ತ. ರಾ. ಸುಬ್ಬರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೪೦ ನೇ ಸಾಲು: ೪೦ ನೇ ಸಾಲು:
==ಕೃತಿಗಳು==
==ಕೃತಿಗಳು==
===ಕಾದಂಬರಿಗಳು===
===ಕಾದಂಬರಿಗಳು===

# [[doooragamana]]
# [[ನಾಗರಹಾವು]]
# [[ನಾಗರಹಾವು]]
# [[ಗಾಳಿಮಾತು]]
# [[ಗಾಳಿಮಾತು]]

೨೦:೧೦, ೨ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ

ತ.ರಾ.ಸುಬ್ಬರಾಯರು
Born1919
Diedಏಪ್ರಿಲ್ 10, 1984(1984-04-10)
Occupationಕಾದಂಬರಿಕಾರ

ತ.ರಾ.ಸುಬ್ಬರಾಯರು ಕನ್ನಡ ಓದುಗರಿಗೆಲ್ಲಾ (ತರಾಸು) ಎಂದು ಖ್ಯಾತರಾಗಿದ್ದರು. ಅವರು-ಕನ್ನಡದ ಖ್ಯಾತ ಕಾದಂಬರಿಕಾರ ಮತ್ತು ಸಾಹಿತಿ.

ಜನನ ಹಾಗೂ ಬಾಲ್ಯ

  • 'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಇವರ ಮನೆಮಾತು ತೆಲುಗು. ಇವರ ತಾತ 'ಸುಬ್ಬಣ್ಣ'ನವರು ೮ ವರ್ಷದವರಾಗಿದ್ದಾಗ ಆಂಧ್ರ ಪ್ರದೇಶದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು. ತಂದೆ ರಾಮಸ್ವಾಮಯ್ಯ'ನವರು 'ಪ್ಲೀಡರ್' ಆಗಿ ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದರು.
  • ಚಿಕ್ಕಂದಿನಿಂದ ಬಹಳ ತುಂಟರಾಗಿದ್ದ 'ಸುಬ್ಬರಾಯರು' ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು.

ವಿವಾಹ

ಸಂಬಂಧಿಗಳಲ್ಲೇ ಮದುವೆಯಾಗಿದ್ದ ಅವರ ಪತ್ನಿಯ ಹೆಸರು 'ಅಂಬುಜ'. ಬಹಳ ಸಮಯದ ನಂತರ ಹುಟ್ಟಿದ ಮೂವರು ಮಕ್ಕಳು 'ನಾಗಪ್ರಸಾದ್', 'ಪೂರ್ಣಿಮಾ' ಮತ್ತು 'ಪ್ರದೀಪ'. ಪತ್ನಿ ಮತ್ತು ಮಕ್ಕಳು ಮೈಸೂರಿನಲ್ಲಿ ವಾಸವಾಗಿದ್ದಾರೆ. ಮೈಸೂರಿನ ಯಾದವಗಿರಿಯಲ್ಲಿ ಕಟ್ಟಿಸಿದ ಅವರ ಮನೆಯ ಹೆಸರು 'ಗಿರಿಕನ್ಯಕಾ'.

ಅ.ನ.ಕೃ ಗುರುಗಳ ಸಾನಿಧ್ಯದಲ್ಲಿ

  • ಅವರಿಗೆ ಗುರುವಾಗಿದ್ದವರು ಅ.ನ. ಕೃಷ್ಣರಾಯರು. ಆ ಸಮಯಕ್ಕಾಗಲೇ ಸಾಮಾಜಿಕ ವಿಷಯಗಳ ಬಗ್ಗೆ ಕಾದಂಬರಿಗಳನ್ನು ಬರೆದಿದ್ದ ಅನಕೃ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಬರಹ ಅವರ ರಕ್ತಕ್ಕೆ ಬಂದಂತಿತ್ತು. ಅವರು ಬರೆದಿದ್ದ ಒಂದು ಕಾದಂಬರಿಯ (ಹಂಸ ಗೀತೆ) ವಸ್ತು ಹಿಂದಿ ಭಾಷೆಯ ಚಲನಚಿತ್ರವಾದ 'ಬಸಂತ್ ಬಹಾರ್' ಆಯಿತು.
  • ಅಲ್ಲಿಯವರೆವಿಗೆ ಅವರು ಕನ್ನಡದ ಹೋರಾಟದಲ್ಲಿ ಅನಕೃ ಮತ್ತಿತರ ಸಹೃದಯರರ ಜೊತೆ ಲೀನವಾಗಿದ್ದರು. ಕನ್ನಡದ ಹೋರಾಟದಲ್ಲಿ ಅನಕೃ ಅವರೊಂದಿಗೆ ಸರಿಸಾಟಿಯಾಗಿ ನಿಂತರು. ಅವರೊಂದಿಗೆ ಕೈ ಜೋಡಿಸಿದವರು ಮ.ರಾಮಮೂರ್ತಿಗಳು. ಆ ಸಮಯದಲ್ಲಿ ರಾಜ್ಯಾದ್ಯಂತ ಓಡಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡಲು ಶ್ರಮಿಸಿದರು.

ಚಲನಚಿತ್ರವಾದ ಸುಬ್ಬರಾಯರ ಕಾದಂಬರಿಗಳು

ಕಾದಂಬರಿಗಳನ್ನು ಬರೆದರೂ, ಹಣಗಳಿಕೆಯಲ್ಲಿ ವಿಫಲರಾಗಿದ್ದರು. ೧೯೬೦ರ ಸುಮಾರಿಗೆ ರಷ್ಯಾಗೆ ಸರ್ಕಾರದ ವತಿಯಿಂದ ಹೋದ ಮೇಲೆ ಅವರ ಅದೃಷ್ಟ ಬದಲಾಯಿತು. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು. ಅವರ ಕಾದಂಬರಿ ಆಧರಿಸಿ ಹೆಸರುಗಳಿಸಿದ ಕನ್ನಡದ ಮೊದಲ ಚಿತ್ರ

  1. ಚಂದವಳ್ಳಿಯ ತೋಟ. ನಂತರ ಬಂದದ್ದು ಜಿ.ವಿ.ಅಯ್ಯರ್ ನಿರ್ದೇಶನದಲ್ಲಿನ
  2. ಹಂಸಗೀತೆ. ಆ ವೇಳೆಗಾಗಲೇ ಅವರ ಆರೋಗ್ಯ ಬಹಳವಾಗಿ ಕೆಟ್ಟು ಹೋಗಿತ್ತು. ನಂತರ ಒಂದರ ಹಿಂದೊಂದರಂತೆ
  3. ನಾಗರಹಾವು,
  4. ಬೆಂಕಿಯ ಬಲೆ,
  5. ಗಾಳಿಮಾತು,
  6. 'ಬಿಡುಗಡೆಯ ಬೇಡಿ'
  7. ಮಸಣದ ಹೂ ಇತ್ಯಾದಿ ಕಾದಂಬರಿಗಳು ಚಲನಚಿತ್ರವಾದುವು.
  8. ಇವರ 'ಹಂಸಗೀತೆ' ಕಾದಂಬರಿಯನ್ನು ಆಧರಿಸಿ ೧೯೫೬ರಲ್ಲಿ ಬಸಂತ್ ಬಹಾರ್ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ಸುಪ್ರಸಿದ್ಧ ಹಿಂದಿ ಸಾಹಿತಿ ರಾಜೇಂದ್ರ ಸಿಂಹ್ ಬೇದಿಯವರ ಸಂಭಾಷಣೆಗಳು, ಶೈಲೇಂದ್ರ ಮತ್ತು ಹಸ್ರತ್ ಜೈಪುರಿಯವರ ಗೀತೆಗಳು, ಶಂಕರ್-ಜೈಕಿಶನ್ ರ ಸಂಗೀತ ಮತ್ತು ರಾಜಾ ನವಾಥೆಯವರ ನಿರ್ದೇಶನವಿರುವ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಭಾರತ್ ಭೂಷಣ್, ನಿಮ್ಮಿ, ಓಮ್ ಪ್ರಕಾಶ್, ಕುಂಕುಮ್, ಮನ್ ಮೋಹನ್ ಕೃಷ್ಣ, ಮುಂತಾದವರಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲೂ ಚಿತ್ರ ಜಯಪ್ರದವಾಗಿತ್ತು.

ಮಹತ್ವದ ಕೃತಿಗಳು

ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಅದರಲ್ಲಿ ವಿವರಿಸಿರುವ ಪಾಳೇಗಾರರ ವೈಭವ, ದರ್ಪ ಮತ್ತು ಕ್ರೌರ್ಯ ಮೈ ನವಿರೇಳುವಂತಿದೆ ಎನ್ನಲಾಗಿದೆ. ಇದು ತರಾಸು ಅವರ ಬರಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ.೧೯೭೦ರ ಸಮಯದಲ್ಲಿ ಶೃಂಗೇರಿ ಸ್ವಾಮಿಗಳ ಸಾನ್ನಿಧ್ಯದಲ್ಲಿದ್ದರು. ಆಗ ಆರೋಗ್ಯ ಸ್ವಲ್ಪ ಸುಧಾರಿಸಿತು. ಆ ಸಮಯದಲ್ಲಿ ಅವರು ಬರೆದ ಕಾದಂಬರಿ ೪ * ೪ = ೧.

ಕೃತಿಗಳು

ಕಾದಂಬರಿಗಳು

  1. ನಾಗರಹಾವು
  2. ಗಾಳಿಮಾತು
  3. ಕಸ್ತೂರಿ ಕಂಕಣ
  4. ಕಂಬನಿಯ ಕುಯಿಲು
  5. ರಾಜ್ಯದಾಹ
  6. ರಕ್ತರಾತ್ರಿ
  7. ತಿರುಗುಬಾಣ
  8. ಹೊಸ ಹಗಲು
  9. ವಿಜಯೋತ್ಸವ
  10. ನೃಪತುಂಗ
  11. ಸಿಡಿಲ ಮೊಗ್ಗು
  12. `ಚಂದವಳ್ಳಿಯ ತೋಟ'
  13. ಎರಡು ಹೆಣ್ಣು ಒಂದು ಗಂಡು
  14. ಮಾರ್ಗದರ್ಶಿ
  15. ಆಕಸ್ಮಿಕ
  16. ಅಪರಾಧಿ
  17. ಹಂಸಗೀತೆ
  18. 'ಬಿಡುಗಡೆಯ ಬೇಡಿ'

ನಿಧನ

ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ' ಗೆ ಸೇರಿದ್ದವರು, ಅಲ್ಲಿಯೇ ನಿಧನ ಹೊಂದಿದರು.

ಪ್ರಶಸ್ತಿಗಳು

ಬಾಹ್ಯ ಸಂಪರ್ಕಗಳು