ಸದಸ್ಯ:ಮೇಘ
ನಾಗವರ್ಮ
ಬಾಣಕವಿಯ ಸಂಸ್ಕೃತದ ಗದ್ಯಕೃತಿಯಾದ ಕಾದಂಬರಿಯನ್ನು ಕನ್ನಡಕ್ಕೆ ಚಂಪೂ ಸ್ವರೂಪದಲ್ಲಿ ಕರ್ಣಾಟಕ ಕಾದಂಬರಿ ಎಂಬ ಹೆಸರಿನಲ್ಲಿ ತಂದವನು ಮೆಾದಲನೆಯ ನಾಗವರ್ಮನೆಂಬ ಕವಿಯು.ಕವಿಚರಿತೆಗಾರರ ಅಭಿಪ್ರಾಯದಂತೆ ಈತನ ಕಾಲ ಸು.990.ಛಂಧೋಂಭುಧಿ ಎಂಬ ಹೆಸರಿನ ಒಂದು ಛಂಧೋಗ್ರಂಥದ ಕತೃವೂ ಈತನೇ ಎಂಬುದು ಕವಿಚರಿತೆಗಾರ ಅಭಿಪ್ರಾಯವಾಗಿದೆ.ಸಂಸ್ಕೃತದ ಗದ್ಯಕೃತಿಯನ್ನು ಚಂಪೂಕೃತಿಯಾಗಿ ಪರಿವರ್ತಿಸಿದ್ದು,ಪುರಾಣೇತಿಹಾಸಗಳ ಪ್ರಸಿದ್ಧವಾದ ಕಥಾವಸ್ತುವನ್ನು ಬಿಟ್ಟು ಕಾಲ್ಪಾನಿಕವಾದ ವಸ್ತುವಿನ ಕಥೆಯನ್ನು ರಮ್ಯವಾದ ಕಾವ್ಯವಾಗಿ ರಚಿಸಿರುವುದೂ,ಇಲ್ಲಿಯ ವಿಶೇಷ.ಕೃತಿಯ ಪ್ರಸ್ತುತ ಭಾಗವು ಮಹಾಶ್ವೇತೆ ಮುನಿಕುಮಾರನಾದ ಪುಂಡರೀಕನನ್ನು ಮೆಾದಲ ಸಲ ಕಂಡಾಗ ,ಆಕೆಯೂ ಪುಂಡರೀಕನೂ ಪರಸ್ಪರಲ್ಲಿ ಮೇೂಹಗೊಂಡುದುದನ್ನೂ,ತತ್ಪರಿಣಾಮವಾಗಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನೂ ಕುರಿತಿದೆ.