ಸದಸ್ಯ:ಪದ್ಮಾವತಿ ಜಿ
ಗೋಚರ
ಕೋಟೆಬೆಟ್ಟ",.....
ಕೂಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮೂವತೊಕ್ಲು,ಎಂಬ ಗ್ರಾಮದಲ್ಲಿ, ಇರುವಂತಹ. ಪ್ರಸಿದ್ಧ ದೇವಾಲಯ. ಹಾಗೂ ಬೆಟ್ಟ ಕೂಡ ಆಗಿದೆ, ಈ ದೇವಾಲಯಕ್ಕೆ, ಪ್ರತಿ ವಾರ ಮಂಗಳವಾರದಂದು ಪೂಜೆ ನೆರವೇರಿಸುತ್ತಾರೆ.
ಈ ದೇವಾಲಯ ಕಲ್ಲಿನಿಂದ ಆವೃತ್ತ ಗೊಂಡಿದ್ದು, ಒಂದೇ ರಾತ್ರಿಯಲ್ಲಿ ನಿರ್ಮಾಣವಾಗಿರುವಂತದ್ದು ಎಂಬ ಸ್ಥಳೀಯರ ಅಭಿಪ್ರಾಯ.
ಅಷ್ಟೇ ಅಲ್ಲದೆ ಐದು ಪಂಚಪಾಂಡವರ ಕೆರೆಗಳು ಈ ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಾಣವಾಗಿವೆ. ಈ ಕೆರೆಗಳ ಸುತ್ತಲು ಬಂಡೆಗಳಿಂದ ನಿರ್ಮಾಣವಾಗಿರುವುದರಿಂದ ವರ್ಷದ ಯಾವುದೇ ಕಾಲದಲ್ಲಿಯೂ ನೀರು ಬತ್ತದೆ ಇರುವುದು ಇಲ್ಲಿನ ವಿಶೇಷ.
ಇತ್ತೀಚಿನ ವರ್ಷಗಳ ಶಿವನ ದೇವಾಲಯ ಎರಡು ಭಾಗವಾಗಿದೆ, ಒಂದು ಮೂವತೊಕ್ಲು ಇನ್ನೊಂದು ಗರ್ವಾಲೆ ಯಲ್ಲಿ ಇದೆ, ಅಷ್ಟೇ ಅಲ್ಲದೆ ಟಿಪ್ಪುಸುಲ್ತಾನ್ ಕೊಡಗಿಗೆ ದಾಳಿ ಮಾಡುವಾಗ ಈ ದೇವಸ್ಥಾನಕ್ಕೆ ಆಕ್ರಮಣ ಮಾಡಿದ್ದ. ಹಾಗೆಯೇ ಈ ಕೋಟೆ ಬೆಟ್ಟ ದಿಂದ ಮೈಸೂರು ಅರಮನೆಗೆ ಸುರಂಗ ಮಾರ್ಗ ಕೂಡ ಇದೆ ಎಂಬುದು ಸ್ಥಳೀಯರ ಅಭಿಪ್ರಾಯ..