ಸದಸ್ಯ:Vani Bhat manjalli/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾರ್ಶ್ವನಾಥ ಸ್ವಾಮಿ ಬಸಿದಿ, ಪಾದೂರು

ಸ್ಥಳ[ಬದಲಾಯಿಸಿ]

ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಮೂಲ ಉಡುಪಿ ತಾಲೂಕು ಹೊಸಬೆಟ್ಟು ಗ್ರಾಮದ ಪಾದೂರಿನಲ್ಲಿದೆ. ಇದರ ಹತ್ತಿರ ಇತ್ತೀಚೆಗೆ ಕೇಂದ್ರ ಸರಕಾರದ ಯೋಜನೆಯಾಗಿರುವ ಭೂಗತ ಕಚ್ಚಾತೈಲ ಸಂಗ್ರಹಣಗಾರದ ಕಾಮಗಾರಿ ಪ್ರಗತಿಯಲ್ಲಿದೆ. ಈ ಬಸದಿಯ ಪ್ರಾಕಾರಕ್ಕೆ ತಾಗಿಕೊಂಡು ಶ್ರೀ ಅನಂತನಾಥ ಸ್ವಾಮಿ ಬಸದಿ ಹೊಸಬೆಟ್ಟು, ಮತ್ತು ಶ್ರೀ ಧರ್ಮನಾಥ ಸ್ವಾಮಿ ಬಸದಿ ಕಾಪು ೬ ಕಿ.ಮೀ ದೂರದಲ್ಲಿದೆ.

ಮಾರ್ಗ[ಬದಲಾಯಿಸಿ]

ಬಸದಿಗೆ ಮೂಡುಬಿದಿರೆ,ಕಾರ್ಕಳ,ಬೆಳಣ್ಶಿ,ಶಿರ್ವ,ಮಂಚಕಲ್ಶಾಂ,ಶಾಂತಿಗುಡ್ಡ ,ಪಾದೂರು ಹೊಸಬೆಟ್ಟು ಮಾರ್ಗವಾಗಿ ತಲುಪಬಹುದಾಗಿದೆ. ಇನ್ನೊಂದು ಮಂಗಳೂರು ಮತ್ತು ಉಡುಪಿಯಿಂದ ಕಾಮ,ಚಂದ್ರನಗರ,ಶಾಂತಿಗುಡ್ಡ,ಪಾದೂರು ಹೊಸಬೆಟ್ಟು ಮಾರ್ಗವಾಯೂ ಬರಬಹುದಾಗಿದೆ.

ಇತಿಹಾಸ[ಬದಲಾಯಿಸಿ]

ಬಸದಿಯು ಶ್ರೀ ಜೈನ ಮಠ ಮೂಡುಬಿದಿರೆ ಇಲ್ಲಿಯ ಸಂಸ್ಥಾನಕ್ಕೆ ಒಳಪಟ್ಟಿದೆ, ಬಸದಿಗೆ ಇರುವ ಕುಟುಂಬ ಕುತ್ಯಾರು ಅರಮನೆಗೆ ಸಂಬಂಧಿಸಿದ ಕುಟುಂಬ ಹಾಗೂ ಬಸದಿಯ ಅರ್ಚಕರ ಕುಟುಂಬವಾಗಿದೆ. ಕುತ್ಯಾರು ಅರಮನೆಯು ಬಸದಿಗೆ ಸುಮಾರು ೬ ಕಿ.ಮೀ. ದೂರದಲ್ಲಿದೆ. ಈ ಬಸದಿಯನ್ನು ಊರಿನ ಪ್ರಮುಖರು ಕಟ್ಟಿಸಿದರೆಂದೂ, ಕಾಲಾನಂತರದಲ್ಲಿ ಊರಿನಲ್ಲಿ ಜೈನರ ಸಂಖ್ಯೆ ಇಲ್ಲವಾಗಿ, ಅರ್ಚಕರ ಮನೆಯೊಂದೇ ಉಳಿವ ಸರಳ ಕುತ್ಯಾರು ಅರಮನೆಯ ವ್ಯಾಪ್ತಿಗೆ ಸೇರಿದೆ. ಸುಮಾರು ೫೦೦ರಿಂದ ೫೦೦ ವರ್ಷಗಳು ಬಸದಿಗೆ ಸಂದವು. ಬಸದಿ ೧೯೯೯ರಲ್ಲಿ ಜೀರ್ಣೋದ್ದಾರಗೊಂಡಿದೆ.

ಒಳಾಂಗಣ ಶಿಲಾನ್ಯಾಸ[ಬದಲಾಯಿಸಿ]

ಬಸದಿಯಲ್ಲಿ ಮೂಲ ತೀರ್ಥಂಕರರು ಅಲ್ಲದ ಪ್ರಮುಖ ಯಕ್ಷಿಯಾಗಿ ಶ್ರೀ ಜ್ವಾಲಾಮಾಲಿನಿ ದೇವಿ, ಬ್ರಹ್ಮಯಕ್ಷ. ಪಂಚಪರಮೇಷ್ಠಿಗಳು ಹಾಗೂ ಇತರ ತೀರ್ಥಂಕರರ ಬಿಂಬಗಳಿವೆ,ದ್ವಾರಪಾಲಕರನ್ನು ಬಣ್ಣದಲ್ಲಿ ರಚಿಸಿದ ಚಿತ್ರಗಳಿವೆ. ಜೀರ್ಣೋದ್ದಾರದ ಮೊದಲು ನಾಲ್ಕು ಮರದ ಕಂಬಗಳಿರುವ ಮಂಟಪವಿದ್ದು ಪರಿವರ್ತನೆಯನ್ನು ಮಾಡಲಾಗಿದೆ. ಕಂಬಗಳಿಲ್ಲದ ಮಂಟಪವಿದ್ದು, ಜಯಘಂಟೆಯನ್ನು ನೇತುಹಾಕಲಾಗಿದೆ. ಸಣ್ಣ ಬಸದಿಯಾಗಿರುವುದರಿಂದ ಎರಡೆ ಮಂಟಪಗಳಿವೆ. ಒಂದು ಗರ್ಭಗುಡಿ, ಇನ್ನೊಂದು ನಮಸ್ಕಾರ ಮಂಟಪ ಗಂಧಕುಟಿಯು ನಮಸ್ಕಾರ ಮಂಟಪದಲ್ಲಿದೆ. ಶ್ರುತ, ಬ್ರಹ್ಂದೇವರ ಮೂರ್ತಿ ಹಾಗೂ ಪಂಚಪರಮೇಷ್ಟಿಗಳ ವಿಗ್ರಹಗಳಿದ್ದು ಪೂಜೆ ನಡೆಯುತ್ತಿದೆ. ಪ್ರಮುಖ ಯಕ್ಷಿಯಾಗಿ ಶ್ರೀ ಸ್ವಾಲಾಮಾಲಿನಿ ದೇವಿಯ ವಿಗ್ರಹವಿದೆ. ವಿಶೇಷ ಅಲಂಕಾರ ಪೂಜೆಯನ್ನು ಮಾಡಲಾಗುತ್ತದೆ. ದೇವಿಯ ವಾಹನವಾದ ಮಹಿಷಿ (ಕೋಣ)ದ ಒಗಹಸಿದೆ. ಮೂಲನಾಯಕ ಬಿಂಬ-ನೆಲ್ಲಿಕಾರು ಕರಿಶಿಲೆ- ಎತ್ತರ ಸುಮಾರು ೨೦ ಇಂಚು, ಭಂಗಿ ಖಡ್ಡಾಸನ, ಅಪ್ಪಮಹಾಪ್ರಾತಿ ಹಾರ್ಯಗಳಿಂದ ಒಡಗೂಡಿದೆ.ಬಸದಿಯ ಸುತ್ತಲೂ ಕೆಂಪುಕಲ್ಲಿನಿಂದ ನಿರ್ಮಿತವಾದ ಪ್ರಾಕಾರವಿದೆ.

ಪೂಜಾ ವಿಧಾನ[ಬದಲಾಯಿಸಿ]

ಡಿಸೆಂಬರ್ ತಿಂಗಳಲ್ಲಿ ವಾರ್ತಿಕ ಉತ್ಸವ ಶಾಂರ್ಗಶ್ರಮ ಜರಗುತ್ತದೆ. ಭಪ್ರತಿದಿನ ಜಲಾಭಿಷೇಶ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ ಹಾಗೂ ಗಂಧಾಭಿಷೇಕ ನಡೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ ಸ್ವಾಮಿಗೆ ಸಂಬಂಧಿಸಿದ ಶ್ರೀ ಕಲಿಕುಂಡಯಂತ್ಯಾರಾಧನಾ ವಿಧಾನ ಜರಗುತ್ತದೆ. ಅಭೀಷ್ಟ ಸಿದ್ದಿಗಾಗಿ ಭಕ್ತರು ಹರಕೆಯನ್ನು ಹೊತ್ತು, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ,ಬಸದಿಯಲ್ಲಿ ಆಚರಿಸುವ ವಿಶೇಷ ಹಬ್ಬಗಳು ನಾಗರ ಪಂಚಮಿ, ನುಲುಹುಣ್ಣಿಮೆ, ಕದಿರು ಕಟ್ಟುವುದು, ನವರಾತ್ರಿ ಹಬ್ಬ, ದೀಪಾವಳಿ ಹಾಗೂ ಯುಗಾದಿ. ಬಸದಿ ಉತ್ತರಾಭಿಮುಖವಾಗಿದ್ದು, ಎಡ ಪಾರ್ಶ್ವದಲ್ಲಿ ಶ್ರೀ ಕ್ಷೇತ್ರಪಾಲ ಹಾಗೂ ನಾಗದೇವರ ಸಾನ್ನಿಧ್ಯಗಳಿವೆ. ದಶದಿಕಾಲಕರ ಕಲ್ಲುಗಳಿವೆ. ಇವುಗಳಿಗೆ ಪೂಜೆ ಸಲ್ಲುತ್ತಿದೆ.[೧]

ಉಲ್ಲೇಖ[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್‌. p. ೩೩೫-೩೩೬.