ಸರ್ದಾರ ಸಿಂಗ್ (ಜನನ ೧೫ ಜುಲೈ ೧೯೮೬) ಕೆಲವೊಮ್ಮೆ ಇವರನ್ನು ಸರ್ದಾರ್ ಸಿಂಗ್ ಎಂದು ಕರೆಯಲಾಗುತ್ತದೆ. ಇವರು ಒಬ್ಬ ಭಾರತದ ಮಾಜಿ ವೃತ್ತಿಪರ ಫೀಲ್ಡ್ ಹಾಕಿ ಆಟಗಾರ ಮತ್ತು ಭಾರತದ ರಾಷ್ಟ್ರೀಯ ತಂಡದ ನಾಯಕ.[೨] ಅವರು ಸಾಮಾನ್ಯವಾಗಿ ಮಧ್ಯದ ಅರ್ಧ ಸ್ಥಾನವನ್ನು ಆಡುತ್ತಾರೆ.[೩] ಸರ್ದಾರ ಅವರು ೨೦೦೮ರ ಸುಲ್ತಾನ್ ಅಜ್ಲಾನ್ ಷಾ ಕಪ್ನಲ್ಲಿ ತಂಡವನ್ನು ಮುನ್ನಡೆಸಿದಾಗ ಭಾರತ ತಂಡದ ನಾಯಕತ್ವ ವಹಿಸಿದ ಅತ್ಯಂತ ಕಿರಿಯ ಆಟಗಾರರರು ಆಗಿದ್ದರು.[೪] ಅವರು ೨೦೧೫ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು [೫]. ೨೦೧೬ ರ ಜುಲೈ ೧೩ ರಂದು, ತನ್ನ ನಾಯಕನ ಜವಾಬ್ದಾರಿಗಳನ್ನು ಭಾರತ ತಂಡದ ಗೋಲ್ಕೀಪರ್ ಪಿ ಆರ್ ಶ್ರೀಜೇಶ್ ಅವರಿಗೆ ಹಸ್ತಾಂತರಿಸಲಾಯಿತು.[೬] ೧೨ಸೆಪ್ಟೆಂಬರ್ ೨೦೧೮ ರಂದು, ಸರ್ದಾರ ಅಂತರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದರು. ಅವರು ತಮ್ಮ ವೃತ್ತಿಜೀವನದಲ್ಲಿ ೧೨ ವರ್ಷಗಳ ಅವಧಿಯಲ್ಲಿ ೩೧೪ ಪಂದ್ಯಗಳನ್ನು ಆಡಿದ್ದಾರೆ.[೭]
ಭಾರತದ೨೦೦೩-೦೪ರ ಪೋಲೆಂಡ್ ಪ್ರವಾಸದ ಸಮಯದಲ್ಲಿ ಸರ್ದಾರ ಸಿಂಗ್ ಜೂನಿಯರ್ ತಂಡದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಅವರು ೨೦೦೬ ಪಾಕಿಸ್ತಾನದ ವಿರುದ್ಧ ತಮ್ಮ ಹಿರಿಯ ವರ್ಗದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು.. ಅವರು ತಮ್ಮ ಹರಿಯಾಣ ರಾಜ್ಯದ ಪರವಾಗಿಯೂ ಆಡುತ್ತಾರೆ. ಅವರು ಹರ್ಯಾಣ ಪೋಲಿಸ್ನಲ್ಲಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಪೊಲೀಸ್ ಅಧಿಕಾರಿಯಾಗಿ ಅವರ ತಂಡಕ್ಕಾಗಿ ಆಡುತ್ತಾರೆ.[೧೦] ೨೦೦೫ರಲ್ಲಿ ಪ್ರೀಮಿಯರ್ ಹಾಕಿ ಲೀಗ್ನ ಉದ್ಘಾಟನಾ ಋತುವಿನಲ್ಲಿ ಸಿಂಗ್ ಚಂಡೀಗಢ ಡೈನಮೋಸ್ಗಾಗಿ ಆಡಿದ್ದರು. ಅವರು೨೦೦೮ ರವರೆಗೆ, ಅಂದರೆ ಮುಂದಿನ ಮೂರು ಋತುಗಳಲ್ಲಿ ಹೈದರಾಬಾದ್ ಸುಲ್ತಾನ್ಸ್ ತಂಡದ ನಾಯಕರಾಗಿ ಆಡಿದರು.[೧೧]
ಅವರ ಸಹೋದರ ಡ್ರ್ಯಾಗ್ ಫ್ಲಿಕ್ ಸ್ಪೆಷಲಿಸ್ಟ್ ದೀದರ್ ಸಿಂಗ್
ಕೂಡ ಭಾರತ ತಂಡ, ಹರಿಯಾಣ ಮತ್ತು ಚಂಡೀಗಢ ಡೈನಮೋಸ್ಗಾಗಿ ಆಡಿದ್ದರು.
ಅವರನ್ನು ೨೦೧೦ ರಲ್ಲಿ, ೧೮ ಪುರುಷರ ಎಫ್ಐಎಚ್ ಆಲ್-ಸ್ಟಾರ್ ತಂಡದಲ್ಲಿ ಸೇರಿಸಲಾಯಿತು.[೧೨] ಅದೇ ವರ್ಷದಲ್ಲಿ, ಸಿಂಗ್ ಬೆಲ್ಜಿಯನ್ ಹಾಕಿ ಲೀಗ್ನಲ್ಲಿ ಆಡಲು ಬೆಲ್ಜಿಯನ್ ಕ್ಲಬ್ ಕೆಎಚ್ ಸಿ ಲೆವೆನ್ಗೆ ಸಹಿ ಹಾಕಿದರು.[೧೨] ೨೦೧೧ ರಲ್ಲಿ, ಅವರು ಮತ್ತೊಮ್ಮೆ ಎಫ್ಐಎಚ್ ಆಲ್-ಸ್ಟಾರ್ ತಂಡದಲ್ಲಿ ಹೆಸರಿಸಲ್ಪಟ್ಟರು.[೧೩] ೨೦೧೩ ರ ಏಷ್ಯಾ ಕಪ್ನಲ್ಲಿ ಸಿಂಗ್ ಅವರ ಪ್ರಭಾವಶಾಲಿ ಪ್ರದರ್ಶನವನ್ನು ಅನುಸರಿಸಿ, ಅವರನ್ನು ಡಚ್ ಕ್ಲಬ್, ಎಚ್ಸಿ ಬ್ಲೂಮೆಂಡಾಲ್ ಅವರು ಟೆನ್ ಡಿ ನೂಯಿಜರ್ಗೆ ಬದಲಿಯಾಗಿ ಸಹಿ ಹಾಕಿದರು.[೧೪]
೨೦೧೬ ರ ಜುಲೈ ೧೩ ರಂದು ತನ್ನ ನಾಯಕನ ಜವಾಬ್ದಾರಿಗಳನ್ನು ಅವರಿಂದ ಭಾರತ ತಂಡದ ಗೋಲ್ಕೀಪರ್ ಪಿಆರ್ ಶ್ರೀಜೇಶ್ಗೆ ಹಸ್ತಾಂತರಿಸಲಾಯಿತು. ಅವರು ೮ ವರ್ಷಗಳ ಕಾಲ ಭಾರತ ತಂಡದ ನಾಯಕರಾಗಿದ್ದಾರೆ.
ಅವರು ಸೆಪ್ಟೆಂಬರ್ ೨೦೧೮ ರಲ್ಲಿ ಕ್ರೀಡೆಯನ್ನು ತೊರೆದರು.[೧೫] ೨೦೧೯ರಲ್ಲಿ, ಅವರನ್ನು ೧೩ ಸದಸ್ಯರಲ್ಲಿ ಹಾಕಿ ಇಂಡಿಯಾ ಆಯ್ಕೆ ಸಮಿತಿಯಲ್ಲಿ ಸೇರಿಸಲಾಯಿತು.[೧೬]
ಸರ್ದಾರ್ ಸಿಂಗ್ ಅವರನ್ನು ದೆಹಲಿ ಫ್ರಾಂಚೈಸ್ US$78,000 ( ₹ 4249,000) ಗೆ ಖರೀದಿಸಲಾಯಿತು. ಉದ್ಘಾಟನಾ ವೇಳೆಯಲ್ಲಿ ಹಾಕಿ ಇಂಡಿಯಾ ಲೀಗ್ ಹರಾಜಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಾರ್ಕ್ಯೂ ಆಟಗಾರರಾಗಿ ಸರ್ದಾರ್ ಸಿಂಗ್ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ದೆಹಲಿ ತಂಡಕ್ಕೆ ಡೆಲ್ಲಿ ವೇವರಿಡರ್ಸ್ ಎಂದು ಹೆಸರಿಸಲಾಯಿತು.[೧೭] ಅವರು ತಮ್ಮ ತಂಡದ ನಾಯಕತ್ವವನ್ನು ಅದರ ಉದ್ಘಾಟನಾ ಋತುವಿನಲ್ಲಿ ಎರಡನೇ ಸ್ಥಾನದಲ್ಲಿ ಮುಗಿಸಿದರು ಮತ್ತು ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಪಡೆದರು.[೧೮] ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೆದರ್ಲೆಂಡ್ಸ್ ವಿರುದ್ಧದ ಗೆಲುವಿನ ನಂತರ ಕಳಿಂಗ ಕ್ರೀಡಾಂಗಣದಲ್ಲಿ ಭಾರತ ಹಾಕಿ ತಂಡದ ನಾಯಕ ಸರದಾರ ಸಿಂಗ್ ಸಂಭ್ರಮಿಸಿದರು.