ಮಯ್ಯ
- ಚಲನಚಿತ್ರ ಸಾಹಿತಿ ಕುಣಿಗಲ್ ನಾಗಭೂಷಣ್
- ಚಲನಚಿತ್ರ ಸಾಹಿತಿ ಚಿ. ಉದಯಶಂಕರ್
- ಸಹ ನಟ ಕುಣಿಗಲ್ ರಾಮನಾಥ್
- ತುಮಕೂರಿನ ಸುಪ್ರಸಿದ್ದ ಪ್ರಾಮಾಣಿಕ ವಕೀಲರಾದ ಕಾನೂನು ಭೀಷ್ಮ ಪಿತಾಮಹ ಹೆಚ್.ಎಸ್.ಶೇಷಾದ್ರಿ
- ತುಮಕೂರಿನ ರೆವೆನ್ಯೂ ಮತ್ತು ಸಿವಿಲ್ ದಾವೆಗಳ ತಜ್ನ ಪ್ರಾಮಾಣಿಕ ವಕೀಲರಾದ ಶ್ರೀಯುತ ಎಸ್.ಎಂ. ಸೋಮಶೇಖರಪ್ಪ
- ಎನ್.ಶ್ರೀಧರ ಬಾಬು, ವಕೀಲರು ಮತ್ತು ಹ್ಯೂಮನ್ ರೈಟ್ಸ್ ಅಂಡ್ ಅನ್ಟಿ ಕರಪ್ಶನ್ ಫೌಂಡೇಷನ್ ಅಧ್ಯಕ್ಷರು
- [[ರೈತರಪಾಳ್ಯ]] ಗ್ರಾಮವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ ಸರಕಾರದ ಯಾವುದೆ ಸವಲತ್ತುಗಳೀಲ್ಲದ ಒ೦ದು ಕುಗ್ರಾಮ.ಇದು ತುಮಕೂರಿನಿ೦ದ(ಮಹಾನಗರ ಪಾಲಿಕೆ)ಕೇವಲ ೧೬ ಹಾಗು ವಿಶ್ವ ಮಟ್ಟದ ಮಾನ್ಯತೆ ಪಡೆದ, ಸಿಲಿಖಾನ್ ಸಿಟಿ, ಐ ಟಿ ಸಿಟಿ, ಉದ್ಯಾನ ನಗರಿ, ಹಾಗು ಭಾರತದ 'A೧' ಮಾನ್ಯತೆ ಪಡೆದ ಬೆ೦ಗಳೂರಿನಿ೦ದ ಕೇವಲ ಕೇವಲ ಕೇವಲ ೬೫ ಕೀಲೊಮಿಟರ್ ದೂರದಲ್ಲಿದೆ.