ಶಂಕರ್ ಮೊಕಾಶಿ ಪುಣೇಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಂಕರ_ಮೊಕಾಶಿ_ಪುಣೇಕರ ಈ ಲೇಖನದೊಂದಿಗೆ ವಿಲೀನ

ಶಂಕರ್ ಮೊಕಾಶಿ ಪುಣೇಕರ್
ಚಿತ್ರ[[File:|200px]]
ಜನನದ ದಿನಾಂಕ೮ ಮೇ 1928
ಸಾವಿನ ದಿನಾಂಕ೧೧ ಆಗಸ್ಟ್ 2004
ವೃತ್ತಿಲೇಖಕ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಿಂಗಪುರುಷ

ಶಂಕರ ಮೊಕಾಶಿ ಪುಣೇಕರ್ - ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ. ಆಂಗ್ಲ ಪ್ರಾಧ್ಯಾಪಕರೂ, ಸಂಸ್ಕೃತ ವಿಧ್ವಾಂಸರೂ , ಕನ್ನಡ ಲೇಖಕರೂ ಆದ ಪುಣೇಕರ್ ಅವರು ಇಂಗ್ಲಿಷ್ ನಲ್ಲಿ ೨೦ ಕೃತಿಗಳನ್ನು ಬರೆದಿರುವರು. ಕನ್ನಡದ ಮಟ್ಟಿಗೆ ಅವರು ಹೆಸರಾಗಿರುವುದು ವಿಮರ್ಶೆ ಮತ್ತು ಕಾದಂಬರಿಗಳಿಂದ. "ಗಂಗವ್ವ ಗಂಗಾಮಾಯಿ" (೧೯೫೬), "ನಟನಾರಾಯಣಿ" (೧೯೮೨), "ಅವಧೇಶ್ವರಿ" (೧೯೮೭)-ಇವು ಇವರ ಕಾದಂಬರಿಗಳು. "ಅವಧೇಶ್ವರಿ" ಎಂಬ ಕೃತಿಗೆ ೧೯೮೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದರೆ ಅವರ ಪ್ರತಿಭೆಯ ನಿಜವಾದ ಗುರುತು "ಗಂಗವ್ವ ಗಂಗಾಮಾಯಿ"ಯಿಂದಲೇ. ಪುಣೇಕರರು ಸಂಸ್ಕೃತ ವಿದ್ವಾಂಸರಾದ ಕಾರಣ ಅವರ ಕೃತಿಗಳಲ್ಲಿ ಸಂಸ್ಕೃತ ಉಲ್ಲೇಖಗಳು ಬಹಳವಾಗಿ ಕಂಡುಬರುತ್ತದೆ.ಇವರ "ಗಂಗವ್ವ ಗಂಗಾಮಾಯಿ" ಚಲನಚಿತ್ರವಾಗಿ ರಾಜ್ಯ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.[೧]



ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಕನ್ನಡಸಾಹಿತ್ಯ.ಕಾಮ್‍ನಲ್ಲಿ ಅವಧೇಶ್ವರಿ Archived 2007-03-11 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು[ಬದಲಾಯಿಸಿ]