ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ[ಬದಲಾಯಿಸಿ]

  • 2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಐವರು ಸಾಹಿತಿಗಳು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ನೀಡಿದ ಸೇವೆ ಪರಿಗಣಿಸಿ ಇವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
  • ಡಾ.ನಾಗೇಶ್‌ ಹೆಗಡೆ ಹಿರಿಯ ಪತ್ರಕರ್ತ(ವಿಜ್ಞಾನ ಸಾಹಿತ್ಯ),
  • ವಿಮರ್ಶಕರಾದ ಡಾ.ಎಚ್‌.ಎಸ್‌. ಶ್ರೀಮತಿ, ಪ್ರೊ.ಓ.ಎಲ್‌.ನಾಗಭೂಷಣ ಸ್ವಾಮಿ,
  • ಕಥೆಗಾರ ಬಸವರಾಜು ಕುಕ್ಕರಹಳ್ಳಿ,
  • ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ
  • ಪ್ರಶಸ್ತಿ ವಿಜೆತರಿಗೆ ತಲಾ 50 ಸಾವಿರ ನಗದು, ಪ್ರಶಸ್ತಿ ಫ‌ಲಕ ನೀಡಲಾಗುವುದು. (ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ತಿಳಿಸಿದರು)

ಪುಸ್ತಕ ಬಹುಮಾನ[ಬದಲಾಯಿಸಿ]

  • ಲೇಖಕರು ಮತ್ತು ಬಹುಮಾನಿತ ಕೃತಿಗಳು
  • 2015ರಲ್ಲಿ ಪ್ರಕಟವಾದ 16 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯ ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
  • ಸತ್ಯಮಂಗಲ ಮಹದೇವ- ಯಾರ ಹಂಗಿಲ್ಲ ಬೀಸುವ ಗಾಳಿಗೆ (ಕಾವ್ಯ),
  • ಡಾ.ಲತಾ ಗುತ್ತಿ-ಕರಿನೀರು (ಕಾದಂಬರಿ),
  • ಅನುಪಮಾ ಪ್ರಸಾದ್‌-ಜೋಗತಿ ಜೋಳಿಗೆ (ಸಣ್ಣಕತೆ),
  • ಚಿದಾನಂದ ಸಾಲಿ- ಕರುಳ ತೆಪ್ಪದ ಮೇಲೆ (ನಾಟಕ),
  • ಎಚ್‌. ಶಾಂತರಾಜ ಐತಾಳ್‌-ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು (ಲಲಿತ ಪ್ರಬಂಧ),
  • ಡಾ.ಬಿ.ಎಸ್‌.ಪ್ರಣತಾರ್ತಿಹರನ್‌-ಆಸುಪಾಸು (ಪ್ರವಾಸಿ ಸಾಹಿತ್ಯ),
  • ದೊಡ್ಡ ಹುಲ್ಲೂರು ರುಕ್ಕೋಜಿ- ಡಾ.ರಾಜ್‌ಕುಮಾರ್‌ ಚರಿತ್ರ-ಜೀವನ, ಡಾ.ರಾಜ್‌ಕುಮಾರ್‌ ಸಮಗ್ರ ಚರಿತ್ರ-ಚಲನಚಿತ್ರ (ಜೀವನಚರಿತ್ರೆ),
  • ಡಾ.ಎಚ್‌.ಎಲ್‌.ಪುಷ್ಪ-ಸಿOಉà ಎಂದರೆ ಅಷ್ಟೇ ಸಾಕೆ (ಸಾಹಿತ್ಯ ವಿಮರ್ಶೆ),
  • ವಿಜಯಶ್ರೀ ಹಾಲಾಡಿ-ಪಪ್ಪು ನಾಯಿಯ ಪೀಪಿ (ಮಕ್ಕಳ ಸಾಹಿತ್ಯ),
  • ಡಾ.ನಾ.ಸೋಮೇಶ್ವರ-ಕಲಿಯುಗದ
  • ಸಂಜೀವಿನಿ ಹೊಕ್ಕಳುಬಳ್ಳಿ (ವಿಜ್ಞಾನ ಸಾಹಿತ್ಯ),
  • ಜಿ.ರಾಜಶೇಖರ-ಬಹುವಚನ ಭಾರತ (ಮಾನವಿಕ),
  • ಪ್ರೊ.ಎ.ವಿ.ನಾವಡ- ಸಾಹಿತ್ಯ ಶೋಧ (ಸಂಶೋಧನೆ),
  • ಶೈಲಜ- ಕಾನ್ರಾಡ್‌ ಕಥೆಗಳು (ಅನುವಾದ),
  • ಪತ್ರಕರ್ತ ಬಿ.ಎಸ್‌ .ಜಯಪ್ರಕಾಶ್‌ ನಾರಾಯಣ- ಕದಡಿದ ಕಣಿವೆ (ಅನುವಾದ),
  • ಗೋಪಾಲ ವಾಜಪೇಯಿ-ರಂಗದ ಒಳ-ಹೊರಗೆ (ಸಂಕಿರ್ಣ)
  • ದೀಪಾ ಗಿರೀಶ್‌- ಅಸ್ಮಿತಾ (ಕವನ) ಬಹುಮಾನಿತ ಕೃತಿಗಳಾಗಿದ್ದು, ತಲಾ 25 ಸಾವಿರ ನಗದು, ಪ್ರಶಸ್ತಿ ಫ‌ಲಕ ನೀಡಲಾಗುವುದು ಎಂದು ಮಾಹಿತಿ ನೀಡಿದರು.

[೧]

ದತ್ತಿನಿಧಿ ಬಹುಮಾನ[ಬದಲಾಯಿಸಿ]

  • 2015ನೇ ಸಾಲಿನ ಅಕಾಡೆಮಿಯ 7 ದತ್ತಿನಿಧಿ ಬಹುಮಾನಗಳಿಗೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
  • ಎಂ.ಸತ್ಯಣ್ಣವರ ಅವರ ಕನಸ ಬೆನ್ಹತ್ತಿ ನಡಿಗೆ ಕೃತಿಗೆ ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ.
  • ಜಾಣಗೆರೆ ವೆಂಕಟರಾಮಯ್ಯ ಅವರ ಮಹಾಯಾನ ಕೃತಿಗೆ ಚದುರಂಗ ದತ್ತಿನಿಧಿ ಬಹುಮಾನ.
  • ಡಾ.ಗಜಾನನ ಶರ್ಮಾ ಅವರ "ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ" ಕೃತಿಗೆ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ.
  • ಡಾ.ಕವಿತಾ ರೈ ಅವರ ತಿಳಿಯಲು ಎರಡೆಂಬುದಿಲ್ಲ ಕೃತಿಗೆ ಪಿ.ಶ್ರೀನಿವಾಸರಾವ್‌ ದತ್ತಿ ಬಹುಮಾನ.
  • ಡಾ.ಜಯಲಲಿತಾ ಅವರ ವಾರ್ಸಾದಲ್ಲೊಬ್ಬ ಭಗವಂತ ಅನುವಾದ ಕೃತಿಗೆ ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ.
  • ಚಂಪ ಜೈಪ್ರಕಾಶ್‌ ಅವರ 21ನೇ ಕ್ರೋಮೋಜೋಮ್‌ ಮತ್ತು ಇತರೆ ಕಥನಗಳು ಕೃತಿಗೆ ಮಧುರಚೆನ್ನ ದತ್ತಿನಿಧಿ ಬಹುಮಾನ ಹಾಗೂ
  • ಶ್ರೀನಾಥ್‌ ಪೆರೂರ್‌ ಅವರ "ಘಾಛರ್‌ ಘೋಛರ್‌' ಕೃತಿಗೆ ಅಮೆರಿಕನ್ನಡ ದತ್ತಿನಿಧಿ ಬಹುಮಾನ.

[೨]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

ರಾಜ್ಯ ಪ್ರಶಸ್ತಿಗಳು

  1. "ನಾಗೇಶ ಹೆಗಡೆ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ;ಉದಯವಾಣಿ, Jan 11, 2017". Archived from the original on ಜನವರಿ 12, 2017. Retrieved ಜನವರಿ 11, 2017.
  2. ನಾಗೇಶ ಹೆಗಡೆ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ;ಪ್ರಜಾವಾಣಿ ವಾರ್ತೆ;11 Jan, 2017