ರಾ. ಸತ್ಯನಾರಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಸ ಎಂದೇ ಪ್ರಖ್ಯಾತರಾದ ರಾ. ಸತ್ಯನಾರಾಯಣ (೮ ಮೇ ೧೯೨೭ - ೧೭ ಜನವರಿ ೨೦೨೦) ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಬಹುಶ್ರುತ ವಿದ್ವಾಂಸ ಮತ್ತು ಸಂಪನ್ಮೂಲ ವ್ಯಕ್ತಿ. ಸಂಗೀತಶಾಸ್ತ್ರದ ಹಲವು ಕೃತಿಗಳ ಸಂಪಾದನೆ, ಅನುವಾದ ಮಾಡಿ ಆ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಸಂಗೀತಶಾಸ್ತ್ರ ಮಾತ್ರವಲ್ಲದೇ ಪ್ರಯೋಗ ನೃತ್ಯ, ಯೋಗ, ವ್ಯಾಕರಣ, ಮಂತ್ರತಂತ್ರ, ವೇದ-ವೇದಾಂತ, ಮೀಮಾಂಸೆ, ಛಂದಸ್ಸು, ಗಮಕ ಹೀಗೆ ಹಲವು ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ವೈಯಕ್ತಿಕ ಜೀವನ[೧][ಬದಲಾಯಿಸಿ]

  • ಹುಟ್ಟಿದ್ದು ೮ ಮೇ ೧೯೨೭, ಮೈಸೂರಿನಲ್ಲಿ. ಇವರದ್ದು ಸಂಗೀತಗಾರರ ಮನೆತನ. ತಂದೆ ರಾಮಯ್ಯ ಜಯಚಾಮರಾಜ ಒಡೆಯರ್ ಅವರ ಆಸ್ಥಾನದಲ್ಲಿ ಸಂಗೀತ ವಿದ್ವಾಂಸರಾಗಿದ್ದರು, ತಾಯಿ ವರಲಕ್ಷ್ಮಮ್ಮ. ಅಣ್ಣಂದಿರಾದ ಚಂದ್ರಶೇಖರಯ್ಯ ಮತ್ತು ಸೀತಾರಾಮ ಅವರು 'ಮೈಸೂರು ಸಹೋದರರು' ಎಂದೇ ಗಾಯನದಲ್ಲಿ ಹೆಸರುವಾಸಿ. ತಮ್ಮ ರಾ. ವಿಶ್ವೇಶ್ವರನ್ ವೈಣಿಕರು.
  • ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ. ಇನ್ ಆರ್ಗ್ಯಾನಿಕ್ ಕೆಮಿಸ್ಟ್ರಿ ಪ್ರೊಫೆಸರ್.
  • ಪುತ್ರ ರಾ. ನಂದಕುಮಾರ್ ಹಾಗೂ ಪುತ್ರಿ ರೋಹಿಣಿ ಸುಬ್ಬರತ್ನ.

ಕೃತಿಗಳು[ಬದಲಾಯಿಸಿ]

  • ಸಂಗೀತರತಾಕರ ಗ್ರಂಥದ ಸ್ವರಗತಾದ್ಯಾಯದ ಮೊದಲ ೨೭೬ ಶ್ಲೋಕಗಳ ಅನುವಾದ, ಟಿಪ್ಪಣಿ, ವಿವರಣೆ ಗ್ರಂತಥ
  • 'ನರ್ತನನಿರ್ಣಯಿ' ಗ್ರಂಥದ ಇಂಗ್ಲೀಶ್ ಅನುವಾದ, ವಿವರಣೆ (ಮೂರು ಸಂಪುಟ)
  • ಪುಂಡರೀಕಮಾಲಾ
  • ಚತುರ್ದಂಡಿ ಪ್ರಕಾಶಿಕಾ
  • ಶ್ರೀವಿದ್ಯಾಷೋಡಶಿಕಾ
  • ವೀಣಾಲಕ್ಷಣಾ ವಿಮರ್ಶೆ
  • ಕರ್ನಾಟಕ ಸಂಗೀತವಾಹಿನಿ
  • ಭರತನಾಟ್ಯ-ಎ ಕ್ರಿಟಿಕಲ್ ಸ್ಟಡಿ
  • ಬೃಹದ್ದೇಶೀ
  • ಮ್ಯೂಸಿಕ್ ಆಫ್ ಮಾಂಕ್ಸ್
  • ಮೈಸೂರಿನ ನಾಲ್ಕು ಸಂಗೀತರಾಜರು
  • ಏಳೆ
  • ಭಾರತೀಯ ಸಂಗೀತದಲ್ಲಿ ಪರಿಭಾಷಾ ಪ್ರಯೋಗ
  • ಕರ್ನಾಟಕ ಮ್ಯೂಸಿಕ್: ಆಸ್ ಎಸ್ತೆಟಿಕ್ ಫಾರ್ಮ್
  • ಸೃಷ್ಟಿ- ದಿ ಸ್ಕಾಲಿಕ್‌ ಫೌಂಡೇಷನ್‌
  • ಕರ್ನಾಟಕ ಸಂಗೀತ ಸುಳಾದಿಗಳು ಮತ್ತು ಊಗಭೋಗಾದಿಗಳು

ಫ್ರಶಸ್ತಿ ಗೌರವಗಳು[೨][ಬದಲಾಯಿಸಿ]

ನಿಧನ[ಬದಲಾಯಿಸಿ]

೧೭ಜನವರಿ ೨೦೨೦ರಂದು ಮೈಸೂರಿನ ತಮ್ಮ ನಿವಾಸದಲ್ಲಿ ಮರಣಹೊಂದಿದರು. ಅವರಿಗೆ ೯೩ ವರ್ಷ ವಯಸ್ಸಾಗಿತ್ತು.[೩]

ಉಲ್ಲೇಖಗಳು[ಬದಲಾಯಿಸಿ]

ಹೊರಸಂಪರ್ಕಕೊಂಡಿಗಳು[ಬದಲಾಯಿಸಿ]