ಸದಸ್ಯ:Tukaram kumbar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರಣಮ್ಮ ಮತ್ತು ತುಕಾರಾಮ್ ಪತಿ ಪತ್ನಿ ೧೯೬೯ ರಿಂದ , ಹೊಸಕನಲ್ಲಿ ಗ್ರಾಮ ಬೀದರ್ ಜಿಲ್ಲೆ ಕರ್ನಾಟಕ.
Tukaram Kumbar

ಪರಿಚಯ : ಟಿ. ಜಿ. ಕುಂಬಾರ್ ಹೊಸಕನಳ್ಳಿ


ಹೈದರಾಬಾದ ಕರ್ನಾಟಕ:

ಭಾರತ ಸ್ವತಂತ್ರವಾದ ಒಂದು ವರುಷದ ನಂತರ ನಿಜಾಮನ ಆಳ್ವಿಕೆಯಲ್ಲಿದ್ದ ಹೈದರಾಬಾದ-ಕರ್ನಾಟಕ ಪ್ರದೇಶ ೧೯೪೮ರಲ್ಲಿ ಭಾರತದ ಒಕ್ಕೂಟಕ್ಕೆ ಸೇರಿತು. ಮುಂದೆ ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ, ಮತ್ತು ಹಳೆಯ-ಮೈಸೂರು ವಿಭಾಗಗಳ ಒಕ್ಕೂಟವೇ 'ಕರ್ನಾಟಕ' ಎಂದು ಹೊಸ ಕನ್ನಡ ಮಾತಾಡುವ ಜನರ ರಾಜ್ಯ ಸ್ಥಾಪನೆಗೊಂಡಿತು. ಕರ್ನಾಟಕಕ್ಕೆ ಮೊದಲು ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು.

ಬೀದರ್, ಗುಲ್ಬರ್ಗಾ , ರಾಯಚೂರು, ಮತ್ತು ಬಳ್ಳಾರಿ ಜಿಲ್ಲೆಗಳು ಹಳೆಯ ಹೈದರಾಬಾದ್ ಸಂಸ್ಥಾನದಿಂದ ಕರ್ನಾಟಕಕ್ಕೆ ಸೇರಿಕೊಂಡ ಪ್ರದೇಶಗಳು. ಈ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ೧೯೬೦ರ ವರೆಗೆ ಶಾಲೆಗಳೇ ಇರಲಿಲ್ಲ. ಮಕ್ಕಳು ಮನಬಂದಂತೆ ಆಡಿಕೊಂಡು ಕಾಲ ಕಳೆಯುತ್ತಿದ್ದರು. ಭಾರತದ ಮೊದಲನೇ ಮತ್ತು ಎರಡನೇ ಪಂಚವಾರ್ಶಿಕ ಯೋಜನೆಗಳು ಕಳೆದ ನಂತರ ನಮ್ಮ ಹಳ್ಳಿಗಳಲ್ಲಿ ಶಾಲೆಗಳು ಆರಂಭವಾಗತೊಡಗಿದವು. ೧೯೬೦ರಲ್ಲಿ ನಮ್ಮೂರಿಗೆ ಹೊಸದಾಗಿ ನೇಮಕಗೊಂಡ, ಚಂದ್ರಪ್ಪ ಮಾಸ್ಟರ್ ಬಂದರು. ಈ ಹೊಸ ಶಾಲೆಯಲ್ಲಿ ನಮ್ಮದೇ ಮೊದಲನೆಯ ಬ್ಯಾಚ್ ಆಗಿತ್ತು. ತದನಂತರ, ನೆರೆಯ ಖೇಣಿ-ರಂಜೋಲ್ ಎನ್ನುವ ಊರಲ್ಲಿ ನಾನು ಪ್ರೌಢ ಶಾಲೆಯಲ್ಲಿ ಹತ್ತನೆಯ ವರೆಗೆ ಅಭ್ಯಾಸ ಮಾಡಿ, ೧೯೬೮-೬೯ರಲ್ಲಿ ಮೆಟ್ರಿಕ್ ಪರೀಕ್ಷಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದೆ. ಮೂರನೆಯ ಇಯತ್ತೆಯಿಂದಲೇ ನನ್ನ ತರಗತಿಗೆ ನಾನು ಕಲಿಕೆಯಲ್ಲಿ ಪ್ರಥಮ ವಿದ್ಯಾರ್ಥಿ ಇದ್ದೆ.

ಬಡತನದ ಸಂಕಷ್ಟದಲ್ಲಿ ಬಳಲಿದರೂ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೀದರಿನ ಭೂಮರಡ್ಡಿ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶ ಪಡೆದು ೧೯೭೩ರಲ್ಲಿ ವಿಜ್ಞಾನ ಪದವೀಧರನಾದೆ. ಗಣಿತ ಮತ್ತು ಭೌತಶಾಸ್ತ್ರಗಳು ನನ್ನ ಐಚಿಕ ವಿಶಯಗಳಾಗಿದ್ದವು. ಆಗ ನಮ್ಮೂರಲ್ಲಿ ಪದವಿ ಗಳಿಸಿದವರು, ಇಬ್ಬರು ಮಾತ್ರ. ಅಲ್ಗೊಲ್ ಶಂಕರ್ ರೆಡ್ಡಿ ಮತ್ತು ನಾನು. ಈ ಭಾಗದಲ್ಲಿ ವಿದ್ಯಾವಂತರ ಅಭಾವ ಇದ್ದುದರಿಂದ ನಮಗೆ ಬೇಗನೆ ಸರಕಾರಿ ಕೆಲಸ ಲಭ್ಯವಾಯಿತು.

ತುಕಾರಾಮ ತಂದೆ ಗುಂಡಪ್ಪ ಕುಂಬಾರ ಹೊಸಕನಳ್ಳಿ:

ಕುಂಬಾರ ಮನೆಯಲ್ಲಿ ಹಳ್ಳಿಯಲ್ಲಿ ಹುಟ್ಟಿದ ಹುಡುಗ. ನೆರೆಯ ಹಳ್ಳಿಯಲ್ಲಿ ಶಾಲೆ ಕಲಿತೆ. NTMS ರಂಜೇರಿಯಲ್ಲಿ ೩ನೇಯ ತರಗತಿಯಿಂದ ೭ನೇಯ ತರಗತಿಯ ವರೆಗೆ ಮೆರಿಟ್ ನಲ್ಲಿ, ನನ್ನ ತರಗತಿಗೆ ನಾನೇ ಮೊದಲಿಗನಾಗಿ ಇರುತ್ತಿದ್ದೆ. ಗಣಿತ ನನ್ನ ನೆಚ್ಚಿನ ವಿಷಯವಾಗಿತ್ತು. ಗುರುಬಸಪ್ಪ ಎನ್ನುವ ಗಣಿತ ಶಿಕ್ಷಕರಿಂದ ಪ್ರಭಾವಿತನಾಗಿದ್ದೆ. ೭ನೇಯ ಬೋರ್ಡ ಪರಿಕ್ಷೆಯಲ್ಲಿ ಗಣಿತದಲ್ಲಿ, ಯಾವ ವಿಶೇಷ ತರಬೇತಿ ಇಲ್ಲದೆ ೯೦% ಗುಣಗಳನ್ನು ಗಳಿಸಿದೆ. ವಿಜ್ಞಾನದಲ್ಲಿ ಅತೀ ಕಡಿಮೆ ಗುಣಗಳು ಬಂದವು, ಕೇವಲ ೪೩% ಮಾತ್ರ. ದಿನಾಲೂ ತಪ್ಪದೆ ಶಾಲೆಗೆ ಹೋಗುತ್ತಿದ್ದೆ.

ಬಡ ಕುಟುಂಬದಲ್ಲಿ ಹುಟ್ಟಿದೆ. ಬಾಲ್ಯದಲ್ಲಿ ಅಪ್ಪನ ಅಶ್ರೇಯ ತಪ್ಪಿತು. ಅಮ್ಮನಿಗೆ ಅರೋಗ್ಯ ಸಮಸ್ಯೆ ಕಾಡುತ್ತಿತ್ತು.ಅಮ್ಮ ನನ್ನ ಬಾಲ್ಯ ವಿವಾಹಕ್ಕೆ ಮುಂದಾದರು. ಮಾವನ ಮನೆಯಲ್ಲಿ ನನ್ನ ಸರಳ ಮದುವೆ ೧೯೬೯ರ ಜೂನ್ ತಿಂಗಳಲ್ಲಿ ನಡೆದು ಹೋಯಿತು. ಮದುವೆಯಲ್ಲಿ ಒಂದು ಬಂಗಾರದ ಉಂಗುರ ಇಟ್ಟರು.

ಮೆಟ್ರಿಕ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದೆ. ವಿಜ್ಞಾನ ಕಾಲೇಜಿನಲ್ಲಿ ಕಲಿಯುವ ಹಂಬಲ ಇತ್ತು. ಹಣಕಾಸಿನ ಸಮಸ್ಯೆ ಎದುರಾಯಿತು. ಮನೆಯಲ್ಲಿ ಏನೂ ಇರಲಿಲ್ಲ. ಮಾನವರಿಂದ ಸಹಾಯ ಬಯಸಿದರೂ ಅದು ಸಿಗಲಿಲ್ಲ. ಆದರೂ ಧೈರ್ಯಗೆಡದೆ ಮುನ್ನುಗ್ಗಿದೆ. ಮದುವೆಯಲ್ಲಿ ಕೊಟ್ಟ ಬಂಗಾರ ಮಾರಿ, ಬಂದ ಹಣದಿಂದ ಭೂಮರಡ್ಡಿ ಕಾಲೇಜಿಗೆ ಸೈನ್ಸ್ ಕಲಿಯಲು ಅಡ್ಮಿಸೇನ್ ಶುಲ್ಕ ಕಟ್ಟಿದೆ.

ನನ್ನ ಹೆಂಡತಿಯ ಅಣ್ಣ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಇದ್ದರು. ತಾತ್ಕಾಲಿಕವಾಗಿ ಭಾವನ ಕೊಣೆಯಲ್ಲಿಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ಕೈಯಿಂದ ಅಡುಗೆ ಮಾಡಿಕೊಂಡು ಜೀವನ ಸಾಗಿಸಿದೆ. ಕಾಲೇಜಿನ ಸೆಕೆಂಡ್ ಟರ್ಮ್ ಫೀಸು ಭಾವನೆ ಕಟ್ಟಿದ. ಇನ್ನು ೩೫ ರೂಪಾಯಿ ಪರೀಕ್ಷೆಯ ಫೀಸು ಕಟ್ಟುವುದು ಬಾಕಿ ಇತ್ತು. ಸೋದರಮಾವಂದಿರ ಊರಿಗೆ ಹೋಗಿ ದಾನ ಕೇಳಿದೆ ಕೇವಲ ೮ ರೂಪಾಯಿ ಪ್ರಾಪ್ತವಾದವು. ನಮ್ಮೂರಲ್ಲಿ ಈರಪ್ಪಾ ಶಾಬಾದ್ [ನಮ್ಮ ತಂದೆಯ ಗೆಳೆಯ], ೨೫ ರೂಪಾಯಿ ಕೊಡಿಸಿದರು. ಅಂತೂ ಪರೀಕ್ಷೆ ಫೀಸು ಕಟ್ಟಿದೆ.

ಪಿ.ಯು.ಸಿ.ಸೈನ್ಸ್ ಪರಿಕ್ಷೆ ಚೆನ್ನಾಗಿ ಬರೆದೆ. ೫೮% ಗುಣಗಳು ಪಡೆದೆ. ಕಾಲೇಜಿನ ನನ್ನ ತರಗತಿಗೆ ನಾನೇ ಸೆಕೆಂಡ್ ರ್ಯಾನ್ಕ್ ಪಡೆದುಕೊಂಡಿದ್ದೆ. ತಂದೆ  ಇಲ್ಲದ ಬಡವ ಎಂದು ಕಾಲೇಜಿನಲ್ಲಿ ಫಾರಂ ತುಂಬಿದೆ. ಕಾಲೇಜಿನವರು ಫ್ರಿಶಿಪ್ ಕೊಟ್ಟರು. ಅಂದರೆ ಪರೀಕ್ಷೆಯ ನಂತರ, ಕಾಲೇಜಿಗೆ ಕಟ್ಟಿದ ೩೦೦ ರೂಪಾಯಿ ಹಿಂತಿರುಗಿ ಪಡೆದೆ. ಮನಸ್ಸಿದ್ದರೆ ಮಾರ್ಗ ಸಿಗುತ್ತೆ ಅನಿಸಿತ್ತು. ಇದೆ ಹಣ ಬಳಸಿ ಮುಂದಿನ ತರಗತಿಗೆ ಫೀಸು ಕಟ್ಟಿದೆ. ಪಿ.ಯು.ಸಿ. ಯಲ್ಲಿ ೫೮% ಗುಣಗಳು ಪಡೆದಿದ್ದರಿಂದ ನನಗೆ ಮೂರು ವರುಷದ ಡಿಗ್ರಿ ಕಲಿಯಲು, ಸರಕಾರದ, ರಾಷ್ಟ್ರೀಯ ಸಾಲದ ರೂಪದಲ್ಲಿ ವಿದ್ಯಾರ್ಥಿ ವೇತನ ಬರುತ್ತಿತ್ತು. ವರ್ಷ ಒಂದಕ್ಕೆ ೭೨೦ ರೂಪಾಯಿ ಕಂತು ಬರುತ್ತಿತ್ತು. ಈಗ ಫೀಸು, ಪುಸ್ತಕ, ಮತ್ತು ಅಮ್ಮನಿಗೆ ಔಷಧ ಆದಿಗಳನ್ನು ಕೊಳ್ಳಬಹುದಾಗಿತ್ತು.

ಮೂರೂ ವರುಷ ಚೆನ್ನಾಗಿ ವಿಜ್ಞಾನ ಓದಿಕೊಂಡು ೫೬% ಗುಣಗಳಿಂದ ವಿಜ್ಞಾನ ಪದವಿ ಸಂಪಾದಿಸಿದೆ. ಎಲ್ಲವೂ ದೇವರ ಅನುಗ್ರವೇ ಸರಿ ಅನ್ನಿಸುತ್ತದೆ. ಮುಂದೆ ಕೆಲಸ ಮಾಡಿ, ಮನೆ ನಡೆಸುವ ಸಾಮರ್ಥ್ಯ ಪಡೆದುಕೊಂಡೆ.

ನಮ್ಮೂರು:

      ಶಾರದಮ್ಮನ ದಿಬ್ಬದ ಆಚೇ ಈಚೇ ಎರಡು ಊರುಗಳಿದ್ದವು. ನಂಜುಂಡೇಶ್ವರಿ ದೊಡ್ಡ ಊರಾದರೆ, ಹ್ವಾಸಕನಲ್ಲಿ ಸಣ್ಣ ಹಳ್ಳಿ. ಕಾರಂಜಾ ನದಿಯ ತೀರದಲ್ಲಿ ಈ ಹಳ್ಳಿಗಳಿದ್ದವು.  ಸಿಂದೋಲ್, ಪಾತರಪಳ್ಳಿ, ವಗದಾಳ, ರೇಕುಳಗಿ, ಹ್ವಾಸಕನಲ್ಲಿ, ಹಜ್ಜರಗಿ, ಡಾಕುಳಗಿ, ಮತ್ತು ಸಂಗೊಳಗಿ ಅಂತ ಹೀಗೆ ಕಾರಂಜಾ ನದಿಗುಂಟಾ ಊರುಗಳು ಇದ್ದವು. ಈ ನದಿಗೆ ನಾಗರ-ಹಳ್ಳ ಮತ್ತು ಮರಕಲ್-ಹಳ್ಳ ಬಂದು ಸಂಧಿಸುವ ಸ್ಥಳದಲ್ಲಿ ನಂಜುಂಡೇಶ್ವರಿ ಎನ್ನುವ ದೊಡ್ಡ ಊರೊಂದಿತ್ತು. ಈ ಊರನ್ನು ಕಾಲಾಂತರದಲ್ಲಿ ನಂಜೇರಿ ಅಂತ ಕರೆಯಲಾಯಿತು. ಆಮೇಲೆ ರಂಜೇರಿ ಅಂತ ರೂಪಾಂತರ ಹೊಂದಿತು. ಈಗ ಅದೇ ಊರು ಖೇಣಿ-ರಂಜೋಲ್ ಅಂತ ಬದಲಾಗಿದೆ. ಹ್ವಾಸಕನಲ್ಲಿ, ಈಗ ಹೊಚಕನಲ್ಲಿ ಅಂತ ಬದಲಾಗಿದೆ. ಅಂದಿನ ಕಾಲದ ಹ್ವಾಸಕನಲ್ಲಿ, ೧೨ನೇಯ ಶತಮಾನದಲ್ಲಿ ಸಣ್ಣ ಊರಾಗಿತ್ತು.

          ಹ್ವಾಸಕನಳ್ಳಿಯಲ್ಲಿ, ಕೆಳಗಿನ ಮಳಾ, ಗೌಡರ ಮಳಾ, ಮೂಲಗ್ಯಾನ ಮಳಾ, ಅರಳಿ-ಗಿಡದ ಮಳಾ, ಹಾರೂರ ಮಳಾ, ಅಂತ ತೋಟಗಳಿದ್ದವು. ಊರಾಗ ಹಾರೂರ ಮನಿ, ಗೌಡರ ಮನಿ, ವಿರೂಪಾಕ್ಷೇಪ್ಪನ ಮನಿ, ಪೊಲೀಸ್ ಗೌಡರ ಮನಿ ಅಂತ ಇದ್ದವು. ಊರಾಗ ಮಹಾದೇವನ ಗುಡಿಯು, ಗೌಡರ ಮನಿ ಹತ್ತಿರ ಇತ್ತು. ಗೌಡರ ಮನಿಯ ಹೊರಬಾಗಿಲು ಉತ್ತರಕ್ಕ ಇತ್ತು. ಅಗಸಿ ಹತ್ತಿರ ಮೂಲಗ್ಯಾನ ಮನಿ ಇತ್ತು. ಅದರ ಎದುರಿಗೆ ಒಂದು ಚಿಕ್ಕ ಮಠ ಇತ್ತು. ಮಠದಲ್ಲಿ ಪ್ರಯಾಣಿಕರು ತಂಗುವ ವ್ಯೆವಸ್ಥೆ ಇತ್ತು. ಊರಾಗ ಮಠಪತಿಗಳು ಇದ್ದರು, ಹಾರೂರು ಇದ್ದರು. ಹೀಗೆ ಎಲ್ಲವೂ ಹಿಂದೂ ಸಂಸ್ಕೃತಿಯ ರೂಪದಲ್ಲಿ ಇತ್ತು.


ನಮ್ಮೂರು ಹೀಗಿತ್ತು

ತುಂಬಿದ ಬನ,  ನಿಶಬ್ದ ಸಂಜೆ, ಹಸಿರು ಹೊತ್ತ ಧರೆ, ಸುಘಂಧ ಬೀರುವ ಫಲ-ಪುಷ್ಪಗಳು, ತಂಗಾಳಿ, ಕಲ್ಮಶವಿಲ್ಲದ ವಾತಾವರಣ, ತಣ್ಣನೆಯ ಸಂಜೆಯ ಬಿಸಿಲು, ಅಲ್ಲಲ್ಲಿ ಕೆಲಸ ಮಾಡಲು ಹೋಗಿಬರುವವರ ಸಂಭ್ರಮ, ಸೀಮಿತ ಜನ, ನಿಂತು ಹೋಗಿರುವಂತೆ  ಕಾಣುವ ಚಟುವಟಿಕೆ, ಅಲ್ಲಲ್ಲಿ ಬೆಳೆದು ನಿಂತ ಪೈರುಗಳು.

ಸಣ್ಣ ಸರಳ ಮನೆಗಳು, ಸಾಕು ಪ್ರಾಣಿಗಳು, ಗಿಡಗಳ ಅಶ್ರೇಯದಲ್ಲಿ ಜನ, ಹುಡುಗರ ಆಟ, ಚೆಂಡಿನಾಟ, ಗೋಲಿಯಾಟ, ಗಿಲ್ಲಿಯಾಟ, ಇತ್ಯಾದಿಗಳು. ಊರಲ್ಲೆಲ್ಲಾ ಗಿಡಗಳೇ ಗಿಡಗಳು. ಊರ ಹೊರಗೂ ಗಿಡಗಳು. ವನಸ್ತೋಮ ಎತ್ತಿದ ಕೈ. ಜನರಿಗೆ ಒಂದೂರಿಂದ ಇನ್ನೊಂದೂರಿಗೆ ಹೋಗಬೇಕಾದರೆ ಕಾಲುದಾರಿ, ಕಣಿವೆದಾರಿಗಳು. ಭಯಹುಟ್ಟಿಸುವ ವನಗಳು. ಹೀಗಿತ್ತು ನಮ್ಮ ಬೀದರ್ ಜನಪದ ನಾಡು, ೧೯೬೦ರಲ್ಲಿ.

ಊರಿಂದ ಹೊರಗೆ ಸುಮಾರು ಸಾವಿರ ಅಡಿಗಳಷ್ಟು ದೂರದ ವರೆಗೆ ಒಣ ಭೂಮಿ. ಬಯಲು ಭೂಮಿ. ಅಲ್ಲಿ ಎಲ್ಲ ಮಕ್ಕಳು ಓಡಾಡುವ ಅವಕಾಶ. ಊರ ದನಕರುಗಳು ಈ ಸ್ಥಳದಲ್ಲಿ ಬಿಡಾರ ಹೂಡಬಹುದಾಗಿತ್ತು. ವಿರಳ ಜನವಸತಿ. ಅತಿ ಕಡಿಮೆ ಭಾವಿಗಳು. ಒಣ ಭೂಮಿಯೇ ಹೆಚ್ಚಿನದು. ಸಂಜೆಯಾಯಿತೆಂದರೆ ತೆರೆದ ಮನೆಗಳು ಮಸುಕು ದೀಪಕಾಣುವಂತೆ ನಿಶಬ್ದವಾಗುತ್ತಿದ್ದವು. ಸಂಭ್ರಮದಿಂದ ಆಚರಿಸುವ ಹಬ್ಬಗಳು. ಎಲ್ಲಾ ಹಬ್ಬಗಳನ್ನು ಆಚರಿಸುವ ಈ ಜನ ಅಲ್ಲಾನ ಭಕ್ತರು, ರಾಮನ ಭಕ್ತರು ಆಗಿದ್ದರು.ಇವರು ಮುಗ್ಧ ಜನ.  ಬಿಚ್ಚು ಮನಸ್ಸಿನ ಸರಳ ಜನ. ಒಳಗು, ಹೊರಗೂ ಒಂದೇ ಅನ್ನುವಂತೆ ಸಹಕಾರದಿಂದ ಕೂಡಿದ ಜೀವನ.

ನಮ್ಮದು ಕೃಷಿ ಪ್ರಧಾನ ಚಟುವಟಿಕೆಯ ಹಳ್ಳಿ. ವಕ್ಕಲುತನ ಜನರ ಮುಖ್ಯ ಕಸಬು. ಎಲ್ಲರ ಮನೆಯಲ್ಲಿ ದನ ಕರುಗಳು ಸಾಕುವರು.  ಊರಲ್ಲಿ ಶಾಲೆ ಇರಲಿಲ್ಲ. ಹೆಂಗಸರು ದಿನಾಲೂ ಮನೆಯಲ್ಲಿಯೇ ಜೋಳದ ಹಿಟ್ಟು ಬೀಸುವುದು ರೂಢಿ. ಒಕ್ಕಲಿಗರು ಬೆಳಗಾಗುವ ಮುನ್ನ ನಸುಕಿನ ಜಾವದಲ್ಲಿ ಎತ್ತುಗಳನ್ನು ಮೇಯಿಸಲು ಬಿಡುವರು. ಎತ್ತುಗಳು ದಾರಿಯಲ್ಲಿ ಸಾಗುವಾಗ ಅವುಗಳು ಕೊರಳ ಗಂಟೆಯ ಇಂಪಾದ ನಾದ ಕೇಳಿಸುವುದು.

ಊರಲ್ಲಿ ಒಬ್ಬನು ಮಾತ್ರ ಒಂದು ಸೈಕಲ್ ಹೊಂದಿದ್ದ. ಸಾಮಾನು ಮತ್ತು ಧಾನ್ಯಗಳನ್ನು ಸಾಗಿಸಲು ಎತ್ತಿನ ಗಾಡಿ ಅಥವಾ ಕತ್ತೆಗಳನ್ನು ಬಳಸುವರು. ಊರ ಗೌಡರು ಕುದುರೆ ಸವಾರಿ ಮಾಡುವರು. ತೊಗಲಿನ ಬಕ್ಕುಣ ಬಳಸಿ ಮಾಡುವ  ಏತನೀರಾವರಿ ಪದ್ಧತಿ ಇತ್ತು. ತೋಟದ ಭಾವಿಯಿಂದ ನೀರೆತ್ತಲು (ಮಟ್ಟಿ ಹೊಡೆಯಲು) ನಾಲ್ಕು ಎತ್ತುಗಳು ಬಳಸುವರು.

ಹೆಚ್ಚಿನವು ಚಪ್ಪರ ಮನೆಗಳು. ಮನೆಗಳ ಹಿಂದೆ ಮುಂದೆ ಹಿತ್ತಲ ಅಂಗಳ ಇರುತ್ತಿತ್ತು. ಮನೆಯಿಂದ ಮನೆಗೆ ಸಾಕಷ್ಟು ಬಿಡಿಜಾಗ  ಇರುತ್ತಿತ್ತು. ಮನೆಯ ಮುಂದೆ ಬೇವಿನ ಮರ ನೆಟ್ಟು ಅದಕ್ಕೊಂದು ಕಟ್ಟೆ  ಕಟ್ಟುವ ರೂಢಿ. ಮನೆಯಲ್ಲಿ ಸಂಜೆಗೆ ಚಿಮಣೀ ಎಣ್ಣೆ ದೀಪ ಹಚ್ಚುವರು. ಅಡುಗೆಗೆ ಕುಳ್ಳು ಕೆಟ್ಟಿಗೆ ಬಳಕೆ ಇತ್ತು. ಓಣಿಯಲ್ಲಿ ನೀರು ಸೇದುವ ಭಾವಿ ಇರುತ್ತಿತ್ತು. ಮನೆ ಸಾಮಾನು ಕೊಳ್ಳಲು ಊರಲ್ಲಿ ಎರಡು ಅಂಗಡಿಗಳಿದ್ದವು. ಊರ ಮುಂದೆ ಸಾಮೂಹಿಕ ಹರಟೆ ಹಾಗು ಮಕ್ಕಳ ಆಟಕ್ಕಾಗಿ ಕಟ್ಟೆಯನ್ನು ಕಟ್ಟುವರು. ಅದರಲ್ಲೊಂದು ಬೇವಿನ ಮರ ನೆಟ್ಟು ಅದರ ನೆರಳಿನಲ್ಲಿ ಕುಳಿತು ಜನ ಹರಟೆ ಹೊಡೆಯುವರು.

ನನ್ನ ಶಿಕ್ಷಣ ಮತ್ತು ಸೇವೆ

೧೯೬೯ರಲ್ಲಿ, ನಮ್ಮೂರಿನಿಂದ ಒಂದು ಕಿಲೋಮೀಟರ್ ದೂರದ, ಖೇಣಿ ರಂಜೋಳನಲ್ಲಿ ಶಾಲೆ ಕಲಿತು, ಮೆಟ್ರಿಕ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದೆ. ಪ್ರೌಢ ಶಾಲೆಯಲ್ಲಿ ಕಲಿಯುವಾಗ ತಂದೆ ಆತ್ಮಹತ್ಯಗೆ ಶರಣಾದರು. ಈ ಕಾರಣ ಮೆಟ್ರಿಕ್ ಪರಿಕ್ಷೆ ಮುಗಿದೊಡನೆ, ಸೋದರಮಾವಂದಿರು ಮತ್ತು ಅಮ್ಮ ಸೇರಿ ನನ್ನ ಬಾಲ್ಯ ವಿವಾಹ ಮಾಡಿದರು. ಮದುವೆಯಲ್ಲಿ ಕೊಟ್ಟ ಬಂಗಾರದ ಉಂಗುರ ಮಾರಿ, ಬೀದರ ನಗರದಲ್ಲಿ ವಿಜ್ಞಾನ ಪದವಿಗಾಗಿ ಅಧ್ಯಯನ ಆರಂಭಿಸಿದೆ. ಸರಕಾರದಿಂದ ಸಾಲದ ರೂಪದಲ್ಲಿ ವಿದ್ಯಾರ್ಥಿ ವೇತನ ಪಡೆದು 1973 ರಲ್ಲಿ [ದ್ವಿತೀಯ ದರ್ಜೆಯಲ್ಲಿ] ಬಿ.ಎಸ್. ಸಿ. ಪದವಿ ಪಡೆದೆ. ಪದವಿಗಾಗಿ ಗಣಿತ ಮತ್ತು ಭೌತವಿಜ್ಞಾನ ಆರಿಸಿಕೊಂಡಿದ್ದೆ.

1974 ರಲ್ಲಿ ಕೇಂದ್ರ ಸರಕಾರದ ಅಂಚೆ ಮತ್ತು ತಂತಿ ವಿಭಾಗದಲ್ಲಿ, ಟೆಲಿಫೋನ್ ಆಪರೇಟರ್ ಹುದ್ದೆಗೆ ಸೇರಿದೆ. 1979 ರಲ್ಲಿ, ಇಲಾಖೆಯ ಸ್ಪರ್ಧಾತ್ಮಕ ಪರಿಕ್ಷೆ ಬರೆದು ಫೋನ್ ಇನ್ಸ್ಪೆಕ್ಟರ್ ಹುದ್ದೆಗೆ ಬಡತಿ ಪಡೆದೆ. ಪುನಃ 1982 ರಲ್ಲಿ ಇನ್ನೊಂದು  ಸ್ಪರ್ಧಾತ್ಮಕ ಪರಿಕ್ಷೆ ಬರೆದು, ಜೂನಿಯರ್ ಇಂಜಿನಿಯರ್ ಹುದ್ದೆಗೆ ಬಡತಿ ಪಡೆದೆ.

1999 ರಲ್ಲಿ ಸೇವೆಯ ಹಿರಿತನದ ಆಧಾರವಾಗಿ, ಸಬ್-ಡಿವಿಜಿನಲ್-ಇಂಜಿನಿಯರ್ ಹುದ್ದೆಗೆ ಬಡತಿ ಪಡೆದೆ. ಅಧಿಕಾರಿಯಾಗಿ ಒಂದು ದಶಕದ ಸೇವೆಯ ನಂತರ, ನನ್ನ 58 ನೇ ವಯಸ್ಸಿಗೆ ಕೆಲಸದಿಂದ ನಿವೃತ್ತಿ ಪಡೆದೆ.


ದೂರವಾಣಿ ವಿನಿಮಯ ಕೇಂದ್ರ:

೧೯೭೪ರಲ್ಲಿ ನಾನು  ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಫೋನ್ ಆಪರೇಟರ್ ಆಗಿ ನೇಮಕಗೊಂಡೆ. ಭಾಲ್ಕಿ ಪಟ್ಟಣದಲ್ಲಿ ಸಣ್ಣ ಟೆಲಿಫೋನ್ ಆಫೀಸ್ ಇತ್ತು. ಊರಲ್ಲಿ ೭೫ ಟೆಲಿಫೋನುಗಳು ಸೇವೆಯಲ್ಲಿದ್ದವು. ಇದಲ್ಲದೆ ಔರಾದ್ ಮತ್ತು ಕಮಲನಗರದ ಆಟೋ ಎಕ್ಸ್ಚೇಂಜ್ ಗಳು ಸಹ ಭಾಲ್ಕಿಯಿಂದಲೇ ಸಂಪರ್ಕ ಹೊಂದಿದ್ದವು. ಕೆಲವು ದೊಡ್ಡ ಹಳ್ಳಿಗಳು ಪಬ್ಲಿಕ್ ಕಾಲ್ ಆಫೀಸ್ [pco] ಸೇವೆ ಹೊಂದಿದ್ದವು. ಈ ಎಲ್ಲ ಟೆಲಿಫೋನ್ ಜಾಲದ ಸಂಪರ್ಕ ಕಲ್ಪಿಸುವ ಜವಾಬ್ದಾರಿ ನಿಭಾಯಿಸಲು ದಿನಕ್ಕೆ ನಾಲ್ಕು ಜನ ಆಪರೇಟರ್ ಗಳು ಕೆಲಸ ಮಾಡುತ್ತಿದ್ದರು. ಹೊರಗಿನ ಕರೆಗಳಿಗೆ ಸಂಪರ್ಕ ಕಲ್ಪಿಸಲು ಭಾಲ್ಕಿ-ಬೀದರ್ ಟ್ರಂಕ್ ಲೈನ್ ವ್ಯವಸ್ಥೆ ಇತ್ತು. ಆಪರೇಟರ್ ಗಳ ಕರಸೇವೆಯಿಂದ ಟೆಲಿಫೋನ್ ಕಾಲ್ ಸಂಪರ್ಕ ಕಲ್ಪಿಸಲಾಗುತ್ತಿತ್ತು.

ಟೆಲಿಫೋನ್ ಆಫೀಸಿನಿಂದ, ಟೆಲಿಫೋನ್ ಕಂಬಗಳ ಮೇಲೆ ಅಳವಡಿಸಲಾದ ಇನ್ಸುಲೇಟರ್ ಗಳ ಮೇಲೆ ಜೋಡಿ ವಾಹಕ ತಂತಿಗಳನ್ನು ಗ್ರಾಹಕರ ಮನೆ ಅಥವಾ ಅಂಗಡಿಗಳಿಗೆ ಎಳೆಯಲಾಗುತ್ತಿತ್ತು. ಇದನ್ನು ಲೋಕಲ್ ಲೈನ್ ಲೂಪ್ ಎನ್ನುತ್ತಿದ್ದರು. ಪ್ರತಿ ಗ್ರಾಹಕರಿಗೆ ಬೇರೆ ಬೇರೆ ಲೂಪ್ ಲೈನ್ ಇರುತ್ತಿತ್ತು. ಲೂಪ್ ಲೈನ್ ಕೊನೆಯಲ್ಲಿ ಫೋನ್ ಪೆಟ್ಟಿಗೆ ಅಳವಡಿಸುತ್ತಿದ್ದರು. ಗ್ರಾಹಕರು ಈ ದೂರವಾಣಿ ವ್ಯವಸ್ಥೆಗೆ ತಿಂಗಳ ಬಾಡಿಗೆ  ಕಟ್ಟಬೇಕಾಗಿತ್ತು. ಅನ್ಯ ಊರಿಗೆ ಮಾತಾಡಿದರೆ ಅದಕ್ಕೆ ಬೇರೆ ಹಣ ಕಟ್ಟಬೇಕಾಗುತ್ತಿತ್ತು. ಎರಡು ತಿಂಗಳಿಗೆ ಒಮ್ಮೆ ಬಿಲ್ಲು ಬರುತ್ತಿತ್ತು. ನಿಗದಿತ ಸಮಯದಲ್ಲಿ ಬಿಲ್ಲು ಕಟ್ಟದಿದ್ದಲ್ಲಿ ಟೆಲಿಫೋನ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿತ್ತು.

ತಾಂತ್ರಿಕ ವ್ಯವಸ್ಥೆ ನಿಭಾಯಿಸಲು, ಒಬ್ಬ ಟೆಕನಿಸಿಯನ್ ಮತ್ತು ಮೂವರು ಲೈನ್ ಮ್ಯಾನ್ ಗಳು ಇದ್ದರು. ಸಾಮಾನ್ಯವಾಗಿ ಇತರೆ ತಾಲೂಕಾ ಸ್ಥಳಗಳಲ್ಲಿ ಸಹ ಇಂತಹದೇ ವ್ಯವಸ್ಥೆ ಇರುತ್ತಿತ್ತು. ಒಂದು ಜಿಲ್ಲೆಯ ಒಟ್ಟು ಜಾಲವನ್ನು ಸೆಕಂಡರಿ ಸ್ವಿಚಿಂಗ್ ಏರಿಯಾ ಎನ್ನುತ್ತಿದ್ದರು. ಕಲಬುರಗಿ ಡಿವಿಜಿನಲ್ ಟೆಲಿಫೋನ್ ಕೇಂದ್ರವಾಗಿತ್ತು.


ನಾನೊಬ್ಬ ವಿಜ್ಞಾನ ಹವ್ಯಾಸಿ.

1973ರಲ್ಲಿ ವಿಜ್ಞಾನ ಪದವಿ ಪಡೆದೆನಾದರೂ, ವಿಜ್ಞಾನ ಏನೆಂದು ಪೂರ್ಣ ಅರಿವಾಗಿರಲಿಲ್ಲ. 1994 ರಲ್ಲಿ ಜಿ.ಟಿ. ನಾರಾಯಣರಾಯರ 'ವೈಜ್ಞಾನಿಕ ಮನೋಧರ್ಮ ' ಎನ್ನುವ ಕೃತಿಯ ಅಧ್ಯಯನ ಮಾಡಿದಾಗ, ವಿಜ್ಞಾನ ಎಂದರೇನು, ಅನ್ನುವ ಪೂರ್ಣ ಅರಿವಾಯಿತು. ಎಲ್ಲ ಮೂಢನಂಬಿಕೆಗಳು ಕರಗಿ ಹೋದವು. ಅಂತರಂಗದಲ್ಲಿ ಹೊಸ ಹೊಸ ವಿಚಾರಗಳು ಹಾಗು ಪ್ರಶ್ನೆಗಳು ಉದಯವಾದವು. ವಿಜ್ಞಾನದ ದಾರಿಯಲ್ಲಿ ಮುಂದೆ ಮುಂದೆ ಸಾಗಿರುವೆ. ನನ್ನ ದಾರಿ ಕೇವಲ ಜ್ಞಾನ ದಾಹ ಮಾತ್ರ ಆಗಿತ್ತು.

ವಿಜ್ಞಾನದತ್ತ ನನ್ನ ಒಲವು:

೧೯೯೪ರಲ್ಲಿ ಒಮ್ಮೆ, ನಾನು ರಾಯಚೂರಿನಲ್ಲಿ ಸೇವೆಯಲ್ಲಿರುವಾಗ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಅಲ್ಲಿ  ಜಿ.ಟಿ. ನಾರಾಯಣರಾಯರಿಂದ ಕನ್ನಡದಲ್ಲಿ ಬರೆದ ವೈಜ್ಞಾನಿಕ ಮನೋಧರ್ಮ ಎನ್ನುವ ಪುಸ್ತಕ ಒಂದು ಕೊಂಡುಕೊಂಡೆ. ಆಗಾಗ್ಗೆ ಕೆಲಸದಿಂದ ಬಿಡುವಿದ್ದಾಗ ಪುಟಗಳನ್ನು ತಿರುವಿ ಅದನ್ನು ಓದುತ್ತಿದ್ದೆ. ನಾನು ಅರ್ಧ ಪುಸ್ತಕ ಓದಿದ ಮೇಲೆ, ನನಗೆ ಗಣಿತಕ್ಕೂ, ವಿಜ್ಞಾನಕ್ಕೂ ಇರುವ ನಿಕಟ ನಂಟಿನ ಅರಿವಾಯಿತು. ವಿಜ್ಞಾನದ ಸಮಸ್ಸೆ ಬಿಡಿಸಲು ಗಣಿತದ ಗುಟ್ಟು ರಟ್ಟಾಯಿತು.

ನನ್ನ ಕುತೂಹಲಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ:

'ಭೂಮಿಯಿಂದ ಎಷ್ಟು ಎತ್ತರದಲ್ಲಿ ಮೋಡಗಳು ಹುಟ್ಟಿಕೊಳ್ಳುತ್ತವೆ?' ಎನ್ನುವ ಪ್ರಶ್ನೆ ಕಾಡಿತು. ಅದನ್ನು ಬಿಡಿಸಿದೆ. ಸರಾಸರಿ ಉತ್ತರ 5 ರಿಂದ 6 ಕಿಲೋಮೀಟರ್ ಎತ್ತರದಲ್ಲಿಎಂದು ತಿಳಿಯಿತು. ಇದೇ ರೀತಿ, ಗಣಿತದ ಹಿಕಮತಿ ಬಳಸಿ ಸೂರ್ಯನ ವ್ಯಾಸದ ಉದ್ದ ಕಂಡುಹಿಡಿಯಲು ಒಂದು ಪ್ರಯೋಗದ ಆಧಾರವಾಗಿ ಪ್ರಯತ್ನಿಸಿದೆ. ಇದರಂತೆ ಸೂರ್ಯನ ಸುತ್ತ ಭೂಮಿಯ ಚಲನೆಯ ಸರಾಸರಿ ವೇಗ ಕಂಡುಹಿಡಿದೆ. ಅಂದರೆ ಸೂರ್ಯನ ಸುತ್ತ ಭೂಮಿಯ ಪರಿಭ್ರಮಣದ ಸರಾಸರಿ ವೇಗ ಲೆಕ್ಕಹಾಕಿದೆ. ಕುತೂಹಲಕ್ಕೆ ನನ್ನ ಉತ್ತರಗಳು, ಸರಿಯಾಗಿಯೇ ಇದ್ದವು. ಹೀಗೆ ವಿಜ್ಞಾನ ಪ್ರಪಂಚಕ್ಕೆ ನಾನು ಹತ್ತಿರವಾಗುತ್ತಾ ನಡೆದೆ. ಪದವಿಯಲ್ಲಿ ಓದುವಾಗ ರಸಾಯನ ಶಾಸ್ತ್ರ ಚೆನ್ನಾಗಿ ಅರ್ಥವಾಗಿರಲಿಲ್ಲ. ಮುಂದೊಮ್ಮೆ, ಸಸ್ಯಗಳು ಸೂರ್ಯನ ಬೆಳಕಿನಲ್ಲಿ ಸಕ್ಕರೆ ತಯ್ಯಾರಿಸುವ ಕ್ರಮ, ನನ್ನ ಕುತೂಹಲ ಕೆರಳಿಸಿತು. ಇದೇ ಧಾಟಿಯಲ್ಲಿ ಮುನ್ನುಗ್ಗಿ ರಸಾಯನ ಶಾಸ್ತ್ರದತ್ತ ನನ್ನ ಒಲವು ಹೆಚ್ಚಿತು. ವಿವಿಧ ಪರಮಾಣುಗಳ ಸಹವೇಲೆನ್ಸಿ ಬಂಧ ಉಂಟಾಗುವುದನ್ನ ಮತ್ತು ಇದಕ್ಕೆ ಸಂಭಂದಿಸಿದಂತೆ ಶಕ್ತಿಯಲ್ಲಿ ಆಗುವ ಬದಲಾವಣೆಗಳನ್ನು ಅರ್ಥಮಾಡಿಕೊಂಡೆ. ಕಾಲದೊಂದಿಗೆ ರಸಾಯನ ಶಾಸ್ತ್ರದಲ್ಲಿ ಆದ ಬೆಳವಣಿಗೆಯ ಅಧ್ಯಯನ ಮಾಡಿದೆ. ಹೀಗೆ ನಾನೊಬ್ಬ ರಸಾಯನ ಶಾಸ್ತ್ರದ ಹವ್ಯಾಸಿಯಾದೆ. ಮೂಲಧಾತುಗಳ ಪರಮಾಣು ರಾಶಿಯನ್ನು ಆಧರಿಸಿ, ಸೈಬೀರಿಯಾದ ವಿಜ್ಞಾನಿ ಮೆಂಡೆಲಿವರು ಧಾತುಗಳ ಆವರ್ತಕ ಕೋಷ್ಟಕ ರಚನೆ ಮಾಡಿದನ್ನು ಅಭ್ಯಾಸ ಮಾಡಿದೆ. ಹೀಗೆ ವಿಜ್ಞಾನ ಲೋಕದಲ್ಲಿ ನನ್ನ ಪಯಣ ಮುಂದೆ ಮುಂದೆ ಸಾಗಿತು. ಆವರ್ತಕ ಕೋಷ್ಟಕ ಇಡೀ ವಿಶ್ವಕ್ಕೆ ಅನ್ವಯ ಎಂದು ತಿಳಿದಾಗ, ಬಲು ಆಶ್ಚರ್ಯ ಹಾಗು ಸಂತೋಷದ ಭಾವನೆ ಮೂಡಿತು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭೋದನೆ:[2014]

ನಾನು ಶಿಕ್ಷಕನಾದದ್ದು ಒಂದು  ಆಕಸ್ಮಿಕ ಘಟನೆ. ಒಮ್ಮೆ ನಾನು ಬೆಟ್ಟದ ಮೇಲಿರುವ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಪೂಜೆ ಮತ್ತು ಪ್ರಾರ್ಥನೆಗಾಗಿ ಭೇಟಿ ನೀಡಿದ್ದೆ. ಪೂಜೆಯ ನಂತರ ನಾನು ಸರ್ಕಾರಿ ಶಾಲೆಯ ಬಳಿ ಹಾದು ಹೋಗುತ್ತಿದ್ದಾಗ, 10ನೇ ತರಗತಿಯ ವಿದ್ಯಾರ್ಥಿಗಳ ಧರಣಿಯನ್ನು ನೋಡಿದೆ. ಅವರು ತಮಗೆ ಪಾಠ ಕಲಿಸಲು ಗಣಿತ ಶಿಕ್ಷಕರ ಬೇಡಿಕೆ ಇಟ್ಟು  ಧರಣಿಗೆ ಇಳಿದಿದ್ದರು. ಶಾಲೆಯಲ್ಲಿ ಅವರಿಗೆ ಗಣಿತ ವಿಷಯ ಕಲಿಸಲು ಯಾರೂ ಇರಲಿಲ್ಲ.  ಇದನ್ನು ಕಂಡ ನಾನು, "ಸ್ವಲ್ಪ ಪ್ರಯತ್ನಿಸೋಣ" ಎಂದು ಯೋಚಿಸಿದೆ. ಮರುದಿನ, ನಾನು ಹೈಸ್ಕೂಲಿಗೆ ಹೋಗಿ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. "ತಾತ್ಕಾಲಿಕವಾಗಿ ಅಳಿಲು ಸೇವೆಯೇ  ಸರಿ" ಎಂದು, ಗಣಿತ ಪಾಠ ಮಾಡುತ್ತಿದ್ದೆ. ಹೈಸ್ಕೂಲ್ ಹುಡುಗರಿಗೆ ಗಣಿತ ತರಗತಿಗಳನ್ನು ತೆಗೆದುಕೊಳ್ಳಲು ಮುಖ್ಯೋಪಾಧ್ಯಾಯರು ನನಗೆ ಅವಕಾಶ ನೀಡಿದರು. ನಿಧಾನವಾಗಿ ನಾನು ಬೋಧನಾ ಪ್ರಕ್ರೀಯೆಯಲ್ಲಿ ತೊಡಗಿಸಿಕೊಂಡೆ ಮತ್ತು ನಂತರ ನಾನು ಶಾಲೆಯ ವೇಳಾಪಟ್ಟಿಯ ಪ್ರಕಾರ 8ನೇ, 9ನೇ ಮತ್ತು 10ನೇ ವಿದ್ಯಾರ್ಥಿಗಳಿಗೆ ನಿಯತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಈ ಅಭ್ಯಾಸ ಸುಮಾರು ಎರಡು ವರ್ಷಗಳ ಕಾಲ ನಡೆಯಿತು. ನಾನು ವೃತ್ತಿಪರ ಶಿಕ್ಷಕನಾಗಿರಲಿಲ್ಲ ಮತ್ತು ಶಾಲೆಗಳಲ್ಲಿ ಕಲಿಸಲು ಯಾವುದೇ ತರಬೇತಿ ಪಡೆದಿರಲಿಲ್ಲ. ಆದರೂ,  ಮಕ್ಕಳಿಗೆ ಕಲಿಸಬೇಕೆನ್ನುವ ನನ್ನ ಉತ್ಸಾಹವು ಕೆಲಸ ಮಾಡಿತು ಮತ್ತು ನನ್ನನ್ನು ಹೈಸ್ಕೂಲ್ ಶಿಕ್ಷಕನನ್ನಾಗಿ ಮಾಡಿತು.

ಗಣಿತ ವಿಷಯದಲ್ಲಿ ಮೂಲಭೂತ ಕೌಶಲ್ಯಗಳನ್ನು ಕಲಿಯಲು ಕೆಲವು ವಿದ್ಯಾರ್ಥಿಗಳು ನನ್ನ ನಿವಾಸಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ಜನರು ನನ್ನನ್ನು "ಶಿಕ್ಷಕರು" ಎಂದು ಕರೆಯಲು ಪ್ರಾರಂಭಿಸಿದರು. ಹೀಗಿರುವಾಗ, ಒಂದು ಒಳ್ಳೆಯ ದಿನ, ಸರಕಾರದಿಂದ ಗಣಿತ ಶಿಕ್ಷಕರನ್ನು ನೇಮಿಸಲಾಯಿತು ಮತ್ತು ನಾನು ಗಣಿತ ಬೋಧನೆಯಿಂದ ಮುಕ್ತನಾದೆ. ಆದರೆ ಈ ಮಧ್ಯ, ವಿಜ್ಞಾನ ಶಿಕ್ಷಕಿಯೊಬ್ಬರು ಗರ್ಭಿಣಿಯಾಗಿದ್ದು, ಆರು ತಿಂಗಳುಗಳ ಕಾಲ, ಹೆರಿಗೆ ರಜೆಯ ಮೇಲೆ ತೆರಳಿದರು. ವಿಜ್ಞಾನವು ನನ್ನ ಹವ್ಯಾಸವಾಗಿದ್ದರಿಂದ, ನಾನು ಮಕ್ಕಳಿಗೆ ವಿಜ್ಞಾನ ಕಲಿಸಲು ಪ್ರಾರಂಭಿಸಿದೆ. ಇದು 10ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ SSLC ಫಲಿತಾಂಶ ಉತ್ತಮಗೊಳಿಸಲು ಸಹಾಯ ಮಾಡಿತು. ಯಾರೂ ನನ್ನನ್ನು ಶಿಕ್ಷಕರಾಗಿ ಕೆಲಸ ಮಾಡಲು ಕೇಳಿರಲಿಲ್ಲ, ಆದರೆ ನಾನು ಯಾವುದೇ ಸಂಬಳ ಅಥವಾ ಗೌರವ-ಧನವನ್ನು ಬಯಸದೆ, ಸ್ವಯಂಪ್ರೇರಿತನಾಗಿ ಇದೆಲ್ಲವನ್ನೂ ಮಾಡಿದೆ. ನಾನು ನನ್ನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದೆ ಮತ್ತು ನನ್ನ ಆಹಾರದ ಅಗತ್ಯಗಳನ್ನು ಅಲ್ಲಿಯೇ ಪಡೆಯುತ್ತಿದ್ದೆ.

ಕಲಿಸುವಾಗ ನಾನೂ ಕಲಿಯುತ್ತಿದ್ದೆ. ನನಗೂ ಲಾಭವಾಯಿತು. ವಿಜ್ಞಾನ ಶಿಕ್ಷಕಿ ರಜೆ ಮುಗಿಸಿ ಹಿಂದಿರುಗಿದಾಗ ನಾವಿಬ್ಬರೂ ಬಯೋಕೆಮಿಸ್ಟ್ರಿ ಮತ್ತು ಭೌತಶಾಸ್ತ್ರದಂತಹ ಪರಸ್ಪರ ಆಸಕ್ತಿಯ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಸುಮಾರು ನಾಲ್ಕು ವರ್ಷಗಳ ಕಾಲ, ನಾನು ಈ ಕೆಲಸದಲ್ಲಿದ್ದೆ. ಹೀಗೆ, ನಾನೂ ಕೂಡ ಶಿಕ್ಷಕನಾದೆ. ಕೆಲವೊಮ್ಮೆ ನಾನು ಇಂಗ್ಲಿಷ್ ವ್ಯಾಕರಣದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಇಂಗ್ಲಿಷ್ ಶಿಕ್ಷಕರು ವ್ಯಾಕರಣ ಭೋದನೆಯನ್ನು ಮುಂದುವರಿಸಲು ನನ್ನನ್ನು ಪ್ರೋತ್ಸಾಹಿಸಿದರು. ಮಕ್ಕಳಿತೆ ಇಂಗ್ಲಿಷ್ ವ್ಯಾಕರಣ ಕಲಿಸುವ ನನ್ನ ಪ್ರಯತ್ನವನ್ನು ಅವರು ಶ್ಲಾಘಿಸಿದರು. ನನ್ನ ನಿವೃತ್ತ ಜೀವನದ ಸಮಯವು ಗ್ರಾಮೀಣ ಪರಿಸರದಲ್ಲಿ ಕಲಿಕೆ ಸೇವೆ ಸಲ್ಲಿಸಲು ಬಳಸಿಕೊಳ್ಳಲಾಯಿತು.

ಸೈನ್ಸ್ ಟೀಚರ್ ಪಿಎಚ್ ಡಿಗಾಗಿ ಓದುತ್ತಿದ್ದರು ಮತ್ತು ಆಕೆಗೆ ವಿಜ್ಞಾನದಲ್ಲಿ ನನ್ನ ಅನುಭವದ ಅಗತ್ಯವಿತ್ತು; ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ಸಂವಹನ ಮತ್ತು ಸೌರಶಕ್ತಿಯಂತಹ ಅನ್ವಯಿಕ ವಿಜ್ಞಾನದಲ್ಲಿ. ನಾವು ಒಟ್ಟಿಗೆ ಕುಳಿತು ಓದುತ್ತಿದ್ದೆವು ಮತ್ತು ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಅವಳು ರಸಾಯನಶಾಸ್ತ್ರದಲ್ಲಿ ತನ್ನ Ph.D ಯ ಸಿದ್ಧಾಂತದ ಭಾಗವನ್ನು  ಪಾಸಾದಾಗ, ತುಂಬಾ ಸಂತೋಷಪಟ್ಟಳು.

                                                                      -ಎಚ್. ಕೆ. ತುಕಾರಾಮ