ಎಂ.ಆರ್.ಕಮಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ.ಆರ್.ಕಮಲಾ ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮೇಟಿಕುರ್ಕೆಯಲ್ಲಿ ೧೯೫೯ರಲ್ಲಿ ಜನಿಸಿದರು.ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಎಲ್‍.ಎಲ್.ಬಿ.ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪರೀಕ್ಷೆಯಲ್ಲಿ ’ಪಾಶ್ಚಿಮಾತ್ಯ ಸಾಹಿತ್ಯ’ ಅಧ್ಯಯನಕ್ಕಾಗಿ ’ಬಿ.ಎಮ್.ಶ್ರೀ’ ಸ್ವರ್ಣಪದಕ ಪಡೆದಿದ್ದಾರೆ. ಬೆಂಗಳೂರಿನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. ಇವರು ಮೈಸೂರು ಸಾಂಪ್ರದಾಯಿಕ ಶೈಲಿಯ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.[೧]

ಸಾಹಿತ್ಯ[ಬದಲಾಯಿಸಿ]

ಕವನ ಸಂಕಲನಗಳು[ಬದಲಾಯಿಸಿ]

  • ಶಕುಂತಳೋಪಾಖ್ಯಾನ (೧೯೮೮)
  • ಜಾಣೆ ಮತ್ತು ಇತರ ಕವಿತೆಗಳು (೧೯೯೨)
  • ಹೂವು ಚೆಲ್ಲಿದ ಹಾದಿ (೨೦೦೭)
  • ಮಾರಿಬಿಡಿ (೨೦೧೭)
  • ಗದ್ಯಗಂಧಿ (೨೦೨೦)

ಅನುವಾದಗಳು[ಬದಲಾಯಿಸಿ]

೧. ಕತ್ತಲ ಹೂವಿನ ಹಾಡು(ನಿಗ್ರೋ ಹಾಗು ಆಫ್ರಿಕನ್ ಮಹಿಳೆಯರ ಒಂದುನೂರಾ ಎರಡು ಕವನಗಳ ಸಂಪಾದನೆ ಹಾಗು ಅನುವಾದ).
೨. ನೆತ್ತರಲಿ ನೆಂದ ಚಂದ್ರ (೨೦೧೬) ಅರಬ್ ಲೋಕದ ಕವನಗಳು.

  • ಆಫ್ರಿಕನ್-ಅಮೆರಿಕನ್ ಮಹಿಳಾ ಸಾಹಿತ್ಯದ ಮಾಲಿಕೆ

೩. ಕಪ್ಪು ಹಕ್ಕಿಯ ಬೆಳಕಿನ ಹಾಡು
೪. ಉತ್ತರ ನಕ್ಷತ್ರ
೫.ನನ್ನ ಕಥೆ - ರೋಸಾ ಪಾರ್ಕ್ಸ್ ಆತ್ಮಕಥೆ
೬. ಸೆರೆ ಹಕ್ಕಿ ಹಾಡುವುದು ಏಕೆಂದು ನಾ ಬಲ್ಲೆ
(ಮಾಯಾ ಏಜೆಂಲೋ ಆತ್ಮಕಥೆ)

ಪ್ರಶಸ್ತಿ[ಬದಲಾಯಿಸಿ]

  • "ಶಕುಂತಳೋಪಾಖ್ಯಾನ" ಕವನಸಂಕಲನಕ್ಕೆ ೧೯೮೮ರ ಸಾಲಿನಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘ ನೀಡುವ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ.
  • "ಜಾಣೆ ಮತ್ತು ಇತರ ಕವಿತೆಗಳು" ಕವನ ಸಂಕಲನಕ್ಕೆ ೧೯೯೨ನೆಯ ಸಾಲಿನ ಮುದ್ದಣ ಪ್ರಶಸ್ತಿ ದೊರಕಿದೆ.ಇವರು ಅನುವಾದಿಸಿದ ಉತ್ತರ ನಕ್ಷತ್ರ ಕೃತಿಗೆ ೨೦೦೪ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರಕಿದೆ

ಉಲ್ಲೇಖಗಳು[ಬದಲಾಯಿಸಿ]

  1. "ಎಂ.ಆರ್. ಕಮಲ". kanaja.in/. Retrieved 7-2-2014. {{cite web}}: Check date values in: |accessdate= (help)[ಶಾಶ್ವತವಾಗಿ ಮಡಿದ ಕೊಂಡಿ]