ಎಸ್. ರಾಮಚಂದ್ರ ಐತಾಳ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚು ತಪ್ಪು ತಿದ್ದಿದೆ |
|||
೧೫೦ ನೇ ಸಾಲು: | ೧೫೦ ನೇ ಸಾಲು: | ||
| 1995 || ನಿಲುಕದ ನಕ್ಷತ್ರ || ಕೂಡ್ಲು ರಾಮಕೃಷ್ಣ || |
| 1995 || ನಿಲುಕದ ನಕ್ಷತ್ರ || ಕೂಡ್ಲು ರಾಮಕೃಷ್ಣ || |
||
|- |
|- |
||
| 1995 || ಕ್ರೌರ್ಯ || [[ಗಿರೀಶ್ ]] || ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
| 1995 || ಕ್ರೌರ್ಯ || [[ಗಿರೀಶ್ ಕಾಸರವಳ್ಳಿ]] || ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
||
|- |
|- |
||
| 1996 || ಜನನಿ || ಶ್ರೀವತ್ಸ ರಂಗನಾಥ್ || |
| 1996 || ಜನನಿ || ಶ್ರೀವತ್ಸ ರಂಗನಾಥ್ || |
೦೭:೫೦, ೧ ಜುಲೈ ೨೦೧೮ ನಂತೆ ಪರಿಷ್ಕರಣೆ
ಎಸ್. ರಾಮಚಂದ್ರ | |
---|---|
ಜನನ | ಬೆಂಗಳೂರು, ಮೈಸೂರು ರಾಜ್ಯ | ೧೬ ನವೆಂಬರ್ ೧೯೪೮
ಮರಣ | ಜನವರಿ 10, 2011 |
ವಿದ್ಯಾರ್ಹತೆ | ಎಫ್.ಟಿ.ಐ.ಐ ಛಾಯಾಗ್ರಹಣ ಪದವೀಧರ |
ಉದ್ಯೋಗ | ಛಾಯಾಗ್ರಾಹಕ |
ಪ್ರಶಸ್ತಿಗಳು |
ಎಸ್. ರಾಮಚಂದ್ರ ಎಂದೇ ಖ್ಯಾತರಾದ ಶಿವರಾಮಯ್ಯ ರಾಮಚಂದ್ರ ಐತಾಳ (೧೬ ನವೆಂಬರ್ ೧೯೪೮ – ೧೦ ಜನವರಿ ೨೦೧೧) ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ಛಾಯಾಗ್ರಾಹಕ. ಇವರಿಗೆ ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.[೨].
ಪರಿಚಯ
ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.
ವೃತ್ತಿ
ರಾಮಚಂದ್ರರವರು ಪೂನಾ ಫಿಲ್ಮ್ ಇನ್ಸಿrಟ್ಯೂಟ್ನ ಕೊಡುಗೆ. ಅವರು ೧೯೬೭-೧೯೭೦ರಲ್ಲಿ ಛಾಯಾಗ್ರಹಣದ ವ್ಯಾಸಂಗ ಮಾಡಿದ ಮೊದಲ ತಲೆಮಾರಿನ ಗುಂಪಿಗೆ ಸೇರಿದವರು . ಅಲ್ಲಿಂದ ಬಂದ ನಂತರ ಅವರು ಗಿರೀಶ್ ಕಾರ್ನಾಡರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನು ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು. ನಂತರ ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧವಲ್ಲದೆ, ನಂತರ ಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ್ದಾರೆ. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ. ಶಂಕರ್ ನಾಗ್ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು. ನಿರ್ದೇಶಕ ರಾಮದಾಸ್ ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ. ಚಿಕ್ಕ ವಯಸ್ಸಿನಿಂದಲೇ ಪೋಲಿಯೋದ ಕಾರಣ ತುಸು ಕುಂಟುನಡಿಗೆಯಿದ್ದರೂ ಅದನ್ನು ಮೆಟ್ಟಿ ನಿಂತು ಅವರು ಸಾಧನೆಯ ಶಿಖರವೇರಿದರು.
ಪ್ರಶಸ್ತಿ
೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ (ಚಂದ್ರಶೇಖರ ಕಂಬಾರ ಕಥೆಯಾಧಾರಿತ ‘ಋಷ್ಯಶೃಂಗ’) ಪ್ರಶಸ್ತಿ, ಹಲವು ಬಾರಿ ರಾಜ್ಯಪ್ರಶಸ್ತಿ, ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ.
ನಿಧನ
ಇವರು ಕ್ಯಾನ್ಸರಿನಿಂದ ಬಳಲುತ್ತಿದ್ದು ಜನವರಿ 10, 2011
ರಂದು ನಿಧನರಾದರು. ಇವರ ಪತ್ಮಿಯ ಹೆಸರು ಮೀನಾಕ್ಷಿ ಹಾಗು ಪುತ್ರಿಯರು ಚೈತ್ರಾ ಮತ್ತು ವರ್ಷಾ.ಚಿತ್ರಪಟ್ಟಿ
ಟಿವಿ ಚಿತ್ರ
ವರ್ಷ | ಚಿತ್ರ | ಭಾಷೆ | ಇತರ ಸಂಗತಿ |
---|---|---|---|
1987 | ಮಾಲ್ಗುಡಿ ಡೇಸ್ (ಟಿವಿ ಸರಣಿ) | ಹಿಂದಿ | ಛಾಯಾಗ್ರಹಣ |
1988 | ಸ್ಟೋನ್ ಬಾಯ್ (ಟಿವಿ ಸರಣಿ) | ಹಿಂದಿ | ಛಾಯಾಗ್ರಹಣ |
1991 | ಸ್ವಾಮಿ ಎಂಡ್ ಫ್ರೆಂಡ್ಸ್ (ಪಾರ್ಟ್ 1) | ಹಿಂದಿ | ಛಾಯಾಗ್ರಹಣ[೩] |
2002 | ಒಂದು ಸಾವಿನ ಸುತ್ತ (ಟೆಲಿ ಚಿತ್ರ) | ಕನ್ನಡ | ಛಾಯಾಗ್ರಹಣ |
2002 | ಸಾಕ್ಷಿ (ಟೆಲಿ ಚಿತ್ರ) | ಕನ್ನಡ | ಚಿತ್ರಕತೆ, ನಿರ್ದೇಶನ, ಛಾಯಾಗ್ರಹಣ |
2003 | ಗೃಹಭಂಗ (ಟಿವಿ ಸರಣಿ) | ಕನ್ನಡ | ಛಾಯಾಗ್ರಹಣ |
ಚಲನಚಿತ್ರಗಳು
ಹಲವು ಪ್ರಶಸ್ತಿ ವಿಜೇತ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿರುವುದನ್ನು ತೋರುವ ಎಸ್. ರಾಮಚಂದ್ರ ಚಿತ್ರಗಳ ಅಪೂರ್ಣ ಪಟ್ಟಿ. [೪]
ವರ್ಷ | ಚಿತ್ರ | ನಿರ್ದೇಶಕರು | ಇತರ ಸಂಗತಿ |
---|---|---|---|
1972 | ವಂಶವೃಕ್ಷ | ಬಿ. ವಿ. ಕಾರಂತ & ಗಿರೀಶ್ ಕಾರ್ನಾಡ್ | ಸಹಾಯಕ ಛಾಯಾಗ್ರಾಹಣ |
1972 | ಸಂಕಲ್ಪ | ಪಿ. ವಿ. ನಂಜರಾಜ ಅರಸ್ | ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ[೫] ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
1974 | ಕಂಕಣ | ಎಂ.ಬಿ.ಎಸ್.ಪ್ರಸಾದ್ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
1975 | ಚೋಮನ ದುಡಿ | ಬಿ. ವಿ. ಕಾರಂತ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
1976 | ಪಲ್ಲವಿ | ಪಿ.ಲಂಕೇಶ್ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
1976 | ಋಷ್ಯಶೃಂಗ | ವಿ.ಆರ್.ಕೆ.ಪ್ರಸಾದ್ | ವಿಜೇತ : ರಾಷ್ಟ್ರೀಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ |
1977 | ಘಟಶ್ರಾದ್ಧ | ಗಿರೀಶ್ ಕಾಸರವಳ್ಳಿ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
1978 | ಗ್ರಹಣ | ಟಿ. ಎಸ್. ನಾಗಾಭರಣ | ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ(ಕಪ್ಪು/ಬಿಳುಪು) ಅತ್ಯುತ್ತಮ ರಾಷ್ಟ್ರೀಯ ಐಕ್ಯತಾ ಚಿತ್ರ ಪ್ರಶಸ್ತಿ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
1978 | ಗೀಜಗನ ಗೂಡು | ಟಿ. ಎಸ್. ರಂಗಾ | |
1978 | ಹೊಂಬಿಸಿಲು | ಗೀತಪ್ರಿಯ | |
1978 | ಮಲಯ ಮಕ್ಕಳು | ಕೆ. ಶಿವರಾಮ ಕಾರಂತ | |
1978 | ಪರಸಂಗದ ಗೆಂಡೆತಿಮ್ಮ | ಮಾರುತಿ ಶಿವರಾಂ | |
1979 | ಆಕ್ರಮಣ | ಗಿರೀಶ್ ಕಾಸರವಳ್ಳಿ | |
1979 | ದಂಗೆ ಎದ್ದ ಮಕ್ಕಳು | ಪಿ. ವಾದಿರಾಜ್ | |
1979 | ನಮ್ಮಮ್ಮನ ಸೊಸೆ | ಪಿ. ವಾದಿರಾಜ್ | |
1980 | ಬಂಗಾರದ ಜಿಂಕೆ | ಟಿ. ಎಸ್. ನಾಗಾಭರಣ | |
1980 | ವಾತ್ಸಲ್ಯ ಪಥ | ಎ. ಎಸ್. ಆರ್. ರಾವ್ | |
1980 | ಸಂಗೀತಾ | ಚಂದ್ರಶೇಖರ ಕಂಬಾರ | |
1981 | ಜಾಲ | ಎಸ್. ರಂಗನಾಥ್ | |
1981 | ಚದುರಿದ ಚಿತ್ರಗಳು | ಎನ್. ಟಿ. ಜಯರಾಮ ರೆಡ್ಡಿ | |
1983 | ಬ್ಯಾಂಕರ್ ಮಾರ್ಗಯ್ಯ | ಟಿ. ಎಸ್. ನಾಗಾಭರಣ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
1983 | ಅನ್ವೇಷಣೆ | ಟಿ. ಎಸ್. ನಾಗಾಭರಣ | |
1983 | ಗಂಧರ್ವಗಿರಿ | ಎನ್. ಎಸ್. ಧನಂಜಯ (ದತ್ತು) | |
1983 | ಮುದುಡಿದ ತಾವರೆ ಅರಳಿತು | ಕೆ. ವಿ. ಜಯರಾಂ | |
1983 | ನ್ಯಾಯ ಗೆದ್ದಿತು | ಜೋ ಸೈಮನ್ | |
1983 | ಪ್ರೇಮಯುದ್ಧ | ಟಿ. ಎಸ್. ನಾಗಾಭರಣ | |
1983 | ಸಿಂಹಾಸನ | ಸಿ. ಆರ್. ಸಿಂಹ | |
1984 | ಒಲವೆ ಬದುಕು | ಕೆ. ವಿ. ಜಯರಾಂ | |
1986 | ಪ್ರೇಮ ಜಾಲ | ಜೋ ಸೈಮನ್ | |
1987 | ಹುಲಿ ಹೆಬ್ಬುಲಿ | ವಿಜಯ್ | |
1987 | ಅವಸ್ಥೆ | ಕೃಷ್ಣ ಮಾಸಡಿ | |
1987 | ನ್ಯಾಯಕ್ಕೆ ಶಿಕ್ಷೆ | ಶ್ರೀನಿವಾಸ್ | |
1987 | ರೋಮಾಂಚನ | ಜಿ. ಎಸ್. ಪಣಿಕ್ಕರ್ | |
1987 | ಸಂಪ್ರದಾಯ | ಮಾಸ್ಟರ್ ಹಿರಣ್ಣಯ್ಯ | |
1988 | ಭುಜಂಗಯ್ಯನ ದಶಾವತಾರ | ಲೋಕೇಶ್ | ಅತ್ಯುತ್ತಮ ರಾಷ್ಟ್ರೀಯ ಐಕ್ಯತಾ ಚಿತ್ರ ಪ್ರಶಸ್ತಿ |
1988 | ಆಸ್ಫೋಟ | ಟಿ. ಎಸ್. ನಾಗಾಭರಣ | ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
1988 | ಮಾತೃದೇವೋಭವ | ಎನ್. ಎಸ್. ಧನಂಜಯ (ದತ್ತು) | |
1989 | ಹಾಂಕಾಂಗಿನಲ್ಲಿ ಏಜೆಂಟ್ ಅಮರ್ | ಜೋ ಸೈಮನ್ | |
1989 | ಸಿಂಗಾರಿ ಬಂಗಾರಿ | ಚಂದ್ರಹಾಸ ಆಳ್ವ | |
1990 | ಸಂತ ಶಿಶುನಾಳ ಷರೀಫ | ಟಿ. ಎಸ್. ನಾಗಾಭರಣ | |
1990 | ಸ್ವಾಮಿ | ಶಂಕರ್ ನಾಗ್ | [೩] |
1991 | ಮನೆ | ಗಿರೀಶ್ ಕಾಸರವಳ್ಳಿ | ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
1991 | ಏಕ್ ಘರ್ | ಗಿರೀಶ್ ಕಾಸರವಳ್ಳಿ | ಭಾಷೆ : ಹಿಂದಿ |
1992 | ಉಂಡೂ ಹೋದ ಕೊಂಡೂ ಹೋದ | ನಾಗತಿಹಳ್ಳಿ ಚಂದ್ರಶೇಖರ | |
1993 | ಕಾದಂಬರಿ | ಕೂಡ್ಲು ರಾಮಕೃಷ್ಣ | |
1994 | ಯಾರಿಗೂ ಹೇಳ್ಬೇಡಿ | ಕೂಡ್ಲು ರಾಮಕೃಷ್ಣ | |
1995 | ನಿಲುಕದ ನಕ್ಷತ್ರ | ಕೂಡ್ಲು ರಾಮಕೃಷ್ಣ | |
1995 | ಕ್ರೌರ್ಯ | ಗಿರೀಶ್ ಕಾಸರವಳ್ಳಿ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
1996 | ಜನನಿ | ಶ್ರೀವತ್ಸ ರಂಗನಾಥ್ | |
1996 | ಪೂಜ | ಭಾರತಿ ಶಂಕರ್ | |
1997 | ಗಂಗವ್ವ ಗಂಗಾಮಾಯಿ | ವಸಂತ ಮೊಕಾಶಿ | [೩] |
1998 | ದಿ ಔಟ್ ಹೌಸ್ | ಲೆಸ್ಲೀ ಕರ್ವಾಲೋ | [೬] |
1999 | ದೇವೀರಿ | ಕವಿತಾ ಲಂಕೇಶ್ | ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
1999 | ಕಾನೂರು ಹೆಗ್ಗಡಿತಿ | ಗಿರೀಶ್ ಕಾರ್ನಾಡ್ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
2001 | ಅಲೆಮಾರಿ | ಕವಿತಾ ಲಂಕೇಶ್ | [೩] |
2003 | ಅರ್ಥ | ಬಿ. ಸುರೇಶ | ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
2004 | ಹಸೀನಾ | ಗಿರೀಶ್ ಕಾಸರವಳ್ಳಿ | ರಾಷ್ಟ್ರೀಯ ಅತ್ಯುತ್ತಮ ಕುಟುಂಬ ಕಲ್ಯಾಣ ಚಿತ್ರ ಪ್ರಶಸ್ತಿ ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ |
2004 | ಬೇರು | ಪಿ. ಶೇಷಾದ್ರಿ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
2004 | ಪ್ರವಾಹ | ಪಿ. ಆರ್. ರಾಮದಾಸ್ ನಾಯ್ಡು | ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ |
2005 | ನಾಯಿ ನೆರಳು | ಗಿರೀಶ್ ಕಾಸರವಳ್ಳಿ | ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
2005 | ಮುಖಾಮುಖಿ | ಎನ್. ಸುದರ್ಶನ್ | |
2006 | ಬನದ ನೆರಳು | ಉಮಾಶಂಕರ್ ಸ್ವಾಮಿ | ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ |
2007 | ಗುಲಾಬಿ ಟಾಕೀಸು | ಗಿರೀಶ್ ಕಾಸರವಳ್ಳಿ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ |
2008 | ವಿಮುಕ್ತಿ | ಪಿ. ಶೇಷಾದ್ರಿ | ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ |
2008 | ಮೊಗ್ಗಿನ ಜಡೆ | ಪಿ. ಆರ್. ರಾಮದಾಸ್ ನಾಯ್ಡು | |
2008 | ಹಾರು ಹಕ್ಕಿಯನೇರಿ | ಏ. ಎನ್. ಪ್ರಸನ್ನ | |
2009 | ದಾಟು | ಕೆ. ಶಿವರುದ್ರಯ್ಯ | |
2009 | ಮುಖಪುಟ | ರೂಪ ಅಯ್ಯರ್ | ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ |
2010 | ಗಾಂಧಿ ಸ್ಮೈಲ್ಸ್ | ಕ್ರಿಶ್ ಜೋಶಿ | |
2010 | ಬೇಲಿ ಮತ್ತು ಹೊಲ | ಪಿ. ಆರ್. ರಾಮದಾಸ್ ನಾಯ್ಡು | |
2010 | ಹೆಜ್ಜೆಗಳು | ಪಿ. ಆರ್. ರಾಮದಾಸ್ ನಾಯ್ಡು | |
2010 | ಪ್ರಾರ್ಥನೆ | ಸದಾಶಿವ ಶೆಣೈ |
ಆಕರ
- ↑ Award winning cameraman S.Ramachandra dead
- ↑ http://www.deccanherald.com/content/128146/s-ramachandra.html
- ↑ ೩.೦ ೩.೧ ೩.೨ ೩.೩ ೩.೪ http://www.bfi.org.uk/films-tv-people/4ce2baa487522
- ↑ https://Kannadamoviesinfo.wordpress.com
- ↑ Hero Behind the Frame
- ↑ http://www.bfi.org.uk/films-tv-people/4ce2b82a9e7a4