ಮನೋರಮಾ ಎಂ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನೋರಮಾ ಎಂ ಭಟ್ ಇವರು ಕನ್ನಡದ ಲೇಖಕಿ.[೧] ನೋಬೆಲ್ ಪ್ರಶಸ್ತಿ ವಿಜೇತ ಅರ್ನೆಸ್ ಹೇಮಿಂಗ್ವೇಯ ಕಾದಂಬರಿ 'ಓಲ್ದ್ ಮ್ಯಾನ್ ಆಂಡ್ ದ ಸಿ'-ಇದರ ರೇಡಿಯೋ ನಾಟಕವನ್ನು ಕೇಳಿದ ಮನೋರಮಾರಿಗೆ ಅದೇ ಬಾನುಲಿ ಮಾಧ್ಯಮಕ್ಕೆ ಪ್ರವೇಶಿಸಲು ಈ ನಾಟಕ ಪ್ರೇರಣೆಯನ್ನೊದಗಿಸಿತು. ಮುಂದಕ್ಕೆ ಸ್ವಯಂ ಒಬ್ಬ ಕಲಾವಿದೆಯಾಗಿ,ನಿರ್ದೇಶಕಿಯಾಗಿ,ರಂಗಕಲಾವಿದೆಯಾಗಿ,ಕತೆಗಾರ್ತಿಯಾಗಿ ತಮ್ಮನ್ನು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಇವರು ದಕ್ಷಿಣ ಕನ್ನಡದ ಹಿರಿಯ ಲೇಖಕಿ.

ಜೀವನ[ಬದಲಾಯಿಸಿ]

ಮನೋರಮಾ ತನ್ನ ೨೦ನೇ ವಯಸ್ಸಿನಲ್ಲಿ ಮುಳಿಯ ಮಹಾಬಲ ಭಟ್ಟರನ್ನು ಮದುವೆಯಾದರು.ಮುಳಿಯ ಮಹಾಬಲ ಭಟ್ಟರು ನ್ಯಾಯವಾದಿಯಾಗಿದ್ದರು.ಮಹಾಬಲರಿಗೂ ಈ ಸಾಹಿತ್ಯದ ಒಲವು ಇದ್ದುದರಿಂದ ಹಾಗೂ ಶಾಲಾದಿನಗಳಲ್ಲೇ ಮನೋರಮಾ ಅವರಲ್ಲಿ ಬೇರೂರಿದ್ದ ಅಭಿನಯಕಲೆ, ಬರವಣಿಗೆಯ ಹವ್ಯಾಸ ಮದುವೆಯ ನಂತರ ನಾಟಕ, ಕತೆ ರಚನೆಯ ಮೂಲಕ ಬೆಳಕಿಗೆ ಬಂದಿತು.ಮನೋರಮಾರಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗ ಜಯರಾಮ, ಎರಡನೇ ಮಗ ಮಹೇಶ.

ವಿದ್ಯಾಭ್ಯಾಸ[ಬದಲಾಯಿಸಿ]

ಮನೋರಮಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಬೊಳುವಾರು ಶಾಲೆಯಲ್ಲಿ ಮುಗಿಸಿದರು.ನಂತರ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಸಂತ ವಿಕ್ಟರ್ ಹುಡುಗಿಯರ ಶಾಲೆಯಲ್ಲಿ ಆಂಗ್ಲಮಾಧ್ಯಮದಲ್ಲಿ ಪಡೆದರು.

ಆಸಕ್ತಿ[ಬದಲಾಯಿಸಿ]

ಸಂಗೀತದಲ್ಲಿ, ನೃತ್ಯದಲ್ಲಿ, ನಾಟಕ ರಚನೆಯಲ್ಲಿ, ಅಭಿನಯದಲ್ಲಿ ತುಂಬ ಆಸಕ್ತಿ ಹೊಂದಿದ್ದರು.ನೃತ್ಯವನ್ನು ಸತ್ಯಸುಂದರರಾಯರ ಮಾರ್ಗದರ್ಶನದಲ್ಲಿ ಕಲಿತರು.ನಲ್ವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ.

ಕಥಾಸಂಕಲನಗಳು[ಬದಲಾಯಿಸಿ]

  • ಮೊದಲ ಕಥಾಸಂಕಲನ "ಮೋತಿ ಪಾಠ ಕಲಿಸಿತ್ತು"
  • ಎರಡನೆ ಕಥಾಸಂಕಲನ "ಶಬ್ದಗಳಾಗದ ಧ್ವನಿಗಳು"

ನಾಟಕಗಳು[ಬದಲಾಯಿಸಿ]

  1. ಅಜ್ಜಿ ಹೇಳಿದ ಕಥೆ
  2. ಇಂದಲ್ಲ ನಾಳೆ
  3. ಮರದ ಕಥೆ
  4. ಋಣಾನುಬಂಧ
  5. ಚಂದ್ರಮತಿಯ ಕನಸು[೨]

ನಾಟಕ ಸಂಕಲನಗಳು[ಬದಲಾಯಿಸಿ]

  1. ಹೊಸಹಾದಿ
  2. ಬಲಿ
  3. ನಿರ್ಧಾರ
  4. ಆಯ್ಕೆ

ಇತರ ಮಾಹಿತಿಗಳು[ಬದಲಾಯಿಸಿ]

  • ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ "ಗುಲಾಬಿ ಟಾಕೀಸು"ಚಲನಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.
  • ೧೯೮೭ರಲ್ಲಿ ಸ್ಥಾಪನೆಯಾದ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ.
  • ಇವರು 'ಸಾಧನಾ' ಸಾಹಿತ್ಯಿಕ-ಸಾಂಸ್ಕೃತಿಕ ಬಳಗದ ಸದಸ್ಯೆ,.ಡಾ.ಶಿವರಾಮ ಕಾರಂತರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಸಾಧನಾ ವತಿಯಿಂದ ಮಂಗಳೂರು,'ಪುತ್ತೂರು ಮತ್ತು ಕೋಟದಲ್ಲಿ ಕಾರಂತರ ಗೀತನಾಟಕ 'ಕಿಸಾ ಗೋತಮಿ'ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  • ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ
  • ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ
  • ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಸಂಸ್ಕಾರ ಭಾರತಿ ಪ್ರಶಸ್ತಿ
  • ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ


ಉಲ್ಲೇಖ[ಬದಲಾಯಿಸಿ]

  1. mangaluru-a-writer-and-fighter-84-year-old-manorama-bhat-is-cops-favorite-s-o-s-amma/Nov,18 2015
  2. ಚಂದ್ರಗಿರಿ,ಸಾ.ರಾ.ನಾಡೋಜ ಅಬುಬಕ್ಕರ್ ಅಭಿನಂದನ ಗ್ರಂಥ.ಸಂಪಾದಕರು ಡಾ.ಸಂಬಿಹಾ ಸಿರಿವರ ಪ್ರಕಾಶನ ಬೆಂಗಳೂರು.ಮೊದಲ ಮುಂದ್ರಣ ೨೦೦೯ ಪುಟ ೨೫೦