ಸದಸ್ಯ:Monishareddy990/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಚಿಕ್ಕ ಆದಾಪೂರ':ಇದ ಬಾಗಲಕೋಟ ಜಿಲ್ಲೆಯ ಹುನಗುಂದ‍‍‍‍‍‍‍‍‍ ತಾಲೂಕಿನ ಪುಟ್ಟ ಗ್ರಾಮ. ಸುಮಾರು ೧೨೦೦ ಜನ ಸಂಖ್ಯೆ ಹೊಂದಿರುವ ಹಲ್ಲಿಯಲ್ಲಿ ಕೃ‍‌‌‌‌‌‍‍‍‍‍ಷಿಯೇ ಪ್ರತಿ ಕುಟುಂಬದ ಜೀವನಾಡಿ ನಮ್ಮ ಪ್ರಸಿದ್ದ ವಚನಕಾರರಾದ ಕ್ರಾ೦ತಿಕಾರಿ ಸಮಾಜ ಸುಧಾರಕರಾದ ಬಸವಣ್ಣನವರು ೧೨ ನೆಯ ಶತಮಾನದಲ್ಲಿ ಕ೦ಡುಬ೦ದ ಈ ವಚನಕಾರ ಐಕ್ಯವಾದ ಸ್ಥಳ ಕುಡಲಸ೦ಗಮ ಹುನಗುಂದ‍‍‍‍‍‍‍‍‍ ತಾಲೂಕಿನಲ್ಲಿದೆ ಚಿಕ್ಕ ಆದಾಪೂರ ಈ ಪುಟ್ಟ ಗ್ರಾಮವು ಕೃಷಿಯಲ್ಲಿ ತು೦ಬ ಹೆಸರುವಾಸಿಯಾಗಿದೆ . ಇಲ್ಲಿನ ಮಣ್ಣು ಕಪ್ಪು ಅಥವ ಕೆ೦ಪು ಮಣ್ಣಿನ ಫಲವತ್ತತೆಯಿ೦ದ ಕೂಡಿದ್ದು ವ್ಯವಸಾಯ ಮಾಡಲು ಅನುಕೂಲಕರವಾಗಿದೆ ಇಲ್ಲಿ ೩೪೮ ಕುಟು೦ಬದ ಜನರಿದ್ದು ಇಲ್ಲಿನ ಜನಸ೦ಖ್ಯೆ ೧೭೪೯ ಇವರಲ್ಲಿ ಗ೦ಡಸರು ೮೬೫ ಹೆ೦ಗಸರು ೮೮೪ ಇದ್ದಾರೆ ಇಲ್ಲಿನ ಜನ ಹೆಚ್ಚು ಅವಿದ್ಯಾವ೦ತರಾಗಿದ್ದು ಹೆಚ್ಚು ಕೃಷಿಯನ್ನೇ ಅವಲ೦ಬಿಸಿದ್ದಾರೆ ಚಿಕ್ಕ ಆದಾಪೂರ ಇದು ಬಾಗಲಕೋಟ ಜಿಲ್ಲೆಯ ಹುನಗುಂದ‍‍‍‍‍‍‍‍‍ ತಾಲೂಕಿನ ಪುಟ್ಟ ಗ್ರಾಮ. ಸುಮಾರು ೧೨೦೦ ಜನ ಸಂಖ್ಯೆ ಈ ಹಳ್ಳಿಯಲ್ಲಿ ಕೃ‍‌‌‌‌‌‍‍‍‍‍ಷಿಯೇ ಮುಖ್ಯವಾಗಿ ಕ೦ಡು ಬರುತ್ತದೆ ಪ್ರತಿ ಕುಟು೦ಬದ ಜೀವನಾಡಿಯೇ ಕೃ‍‌‌‌‌‌‍‍‍‍‍ಷಿ. ಕೃ‍‌‌‌‌‌‍‍‍‍‍ಷಿ ಎ೦ದಾಕ್ಷಣ ಈಗಿನ ದಿನಗಳಲ್ಲಿ ಲಾಭಧಾಯಕ ಕೆಲಸ ಯೆ೦ದು ತಿಳಿದಿರುವ ನಗರದ ಜನರಿಗೆ ಕೃ‍‌‌‌‌‌‍‍‍‍‍ಷಿ ಮಾಡುವ ಕೆಲಸ ಎಷ್ಟೋ೦ದು ಕಷ್ಟ ಎಬು೦ದು ಗೊತ್ತಿರುವುದಿಲ್ಲ. ಕೃಷಿಗೆ ರೈತನೇ ಕೇಂದ್ರಬಿಂದು, 'ಕೈ ಕೆಸರಾದರೇ ಬಾಯಿ ಮೊಸರು' ಎಂಬ ಮಾತಿದೆ. ಆದರೆ ಇಲ್ಲಿಯವರೆಗೂ ಕಷ್ಟಪಟ್ಟು ರೈತನ ಬಾಯಿ ಮೊಸರಾಗಲಿಲ್ಲ. ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಇ೦ದು ನಡೆಯಬೇಕಾಗಿದೆ. ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಕೃತಕ ಗೊಬ್ಬರಗಳು, ವಿಷಮಯ ರಾಸಾಯನಿಕಗಳು, ಮಣ್ಣಿನ ಫಲವತ್ತತೆಯನ್ನು ಹಾಳು ಮಾಡುವ ಯಂತ್ರದಾರಿತ ಉಳುಮೆಯ ಕ್ರಮ ಇವುಗಳೆಲ್ಲವು ನಮ್ಮ ಆರೋಗ್ಯ, ಪರಿಸರ ಹಾಗು ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ವಚ್ಛಂದ ನೀಲಾಗಸದಲ್ಲಿ ಕಾರ್ಮೋಡಗಳಿದ್ದಂತೆ ಈ ಭವ್ಯ ಭಾರತದಲ್ಲಿ ಈ ಕೃಷಿ ನೆಲದಲ್ಲಿ ಕೈಗಾರಿಕೋದ್ಯಮಗಳಿದ್ದು ಕೃಷಿ ಭೂಮಿಯನ್ನು ಹಾಳುಮಾಡಿ ರೈತರು ರಾಸಾಯನಿಕ ಗೊಬ್ಬರ ಬಳಸಿ ತೊಂದರೆ ಗಿಡಾಗುತ್ತಿದ್ದಾರೆ. ಕಾಯಕವೇ ಕೈಲಾಸ ಎಂದು ಕಷ್ಟಪಟ್ಟು ದುಡಿಯುವ ರೈತರಿಗೆ ಆಧಾರಗಳೇ ಇಲ್ಲ. ರೈತನು ಎತ್ತುಗಳ ಸಹಾಯದಿಂದ ಭೂಮಿಯನ್ನು ಉಳುತ್ತಾನೆ. ರೈತನ ದುಡಿಮೆಗೆ ಮಾರ್ಕೆಟ್ ನಲ್ಲಿ ತಕ್ಕ ಬೆಲೆ ಸಿಗುತ್ತಿಲ್ಲ.ಇದರಿಂದ ಸಂಕಷ್ಟಕೀಡಾದ ರೈತರು ಇತ್ತೀಚಿನ ವಷ‍ಗಳಲ್ಲಿ ತಾವು ತೆಗೆದುಕೊಂಡ ಸಾಲವನ್ನು ತೀರಿಸಲಾಗದೆ ಅತ್ಮಹತ್ಯೆ ಮಡಿಕೋಳ್ಳುತೈದ್ದಾರೆ. ರೈತನು ತನ್ನ ಬಾಳಿನಲ್ಲಿ ಕಳೆದ ಸಂತಸದ ದಿವಸಗಳಿಗಿಂತ ದುಃಖದ ದಿನಗಳೇ ಹೆಚ್ಚು. ಹೀಗಾಗಿ ನಮ್ಮ ದೇಶದ ಬೆನ್ನೆಲುಬಾದ ರೈತನಿಗೆ ತಕ್ಕ ಪ್ರೋತ್ಸಾಹ ಕೊಡುವುದು ಸರಕಾರದ ಆದ್ಯ ಕತ‍ವ್ಯವಾಗಿದೆ. ಎಲ್ಲರಿಗೂ ಆಹಾರ ನೀಡುವವನ ಹೃದಯವನ್ನು ತಂಪಾಗಿಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅವನಿಗೆ ಸಂತಸದ ದಿನಗಳ ಹೂ ಮಳೆ ಹರಿಸೋಣ. ಅವನ ಕಷ್ಟದಲ್ಲಿ ನಾವೂ ಕೈ ಜೋಡಿಸೋಣ. ಅವನನ್ನು ಬೆಂಬಲಿಸೋಣ. ಪ್ರೋತ್ಸಾಹಿಸೋಣ. ಹುರಿದುಂಬಿಸೋಣ. ಇಲ್ಲಿನ ಜನರು ಬತ್ತ ,ರಾಗಿ , ಜೋಳ, ಮು೦ತಾದ ಬೆಳೆಗಳನ್ನು ಬೆಳೆಯುತ್ತಾರೆ ಕಾಯಕವೇ ಕೈಲಾಸ ಎ೦ಬ ಮಾತಿನ೦ತೆ ದುಡಿಯುವ ಇವರು ತಮ್ಮನ್ನು ಹೆಚ್ಚಾಗಿ ಕೃಷಿಯಲ್ಲಿ ತೋಡಗಿಸಿ ಕೊ೦ಡಿದ್ದಾರೆ.

ದೇಶಕ್ಕೆ ಮುಖ್ಯವಾಗಿ ಹೆಚ್ಚು ಆದಾಯ ಬರುವುದೇ ಕೃಷಿಯಲ್ಲಿ . ಚ್ಚಿಕ್ಕ ಆದಾಪೂರವು ಕೂಡ ಕೃಷಿಯನ್ನು ಅವಲ೦ಬಿಸಿದ್ದು ದೇಶಕ್ಕೂ ಆದಾಯ ಕೊಡುವಲ್ಲಿ ಸಹಾಯಕವಾಗಿದೆ.