ಸದಸ್ಯ:Sumashakthi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಸನ್ ಯಾತ್ ಸೆನ್ [೧೮೬೬-೧೯೨೫][ಬದಲಾಯಿಸಿ]

ಡಾ.ಸನ್ ಯಾತ್ ಸೆನ್ ಚೀನಾದ ವ್ಯಕ್ತಿಗಳಲ್ಲೊಬ್ಬ. ಅದೇ ಅಲ್ಲದೆ ಇವನನ್ನು ಆಧುನಿಕ ಚೀನಾದ ನಿಮಾ೯ತೃವೆಂದು ಪರಿಗಣಿಸಿದ್ದಾರೆ.ತನ್ನ ಇಡೀ ಜೀವನವನ್ನು ದೇಶದಲ್ಲಿ ಕ್ರಾಂತಿಯ ಸಲುವಾಗಿ ಸವೆಸಿದನು.ಈ ಒಂದು ದಿಶೆಯಲ್ಲಿ ಹಲವು ಬಾರಿ ದೇಶಭ್ರಷ್ಟನಾಗಿ ವಿದೇಶಗಳಲ್ಲಿ ಅಲೆದು ದೇಶದ ಪುನರ್ ನಿಮಾ೯ಣಕ್ಕಾಗಿ ಅನ್ಯರ ಬೆಂಬಲ ಮತ್ತು ಸಹಾನುಭೂತಿ ಗಳಿಸಿದನು. ಮತ್ತು ದೇಶದ ಏಕತೆ ಅವನ ಉಸಿರಾಗಿತ್ತು.ದೇಶದ ನಿಜವಾದ ಒಡೆಯರು ಜನತೆ ಎಂಬುದನ್ನು ಸಾದರಪಡಿಸುವುದು ಅವರ ಏಕೈಕ ಧ್ಯೇಯವಾಗಿತ್ತು.ಚೀನೀಯರಲ್ಲಿ ಮೂಡಿಸಿದ ಮಹಾನ್ ತಂತ್ರ ಎಂದರೆ ರಾಷ್ಟೀಯತೆ. ಮತ್ತು ಇವನ ಧೋರಣೆ ಎಂದರೆ, ಪ್ರತಿಯೊಬ್ಬ ಚೀನಿಯನ ಜೀವನವು ಉತ್ತಮ ಮತ್ತು ಸ್ವಾತಂತ್ರ್ಯ ವಾಗಿರಬೇಕು .ಇದರ ಗಳಿಕೆಗಾಗಿ ಆರಂಭದ ದಿನಗಳಲ್ಲಿ ಡಾ.ಸನ್ ಯಾತ್ ಸೆನ್ ರವರಿಗಿಂತ ಶ್ರಮಿಸಿದವರು ಬೇರೊಬ್ಬರಿಲ್ಲ. ಇವನ ಗುಣಗಳಲ್ಲಿ ಪ್ರಮುಖ ವಾದುದು ಎಂದರೆ ಕಾಯ೯ತತ್ಪರತೆ ಮತ್ತು ಪ್ರಾಯೋಗಿಕತೆ ಇತ್ತು. ಮತ್ತು ಅದೇ ಅಲ್ಲದೆ ಇವನ ಇಚ್ಚೆ ದೇಶಕ್ಕೊಂದು ಸಂವಿಧಾನವನ್ನು ಒದಗಿಸಬೇಕೆಂಬುದು ಇವನ ಇಚ್ಚೆಯಾಗಿತ್ತು.

ಬಾಲ್ಯ ಜೀವನ[ಬದಲಾಯಿಸಿ]

"ತೈಚಿಯೊಂಗ್" ಸನ್ ಯಾತ್ ಸೆನ್ ನ ಮೊದಲ ಹೆಸರು. ಇವನು ಕ್ಯಾಂತನ್ ಗೆ ನಲವತ್ತು ಮೈಲಿ ದೂರದ ಸಿಯಾಂಗ್ ಷಾನ್ ಎಂಬ ಹಳ್ಳಿಯೊಂದರಲ್ಲಿ ೧೮೬೬ ರ ನವೆಂಬರ್ ೧೨ ರಂದು ಜನ್ಮ ತಾಳಿದನು.ತಂದೆ ಸನ್-ತತ್-ಸುಂಗ್ ಇವನು ಒಬ್ಬ ಸಾಧಾರಣ ರೈತ ನಾಗಿದ್ದನು.ಉತ್ತಮ ವಾಸದ ಮನೆ ಕೂಡ ಇರಲಿಲ್ಲ.ಸನ್ ಯಾತ್ ಸೆನ್ ಗುಡಿಸಲಲ್ಲಿ ಬೆಳೆದುದರಿಂದ ಉತ್ತಮ ಶಿಕ್ಷಣ ಪಡೆಯುವುದು  ಕೂಡ ಕಷ್ಟವಾಗಿತ್ತು. ಆದರೂ ತನ್ನ ಸೋದರನೊಡನೆ ಹೋಗಿ ಹವಾಯ್ ದ್ವೀಪಗಳಲ್ಲಿ ನೆಲೆಸಿದ .ಸೆನ್ ಕ್ರಿಶ್ಚಿಯನ್ ಶಾಲೆ ಸೇರಿ ಪಾಶ್ಚಾತ್ಯ ತಾಂತ್ರಿಕ ವಲಯಗಳಲ್ಲಿ ಅಪಾರ ಬುದ್ದಿ ಯನ್ನು ಗಳಿಸಿದ.ಇಲ್ಲಿ ಪಾಶ್ಚಾತ್ಯ ಸಂಸ್ಕ್ರತಿಯ ಪರಿಚಯದ ಜೊತೆಗೆ ಕ್ರೈಸ್ತ ಧಮ೯ದ ಪ್ರಭಾವ ಕೂಡ ಇವನ ಮೇಲೆ ಬೀರಿತು.

ಸ್ವದೇಶಕ್ಕೆ ಮರಳಿದ ಮೇಲೆ ದೇಶದ ಹಿತ ಚಿಂತನೆಯ ಕಾಯ೯ಗಳಲ್ಲಿ ತೊಡಗಿದ ಸನ್ ಯಾತ್ ಸೆನ್ ವಿದ್ಯಾಜ೯ನೆ ಯನ್ನು ನಿಲ೯ಕ್ಷಿಸಿದನು.ಲುಸಜು ಎಂಬುವಳೊಡನೆ ವಿವಾಹ ವಾಗಿ ಲೌಕಿಕ ತಿಳುವಳಿಕೆ ಪಡೆದ ಈತ ಮತ್ತೆ ಶಿಕ್ಷಣದ ಕಡೆ ಗಮನ ಹರಿಸಿದ. ಈ ವೇಳೆಗೆ ಬ್ರಿಟಿಷ್ ಪಾದ್ರಿಗಳು ಹಾಂಕಾಂಗ್ ನಲ್ಲಿ ವೈದ್ಯಕೀಯ ಕಾಲೇಜೊಂದನ್ನು ನಿಮಿ೯ಸಿದರು. ಮತ್ತು ೧೯೮೨ ರಲ್ಲಿ ಈ ಕಾಲೇಜಿಗೆ ಪ್ರವೇಶ ಪಡೆದ ಸನ್ ಯಾತ್ ಸೆನ್ ಸ್ವಲ್ಪ ಕಾಲ ವೈದ್ಯ ವೃತ್ತಿಯನ್ನು ನಡೆಸಿದ ನಾದರು ಇವನಿಗೆ ಆ ವೃತ್ತಿ ಹಿಡಿಸಲಿಲ್ಲ.ಹಾಗಾಗಿ ರಾಜಕೀಯದ ಕಡೆ ಗಮನ ಹರಿಸತೊಡಗಿದ.

ಕ್ರಾಂತಿಕಾರಿಯಾಗಿ ಡಾ.ಸನ್ ಯಾತ್ ಸೆನ್[ಬದಲಾಯಿಸಿ]

ಪಾಶ್ಚಾತ್ಯ ದೇಶಗಳ ಪ್ರಗತಿ ಹಾಗೂ ಅವರ ಸಂಸ್ಕ್ರತಿ ಡಾ.ಸೆನ್ ನ ಮೇಲೆ ಅಪಾರ ಪ್ರಭಾವ ಬೀರಿದವು.ಅವುಗಳ ಮುಂದೆ ಕಂದಾಚಾರದ ನರಸತ್ತ ಚೀನಾ ಬಹು ನಿಕೃಷ್ಟವಾಗಿ ಕಂಡಿತು.ತದನಂತರ ಚೀನಾದಲ್ಲಿ ಸುಧಾರಣೆಯಾಗಬೇಕೆಂಬ ಅದರ ಸಾಧನೆಗೆ ಕ್ರಾಂತಿಕಾರಿ ಭಾವನೆಗಳನ್ನು ತಳೆಯತೊಡಗಿದರು.ಅಂದು ಅಧಿಕಾರದಲ್ಲಿದ್ದ ಮಂಚು ಅರಸರು ಅಸಮಥ೯ನಾಗಿದ್ದು ಚೀನವನ್ನು ಆಧುನಿತೆಯತ್ತ ಕೊಂಡೊಯ್ಯುವವನಾಗಿರಲಿಲ್ಲ.ಸಮಾಜ ಕನ್ ಫ್ಯೂಷಿಯಸ್ ತತ್ವದ ಗುಂಗಿನಲ್ಲೆ ಇದ್ದಿತು.ಮತ್ತು ಅದೇ ಅಲ್ಲದೆ ಆ ಒಂದು ವೇಳೆಗೆ ಎಲ್ಲಾ ವಲಯಗಳಲ್ಲಿ ಸಮಗ್ರ ಬದಲಾವಣೆ ಆಗಬೇಕಿದ್ದಿತು.ಅದು ಕ್ರಾಂತಿಯಿಂದ ಮಾತ್ರ ಎಂಬುದನ್ನು ತಿಳಿದ ಸೆನ್ ಆ ನಿಟ್ಟಿ ನಲ್ಲಿ ಕಾಯ೯ಕ್ರಮಗಳನ್ನು ರೂಪಿಸಿಕ್ಕೊಳಲು ಆರಂಭಿಸಿದ.ಸಮಾಜ ಸುಧಾರಣ ಕಾಯ೯ಕ್ರಮಗಳಲ್ಲಿ ತೊಡಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದನು.ಅದರಲ್ಲಿ ಏಕಮನೋಭಾವ ಇರುವವರನ್ನು ಸೇರಿಸಿ ಶಿಕ್ಷಣದಲ್ಲಿ ಮಾಪಾ೯ಡು ತರುವ ಪ್ರಯತ್ನ ಮಾಡಿದ. ಹವಾಯ್ ನಲ್ಲಿ ಚೀನಾದ ಕ್ರಾಂತಿಗಾಗಿ ಸ್ಥಾಪಿಸಿದ ರಿವೈಟ್ ಚೀನಾ ಸೊಸೈಟಿ ಯ ವತಿಯಿಂದ ಹಣ ಸಂಗ್ರಹಿಸಿದನು.ಹಾಂಕಾಂಗ್ ನಲ್ಲಿ ಪ್ರಧಾನ ಕಛೇರಿಯನ್ನು ೧೮೯೪ ರಲ್ಲಿ ಸ್ಥಾಪಿಸಿದನು.ಸುಧಾರಣೆ ತರುವಂತೆ ಗವನ೯ರ್ ಜನರಲ್ ಲಿಹಾಂಗ್-ಚಾಂಗ್ ನಿಗೆ ಮನವಿಯನ್ನು ಅಪಿ೯ಸಲಾಗಿ ಅದು ತಿರಸ್ಕ್ರತವಾಯಿತು. ಅದೇ ಕಾಲದಲ್ಲಿ ಸಂಭವಿಸಿದ ಚೀನೀ-ಜಪಾನ್ ಕದನದಲ್ಲಿ ಬೃಹತ್ ರಾಷ್ಟ್ರವಾದ ಚೀನಾ ಸಣ್ಣ ರಾಷ್ಟ್ರವಾದ ಜಪಾನಿನಿಂದ ಅನುಭವಿಸಿದ ಸೋಲು ಅದರ ಘನತೆಗೆ ಭಂಗವುಂಟು ಮಾಡಿತ್ತು. ಕೊನೆಗೆ ಕ್ರಾಂತಿಯೊಂದರಿಂದ ಮಾತ್ರ ಚೀನಾದ ಬದಲಾವಣೆ ಸಾದ್ಯ ಎಂದು ತಿಮಾ೯ನಿಸಿದ ಸೆನ್ ರಹಸ್ಯವಾಗಿ ಶಸ್ತ್ರಗಳ ಸಂಗ್ರಹಣೆಯಲ್ಲಿ ತೊಡಗಿದ.ಅದರ ಸಲುವಾಗಿ ಲುಕ್ ಹೊತುಂಗ್ ಎಂಬುವನು ತನ್ನೆಲ್ಲ ಸಂಪತ್ತನ್ನು ನೀಡಿದನು.ನಂತರ ಮಂಚುಗಳ ವಿರುದ್ದ ೧೮೯೫ ರಲ್ಲಿ ದಂಗೆಯನ್ನೇ ವ್ಯವಸ್ಥೆ ಮಾಡಲಾಯಿತು.ಆದರೆ ದಂಗೆ ಯಶಸ್ವಿಯಾಗದೆ ಹೋಯಿತು. ಹಲವು ದಂಗೆ ಕೋರರನ್ನು ಅದರಲ್ಲಿ ಲುಕ್ ಹೊತುಂಗ್ ಸೇರಿದಂತೆ ಹಲವರನ್ನು ಬಂಧಿಸಿ ಮರಣ ದಂಡನೆಗೆ ಈಡು ಮಾಡಲಾಯಿತು.ಹೇಗೋ ಇದರಿಂದ ಪಾರಾದ ಸೆನ್ ದೇಶ ಬಿಟ್ಟು ಓಡಿಹೋಗಬೇಕಾಯಿತು. ಅನಂತರ ಸುಮಾರು ೧೬ ವಷ೯ಗಳ ಕಾಲ ವಿದೇಶಗಳಲ್ಲಿ ಇದ್ದುಕ್ಕೊಂಡು ಕ್ರಾಂತಿಗಾಗಿ ಅವಿರತ ಶ್ರಮಿಸಿದನು.

ಗಡೀಪಾರಾದ ಡಾ.ಸನ್ ಯಾತ್ ಸೆನ್[ಬದಲಾಯಿಸಿ]

ಚೀನಾದಿಂದ ಹೊರಬಿದ್ದ ಸೆನ್ ಜಪಾನ್ ತಲುಪಿದ. ಚೀನಾದ ಕ್ರಾಂತಿಗಾಗಿ ಆ ವೇಳೆಯಲ್ಲಿ ನಿಧಿಯನ್ನು ಸಂಗ್ರಹಿಸಿದ.ಆನಂತರ ಸಾನ್ ಫ್ರಾನ್ಸಿಸ್ಕೊ, ಲಂಡನ್,ಮೊದಲಾದ ಕಡೆಗಳಲ್ಲಿ ವ್ಯಾಪಕವಾಗಿ ಸಂಚರಿಸಿದ.ವಿದೇಶಗಳಲ್ಲಿದ್ದ ಚೀನೀಯರಲ್ಲಿ ಮಂಚು ಅಸಮಥ೯ತೆಯನ್ನು ಬಣ್ಣಿಸಿ ಕ್ರಾಂತಿಗಾಗಿ ಅವರ ಸಹಾನುಭೂತಿ ಮತ್ತು ಬೆಂಬಲ ಪಡೆದ. ಡಾ.ಸನ್ ಯಾತ್ ಸೆನ್ ಚೀನಾಕ್ಕೆ ಹಿಂತಿರುಗಬೇಕಾದರೆ ದಸ್ತಗಿರಿಯು ಕೂಡ ಮಾಡಲಾಯಿತು ಅದು ಸೆನ್ ಲಂಡನ್ ನಲ್ಲಿದ್ದಾಗ. ಆಗ ಸ್ವದೇಶಕ್ಕೆ ಮರಳಿದರೆ ಸಾವು ಕಖಿತ ಎಂದು ನಿಧ೯ರಿಸಿದನು. ಕೊನೆಗೆ ತನ್ನ ಗುರುಗಳೊಬ್ಬರ ಮೂಲಕ ಬ್ರಿಟಿಷ್ ಪ್ರಧಾನಿ ಲಾಡ೯ ಸಾಲಿಬ್ ಬರಿ ಸಂಪಕ೯ ಪಡೆದು ಬಹು ಪ್ರಯಾಸದಿಂದ ಬಿಡುಗಡೆ ಹೊಂದಬೇಕಾಯಿತು. ಮತ್ತು ಸೆನ್ ಹೆಸರನ್ನು ಪ್ರಪಂಚದಾದ್ಯಂತ ಪ್ರಚಾರಪಡಿಸಿದರು ಏಕೆಂದರೆ ಲಂಡನ್ನಿನಲ್ಲದ ಈ ದಸ್ತಗಿರಿಯಿಂದಾಗಿ, ಈ ಮೂಲಕ ಅವನ ಜನಪ್ರಿಯತೆ ಹೆಚ್ಚಿತು.ಯುರೋಪಿನಾದ್ಯಂತ ತನ್ನ ಕಾಯ೯ ಸಾಧನೆಯಲ್ಲಿ ಅಲೆದಾಡಿದ ಸೆನ್ ಕೊನೆಗೆ ಸಿಂಗಪುರ ತಲುಪಿದನು.ಇಲ್ಲಿಂದ ಕ್ರಾಂತಿಗಾಗಿ ಸೆನ್ ಕ್ರಾಂತಿಗಾಗಿ ತೀವ್ರ ಕಾಯ೯ಕ್ರಮ ಹಾಕಿಕೊಂದು ಮಾರುವೇಷದಲ್ಲಿ ಚೀನಾ ಪ್ರವೇಶ ಮಾಡಿದ.ಮಾರುವೇಶದಲ್ಲಿ ಇದ್ದುಕೊಂಡು ಕ್ರಾಂತಿಕಾರಿ ಚಟುವಟಿಕೆ ನಡೆಸುವುದು ತುಂಬ ತ್ರಾಸದಾಯಕವೆಂಬುದನ್ನು ಮನಗಂಡು ಮತ್ತೆ ಅಮೇರಿಕಾಕ್ಕೆ ಮರಳಿದ.ಇಲ್ಲಿ ಡಾ.ಸನ್ ಯಾತ್ ಸೆನ್ ಗೆ ಹೊಮ್ ಲಿಯ ಎಂಬುವನು ಮಿಲಿಟರಿ ಸಲಹೆಗಾರನಾಗಿ ಒದಗಿದನು.

"ತುಂಗ್ ಮಿಂಗ್ ಹುಯಿ" [ಏಕತಾ] ಪಕ್ಷ ಸ್ಥಾಪನೆ[ಬದಲಾಯಿಸಿ]

ಡಾ.ಸನ್ ಯಾತ್ ಸೆನ್ ೧೮೯೯ ರಲ್ಲಿ ಹಾಂಕಾಂಗಿಗೆ ಬಂದ ಮುಂದಿನ ವಷ೯ದಲ್ಲೇ ಕ್ಯಾಂಟನ್ ನಲ್ಲಿ ದಂಗೆ ನಡೆಯಿತು.ಅದು ಮಂಚುಗಳಿಂದ ಹತ್ತಿಕ್ಕಲಾಯಿತು.ಸೆನ್ ಹೋದಡೆಯಲ್ಲೆಲ್ಲ ದಂಗೆ ಮತ್ತು ಚಳುವಳಿಗೆ ಕರೆ ಕೊಡುತ್ತಿದ್ದ. ಇದರ ಒಂದು ಪರಿಣಾಮವಾಗಿ ಸೆನ್ ನನ್ನು ದಸ್ತಗಿರಿ ಮಾಡುವ ಯತ್ನವು ನಡೆಯಿತು. ಇವನ ರುಂಡ ತೆಗೆದುಕ್ಕೊಟ್ಟವರಿಗೆ ೭೫೦೦ ಪೌಂಡುಗಳ ಬಹುಮಾನ ಪ್ರಕಟಿಸಲಾಗಿತ್ತು. ಸೆನ್ ಈ ಸುದ್ಧಿ ತಿಳಿದ ನಂತರವೆ ಸಿಂಗಪುರಕ್ಕೆ ಮರಳಿದನು. ಇಲ್ಲಿ ವಿದ್ಯಾಥಿ೯ ಸಮೂಹದ ಬಿಂಬಲ ಪಡೆದು ಕ್ರಾಂತಿಕಾರಿ ಪಕ್ಷ ತುಂಗ್ ಮಿಂಗ್ ಹುಯಿ [ಏಕತಾ ಸಂಸ್ಥೆ] ಸ್ಥಾಪಸಿದನು. ಶ್ರೀ ಸಾಮಾನ್ಯರು, ಕೂಲಿಕಾರರು, ಶೋಷಿತರು ಮೊದಲಾದ ಕೆಳವಗ೯ದವರೊಡನೆ ಮಿಳಿತಗೊಳ್ಳುವುದರ ಮೂಲಕ ಬಹು ಜನಪ್ರಿಯತೆಯನ್ನು ಗಳಿಸಿದ.ಅಲ್ಪ ಕಾಲದಲ್ಲೇ ಇದರ ಸಂಖ್ಯೆ ೧೦,೦೦೦ ಮುಟ್ಟಿತು. "ಪೀಪಲ್ಸ್ ಪೇಪರ್" ಎಂಬ ಟೋಕಿಯೋದ ಪತ್ರಿಕೆ ಈತನ ಪಕ್ಷ ಹಾಗೂ ತತ್ವಗಳನ್ನು ಜನಪ್ರಿಯಗೊಳಿಸುವಲ್ಲಿ ನೆರವಾಯಿತು.

ಇವನ ಪಕ್ಷದ ಪ್ರಮುಖ ಧ್ಯೇಯಗಳು[ಬದಲಾಯಿಸಿ]

೧. ವಿಶ್ವಶಾಂತಿಗಾಗಿ ದುಡಿಯಬೇಕು ೨. ನೆರೆರಾಷ್ಟಗಳೊಡನೆ [ಜಪಾನ್] ಮೈತ್ರಿ ಸಂಬಂಧ ಬೆಳೆಸಿಕೊಳ್ಳುವುದು ೩.ದೇಶದಲ್ಲಿ ಒಂದು ರಾಷ್ತ್ರೀಯ ಸಕಾ೯ರ ಇರತಕ್ಕದ್ದು. ೪. ಪ್ರಜೆಗಳಿಂದ ಚುನಾಯಿತನಾದ ಅಧ್ಯಕ್ಷನನ್ನೊಳಗೊಂಡ ಗಣರಾಜ್ಯ ಸ್ಥಾಪನೆಯಾಗಬೇಕು. ೫.ಎಷ್ಟು ಬೇಗ ಸಾಧ್ಯವೋ ಎಷ್ಟು ಜಾಗ್ರತೆ ಮಂಚು ಸಂತತಿ ಅಧಿಕಾರದಿಂದ ಇಳಿಯಬೇಕು. ೬.ಭೂಮಿ ಎಲ್ಲ ಜನರಲ್ಲೂ ಸಮಾನವಾಗಿ ಹಂಚಿಕೆಯಾಗಬೇಕು. ಈ ಕಾರ್ಯಕ್ರಮಗಳು ಅವನ ಪಕ್ಷದ ಧ್ಯೇಯವಾಗಿದ್ದವು. ಪಕ್ಷದ ಸದಸ್ಯನಾಗಬಯಸುವವನು ಈ ಧ್ಯೇಯಗಳಿಗೆ ಬದ್ಧನಾಗಿರುವುದಾಗಿ ಒಮ್ಮೆ ಪ್ರಮಾಣ ಸ್ವೀಕರಿಸಿದನೆಂದರೆ ಅವನು ಮಂಚು ವಿರೋಧಿಯಾಗಿ ಮಾಪ೯ಡುತ್ತಿದ್ದನು.


Reference: ಏಷ್ಯಾ ಇತಿಹಾಸ ಪರಿಚಯ

 -ಪ್ರೊ.ಆರ್. ಎಂ. ಶೇಖರಯ್ಯ