ಸುಳ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೮ ನೇ ಸಾಲು: ೨೮ ನೇ ಸಾಲು:


ಎಲ್ಲ ಮತ ಪಂಥಗಳ ಜನರೂ ಇಲ್ಲಿ ವಾಸಿಸುತ್ತಿದ್ದಾರೆ, ಮುಖ್ಯವಾಗಿ [[ಹಿಂದೂ]], [[ಮುಸ್ಲಿಂ]], [[ಕ್ರೈಸ್ತ ಧರ್ಮ|ಕ್ರೈಸ್ತ]], [[ಜೈನ]]ರು ವಾಸವಾಗಿದ್ದಾರೆ. [[ಕನ್ನಡ]] ಇಲ್ಲಿನ ಪ್ರಮುಖ ಭಾಷೆ ಅಲ್ಲದೆ [[ತುಳು]], [[ಅರೆಭಾಷೇ]], [[ಮಲಯಾಳಂ]], [[ಕೊಂಕಣಿ]], [[ಬ್ಯಾರಿ]] ಮುಂತಾದ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತಿದೆ.
ಎಲ್ಲ ಮತ ಪಂಥಗಳ ಜನರೂ ಇಲ್ಲಿ ವಾಸಿಸುತ್ತಿದ್ದಾರೆ, ಮುಖ್ಯವಾಗಿ [[ಹಿಂದೂ]], [[ಮುಸ್ಲಿಂ]], [[ಕ್ರೈಸ್ತ ಧರ್ಮ|ಕ್ರೈಸ್ತ]], [[ಜೈನ]]ರು ವಾಸವಾಗಿದ್ದಾರೆ. [[ಕನ್ನಡ]] ಇಲ್ಲಿನ ಪ್ರಮುಖ ಭಾಷೆ ಅಲ್ಲದೆ [[ತುಳು]], [[ಅರೆಭಾಷೇ]], [[ಮಲಯಾಳಂ]], [[ಕೊಂಕಣಿ]], [[ಬ್ಯಾರಿ]] ಮುಂತಾದ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತಿದೆ.
ಈ ಪಟ್ಟಣ ಜಿಲ್ಲಾ ಕೇಂದ್ರ ಮಂಗಳೂರಿನಿಂದ 86 ಕಿ.ಮೀ ಹಾಗೂ ಜಿಲ್ಲೆಯ ಪ್ರಮುಖ ನಗರ ಪುತ್ತೂರಿನಿಂದ 36 ಕಿ.ಮೀ ದೂರದಲ್ಲಿದೆ.
ಈ ಪಟ್ಟಣ ಜಿಲ್ಲಾ ಕೇಂದ್ರ [[ಮಂಗಳೂರು|ಮಂಗಳೂರಿನಿಂದ]] 86 ಕಿ.ಮೀ ಹಾಗೂ ಜಿಲ್ಲೆಯ ಪ್ರಮುಖ ನಗರ [[ಪುತ್ತೂರು|ಪುತ್ತೂರಿನಿಂದ]] 36 ಕಿ.ಮೀ ದೂರದಲ್ಲಿದೆ.


==ಸುಳ್ಯ ತಾಲೂಕಿನ ಗ್ರಾಮಗಳು==
==ಸುಳ್ಯ ತಾಲೂಕಿನ ಗ್ರಾಮಗಳು==

೧೧:೨೩, ೭ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ

ಸುಳ್ಯ

ಸುಳ್ಯ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.33° N 75.23° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
18,026
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 574239
 - +91-8257
 - KA-21
ಸುಳ್ಯದ ಪಕ್ಷಿ ನೋಟ

ಸುಳ್ಯ ದಕ್ಷಿಣ ಕನ್ನಡದ ಒಂದು ತಾಲೂಕು. ಬಹುಭಾಗ ಕಾಡಾದರೂ ಶಿಕ್ಷಣದಲ್ಲಿ ಬಹಳ ಹೆಸರುವಾಸಿಯಾದ ಊರು. ಕುಕ್ಕೆ ಸುಬ್ರಹ್ಮಣ್ಯ ಈ ತಾಲೂಕಿನ ಪ್ರಸಿಧ್ಧ ದೇವಸ್ಥಾನ. ಪಯಸ್ವಿನಿ ನದಿ (ಚಂದ್ರಗಿರಿ ನದಿ ಎಂದೂ ಕರೆಯಲಾಗುತ್ತದೆ) ಮುಖ್ಯವಾದುವುಗಳು. "ಸುಳ್ಯ " ಪದವು "ಸುಳಿ" ಎಂಬ ಪದದಿಂದ ಉದ್ಭವಿಸಿತು ಎಂದು ಹೇಳಲಾಗಿದೆ. ಅದೇ ವೇಳೇ "ಸೂಳೆಯ ಗದ್ದೆ" ಎಂಬ ಪದದಿಂದ "ಸೂಳೆಯ" ಎಂದೂ ಅದರಿಂದ ಸೂಳ್ಯ ಎಂಬ ಪದ ಉದ್ಭವವಾಗಿ ಕೊನೆಗೆ "ಸುಳ್ಯ" ಆಯಿತು ಎಂದೂ ಹೇಳಲಾಗುತ್ತದೆ.[೧] ಇತಿಹಾಸ ಪುರುಷರಾದ "ಕೋಟಿ ಚೆನ್ನಯರ" ಊರು ಪಂಜ ಕೂಡಾ ಇದೇ ತಾಲೂಕಿನಲ್ಲಿದೆ.

ಎಲ್ಲ ಮತ ಪಂಥಗಳ ಜನರೂ ಇಲ್ಲಿ ವಾಸಿಸುತ್ತಿದ್ದಾರೆ, ಮುಖ್ಯವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ವಾಸವಾಗಿದ್ದಾರೆ. ಕನ್ನಡ ಇಲ್ಲಿನ ಪ್ರಮುಖ ಭಾಷೆ ಅಲ್ಲದೆ ತುಳು, ಅರೆಭಾಷೇ, ಮಲಯಾಳಂ, ಕೊಂಕಣಿ, ಬ್ಯಾರಿ ಮುಂತಾದ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತಿದೆ. ಈ ಪಟ್ಟಣ ಜಿಲ್ಲಾ ಕೇಂದ್ರ ಮಂಗಳೂರಿನಿಂದ 86 ಕಿ.ಮೀ ಹಾಗೂ ಜಿಲ್ಲೆಯ ಪ್ರಮುಖ ನಗರ ಪುತ್ತೂರಿನಿಂದ 36 ಕಿ.ಮೀ ದೂರದಲ್ಲಿದೆ.

ಸುಳ್ಯ ತಾಲೂಕಿನ ಗ್ರಾಮಗಳು

ಸುಳ್ಯ ತಾಲೂಕಿನ ಪ್ರಾಥಮಿಕ ಶಾಲೆಗಳು

  1. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲೆಟ್ಟಿ
  2. ಸರಕಾರಿ ಉನ್ನತೀಕರಿಸಿ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು.
  3. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಭೂತಕಲ್ಲು.
  4. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಂಗತ್ತಮಲೆ.

ಸುಳ್ಯ ತಾಲೂಕಿನ ಪ್ರೌಢ ಶಾಲೆಗಳು

  1. ಭಗವಾನ್ ಶ್ರೀ ಸತ್ಯಸಾಯಿ ಪ್ರೌಢ ಶಾಲೆ, ಚೊಕ್ಕಾಡಿ
  2. ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ
  3. ಸ್ನೇಹ ಪ್ರಾಥಮಿಕ ಶಾಲೆ, ಸುಳ್ಯ
  4. ಸ್ನೇಹ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಳ್ಯ
  5. ಸರಕಾರಿ ಪ್ರೌಢ ಶಾಲೆ, ಐವರ್ನಾಡು
  6. ಸರಕಾರಿ ಪ್ರೌಢ ಶಾಲೆ.ಆಲೆಟ್ಟಿ
  7. ಸರಕಾರಿ ಪ್ರೌಢ ಶಾಲೆ, ಸುಳ್ಯ
  8. ಸರಕಾರಿ ಪ್ರೌಢ ಶಾಲೆ, ಪಂಜ
  9. ಸರಕಾರಿ ಪ್ರೌಢ ಶಾಲೆ, ದುಗ್ಗಲಡ್ಕ
  10. ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಳ್ಯ
  11. ಸರಕಾರಿ ಸಂಯುಕ್ತ ಪ್ರೌಡಶಾಲೆ.ಅಜ್ಜಾವರ.

ಕಾಲೇಜುಗಳು

  1. ನೆಹರು ಸ್ಮಾರಕ ಮಹಾ ವಿದ್ಯಾಲಯ, ಕುರುಂಜಿಬಾಗ್, ಸುಳ್ಯ
ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ
  1. ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಪೆರುವಾಜೆ, ಬೆಳ್ಳಾರೆ, ಸುಳ್ಯ
  2. ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ
  3. ಶಾರದಾ ಮಹಿಳಾ ಕಾಲೇಜು, ಜ್ಯೋತಿ ಸರ್ಕಲ್, ಸುಳ್ಯ.

ಸಾಧಕರು

ಸುಳ್ಯದಲ್ಲಿ ಶ್ರೀ ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ಹಲವಾರು ವಿದ್ಯಾಸಂಸ್ಥೆಗಳಿದ್ದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿವೆ. ಸುಳ್ಯದವರೇ ಆದ ತೂಗುಸೇತುವೆಗಳ ಸರದಾರ ಶ್ರೀ ಗಿರೀಶ್ ಭಾರಧ್ವಾಜ್ ಹಲವಾರು ಊರುಗಳನ್ನು ಬೆಸೆದಿದ್ದಾರೆ. ಕನ್ನಡ ಬಾಷಾ ವಿಜ್ಞಾನಿಗಳಲ್ಲಿ ಓರ್ವರಾದ ಅರೆಭಾಷೆಯವರಾದ ಕೋಡಿ ಕುಶಾಲಪ್ಪ ಗೌಡರು ಸುಳ್ಯದ ಜಟ್ಟಿಪಳ್ಳದಲ್ಲಿ ನೆಲೆಸಿದ್ದಾರೆ. ಇವರು ಪೆರಾಜೆ ಗ್ರಾಮದ ಕೋಡಿಯವರು. ಮದ್ರಾಸು ವಿಶ್ವವಿದ್ಯಾನಿಲಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಜಾನಪದ, ವಿಮರ್ಶೆ ಕ್ಷೇತ್ರದಲ್ಲಿ ಹೆಸರಾದ ಪುರುಷೋತ್ತಮ ಬಿಳಿಮಲೆಯವರು ನಮ್ಮ ದೇಶದ ರಾಜಧಾನಿ ದೆಹಲಿಯ ಅಮೇರಿಕನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್ ಸಂಸ್ಥೆಯಲ್ಲಿ ನಿರ್ಧೇಶಕರಾಗಿದ್ದಾರೆ.ಇಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜೂ ಇದೆ. ಜಾನಪದ ಸಂಶೋದಕರಾದ ವಿಶ್ವನಾಥ ಬದಿಕಾನರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಯು. ಬಿ. ಪವನಜಯವರು ಬೆಂಗಳೂರಿನಲ್ಲಿ ಉದ್ಯೋಗಿ ಅಗಿದ್ದಾರೆ.

ಉಲ್ಲೇಖಗಳು

"https://kn.wikipedia.org/w/index.php?title=ಸುಳ್ಯ&oldid=858465" ಇಂದ ಪಡೆಯಲ್ಪಟ್ಟಿದೆ