ಈಶ್ವರ ದೈತೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವನ ಪರಿಚಯ[ಬದಲಾಯಿಸಿ]

ಪ್ರಜಾವಾಣಿಯಲ್ಲಿ ಟಿ.ಎಸ್. ರಾಮಚಂದ್ರ ರಾವ್(ಟೀಯೆಸ್ಸಾರ್) ಅವರ ಛೂಬಾಣವನ್ನು ಮೊದಲಿನಿಂದಲೂ ಓದ ತೊಡಗಿದ ಈಶ್ವರ ಅವರು ಅಂಕಣ ಸಾಹಿತ್ಯ ಪ್ರೇಮಿಯಾಗಿ ಖುಶವಂತ್ ಸಿಂಗ್, ಆರ್ಕ್ ಬುಚ್ವಾಲ್ಡ್ ಅಂಕಣಗಳನ್ನು ಓದುವ ಪರಿಪಾಠ ಬೆಳೆಸಿಕೊಂಡಿದ್ದರು. ಅಂಕಣ ಬರೆಯುವ ಹಂಬಲ ಹುಟ್ಟಿಸಿದವರು ವೈ.ಎನ್.ಕೆ.( ಕೃಷ್ಣಮೂರ್ತಿ) ಅವರು. ಉದಯವಾಣಿಯಲ್ಲಿ ಅಂಕಣವೊಂದನ್ನು ಬರೆಯುತ್ತಲಿದ್ದ ವೈ.ಎನ್.ಕೆ ಕನ್ನಡಪ್ರಭ ಸಂಪಾದಕರಾದಾಗ ಈಶ್ವರ ದೈತೋಟ ಅವರ ಹಂಬಲ ಅರಿತಿದ್ದ ಉದಯವಾಣಿ ಆಡಳಿತ ನಿರ್ದೇಶಕ ಟಿ. ಮೋಹನದಾಸ ಪೈ ಅವರು ಬುಧವಾರದ ಹೊಸ ಅಂಕಣವನ್ನು ಬರೆಯಲು ಅವರಿಗೆ ಸೂಚಿಸಿದರು. ಆಗ ಇವರು ಬೆಂಗಳೂರು ವಿಭಾಗದ ಮುಖ್ಯಸ್ಥರಾಗಿದ್ದರು. ಅಂತರದೃಷ್ಟಿ ಎಂಬ ಮೊದಲ ಅಂಕಣ ಶುರುವಾಗಿದ್ದೇ ಹಾಗೆ. ಮುಂದೇ ಅದೇ ಹೆಸರಿನಲ್ಲಿ ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ (ಕನ್ನಡ ಅವೃತ್ತಿ)ಗಳಲ್ಲಿ ಸಂಪಾದಕ ಹೊಣೆ ಹೊತ್ತಾಗ ಅಂಕಣ ಬರೆಯುವುದನ್ನು ಮುಂದುವರಿಸಿದರು. ಬಳಿಕ ಸ್ವತಂತ್ರ ಪತ್ರಿಕೋದ್ಯಮಿಯಾಗಿ ವಿಜಯವಾಣಿ, ಸುದ್ದಿಮೂಲ ಇತ್ಯಾದಿ ಪತ್ರಿಕೆಗಳಲ್ಲಿ ಇತರ ಹೆಸರಿನ ಅಂಕಣಗಳನ್ನು ಬರೆಯುವ ಅವಕಾಶಗಳನ್ನು ಪಡೆದರು.

ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ ಹೊಂದಿರುವ ಈಶ್ವರ ದೈತೋಟ 1991 ರಿಂದ 2011 ರ ವರೆಗಿನ ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳನ್ನು ಹೊಂದಿದ ವಿಜಯ ಕರ್ನಾಟಕದ ಫೌಂಡರ್ ಮುಖ್ಯ ಸಂಪಾದಕನಾಗಿದ್ದರು. ಅದಕ್ಕೂ ಮೊದಲು ಉದಯವಾಣಿ ಬೆಂಗಳೂರು ಆವೃತ್ತಿ ಸಂಪಾದಕರಾಗಿ 7 ವರ್ಷಗಳಾಗಿ ಮುನ್ನಡೆಸಿದರು. ವಿಜಯ ಕರ್ನಾಟಕದ ಬಳಿಕ ಕನ್ನಡದ ಅತಿ ಹಿರಿಯ ದಿನಪತ್ರಿಕೆ ಸಂಯುಕ್ತ ಕರ್ನಾಟಕದ ಪ್ರಧಾನ ಸಂಪಾದಕರಾಗಿದ್ದಲ್ಲದೆ, ಹೊಸತಾಗಿ ಪ್ರಾರಂಭವಾಗಿದ್ದ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯ ಕನ್ನಡ ಆವೃತ್ತಿ ಸಂಪಾಕರಾಗಿಯೂ 3 ವರ್ಷಗಳಷ್ಟು ಮುನ್ನಡೆಸಿದರು.


ವೃತ್ತಿ ಜೀವನ[ಬದಲಾಯಿಸಿ]

8 ವರ್ಷ 1984-92 ದೂರದರ್ಶನದಲ್ಲಿ ಕನ್ನಡ ಸುದ್ದಿ ನಿರೂಪಕರಾಗಿ ಸೇವೆ ಸಲ್ಲಿಸಿದರು. ಆಕಾಶವಾಣಿ, ಉದಯ ಟಿ.ವಿ. ಉದಯ ನ್ಯೂಸ್ ಚಾನೆಲ್ ಹಾಗೂ ರೇಡಿಯೋಗಳಲ್ಲಿ ಸಂದರ್ಶನ, ಪ್ರಚಲಿತ ವಿಷಯಗಳ ಕುರಿತು 2000 ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ಮಂಥನ, ಪಂಚಾಯ್ತಿ ಕಟ್ಟೆ, ಸಂವೇದನೆ, ಮತಭೇರಿ ಇತ್ಯಾದಿಗಳು ಮನೆ ಮನೆ ಮಾತಾಗಿದೆ. ಸಮಯ ಟಿ.ವಿ.ಯಲ್ಲಿ ಪ್ರೈಮ್ ಟೈಮ್ ನ್ಯೂಸ್ ಬುಲೆಟಿನ್ ಅತಿಥಿ ನಿರೂಪಕರಾಗಿದ್ದುದಲ್ಲದೆ, ಪ್ರಜಾ ಟಿವಿಯಲ್ಲಿ ಚದುರಂಗ ಎಂಬ ಚರ್ಚಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಪಂಚಾಯ್ತಿ ಕಟ್ಟೆ ಡೆವಲಪ್ಮೆಂಟ್ ಡಿಬೇಟ್ ಅನ್ನು ಉದಯ ನ್ಯೂಸ್ ಚಾನೆಲ್‍ನಲ್ಲಿ 5 ವರ್ಷಗಳ ಕಾಲ ನಡೆಸಿಕೊಟ್ಟಿದ್ದಾರೆ. ಸಂವೇದನೆ-ಶೇರಿಂಗ್ ವಿದ್ ಕನ್ಸರ್ನ್ ಎಂಬ ವಾರಕ್ಕೆ 5 ದಿನಗಳ ಮುಂಜಾನೆ ಪ್ರಸಿದ್ಧರ ಸಂದರ್ಶನಗಳೆಂದು ಉದಯ ಟಿವಿಗೆ 750 ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ವಾಯ್ಸ್ ಆಫ್ ಅಮೇರಿಕಾ ಹಾಗು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಅಂತಾರಾಷ್ಟ್ರೀಯ ಸಂಚಿಕೆಗಳಿಗೂ ಲೇಖನಗಳನ್ನು ಬರೆದಿದ್ದಾರೆ. ಜಗತ್ತಿನ 5 ಭೂಖಂಡಗಳಿಗೆ ಭೇಟಿ ನೀಡಿದ್ದಾರೆ. ದೈತೋಟ ಅವರು ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ, ವಿ.ಪಿ. ಸಿಂಗ್ ಮತ್ತು ಪಿ.ವಿ. ನರಸಿಂಹ ರಾವ್ ಜೊತೆಗೆ ಸ್ವೀಡನ್, ರಶಿಯಾ, ಉಸ್ಬೇಕಿಸ್ತಾನ್, ದಕ್ಷಿಣ ಅಮೇರಿಕಾ ಪ್ರವಾಸ ಮಾಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷಿಣಿ ಚಂದ್ರಿಕಾ ಕುಮಾರ ತುಂಗೆ, ಫ್ರಾನ್ಸಿನ ಮಿತ್ತೆರಾಂ, ಜರ್ಮನಿಯ ಹೆಲ್ಮೆಟ್ ಕೋಲ್, ರಶಿಯಾದ ಕೊಸಗಿನ್, ಸ್ವೀಡನ್‍ನ ಒಲೋಫ್ ಪಾಮೆ ಮುಂತಾಗಿ ಅಂತಾರಾಷ್ರೀಯ ಪ್ರಮುಖರನ್ನು ಭೇಟಿಯಾಗಿದ್ದಾರೆ. ರಿಯೋ ಭೂಶ್ರಂಗದಲ್ಲಿ ಅಮೇರಿಕಾದ ಪ್ರಧಾನಿ ಜಾರ್ಜ್ ಬುಶ್ ಮತ್ತು ಕ್ಯೂಬಾದ ಫೀಡೆಲ್ ಕಾಸ್ಟ್ರೋ ಅವರ ಜೋಡಿ ಭಾಷಣಗಳನ್ನು ಪ್ರತ್ಯಕ್ಷ ವರದಿ ಮಾಡಿದುದು ಅವರ ವಿಶೇಷ ಅನುಭವ.

ಡೈಲಿ ಜರ್ನಲಿಸಂನಲ್ಲಿ ದಿನಕ್ಕೊಂದು ವಿಶೇಷ ಪುರವಣಿ ಎಂದು ವಾರಕ್ಕೆ 7 ಪುರವಣಿಗಳನ್ನು ವಿಜಯ ಕರ್ನಾಟಕದಲ್ಲಿ (1999ರಿಂದ) ಪುಟಾಣಿ ವಿಜಯ, ಮಹಿಳಾ ವಿಜಯ, ಯುವ ವಿಜಯ, ಧರ್ಮ ವಿಜಯ, ಕೃಷಿ ವಿಜಯ ಎಂದು ಸ್ಥಾಪನಾ ವರ್ಷದಿಂದಲೇ ಅಳವಡಿಸಿ ಕೊಂಡಿದ್ದು ದೈನಿಕ ಪತ್ರಿಕೋದ್ಯಮದ ಪ್ರಥಮ ಪ್ರಯತ್ನವೆಂದು ಗುರುತಿಸಲ್ಪಟ್ಟಿದೆ. ಹಾಗೆಯೇ, ತಾನು ಸಂಪಾದಕತ್ವ ನಿರ್ವಹಿಸಿದ ಟೈಮ್ಸ್ ಆಫ್ ಇಂಡಿಯಾ (2007-2010 - ಕನ್ನಡ ಅವತರಣಿಕೆಯಲ್ಲಿ) “ಮನೆಗೆ ಬಂದ ಅತಿಥಿ” ಎಂದು ಪ್ರತಿ ಸೋಮವಾರ ಬದುಕಿನ ವಿವಿಧ ರಂಗಗಳ ಪ್ರಸಿದ್ಧನಾಮರನ್ನು ಆಹ್ವಾನಿಸಿ ಇನ್ ಹೌಸ್ ಪತ್ರಕರ್ತರುಗಳು ಸಂವಾದ ನಡೆಸುವ ಕಾರ್ಯಕ್ರಮ ನಡೆಸಿದ್ದರು. ಅಂತಾರಾಷ್ಟ್ರೀಯ ಪ್ರಸಿದ್ಧಿಯ ಸಾಕ್ಸೋಫೋನ್ ವಾದಕ ಕದ್ರಿ ಗೋಪಾಲ್‍ನಾಥ್ ಮತ್ತಿತರರ ಕಲಾವೈಭವವನ್ನು – ಮಾತುಕತೆಯನ್ನೂ ಸಂಘಟಿಸುತ್ತಿದ್ದರು.

ಭಾರತೀಯ ಪತ್ರಿಕೋದ್ಯಮದಲ್ಲಿ “ಕುಗ್ರಾಮ ಗುರುತಿಸಿ” (ಐಡೆಂಟಿಫೈ ಬಾಕ್ವರ್ಡ್ ವಿಲೇಜ್- 1981-87) ಮತ್ತು ಸುಗ್ರಾಮ ಗುರುತಿಸಿ ಎಂಬಿತ್ಯಾದಿ ಅಧ್ಯಯನ ಪ್ರಯೋಗಗಳನ್ನು ಮುದ್ರಣ ಮಾಧ್ಯಮದಲ್ಲಿ ಮಾಡಿದ್ದಾರೆ.

ಬಿ.ಎ. ಜರ್ನಲಿಸಂನಲ್ಲಿ ಮೂರು ಚಿನ್ನದ ಪದಕ/ ವಿಶೇóಷ ಬಹುಮಾನಗಳನ್ನು ಗಳಿಸಿರುವ ಇವರು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಎಂ.ಎ.(1973) ಫಿಲಿಪ್ಪೀನ್ಸ್‍ನ ಪ್ರೆಸ್ ಫೌಂಡೇಶನ್ ಆಫ್ ಏಶಿಯಾದಲ್ಲಿ ಸ್ನಾತಕೋತ್ತರ ಅಭ್ಯುದಯ ಪತ್ರಿಕೋದ್ಯಮ ಶಿಕ್ಷಣ-ತರಬೇತಿ (1979-80) ಪಡೆದಿದ್ದಾರೆ. 2021 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅವರ ಪ್ರೌಢ ಪ್ರಬಂಧ- “ಅಭಿವೃದ್ದಿ ಸಂವಹನ ನೆಲೆಯಲ್ಲಿ ಅಭ್ಯುದಯ ಪತ್ರಿಕೋದ್ಯಮದ ಸವಾಲು-ಸಾಧ್ಯತೆಗಳು” ಎಂಬ ಸಂಶೋಧನೆಗೆ ಡಿ.ಲಿಟ್ ಪದವಿ ನೀಡಿದೆ.

ಆಸ್ಟೇಲಿಯಾದ ವಿಕ್ಟೋರಿಯಾ ಹಾಗೂ ನ್ಯೂಸೌತ್ ವೇಲ್ಸ್ ರಾಜ್ಯಗಳಲ್ಲಿ 13 ಪತ್ರಿಕೆಗಳಲ್ಲಿ ಅತಿಥಿ ವರದಿಗಾರನಾಗಿ ಅನುಭವ ಹೊಂದಿದ್ದಾರೆ. ಅಮೇರಿಕಾದ ವಿವಿಧ ಅಧ್ಯಯನ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳ ಆಶ್ರಯದಲ್ಲಿ ಇಂಡಿಯನ್ ಜರ್ನಲಿಸಂ ಬಗ್ಗೆ ಭಾಷಣ ಮತ್ತು ಸಮಾಲೋಚನೆಗಳಲ್ಲಿ ಅನುಭವ ಹಂಚಿಕೊಂಡಿದ್ದಾರೆ. 1991 ರಲ್ಲಿ ಫ್ರಾನ್ಸ್‍ನಲ್ಲಿ ಪರಿಸರ ಸಂಬಂಧಿತ ಮಾಹಿತಿ ಹಂಚಿಕೆ ಚರ್ಚೆಯಲ್ಲದೆ, 1992 ರಲ್ಲಿ ರಿಯೋ ಭೂಶ್ರಂಗದ ವರದಿ ಮಾಡಲು ಯು. ಎನ್. ಡಿ.ಪಿ. ಮತ್ತು ಸಿ ಎಸ್. ಇ. ಸಂಸ್ಥೆಗಳು ದತ್ತಿನಿಧಿ ನೀಡಿ ಆಹ್ವಾನಿಸಿದ್ದವು.

ಡೆವಲಪ್ಮೆಂಟ್ ಜರ್ನಲಿಸಂನಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಆಭ್ಯುದಯ ಸಂಬಂಧಿತ ಪ್ರಯೋಗಗಳೊಂದಿಗೆ ಸಾಕ್ಷ್ಯಚಿತ್ರ ಮತ್ತು ರೇಡಿಯೋ ರೂಪಕಗಳನ್ನು ( )ತಯಾರಿಸಿರುವ ಅನುಭವ ಹೊಂದಿದ್ದಾರೆ. ಏಶಿಯನ್ ಮೀಡಿಯಾ ಬ್ಯಾರೋಮೀಟರ್ ಎಂಬ ದಾಖಲೆಗಳನ್ನು ಸಂಗ್ರಹಿಸುವ ಜರ್ಮನಿಯ ಎಫ್. ಇ.ಎಸ್. ಸಂಸ್ಥೆಗಳ ಹಾಗೂ ಇಂಡಿಯಾದ ಮಿಕ್ಕಿ ಸಂಸ್ಥೆ ಸಂಘಟಿಸಿದ ಎರಡು ಬ್ರೈನ್ ಸ್ಟಾರ್ಮಿಂಗ್ ಸೆಶನ್‍ಗಳಿಗೆ (2009 ಮತ್ತು 2014) ಆಹ್ವಾನಿತರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇವುಗಳ ವಿವರಗಳು ಏಶಿಯನ್ ಮೀಡಿಯಾ ಬ್ಯಾರೋಮೀಟರ್ ಎಂಬ ಇಂಡಿಯಾ ಸಂಬಂಧಿತ ಪ್ರಕಟಣೆಗಳಲ್ಲಿ ದಾಖಲಿಸಲ್ಪಟ್ಟಿವೆ.

ಯೂನಿವರ್ಸಿಟಿ ಗ್ರಾಂಟ್ ಕಮೀಶನ್‍ನ ಡೆವಲ್ಮೆಂಟ್ ಕಮ್ಯುನಿಕೇಶನ್ ಕನ್ಸಲ್ಟೆನ್ಸಿಗೆ ಸಂಪನ್ಮೂಲ ಅತಿಥಿಯಾಗಿ ಆಹ್ವಾನಿಸಲ್ಪಟ್ಟು ಕೊಡುಗೆ ನೀಡುತ್ತಲಿದ್ದರು ಹಾಗೂ ಅಭ್ಯುದಯ ಪತ್ತಿಕೋದ್ಯಮ ಚಟುವಟಿಕೆಗಳಿಗೂ ಅನುಭವ ಹಂಚಿಕೊಂಡು ನೆರವಾಗಿದ್ದಾರೆ. ಪಾರ್ಟಿಸಿಪೇಟರಿ ಗವನ್ನೆನ್ಸ್ ಸಂಬಂಧಿತ ಹಲವಾರು ಇಂಗ್ಲೀಷ್- ಕನ್ನಡ ಪ್ರಕಟಣೆಗಳಿಗೆ ಅನುಭವ ಹಂಚಿಕೊಂಡಿದ್ದಾರೆ. ಸಂಪಾದಕೀಯ ನೆರವು ನೀಡಿದ್ದಾರೆ. ಬೆಂಗಳೂರಿನ ಅಜೆಂಡಾ ಟಾಸ್ಕ್ ಫೋರ್ಸಿಗೆ 3 ವರ್ಷ ಕಾಲ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಹೆಸರಾಂತ ಪರಿತಜ್ಷ ಡಾ. ಅನಿಲ್ ಅಗರ್‍ವಾಲ್ ಜೊತೆ ನಿರಂತರ ಸಂಪರ್ಕವಿದ್ದ ಇವರು ಹೊಸದಿಲ್ಲಿಯಿಂದ ಪ್ರಕಟಗೊಳ್ಳುವ ಸಿ.ಎಸ್.ಇ. ಪ್ರಕಟಣೆ ಮತ್ತು ಮ್ಯಾಗಝಿನ್‍ಗಳಿಗೆ ಕೊಡುಗೆ ಕೊಟ್ಟು ಅನುಭವ ವೃದ್ಧಿಸಿಕೊಂಡಿದ್ದಾರೆ.

ಗ್ರೇಟ್ ಈಸ್ಟರ್ನ್ ಮ್ಯಾನೇಜ್ಮೆಂಟ್ ಸ್ಕೂಲ್, ಜಿ.ಸಿ.ಯೂನಿವರ್ಸಿಟಿ, ಸುರಾನಾ ಇನಸ್ಟಿಟ್ಯೂಟ್ ಆಫ್ ಹೈಯ್ಯರ್ ಎಜುಕೇಶನ್, ಬೆಂಗಳೂರು ವಿಶ್ವ ವಿದ್ಯಾಲಯ, ಮೀಡಿಯಾ ಇನ್‍ಫಾಮೇಶನ್ ಆಂಡ್ ಕಮ್ಯುನಿಕೇಶನ್ ಸೆಂಟರ್ ಆಫ್ ಇಂಡಿಯಾ (ಡೆಲ್ಲಿ) ಮುಂತಾಗಿ ಹಲವು ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಮೀಡಿಯಾ ಮ್ಯಾನೇಜ್ಮೆಂಟ್ ಡೆವಲ್ಪೆಂಟ್ ಕಮ್ಯುನಿಕೇಶನ್, ರಿಪೋರ್ಟಿಂಗ್ ಮೀಡಿಯಾ ಮ್ಯಾನೇಜ್ಮೆಂಟ್, ಬಿಸಿನೆಸ್ ಆಂಡ್ ಎಥಿಕ್ಸ್ ಎಂಬಿತ್ಯಾದಿ ವಿಷಯಗಳ ಬಗ್ಗೆ ಪಾಠ ಮಾಡಿದ್ದಾರೆ, ಕಾರ್ಯನಿರತ ಅನುಭವ ಹಂಚಿಕೊಂಡಿದ್ದಾರೆ. ವಿಸಿಟಿಂಗ್ ಫಾಕಲ್ಟಿಯಾಗಿ ಕೊಡುಗೆ ಕೊಟ್ಟಿದ್ದಾರೆ. ಮಣಿಪಾಲದ ಮಾಹೆ ಯೂನಿವರ್ಸಿಟಿ, ಬೆಂಗಳೂರು ವಿ.ವಿ, ಮೈಸೂರು ವಿ.ವಿ. ಗಳ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿಯೂ ಕೊಡುಗೆ ಪಠ್ಯಕ್ರಮ ರೂಪಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ.

ಕೃತಿಗಳು- ಅಂತರದೃಷ್ಟಿ, ಅನುಭಾವ, ಮಾಧ್ಯಮ ಬ್ರಹ್ಮಾಂಡ, ಮಾಧ್ಯಮ ಭ್ರಮರಿ, ಚಿಣ್ಣ ಚಿಣ್ಣ ಪಾಠ, ಕಷಾಯ, ಕೂಕಿಲು ಎಂದು ಉದಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕರ್ಮವೀರ, ಟೈಮ್ಸ್ ಆಫ್ ಇಂಡಿಯಾ (ಕ) ಹೊಸದಿಗಂತ, ಸುದ್ದಿಮೂಲ, ವಿಜಯವಾಣಿ, ಕರ್ಮವೀರ, ಕನೆಕ್ಟ್ ಕನ್ನಡ ಎಂಬಿತ್ಯಾದಿ ಮುದ್ರಿತ ಪತ್ರಿಕೆಗಳಿಗೆ ಮತ್ತು ಗೂಗಲ್ ಪ್ರಯತ್ನಗಳಿಗೆ ಅಂಕಣ ಬರಹದ ಕೊಡುಗೆ ನೀಡಿದ್ದಾರೆ. ಅವರು ಪತ್ರಿಕೋದ್ಯಮ ಮತ್ತಿತರ ವಿಷಯಗಳಿಗೆ ಬರೆದಿರುವ ಪುಸ್ತಕಗಳು ಕೊಟ್ಟಿರುವ ಬರವಣಿಗೆಗಳು ಮತ್ತು ಭಾಷಾಂತರ ಕೃತಿಗಳು 75 ದಾಟಿರಬಹುದು. ಇವರ ಪ್ರಥಮ ಪುಸ್ತಕ-ವಿದ್ಯಾರ್ಥಿಯಾಗಿದ್ದಾಗ ಬರೆದದು ಇಂಗ್ಲೀಷಿನಲ್ಲಿದ್ದು 1976 ರಲ್ಲಿ ಮೈಸೂರು ಯೂನಿವರ್ಸಿಟಿಯಿಂದ ಪ್ರಕಟಗೊಂಡು ದಕ್ಷಿಣ ಕನ್ನಡ ಜಿಲ್ಲಾ ಪತ್ರಿಕೋದ್ಯಮ ಚರಿತ್ರೆಯ ಸಂಶೋಧನಾ ಪ್ರಬಂಧವಾಗಿ ಸಲ್ಲಿಸಿದ್ದಾಗಿತ್ತು. ದಿ ಎಯ್ಟೀಂತ್ ಎಲಿಫೆಂಟ್ ಅಭ್ಯುದಯ ಪತ್ರಿಕೋದ್ಯಮ ಪ್ರಯೋಗ ದಾಖಲೆಯಾಗಿ ಮಣಿಪಾಲ ಉದಯವಾಣಿ ವತಿಯಿಂದ 1990 ರಲ್ಲಿ ಪ್ರಕಾಶಿತಗೊಂಡಿತು. ವಿಧಾನಮಂಡಲ ವರದಿಗಾರಿಕೆ (ಪತ್ರಿಕಾ ಅಕಾಡೆಮಿ ಪ್ರಕಟಿತ) ಮುಖ್ಯಮಂತ್ರಿ ಗುಂಡೂರಾಯರ ಸಾಧನೆ ( ಕರ್ನಾಟಕ ವಿಧಾನಮಂಡಲ ಪ್ರಕಟಿತ) ಪುಸ್ತಕ ರೂಪದಲ್ಲಿ ಬಂದಿವೆ.

ಅದೂ ಅಲ್ಲದೆ ಇವರು ಹಲವಾರು ಪುಸ್ತಕಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರ ಎ ಮ್ಯಾನಿಪೆಸ್ಟೋ ಪಾರ್ ಚೇಂಜ್, ಉಪ-ರಾಷ್ಟ್ರಪತಿ ಝಕೀರ್ ಹುಸೇನ್‍ರ ಪುಸ್ತಕಗಳನ್ನಲ್ಲದೆ, ಪಿರಮಿಡ್-ವಾಸ್ತು, ನನ್ನದೂ ಒಂದು ಪ್ರೇಮಕಥೆ, ಮುಳುಗುತ್ತಿದ್ದೀರಾ? ಸಬ್‍ಮೆರೀನ್ ಆಗಿ ಎಂಬಿತ್ಯಾದಿ ಪುಸ್ತಕಗಳನ್ನು ಕನ್ನಡೀಕರಿಸಿ ಪ್ರಕಟಗೊಂಡಿವೆ. ಭವ್ಯ ಭಾರತದ ಪ್ರಧಾನಿಗಳು, ಕರ್ನಾಟಕದ ಮುಖ್ಯಮಂತ್ರಿಗಲೂ ಎಂಬಿತ್ಯಾದಿ 20ಕ್ಕೂ ಹೆಚ್ಚು ಪುಸ್ತಕಗಳ ಸಹ-ಲೇಖಕರಾಗಿ ಪರಿಚಿತರಾಗಿದ್ದಾರೆ. ಅಲ್ಲದೆ, ಇನ್ನೂ ಹಲವು ಮಿ ಅಂಡ್ ಮೈ ಸಿಟಿ, ಪಾರ್ಟಿಸಿಪೇಟರಿ ಗವರ್ನೆನ್ಸ್ ಎಂಬಿತ್ಯಾದಿ ತಳಮಟ್ಟದ ಆಡಳಿತ ನಿರ್ವಹಣೆ ಪುಸ್ತಕಗಳ ಸಂಪಾದಕ ವರ್ಗದಲ್ಲಿದ್ದು-ಕನ್ನಡ ಬಾಷಾಂತರದ ಕಾರ್ಯವನ್ನೂ ಮಾಡಿದ್ದಾರೆ. ಕರ್ನಾಟಕದ ಜಾನಪದ ಕ್ರೀಡೆ ಕಂಬಳದ ಬಗ್ಗೆ 1982 ರಲ್ಲಿ ಮೊದಲ ಡಾಕ್ಯುಮೆಂಟರಿ ತಯಾರಿಸಲು ಸ್ರ್ಕಿಪ್ಟ್ ಬರೆದುದಲ್ಲದೆ , ಇನ್‍ಫಾರ್ಮೇಶನ್ ಇಲಾಖೆಯ ಕ್ಯಾಮೆರಾ ತಂಡವನ್ನು ಕರಾವಳಿಗೆ ಕರೆದೊಯ್ದು ಸಮಗ್ರ ಮಾಹಿತಿ ದಾಖಲೆಗೆ ನೆರವಿತ್ತಿದ್ದರು.

ಕೃತಿಗಳು[ಬದಲಾಯಿಸಿ]

ಕೃತಿಗಳು- ಅಂತರದೃಷ್ಟಿ, ಅನುಭಾವ, ಮಾಧ್ಯಮ ಬ್ರಹ್ಮಾಂಡ, ಮಾಧ್ಯಮ ಭ್ರಮರಿ, ಚಿಣ್ಣ ಚಿಣ್ಣ ಪಾಠ, ಕಷಾಯ, ಕೂಕಿಲು ಎಂದು ಉದಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕರ್ಮವೀರ, ಟೈಮ್ಸ್ ಆಫ್ ಇಂಡಿಯಾ (ಕ) ಹೊಸದಿಗಂತ, ಸುದ್ದಿಮೂಲ, ವಿಜಯವಾಣಿ, ಕರ್ಮವೀರ, ಕನೆಕ್ಟ್ ಕನ್ನಡ ಎಂಬಿತ್ಯಾದಿ ಮುದ್ರಿತ ಪತ್ರಿಕೆಗಳಿಗೆ ಮತ್ತು ಗೂಗಲ್ ಪ್ರಯತ್ನಗಳಿಗೆ ಅಂಕಣ ಬರಹದ ಕೊಡುಗೆ ನೀಡಿದ್ದಾರೆ. ಅವರು ಪತ್ರಿಕೋದ್ಯಮ ಮತ್ತಿತರ ವಿಷಯಗಳಿಗೆ ಬರೆದಿರುವ ಪುಸ್ತಕಗಳು ಕೊಟ್ಟಿರುವ ಬರವಣಿಗೆಗಳು ಮತ್ತು ಭಾಷಾಂತರ ಕೃತಿಗಳು 75 ದಾಟಿರಬಹುದು. ಇವರ ಪ್ರಥಮ ಪುಸ್ತಕ-ವಿದ್ಯಾರ್ಥಿಯಾಗಿದ್ದಾಗ ಬರೆದದು ಇಂಗ್ಲೀಷಿನಲ್ಲಿದ್ದು 1976 ರಲ್ಲಿ ಮೈಸೂರು ಯೂನಿವರ್ಸಿಟಿಯಿಂದ ಪ್ರಕಟಗೊಂಡು ದಕ್ಷಿಣ ಕನ್ನಡ ಜಿಲ್ಲಾ ಪತ್ರಿಕೋದ್ಯಮ ಚರಿತ್ರೆಯ ಸಂಶೋಧನಾ ಪ್ರಬಂಧವಾಗಿ ಸಲ್ಲಿಸಿದ್ದಾಗಿತ್ತು. ದಿ ಎಯ್ಟೀಂತ್ ಎಲಿಫೆಂಟ್ ಅಭ್ಯುದಯ ಪತ್ರಿಕೋದ್ಯಮ ಪ್ರಯೋಗ ದಾಖಲೆಯಾಗಿ ಮಣಿಪಾಲ ಉದಯವಾಣಿ ವತಿಯಿಂದ 1990 ರಲ್ಲಿ ಪ್ರಕಾಶಿತಗೊಂಡಿತು. ವಿಧಾನಮಂಡಲ ವರದಿಗಾರಿಕೆ (ಪತ್ರಿಕಾ ಅಕಾಡೆಮಿ ಪ್ರಕಟಿತ) ಮುಖ್ಯಮಂತ್ರಿ ಗುಂಡೂರಾಯರ ಸಾಧನೆ ( ಕರ್ನಾಟಕ ವಿಧಾನಮಂಡಲ ಪ್ರಕಟಿತ) ಪುಸ್ತಕ ರೂಪದಲ್ಲಿ ಬಂದಿವೆ.

ಅದೂ ಅಲ್ಲದೆ ಇವರು ಹಲವಾರು ಪುಸ್ತಕಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರ ಎ ಮ್ಯಾನಿಪೆಸ್ಟೋ ಪಾರ್ ಚೇಂಜ್, ಉಪ ರಾಷ್ಟ್ರಪತಿ ಝಕೀರ್ ಹುಸೇನ್‌ರ ಪುಸ್ತಕಗಳನ್ನಲ್ಲದೆ, ಪಿರಮಿಡ್-ವಾಸ್ತು, ನನ್ನದೂ ಒಂದು ಪ್ರೇಮಕಥೆ, ಮುಳುಗುತ್ತಿದ್ದೀರಾ? ಸಬ್‌ಮೆರೀನ್ ಆಗಿ ಎಂಬಿತ್ಯಾದಿ ಪುಸ್ತಕಗಳನ್ನು ಕನ್ನಡೀಕರಿಸಿ ಪ್ರಕಟಗೊಂಡಿವೆ. 20ಕ್ಕೂ ಹೆಚ್ಚು ಪುಸ್ತಕಗಳ ಸಹ-ಲೇಖಕರಾಗಿ ಪರಿಚಿತರಲ್ಲದೆ, ಇನ್ನೂ ಹಲವು ಮಿ ಅಂಡ್ ಮೈ ಸಿಟಿ, ಪಾರ್ಟಿಸಿಪೇಟರಿ ಗವರ್ನೆನ್ಸ್ ಎಂಬಿತ್ಯಾದಿ ತಳಮಟ್ಟದ ಆಡಳಿತ ನಿರ್ವಹಣೆ ಪುಸ್ತಕಗಳ ಸಂಪಾದಕ ವರ್ಗದಲ್ಲಿದ್ದು-ಕನ್ನಡ ಬಾಷಾಂತರದ ಕಾರ್ಯವನ್ನೂ ಮಾಡಿದ್ದಾರೆ. ಕರ್ನಾಟಕದ ಜಾನಪದ ಕ್ರೀಡೆ ಕಂಬಳದ ಬಗ್ಗೆ 1982 ರಲ್ಲಿ ಮೊದಲ ಡಾಕ್ಯುಮೆಂಟರಿ ತಯಾರಿಸಲು ಸ್ಕ್ರಿಪ್ಟ್ ಬರೆದುದಲ್ಲದೆ , ಇನ್‌ಫಾರ್ಮೇಶನ್ ಇಲಾಖೆಯ ಕ್ಯಾಮೆರಾ ತಂಡವನ್ನು ಕರಾವಳಿಗೆ ಕರೆದೊಯ್ದು ಸಮಗ್ರ ಮಾಹಿತಿ ದಾಖಲೆಗೆ ನೆರವಿತ್ತಿದ್ದರು.

ಪ್ರಶಸ್ತಿ[ಬದಲಾಯಿಸಿ]

2016 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2015 ರಲ್ಲಿ ಪ್ರತಿಷ್ಟಿತ ಟಿ.ಎಸ್. ಆರ್ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 1 ಲಕ್ಷ ರೂ. ನಗದು ಪ್ರಶಸ್ತಿ ನೀಡಿ ಕರ್ನಾಟಕ ಸರಕಾರ ಗೌರವಿಸಿದೆ. 2015 ರಲ್ಲಿ ಮೂಡಬಿದ್ರೆಯ ಪ್ರತಿóಷ್ಠಿತ ನುಡಿಸಿರಿ ಪ್ರಶಸ್ರಿಯೂ ಅವರಿಗೆ ಬಂದಿದೆ. 2012 ರಲ್ಲಿ ಮುಂಬಯಿನ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪತ್ರಿಕೋದ್ಯಮ-ಸಾಹಿತ್ಯ ಪ್ರಶಸ್ತಿ, 2008 ರಲ್ಲಿ ಅಭ್ಯುದಯ ಪತ್ರಿಕೋದ್ಯಮದ ರಾಜ್ಯ ಪ್ರಶಸ್ತಿಯೂ ಅವರಿಗೆ ಬಂದಿತ್ತು. ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕನ್ನಡ ಗೆಳೆಯರ ಬಳಗ ಪ್ರಕಾಶಿಸಿದ ಕನ್ನಡ ಕಷಾಯ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಬೆಂಗಳೂರು ವರದಿಗಾರರ ಕೂಟದಿಂದ ಅತ್ಯುತ್ತಮ ಅಭ್ಯುದಯ ವರದಿ ಪ್ರಶಸ್ತಿ ಎಂಬಿತ್ಯಾದಿ ವೃತ್ತಿಪರ ಗೌರವಗಳಿಗೆ ಪಾತ್ರರಾಗಿದ್ದಾರೆ. 2008 ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್ ಅವರನ್ನು ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ವ್ಯಕ್ತಿ ( ವೀಕ್ಷಕರ ಆಯ್ಕೆ) ಎಂಬ ಎರಡು ಪ್ರಶಸ್ತಿಗಳನ್ನೂ ನೀಡಿ ಗೌರವಿಸಿದೆ.

ಉಲ್ಲೇಖಗಳು[ಬದಲಾಯಿಸಿ]