ವಿ. ಎಮ್. ಇನಾಮದಾರ
(ವಿ.ಎಮ್.ಇನಾಮದಾರ ಇಂದ ಪುನರ್ನಿರ್ದೇಶಿತ)
ವೆಂಕಟೇಶ ಮಧ್ವರಾವ ಇನಾಮದಾರ ಇವರು ೧೯೧೩ ಅಕ್ಟೋಬರ ೧ರಂದು ಬೆಳಗಾವಿ ಜಿಲ್ಲೆಯ ಹುದಲಿಯಲ್ಲಿ ಜನಿಸಿದರು. ಎಂ.ಎ. ಪದವಿ ಪಡೆದ ಬಳಿಕ ಕೆಲ ಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿ, ಪ್ರಾಧ್ಯಾಪಕ ವೃತ್ತಿ ಕೈಗೊಂಡರು.[೧]
ಕೃತಿಗಳು[ಬದಲಾಯಿಸಿ]
ಕಾದಂಬರಿಗಳು[ಬದಲಾಯಿಸಿ]
- ಕನಸಿನ ಮನೆ
- ಕಟ್ಟಿದ ಮನೆ
- ಮಂಜು ಮುಸುಕಿದ ದಾರಿ
- ಮುಗಿಯದ ಕಥೆ
- ಈ ಪರಿಯ ಸೊಬಗು
- ವಿಷ ಬೆಳಸು
- ಮೂರಾಬಟ್ಟೆ
- ಶಾಪ
- ನವಿಲು ನೌಕೆ
- ಬಿಡುಗಡೆ
ಅನುವಾದ[ಬದಲಾಯಿಸಿ]
- ಎರಡು ಧ್ರುವ (ಮೂಲ ಮರಾಠಿ: ವ್ಹಿ.ಎಸ್. ಖಾಂಡೇಕರ)
- ಯಯಾತಿ (ಮೂಲ ಮರಾಠಿ: ವ್ಹಿ.ಎಸ್.ಖಾಂಡೇಕರ)
('ಯಯಾತಿ'ಕಾದಂಬರಿಗಾಗಿ ವ್ಹಿ.ಎಸ್.ಖಾಂಡೇಕರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.)
ಇತರ[ಬದಲಾಯಿಸಿ]
- ಪಾಶ್ಚಾತ್ಯ ಕಾವ್ಯಮೀಮಾಂಸೆ
- ಕಾಳಿದಾಸನ ಕಥಾ ನಾಟಕಗಳು
ಪುರಸ್ಕಾರ[ಬದಲಾಯಿಸಿ]
೧೯೭೭ರಲ್ಲಿ ವಿ.ಎಂ.ಇನಾಮದಾರರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ನೀಡಲಾಯಿತು.
ನಿಧನ[ಬದಲಾಯಿಸಿ]
ವಿ.ಎಂ.ಇನಾಮದಾರರು ೧೯೮೬ ಜನೆವರಿ ೨೬ರಂದು ನಿಧನರಾದರು.
ಇನಾಮದಾರ ಪ್ರಶಸ್ತಿ[ಬದಲಾಯಿಸಿ]
ಇನಾಮದಾರರ ನಿಧನದ ನಂತರ ಸಾಹಿತ್ಯಕ್ಷೇತ್ರದಲ್ಲಿ "ವಿ.ಎಂ.ಇನಾಮದಾರ ಪ್ರಶಸ್ತಿ"ಯನ್ನು ವಾರ್ಷಿಕವಾಗಿ ನೀಡಲಾಗಿತ್ತಿದೆ.
ಚಲನಚಿತ್ರ[ಬದಲಾಯಿಸಿ]
ಇವರ "ಶಾಪ" ಕಾದಂಬರಿಯನ್ನು ಆಧರಿಸಿ "ಮುಕ್ತಿ" ಎನ್ನುವ ಚಲನಚಿತ್ರವನ್ನು ತೆಗೆಯಲಾಗಿತ್ತು. ಈ ಚಲನಚಿತ್ರದಲ್ಲಿ ಕಲ್ಪನಾ ಇವರು ನಾಯಕಿಯಾಗಿದ್ದರು.
ಉಲ್ಲೇಖಗಳು[ಬದಲಾಯಿಸಿ]
- ↑ "Sahitya Akademi to celebrate birth centenary of Inamdar". www.thehindu.com. Retrieved 15 May 2017.