ಸದಸ್ಯ:Manoj 1997/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                        ವಿಟಮಿನ್‌ ಇತಿಹಾಸ

ಜೀವಸತ್ವ ವೆಂದರೆ ಯಾವುದೇ ಜೀವಿಗೆ ಕೂಡಾ ಪೋಷಕಾಂಶದ ರೂಪದಲ್ಲಿ ಅಲ್ಪ ಪ್ರಮಾಣದಲ್ಲಿ ಅಗತ್ಯವಾಗಿರುವ ಸಾವಯವ ಸಂಯೋಗ. ಆಂಗ್ಲ ಪದ 'ವಿಟಮಿನ್‌' ಎಂಬುದು ಮೊದಲಿಗೆ 1800ನೇ ಶತಮಾನದ ಮೊದಲ ಭಾಗದಲ್ಲಿ 'ವೈಟಲ್‌' ಹಾಗೂ 'ಮಿನರಲ್‌' ಎಂಬೆರಡು ಪದಗಳ ಮಿಶ್ರಪದವಾಗಿ ಜನಪ್ರಿಯವಾಗಿತ್ತಾದರೂ, ಪದದ ನಿಜವಾದ ಅರ್ಥವು ಆ ಸಮಯದಿಂದೀಚೆಗೆ ಸಾಕಷ್ಟು ಬದಲಾಗಿದೆ. ಯಾವುದೇ ಜೀವಿಯು ಸಂಯೋಗವೊಂದನ್ನು ಸಾಕಷ್ಟು ಪ್ರಮಾಣದಲ್ಲಿ ಸಂಯೋಜಿಸಲು ಸಾಧ್ಯವಾಗದೇ ಆಹಾರದ ಮೂಲಕವೇ ಪಡೆದುಕೊಳ್ಳಬೇಕಾಗಿದ್ದರೆ ಅದನ್ನು ಜೀವಸತ್ವ ಎಂದು ಕರೆಯಲಾಗುತ್ತದೆ. ಹಾಗಾಗಿ ಪದವು ಸಂದರ್ಭಗಳು ಹಾಗೂ ನಿರ್ದಿಷ್ಟ ಜೀವಿಯ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ಆಸ್ಕಾರ್ಬಿಕ್‌ ಆಮ್ಲವು ಕೆಲ ಪ್ರಾಣಿಗಳಿಗೆ ಮಾತ್ರವೇ ಜೀವಸತ್ವ Cಯಾಗಿ ಪರಿಣಮಿಸುತ್ತದೆ, ಹಾಗೂ K, ಬಯೊಟಿನ್‌ ಮತ್ತು D ಜೀವಸತ್ವಗಳು ಮಾನವರ ಆಹಾರದಲ್ಲಿ ಕೆಲ ಸಂದರ್ಭಗಳಲ್ಲಿ ಮಾತ್ರವೇ ಅಗತ್ಯವಾಗಿರುತ್ತವೆ. ಜೀವಸತ್ವ ಪದವನ್ನು ಆಹಾರದಲ್ಲಿ ಬಳಸುವ ಖನಿಜಾಂಶಗಳು, ಅತ್ಯಗತ್ಯವಾದ ಕೊಬ್ಬಿನ ಅಂಶದ ಆಮ್ಲಗಳು, ಅಥವಾ ಅಗತ್ಯವಾದ ಅಮೈನೋ ಆಮ್ಲಗಳಂತಹಾ ಇತರೆ ಅತ್ಯಗತ್ಯ ಪೋಷಕಾಂಶಗಳಿಗೆ ಅನ್ವಯಿಸುವುದಿಲ್ಲ, ಹಾಗೂ ಆರೋಗ್ಯವನ್ನು ಉತ್ತಮಗೊಳಿಸುವುದಕ್ಕೆ ಸಹಾಯ ಮಾಡುವುದಾದರೂ ಹೆಚ್ಚೇನೂ ಅಗತ್ಯವಿಲ್ಲದ ಇತರೆ ಅನೇಕ ಪೋಷಕಾಂಶಗಳನ್ನು ಕೂಡಾ ಹಾಗೆಂದು ಕರೆಯಲಾಗುವುದಿಲ್ಲ.

ಇತಿಹಾಸ ಕೆಲವೊಂದು ಆಹಾರಪದಾರ್ಥಗಳನ್ನು ಸೇವಿಸುವುದರಿಂದಾಗುವ ಉಪಯೋಗಗಳನ್ನು ಜೀವಸತ್ವಗಳನ್ನು ಗುರುತಿಸುವ ಬಹುಕಾಲ ಮುನ್ನವೇ ಗುರುತಿಸಲಾಗಿತ್ತು. ಪ್ರಾಚೀನ ಈಜಿಪ್ಟ್‌‌ನವರು ಈಗ ಜೀವಸತ್ವ Aನ ಕೊರತೆಯಿಂದುಂಟಾಗುವ ರೋಗವೆಂದು ಗೊತ್ತಾಗಿರುವ ಇರುಳುಗಣ್ಣು ರೋಗವನ್ನು ಪಿತ್ತಜನಕಾಂಗವನ್ನು ಸೇವಿಸಿ ಗುಣಪಡಿಸಲು ಸಾಧ್ಯವೆಂದು ಪತ್ತೆಹಚ್ಚಿದ್ದರು. ನವೋದಯ ಕಾಲದಲ್ಲಿ ಉಂಟಾದ ಸಾಗರ ಜಲಪರ್ಯಟನದ ಉನ್ನತಿಯು ತಾಜಾ ಹಣ್ಣುಗಳ ಹಾಗೂ ತರಕಾರಿಗಳ ದೀರ್ಘಕಾಲೀನ ಅಲಭ್ಯತೆಗಳಿಗೆ ಕಾರಣವಾಗಿ ಜೀವಸತ್ವ ಕೊರತೆಯಿಂದುಂಟಾಗುವ ರೋಗಗಳ ಹಾವಳಿ ಹಡಗಿನ ಸಿಬ್ಬಂದಿಯಲ್ಲಿ ಸಾಮಾನ್ಯವೆನಿಸುವಂತೆ ಮಾಡಿತು.

1749ರಲ್ಲಿ, ಸ್ಕಾಟಿಷ್‌ ಶಸ್ತ್ರಚಿಕಿತ್ಸಾತಜ್ಞ ಜೇಮ್ಸ್‌‌ ಲಿಂಡ್‌‌ ನಿಂಬೆಕುಲದ ಆಹಾರಗಳು ವಿಶೇಷತಃ ಕೊಲ್ಲಾಜೆನ್‌ ಸರಿಯಾಗಿ ರೂಪುಗೊಳ್ಳದೇ ಗಾಯಗಳ ಮಾಯುವಿಕೆಯನ್ನು ನಿಧಾನಗೊಳಿಸುವ, ಒಸಡಿನಿಂದ ರಕ್ತ ಸೋರುವಿಕೆಗೆ, ವಿಪರೀತ ನೋವು ಹಾಗೂ ಸಾವಿಗೆ ಕಾರಣವಾಗಬಲ್ಲ ರಕ್ತಪಿತ್ತವ್ಯಾಧಿಯನ್ನು ತಡೆಹಿಡಿಯಲು ಸಹಾಯಕ ಎಂದು ಪತ್ತೆಹಚ್ಚಿದರು. 1753ರಲ್ಲಿ, ಲಿಂಡ್‌ ರಕ್ತಪಿತ್ತವ್ಯಾಧಿಯನ್ನು ತಡೆಗಟ್ಟಲು ನಿಂಬೆಹಣ್ಣುಗಳನ್ನು ಹಾಗೂ ಸುಣ್ಣವನ್ನು ಬಳಸಲು ಶಿಫಾರಸು ಮಾಡಿದ್ದ ತಮ್ಮ ಟ್ರೀಟಿಸ್‌ ಆನ್‌ ದ ಸ್ಕರ್ವಿ ಎಂಬ ಗ್ರಂಥವನ್ನು ಪ್ರಕಟಿಸಿದರು, ಈ ಸಲಹೆಯನ್ನು ಬ್ರಿಟಿಷ್‌ ರಾಯಲ್‌ ನೌಕಾಪಡೆಯು ಅಳವಡಿಸಿಕೊಂಡಿತು. ಇದರಿಂದಾಗಿ ಆ ಸಂಸ್ಥೆಯ ನಾವಿಕರನ್ನು ಲೈಮೆ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು. ಆದಾಗ್ಯೂ ಲಿಂಡ್‌ರ ಆವಿಷ್ಕಾರವನ್ನು 19ನೇ ಶತಮಾನದಲ್ಲಿ ಕೈಗೊಂಡಿದ್ದ ರಾಯಲ್‌ ನೌಕಾಪಡೆಯ ಉತ್ತರ ಧೃವದ ಪರ್ಯಟನೆಯಲ್ಲಿನ ವ್ಯಕ್ತಿಗಳು ಇದನ್ನು ವ್ಯಾಪಕವಾಗಿ ಅಂಗೀಕರಿಸಿರಲಿಲ್ಲ, ಪ್ರಯಾಣದಲ್ಲಿರುವಾಗ ಉತ್ತಮ ನೈರ್ಮಲ್ಯದ ಕಾಪಾಡಿಕೊಳ್ಳುವಿಕೆ, ನಿಯಮಿತ ಕಸರತ್ತು, ಹಾಗೂ ಸಿಬ್ಬಂದಿಯು ನೈತಿಕತೆಯನ್ನು ಕಾಪಾಡಿಕೊಂಡರೆ ರಕ್ತಪಿತ್ತವ್ಯಾಧಿಯನ್ನು ತಡೆಗಟ್ಟಬಹುದಲ್ಲದೇ ಕೇವಲ ತಾಜಾ ಆಹಾರ ಪದ್ಧತಿಯಿಂದಲ್ಲ ಎಂಬುದು ಅವರ ವ್ಯಾಪಕ ಭಾವನೆಯಾಗಿತ್ತು. ಇದರ ಪರಿಣಾಮವಾಗಿ ಉತ್ತರ ಧೃವದ ಪರ್ಯಟನೆಗಳಲ್ಲಿ ರಕ್ತಪಿತ್ತವ್ಯಾಧಿ ಹಾಗೂ ಇನ್ನಿತರ ಕೊರತೆಯಿಂದುಂಟಾಗುವ ರೋಗಗಳ ಉಪಟಳ ಮುಂದುವರೆಯಿತು. 20ನೇ ಶತಮಾನದ ಆದಿಯಲ್ಲಿ ರಾಬರ್ಟ್‌ ಫಾಲ್ಕನ್‌ ಸ್ಕಾಟ್‌‌ ಅಂಟಾರ್ಟಿಕ್‌ಗೆ ಎರಡು ಬಾರಿ ಪರ್ಯಟನೆ ಮಾಡಿದಾಗ, ಬಳಕೆಗೆ ಬಂದ ವೈದ್ಯಕೀಯ ಸಿದ್ಧಾಂತದ ಪ್ರಕಾರ ರಕ್ತಪಿತ್ತವ್ಯಾಧಿಯು "ದೋಷಪೂರಿತ" ಡಬ್ಬಿಯಲ್ಲಿ ಇರಿಸಿದ ಆಹಾರ ಸೇವನೆಯಿಂದಾಗುತ್ತದೆ ಎಂಬುದಾಗಿತ್ತು