ಮಿ. ಐರಾವತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿ. ಐರಾವತ
ಮಿ. ಐರಾವತ
ನಿರ್ದೇಶನಎ.ಪಿ ಅರ್ಜುನ್
ನಿರ್ಮಾಪಕಸಂದೇಶ್ ನಾಗರಾಜ್
ಚಿತ್ರಕಥೆಎ.ಪಿ ಅರ್ಜುನ್
ಕಥೆಎ.ಪಿ ಅರ್ಜುನ್
ಪಾತ್ರವರ್ಗದರ್ಶನ್_ತೂಗುದೀಪ್
ಊರ್ವಶಿ ರೌಟೆಲಾ
ಪ್ರಕಾಶ್_ರೈ
ಅನಂತ್_ನಾಗ್
ಸಿತಾರ
ಅವಿನಾಶ್_(ನಟ)
ಸಾಧು_ಕೋಕಿಲ
ಚಿಕ್ಕಣ್ಣ
ಬುಲೆಟ್ ಪ್ರಕಾಶ್
ಸಂಗೀತವಿ. ಹರಿಕೃಷ್ಣ
ಛಾಯಾಗ್ರಹಣಶೇಖರ್ ಚಂದ್ರ
ಸಂಕಲನದೀಪು ಎಸ್ ಕುಮಾರ್
ಸ್ಟುಡಿಯೋಸಂದೇಶ್ ಕಂಬೈನ್ಸ್
ವಿತರಕರುಸಂದೇಶ್ ಕಂಬೈನ್ಸ್
ಬಿಡುಗಡೆಯಾಗಿದ್ದು
  • 1 ಅಕ್ಟೋಬರ್ 2015 (2015-10-01)
ಅವಧಿ೧೫೬ ನಿಮಿಷ
ದೇಶಭಾರತ
ಭಾಷೆಕನ್ನಡ

ಮಿ.ಐರಾವತ ೨೦೧೫ ರ ಕನ್ನಡ ಕನ್ನಡ ಭಾಷೆಯ ಚಲನಚಿತ್ರ. ಎ.ಪಿ ಅರ್ಜುನ್ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ದರ್ಶನ್_ತೂಗುದೀಪ್ , ಊರ್ವಶಿ ರೌಟೆಲಾ ಮತ್ತು ಪ್ರಕಾಶ್_ರೈ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಅವರ ಮಗ ವಿನೀಶ್ ಸಹ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ.

ಈ ಚಿತ್ರವನ್ನು ಹಿಂದಿ ಭಾಷೆಯಲ್ಲಿ ವರ್ದಿವಾಲಾ: ದಿ ಐರನ್ ಮ್ಯಾನ್ ಎಂದು ಡಬ್ ಮಾಡಲಾಗಿದೆ.

ಕಥೆ[ಬದಲಾಯಿಸಿ]

ಕರ್ನಾಟಕದ ಮುಖ್ಯಮಂತ್ರಿ ಮತ್ತು ಕರ್ನಾಟಕದ ಪೋಲೀಸ್ ಇಲಾಖೆಯ ಡಿ.ಜಿ.ಪಿ ಇಬ್ಬರೂ ವಿಠ್ಠಲ ಗೌಡರಅನಂತ್_ನಾಗ್ ಮನೆಗೆ ಬಂದು,ಅವರ ಮೊಮ್ಮಗ ಐರಾವತ ದರ್ಶನ್_ತೂಗುದೀಪ್ನನ್ನು ಸಾಧ್ಯವಾದಷ್ಟು ಬೇಗ ಕರ್ತವ್ಯಕ್ಕೆ ಕಳುಹಿಸಲು ಮನವಿ ಮಾಡುತ್ತಾರೆ. ವಿಠ್ಠಲ ಗೌಡ ಷರತ್ತುಬದ್ಧ ಒಪ್ಪಿಗೆ ನೀಡುತ್ತಾರೆ. ಹೊರಗೆ ನಿಂತಿದ್ದ, ವರದಿಗಾರ ತನ್ನ ಉನ್ನತ-ವರದಿಗಾರನಿಗೆ ಮುಖ್ಯಮಂತ್ರಿ ಸ್ವತಃ ಬರುವ ಮಟ್ಟಿಗೆ ಇರುವ ವಿಷಯಕ್ಕೆ ಕಾರಣವನ್ನು ಕೇಳುತ್ತಾನೆ. ಉನ್ನತ-ವರದಿಗಾರ ಈ ಕಥೆಯನ್ನು ವಿವರಿಸುತ್ತಾರೆ. 6 ತಿಂಗಳ ಹಿಂದೆ, ಐರಾವತ ಎ.ಸಿ.ಪಿ ಆಗಿ ಕರ್ನಾಟಕದ ಪೋಲೀಸ್ ಇಲಾಖೆಗೆ ಸೇರಿಕೊಂಡರು. ಬೆಂಗಳೂರು ನಗರದಲ್ಲಿ ತುಂಬಿದ ಅಪರಾಧಕ್ಕೆ, ಐರಾವತ ಅವರು ದೊಡ್ಡ ಮಟ್ಟದ ಬದಲಾವಣೆಯನ್ನು ತಂದರು ಮತ್ತು ಕ್ರಿಮಿನಲ್ ಚಟುವಟಿಕೆಯ ಎಲ್ಲ ಚಿಹ್ನೆಗಳನ್ನು ನಿಧಾನವಾಗಿ ನಿರ್ಮೂಲನೆ ಮಾಡುತ್ತಾರೆ. ಉನ್ನತ ಅಧಿಕಾರಿಗಳನ್ನು ಸಂಪರ್ಕಿಸದೆ ಅವರು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಹೊಸ ನಿಯಮಗಳನ್ನು ತರುತ್ತಾನೆ ಮತ್ತು ನಗರದ ಆವಶ್ಯಕತೆಗಳನ್ನು ಪೂರೈಸಲು, ತನ್ನ ಸ್ವಂತ ಹಣ ಖರ್ಚು ಮಾಡುತ್ತಾನೆ. ಈ ನಿಯಮಗಳು ಪಟ್ಟಬಧ್ರ ಹಿತಾಸಕ್ತಿಗಳಿಗೆ ನಷ್ಟ ಉಂಟುಮಾಡುತ್ತವೆ.ಎಲ್ಲರಿಗಿಂತ ಹೆಚ್ಚಾಗಿ ಪ್ರತಾಪ್ ಕಾಳೆ ಪ್ರಕಾಶ್_ರೈ ಐರಾವತನೊಂದಿಗೆ ದ್ವೇಷ ಕಟ್ಟಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ವರದಿಗಾರ್ತಿ ಪ್ರಿಯಾ ( ಉರ್ವಾಶಿ ರೌಟೆಲಾ ) ಐರಾವತನ ಪ್ರೇಮದಲ್ಲಿ ಬೀಳುತ್ತಾಳೆ. ಪ್ರಿಯಾಗೆ, ಐರಾವತ ಹಿಂದೆ ತನ್ನನ್ನು ಅಪಘಾತದಿಂದ ಉಳಿಸಿದವ ಎಂದು ಅರಿವಾಗುತ್ತದೆ. ಪ್ರಿಯಾ ತನ್ನ ಪ್ರೇಮವನ್ನು ನಿವೇದಿಸಿಕೊಂಡರೂ ಸಹಿತ, ಐರಾವತ ತನ್ನ ಭಾವನೆಗಳನ್ನು ವಿನಿಮಯ ಮಾಡುವುದಿಲ್ಲ.
ಸರ್ಕಾರಿ ಸಮಾರಂಭದ ಸಿದ್ಧತೆಯ ಸಂದರ್ಭದಲ್ಲಿ, ಐರಾವತನು ನಕಲಿ ಅಧಿಕಾರಿ ಎಂದು ತಿಳಿದುರುತ್ತದೆ. ಆ ಕಾರಣದಿಂದ ಆತನನ್ನು ಬಲದಿಂದ ಬಂಧಿಸಲಾಗುತ್ತದೆ. ಕೋರ್ಟ್ ನಲ್ಲಿ ಐರಾವತನು ತನ್ನ ಕಥೆಯನ್ನು ಬಹಿರಂಗಪಡಿಸುತ್ತಾನೆ.
ರೈತರ ಸಮಸ್ಯೆಗಳನ್ನು ಪರಿಹರಿಸಲು ಐರಾವತ ಬೆಂಗಳೂರಿಗೆ ಹೋಗಿದ್ದ ರೈತ. ಅವರ ಸಹೋದರಿ ಚಾರು ( ಸಿಂಧು ಲೋಕನಾಥ್ ) ಕೆಲವು ಕಿಡೀಗೇಡಿಗಳಿಂದ ಅತ್ಯಾಚಾರಕ್ಕೊಳಗಾಗುತ್ತಾಳೆ. ಪೋಲೀಸ್ ಠಾಣೆಯಲ್ಲಿ ಆರಕ್ಷಕ ಮತ್ತು ಇತರ ಸಿಬ್ಬಂದಿ ಚಾರುಳ ದೂರು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಮತ್ತು ಚಾರುಳನ್ನು ಲೇವಡಿ ಮತ್ತು ಮಾನಸಿಕವಾಗಿ ಹಿಂಸೆಗೆ ಒಳಪಡಿಸುತ್ತಾರೆ. ಇದನ್ನು ಸಹಿಸದ ಐರಾವತನ ಸ್ನೇಹಿತ ಪ್ರಕಾಶ ( ಬುಲೆಟ್ ಪ್ರಕಾಶ್ ) ಆರಕ್ಷಕನನ್ನು ಕೊಲ್ಲುತ್ತಾನೆ. ಪೋಲೀಸರು ಪ್ರಕಾಶನನ್ನು ದಾರುಣವಾಗಿ ಹತ್ಯೆಗೈಯ್ಯುತ್ತಾರೆ. ಐರಾವತ ಪ್ರತೀಕಾರದ ಪ್ರತಿಜ್ಞೆ ಮಾಡುತ್ತಾನೆ. ವಾಮಮಾರ್ಗದಿಂದ, ಐರಾವತನು ಐ.ಪಿ.ಎಸ್ ಅಧಿಕಾರಿಯಾಗಿ ನೇಮಕಗೊಂಡಂತೆ ಆದೇಶವನ್ನು ತಂದು ನೇಮಕಗೊಂಡು ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಕಾನೂನು-ಸವ್ಯವಸ್ಥೆಯನ್ನು ನೆಲೆಗೊಳಿಸಲು ಪ್ರಯತ್ನ ಪಟ್ಟುದಾಗಿ ನ್ಯಾಯಾಲಯಕ್ಕೆ ತಿಳಿಸುತ್ತಾನೆ . ನ್ಯಾಯಾಲಯವು ಐರಾವತವನ್ನು ಮುಗ್ಧ ಎಂದು ಘೋಷಿಸಿ ತನ್ನ ಗ್ರಾಮಕ್ಕೆ ಕಳುಹಿಸುತ್ತದೆ. ಜನರ ಕೋರಿಕೆಯ ಮೇರೆಗೆ, ಐರಾವತ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯುತ್ತಾರೆ ಮತ್ತು ಎಸಿಪಿ ಆಗಿ ನೇಮಕಗೊಳ್ಳುತ್ತಾನೆ. ಈಗ ಕಥೆ ಪ್ರಸ್ತುತಕ್ಕೆ ಹಿಂತಿರುಗುತ್ತದೆ. ವರದಿಗಾರನು ಐರಾವತದ ಮುಂದಿನ ನಡೆಯ ಬಗ್ಗೆ ಕುತೂಹಲದಿಂದ ಕೂಡಿರುತ್ತಾನೆ.
ಐರಾವತನು ನಿಧಾನವಾಗಿ ಪ್ರತಾಪ್ ಕಾಳೆಯ ಕತ್ತಲೆ-ಸಾಮ್ರಾಜ್ಯವನ್ನು ಬಗ್ಗುಬಡಿಯಲು ಕ್ರಮ ಆರಂಭಿಸುತ್ತಾನೆ. ಪ್ರಿಯಾಳ ಪ್ರೀತಿಯನ್ನು ಅವನು ಸ್ವೀಕರಿಸುತ್ತಾನೆ. ಕೊನೆಯಲ್ಲಿ, ಪ್ರತಾಪ್ ಕಾಳೆ ಪ್ರತಿ ಪೊಲೀಸ್ ಅಧಿಕಾರಿಯ ಹೆಣ್ಣುಮಕ್ಕಳನ್ನು ಜೊತೆಗೆ ಪ್ರಿಯಾಳನ್ನು ಅಪಹರಿಸುತ್ತಾನೆ. ಎಲ್ಲರನ್ನೂ ವಿದೇಶದಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಲು ಉದ್ದೇಶಿಸುತ್ತಾನೆ. ಐರಾವತನು ಸಮಯಕ್ಕೆ ಸರಿಯಾಗಿ ದಾಳಿ ಮಾಡಿ ಎಲ್ಲ ಹೆಣ್ಣುಮಕ್ಕಳನ್ನೂ ಉಳಿಸುತ್ತಾನೆ ಮತ್ತು ಪ್ರತಾಪ್ ಕಾಳೆಯನ್ನು ಕೊಲ್ಲುತ್ತಾನೆ. ಅಭಿನಂದನಾ ಸಮಾರಂಭದಲ್ಲಿ, ಐರಾವತನು ರಾಜೀನಾಮೆ ಸಲ್ಲಿಸುತ್ತಾನೆ. ಅಪರಾಧಗಳು ಮತ್ತೆ ಹೆಚ್ಚಾದಲ್ಲಿ ತಾನು ಮತ್ತೆ ಪೋಲೀಸ್ ಇಲಾಖೆಗೆ ಮರಳುವುದಾಗಿ ಹೇಳುತ್ತಾನೆ. ಅಂತ್ಯದಲ್ಲಿ ಐರಾವತ ಮತ್ತು ಆತನ ಮಗ (ವಿನೀಶ್ ದರ್ಶನ್) ಪರದೆಗೆ ನಮಸ್ಕರಿಸುತ್ತಾರೆ.

ತಾರಾಗಣ[ಬದಲಾಯಿಸಿ]

ಚಿತ್ರೀಕರಣ[ಬದಲಾಯಿಸಿ]

ಫೆಬ್ರವರಿಯ ೨೦೧೩ರ ಮಧ್ಯಭಾಗದಲ್ಲಿ, ರಾಜಕಾರಣಿ ಸಂದೇಶ್ ನಾಗರಾಜ್ ತಾವು ದರ್ಶನ್ ನಟಿಸಿರುವ ಚಿತ್ರವೊಂದನ್ನು ನಿರ್ಮಿಸುವುದಾಗಿ ಘೋಷಿಸಿದರು. ಅಂಬಾರಿ ಮತ್ತು ಅದ್ಧೂರಿ ಚಿತ್ರಗಳಲ್ಲಿ ನಿರ್ದೇಶಕ ಎ.ಪಿ ಅರ್ಜುನ್ ಅವರ ಕೆಲಸವನ್ನು ದರ್ಶನ್ ಹೊಗಳಿದ್ದರು. ತಮ್ಮ ತಂಗಿಗಾಗಿ ಚಿತ್ರಕ್ಕಾಗಿ ಸಾಹಿತ್ಯವನ್ನು ಬರೆದಿದ್ದ ಎ.ಪಿ ಅರ್ಜುನ್ ರನ್ನು ತಮ್ಮ ಚಿತ್ರಕ್ಕೆ ನಿರ್ದೇಶನ ಮಾಡಲು ಕೇಳಿಕೊಂಡರು. ದರ್ಶನ್ ಪೋಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಕಥೆಯ ಸ್ಕ್ರಿಪ್ಟಿಂಗ್ ಆರಂಭದ ಹಂತದಲ್ಲಿ ಇದೆ ಎಂದು ಬಹಿರಂಗವಾಯಿತು.

ಈ ಚಲನಚಿತ್ರವು ಫೆಬ್ರವರಿ ೧೬, ೨೦೧೩ ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ನಟ ವಿ. ರವಿಚಂದ್ರನ್ ಉಪಸ್ಥಿತಿಯಲ್ಲಿ ಪ್ರಾರಂಭವಾಯಿತು. ಶೂಟಿಂಗ್ ಐರಾವತ ಎಂದು ಹೆಸರಿಸಲ್ಪಟ್ಟ ಈ ಚಿತ್ರವು ನಿರ್ಮಾಪಕರಿಂದ ಅದ್ದೂರಿಯಾಗಿ ನಿರ್ಮಾಣವಾಗಲಿದೆ ಎಂದು ವರದಿಯಾಯಿತು. ಮತ್ತು ದರ್ಶನ್ ಅವರ ಚಲನಚಿತ್ರಗಳಲ್ಲಿ ಸಾಮಾನ್ಯವಾದಂತೆ ಶೂಟಿಂಗ್ ಮೈಸೂರು ನಗರದಲ್ಲಿ ನಡೆಯುವುದಿಲ್ಲ ಎಂದು ವರದಿಯಾಯಿತು. ನಿರ್ದೇಶಕ ಅರ್ಜುನ್ ಮತ್ತು ನಟ ದರ್ಶನ್ ಅವರ ಅನಿಗದಿತ ವೇಳಾಪಟ್ಟಿಯ ಕಾರಣದಿಂದ ಚಿತ್ರೀಕರಣ ನಿಧಾನಗತಿಯ ವೇಗಯಲ್ಲಿ ನಡೆಯಿತು.[೧]


ತಾರಾಗಣ[ಬದಲಾಯಿಸಿ]

ನಟಿ ಎರಿಕಾ ಫೆರ್ನಾಂಡಿಸ್ ಆರಂಭದಲ್ಲಿ ದರ್ಶನ್ ಎದುರು ಪ್ರಮುಖ ಪಾತ್ರವನ್ನು ವಹಿಸಲು ಆಯ್ಕೆಯಾದರು. ಆಕೆಯ ಮೊದಲ ಕನ್ನಡ ಚಲನಚಿತ್ರ ನಿನ್ನಿಂದಲೇ ಬಿಡುಗಡೆಯ ಮುಂಚೆಯೇ ಅವರು ಈ ಪಾತ್ರವನ್ನು ಪಡೆದುಕೊಂಡರು. [೨] ಅವರು ಈ ಚಿತ್ರ ಮತ್ತು ಗಣೇಶ್ ನಟನೆಯ ಬುಗುರಿ, ಎರಡನ್ನೂ ಏಕಕಾಲದಲ್ಲಿ ಮಾಡುವುದಾಗಿ ಹೇಳಿದ್ದರು .[೩] ಆದಾಗ್ಯೂ, ತೂಕ ಇಳಿಕೆಯ ವ್ಯತ್ಯಾಸಗಳ ಕಾರಣದಿಂದಾಗಿ, ಎರಿಕಾ ಚಲನಚಿತ್ರದಿಂದ ಹೊರಬಿದ್ದರು .ರಚಿತಾ_ರಾಮ್ ತನ್ನ ಪಾತ್ರವನ್ನು ಅನೂರ್ಜಿತ ಎಂದು ಗುರುತಿಸಿದರೆಂದು ವರದಿಗಳು ಸೂಚಿಸಿವೆ. ಅಂತಿಮವಾಗಿ, ಅರ್ಜುನ್ ಅವರು Google ಮೂಲಕ ಉರ್ವಶಿ ರೌಟೆಲಾ ಅವರನ್ನು ಅಂತಿಮಗೊಳಿಸಿದರು. ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದ ಉರ್ವಶಿ ರೌಟೆಲಾ ಅವರ ಚಿತ್ರಗಳನ್ನು ಕಂಡುಕೊಂಡರು. ಆಕೆಯ ಸ್ನಿಗ್ಧ ಸೌಂದರ್ಯ ಮತ್ತು ದರ್ಶನ್ ಎದುರು ಬೇಕಾದ ಎತ್ತರದಿಂದಾಗಿ ಆಕೆ ಸೂಕ್ತ ಆಯ್ಕೆ ಎನಿಸಿದರು. [೪]

ಬಹುಭಾಷಾ ನಟ ಪ್ರಕಾಶ್ ರಾಜ್ ದರ್ಶನ್ ಎದುರು ಖಳನಟನಾಗಲು ಸಹಿ ಹಾಕಿದರು.[೫] ಅನಂತನಾಗ್ ಮತ್ತು ಸಿತಾರ ದರ್ಶನ್ ಪಾತ್ರಕ್ಕೆ ಪೋಷಕರ ಪಾತ್ರವನ್ನು ವಹಿಸುತ್ತಿದ್ದಾರೆಂದು ವರದಿಯಾಗಿದೆ. ಜೊತೆಗೆ ಬುಲೆಟ್ ಪ್ರಕಾಶ್ ಸಹ ಪ್ರಮುಖ ಪೋಷಕ ಪಾತ್ರಕ್ಕಾಗಿ ಒಪ್ಪಿದ್ದಾರೆ ಎಂದು ವರದಿಯಾಯಿತು. ೨೦೧೫ ರ ಆರಂಭದಲ್ಲಿ, ದರ್ಶನ್ ಅವರ ಏಳು ವರ್ಷದ ಮಗ ವಿನೀಶ್ ತನ್ನ ತಂದೆಯೊಂದಿಗೆ ಸಣ್ಣ ಪಾತ್ರದ ಪಾತ್ರದಲ್ಲಿ ನಟಿಸಿದ್ದಾನೆ ಎಂದು ವರದಿಯಾಗಿದೆ.[೬]

ಸಂಗೀತ[ಬದಲಾಯಿಸಿ]

ಧ್ವನಿಪಥವನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ. ಮತ್ತು ಆಗಸ್ಟ್ ೧೬, ೨೦೧೫ ರಂದು, ಚಲನಚಿತ್ರದ ಧ್ವನಿಸುರುಳಿಯನ್ನು ಬಿಡೂಗಡೆಗೊಳಿಸಲಾಯಿತು.[೭]

Track listing[ಬದಲಾಯಿಸಿ]

ಸಂ.ಹಾಡುಸಾಹಿತ್ಯಗಾಯಕ (ರು)ಸಮಯ
1."ಮಿ._ಐರಾವತ"ಎಪಿ ಆರ್ಜುನ್ಕೆ.ಜಿ ರಂಜೀತ್, ಸಂತೋಷ್ ವೆಂಕಿ0೪:೩೧
2."ದೇರ್ ವಾಸ್ ಎ ಅಜ್ಜಿ"ಹೇಮಂತ್ ಕುಮಾರ್ಹೇಮಂತ್ ಕುಮಾರ್೦೪:೨೨
3."ಕಾ ತಲೆಕಟ್ಟು"ಯೋಗರಾಜ್ ಭಟ್ಇಂದು ನಾಗರಾಜ್೦೪:೨೪
4."ಗುಡಿ ಮೇಲೆ"ಎಪಿ ಆರ್ಜುನ್ಶಶಾಂಕ್ ಶೇಷಗಿರಿ, ಸುನಿತಾ ಗೋಪರಾಜು೦೪"೦೧

ಉಲ್ಲೇಖಗಳು[ಬದಲಾಯಿಸಿ]

  1. ವಿಳಂಬ
  2. ಎರಿಕಾ
  3. ಎರಿಕಾ ವಿಳಂಬ
  4. ಊರ್ವಶಿ
  5. ರೈ
  6. ವಿನೀಶ್
  7. "ಸುರುಳಿ". Archived from the original on 2015-09-26. Retrieved 2018-05-27.

ಕೊಂಡಿಗಳು[ಬದಲಾಯಿಸಿ]