ಎಂ. ಬಾಲಮುರಳಿ ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೪ ನೇ ಸಾಲು: ೨೪ ನೇ ಸಾಲು:
ಟಿ. ವಿ ಯಲ್ಲಿ ಆಕ್ಷನ್ ಚಲನ ಚಿತ್ರಗಳ ವೀಕ್ಷಣೆ, ಮತ್ತು ಮನೆಯಲ್ಲಿದ್ದಾಗ ಮಕ್ಕಳು-ಮೊಕ್ಕಳಜೊತೆಗೆ ಬೆರೆಯುವುದು. ವಿದೇಶಗಳಿಗೆ ಹೋದಾಗ, ಕಾಯಿನ್ ಹಾಕಿ, ಹಣಗಳಿಸುವ ಆಟವಾಡುವುದು.
ಟಿ. ವಿ ಯಲ್ಲಿ ಆಕ್ಷನ್ ಚಲನ ಚಿತ್ರಗಳ ವೀಕ್ಷಣೆ, ಮತ್ತು ಮನೆಯಲ್ಲಿದ್ದಾಗ ಮಕ್ಕಳು-ಮೊಕ್ಕಳಜೊತೆಗೆ ಬೆರೆಯುವುದು. ವಿದೇಶಗಳಿಗೆ ಹೋದಾಗ, ಕಾಯಿನ್ ಹಾಕಿ, ಹಣಗಳಿಸುವ ಆಟವಾಡುವುದು.


==ಸಂಗೀತವೇ ಅವರ ಜೀವನದ ಪ್ರಮುಖ ಹವ್ಯಾಸಗಳಲ್ಲೊಂದು.
==ಸಂಗೀತವೇ ಅವರ ಜೀವನದ ಪ್ರಮುಖ ಹವ್ಯಾಸಗಳಲ್ಲೊಂದು.==


ಬಾಲಮುರಳಿಕೃಷ್ಣ ಅವರು ಈ ಮೊದಲು ಪ್ರಚಲಿತವಿಲ್ಲದ ಹಲವು ಹೊಸ ರಾಗಗಳ ಸಂಯೋಜನೆ ಮಾಡಿದ್ದಾರೆ ; ಐದು ಸ್ವರಗಳಿಲ್ಲದೇ ರಾಗಗಳು ರಂಜಿಸುವುದಿಲ್ಲವೆಂಬ ಸಂಪ್ರದಾಯವಿತ್ತು. ಆದರೆ, ಅದನ್ನೂ ಮೀರಿ, ನಾಲ್ಕು ಹಾಗೂ ಮೂರು ಸ್ವರಗಳ ರಾಗಗಳನ್ನು ಬಾಲಮುರಳಿ ಅವರು ಕಲ್ಪಿಸಿದ್ದಾರೆ.
ಬಾಲಮುರಳಿಕೃಷ್ಣ ಅವರು ಈ ಮೊದಲು ಪ್ರಚಲಿತವಿಲ್ಲದ ಹಲವು ಹೊಸ ರಾಗಗಳ ಸಂಯೋಜನೆ ಮಾಡಿದ್ದಾರೆ ; ಐದು ಸ್ವರಗಳಿಲ್ಲದೇ ರಾಗಗಳು ರಂಜಿಸುವುದಿಲ್ಲವೆಂಬ ಸಂಪ್ರದಾಯವಿತ್ತು. ಆದರೆ, ಅದನ್ನೂ ಮೀರಿ, ನಾಲ್ಕು ಹಾಗೂ ಮೂರು ಸ್ವರಗಳ ರಾಗಗಳನ್ನು ಬಾಲಮುರಳಿ ಅವರು ಕಲ್ಪಿಸಿದ್ದಾರೆ.


ಬಾಲಮುರಳಿ ಅವರ ಹೊಸರಾಗಗಳಲ್ಲಿ ಕೆಲವು ಇಲ್ಲಿವೆ.:==
==ಬಾಲಮುರಳಿ ಅವರ ಹೊಸರಾಗಗಳಲ್ಲಿ ಕೆಲವು ಇಲ್ಲಿವೆ.:==


[[ಮಹತಿ]], [[ಸುಮುಖಂ]], [[ತ್ರಿಶಕ್ತಿ]], [[ಸರ್ವಶ್ರೀ]], [[ಓಂಕಾರಿ]], [[ಜನ ಸಮ್ಮೋದಿನಿ]], [[ಮನೋರಮ]], [[ರೋಹಿಣಿ]], [[ವಲ್ಲಭಿ]], [[ಲವಂಗಿ]], [[ಸುಸಮ]].
[[ಮಹತಿ]], [[ಸುಮುಖಂ]], [[ತ್ರಿಶಕ್ತಿ]], [[ಸರ್ವಶ್ರೀ]], [[ಓಂಕಾರಿ]], [[ಜನ ಸಮ್ಮೋದಿನಿ]], [[ಮನೋರಮ]], [[ರೋಹಿಣಿ]], [[ವಲ್ಲಭಿ]], [[ಲವಂಗಿ]], [[ಸುಸಮ]].

೦೫:೩೯, ೮ ಡಿಸೆಂಬರ್ ೨೦೦೭ ನಂತೆ ಪರಿಷ್ಕರಣೆ

ಡಾ. ಎಮ್. ಬಾಲಮುರಳಿಕೃಷ್ಣ

ಕೃತಿ ರಚನೆ, ೪೦೦ ಕ್ಕೂ ಹೆಚ್ಚು. ಒಟ್ಟು ಇದುವರೆವಿಗೆ, ನಡೆಸಿದ ಸಂಗೀತ ಕಛೇರಿಗಳು-೧೮,೦೦೦. ೨೫೦ ಕ್ಕಿಂತಲೂ ಹೆಚ್ಚು, 'ಮ್ಯೂಸಿಕ್ ಕ್ಯಾಸೆಟ್,' ಗಳನ್ನು ಬಿಡುಗಡೆಮಾಡಿದ್ದಾರೆ.

ಬಾಲ್ಯ ; ಸಂಗೀತದಲ್ಲಿ ಸಾಧನೆಮಾಡಿದ್ದ, ತಂದೆತಾಯಿಗಳ ಒಡನಾಟ  :

ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ, ಅವರು ಜನಿಸಿದ್ದು, ೬, ಜುಲೈ, ೧೯೩೦ ರಲ್ಲಿ. "ಸಂಕರ ಗುಪ್ತನ್," ಎಂಬ ಗ್ರಾಮದಲ್ಲಿ. ಇದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ, 'ರೋಜುಲು,' ತಾಲ್ಲೂಕಿನಲ್ಲಿದೆ. ತಂದೆ-ತಾಯಿಯರು, ಅವರಿಗೆ ಪ್ರೀತಿಯಿಂದ ಇಟ್ಟ ಹೆಸರು, 'ಮುರಳಿ ಕೃಷ್ಣ'. ಆದರೆ, ಆ ಊರಿನ ಪ್ರಸಿದ್ಧ ಹರಿಕಥಾ ವಿದ್ವಾನ್ ಶ್ರೀ. ಸತ್ಯನಾರಾಯಣರು, ಅವನ ಹೆಸರಿನ ಮೊದಲಿಗೆ "ಬಾಲ" ಎಂಬ ಪದವನ್ನು ಸೇರಿಸಿದರು. ಮನೆಯಲ್ಲಿ ಸಂಗೀತಮಯ ವಾತಾವರಣ. ತಂದೆ, ಪಟ್ಟಾಭಿರಾಮಯ್ಯ, ಕೊಳಲು, ವೀಣೆ ಪಿಟೀಲು ವಾದಕ. ತಾಯಿ, ಸೂರ್ಯಕಾಂತಮ್ಮ ನವವರು, ಶ್ರೇಷ್ಠ ವೀಣಾವಾದಕಿ. ತಮ್ಮ ೧೫ ನೆಯ ವಯಸ್ಸಿನಲ್ಲಿಯೇ, ಬಾಲಮುರಳಿಯವರ ತಾಯಿಯವರು ಮೃತಪಟ್ಟರು. ಬಾಲಮುರಳಿಯವರ ಸೋದರತ್ತೆಯವರು ಅವರನ್ನು ವಿಜಯವಾಡಕ್ಕೆ ಕರೆದುಕೊಂಡು ಹೋಗಿ, ತಮ್ಮ ಮನೆಯಲ್ಲಿ ಸಾಕಿ-ಸಲಹಿದರು. ಬಾಲ್ಯದಿಂದ ತಂದೆಯೇ ಅವರಿಗೆ ಗುರುಗಳು. ತಂದೆಯವರ ಸಂಗೀತಾಸಕ್ತಿ, ಹಾಗೂ ಅದರ ಪ್ರಭಾವ ಸಹಜವಾಗಿ ಮಗನಮೇಲೂ ಆಗಿತ್ತು. ಸಂಗೀತಾಭಿರುಚಿಯ ಉತ್ತುಂಗದಲ್ಲಿದ್ದ ಮಗನನ್ನು ಅವರು ಸುಸರ್ಲ ದಕ್ಷಿಣಾಮೂರ್ತಿಗಳ ಬಳಿ ಶಿಕ್ಷಣ ಕೊಡಿಸಲು ಕರೆದುಕೊಂಡು ಹೋದರು. ಕೆಲವೇ ವರ್ಷಗಳಲ್ಲಿ ಅವರು ೭೨ ಬಗೆಯ ರಾಗಗಳನ್ನು ಹೆಣೆದರು. ೧೯೬೦ ರಲ್ಲೇ, ವಿಜಯವಾಡ ರೇಡಿಯೋ ಕೇಂದ್ರದ, ಬೆಳಗಿನ ಕಾರ್ಯಕ್ರಮದಲ್ಲಿ "ಭಕ್ತಿರಂಜಿನಿ," ಎಂಬ ಗೀತಮಾಲೆಯನ್ನು ಪ್ರಾರಂಭಿಸಿ, ಅತ್ಯಂತ ಜನಪ್ರಿಯರಾದರು.


ಸಂಗೀತ ವಿದ್ವಾನ್, ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ, ಕರ್ನಾಟಕ ಸಂಗೀತ ಶೈಲಿಯ ಮೇರುಗಾಯಕ. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರ. ಭಾರತದೇಶ ಕಂಡ ಮಹಾನ್ ವಾಗ್ಗೇಯಕಾರ. ಬಾಲಮುರಳಿಯವರು, ದೇಶ-ವಿದೇಶಗಳಲ್ಲಿ ಸಾಕಷ್ಟು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲೆಯಾಳಂ ಚಲನ-ಚಿತ್ರಗಳಲ್ಲಿ ಹಾಡಿ, ಕಂಠದಾನ ಮಾಡಿದ್ದಾರೆ. ಕನ್ನಡ ಚಿತ್ರಗಳಾದ, ಸಂಧ್ಯಾರಾಗ, ಹಂಸಗೀತೆ, ಸುಬ್ಬಾಶಾಸ್ತ್ರಿ, ಗಾನಯೋಗಿ ರಾಮಣ್ಣ, ಶ್ರೀ ಪುರಂದರದಾಸರು, ಅಮ್ಮ, ಚಿನ್ನಾರಿ ಮುತ್ತಣ್ಣ, -ಹೀಗೆ ಹಲವಾರು ಹಾಡುಗಳು, ಕೀರ್ತನೆಗಳು, ದೇವರನಾಮಗಳನ್ನು ಹಾಡಿದ್ದಾರೆ. ಅವರು ೧೯೩೮ ರಲ್ಲಿ ನಡೆದ, "ಸದ್ಗುರು ಆರಾಧನಾ ಮಹೋತ್ಸವ," ದಲ್ಲಿ ತಮ್ಮ ಚೊಚ್ಚಲ ಸಂಗೀತ ಕಛೇರಿ ಕೊಟ್ಟರು. ಆಗ ಅವರಿಗೆ ಕೇವಲ ೮ ವರ್ಷ ವಯಸ್ಸು.

ಬಾಲಮುರಳಿಕೃಷ್ಣ ರವರ, ಹವ್ಯಾಸಗಳು :

ಹಾಡುಗಾರಿಕೆಯಲ್ಲದೆ, ಪಿಟೀಲು ನುಡಿಸುವ ಖಯಾಲಿದೆ. ಖಂಜಿರ, ಮೃದಂಗ, ಕೊಳಲು ಬಾರಿಸುವುದು ಇಷ್ಟ. ವಿಜಯವಾಡ ದಲ್ಲಿ, Government Music College ನ, ಪ್ರಥಮ ಪ್ರಾಂಶುಪಾಲರಾಗಿ ಸೇವೆಸಲ್ಲಿಸುತ್ತಿದ್ದಾರೆ. , ವಿಜಯವಾಡ , ಹೈದರಾಬಾದು ಮತ್ತು ಮದರಾಸು ಆಕಾಶವಾಣಿ ಕೇಂದ್ರಗಳಲ್ಲಿ ಸಂಗೀತ ನಿರ್ಮಾಪಕರಾಗಿಸೇವೆ ಸಲ್ಲಿಸಿದ್ದಾರೆ. ಅಭಿನಯ ಅವರಿಗೆ ಹೆಚ್ಚಾಗಿ ಗೊತ್ತಿಲ್ಲದಿರಬಹುದು, ಆದರೆ ಅವರೊಬ್ಬ ವಾಗ್ಗೇಯಕಾರರು, ಕವಿ, ಹೊಸತನ್ನೇ ಅರಸುತ್ತಾ ಸಂಶೋಧನೆಮಾಡುವ ಆಸೆ. ಸ್ವಿಟ್ ಝರ್ ಲ್ಯಾಂಡ್ ನಲ್ಲಿ, 'Academy of Performing arts & Research', ಸಂಸ್ಥೆ ಸ್ಥಾಪಿಸಿದ್ದಾರೆ. ಕಲೆ ಸಂಸ್ಕೃತಿಯ ಅಬಿವೃದ್ಧಿಗಾಗಿ ಮದರಾಸಿನಲ್ಲಿ "MBK" ಟ್ರಸ್ಟ್ ನ, ನೃತ್ಯ ಮತ್ತು ಸಂಗೀತಶಾಲೆ "ವಿಪಂಚಿ" ಆರಂಭಿಸಿದರು. 'ಸಂಧ್ಯಾ ಕೆಂದಿನ ಸಿಂಧೂರಂ,' ಮಲೆಯಾಳಂ ಚಿತ್ರದ ಪ್ರಮುಖ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಗೀತದ ಜೊತೆಜೊತೆಗೆ, ಪ್ರಿಯವಾದದ್ದು :

ಅವರು "ಸಾಪಾಟು ಪ್ರಿಯರು'(ಭೋಜನ ಪ್ರಿಯರು). ಅನ್ನ, ರಸಂ ಊಟ, ಹೆಚ್ಚು ಪ್ರಿಯ. ಕರಿದ ಬಜ್ಜಿ, ಐಸ್ಕ್ರೀಂ, ನಿಧಾನವಾಗಿ ಗಂಟೆ ಕಾಲ, ಆರಾಮವಾಗಿ ಊಟಮಾಡುವುದು ಬಹಳ ಇಷ್ಟ.

ಇಷ್ಟವಾದ ಮನರಂಜನೆ :

ಟಿ. ವಿ ಯಲ್ಲಿ ಆಕ್ಷನ್ ಚಲನ ಚಿತ್ರಗಳ ವೀಕ್ಷಣೆ, ಮತ್ತು ಮನೆಯಲ್ಲಿದ್ದಾಗ ಮಕ್ಕಳು-ಮೊಕ್ಕಳಜೊತೆಗೆ ಬೆರೆಯುವುದು. ವಿದೇಶಗಳಿಗೆ ಹೋದಾಗ, ಕಾಯಿನ್ ಹಾಕಿ, ಹಣಗಳಿಸುವ ಆಟವಾಡುವುದು.

ಸಂಗೀತವೇ ಅವರ ಜೀವನದ ಪ್ರಮುಖ ಹವ್ಯಾಸಗಳಲ್ಲೊಂದು.

ಬಾಲಮುರಳಿಕೃಷ್ಣ ಅವರು ಈ ಮೊದಲು ಪ್ರಚಲಿತವಿಲ್ಲದ ಹಲವು ಹೊಸ ರಾಗಗಳ ಸಂಯೋಜನೆ ಮಾಡಿದ್ದಾರೆ ; ಐದು ಸ್ವರಗಳಿಲ್ಲದೇ ರಾಗಗಳು ರಂಜಿಸುವುದಿಲ್ಲವೆಂಬ ಸಂಪ್ರದಾಯವಿತ್ತು. ಆದರೆ, ಅದನ್ನೂ ಮೀರಿ, ನಾಲ್ಕು ಹಾಗೂ ಮೂರು ಸ್ವರಗಳ ರಾಗಗಳನ್ನು ಬಾಲಮುರಳಿ ಅವರು ಕಲ್ಪಿಸಿದ್ದಾರೆ.

ಬಾಲಮುರಳಿ ಅವರ ಹೊಸರಾಗಗಳಲ್ಲಿ ಕೆಲವು ಇಲ್ಲಿವೆ.:

ಮಹತಿ, ಸುಮುಖಂ, ತ್ರಿಶಕ್ತಿ, ಸರ್ವಶ್ರೀ, ಓಂಕಾರಿ, ಜನ ಸಮ್ಮೋದಿನಿ, ಮನೋರಮ, ರೋಹಿಣಿ, ವಲ್ಲಭಿ, ಲವಂಗಿ, ಸುಸಮ.

ಸಂಗೀತಕ್ಕೆ ಹೊಸತನದ ಮೆರುಗು, ಚಿಕಿತ್ಸೆ ನೀಡುತ್ತ ರಾಗಗಳ ನಿರಂತರ ಸಂಶೋಧನೆ ನಡೆಸಿದ್ದಾರೆ. ವರ್ಣಂ ತಿಲ್ಲಾನ..ಕುರಿತ ’ಸೂರ್ಯಕಾಂತಿ' (೪ ಭಾಷೆಗಳಲ್ಲಿ ), (೬ ಭಾಷೆಗಳಲ್ಲಿ) ಎಂಬ, ಸಂಶೋಧನಾತ್ಮಕ ಪುಸ್ತಕಗಳು, ಹೊರಬಂದಿವೆ.

ಬೆಂಗಳೂರಿನ ಗಾಯನಸಮಾಜದಲ್ಲಿ, ಭಕ್ತಿಭಾರತಿ ಪ್ರತಿಷ್ಠಾನ ಏರ್ಪಡಿಸಿದ್ದ, ಪುರಂದರದಾಸೋತ್ಸವ ಭಕ್ತಿ ಮೇಳದಲ್ಲಿ ಸಂಗೀತ ಕಛೇರಿನೀಡಿದರು. ಭಾರತವಲ್ಲದೆ, ಅಮೆರಿಕ, ಕೆನಡ, ಇಟಲಿ, ಫ್ರಾನ್ಸ್, ರಷ್ಯಾ, ಶ್ರೀಲಂಕಾ, ಮಲೇಷ್ಯಾ, ಸಿಂಗಪುರ ಮುಂತಾದ ದೇಶಗಳಲ್ಲಿ ಸುಮಾರು ೨೦,೦೦೦ ಸಂಗೀತ ಕಛೇರಿಗಳನ್ನು ನೀಡಿ, ತಮ್ಮ ಕ್ಷೇತ್ರವನ್ನು ವಿಶ್ವವ್ಯಾಪಿಯಾಗಿಸಿಕೊಂಡಿದ್ದಾರೆ. ನೂರಾರು ಕ್ಯಾಸೆಟ್ ಆಲ್ಬಂಗಳು ಹೊರಬಂದಿವೆ. ಇವರು ಸಂಯೋಜಿಸಿದ ಮಹದೇವಸುತಂ, ಶ್ರೀ ಸಕಲ ಗಣಾದಿಪ, ಗಂಗಂ ಗಣಪತಿ, ಕೃತಿಗಳು ಅತ್ಯಂತ ಯಶನ್ನು ಕಂಡಿವೆ.

ಪ್ರಶಸ್ತಿಗಳು :

  • ಗೌರವ ಪಿ. ಎಚ್. ಡಿ ; ಡಿ. ಎಸ್. ಸಿ ; ಡಿ. ಲಿಟ್, ಆಂಧ್ರ ಪ್ರದೇಶ, ವಿಶ್ವವಿದ್ಯಾಲಯದಿಂದ.
  • ೧೯೭೮ ರಲ್ಲಿ ಸಂಗೀತ ಕಲಾನಿಧಿ.
  • ೧೯೯೨ ರಲ್ಲಿ ವಿಸ್ಡಮ್ ಮ್ಯಾನ್ ಆಫ್ ದ ಯಿಯರ್, ಪ್ರಶಸ್ತಿ.
  • ೧೯೯೬ ರಲ್ಲಿ ನಾದಬ್ರಹ್ಮ-ನೃತ್ಯಾಲ ಹಾಗೂ ಈಸ್ತೆಟಿಕ್ ಸಂಘ.
  • ಪದ್ಮಭೂಷಣ, ಪ್ರಶಸ್ತಿ
  • ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ತಿ, "ಹಂಸಗೀತೆ," ಕನ್ನಡ ಚಲನ ಚಿತ್ರಕ್ಕೆ.
  • "ಮಧ್ವಾಚಾರ್ಯ," ಚಿತ್ರಕ್ಕೆ ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ಸೇರಿವೆ.
  • ತಿರುಪತಿ ತಿರುಮಲದೇವಸ್ಥಾನ, ಶೃಂಗೇರಿ ಪೀಠ, ಮತ್ತು ನಂಜನಲ್ಲೂರಿನ ಆಂಜನೇಯಸ್ವಾಮಿ ದೇವಸ್ಥಾನದ ಆಸ್ಥಾನ ವಿದ್ವಾನ್ ಪಟ್ಟಕ್ಕೆ ಪಾತ್ರರಾಗಿದ್ದಾರೆ.

-ಜಿ. ಜಿ. ನಾಗರಾಜ, ಮತ್ತು ಹಲವಾರು ಮೂಲಗಳಿಂದ.