ಕುವೆಂಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೪೩ ನೇ ಸಾಲು: ೪೩ ನೇ ಸಾಲು:
==''' ಸಾಹಿತ್ಯ''' ==
==''' ಸಾಹಿತ್ಯ''' ==
ಕುವೆಂಪುರವರು [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಕ್ಕೆ]] ಸಲ್ಲಿಸಿದ ಸೇವೆ ಅಪಾರ.
ಕುವೆಂಪುರವರು [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಕ್ಕೆ]] ಸಲ್ಲಿಸಿದ ಸೇವೆ ಅಪಾರ.
ಇವರು [[ಧಾರವಾಡ|ಧಾರವಾಡದಲ್ಲಿ]] ನಡೆದ [[೧೯೫೭]]ನೇ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷತೆ ವಹಿಸಿದ್ದರು. [[೧೯೫೫]] ರಲ್ಲಿ [[ಕೇಂದ್ರ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿಯನ್ನು ಪಡೆದರು. ಇವರ [[ಶ್ರೀ ರಾಮಾಯಣ ದರ್ಶನಂ]] ಕೃತಿಯು [[ಕನ್ನಡ]]ಕ್ಕೆ ಪ್ರಪ್ರಥಮ [[ಜ್ಞಾನಪೀಠ]] ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. [[ಭಾರತ ಸರ್ಕಾರ]]ದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು '[[ಜೈ ಭಾರತ ಜನನಿಯ ತನುಜಾತೆ[[...' [[ಕನ್ನಡ]] [[ನಾಡ ಗೀತೆ|ನಾಡ ಗೀತೆಯನ್ನು]] ರಚಿಸಿದ ಮೇರು ಕವಿ. ಇವರು ಬರೆದ 'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.
ಇವರು [[ಧಾರವಾಡ|ಧಾರವಾಡದಲ್ಲಿ]] ನಡೆದ [[೧೯೫೭]]ನೇ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷತೆ ವಹಿಸಿದ್ದರು. [[೧೯೫೫]] ರಲ್ಲಿ [[ಕೇಂದ್ರ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿಯನ್ನು ಪಡೆದರು. ಇವರ [[ಶ್ರೀ ರಾಮಾಯಣ ದರ್ಶನಂ]] ಕೃತಿಯು [[ಕನ್ನಡ]]ಕ್ಕೆ ಪ್ರಪ್ರಥಮ [[ಜ್ಞಾನಪೀಠ]] ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. [[ಭಾರತ ಸರ್ಕಾರ]]ದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು '[[ಜೈ ಭಾರತ ಜನನಿಯ ತನುಜಾತೆ]]...' [[ಕನ್ನಡ]] [[ನಾಡ ಗೀತೆ|ನಾಡ ಗೀತೆಯನ್ನು]] ರಚಿಸಿದ ಮೇರು ಕವಿ. ಇವರು ಬರೆದ 'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.


ಇವರ ವಿಶ್ವಮಾನವ ಸಂದೇಶ ಅತಿ ಪ್ರಸಿದ್ಡವಾಗಿದೆ.
ಇವರ ವಿಶ್ವಮಾನವ ಸಂದೇಶ ಅತಿ ಪ್ರಸಿದ್ಡವಾಗಿದೆ.

೧೩:೩೫, ೬ ಜನವರಿ ೨೦೧೦ ನಂತೆ ಪರಿಷ್ಕರಣೆ

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ*
ಶ್ರೀ ಪುಟ್ಟಪ್ಪನವರು
ಜನನ೧೯೦೪*
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಮರಣ೧೯೯೪
ಮೈಸೂರು
ಕಾವ್ಯನಾಮಕುವೆಂಪು
ವೃತ್ತಿಲೇಖಕ, ಪ್ರಾಧ್ಯಾಪಕ, ಕುಲಪತಿ*
ರಾಷ್ಟ್ರೀಯತೆಭಾರತೀಯ
ಕಾಲ(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿಕಥೆ, ಕವನ, ಕಾದಂಬರಿ
ವಿಷಯಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ
ಸಾಹಿತ್ಯ ಚಳುವಳಿಬಂಡಾಯ, ನವೋದಯ

ಪ್ರಭಾವಗಳು
  • ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ

www.kuvempu.com

ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪ - ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, 'ರಾಷ್ಟ್ರಕವಿ'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಥಮ ವ್ಯಕ್ತಿ. 'ವಿಶ್ವ ಮಾನವ'. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ.


ಜೀವನ

ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದರು.ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕುಕೀಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).

ರಾಷ್ಟ್ರಕವಿ ಡಾ.ಕು.ವೆಂ.ಪು ಅವರ ಕುರಿತ ಮತ್ತೊಂದು ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/kuvempu.html

ಸಂದೇಶ

ಓ ನನ್ನ ಚೇತನ, ಆಗು ನೀ ಅನಿಕೇತನ

ವಿಶ್ವ ಮಾನವ ಸಂದೇಶ

ಪ್ರತಿಯೊಂದು ಮಗುವೂ ಹುಟ್ಟುತ್ತಲೆ -ವಿಶ್ವ ಮಾನವ. ಬೆಳೆಯುತ್ತಾ ನಾವು ಅದನ್ನು ದೇಶ, ಭಾಷೆ, ಮತ, ಜಾತಿ,ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ”’ವಿಶ್ವಮಾನವ”’ನನ್ನಾಗಿ ಮಾಡುವುದೆ ವಿದ್ಯೆ, ಸಂಸ್ಕೃತಿ, ನಾಗರಿಕತೆಯ ಕರ್ತವ್ಯವಾಗಬೇಕು ಈ ದರ್ಶನವನ್ನೆ ’ವಿಶ್ವಮಾನವ ಗೀತೆ’ ಸಾರುತ್ತದೆ

ಸಾಹಿತ್ಯ

ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ ೧೯೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು 'ಜೈ ಭಾರತ ಜನನಿಯ ತನುಜಾತೆ...' ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. ಇವರು ಬರೆದ 'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.

ಇವರ ವಿಶ್ವಮಾನವ ಸಂದೇಶ ಅತಿ ಪ್ರಸಿದ್ಡವಾಗಿದೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ.

ಕೃತಿಗಳು

ಕಾದಂಬರಿ:

ನಾಟಕಗಳು:

ಚಿತ್ರ ಪ್ರಬಂಧ:

ವಿಚಾರ:

ಆತ್ಮ ಚರಿತ್ರೆ:

ಕಾವ್ಯಗಳು:

  • ಶ್ರೀ ರಾಮಾಯಣ ದರ್ಶನ೦
  • ಕೊಳಲು
  • ಅಗ್ನಿಹಂಸ
  • ಅನಿಕೇತನ
  • ಅನುತ್ತರಾ
  • ಇಕ್ಶುಗಂಗೋತ್ರಿ
  • ಕದರಡಕೆ
  • ಕಥನ ಕವನಗಳು
  • ಕಲಾಸುಂದರಿ
  • ಕಿಂಕಿಣಿ
  • ಕೃತ್ತಿಕೆ
  • ಜೇನಾಗುವ
  • ನವಿಲು
  • ಪಕ್ಷಿಕಾಶಿ
  • ಚಿತ್ರಾಂಗದಾ
  • ಪ್ರೇತಕ್ಯು
  • ಪ್ರೇಮಕಾಶ್ಮೀರ
  • ಮಂತ್ರಾಕ್ಷತೆ
  • ಷೋಡಶಿ
  • ಹಾಳೂರು
  • ಕೋಗಿಲೆ
  • ಪಾಂಚಜನ್ಯ
  • ಕುಟೀಚಕ

ಕಥಾಸಂಕಲನ:

  • ನನ್ನ ದೇವರು ಮತ್ತು ಇತರ ಕಥೆಗಳು

ವಿಮರ್ಶೆ:

  • ದ್ರೌಪದಿಯ ಶ್ರೀಮುಡಿ

ಜೀವನ ಚರಿತ್ರೆ:

  • ಸ್ವಾಮಿ ವಿವೇಕಾನಂದ
  • ಶ್ರೀ ರಾಮಕೃಷ್ಣ ಪರಮಹಂಸ

ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು

  • ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಯುಗದ ಕವಿ-ಲೇ: ಡಾ.ಕೆ.ಸಿ.ಶಿವಾರೆಡ್ಡಿ
  • ಹೀಗಿದ್ದರು ಕುವೆಂಪು - ಲೇ:ಪ್ರಭುಶಂಕರ
 ಬೆರಳ್ಗೆಕೊರಳ್ ನಾಟಕವುಸಹಚಲನಚಿತ್ರವಾಗಿದೆ.

ಪ್ರಶಸ್ತಿ ಪುರಸ್ಕಾರಗಳು

ಕುಪ್ಪಳಿಯಲ್ಲಿ ಕುವೆಂಪು ಮನೆ (ಈಗ ವಸ್ತು ಸಂಗ್ರಹಾಲಯವಾಗಿದೆ)

ಇತರೆ ಸಂಬಂಧಪಟ್ಟ ಪುಟಗಳು

ಹೊರಗಿನ ಸಂಪರ್ಕಗಳು

"https://kn.wikipedia.org/w/index.php?title=ಕುವೆಂಪು&oldid=129313" ಇಂದ ಪಡೆಯಲ್ಪಟ್ಟಿದೆ