ಸದಸ್ಯ:Pavana1940557
ನನ್ನ ಹೆಸರು ಪಾವನ .ಎಸ್. ನಾನು ಹನ್ನೆರಡು ನವೆಂಬರ್ ಎರಡು ಸಾವಿರದ ಒಂದರಲ್ಲಿ ಜನಿಸಿದ್ದೇನೆ . ನನ್ನ ಜನ್ಮಸ್ಥಳ ಮುತ್ತಾನಲ್ಲೂರು ಆನೇಕಲ್ ತಾಲ್ಲೂಕು ಬೆಂಗಳೂರು ಜಿಲ್ಲೆ . ನನ್ನ ತಾಯಿಯ ಹೆಸರು ಸುಮಿತ್ರಾ. ನನ್ನ ತಂದೆಯ ಹೆಸರು ಶಂಕರ್ ರೆಡ್ಡಿ . ನನ್ನ ಬಾಲ್ಯ ಶಿಕ್ಷಣವನ್ನು ಮುತ್ತಾನಲ್ಲೂರಿನಲ್ಲಿ ಮುಗಿಸಿದ್ದೇನೆ . ನನ್ನ ಪ್ರಾಥಮಿಕ ಶಿಕ್ಷಣ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಮುತ್ತಾನಲ್ಲೂರಿನ ಮಹಾತ್ಮ ವಿದ್ಯಾಲಯ ಎಂಬ ಶಾಲೆಯಲ್ಲಿ ಮಾಡಿದೆ . ನಾನು ನನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಂಬತ್ತ ಎರಡು ಪರ್ಸೆಂಟ್ ಶೇಕಡ ದೊಂದಿಗೆ ಉತ್ತೀರ್ಣನಳಗಿದ್ದೇನೆ ಹಾಗೂ ನನ್ನ ಮುಂದಿನ ಶಿಕ್ಷಣಕ್ಕಾಗಿಜ್ಯೋತಿ ನಿವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಸೇರಿದೆ . ನನ್ನ ದ್ವಿತೀಯ ಪದವಿ ಪೂರ್ವ ಪರೀಕ್ಷೆಯನ್ನು ಎಪ್ಪತ್ತು ಒಂಬತ್ತು ಪರ್ಸೆಂಟ್ ಶೇಕಡ ದೊಂದಿಗೆ ಉತ್ತೀರ್ಣಳಾಗಿದ್ದು ಹಾಗೂ ಈಗಿನ ಬಿಎಸ್ಸಿ ಪದವಿಯನ್ನು ಕ್ರೈಸ್ಟ್ ಡೀಮ್ ಟು ಬಿ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ .
ನನ್ನ ಬಾಲ್ಯದಿಂದಲೂ ನಾನು ಅನನ್ಯ ಳಾಗಲು ಬಯಸುತ್ತೇನೆ ನಾನು ಸೃಜನಾತ್ಮಕವಾಗಿ ಏನನ್ನಾದರೂ ಮಾಡಲು ಬಯಸುತ್ತೇನೆ . ನನಗೆ ಸಂಶೋಧನಾ ವಿಜ್ಞಾನಿ ಆಗಬೇಕೆಂಬ ಮಹತ್ವಾಕಾಂಕ್ಷೆ ಇದೆ , ಈ ವಿಷಯದಲ್ಲಿ ನನ್ನ ಪೋಷಕರು ತುಂಬಾ ಬೆಂಬಲ ನೀಡುತ್ತಾ . ನಾನು ಯಶಸ್ವಿ ಆಗಬೇಕೆಂದು ಅವರು ಬಯಸುತ್ತಾರೆ.
ನನಗೆ ಪ್ರಯಾಣದ ಬಗ್ಗೆ ಒಲವು ಇದೆ ಹೊಸ ವಿಷಯಗಳನ್ನು ಅನ್ವೇಷಿಸುವುದು ನನಗೆ ಯಾವಾಗಲೂ ತುಂಬಾ ಇಷ್ಟ ,ನಾನು ಪ್ರಕೃತಿಯನ್ನು ನೋಡಲು ಇಷ್ಟಪಡುತ್ತೇನೆ .ಪ್ರತಿ ವರ್ಷ ನನ್ನ ಬೇಸಿಗೆ ರಜೆಯ ಸಮಯದಲ್ಲಿ ನನ್ನ ಪೋಷಕರು ಮತ್ತು ನಾನು ನಮ್ಮ ರಜಾ ದಿನಗಳನ್ನು ಕೆಲವು ಪ್ರವಾಸಿ ತಾಣಗಳಲ್ಲಿಆನಂದಿಸುತೆವೆ,ಅಲ್ಲದೆ ಹೊಸ ವರ್ಷದ ರಜಾ ದಿನಗಳಲ್ಲಿ ಚಳಿಗಾಲದ ಹಿಮಪಾತ ಮತ್ತು ಸೌಂದರ್ಯವನ್ನು ನೋಡಲು ನಾನು ಪ್ರಯಾಣಿಸುತ್ತೇನೆ. ನನ್ನ ಜೀವನವೂ ನನ್ನ ಹೆತ್ತವರು ಮತ್ತು ನನ್ನ ದೇಶದ ಸುತ್ತಲೂ ಇದೆ ನಾನು ಎರಡು ವಿಷಯಗಳನ್ನು ಪ್ರೀತಿಸುತ್ತೇನೆನನ್ನ ಪೋಷಕರು ಯಾವಾಗಲೂ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರಲು ನನಗೆ ಸಲಹೆ ನೀಡುತ್ತಾರೆ. ಬಹುಶಃ ಈ ಕಾರಣದಿಂದಾಗಿ ನಾನು ಅಚ್ಚುಕಟ್ಟಾಗಿರಲಿ ಇಷ್ಟಪಡುತ್ತೇನೆ ಹೊಸ ವಿಷಯಗಳನ್ನು ಅನ್ವೇಷಿಸಲು ಮತ್ತು ಸಾಹಸಗಳನ್ನು ಮಾಡಲು ನನಗೆ ತುಂಬಾ ಇಷ್ಟ. ನಾನು ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳಬೇಕು ಎಂದು ನನ್ನ ಪೋಷಕರು ನನಗೆ ಸಲಹೆ ನೀಡಿದರು ಹಾಗೆ ಮಾಡಲು ನಾನು ನನ್ನ ಅತ್ಯುತ್ತಮ ಪ್ರಯತ್ನಮಾಡುತ್ತೇನೆ.
ನನ್ನ ಜೀವನದಲ್ಲಿ ನನಗೆ ಕನ್ನಡದ ಮೇಲೆ ಅಭಿಮಾನ ಬೆಳೆಯಲು ನನ್ನ ಶಿಕ್ಷಕರೇ ಕಾರಣ .ನಾನು ನನ್ನ ಜೀವನದಲ್ಲಿ ಒಂದು ಮಾದರಿಯ ವ್ಯಕ್ತಿಯಾಗಿ ಇರಬೇಕೆಂದು ಇಷ್ಟಪಡುತ್ತೇನೆ .ಕನ್ನಡದ ಅರ್ಥವನ್ನು ತಿಳಿಸಿಕೊಟ್ಟಿದ್ದು ನನ್ನ ಜ್ಯೋತಿ ನಿವಾಸಿನ ಶಿಕ್ಷಕರು ಮಂಜುನಾಥ್ ಸರ್.ಅವರಿಗೆ ನಾನು ಧನ್ಯವಾದವನ್ನು ಹೇಳುತ್ತೇನೆ . ನನ್ನ ಜೀವನದ ಹಾಗೂ ನನ್ನ ಮುಂದಿನ ಗುರಿ ಏನೆಂದರೆ ನಾನು ಒಳ್ಳೆಯ ನಾಗರಿಕರಾಗಿ ಬದುಕಬೇಕು ಎಂದು .ನನ್ನ ಕೆಲವು ಹವ್ಯಾಸವೆಂದರೆ ನಾನು ಹಾಡಬಲ್ಲೆ ನಾನು ಕುಣಿಯ ಬಲ್ಲೆ ....ನಾನು ಇದುವರೆಗೂ ಯಾವ ಪತ್ರಿಕೆಯಲ್ಲೂ ಬರಲಿಲ್ಲ .ನನ್ನ ಮುಂದಿನ ಗುರಿ ನಾನು ಒಂದು ಪತ್ರಿಕೆಯಲ್ಲಿ ಬರಬೇಕು ಅದು ಒಂದು ಒಳ್ಳೆಯ ಕಾರಣದಿಂದಾಗಿ ..ನನ್ನ ಬಗ್ಗೆ ನಾನು ಹೇಳುವುದಾದರೆ ನನಗೆ ನೃತ್ಯದ ಮೇಲೆ ಬಹಳಷ್ಟು ಆಸಕ್ತಿ ಇದೆ ಹಾಗೂ ಹಾಡುವುದರಲ್ಲಿ ನನಗೆ ಬಹಳಷ್ಟು ಆಸಕ್ತಿ .ಆದರೆ ಇವೆರಡನ್ನೂ ನಾನು ಎಲ್ಲೂ ಕಲಿತಿಲ್ಲ .ನನಗೆ ಒಂದು ಕೆಟ್ಟ ಹವ್ಯಾಸವೆಂದರೆ ಪುಸ್ತಕ ಓದುವ ಅಭ್ಯಾಸವೇ ಇಲ್ಲ ..ನನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ . ಎಲ್ಲ ಸಮಯವನ್ನು ನಾನು ಒಂದು ಹಿಡಿತದಲ್ಲಿ ಅದನ್ನು ಪೂರ್ತಿಗೊಳಿಸುತ್ತೇವೆ ..ನನಗೆ ಬಹಳಷ್ಟು ತಾಳ್ಮೆ ಇದೆ .ಇದು ನನ್ನ ಬಗ್ಗೆ .
ಈಗ ನನಗೆ ಕನ್ನಡದ ಮೇಲೆ ಇರುವ ಅಭಿಮಾನಕ್ಕೆ ಬಂದರೆ ,ನನಗೆ ಕನ್ನಡ ಅಂದರೆ ತುಂಬಾ ಇಷ್ಟ .ನಮ್ಮ ಸಂಸ್ಕೃತಿ ನಮ್ಮ ನಡೆ ನಮ್ಮ ನುಡಿ ಇವೆಲ್ಲವೂ ನನಗೆ ತುಂಬಾ ಇಷ್ಟ .ನನಗೆ ಕನ್ನಡದ ಇತಿಹಾಸದ ಪುಸ್ತಕಗಳನ್ನು ಓದಲು ಬಹಳ ಇಷ್ಟ .ಆದರೆ ನಾನು ಓದದಿದ್ದರೂ ಯಾರ ಬಳಿಯಾದರೂ ಕೇಳಿ ತಿಳಿದುಕೊಳ್ಳಲು ನನಗೆ ಇನ್ನೂ ಇಷ್ಟ .ನನಗೆ ಕನ್ನಡ ಮಾತನಾಡುವವರ ಮೇಲೆ ತುಂಬಾ ಅಭಿಮಾನ .ನನ್ನ ಈ ಅಭಿಮಾನ ಬೆಳೆಯಲು ನನ್ನ ಶಿಕ್ಷಕರೇ ಕಾರಣ .ನನಗೆ ಕನ್ನಡ ಎಂದರೆ ಮೊದಲು ಒಂದು ಭಾಷೆಯಷ್ಟೇ ಆದರೆ ಈಗ ಕನ್ನಡ ಪದ ಕೇಳಿದರೆ ಮೈಯೆಲ್ಲಾ ರೋಮಾಂಚನವಾಗುತ್ತದೆ .ನನಗೆ ನಮ್ಮ ಕನ್ನಡದ ಸಂಸ್ಕೃತಿ ಇವೆಲ್ಲವೂ ನಾಶವಾಗಲು ಇಷ್ಟ ಇಲ್ಲ .ಒಂದು ವೇಳೆ ಏನಾದರೂ ನಾಶವಾದರೆ ನಾನು ಅದನ್ನು ಎತ್ತಿ ಹಿಡಿಯಲು ಪ್ರಯತ್ನ ಮಾಡೇ ಮಾಡುತ್ತೇನೆ .ನನಗೆ ನಮ್ಮ ನಾಡಿನ ಪುರಾತನ ದೇವಾಲಯಗಳು ಹಾಗೂ ಮಂಟಪಗಳನ್ನು ವಿಶ್ಲೇಷಣೆ ಮಾಡುವುದು ಎಂದರೆ ತುಂಬಾ ಆಸಕ್ತಿ .ಅದರ ಬಗ್ಗೆ ತಿಳಿಯಲು ಅದನ್ನು ಹೇಗೆ ಅವರು ಅಷ್ಟು ಚೆನ್ನಾಗಿ ಮಾಡಿದ್ದಾರೆ ಅದನ್ನು ತಿಳಿಯಲು ನನಗೆ ತುಂಬಾ ಇಷ್ಟ .ನನಗೆ ಕನ್ನಡದಲ್ಲಿ ಪದಗಳನ್ನು ಬಳಸುವುದು ಬರುವುದಿಲ್ಲ ನನಗೆ ಗೊತ್ತಿರುವ ಅಷ್ಟರಲ್ಲಿ ನಾನು ಹೇಳಿದ್ದೇನೆ .ಹಾಗೂ ನಮ್ಮ ಕನ್ನಡಿಗರು ಸಂಗೊಳ್ಳಿ ರಾಯಣ್ಣ ಇರಬಹುದು ಇತರರ ಚರಿತ್ರೆಯನ್ನು ತಿಳಿಯಲು ನನಗೆ ಬಹಳ ಇಷ್ಟ .ಅವರು ಹೇಗೆ ನಮ್ಮ ನಾಡಿಗಾಗಿ ಹೋರಾಟ ನಡೆಸಿದರೂ ಅವರು ಹೇಗೆ ನಮ್ಮ ಸಂಸ್ಕೃತಿಯನ್ನು ಕಾಪಾಡಿದರು ಇವೆಲ್ಲವನ್ನೂ ತಿಳಿಯಲು ಆಸಕ್ತಿ .
ನಮ್ಮ ಮನೆಯಲ್ಲಿ ನಾವು ಮಾತನಾಡುವುದು ತೆಲುಗು ಆದರೆ ಶಾಲೆಯಲ್ಲಿ ಓದಿದ್ದೆಲ್ಲ ಕನ್ನಡ .ಅದಕ್ಕೆ ಕನ್ನಡದ ಮೇಲೆ ಇಷ್ಟೊಂದು ಪ್ರೀತಿ, ಅಭಿಮಾನ ,ಗೌರವ .ನನಗೆ ಮೊದಲು ನಮ್ಮ ಕನ್ನಡ ನಾಡಿನಲ್ಲಿ ಕರ್ನಾಟಕದಲ್ಲಿ ಈ ರಾಜಕಾರಣದ ಪದ್ಧತಿಯನ್ನು ಬದಲಾಯಿಸಬೇಕು .ಮುಖ್ಯವಾಗಿ ಎಲ್ಲೆಲ್ಲಿ ಹೆಣ್ಣುಮಕ್ಕಳ ಮೇಲೆ ಶೋಷಣೆಯಾಗುತ್ತಿದೆ ಅಲ್ಲೆಲ್ಲಾ ಒಂದು ಕಠಿಣವಾದ ಶಿಕ್ಷೆಯನ್ನು ಕೊಡಬೇಕು .ಇದು ಬದಲಾದರೆ ಚೆನ್ನಾಗಿರುತ್ತದೆ ಎಂದು ನನ್ನ ಅನಿಸಿಕೆ .
ಧನ್ಯವಾದಗಳು.