ಬಿ.ಎಚ್.ಶ್ರೀಧರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
→‎ಸಂಪರ್ಕ ವಿಳಾಸ:: ವನ್ನು ತೆಗೆಯಲಾಗಿದೆ
೧೪೦ ನೇ ಸಾಲು: ೧೪೦ ನೇ ಸಾಲು:
• ಶಿರಸಿಯ ರಂಗಸಂಗ ಮತ್ತು ಕಲಾರಂಗದಿಂದ 1987
• ಶಿರಸಿಯ ರಂಗಸಂಗ ಮತ್ತು ಕಲಾರಂಗದಿಂದ 1987
• ಯುಗಪುರುಷ (ಕಿನ್ನಿಗೋಳಿಯಲ್ಲಿ) 1988 ಇತ್ಯಾದಿ.
• ಯುಗಪುರುಷ (ಕಿನ್ನಿಗೋಳಿಯಲ್ಲಿ) 1988 ಇತ್ಯಾದಿ.
=ಸಂಪರ್ಕ ವಿಳಾಸ:=
ರಾಜಶೇಖರ ಹೆಬ್ಬಾರ
714ಎ, ಸಾಹಿತ್ಯಮಂದಿರ
ವಿದ್ಯಾಗಿರಿ, ಹೊಸಮಾರುಕಟ್ಟೆ ಅಂಚೆ
ಟಿ.ಎಸ್.ಎಸ್. ಕಾಲನಿ
ಶಿರಸಿ – 581 402
ಮೊ: 9886838713


<br />


[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]]
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]]

೧೯:೩೦, ೧೬ ಫೆಬ್ರವರಿ ೨೦೨೧ ನಂತೆ ಪರಿಷ್ಕರಣೆ

ಬಿ. ಎಚ್. ಶ್ರೀಧರ
ಜನನ24 ಏಪ್ರಿಲ್ 1918
ಬಲಾವಡಿ,ಬಿಜೂರು,ದಕ್ಷಿಣ ಕನ್ನಡ,ಕರ್ನಾಟಕ,ಭಾರತ
ಮರಣ24 ಏಪ್ರಿಲ್ 1990
ವೃತ್ತಿಅಧ್ಯಾಪಕ, ಪ್ರಾಚಾರ್ಯ, ಲೇಖಕ, ಕವಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿವಿಮರ್ಶೆ,ಕವನ,ಇತಿಹಾಸ,ಸಂಸ್ಕೃತಿ

ಬಿ.ಎಚ್..ಶ್ರೀಧರ

ಬಿ.ಎಚ್..ಶ್ರೀಧರರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ ೨೪ ಏಪ್ರಿಲ್ ೧೯೧೮ ರಂದು ಜನಿಸಿದರು. [೧]

ಕವಿ ದ.ರಾ. ಬೇಂದ್ರೆಯವರಿಂದ 11-10-1971 ರಂದು ಸನ್ಮಾನ. ಎಡದಿಂದ-ಪ್ರತಿಭಾ (ಮಗಳು), ರಮಾದೇವಿ (ಪತ್ನಿ), ಬಿ.ಎಚ್. ಶ್ರೀಧರ, ಗಣೇಶ ಹೆಗಡೆ ಹಾಗೂ ಕವಿ ದ.ರಾ. ಬೇಂದ್ರೆ. ಸ್ಥಳ: ಸಿದ್ದಾಪುರ (ಉ.ಕ.)

ಜೀವನ

ತಂದೆ ಸೀತಾರಾಮ ಹೆಬ್ಬಾರ, ತಾಯಿ ನಾಗಮ್ಮ, ದೊಡ್ಡಪ್ಪಂದಿರು- ವೆಂಕಟರಮಣ ಹೆಬ್ಬಾರ, ಹಿರಿಯಣ್ಣ ಹೆಬ್ಬಾರ. ಪತ್ನಿ ರಮಾದೇವಿ (ಮದುವೆ- ಮೇ ೧೯೪೬). ಮಕ್ಕಳು- ಸುಮಾ, ಪ್ರತಿಭಾ, ವಿಜಯಾ, ರಾಜಶೇಖರ, ರಾಜೇಶ್ವರಿ. ಸಹೋದರಿಯರು – ರುಕ್ಮಿಣಿ, ಸುಶೀಲ, ಮತ್ತು ರಮಾ.[೧]

ಶಿಕ್ಷಣ

ಬಿಜೂರಿನ ಪ್ರಾಥಮಿಕ ಶಾಲೆಯಲ್ಲಿಯೂ, ಸೊರಬ ಹಾಗೂ ಸಾಗರದಲ್ಲಿ ಮಿಡಲ್ ಸ್ಕೂಲ್ ಶಿಕ್ಷಣ ಮುಗಿಸಿದರು. ಮುನಸಿಪಲ್ ಹೈಸ್ಕೂಲ್ ಸಾಗರದಲ್ಲಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಶಿವಮೊಗ್ಗದಲ್ಲಿ ಬರೆದರು.

ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಕಲಿತು ಬಿ.ಎ. (ಆನರ್ಸ್) ಮೈಸೂರಿನ ಮಹಾರಾಜ ಕಾಲೇಜಿನಲ್ಲಿ (೧೯೪೧) ರಲ್ಲಿ ರಾಜ್ಯಕ್ಕೆ ಮೊದಲಿಗನಾಗಿ ಉತ್ತೀರ್ಣರಾದರು. ಪೂರ್ಣ ಕೃಷ್ಣರಾವ್ ಬಂಗಾರದ ಪದಕ, ನವೀನಂ ರಾಮಾನುಜಾಚಾರ್ಯ ಬಂಗಾರದ ಪದಕ ಗಳಿಸಿದರು. ಅವರ 'ಕವಿಯೂ ವಿಜ್ಞಾನಿಯೂ' ಪ್ರಬಂದಕ್ಕೆ ಹೊನ್ನಸೆಟ್ಟಿ ಬಹುಮಾನ ಲಭಿಸಿತು.


ಇವರು ೫೫ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸಮ್ಮೇಳನದ ಪತ್ರಿಕಾ ಪ್ರದರ್ಶನದ ಉದ್ಘಾಟನೆ ಹಾಗೂ ಉ.ಕ. ಜಿಲ್ಲಾ ಮೂರನೇಯ ಜಿಲ್ಲಾ ಸಾಹಿತ್ಯ ಸಮ್ಮೇಳನದ(೧೯೭೪) ಅಧ್ಯಕ್ಷರಾಗಿದ್ದರು.

ವೃತ್ತಿ ಜೀವನ

    • ಪುಣೆಯ ಫೀಲ್ಡ್ ಕಂಟ್ರೋಲರ್ ಆಫ್ ಮಿಲಿಟರಿ ಎಕೌಂಟ್ಸ್ ಆಫೀಸಿನಲ್ಲಿ ಒಂದು ವರ್ಷ 'ಗುಮಾಸ್ತಗಿರಿ' (೧೯೪೨-೪೨)
    • ಭಟ್ಕಳದ ಇಸ್ಲಾಮಿಯ ಆಂಗ್ಲೋ ಉರ್ದು ಹೈಸ್ಕೂಲಿನಲ್ಲಿ ಸಹ ಶಿಕ್ಷಕರಾಗಿ ೪ ವರ್ಷ ಹಾಗೂ ಹೆಡ್ ಮಾಸ್ಟರ್ ಆಗಿ ಒಂದು ವರ್ಷ
    • 'ಕರ್ಮವೀರ' ವಾರಪತ್ರಿಕೆ (ಹುಬ್ಬಳ್ಳಿ)ಯ ಉಪಸಂಪಾದಕರಾಗಿ (೧೯೪೭-೫೧)
    • ಕುಮಟಾದ ಕೆನರಾ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ(೧೯೫೧-೬೨)
    • ಶಿರಸಿಯ ಎಂ.ಎಂ. ಕಲಾ-ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪ ಪ್ರಾಚಾರ್ಯರಾಗಿ (೧೯೬೨-೬೯) ಸಂಸ್ಕೃತ ಮತ್ತು ಕನ್ನಡ ಪ್ರಾಧ್ಯಾಪಕರಾಗಿ.
    • ಸಿದ್ದಾಪುರದ ಎಂ. ಜಿ. ಸಿ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ (೧೯೬೯-೭೬)
    • ಶಿರಸಿಯ ಮಾಡರ್ನ್ ಎಜ್ಯುಕೇಷನ್ ಸೊಸೈಟಿಯ ಆನರರಿ ಮೆನೇಜರ್ ರಾಗಿ ೧೫-೬-೧೯೮೨ ರವರೆಗೆ.
      ಕುಮಟಾ (ಉ.ಕ.)ದ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ, ಎಡದಿಂದ 3ನೇಯವರು ಬಿ.ಎಚ್.ಶ್ರೀಧರ 4ನೇಯವರು ಗೋಪಾಲಕೃಷ್ಣ ಅಡಿಗರು.

ಕೃತಿಗಳು

  • ಶ್ರೀಧರರ ಸಾಹಿತ್ಯದಲ್ಲಿ ಭಾವಗೀತೆಗಳು, ಪ್ರೌಢ ಪ್ರಬಂಧಗಳು ಹೆಚ್ಚು. ಕತೆ ನಾಟಕಗಳು ಕಡಿಮೆ. ಭಾವಗೀತೆಗಳಲ್ಲಿ ಸೌಂದರ್ಯ, ದೇಶಪ್ರೇಮ, ದೈವ ಪ್ರೇಮ, ಇಂದಿನ ಬಾಳಿನ ಆರ್ಥಿಕ, ಸಾಮಾಜಿಕ, ರಾಜಕೀಯ, ಬೌದ್ದಿಕ,ಭಾವನಾತ್ಮಕ ದುರವಸ್ಥೆಗಳ ಬಗೆಗಿರುವ ಸಂತಾಪವೂ ಭೂಮಿಕೆಯಾಗಿದೆ. ಪ್ರಬಂಧಗಳಲ್ಲಿ ರಸಭಾವ, ಶಿಕ್ಷಣ, ನೀತಿ ಉದ್ಯಮ, ತತ್ವಜ್ಞಾನ, ಕಲೆ , ರಾಜಕೀಯ, ಅರ್ಥವ್ಯವಸ್ಥೆ, ಕೃಷಿ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿವೇಚನೆ, ವಿಶ್ಲೇಷಣೆ, ವಿವರಣೆ, ವಿಮರ್ಶೆಗಳು ವ್ಯಕ್ತವಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ಶ್ರೀಧರರ ಸಾಹಿತ್ಯ ಕವನ-ಲೇಖನಗಳೇ ಹೆಚ್ಚು.

ಕವನ ಸಂಕಲನ

    • ಮೇಘನಾದ ( ೧೯೪೫)
    • ಕಿನ್ನರಗೀತ (೧೯೪೭)
    • ಅಮೃತಬಿಂದು ( ೧೯೪೯)
    • ಮಂಜುಗೀತ ( ೧೯೫೮)
    • ರಸಯಜ್ಞ (೧೯೬೪)
    • ಮುತ್ತು ರತ್ನ(1968 & 1987)
    • ನೌಕಾಗೀತ (1968)
    • ಕದಂಬ ವೈಭವ (1987)
    • ಕಂಟಕಾರಿ ಮಹಾಕಾವ್ಯ (೧೯೮೧)
    • ಜಾತವೇದ ( ೧೯೮೪)
    • ಅಮೃತಬಿಂದು – ಕ.ಸಾ.ಪ.ಸಂ. ಡಾ. ಎಂ.ಜಿ. ಹೆಗಡೆ (2007)

ಯಕ್ಷಗಾನ

• ಪಂಚರಾತ್ರ (1993) (ಸಮಗ್ರ ಸಾಹಿತ್ಯ ಸಂಪುಟದಲ್ಲಿ ಪ್ರಕಟಿತ)

ನಾಟಕ

ಪ್ರೊ. ಬಿ.ಎಚ್. ಶ್ರೀಧರ, ಪತ್ನಿ ರಮಾದೇವಿ ಮೊಮ್ಮಗ ಬ್ರಹ್ಮಾನಂದರೊಂದಿಗೆ.

• ಮಯೂರ ಶರ್ಮ (1988) • ಸೋಮಾರಿಗಳ ಕ್ಲಬ್ (1987) (ಸಮಗ್ರ ಸಾಹಿತ್ಯ ಸಂಪುಟದಲ್ಲಿ ಪ್ರಕಟಿತ)

ಆತ್ಮಕಥೆ

• ‘ಜೀವಯಾನ’ (1994)

ವಿಡಂಬನೆ

• ಬೇತಾಳಗಳ ಕುಣಿತ (1951) • ಭಾಷಣ ಭೈರವರ ಒಡ್ಡೋಲಗ (1966)

ವಿಮರ್ಶೆ

• ಬೇಂದ್ರೆ (1956) • ಹೊಸಗನ್ನಡ ಸಾಹಿತ್ಯ ಶೈಲಿ (1957) • ಕವೀಂದ್ರ ರವೀಂದ್ರ (೧೯೫೬) • ಕಾವ್ಯ ಸೂತ್ರ (೧೯೬೮) • ಪ್ರತಿಭೆ (೧೯೭೮) • ಸಂಸ್ಕೃತ ಕನ್ನಡ ಭಾಂಧವ್ಯ (೧೯೮೧) • ಪಸರಿಪ ಕನ್ನಡಕ್ಕೊಡಯನೀಗ ದರಾಂಕಿತ ಬೇಂದ್ರೆ (೧೯೮೭) • ರಮಣ (1975)

ವೈಚಾರಿಕ

• ಭಾರತೀಯ ನಾಗರಿಕತೆಗೆ ಮನುವಿನ ಕೊಡುಗೆ (೧೯೫೬) • ವಿದೇಶದ ತಿಳುವಳಿಕೆಗಳು ( ೧೯೫೬) • ಜ್ಞಾನಸೂತ್ರ (೧೯೬೯) • ಮಾನಸ ದರ್ಪಣ (೧೯೭೩) • ರಾಷ್ಟ್ರ ಸೂತ್ರ (೧೯೭೪) • ವಿಚಾರ ವಿಜಯ (1981) • ಭಾರತೀಯ ಮೂರ್ತಿ ಶಿಲ್ಪ (೧೯೮೮) • ಭಾವನಾ ಸಮನ್ವಯ (೨೦೦೯)

ಐತಿಹಾಸಿಕ

• ಬನವಾಸಿಯ ಕದಂಬರು (1966) • ಬನವಾಸಿಯ ಕೈಪಿಡಿ (೧೯೭೧) • ಕದಂಬ ಇತಿಹಾಸ (2004)

ಇತರೆ

• ಮಯೂರ ಶರ್ಮ(೧೯೭೧) • ಕೌಶಿಕ ರಾಮಾಯಣ (೧೯೭೨) • ರಮಣ ಮಹರ್ಷಿ (1969) • ಉ.ಕ. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು (1971) • ಸಾಹಿತ್ಯ ಚಿಂತನ (ಮಂಜುವಾಣಿ ಲೇಖನಗಳು) • ಶಿವಪುರಾಣ (ಮಂಜುವಾಣಿ ಲೇಖನಗಳು) • ವೇದರಹಸ್ಯ ಸಾರ (2003)

ಅನುವಾದ (ಇಂಗ್ಲೀಷನಿಂದ ಕನ್ನಡಕ್ಕೆ)

• ಭಾರತೀಯ ರಾಜ್ಯಧರ್ಮದ ಸತ್ವ ಮತ್ತು ಸ್ವರೂಪ – ಭಾಗ 1 (ಅರವಿಂದರ) (1955) • ಭಾರತೀಯ ವಾಙ್ಮಯ – ಭಾಗ 2 (ಅರವಿಂದರ) (1957) • ಟಿ.ಎಸ್. ಈಲಿಯಟ್ (೧೯೫೭) • ಸ್ವಾತಂತ್ರ್ಯ ಮೀಮಾಂಸೆ (1961) • ಮಾತೃಶ್ರೀ (ಅರವಿಂದೊ ಸೊಸೈಟಿ) (೧೯೭೫) • ವೇದ ರಹಸ್ಯ (ಅರವಿಂದರ) (2017) • ನೆಹರು ಉವಾಚ • ರಮಣ ಮಾರ್ಗ – ಭಾಗ 1 & 2

ಅನುವಾದ(ಸಂಸ್ಕೃತದಿಂದ ಕನ್ನಡಕ್ಕೆ)

• ಕಾಳಿದಾಸನ ಕಾವ್ಯ ಸೌರಭ (1962) • ಕುಂದಮಾಲೆ (1967) (ದಿಜ್ಮಾಂಗನ) • ರಾಜಧರ್ಮ (ಕ.ವಿ.ವಿ. ಧಾರವಾಡ) (1974) • ಶಿವಪುರಾಣ (ಮಂಜುವಾಣಿ ಲೇಖನಗಳು) (2018) (ಸಮಗ್ರ ಸಾಹಿತ್ಯ ಸಂ)

ಸಂಪಾದಿತ

• ನವರತ್ನ • ಬಾನುಮತಿ ಕಲ್ಯಾಣ – ಹಿರಿಯಣ್ಣ ಹೆಬ್ಬಾರ (1958) • ರಸೋವೈಸಃ - ಹಿರಿಯಣ್ಣ ಹೆಬ್ಬಾರ (1987)

ಬಿ.ಎಚ್. ಶ್ರೀಧರರ ಬಗ್ಗೆ ಪುಸ್ತಕಗಳು

• ಪ್ರೊ. ಬಿ.ಎಚ್. ಶ್ರೀಧರ – ರಾಜಶೇಖರ ಹೆಬ್ಬಾರ (ಕಿರಣ ಭಟ್ )(1992) • ಪ್ರೊ. ಬಿ.ಎಚ್. ಶ್ರೀಧರ – ರಾಜಶೇಖರ ಹೆಬ್ಬಾರ (2007) • ಶ್ರೀಧರ ಪ್ರಶಸ್ತಿ - ರಾಜಶೇಖರ ಹೆಬ್ಬಾರ, ಶ್ರೀಪಾದ ಭಟ್ (2010) • ಪ್ರತಿಭಾ ಶಿಖರ ಬಿ.ಎಚ್. ಶ್ರೀಧರ – ಡಾ.ಆರ್.ಪಿ. ಹೆಗಡೆ (2016) • ಬಿ.ಎಚ್. ಶ್ರೀಧರ – ಮೋಹನ ಬಿ. ಹೆಗಡೆ (2017)

ಸ್ಮರಣ ಸಂಚಿಕೆ

• ಶ್ರೀಧರ ಸ್ಮರಣೆ – ಸಂ. ಡಾ.ಎಂ.ಜಿ. ಹೆಗಡೆ (1999)

ಬಹುಮಾನಗಳು

ಕಾವ್ಯಸೂತ್ರ – ಕರ್ನಾಟಕ ರಾಜ್ಯ ಸಾಹಿತ್ಯ ಅಕೆಡೆಮಿ ಬಹುಮಾನ, ತೀ.ನಂ.ಶ್ರೀ. ಸ್ಮಾರಕ ಬಹುಮಾನ, ಮೈಸೂರು ವಿ.ವಿ. ಸ್ವರ್ಣಮಹೋತ್ಸವ ಬಹುಮಾನ. ಜ್ಞಾನಸೂತ್ರ - ಕರ್ನಾಟಕ ಸರ್ಕಾರದ ಅನುದಾನ. ರಾಷ್ಟ್ರಸೂತ್ರ - ಕರ್ನಾಟಕ ಸರ್ಕಾರದ ಅನುದಾನ, ಮೂರುಸಾವಿರ ಮಠದ ಪ್ರಶಸ್ತಿ. ಮಾನಸ ದರ್ಪಣ – ಮದ್ರಾಸ್ ಪಠ್ಯ ಪುಸ್ತಕ ಸಮಿತಿ ಬಹುಮಾನ. ನೌಕಾಗೀತ – ಭಾರತ ಸರಕಾರದ ರಕ್ಷಣಾಖಾತೆ ಪ್ರಶಸ್ತಿ. ರಸಯಜ್ಞ – ದೇವರಾಜ ಬಹಾದ್ದೂರ ಬಹುಮಾನ. ಮನುಸ್ಮೃತಿ – ಕ.ವಿ.ವಿ. ಪದವಿ ವರ್ಗದ ಪಠ್ಯ ಪುಸ್ತಕ.

ಬಿ.ಎಚ್,ಶ್ರೀಧರ ಸಮಗ್ರ ಸಾಹಿತ್ಯ

• ಕಾವ್ಯ (2013)[೨] • ವಿಮರ್ಶೆ (2013)[೩] • ವಿಚಾರ (2014) • ಸಂಕೀರ್ಣ (2017) • ಅನುವಾದ 1 (2018) • ಅನುವಾದ 2 (2019)

ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ

ಶ್ರೀಧರರು 24-4-1990 ರಂದು ನಿಧನರಾದ ನಂತರ ಅವರ ನೆನಪನ್ನು ಚಿರಂತನವಾಗಿರಿಸಲು ಅವರ ಕುಟುಂಬ ಹಾಗೂ ಮಿತ್ರರು 1990 ರಲ್ಲಿ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯನ್ನು ರಚಿಸಿ 1991 ರಿಂದ (30 ವರ್ಷಗಳು ಕಳೆದಿದೆ) ಇಲ್ಲಿಯವರೆಗೆ ಕನ್ನಡದ ಶ್ರೇಷ್ಠ ಸಾಹಿತಿಗಳ ಅತ್ಯುತ್ತಮ ಕೃತಿಗೆ ಹಾಗೂ ಜೀವಿತ ಸಾಧನೆಗೆ ಪ್ರಶಸ್ತಿ ನೀಡುತ್ತಾ ಪುರಸ್ಕಾರ ಸಮಾಂಭವನ್ನು ಶಿರಸಿಯಲ್ಲಿ ಬಿ.ಎಚ್. ಶ್ರೀಧರರ ಜನ್ಮದಿನದಂದು ಸಡೆಸುತ್ತಿದ್ದಾರೆ. ಸಮಿತಿಯಲ್ಲಿ ಡಾ. ಟಿ. ನಾರಾಯಣ ಭಟ್ (ಅಧ್ಯಕ್ಷರು), ರಾಜಶೇಖರ ಹೆಬ್ಬಾರ (ಕಾರ್ಯಾಧ್ಯಕ್ಷರು), ಮತ್ತು ಎಚ್. ಆರ್. ಅಮರನಾಥ, ಕಿರಣ ಭಟ್, ವಿಷ್ಣು ಹೆಗಡೆ, ಜಗದೀಶ ನಾ, ಸಿ.ಎನ್. ಹೆಗಡೆ, ಸಿ. ಆರ್. ಶಾನಭಾಗ, ಶ್ರೀಪಾದ ಭಟ್, ವಿಠಲ ಭಂಡಾರಿ, ಯಶವಂತ ನಾಯಕ, ಯು.ಎ. ಐತಾಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಎಂ. ಜಿ. ಹೆಗಡೆ, ಡಾ. ಶ್ರೀಪಾದ ಭಟ್, ರಾಜಶೇಖರ ಹೆಬ್ಬಾರ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸನ್ಮಾನಗಳು

• ವರಕವಿ ದ.ರಾ. ಬೇಂದ್ರೆಯವರಿಂದ ಸಿದ್ದಾಪುರ (ಉ.ಕ.)ಹಾಗೂ ಶಿವಮೊಗ್ಗದಲ್ಲಿ ಸನ್ಮಾನ(11-10-1971) • ಡಾ. ಶಿವರಾಮ ಕಾರಂತರಿಂದ ಸಿದ್ದಾಪುರ ಸಾಲಿಗ್ರಾಮಗಳಲ್ಲಿ 1970ರ ಹಾಗೂ 1988ರಲ್ಲಿ ಸನ್ಮಾನ • ಕುಂದಾಪುರದ ಜೇಸಿಯವರಿಂದ 1980 • ಶಿರಸಿ (ಉ.ಕ.) ರೊಟರಿ ಕ್ಲಬ್ ನಿಂದ 1987 • ಶಿರಸಿಯ ರಂಗಸಂಗ ಮತ್ತು ಕಲಾರಂಗದಿಂದ 1987 • ಯುಗಪುರುಷ (ಕಿನ್ನಿಗೋಳಿಯಲ್ಲಿ) 1988 ಇತ್ಯಾದಿ.

  1. ೧.೦ ೧.೧ ‍ಬಿ. ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ 1 ಕಾವ್ಯ
  2. ಬಿ. ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ 1 ಕಾವ್ಯ
  3. ಬಿ. ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ 2 ವಿಮರ್ಶೆ