ಕರ್ಮ ಸಿದ್ಧಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೭೩ ನೇ ಸಾಲು: ೭೩ ನೇ ಸಾಲು:
[[ಸದಸ್ಯ:Bschandrasgr/ಪರಿಚಯ|ಗೀತೆ]].
[[ಸದಸ್ಯ:Bschandrasgr/ಪರಿಚಯ|ಗೀತೆ]].
== ಉಲ್ಲೇಖ ==
== ಉಲ್ಲೇಖ ==
*[[ವರ್ಗ:ಹಿಂದೂ ಧರ್ಮ]] [[ವರ್ಗ:ತತ್ವಶಾಸ್ತ್ರ]]
[[ವರ್ಗ:ಹಿಂದೂ ಧರ್ಮ]] [[ವರ್ಗ:ತತ್ವಶಾಸ್ತ್ರ]]

೨೨:೧೪, ೧೪ ಅಕ್ಟೋಬರ್ ೨೦೧೮ ನಂತೆ ಪರಿಷ್ಕರಣೆ

ಪೀಠಿಕೆ

ಭಾರತೀಯ ದರ್ಶನಗಳಲ್ಲಿ ಕರ್ಮ ಅಥವಾ ಕರ್ಮ ಸಿದ್ಧಾಂತ ಚರ್ವಾಕರನ್ನು ಹೊರತು ಪಡಿಸಿ ಎಲ್ಲಾ ದಾರ್ಶನಿಕರೂ ಒಪ್ಪಿರುವ ತತ್ವ . ಇದು ಸಾಮಾನ್ಯ ಜನರ ಜೀವನದಲ್ಲಿಯೂ ಸಾಸು ಹೊಕ್ಕಾಗಿದೆ .
ಕರ್ಮವೆಂದರೆ ಕೆಲಸ, ಕ್ರಿಯೆ , ಎಂದು ಸರಳ ಅರ್ಥ . ಯಾವುದೇ ಕರ್ಮಕ್ಕೂ ಫಲವಿದೆ ; ಸತ್ಕರ್ಮಕ್ಕೆ - ಸತ್ಫಲ ; ದುಷ್ಕರ್ಮಕ್ಕೆ ದುಷ್ಫಲ . (ಇದು ಕಾರ್ಯ-ಕಾರಣ ಸಂಬಂಧದ ನಿಯಮದ ಆಧಾರ ).ಈ ನಿಯಮ ತರ್ಕ ಮೀರಿದ ಎಲ್ಲರೂ ಒಪ್ಪಿರುವ ಒದು ಪ್ರಮುಖ ತತ್ವ .
ಈ ತತ್ವದ ಆಧಾರದ ಮೇಲೆಯೇ ಎಲ್ಲಾ ದರ್ಶಗಳೂ ನಿಂತಿವೆ . ಈ ನಿಯಮವು ಧರ್ಮಪ್ರವೃತ್ತಿಗೆ ಆಧಾರವಾಗಿದೆ. ಇಲ್ಲದಿದ್ದರೆ ಮಾನವನು ಒಳ್ಳೆಯ ಕೆಲಸದಲ್ಲಿ ತೊಡಗಲು , ಧರ್ಮಮಾರ್ಗಗಲ್ಲಿ ತೊಡಗಲು ಪ್ರೇರಪಣೆಯೇ ಇಲ್ಲ. ಆದ್ದರಿಂದ ಒಬ್ಬನ ಪ್ರಗತಿಗೆ - ಅವನತಿಗೆ ಅವನವನ ಕರ್ಮವೇ ಕಾರಣ ಎಂಬುದು ಗಟ್ಟಿ ನಂಬುಗೆ. ದರ್ಶನಗಳ ಸಿದ್ಧಾಂತ  ;
ಕರ್ಮಗಳಿಂದಲೇ ಜನ್ಮ -ಪುನರ್ ಜನ್ಮ ಎಂಬ ಗಟ್ಟಿ ವಿಶ್ವಾಸ ನಂಬುಗೆ ಇದೆ.
ತತ್ತ್ವಶಾಸ್ತ್ರ -ಅದರಲ್ಲೂ ಭಾರತೀಯ ತತ್ತ್ವ ಶಾಸ್ತ್ರ ವು ಕಾರ್ಯ-ಕಾರಣ ಸಿದ್ಧಾಂತ ಮತ್ತು ಕರ್ಮ-ಕರ್ಮಫಲ ಸಿದ್ದಾಂತದ ಮೇಲೆ ನಿಂತಿದೆ.
;ಜಗತ್ತಿಗೆ ಕಾರಣವಾದ ಮೂಲ ಚೈತನ್ಯ-ದೇವರು ಅಥವಾ ಬ್ರಹ್ಮ ಇದೆ ಎನ್ನಲು ಈ ಕಾರ್ಯ ಕಾರಣಸಿದ್ಧಾಂತ ಮುಖ್ಯ -ಇದನ್ನು ಒಪ್ಪದ ಚರ್ವಾಕರು/ ನಾಸ್ತಿಕರು/ಲೋಕಾಯತರು ದೇವನಿಲ್ಲವೆಂದು ಹೇಳುತ್ತಾರೆ.:- ಕಾರಣವು ಮೂರು ವಿಧ - ಸಮವಾಯು, ಅಸಮವಾಯು,ಮತ್ತು ನಿಮಿತ್ತ.
೧. ಕಾರ್ಯದ ಉತ್ಪತ್ತಿಗೆ ಕಾರಣವಾದ ದ್ರವ್ಯವನ್ನು ಸಮವಾಯು, ಅಥವಾ ಉಪಾದಾನ ಕಾರಣ ಎನ್ನುತ್ತಾರೆ.

ಉದಾರಣೆ : ಮಡಕೆ -ಮಣ್ಣು (ಮಡಕೆಗೆ ಮಣ್ಣು ಉಪಾದಾನ ಕಾರಣ).

೨. ಕಾರ್ಯ ಅಥವಾ ಕಾರಣದೊಡನೆ ಒಂದು ವಸ್ತುವಿನ ಅಸಮವಾಯು ಸಂಬಂಧ ವಿರುವಾಗ ಉಂಟಾಗುವ ಕಾರ್ಯವನ್ನು ಅಸಮವಾಯು ಎನ್ನುತ್ತಾರೆ,

ಉದಾ : ದಾರಗಳ ಸಂಯೋಗವು ಬಟ್ಟೆಗೆ ಅಸಮವಾಯು ಕಾರಣ - ದಾರಗಳಿಗೂ ಅವುಗಳ ಸಂಯೋಗಕ್ಕೂ ಸಮವಾಯು ಸಂಬಂಧ. ನೂಲಿನ ರೂಪವು ಬಟ್ಟೆಗಳ ರೂಪಕ್ಕೆ ಅಸಮವಾಯು ಕಾರಣ. ಗುಣ ಮತ್ತು ಕ್ರಿಯೆಗಳು ಅಸಮವಾಯುಗಳಾಗಿರುತ್ತವೆ. ನೈಯಾಯಿಕರು (ನ್ಯಾಯ ದರ್ಶನದ ಅನಯಾಯಿಗಳು) ಮಾತ್ರಾ ಈ ಸಂಬಂಧ ಹೇಳುತ್ತಾರೆ.

೩. ಸಮವಾಯು ಮತ್ತು ಅಸಮವಾಯು ಕಾರಣಗಳಿಗಿಂತ ಬೇರೆಯಾದುದು . ನಿಮಿತ್ತ ಕಾರಣ.

ಉದಾಹರಣೆ ಮಡಕೆ ಮಾಡಲು ಕುಂಬಾರ ಬೇಕು ; ಇಲ್ಲಿ ಕುಂಬಾರ ನಿಮಿತ್ತ ಕಾರಣ. (ಇದಕ್ಕೆ ಸಂಪ್ರದಾನ ಕಾರಣವೆಂದೂ ಹೇಳುವರು).

ಭವಚಕ್ರ

ಕರ್ಮದ ಬಗೆ
ಕರ್ಮಸಿದ್ಧಾಂತದ ಪ್ರಕಾರ ಕರ್ಮದಲ್ಲಿ ಮೂರು ಬಗೆ.
ಸಂಚಿತ ;ಪ್ರಾರಬ್ದ ; ಮತ್ತು ಆಗಾಮಿ
೧. ಸಂಚಿತ ಕರ್ಮವೆಂದರೆ ಹಿಂದಿನಿಂದ - ಪೂರ್ವಜನ್ಮಗಳಲ್ಲಿ ಸಂಗ್ರಹವಾದ ಕರ್ಮಗಳ ಮೊತ್ತ.
೨. ಪ್ರಾರಭ್ಧವೆಂದರೆ ಆ ಕರ್ಮಗಳು (ಸಂಚಿತ) ಫಲ ಕೊಡಲು ಆರಂಭವಾದದ್ದು ; ಈಜನ್ಮದಲ್ಲಿ ಅನುಭವಿಸುತ್ತಿರುವುದು ; ಸುಖ-ದುಃಖಗಳು ; ರೋಗ -ನಿರೋಗ ; ಪದವಿ, ಐಶ್ವರ್ಯ- ದಾರಿದ್ರ್ಯ ಇತ್ಯಾದಿ .
೩. ಆಗಾಮೀ ಎಂದರೆ ಉಳಿದಿದ್ದು  ; ಮುಂದೆ ಅನುಭವಿಬೇಕಾದ ಕರ್ಮಫಲ ; ಹಿಂದಿನ ಜನ್ಮ ಮತ್ತು ಈ ಜನ್ಮಗಳಲ್ಲಿ ಅನುಭವಿಸಿ ಉಳಿದ ಕರ್ಮಫಲದ ಮೊತ್ತ ; ಅದು ಪ್ರತಿ ಜೀವವನ್ನೂ ಬಿಡದೆ ಹಿಂಬಾಲಿಸುತ್ತದೆ.
ಇದು ಸತತ ನಡೆಯುತ್ತಿರುವುದರಿಂದ , ಜನ್ಮ ಜನ್ಮಾಂತರಳಲ್ಲಿ ಮುಂದುವರೆಯುವದರಿಂದ ಇದನ್ನು ಭವಚಕ್ರ ಎಂದು ಕರೆಯಲಾಗಿದೆ. ಇದರೀಂದ ಬಿಡುಗಡೆಯಾದರೆ ಮೋಕ್ಷ.

ಕರ್ಮದ ಮೂಲ

ಕರ್ಮ ಮತ್ತು ದೇವರು (ಈಶ್ವರ)

ಕರ್ಮಕ್ಕೂ ದೇವರಿಗೂ ಏನು ಸಂಬಂಧ ? ಕರ್ಮಕ್ಕೆ ತಕ್ಕಫಲವೆಂದಾದರೆ , ದೇವರ ಅಗತ್ಯವಿಲ್ಲವೆಂದು ಕೆಲವು ದರ್ಶನಗಳು ಹೇಳುತ್ತವೆ(ಮೀಮಾಂಸ) . ಕರ್ಮಫಲವನ್ನು ಕೊಡಲು ಈಶ್ವರನು ಬೇಕೆಂದು ಕೆಲವರು ಹೇಳುತ್ತಾರೆ. ಇದ್ದರೂ ಅವನಿಗೆ (ದೇವನಿಗೆ ಕರ್ಮಫಲವನ್ನು ತೆಗೆದು ಹಾಕಲು ) ಸ್ವಾತಂತ್ರ್ಯವಿಲ್ಲವೆಂದೂ -ಜೀವರಿಗೆ ಅವರವರ ಕರ್ಮದಂತೆಯೇ ಅವರವರ ಜನ್ಮ ಕೊಡಬೇಕಾಗುವುದಲ್ಲಾ ?. ಕರ್ಮ ಜಡ (ಅಚೇತನ-ತಾರ್ಕಿಕವಾಗಿ) -ಅದನ್ನು ಪ್ರವರ್ತಿಸಲು (ದೇವರು) -ಚೇತನ ಬೇಕು . ಅದರಿಂದ ಬಿಡುಗಡೆ ಹೊಂದಲೂ ಅವನ ಅನುಗ್ರಹ ಬೇಕೆಂದು ಭಕ್ತಿಪಂಥ ಹೇಳುತ್ತದೆ. ಹಾಗೆ ಕೆಲವರಿಗೆ ಅನುಗ್ರಹ ಮಾಡಿದರೆ ದೇವನಿಗೆ ಪಕ್ಷಪಾತದ ಬರುವುದಲ್ಲಾ ? -ಎಂದು ಪ್ರತಿ ವಾದ .
ಕರ್ಮ ಫಲವನ್ನು ಅನುಭವಿಸಿಯೇ ತೀರಿಸಬೇಕೆಂದು ಒಂದು ವಾದ ; ಪುಣ್ಯದಿಂದ ಪಾಪ ಕರ್ಮ ಬಿಡುಗಡೆಯಾಗುದೆಂದು ಮತ್ತೊಂದು ವಾದ ಭಕ್ತಿಮಾರ್ಗದಿಂದ ಆಗಾಮಿ ಕರ್ಮವನ್ನು ತಡೆಗಟ್ಟಬಹುದು -ಆದರೆ ಪ್ರಾರಬ್ಧವನ್ನು ಅನುಭವಿಸಿಯೇ ತೀರಬೇಕೆಂದು ಕೆಲವರು ಹೇಳುವರು .
ಸತ್ಕರ್ಮದಿಂದ ಪುಣ್ಯ , ದುಷ್ಕರ್ಮದಿಂದ ಪಾಪ ಎಂದರೆ , ಸತ್ಕರ್ಮ -ದುಷ್ಕರ್ಮ ಎಂದು ನಿರ್ಧರಿಸುವವರು ಯಾರು ? ಅದಕ್ಕೆ ಉತ್ತರ -ವೇದ ! ಆದರೆ ಅದರಲ್ಲಿಲ್ಲದ ವಿಚಾರಗಳಿಗೆ ಫಲ ನಿರ್ಣಯ ಹೇಗೆ ? ಅದಕ್ಕೇನು ಉತ್ತರ ? ಮಹಾಭಾರತದಲ್ಲಿ ಸರಳವಾಗಿ, ||ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ ||ಎಂದಿದೆ.
ಮೀಮಾಂಸಕರು ವೈದಿಕ (ವೇದದಲ್ಲಿ ವಿಧಿಸಿದ) ಕರ್ಮಗಳಿಗೆ ಮಾತ್ರಾ ಪುಣ್ಯವೆಂದು ಹೇಳುತ್ತಾರೆ -ಅದೇ ಯಜ್ಞ, ಯಾಗ ಇತ್ಯಾದಿ. ಅದರೆ ಅದೇ ವೇದಾಂತಿಗಳು ,ಅದರಿಂದ ಸಿಗುವುದು ಅಶಾಶ್ವತ ಫಲ (ಸ್ವರ್ಗಫಲವನ್ನು ಕೊಟ್ಟರೂ-ಆ ಫಲ ತೀರಿದ ನಂತರ ಪುನಃ ಜನ್ಮವೆತ್ತಬೇಕು); ಅಶಾಶ್ವತ ಫಲ ಕೊಡುವುದರಿಂದ ಅವು ಮುಖ್ಯವಲ್ಲ ಎನ್ನುತ್ತಾರೆ . ಆದ್ದರಿಂದ ಜ್ಞಾನಮಾರ್ಗವೇ ಮುಖ್ಯ, ಅದಾದರೆ -ಜ್ಞಾನವಾದರೆ ಎಲ್ಲಾ ಕರ್ಮದಿಂದ ಬಿಡುಗಡೆ ಎನ್ನುತ್ತಾರೆ.
ಮೀಮಾಂಸಕರು ಕರ್ಮವು -ನಿತ್ಯ , ನೈಮಿತ್ತಿಕ , ಕಾಮ್ಯ , ಪ್ರಾಯಶ್ಚಿತ ಎಂದು ನಾಲ್ಕು ಬಗೆ ('ನಿಷಿದ್ಧ'ವೂ -ಮಾಡಬಾರದ್ದು ಸೇರಿದರೆ ಐದು ಬಗೆ) . ಎನ್ನುತ್ತಾರೆ. ವೇದಾಂತಿಗಳು 'ಈಶ್ವರಾರ್ಪಣ ಬುದ್ಧಿ'ಯಿಂದ ಮಾಡಿದ ಕರ್ಮಗಳೆಲ್ಲಾ ನಿತ್ಯಕರ್ಮದಂತೆ - ಫಲವಿಲ್ಲ -ಚಿತ್ತಶುದ್ಧಿಯಾಗುವುದು - ಫಲಾಪೇಕ್ಷೆಯಿಂದ ಮಾಡಿದರೆ 'ಕಾಮ್ಯ' ಅದು ಜೀವನಿಗೆ ಅಂಟುವುದು, ಹೀಗೆ ಕರ್ಮದಲ್ಲಿ ಎರಡೇ ವಿಧ ಎನ್ನುತ್ತಾರೆ.
ಮೀಮಾಂಸ ದರ್ಶನದಲ್ಲಿ ಪ್ರಧಾನವಾದುದು ಕರ್ಮತತ್ವ. ವೇದ ವಿಹಿತವಾದ ಯಾಗಾದಿಗಳ ಆಚರಣೆಯೇ, ಧರ್ಮ . ಇದೇ ಕರ್ಮ ಅಥವಾ ಕರ್ತವ್ಯ. ವೇದ ನಿಷೇಧವಾದದ್ದು ಅಧರ್ಮ. ವೇದ ವಿಧಿಸಿದ ಕರ್ಮಗಳು ಮೂರು
ವಿಧ. :- ನಿತ್ಯ , ನೈಮಿತ್ತಿಕ , ಕಾಮ್ಯ .
೧. ಸಂಧ್ಯಾವಂದನೆ , ದೇವರ ಪೂಜೆ ಮೊದಲಾದವು -ನಿತ್ಯಕರ್ಮ.
೨. ಶ್ರಾದ್ಧಾದಿ ವಿಶೇಷ ಕರ್ಮಗಳು ನೈಮಿತ್ತಿಕ ಕರ್ಮಗಳು.
೩. ಕಾಮನೆಯ (ಬಯಕೆಯ) ಪೂರ್ತಿಗಾಗಿ ಮಾಡುವುದು ಕಾಮ್ಯ ಕರ್ಮ.
ಇವು ಧರ್ಮವೆನಿಸುತ್ತವೆ. ವೇದ ವಿರೋಧಿ ಕರ್ಮಗಳು ನಿಷಿದ್ಧ ಕರ್ಮಗಳು.

ಉಪಸಂಹಾರ

ಜೈನರು ಕರ್ಮವನ್ನು ಅಮೂರ್ತವಲ್ಲ, ಮೂರ್ತ (ಭೌತವಸ್ತು) ಅಂದರೆ ಭೌದ್ಧರು ಕರ್ಮವು ಪ್ರರ್ತಿ ಪೂರ್ವಾರ್ಜಿತವೂ ಅಲ್ಲ , ಪೂರ್ತಿ ಆಕಸ್ಮಿಕವೂ ಅಲ್ಲ, ಎಂದು ಮಧ್ಯಮಾರ್ಗವನ್ನು ಹಿಡಿದಿದ್ದಾರೆ.
ಕುರುಡನೋ , ಕುಂಟನೋ , ಹುಲ್ಲೆಯೋ ಆಗಿ ಹುಟ್ಟುವುದಕ್ಕೆ ಪೂರ್ವಾರ್ಜಿತ ಕರ್ಮಫಲವೆಂದು ವಾದವಿದೆ. ಇಲ್ಲದಿದ್ದರೆ ದೇವರ ಇಚ್ಛೆ ಎಂದು ತೀರ್ಮಾನ ಮಾಡಬೇಕಾಗುತ್ತದೆ. ಆಗ ದೇವರು ಪಕ್ಷಪಾತಿಯೂ . ಕ್ರೂರನೂ ಆಗಿರುವ ದೋಷವನ್ನು ಹೇಳಬೇಕಾಗುತ್ತದೆ.
ಮತ್ತೊಂದು ಪ್ರಶ್ನೆ ಎಲ್ಲವೂ ಪೂರ್ವಜನ್ಮದ ಕರ್ಮದಂತೆ ನೆಡೆಯುವಂತಿದ್ದರೆ , ಜೀವನಿಗೆ ಸ್ವಾತಂತ್ರ್ಯವೇ ಇಲ್ಲವೇ ? ಎಲ್ಲವೂ ಕರ್ಮ -ದೇವರಿಂದ , ನಿಯಂತ್ರಿತವಾದರೆ , ಜೀವನು ಕೇವಲ ಸುಖ ದುಃಖ ಅನುಭವಿಸುವ , ಸ್ವತಂತ್ರ್ಯವಿಲ್ಲದ ಜೀವಿಯಾಗಿ -ಜಗತ್ತು , ದೇವರು, ಕರ್ಮ ಇವು -ಜಗತ್ತು ,ದೇವರು , ಇವು ಕ್ರೂರವೆನಿಸಿಕೊಳ್ಳುತ್ತವೆ/ ಕ್ರೂರತೆಯ ದೋಷಕ್ಕೆ ಒಳಗಾಗುತ್ತವೆ. -ದೀನರನ್ನೂ ದುರ್ಬಲರನ್ನೂ ಇದು ನಿನ್ನ ಪ್ರಾರಬ್ಧ ಕರ್ಮವೆಂದು ಶೋಷಿಸಲು ದಾರಿಯಾಗುವುದು.
ಉಗ್ರನು ಹಿಂಸಾತ್ಮಕ ದಾರಿ -ತನ್ನ ಕರ್ಮವೆಂದು ಸಮರ್ಥಿಸಿಕೊಳ್ಳಬಹದು.ವ್ಯಕ್ತಿಯ ಅಭ್ಯುದಯಕ್ಕೆ ಅವನ ಸತ್ಕರ್ಮವೇ ಕಾರಣವೆಂದು ಹೇಳಲು ಹೊರಟ ಕರ್ಮವಾದ , ಕೊನೆಗೆ ಶೋಷಣೆಯ ಸ್ವಾರ್ಥದ ಸಾಧನವಾಗಿ ಪರಿಣಮಿಸಿದ್ದು , ದುರಂತ. ಆದ್ದರಿಂದ ಅದನ್ನು ಅಂಧ ಶ್ರದ್ಧೆಯಂದು ನಿರ್ಧರಿಸುವುದು ಮತ್ತು ನಿರಾಕರಿಸುವುದು ಸೂಕ್ತ . ಅಥವಾ ಕರ್ಮವನ್ನು , ಸ್ವತಂತ್ರ ಕರ್ಮ, ಆಕಸ್ಮಿಕ , ಮತ್ತು ಅನಿವಾರ್ಯ(ಪ್ರಾರಬ್ಧ) ವೆಂದು ತಿಳಿಯುವುದು ಒಳ್ಳೆಯದು.[೧] [೨]
ಓಂತತ್ಸತ್

ನೋಡಿ

ಚಾರ್ವಾಕ ದರ್ಶನ ; ಜೈನ ಧರ್ಮ- ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ; ಬಸವಣ್ಣ; ಭಾರತೀಯ ತತ್ವಶಾಸ್ತ್ರ ಸಮೀಕ್ಷೆ; ಭಗವದ್ಗೀತಾ ತಾತ್ಪರ್ಯ-- ಕರ್ಮ ಸಿದ್ಧಾಂತ-- ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು-- ಗೀತೆ.

ಉಲ್ಲೇಖ

  1. ಭಾರತೀಯ ತತ್ತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
  2. ಉಮರನ ಒಸಗೆ- ಪೀಠಿಕೆ ಡಿವಿಜಿ.