ಸದಸ್ಯ:Premachandresh270/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ರಾಮನಾಥನ್ ಕೃಷ್ಣನ್ರರ ಜನನ ೧೧ ಏಪ್ರಿಲ್ ೧೯೩೭, ಭಾರತಮದ್ರಾಸ್ ನಲ್ಲಿ. ಭಾಕೃಷ್ಣನ್ ತಮ್ಮ ತಂದೆ, T.K. ರಾಮನಾಥನ್ ರ ಮಾರ್ಗದರ್ಶನದಲ್ಲಿ ತಮ್ಮ ಕೌಶಲಗಳ ಒರೆ ಹಚ್ಚಿದರು. ನಂತರ ಶೀಘ್ರದಲ್ಲಿ ಎಲ್ಲ ಜೂನಿಯರ್ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ರಾಷ್ಟ್ರೀಯ ಸುತ್ತಿನಲ್ಲಿ ಗಮನ ಸೆಳೆದರು. ಇವರು ೧೯೫೦ ಹಾಗು ೧೯೬೦ರ ದಶಕದ ನಡುವೆ ವಿಶ್ವದ ಮುಂಚೂಣಿ ಟೆನ್ನಿಸ್ ಆಟಗಾರರಲ್ಲಿ ಒಬ್ಬರೆನಿಸಿದ್ದರು.೧೯೫೪ರಲ್ಲಿ, ಫೈನಲ್ ಪಂದ್ಯದಲ್ಲಿ ಆಶ್ಲೆ ಕೂಪರ್ ರನ್ನು ಪರಾಭವಗೊಳಿಸುವ ಮೂಲಕ ವಿಂಬಲ್ಡನ್ ನಲ್ಲಿ ಬಾಲಕರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗಳಿಸಿದ ಮೊದಲ ಏಷಿಯಾದ ಆಟಗಾರನೆನಿಸಿದರು.

ಕ್ರಿಡಾ ವರದಿ[ಬದಲಾಯಿಸಿ]

೧೯೫೯ರಲ್ಲಿ, ಕೃಷ್ಣನ್ ವಿಂಬಲ್ಡನ್ ನಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಆಡುವುದರ ಜೊತೆಗೆ ಮೂರನೇ ಸುತ್ತಿನಲ್ಲಿ ಅಲೆಕ್ಸ್ ಒಲ್ಮೆಡೊಗೆ ಶರಣಾದರು. ನಂತರದಲ್ಲಿ ಅದೇ ವರ್ಷ, ಭಾರತದ ಪರ ಡೇವಿಸ್ ಕಪ್ ನಲ್ಲಿ, ಕೃಷ್ಣನ್ ಆಸ್ಟ್ರೇಲಿಯಾದ ರೊಡ್ ಲವೆರ್ ರನ್ನು ನಾಲ್ಕು ಸೆಟ್ ಗಳಲ್ಲಿ ಪರಾಭವಗೊಳಿಸಿದರು.(ವಿಂಬಲ್ಡನ್ ನ ಉಪಾಂತ ವಿಜಯಿ) ಈ ಪ್ರದರ್ಶನಗಳು ವಿಂಬಲ್ಡನ್ ನಲ್ಲಿ ಕೃಷ್ಣನ್ ರಿಗೆ ೧೯೬೦ರಲ್ಲಿ ಕ್ರಮಾಂಕದ ಪಟ್ಟಿಯಲ್ಲಿ ಏಳನೇ ಸ್ಥಾನ ಗಳಿಸಿಕೊಟ್ಟವು. ಇವರು ಸೆಮಿ-ಫೈನಲ್ಸ್ ಹಂತ ತಲುಪುವುದರ ಜೊತೆಗೆ ಅಂತಿಮವಾಗಿ ಚ್ಯಾಂಪಿಯನ್ ನೆಯಲೆ ಫ್ರೇಸರ್ ಎದುರು ಪರಾಭವಗೊಂಡರು.
Real-tennis-rackets-balls.jpg

ಮರಣ[ಬದಲಾಯಿಸಿ]

೧೯೬೧ರಲ್ಲಿ, ಕೃಷ್ಣನ್, ನೇರ ಸೆಟ್ಟುಗಳಲ್ಲಿ ರಾಯ್ ಎಮರ್ಸನ್ ರನ್ನು ಪರಾಭವಗೊಳಿಸುವ ಮೂಲಕ ವಿಂಬಲ್ಡನ್ ಸೆಮಿ-ಫೈನಲ್ಸ್ ಹಂತ ತಲುಪಿದರು; ಆದರೆ ಸೆಮಿಸ್ ನಲ್ಲಿ ಅಂತಿಮವಾಗಿ ಚ್ಯಾಂಪಿಯನ್ ರೊಡ್ ಲವೆರ್ ಗೆ ಶರಣಾದರು.

ಸಾಧನೆ[ಬದಲಾಯಿಸಿ]

ಕೃಷ್ಣನ್ ವಿಂಬಲ್ಡನ್ ನಲ್ಲಿ ಉನ್ನತ ಕ್ರಮಾಂಕದ ಸ್ಥಾನವನ್ನು ೧೯೬೨ರಲ್ಲಿ ಗಳಿಸಿದರು. ಆದರೆ ಅವರ ಕಣಕಾಲಿಗುಂಟಾದ ಪೆಟ್ಟಿನಿಂದಾಗಿ ಪಂದ್ಯಾವಳಿಯನ್ನು ಮಧ್ಯದಲ್ಲೇ ಕೈಬಿಡಬೇಕಾಯಿತು.ಕೃಷ್ಣನ್ ರ ಆಟದ ಶೈಲಿಯು 'ಟಚ್ ಟೆನ್ನಿಸ್' ಎಂದು ಪರಿಚಿತವಾಗಿದೆ. ವಿಮರ್ಶಕರು ಕೃಷ್ಣನ್ ರನ್ನು ಅದ್ಭುತವೆಂದು ಸಂಬೋಧಿಸುತ್ತಾರೆ, ದಿ ಡೈಲಿ ಟೆಲಿಗ್ರ್ಯಾಫ್ ನ ಲಂಸೆ ಟಿನ್ಗೆಯ್, ಇವರ ಟೆನ್ನಿಸ್ ಶೈಲಿಯನ್ನು 'ಶುದ್ಧವಾದ ಪೌರಸ್ತ್ಯ ಮಾಂತ್ರಿಕತೆ' ಎಂದು ವಿವರಿಸಿದರೆ, ಮತ್ತೊಬ್ಬ ವಿಮರ್ಶಕರು ಇವರ ಶೈಲಿಯನ್ನು 'ಪೌರಸ್ತ್ಯ ಮಾಂತ್ರಿಕತೆ' ಎಂದು ವಿವರಿಸಿದ್ದಾರೆ. ತೀರ ಇತ್ತೀಚಿಗೆ, ರಾಬರ್ಟ್ ಫಿಲಿಪ್ 'ಕೃಷ್ಣನ್ ರ ಪ್ರತಿಯೊಂದು ಹಾಗು ಎಲ್ಲ ರಾಲಿಯು(ಒಂದರ ಮೇಲೊಂದಾಗಿ ಹಿಂದಿರುಗಿಸಿದ ಚೆಂಡಿನ ಹೊಡೆತಗಳ ಆರಂಭಿಕ ಶ್ರೇಣಿ) ಎಂದು ಬರೆಯುತ್ತಾರೆ. ಅನುಭವಿ ಕ್ರೀಡಾ ಪತ್ರಕರ್ತ C.V. ನರಸಿಂಹನ್ ರ ಪ್ರಕಾರ, 'ಅವರ ಸರ್ವೀಸ್(ಚೆಂಡನ್ನು ಬೀಸು ಹೊಡೆತದಿಂದ ಎದುರು ಕೋರ್ಟಿಗೆ ಹೊಡೆಯುವುದು) ಬಲಯುತವಾದ ಅಸ್ತ್ರವಾಗಿರಲಿಲ್ಲ, ಜೊತೆಗೆ ಅವರು ಯಾವುದೇ ಬಲಯುತ ನೆಲದ ಹೊಡೆತಗಳನ್ನಾಗಲಿ ಮಾಡಿರಲಿಲ್ಲ. ಅವರು ಸ್ಥಿರತೆಯೊಂದಿಗೆ, ಓರೆಯಾದ ವಾಲಿಗಳು(ಚೆಂಡು ನೆಲವನ್ನು ಮುಟ್ಟುವ ಮುನ್ನವೇ ಅದನ್ನು ಹಿಂದಿರುಗಿಸುವುದು) ಹಾಗು ಆಗೊಮ್ಮೆ ಈಗೊಮ್ಮೆ ಬೀಸುತ್ತಿದ್ದ ಆಕರ್ಷಕ ಅರ್ಧ ವಾಲಿಯ ಬೀಳು ಹೊಡೆತದಿಂದ ಗೆಲುವನ್ನು ಸಾಧಿಸುತ್ತಿದ್ದರು'. ಅವರ ಶೈಲಿಗೆ ಪ್ರಾಧಾನ್ಯತೆ ನೀಡಿ ಕೌಶಲವನ್ನು ಸಾಧಿಸಿದ ಇತರ ಗಮನಾರ್ಹ ಆಟಗಾರರಲ್ಲಿ ರಾಫೆಲ್ ಒಸುನ, ನಿಕೋಲ ಪಿಯೆಟ್ರಂಗೆಲಿ ಹಾಗು ಕೃಷ್ಣನ್ ರ ಪುತ್ರ ರಮೇಶ್ ಸೇರಿದ್ದಾರೆ. ಕೃಷ್ಣನ್ ಗೆ ೧೯೬೧ರಲ್ಲಿ ಅರ್ಜುನ ಪ್ರಶಸ್ತಿ, ೧೯೬೨ರಲ್ಲಿ ಪದ್ಮಶ್ರೀ ಹಾಗು ೧೯೬೭ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕೃಷ್ಣನ್ ಇದೀಗ ಚೆನ್ನೈನಲ್ಲಿ ವಾಸಿಸುತ್ತಾರೆ, ಅಲ್ಲಿ ಅವರು ಅನಿಲ ವಿತರಣಾ ಏಜೆನ್ಸಿಯ ನಿರ್ವಹಣೆ ಮಾಡುತ್ತಾರೆ. ರಮೇಶ್ ಕೃಷ್ಣನ್, ವಿಂಬಲ್ಡನ್ ಜೂನಿಯರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ ತಂದೆಯ ಸಾಧನೆಗೆ ಸರಿಸಮನಾದ ಸಾಧನೆಯನ್ನು ಮಾಡುವುದರ ಜೊತೆಗೆ, ೧೯೮೦ರ ದಶಕದಲ್ಲಿ ಭಾರತದ ಮುಂಚೂಣಿ ಟೆನ್ನಿಸ್ ಆಟಗಾರನಾದರು.೧೯೬೬ರಲ್ಲಿ ಡೇವಿಸ್ ಕಪ್ ನ ಅಂತಿಮ ಹಂತ ತಲುಪಿದ ಭಾರತೀಯ ತಂಡದಲ್ಲಿ ಕೃಷ್ಣನ್ ಒಬ್ಬ ಪ್ರಮುಖ ಸದಸ್ಯರಾಗಿದ್ದರು. ಕೃಷ್ಣನ್ ವಿಲ್ಹೆಲ್ಮ್ ಬಂಗರ್ಟ್ ರನ್ನು(ಆ ವರ್ಷದ ವಿಂಬಲ್ಡನ್ ನಲ್ಲಿ ಫೈನಲ್ ಹಂತ ತಲುಪಿದ ಆಟಗಾರ) ಪರಾಭವಗೊಳಿಸುವ ಮೂಲಕ ಭಾರತವು ಅಂತರ-ವಲಯ ಸೆಮಿ-ಫೈನಲ್ಸ್ ನಲ್ಲಿ ಪಶ್ಚಿಮ ಜರ್ಮನಿಯನ್ನು ಅಚ್ಚರಿಗೊಳಿಸಿತು. ಕೋಲ್ಕತ್ತಾದಲ್ಲಿ(ಅಂದಿಗೆ ಕಲ್ಕತ್ತಾ ಎಂದು ಪರಿಚಿತ), ಬ್ರೆಜಿಲ್ ನ ವಿರುದ್ಧದ ಸೆಮಿ-ಫೈನಲ್ಸ್ ನಲ್ಲಿ ಎರಡೂ ಕಡೆಯವರು ಒಂದೊಂದು ಪಂದ್ಯವನ್ನು ಗೆದ್ದರು ಹಾಗು ಬ್ರೆಜಿಲಿಯನ್ ಚ್ಯಾಂಪಿಯನ್ ತೋಮಸ್ ಕೋಚ್ ವಿರುದ್ಧ ಕೃಷ್ಣನ್ ಆಡಿದ ಪಂದ್ಯವು ನಿರ್ಣಾಯಕವೆನಿಸಿತು. ಕೋಚ್ ಎರಡು ಸೆಟ್ಟುಗಳಲ್ಲಿ ಒಂದು ಅಂಕದಿಂದ ಮುಂದಿದ್ದು, ನಾಲ್ಕನೇ ಸೆಟ್ಟಿನಲ್ಲಿ ೫-೨ ಅಂಕಗಳಿಂದ ಮುಂಚೂಣಿಯಲ್ಲಿದ್ದರು. ಆಗ ಕೃಷ್ಣನ್ ೭-೫ ಅಂಕಗಳನ್ನು ಪಡೆದು ಸೆಟ್ಟನ್ನು ಗೆಲ್ಲುವುದರ ಜೊತೆಗೆ ಪಂದ್ಯವನ್ನು ಗೆದ್ದು ಅತ್ಯಂತ ಸ್ಮರಣೀಯವಾಗಿಸಿ ತಮ್ಮ ಸ್ಥಾನವನ್ನು ಮತ್ತೆ ಕಾಯ್ದುಕೊಂಡರು. ಆಸ್ಟ್ರೇಲಿಯ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೃಷ್ಣನ್ ಹಾಗು ಜೈದೀಪ್ ಮುಖರ್ಜಿ ಡಬಲ್ಸ್ ರಬ್ಬರ್(ಮೂರಾಟದಲ್ಲಿ ಎರಡಾಟ ಗೆಲ್ಲುವುದು) ಗೆದ್ದರು.(ಜಾನ್ ನ್ಯೂಕೊಂಬೆ ಹಾಗು ಟೋನಿ ರೋಚೆ ವಿರುದ್ಧ), ಆದರೆ ಕೃಷ್ಣನ್ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ (ಫ್ರೆಡ್ ಸ್ಟೋಲ್ಲೇ ಹಾಗು ರಾಯ್ ಎಮರ್ಸನ್ ವಿರುದ್ಧ) ಪರಾಭವಗೊಳ್ಳುವುದರ ಜೊತೆಗೆ ಭಾರತವು ೪-೧ ಅಂಕಗಳಿಂದ ಸೋಲನ್ನು ಅನುಭವಿಸಬೇಕಾಯಿತು.

ಉಲ್ಲೆಖಗಳು[ಬದಲಾಯಿಸಿ]

[೧] [೨] www.krishnantennis.com/krishnan-tennis-centre-chennai/

  1. https://en.wikipedia.org/wiki/Ramanathan_Krishnan
  2. https://www.mapsofindia.com/who-is-who/sports/ramanathan-krishnan.html