ವರಾಹ ಪುರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 9 interwiki links, now provided by Wikidata on d:q639359 (translate me)
೭ ನೇ ಸಾಲು: ೭ ನೇ ಸಾಲು:
[[ವರ್ಗ:ಪುರಾಣ]]
[[ವರ್ಗ:ಪುರಾಣ]]
[[ವರ್ಗ:ಹಿಂದೂ ಧರ್ಮಗ್ರಂಥಗಳು]]
[[ವರ್ಗ:ಹಿಂದೂ ಧರ್ಮಗ್ರಂಥಗಳು]]


ಜಾಗತೀಕರಣ ಹಾಗೂ ವಿಜ್ಞಾನ- ತಂತ್ರಜ್ಞಾನಗಳ ಭರಾಟೆಯಲ್ಲಿ ನಮ್ಮ ಕರಕುಶಲ ಕರ್ಮಿಗಳ ಬದುಕು ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಆಧುನಿಕತೆಯ ಪ್ಲಾಸ್ಟಿಕ್ ಹಾಗೂ ಫೈಬರ್ ಪರಿಕರಗಳ ಮಾಯಾಜಾಲದ ಬಲೆಯಲ್ಲಿ ಕುಲಕಸುಬಿನ ಸಾಂಪ್ರದಾಯಿಕ ಈಚಲ ಗಿಡದ ಗರಿಯನ್ನು ಗೃಹ ಹಾಗೂ ಒಕ್ಕಲುತನ ಬಳಕಯೆ ಪರಿಕರಗಳು ಮಾಯವಾಗುತ್ತಿವೆ. ಇದರಿಂದಾಗಿ ಈಚಲ ಗಿಡದ ಗರಿಯನ್ನು ನಂಬಿದವರ ಬದುಕು ಅತಂತ್ರವಾಗುತ್ತಿದೆ. ಕುಶಲಕರ್ಮಿ ಅನ್ನಕ್ಕೆ ಅನ್ಯಮಾರ್ಗವಿಲ್ಲದೆ ಪರಿತಪಿಸುತ್ತಿದ್ದಾನೆ.

ಅರಣ್ಯಪ್ರದೇಶ, ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳ ಒಡಲಾಳದಲ್ಲಿ ಬೆಳೆದ ಈಚಲ ಗಿಡದ ಗರಿಗಳನ್ನು ಕತ್ತರಿಸಿ, ಹದಗೊಳಿಸಿ, ಒಕ್ಕಲುತನ ಚಟುವಟಿಕೆಗೆ ಅಗತ್ಯವಾಗಿ ಬೇಕಾದ ಬುಟ್ಟಿ, ಚಕ್ಕಡಿಯ ಗರಿಯನ್ನು ತಟ್ಟಿ ಹಾಗೂ ಗೃಹ ಉಪಯೋಗದ ಕಸಬರಿಗೆ(ಪೊರಕೆ) ಹಾಗೂ ಕರ್ಚಿ(ಧಾನ್ಯ ಸಂಗ್ರಹದ ಕಣಜ) ಮುಂತಾದ ವಸ್ತುಗಳನ್ನು ನಯವಾಗಿ ತಯಾರಿಸುತ್ತಿದ್ದ ಕುಶಲಕರ್ಮಿ ನಮ್ಮ (ಕೊರಮ) ಕೊರವರ ಭವಿಷ್ಯ ಇಂದು ಕತ್ತಲೆಯ ಕೂಪದಲ್ಲಿ ಮುಳುಗಿದೆ.

ಅಂತರ್ಜಲ ಕುಸಿತ ಹಾಗೂ ಹಳ್ಳ-ಕೊಳ್ಳ, ಅರಣ್ಯ ಹಾಗೂ ಕೆರೆಕಟ್ಟೆಗಳ ಒತ್ತುವರಿ ಹಿನ್ನೆಲೆಯಲ್ಲಿ ಈಚಲಗಿಡ ಪ್ರಭೇದ ನಶಿಸಿಹೋಗಿದೆ. ಇನ್ನೊಂದೆಡೆ, ಪ್ಲಾಸ್ಟಿಕ್ ಹಾಗೂ ಫೈಬರ್‌ನಿಂದ ತಯಾರಿಸಿದ ವಸ್ತುಗಳು ಈಚಲಗಿಡದಿಂದ ತಯಾರಿಸಿದ ಪರಿಕರಗಳ ಜಾಗವನ್ನು ಆಕ್ರಮಿಸಿಕೊಂಡಿವೆ. ಹೀಗಾಗಿ ಕೇವಲ ಮದುವೆ-ಮುಂಜಿ ಸೇರಿದಂತೆ ಕೇವಲ ಕೆಲ ಸೀಮಿತ ಮಂಗಳ ಕಾರ್ಯಗಳ ಸಂಪ್ರದಾಯದ ಪೂಜೆ- ಪುನಸ್ಕಾರಗಳಿಗೆ ಮಾತ್ರ ಈಚಲ ಗರಿಯ ಪರಿಕರಗಳು ಬಳಕೆಯಾಗುತ್ತಿವೆ.

ತಲೆಮಾರುಗಳಿಂದ ಉಳಿಸಿ- ಬೆಳೆಸಿಕೊಂಡು ಬಂದಿದ್ದ ಕರಕುಶಲ ಈಚಲ ಗರಿಯ ಪರಿಕರ ತಯಾರಿಕೆಯ ಸಂಕಷ್ಟ ಹಾಗೂ ವಸ್ತುಗಳ ಬೇಡಿಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕಸುಬನ್ನು ನಂಬಿಕೊಂಡಿದ್ದ ಅನೇಕ ಕುಟುಂಬಗಳು ಇಂದು ಪರ್ಯಾಯ ವೃತ್ತಿಯಲ್ಲಿ ತೊಡಗಿಸಿಕೊಂಡಿವೆ. ಕೆಲ ಕುಟುಂಬಗಳು ಮದುವೆ-ಮುಂಜಿ ಸೇರಿದಂತೆ ವಿವಿಧ ಸಭೆ- ಸಮಾರಂಭದ ಶುಭಕಾರ್ಯಗಳಲ್ಲಿ ಬ್ಯಾಂಡ್‌ಸೆಟ್ ಸೇವೆ ಹಾಗೂ ಅಲ್ಯುಮಿನಿಯಂ ಪಾತ್ರೆಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಪರ್ಯಾಯ ಉದ್ಯೋಗವನ್ನಾಗಿ ಆರಿಸಿಕೊಂಡಿರುವ ಅಲ್ಯುಮಿನಿಯಂ ಪಾತ್ರೆಗಳ ವ್ಯಾಪಾರವೂ ಅವರ ಬದುಕಿಗೆ ಭದ್ರತೆ ಒದಗಿಸುವ ಬದಲು ಶೋಷಣೆಗೆ ಗುರಿಮಾಡಿದೆ. ಮಧ್ಯವರ್ತಿಗಳಿಂದ ಖರೀದಿಸಿದ ಪಾತ್ರೆ ಸಾಮಾನುಗಳನ್ನು ತಲೆಯ ಮೇಲೆ ಒತ್ತುಕೊಂಡು ತಿರುಗಿ ವ್ಯಾಪಾರ ಮಾಡುವ ಅವರ ಕೈಗೆ ಪುಡಿಗಾಸಿನ ಲಾಭ ಸಿಗುತ್ತದಯೇ ಹೊರತು, ಹೆಚ್ಚುವರಿ ಲಾಭಾಂಶವೆಲ್ಲಾ ಪಾತ್ರೆ ಸರಬರಾಜು ಮಾಡಿದ ಮಧ್ಯವರ್ತಿ ಪಾಲಾಗುತ್ತಿದೆ.

ವಂಶಪಾರಂಪರ್ಯವಾಗಿ ಬಂದಿರುವ ಬುಟ್ಟಿ ಹೆಣೆಯುವ ಹಾಗೂ ಪೊರಕೆ ತಯಾರಿಕೆ ಉದ್ಯೋಗದಲ್ಲಿ ಕರ್ನಾಟಕದ ಕೆಲವು ಪಟ್ಟಣದ ೭0ಕ್ಕೂ ಅಧಿಕ ಕುಟುಂಬ, ಸೇರಿದಂತೆ ಇತರೆಡೆ ನೂರಾರು ಕುಟುಂಬಗಳು ತೊಡಗಿಸಿಕೊಂಡಿವೆ. ಆದರೆ, ಅವುಗಳಿಗೆ ಬೇಕಾದ ಈಚಲಗಿಡದ ಗರಿ ಸ್ಥಳೀಯವಾಗಿ ದೊರಕದ ಪರಿಣಾಮ, 2-3 ತಿಂಗಳವರೆಗೂ ಬೇರೆ ಬೇರೆ ಪ್ರದೇಶಗಳಲ್ಲಿ ವಲಸೆಹೋಗಿ ಈಚಲ ಗರಿಗಳನ್ನು ಸಂಗ್ರಹಿಸುತ್ತಾರೆ. ಈ ಅವಧಿಯಲ್ಲಿ ಆ ಕುಟುಂಬದಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳುತ್ತಿವೆ. ಹೀಗಾಗಿ ಬಡತನ ಸಮುದಾಯವನ್ನು ಆವರಿಸಿದೆ ಎಂದು ಆತಂಕ ವ್ಯಕ್ತಪಡಿಸುತ್ತಾದೆ

ಇಷ್ಟೆಲ್ಲಾ ಶ್ರಮದ ಬೆವರುಬಸಿದು ತಯಾರಿಸಲಾದ ಬಿದಿರಿನ ಪರಿಕರಗಳನ್ನು ಮಾರಾಟ ಮಾಡುವುದೆ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ತಯಾರಿಸಿದ ಪರಿಕರಗಳನ್ನು ತಲೆಯ ಮೇಲೆ ಒತ್ತುಕೊಂಡು ಊರೂರು ಸುತ್ತಿ, ಸಂತೆಯಲ್ಲಿಟ್ಟು ಮಾರಾಟ ಮಾಡಲು ಹೋದರೆ, ಕೊಳ್ಳುವವರೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊಟ್ಟೆ ತುಂಬಿಸಿಕೊಳ್ಳಲು ಪರದಾಟ ನಡೆಸಬೇಕಾಗಿದೆ. ಮಕ್ಕಳ ಭವಿಷ್ಯ ರೂಪಿಸುವುದು ನಮ್ಮ (ಕೊರಮ) ಕೊರವರ ಕುಟುಂಬಗಳನ್ನು ಕಾಡುತ್ತಿದೆ.

ಆಧುನಿಕತೆಯ ವ್ಯಾಮೋಹದಲ್ಲಿ ಕರಗಿಹೋಗುತ್ತಿರುವ ಇಂತಹ ಕುಶಲ ಕಲೆಗಳನ್ನು ಉಳಿಸಿ- ಬೆಳೆಸಬೇಕಾಗಿದೆ.

೦೯:೩೫, ೨೯ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ

ವರಾಹ ಪುರಾಣದ ಒಂದು ಜಿತ್ರ-೧೯೨೩.

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ವರಾಹ ಪುರಾಣ ಇದರಲ್ಲಿ ವಿಷ್ಣು ವರಾಹ ಅವತಾರ ಎತ್ತಿ ಜಗತ್ತಿನಲ್ಲಿ ಮಾಡಿದ ಲೀಲೆಗಳ ವಿವರ ಇದೆ.

ಬಾಹ್ಯ ಸಂಪರ್ಕಗಳು


           ಜಾಗತೀಕರಣ ಹಾಗೂ ವಿಜ್ಞಾನ- ತಂತ್ರಜ್ಞಾನಗಳ ಭರಾಟೆಯಲ್ಲಿ ನಮ್ಮ ಕರಕುಶಲ ಕರ್ಮಿಗಳ ಬದುಕು ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಆಧುನಿಕತೆಯ ಪ್ಲಾಸ್ಟಿಕ್ ಹಾಗೂ ಫೈಬರ್ ಪರಿಕರಗಳ ಮಾಯಾಜಾಲದ ಬಲೆಯಲ್ಲಿ ಕುಲಕಸುಬಿನ ಸಾಂಪ್ರದಾಯಿಕ ಈಚಲ ಗಿಡದ ಗರಿಯನ್ನು ಗೃಹ ಹಾಗೂ ಒಕ್ಕಲುತನ ಬಳಕಯೆ ಪರಿಕರಗಳು ಮಾಯವಾಗುತ್ತಿವೆ. ಇದರಿಂದಾಗಿ ಈಚಲ ಗಿಡದ ಗರಿಯನ್ನು ನಂಬಿದವರ ಬದುಕು ಅತಂತ್ರವಾಗುತ್ತಿದೆ. ಕುಶಲಕರ್ಮಿ ಅನ್ನಕ್ಕೆ ಅನ್ಯಮಾರ್ಗವಿಲ್ಲದೆ ಪರಿತಪಿಸುತ್ತಿದ್ದಾನೆ.

ಅರಣ್ಯಪ್ರದೇಶ, ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳ ಒಡಲಾಳದಲ್ಲಿ ಬೆಳೆದ ಈಚಲ ಗಿಡದ ಗರಿಗಳನ್ನು ಕತ್ತರಿಸಿ, ಹದಗೊಳಿಸಿ, ಒಕ್ಕಲುತನ ಚಟುವಟಿಕೆಗೆ ಅಗತ್ಯವಾಗಿ ಬೇಕಾದ ಬುಟ್ಟಿ, ಚಕ್ಕಡಿಯ ಗರಿಯನ್ನು ತಟ್ಟಿ ಹಾಗೂ ಗೃಹ ಉಪಯೋಗದ ಕಸಬರಿಗೆ(ಪೊರಕೆ) ಹಾಗೂ ಕರ್ಚಿ(ಧಾನ್ಯ ಸಂಗ್ರಹದ ಕಣಜ) ಮುಂತಾದ ವಸ್ತುಗಳನ್ನು ನಯವಾಗಿ ತಯಾರಿಸುತ್ತಿದ್ದ ಕುಶಲಕರ್ಮಿ ನಮ್ಮ (ಕೊರಮ) ಕೊರವರ ಭವಿಷ್ಯ ಇಂದು ಕತ್ತಲೆಯ ಕೂಪದಲ್ಲಿ ಮುಳುಗಿದೆ.

ಅಂತರ್ಜಲ ಕುಸಿತ ಹಾಗೂ ಹಳ್ಳ-ಕೊಳ್ಳ, ಅರಣ್ಯ ಹಾಗೂ ಕೆರೆಕಟ್ಟೆಗಳ ಒತ್ತುವರಿ ಹಿನ್ನೆಲೆಯಲ್ಲಿ ಈಚಲಗಿಡ ಪ್ರಭೇದ ನಶಿಸಿಹೋಗಿದೆ. ಇನ್ನೊಂದೆಡೆ, ಪ್ಲಾಸ್ಟಿಕ್ ಹಾಗೂ ಫೈಬರ್‌ನಿಂದ ತಯಾರಿಸಿದ ವಸ್ತುಗಳು ಈಚಲಗಿಡದಿಂದ ತಯಾರಿಸಿದ ಪರಿಕರಗಳ ಜಾಗವನ್ನು ಆಕ್ರಮಿಸಿಕೊಂಡಿವೆ. ಹೀಗಾಗಿ ಕೇವಲ ಮದುವೆ-ಮುಂಜಿ ಸೇರಿದಂತೆ ಕೇವಲ ಕೆಲ ಸೀಮಿತ ಮಂಗಳ ಕಾರ್ಯಗಳ ಸಂಪ್ರದಾಯದ ಪೂಜೆ- ಪುನಸ್ಕಾರಗಳಿಗೆ ಮಾತ್ರ ಈಚಲ ಗರಿಯ ಪರಿಕರಗಳು ಬಳಕೆಯಾಗುತ್ತಿವೆ.

ತಲೆಮಾರುಗಳಿಂದ ಉಳಿಸಿ- ಬೆಳೆಸಿಕೊಂಡು ಬಂದಿದ್ದ ಕರಕುಶಲ ಈಚಲ ಗರಿಯ ಪರಿಕರ ತಯಾರಿಕೆಯ ಸಂಕಷ್ಟ ಹಾಗೂ ವಸ್ತುಗಳ ಬೇಡಿಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕಸುಬನ್ನು ನಂಬಿಕೊಂಡಿದ್ದ ಅನೇಕ ಕುಟುಂಬಗಳು ಇಂದು ಪರ್ಯಾಯ ವೃತ್ತಿಯಲ್ಲಿ ತೊಡಗಿಸಿಕೊಂಡಿವೆ. ಕೆಲ ಕುಟುಂಬಗಳು ಮದುವೆ-ಮುಂಜಿ ಸೇರಿದಂತೆ ವಿವಿಧ ಸಭೆ- ಸಮಾರಂಭದ ಶುಭಕಾರ್ಯಗಳಲ್ಲಿ ಬ್ಯಾಂಡ್‌ಸೆಟ್ ಸೇವೆ ಹಾಗೂ ಅಲ್ಯುಮಿನಿಯಂ ಪಾತ್ರೆಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಪರ್ಯಾಯ ಉದ್ಯೋಗವನ್ನಾಗಿ ಆರಿಸಿಕೊಂಡಿರುವ ಅಲ್ಯುಮಿನಿಯಂ ಪಾತ್ರೆಗಳ ವ್ಯಾಪಾರವೂ ಅವರ ಬದುಕಿಗೆ ಭದ್ರತೆ ಒದಗಿಸುವ ಬದಲು ಶೋಷಣೆಗೆ ಗುರಿಮಾಡಿದೆ. ಮಧ್ಯವರ್ತಿಗಳಿಂದ ಖರೀದಿಸಿದ ಪಾತ್ರೆ ಸಾಮಾನುಗಳನ್ನು ತಲೆಯ ಮೇಲೆ ಒತ್ತುಕೊಂಡು ತಿರುಗಿ ವ್ಯಾಪಾರ ಮಾಡುವ ಅವರ ಕೈಗೆ ಪುಡಿಗಾಸಿನ ಲಾಭ ಸಿಗುತ್ತದಯೇ ಹೊರತು, ಹೆಚ್ಚುವರಿ ಲಾಭಾಂಶವೆಲ್ಲಾ ಪಾತ್ರೆ ಸರಬರಾಜು ಮಾಡಿದ ಮಧ್ಯವರ್ತಿ ಪಾಲಾಗುತ್ತಿದೆ.

ವಂಶಪಾರಂಪರ್ಯವಾಗಿ ಬಂದಿರುವ ಬುಟ್ಟಿ ಹೆಣೆಯುವ ಹಾಗೂ ಪೊರಕೆ ತಯಾರಿಕೆ ಉದ್ಯೋಗದಲ್ಲಿ ಕರ್ನಾಟಕದ ಕೆಲವು ಪಟ್ಟಣದ ೭0ಕ್ಕೂ ಅಧಿಕ ಕುಟುಂಬ, ಸೇರಿದಂತೆ ಇತರೆಡೆ ನೂರಾರು ಕುಟುಂಬಗಳು ತೊಡಗಿಸಿಕೊಂಡಿವೆ. ಆದರೆ, ಅವುಗಳಿಗೆ ಬೇಕಾದ ಈಚಲಗಿಡದ ಗರಿ ಸ್ಥಳೀಯವಾಗಿ ದೊರಕದ ಪರಿಣಾಮ, 2-3 ತಿಂಗಳವರೆಗೂ ಬೇರೆ ಬೇರೆ ಪ್ರದೇಶಗಳಲ್ಲಿ ವಲಸೆಹೋಗಿ ಈಚಲ ಗರಿಗಳನ್ನು ಸಂಗ್ರಹಿಸುತ್ತಾರೆ. ಈ ಅವಧಿಯಲ್ಲಿ ಆ ಕುಟುಂಬದಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳುತ್ತಿವೆ. ಹೀಗಾಗಿ ಬಡತನ ಸಮುದಾಯವನ್ನು ಆವರಿಸಿದೆ ಎಂದು ಆತಂಕ ವ್ಯಕ್ತಪಡಿಸುತ್ತಾದೆ

ಇಷ್ಟೆಲ್ಲಾ ಶ್ರಮದ ಬೆವರುಬಸಿದು ತಯಾರಿಸಲಾದ ಬಿದಿರಿನ ಪರಿಕರಗಳನ್ನು ಮಾರಾಟ ಮಾಡುವುದೆ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ತಯಾರಿಸಿದ ಪರಿಕರಗಳನ್ನು ತಲೆಯ ಮೇಲೆ ಒತ್ತುಕೊಂಡು ಊರೂರು ಸುತ್ತಿ, ಸಂತೆಯಲ್ಲಿಟ್ಟು ಮಾರಾಟ ಮಾಡಲು ಹೋದರೆ, ಕೊಳ್ಳುವವರೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊಟ್ಟೆ ತುಂಬಿಸಿಕೊಳ್ಳಲು ಪರದಾಟ ನಡೆಸಬೇಕಾಗಿದೆ. ಮಕ್ಕಳ ಭವಿಷ್ಯ ರೂಪಿಸುವುದು ನಮ್ಮ (ಕೊರಮ) ಕೊರವರ ಕುಟುಂಬಗಳನ್ನು ಕಾಡುತ್ತಿದೆ.

ಆಧುನಿಕತೆಯ ವ್ಯಾಮೋಹದಲ್ಲಿ ಕರಗಿಹೋಗುತ್ತಿರುವ ಇಂತಹ ಕುಶಲ ಕಲೆಗಳನ್ನು ಉಳಿಸಿ- ಬೆಳೆಸಬೇಕಾಗಿದೆ.