ಟಿ ಬಿ ಜಯಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Namratha S/WEP 2018-19 ಇಂದ ಪುನರ್ನಿರ್ದೇಶಿತ)
ಟಿ ಬಿ ಜಯಚಂದ್ರ
T. B. Jayachandra
ತಿಮ್ಮಮಾನಹಳ್ಳಿ ಬೋರಯ್ಯ ಜಯಚಂದ್ರ
ಹಾಲಿ
ಅಧಿಕಾರ ಸ್ವೀಕಾರ 
೨೦೧೩
ಪೂರ್ವಾಧಿಕಾರಿ ಎಸ್. ಸುರೇಶ್
ವೈಯಕ್ತಿಕ ಮಾಹಿತಿ
ಜನನ (1949-07-29) ೨೯ ಜುಲೈ ೧೯೪೯ (ವಯಸ್ಸು ೭೪)
ಕಲ್ಲಂಬೆಲ್ಲ,ತುಮಕೂರು, ಕರ್ನಾಟಕ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಕಾಂಗ್ರೆಸ್)
ಸಂಗಾತಿ(ಗಳು) ಜಿ. ಎಚ್. ನಿರ್ಮಲ
ಮಕ್ಕಳು ಮೂವರು
ವಾಸಸ್ಥಾನ ಬೆಂಗಳೂರು, ಭಾರತ
ಅಭ್ಯಸಿಸಿದ ವಿದ್ಯಾಪೀಠ , ಬೆಂಗಳೂರು (ಪಿಯುಸಿ)
ನ್ಯಾಶನಲ್ ಕಾಲೇಜ ,ತುಮಕೂರು (ಬಿಎಸ್ಸಿ)
ಧರ್ಮ ಹಿಂದು
ಜಾಲತಾಣ ಸರಕಾರಿ ಜಾಲತಾಣ

ತಿಮ್ಮಮಾನಹಳ್ಳಿ ಬೋರಯ್ಯ ಜಯಚಂದ್ರರವರು ಕರ್ನಾಟಕದ ರಾಜಕಾರಣಿ.

ಮೂಲ ಜೀವನ[ಬದಲಾಯಿಸಿ]

ವಿಧಾನಸಭೆ

ಹುಟ್ಟು[ಬದಲಾಯಿಸಿ]

ತಿಮ್ಮಮಾನಹಳ್ಳಿ ಬೋರಯ್ಯ ಜಯಚಂದ್ರ ಅವರು ೨೯ ಜುಲೈ ೧೯೪೯ರಂದು ಹುಟ್ಟಿದರು. ಇವರು ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ, ಕಳ್ಳಂಬೆಳ್ಳ ತಾಲೂಕಿಗೆ ಸೇರಿದವರು. ಇವರ ಸಂಗಾತಿ ಜಿ. ಎಚ್. ನಿರ್ಮಲ. ಇವರಿಗೆ ಮೂವರು ಮಕ್ಕಳ್ಳಿದ್ದಾರೆ.

ವಿದ್ಯಾಭ್ಯಾಸ[ಬದಲಾಯಿಸಿ]

ಅವರು ಬ್ಯಾಚುಲರ್ ಆಫ್ ಸೈನ್ಸ್ ಮತ್ತು ಎಲ್.ಎಲ್.ಬಿ ಪದವಿಯನ್ನು ಪಡೆದಿದ್ದಾರೆ.

ವೃತ್ತಿ[ಬದಲಾಯಿಸಿ]

ರಾಜಕೀಯ ಬೆಳವಣಿಗೆ[ಬದಲಾಯಿಸಿ]

ಇವರು ವೃತ್ತಿಯಲ್ಲಿ ರಾಜಕಾರಣಿ. ಅಲ್ಲದೆ ಇವರು ೨೦೧೩ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ವಿಧಾನ ಸಭೆಯ ಸದಸ್ಯರಾಗಿದ್ದರು.

೧. ಇವರು ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನ ಕಳೆದುಕೊಂಡರು. ಎಸ್. ಸುರೇಶ್‍ರವರ ನಂತರ, ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ೧೮ ಮೇ, ೨೦೧೩ರಿಂದ ೧೫ ಮೇ, ೨೦೧೮ರವರೆಗೆ ಸೇವೆ ಸಲ್ಲಿಸಿದರು.

೨. ಇವರು ೧೭ ಅಕ್ಟೋಬರ್ ೧೯೯೯ರಿಂದ ೨೭ ಜೂನ್ ೨೦೦೨ರವರೆಗೆ ತುಮಕೂರು ಜಿಲ್ಲೆಯ ಕೃಷಿ ಮತ್ತು ಜಿಲ್ಲಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ೧೨ ಡಿಸೆಂಬರ್ ೨೦೦೩ ರಿಂದ ೨೮ ಮೇ ೨೦೦೪ ರವರೆಗೆ ಮಂಡ್ಯ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

೩. ಜಯಚಂದ್ರರವರು ಮೊದಲ ಬಾರಿ ಕರ್ನಾಟಕ ಶಾಸಕಾಂಗ ಸಭೆಗೆ ೧೯೭೮ರಲ್ಲಿ ಆಯ್ಕೆಯಾದರು. ಇವರು ಸುಮಾರು ಆರು ಬಾರಿ ಕಲ್ಲಂಬೆಲ್ಲಾ ಮತ್ತು ಸಿರಾ ಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ: ೬ನೇ ವಿಧಾನಸಭೆ- ೧೯೭೮ರಿಂದ ೧೯೮೩ರವರೆಗೆ, ೯ನೇ ವಿಧಾನಸಭೆ- ೧೯೮೯ರಿಂದ ೧೯೯೪ರವರೆಗೆ, ೧೦ನೇ ವಿಧಾನಸಭೆ- ೧೯೯೪ರಿಂದ ೧೯೯೯ರವರೆಗೆ, ೧೧ನೇ ವಿಧಾನಸಭೆ - ೧೯೯೯ರಿಂದ ೨೦೦೪ರವರೆಗೆ,೧೩ನೇ ವಿಧಾನಸಭೆ- ೨೦೦೮ರಿಂದ ೨೦೧೩ರವರೆಗೆ, ೧೪ನೆಯ ವಿಧಾನಸಭೆ- ೨೦೧೩ರಿಂದ ೨೦೧೮ರವರೆಗೆ.

೪.ಇವರು ೨೦೧೩ರ ಚುನಾವಣೆಯಲ್ಲಿ ೭೪,೦೮೯ ಮತಗಳೊಂದಿಗೆ ಸಿರಾದಿಂದ ಗೆದ್ದ ನಂತರ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ೨೭ ಜೂನ್ ೨೦೦೨ರಿಂದ ೧೧ ಡಿಸೆಂಬರ್ ೨೦೦೩ರವರೆಗೆ ಕ್ಯಾಬಿನೆಟ್ ಮಂತ್ರಿಯ ಪಟ್ಟದಿಂದ ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ೧೯೯೪ರಿಂದ ೧೯೯೯ರವರೆಗೆ ಮತ್ತು ೨೦೦೮ರಿಂದ ೨೦೧೮ರವರೆಗೆ ವಿರೋಧ ಪಕ್ಷದ ಉಪನಾಯಕರಾಗಿದ್ದರು. ಇವರು ತುಂಬಾ ರಾಜಕೀಯ ಅನುಭವವನ್ನು ಹೊಂದಿರುವ ವ್ಯಕ್ತಿ.ಕಾಂಗ್ರೆಸ್ ಪಕ್ಷದ ಸಂಘಟನೆಗಳಲ್ಲಿ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಕೆಲಸಗಳನ್ನು ಮಾಡಿದ್ದಾರೆ.

ಹುದ್ದೆ[ಬದಲಾಯಿಸಿ]

೧. ಇವರು ಕೆಪಿಸಿಸಿ ಚುನಾವಣಾ ನಿರ್ವಹಣೆ ಮತ್ತು ಸಹಕಾರ ಸಂಘ ಸಮಿತಿಯ ಸದಸ್ಯರು.

ಡಿಸೆಂಬರ್ ೨೭, ೨೦೧೬ರಲ್ಲಿ ನಡೆದ ರಾಷ್ಟೀಯ ಕಾಂಗ್ರೆಸ್ ಸಂವಿಧಾನ.

೨. ಇವರು ಬೇರೆ ಕ್ಷೇತ್ರಗಳಲ್ಲೂ ಬಹಳ ಕೆಲಸಗಳನ್ನು ಮಾಡಿದ್ದಾರೆ. ೧೯೮೦ರಿಂದ ೧೯೮೧ರವರೆಗೆ ಕರ್ನಾಟಕ ಫಿಲ್ಮ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೊರೇಶನ್‍ನ ಚೈರ್ಮನ್ ಆಗಿದ್ದರು. ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಚೈರ್ಮನ್ ಆಗಿದ್ದರು.

೩. ಬೆಂಗಳೂರಿನ ಎಮ್ಸಿಸಿ ಚಾರಿಟಿಗಳ ಮ್ಯಾನೇಜಿಂಗ್ ಟ್ರಸ್ಟೀ ಆಗಿದ್ದಾರೆ. ಇವರು ಯುನಿವರ್ಸಲ್ ಎಜುಕೇಶನ್ ಅಂಡ್ ರಿಸರ್ಚ್ ಫೌಂಡೇಶನ್, ಬೆಂಗಳೂರಿನ ಚೈರ್ಮನ್ ಟ್ರಸ್ಟೀ. ತುಮಕೂರು ಜಿಲ್ಲೆಯ,ಕಲ್ಲಂಬೆಲ್ಲ ತಾಲೂಕಿನ ನೀರಾವರಿ ಸಮಿತಿಯ ಮತ್ತು ಪಶ್ಚಿಮ ಗಟ್ಟಾ ನೀರಾವರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

೪. ಇವರು ಹೊರದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ೧೯೯೯ ಮಾರ್ಚ್ನಲ್ಲಿ, ಯುನೈಟೆಡ್ ಕಿಂಗ್ಡಮ್‍ನಲ್ಲಿ ನಡೆದ ೪೮ನೇ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಸೆಮಿನಾರ್ನಲ್ಲಿ ಭಾರತವನ್ನು ಪ್ರತಿನಿಧಿಸರು. ಯುಎಸ್ಎ, ಕೆನಡಾ, ಚೀನಾ, ಜಪಾನ್, ದಕ್ಷಿಣ ಕೊರಿಯಾ,ಯುಎಇ, ದಕ್ಷಿಣ ಪೂರ್ವ ದೇಶಗಳು ಮತ್ತು ಯುರೋಪಿಯನ್ ದೇಶಗಳಿಗೆ ಕೃಷಿ ಮತ್ತು ಕೈಗಾರಿಕೆಗಳನ್ನು ಅಧ್ಯಯನ ಮಾಡಲು ಭೇಟಿ ನೀಡಿದ್ದಾರೆ.

೫. ಇವರು ೨೦೧೮ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯಾದ ಬಿ. ಸತ್ಯನಾರಾಯಣರಿಗೆ ಸಿರಾದಿಂದ ಸೋತರು.

ಉಲ್ಲೇಖಗಳು[ಬದಲಾಯಿಸಿ]

೧. https://www.ndtv.com/topic/tb-jayachandra

೨. https://economictimes.indiatimes.com/topic/Law-Minister-TB-Jayachandra

೩. https://nocorruption.in/politician/t-b-jayachandra/

೪. http://myneta.info/karnataka2013/candidate.php?candidate_id=1036