ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Manjubhatassistantpriests

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Latest comment: ೩ ವರ್ಷಗಳ ಹಿಂದೆ by Manjubhatassistantpriests in topic ಗಣಪತಿ ಜನ್ಮ
ನಮಸ್ಕಾರ Manjubhatassistantpriests


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೭:೫೪, ೪ ಜನವರಿ ೨೦೨೩ (IST)Reply

ವಿದ್ಯಾ ಗಣಪತಿ

[ಬದಲಾಯಿಸಿ]

ವಿದ್ಯಾ ಗಣಪತಿ ದೇವಸ್ಥಾನ ಪಂಪಾನಗರ ಯಶವಂತಪುರ ವಿದ್ಯಾ ಗಣಪತಿಯನ್ನು ಶಿವ ಮತ್ತು ಪಾರ್ವತಿಯ ಮಗ ಎಂದು ಜನಪ್ರಿಯವಾಗಿ ಪರಿಗಣಿಸಲಾಗಿದ್ದರೂ , ಪುರಾಣಿಕ ಗ್ರಂಥಗಳು ಅವನ ಜನ್ಮದ ಬಗ್ಗೆ ವಿಭಿನ್ನ ಆವೃತ್ತಿಗಳನ್ನು ನೀಡುತ್ತವೆ. ಕೆಲವರಲ್ಲಿ ಅವನು ಪಾರ್ವತಿಯಿಂದ ಅಥವಾ ಶಿವನಿಂದ ಅಥವಾ ಶಿವ ಮತ್ತು ಪಾರ್ವತಿಯಿಂದ ರಚಿಸಲ್ಪಟ್ಟನು ,ಇನ್ನೊಂದರಲ್ಲಿ ಅವನು ನಿಗೂಢವಾಗಿ ಕಾಣಿಸಿಕೊಂಡನು ಮತ್ತು ಶಿವ ಮತ್ತು ಪಾರ್ವತಿಯಿಂದ ಅಥವಾ ಅವನು ಹುಟ್ಟಿದ ನದಿಯಲ್ಲಿ ಎಸೆದ ಪಾರ್ವತಿಯ ಸ್ನಾನದ ನೀರನ್ನು ಕುಡಿದ ನಂತರ ಆನೆಯು ಮಾಲಿನಿ ದೇವಿಯು ನೇತೃತ್ವ ವಹಿಸಿತು.

ಕುಟುಂಬವು ಅವನ ಸಹೋದರ, ಯುದ್ಧದ ದೇವರು ಕಾರ್ತಿಕೇಯನನ್ನು ಒಳಗೊಂಡಿದೆ , ಅವರನ್ನು ಸ್ಕಂದ ಮತ್ತು ಮುರುಗನ್ ಎಂದೂ ಕರೆಯುತ್ತಾರೆ.ಪ್ರಾದೇಶಿಕ ವ್ಯತ್ಯಾಸಗಳು ಅವರ ಜನನದ ಕ್ರಮವನ್ನು ನಿರ್ದೇಶಿಸುತ್ತವೆ. ಉತ್ತರ ಭಾರತದಲ್ಲಿ, ಸ್ಕಂದನನ್ನು ಸಾಮಾನ್ಯವಾಗಿ ಹಿರಿಯ ಎಂದು ಹೇಳಲಾಗುತ್ತದೆ, ಆದರೆ ದಕ್ಷಿಣದಲ್ಲಿ, ವಿದ್ಯಾ ಗಣಪತಿಯನ್ನು ಮೊದಲ ಮಗು ಎಂದು ಪರಿಗಣಿಸಲಾಗುತ್ತದೆ. ಉತ್ತರ ಭಾರತದಲ್ಲಿ , ಸ್ಕಂದನು ಸುಮಾರು 500 BCE ನಿಂದ ಸುಮಾರು 600 CE ವರೆಗೆ ಪ್ರಮುಖ ಸಮರ ದೇವತೆಯಾಗಿದ್ದನು, ನಂತರ ಅವನ ಆರಾಧನೆಯು ಗಣನೀಯವಾಗಿ ಕುಸಿಯಿತು. ಸ್ಕಂದನು ಬೀಳುತ್ತಿದ್ದಂತೆ, ವಿದ್ಯಾ ಗಣಪತಿ ಮೇಲೆದ್ದನು. ಹಲವಾರು ಕಥೆಗಳು ಸಹೋದರರ ನಡುವಿನ ಒಡಹುಟ್ಟಿದ ಪೈಪೋಟಿಯನ್ನು ಹೇಳುತ್ತವೆ ಮತ್ತು ಪಂಥೀಯ ಉದ್ವಿಗ್ನತೆಯನ್ನು ಪ್ರತಿಬಿಂಬಿಸಬಹುದು.

ವಿದ್ಯಾ ಗಣಪತಿ ಸ್ಥಿತಿ, ಗಣನೀಯವಾದ ವಿದ್ವಾಂಸರ ವಿಮರ್ಶೆಯ ವಿಷಯ, ಪೌರಾಣಿಕ ಕಥೆಗಳಲ್ಲಿ ವ್ಯಾಪಕವಾಗಿ ಬದಲಾಗುತ್ತದೆ. ಪುರಾಣಗಳ ಒಂದು ಮಾದರಿಯು ಗಣೇಶನನ್ನು ಅವಿವಾಹಿತ ಬ್ರಹ್ಮಚಾರಿ ಎಂದು ಗುರುತಿಸುತ್ತದೆ . ಈ ದೃಷ್ಟಿಕೋನವು ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಭಾಗಗಳಲ್ಲಿ ಸಾಮಾನ್ಯವಾಗಿದೆ. ಮತ್ತೊಂದು ಮಾದರಿಯು ವಿದ್ಯಾ ಗಣಪತಿಯನ್ನು ಸಂಸ್ಕೃತಿ ಮತ್ತು ಕಲೆಗಳ ದೇವತೆಯಾದ ಸರಸ್ವತಿ ಅಥವಾ ಸಾರ್ದಾ (ವಿಶೇಷವಾಗಿ ಮಹಾರಾಷ್ಟ್ರದಲ್ಲಿ ) ಸಂಪರ್ಕಿಸುತ್ತದೆ. ಮತ್ತೊಂದು ಜನಪ್ರಿಯವಾಗಿ-ಸ್ವೀಕರಿಸಲ್ಪಟ್ಟ ಮುಖ್ಯವಾಹಿನಿಯ ಮಾದರಿಯು ಅವನನ್ನು ಬುದ್ಧಿ (ಬುದ್ಧಿಶಕ್ತಿ), ಸಿದ್ಧಿ (ಆಧ್ಯಾತ್ಮಿಕ ಶಕ್ತಿ) ಮತ್ತು ರಿದ್ಧಿ (ಸಮೃದ್ಧಿ)ಪರಿಕಲ್ಪನೆಗಳೊಂದಿಗೆ ಸಂಯೋಜಿಸುತ್ತದೆಈ ಗುಣಗಳನ್ನು ದೇವತೆಗಳಾಗಿ ನಿರೂಪಿಸಲಾಗಿದೆ, ವಿದ್ಯಾ ಗಣಪತಿ ಯ ಹೆಂಡತಿಯರು ಎಂದು ಹೇಳಲಾಗುತ್ತದೆ. ಆತನನ್ನು ಒಬ್ಬನೇ ಪತ್ನಿ ಅಥವಾ ಹೆಸರಿಲ್ಲದ ಸೇವಕನೊಂದಿಗೆ ತೋರಿಸಬಹುದು (ಸಂಸ್ಕೃತ: daşi ). ಸಂಪರ್ಕಿಸುತ್ತದೆ. ಅವರು ಅದೃಷ್ಟ ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿಯೊಂದಿಗೆ ಸಹ ಸಂಬಂಧ ಹೊಂದಿದ್ದಾರೆ . ಮತ್ತೊಂದು ಮಾದರಿಯು ಮುಖ್ಯವಾಗಿ ಬಂಗಾಳ ಪ್ರದೇಶದಲ್ಲಿ ಪ್ರಚಲಿತದಲ್ಲಿದೆ, ವಿದ್ಯಾ ಗಣಪತಿಯನ್ನು ಬಾಳೆ ಮರದೊಂದಿಗೆ ಸಂಪರ್ಕಿಸುತ್ತದೆ, ಕಾಲ ಬೋ .

ಶಿವಪುರಾಣವು ವಿದ್ಯಾ ಗಣಪತಿ ಗೆ ಇಬ್ಬರು ಗಂಡು ಮಕ್ಕಳನ್ನು ಪಡೆದನೆಂದು ಹೇಳುತ್ತದೆ: ಕೇಮ ( ಸುರಕ್ಷತೆ ) ಮತ್ತು ಲಾಭ (ಲಾಭ). ಈ ಕಥೆಯ ಉತ್ತರ ಭಾರತದ ರೂಪಾಂತರಗಳಲ್ಲಿ, ಪುತ್ರರನ್ನು ಸಾಮಾನ್ಯವಾಗಿ ಶುಭ ( ಶುಭ ) ಮತ್ತು ಲಾಭ ಎಂದು ಹೇಳಲಾಗುತ್ತದೆ. .1975 ರ ಹಿಂದಿ ಚಲನಚಿತ್ರ ಜೈ ಸಂತೋಷಿ ಮಾ ಗಣೇಶನು ರಿದ್ಧಿ ಮತ್ತು ಸಿದ್ಧಿಯನ್ನು ವಿವಾಹವಾದರು ಮತ್ತು ತೃಪ್ತಿಯ ದೇವತೆಯಾದ ಸಂತೋಷಿ ಮಾ ಎಂಬ ಮಗಳನ್ನು ಹೊಂದಿರುವುದನ್ನು ತೋರಿಸುತ್ತದೆ. ಈ ಕಥೆಯು 2409:4071:221B:8F9D:292C:ACBA:969B:EEC7 ೦೯:೦೯, ೪ ಜನವರಿ ೨೦೨೩ (IST)Reply

ಗಣಪತಿ ಜನ್ಮ

[ಬದಲಾಯಿಸಿ]
  • ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರಜ ಸ್ಥಾನ ಪಡೆದಿರುವ ವಿಘ್ನ ವಿನಾಯಕನಿಗೆ ಮೊದಲ ಪೂಜೆ ಸಲ್ಲುತ್ತದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.
*ಶಿವಪುರಾಣದಲ್ಲಿ ಗಣೇಶನ ಜನ್ಮ ರಹಸ್ಯ* 

ಕೈಲಾಸದಲ್ಲಿ ಪಾರ್ವತಿದೇವಿಯು ತನ್ನ ಸಖಿಯರ ಜೊತೆಯಲ್ಲಿರುವಾಗ ಅಲ್ಲಿಗೆ ಪರಶಿವನ ಆಗಮನವಾಗುತ್ತೆ. ದ್ವಾರವನ್ನು ಕಾಯಲು ಗಣವೊಂದು ಇಟ್ಟಿದ್ದರೂ ಕೂಡ ಈ ರೀತಿ ತನ್ನ ಪತಿಯೇ ಆಗಲಿ ಅನಪೇಕ್ಷಿತವಾಗಿ ಒಳಗೆ ಬಂದದ್ದು ಪಾರ್ವತಿಗೆ ಸ್ವಲ್ಪ ಅಸಮಧಾನವನ್ನು ಉಂಟುಮಾಡಿತು. ಇದಕ್ಕಾಗಿ ಪಾರ್ವತಿ ಒಂದು ನಿರ್ಣಯಕ್ಕೆ ಬರುತ್ತಾಳೆ. ಸ್ನಾನಕ್ಕಾಗಿ ಹೋಗುವ ಮೊದಲು ತನ್ನ ಮೈಯಲ್ಲಿರುವ ಮಣ್ಣಿನಿಂದ ಮುದ್ದಾದ ಒಂಗು ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬಿದಳು. ಅವನ ಕೈಯಲ್ಲಿ ದಂಡವೊಂದನ್ನು ಕೊಟ್ಟು ಸ್ನಾನಗ್ರಹದ ಬಾಗಿಲು ಕಾಯಲು ನೇಮಿಸಿದಳು. ನಂತರ ಯಥಾವತ್ತಾಗಿ ಅಪೇಕ್ಷಿತವೆಂಬಂತೆ ಕೈಲಾಸಪತಿಯ ಆಗಮನವಾಗುತ್ತೆ. ಈ ಪುಟ್ಟ ದ್ವಾರಪಾಲಕ ತನ್ನ ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ ಒಳಗೆ ಪ್ರವೇಶಿಸದಂತೆ ನಿರ್ಭಂಧಿಸುತ್ತಾನೆ. ಇದೇನು, ಈ ಹುಡುಗ, ಯವನೋ ಹೊಸಬ, ನನ್ನನ್ನು ತಡೆಯುತ್ತಿರುವನಲ್ಲ ಎಂದು ಕೋಪಿಸಿಗೊಂಡ ರುದ್ರ ಯಾರು ನೀನು? ಎಂದು ಅವನ ಕುರಿತು ಕೇಳುತ್ತಾನೆ.

ನಾನು ಪಾರ್ವತಿಯ ಮಗ, ಅವಳ ಸೇವಕ, ತಾಯಿಯ ಆಜ್ಞೆ ಮೇರೆಗೆ ಯಾರನ್ನು ಒಳ ಹೋಗಲು ಬಿಡಲು ಸಾಧ್ಯವಿಲ್ಲ. ಆದ್ದರಿಂದ ನಿನ್ನನ್ನು ಒಳಹೋಗಲು ಬಿಡುವುದಿಲ್ಲ ಎಂದು ಬಾಲಕ ಶಿವನಿಗೆ ಹೇಳುತ್ತಾನೆ. ಇದನ್ನು ಕೇಳಿ ರುದ್ರಗಣಗಳು ಸಿಟ್ಟಿನಿಂದ ಅವನ ಮೇಳೆ ಮುಗಿಬೀಳಲು, ಒಬ್ಬೊಬ್ಬರನ್ನು ಥಳಿಸಿ ತನ್ನ ಪರಾಕ್ರಮವನ್ನು ತೋರುತ್ತಾನೆ. ಇದೆಲ್ಲವನ್ನು ನೋಡುತ್ತಿದ್ದ ಶಿವ ತನ್ನ ಗಣಗಳ ಸೋಲು ಮತ್ತು ಈ ಹುಡುಗನ ಉದ್ಧಟತನದಿಂದ ಕ್ರೋಧಿತನಾಗಿ ತನ್ನ ಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ.

ತನ್ನ ಪತಿಯ ಈ ಕೃತ್ಯವನ್ನು ನೋಡಿದ ಪಾರ್ವತಿಯು ಪುತ್ರನ ಮರಣದಿಂದ ಶೋಕಿತಳಾಗಿ ರೋಧಿಸಲಾರಂಭಿಸಿದಳು. ಗೌರಿಯು ಕ್ಷಣಾರ್ಧದಲ್ಲಿ ದುರ್ಗೆಯಾಗಿ ಅನೇಕ ಮಹಾಶಕ್ತಿಗಳನ್ನು ಸೃಷ್ಟಿಸಿ ರುದ್ರಗಣಗಳ ಮೇಲೆ ಬಿಡುತ್ತಾಳೆ. ಇದರಿಂದ ಗಾಬರಿಗೊಂಡ ಗಣಗಳು ಶಿವನನ್ನು ಶರಣು ಬಂದು ಪ್ರಾರ್ಥಿಸುತ್ತಾರೆ. ಪಾರ್ವತಿಯನ್ನು ಸಮಾಧಾನ ಪಡಿಸಲು ಶಿವನು ಬಾಲಕನನ್ನು ಬದುಕಿಸುವದಾಗಿ ಹೇಳಿ, ತನ್ನ ಭಟರಿಗೆ ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸಿದನು. ಅಂತೆ ಉತ್ತರಕ್ಕೆ ತಲೆ ಹಾಕಿ ಮಲಗಿದ್ದ ಆನೆಯನ್ನು ಶಿರವನ್ನು ಕತ್ತರಿಸಿಕೊಂಡು ತರುತ್ತಾರೆ. ಶಂಕರನು ಆ ಬಾಲಕನ ಮುಂಡಕ್ಕೆ ಆನೆಯ ತಲೆಯನ್ನು ಸರಿಯಾಗಿ ಜೋಡಿಸಿ, ಅವನನ್ನು ಪುನಃ ಬದುಕಿಸಿದನು. ಉಮೆಯು ಬಂದು ಆ ಬಾಲಕನನ್ನು ಮುದ್ದಿಸಿ ತನ್ನ ಮಗನಾದ ಗಜಮುಖನಿಗೆ ವರಗಳನ್ನು ದಯಪಾಲಿಸುವಂತೆ ಮಹೇಶ್ವರನನ್ನು ಕೇಳಿಕೊಂಡಳು. ಇಂದಿನಿಂದ ನೀನು ನನ್ನ ಕಿರಿಯ ಮಗನೆಂದೂ, ಸರ್ವಕಾರ್ಯಗಳಲ್ಲಿ ನೀನೆ ಪ್ರಥಮಪೂಜಿತನಾಗೆಂದೂ, ಸಕಲ ರುದ್ರಗಣಗಳ ಅಧಿಪತಿಯಾಗು ಎಂದು ಹರ ಹರಸಿದನು. ಹೀಗೆ ಪಶುಪತಿಯ ಮಗ ಗಣಪತಿಯು ಜಗತ್ಪ್ರಸಿದ್ಧನಾದನು. ಲಿಂಗಪುರಾಣದಲ್ಲೂ ಗಣೇಶ ನ ಜನ್ಮರಹಸ್ಯ ಒಮ್ಮೆ ದೇವಾನು ದೇವತೆಗಳಿಗೆ ದೈತ್ಯರು ಮಾಡುವ ಉಪಟಳದಿಂದ ಬಹಳ ತೊಂದರೆಯಾಗುತ್ತದೆ. ದೇವತೆಗಳ ಪರ ಪ್ರತಿನಿಧಿಯಾಗಿ ದೇವಗುರು ಬ್ರಹಸ್ಪತಿಯು ಪರಶಿವನಲ್ಲಿ ದೇವತೆಗಳಿಗೆ ಎದುರಾದ ಸಮಸ್ಯೆಗಳನ್ನು ತೊಡಿಕೊಳ್ಳುತ್ತಾನೆ. ಹೇ ಪ್ರಭೋ ದೇವದೇವೋತ್ತಮೆನೇ ! ದೇವಶತ್ರುಗಳಾದ ಅಸುರರು ದೈತ್ಯರು ನಿನ್ನ ಕಠಿಣ ಉಪಾಸನೆಮಾಡಿ, ನಿನ್ನನ್ನು ಸಂತುಷ್ಟನನ್ನಾಗಿಸಿಕೊಂಡು ತಮಗೆ ಬೇಕಾದ ವರಗಳನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಮಹಾ ಬಲಿಷ್ಟರಾಗಿ ಅವರು ನಮಗೆ ಮತ್ತು ಇತರ ಜೀವಸಮುದಾಯಕ್ಕೆ ಬಹಳ ಕಷ್ಟಗಳನ್ನು ಕೊಡುತ್ತಾರೆ. ಅವರು ಮಾಡುವ ಸಾಧನೆಗಳು ನಿನ್ನ ಸಂತೋಷಕ್ಕಾಗಿಯೇ ಆಗಿದ್ದರೂ ಉದ್ದೇಶ ಮಾತ್ರ ದೇವತೆಗಳಿಗೆ ಕೆಡುಕು ಮಾಡುವುದೇ ಆಗಿರುತ್ತದೆ. ಆದ್ದರಿಂದ ಹೇ ಶಂಭುವೇ ಅವರ ಎಲ್ಲ ಕಾರ್ಯಗಳಲ್ಲಿ ನಿರಂತರ ವಿಘ್ನಗಳು ಬರುವಂತಾಗಲಿ, ಇದರಿಂದ ಅವರು ನಿನ್ನನ್ನು ಮತ್ತು ಬ್ರಹ್ಮದೇವನನ್ನು ಒಲಿಸಿಕೊಳ್ಳದಿರುವಂತಾಗಲಿ, ಎಂದು ಬೇಡಿಕೊಂಡರು.

ದೇವತೆಗಳ ಆರ್ತ ಪ್ರಾರ್ಥನೆಯನ್ನು ಕೇಳಿ ಪರಶಿವನು ಅಸ್ತು ಎಂದು ಆಶ್ವಾಸನೆಯನ್ನು ಕೊಟ್ಟನು. ಇದಾದ ನಂತರೆ ಕೆಲವೇ ಸಮಯಾಂತರದಲ್ಲಿ ಶಿವ ಮತ್ತು ಪಾರ್ವತಿಯರು ಕೂಡಿ ಒಂದು ಮಹಾಶಕ್ತಿಯನ್ನು ಸೃಜಿಸಿದರು. ಅವನು ಹುಟ್ಟುವಾಗಲೇ ಆನೆಯ ಮುಖವನ್ನು ಹೊಂದಿದ್ದನು. ಮಹಾತೇಜಸ್ವಿಯಾದ ಆ ಬಾಲಕನ ಕೈಯಲ್ಲಿ ತ್ರಿಶೂಲ ಮತ್ತು ಪಾಶಗಳು ಇದ್ದವು. ಗಜಮುಖನ ಪ್ರಾದುರ್ಭಾವ ಮಾತ್ರದಿಂದಲೇ ಸಕಲ ದೇವತೆಗಳಿಗೆ ಮಂಗಳವುಂಟಾಯಿತು. ಪರಶಿವನು ಇತ್ತ ವರವು ಇದೇ ಸ್ವರೂಪವೆಂದು ಅರಿತ ದೇವತೆಗಳು ವಿಘ್ನರಾಜನ ಸ್ತೋತ್ರವನ್ನು ಮಾಡಿದರು. ಸಕಲ ದೇವತೆಗಳ ಸಂತೋಷಕ್ಕಾಗಿ ಗಣಪತಿ ಭವ್ಯವಾಗಿ ನರ್ತನವನ್ನು ಮಾಡಿದನು. ಸಮಸ್ತ ಜಗತ್ತನ್ನೆಲ್ಲಾ ಸಂಹಾರ ಮಾಡುವ ತಾಂಡವವನ್ನಾಡುವ ಪರಶಿವನ ಪುತ್ರನೇ ಆದ ಗಣಪತಿ ವಿಘ್ನರೂಪಿಯಾದ ನಾಶವನ್ನು ಮಾಡುವುದೇ ಆ ಭವ್ಯ ನರ್ತನ.

ಹೀಗೆ ತಂದೆಯಾದ ಶಿವನಿಂದ ಆಶಿರ್ವದಿಸಲ್ಪಟ್ಟ ಗಣೇಶನು ವಿಶೇಷವಾಗಿ ಬಲಿಷ್ಟರಾದ ವಿಘ್ನಗಣಗಳನ್ನು (ವಿನಾಯಕಗಣಗಳು) ಸೃಷ್ಟಿಸಿದನು. ಈ ಗಣಗಳು ಯಾವಾಗಲೂ ಎಲ್ಲಾ ಲೋಕಗಳಲ್ಲಿ ಸಂಚರಿಸುತ್ತಾ ಸತ್ಕಾರ್ಯಗಳಿಗೆ ಅನುಕೂಲವನ್ನು ಮಾಡುತ್ತಾ ಕೆಟ್ಟವರಿಗೆ ವಿಘ್ನಗಳನ್ನು ಮಾಡುತ್ತಾ ಇರುತ್ತಾರೆ. ಯಾರು ಗಣಪತಿಯ ಪೂಜೆ ಸ್ಮರಣೆಯನ್ನು ನಿರಂತರ ಮಾಡುವರೋ ಅವರ ಎಲ್ಲ ವಿಘ್ನಗಳನ್ನು ಆ ವಿಘ್ನೇಶ್ವರನ ಆದೇಶದಂತೆ ನಿವಾರಿಸುತ್ತಾರೆ. ಧರ್ಮಶಾಸ್ತ್ರ, ಕಲ್ಪಶಾಸ್ತ್ರ ಗ್ರಂಥಗಳಲ್ಲಿ ಈ ವಿನಾಯಕರನ್ನು ಕುರಿತಾದ ಶಾಂತಿಕರ್ಮಗಳ ವರ್ಣನೆ ಬರುತ್ತದೆ. ಎಲ್ಲ ಧಾರ್ಮಿಕ ಮತ್ತು ಲೌಕಿಕ ಕಾರ್ಯಗಳ ಮೊದಲು ಈ ವಿನಾಯಕ ಕಲ್ಪದ ಅನುಷ್ಠಾನ ವಿಧಿತವಾಗಿದೆ.

*ಲಿಂಗ ಪುರಾಣದ ಪ್ರಕಾರ* ಗಣಪತಿಯು ಪ್ರಕಟವಾಗುವಾಗಲೇ ಗಜಮುಖವನ್ನು ಹೊಂದಿರುತ್ತಾನೆ. ಇದು ಸಹ ಕಲ್ಪಾಂತರದ ಕಥೆಯಾದ್ದರಿಂದ ಯಾವುದೇ ವಿರೋಧವಿಲ್ಲ* Manjubhatassistantpriests (ಚರ್ಚೆ) ೦೮:೩೯, ೫ ಜನವರಿ ೨೦೨೩ (IST)Reply