ಮೋಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು →‎ಷಡ್ದರ್ಶನಗಳಲ್ಲಿ ಮೋಕ್ಷ: ಮುಂದುವರೆದಿದೆ.
೩೦ ನೇ ಸಾಲು: ೩೦ ನೇ ಸಾಲು:
:ಕರ್ಮವಾದಿಗಳಾದ ಪೂರ್ವ ಮೀಮಾಂಸಕರ ಪ್ರಕಾರ ಜಗತ್ತಿನೊಡನೆ, ಆತ್ಮ ಸಂಬಂಧ ನಾಶವೇ ಮೋಕ್ಷ. ಭೋಗಾಯತ ನವಾದ ಶರೀರ, ಭೋಗ ಸಾಧನವಾದ ಇಂದ್ರಿಯಗಳು ಭೋಗ ವಿಷಯಗಳಾದ ಪದಾರ್ಥಗಳು ,ಈ ಮೂರೂ ಸಂಸಾರದ ಬಂಧನಕ್ಕೆ ಆತ್ಮವನ್ನು ಸಿಲುಕಿಸಿವೆ. , ಇವುಗಳಾತ್ಯಂತಿಕ ನಾಶವೇ ಮೋಕ್ಷ . ಪ್ರಭಾಕರ ಮುಂತಾದವರುನಿಯೋಗ ಸಿದ್ಧಿಯೇ ಮೋಕ್ಷವೆನ್ನುತ್ತಾರೆ. ಎಂದರೆ ಫಲಾಪೇಕ್ಷೆಯಿಲ್ಲದ ನಿತ್ಯಕರ್ಮ,ಕರ್ತವ್ಯ ದೃಷ್ಟಿಯಿಂದ ಮಾಡುವುದು , -ಕರ್ತವ್ಯ ಕ್ರಿಯೆಯಿಂದ ಮೋಕ್ಷ. ಆನಂದಾನುಭವದ ವಿಚಾರವಿಲ್ಲ. ನ್ಯಾಯ ದರ್ಶನದಂತೆ ಚೈತನ್ಯವು ಆತ್ಮನ ಸ್ವಭಾವ ಗುಣವಲ್ಲ. ಮೋಕ್ಷಕ್ಕೆ ಕರ್ಮ ಮತ್ತು ಜ್ಞಾನ ಎರಡೂ ಅವಶ್ಯ . ಇದು ಜ್ಞಾನ ಕರ್ಮ ಸಮುಚ್ಚಯ ವಾದ. ಪ್ರಾಚೀನ ಮೀಮಾಂಸಕರು ಸ್ವರ್ಗವೇ ಕೊನೆಯ ಹಂತವೆನ್ನುವರು. ನಂತರದವರು ಮೋಕ್ಷ ವಿಚಾರವನ್ನು ಸೇರಿಸಿದರು.
:ಕರ್ಮವಾದಿಗಳಾದ ಪೂರ್ವ ಮೀಮಾಂಸಕರ ಪ್ರಕಾರ ಜಗತ್ತಿನೊಡನೆ, ಆತ್ಮ ಸಂಬಂಧ ನಾಶವೇ ಮೋಕ್ಷ. ಭೋಗಾಯತ ನವಾದ ಶರೀರ, ಭೋಗ ಸಾಧನವಾದ ಇಂದ್ರಿಯಗಳು ಭೋಗ ವಿಷಯಗಳಾದ ಪದಾರ್ಥಗಳು ,ಈ ಮೂರೂ ಸಂಸಾರದ ಬಂಧನಕ್ಕೆ ಆತ್ಮವನ್ನು ಸಿಲುಕಿಸಿವೆ. , ಇವುಗಳಾತ್ಯಂತಿಕ ನಾಶವೇ ಮೋಕ್ಷ . ಪ್ರಭಾಕರ ಮುಂತಾದವರುನಿಯೋಗ ಸಿದ್ಧಿಯೇ ಮೋಕ್ಷವೆನ್ನುತ್ತಾರೆ. ಎಂದರೆ ಫಲಾಪೇಕ್ಷೆಯಿಲ್ಲದ ನಿತ್ಯಕರ್ಮ,ಕರ್ತವ್ಯ ದೃಷ್ಟಿಯಿಂದ ಮಾಡುವುದು , -ಕರ್ತವ್ಯ ಕ್ರಿಯೆಯಿಂದ ಮೋಕ್ಷ. ಆನಂದಾನುಭವದ ವಿಚಾರವಿಲ್ಲ. ನ್ಯಾಯ ದರ್ಶನದಂತೆ ಚೈತನ್ಯವು ಆತ್ಮನ ಸ್ವಭಾವ ಗುಣವಲ್ಲ. ಮೋಕ್ಷಕ್ಕೆ ಕರ್ಮ ಮತ್ತು ಜ್ಞಾನ ಎರಡೂ ಅವಶ್ಯ . ಇದು ಜ್ಞಾನ ಕರ್ಮ ಸಮುಚ್ಚಯ ವಾದ. ಪ್ರಾಚೀನ ಮೀಮಾಂಸಕರು ಸ್ವರ್ಗವೇ ಕೊನೆಯ ಹಂತವೆನ್ನುವರು. ನಂತರದವರು ಮೋಕ್ಷ ವಿಚಾರವನ್ನು ಸೇರಿಸಿದರು.
::'''ಅದ್ವೈತ ದರ್ಶನ'''
::'''ಅದ್ವೈತ ದರ್ಶನ'''
:ಅದ್ವೈತದ ಪ್ರಕಾರ ಮೋಕ್ಷವು ,ಸತ್-ಚಿತ್-ಆನಂದದ ಸ್ಥಿತಿ/ ಸ್ವರೂಪಿ. ಅವಿದ್ಯೆಯ (ಮಾಯೆಯ) ಕಾರಣ ,ಆತ್ಮನಿಗೆ ಬಂಧನವಾಗಿದೆ ;ಎಂದರೆ ಅವನು ಸ್ವಸ್ವರೂಪವನ್ನು ತಿಳಿದಿಲ್ಲ. ಮಿಥ್ಯಾಭಾಸದ ನಿವಾರಣೆಯಾಗಿ ನಾನೇ ಬ್ರಹ್ಮವೆಂದು ಜ್ಞಾನ ಉದಯವಾದಾಗ ಮುಕ್ತಿ. '''ಬ್ರಹ್ಮವನ್ನು ತಿಳಿದವನು ಬ್ರಹ್ಮವೇಆಗುತ್ತಾನೆ''' ಎಂದು [[ಶ್ರುತಿ]]ಯು ಹೇಳುತ್ತದೆ . ಅಜ್ಞಾನದ ನಿವಾರಣೆಯು ದೇಹವಿದ್ದಾಗಲೂ , ಬಿಡುವಾಗಲೂ ಯಾವಾಗ ಬೇಕಾದರೂ ಆಗಬಹುದು. 'ಜೀವನ್ಮುಕ್ತಿ' ಯೂ ಉಂಟು , 'ವಿದೇಹಮುಕ್ತಿ'ಯೂ ಉಂಟು. ಕರ್ಮದಿಂದ** ಮುಕ್ತಿಯಿಲ್ಲ -ಚಿತ್ತ ಶುದ್ದಿಯಿಂದ ಮಾತ್ರಾ ಮುಕ್ತಿಯನ್ನು ಪಡೆಯಬಹುದು . [[ಜ್ಞಾನ]]ದಿಂದ ಮಾತ್ರಾ ಮುಕ್ತಿ ಪಡೆಯಯಬಹುದು (**ಹೋಮ,ಹವನ, ಯೋಗ ಪ್ರಾಣಯಾಮ, ಜಪ,ತಪ, ಪಾರಾಯಣ.ಭಕ್ತಿ-ಭಜನೆ, ಪೂಜೆ, ಯಾತ್ರೆ. ಸೇವೆ-ದಾನ-ಧರ್ಮ ಇತ್ಯಾದಿ ಕರ್ಮಗಳು ; ಜ್ಞಾನವೆಂದರೆ ತಾನೇ ಆತ್ಮನೆಂಬ -ಬ್ರಹ್ಮವೆಂಬ ಅರಿವು-ಅನುಭವ ; ಆತ್ಮವು ಮೂಲ ಚೈತನ್ಯದಲ್ಲಿ ಸೇರಿಹೋಗುವುದು.). (ಮೋಕ್ಷದ ವ್ಯಾಖ್ಯೆಯು ಉಳಿದ ದರ್ಶನಕ್ಕಿಂತ ಬೇರೆ ಮತ್ತು ಸ್ಪಷ್ಟ)
== ಭಕ್ತಿಪಂಥದಲ್ಲಿ ಮೋಕ್ಷ ==
::'''ವಿಶಿಷ್ಟಾದ್ವೈತ ಮತ್ತು ಮೋಕ್ಷ'''
:ವಿಶಿಷಾದ್ವೈತದ ಪ್ರಕಾರ ವೈಕುಂಠವೆಂಬ ಅಪ್ರಾಕೃತ ಲೋಕದಲ್ಲಿ ಪರಮಾತ್ಮನಿಗೆ ಸಮನಾದ ಆನಂದವನ್ನು ಪಡೆಯುವುದೇ ಮುಕ್ತಿ. ಜೀವನು ದೇವಯಾನವೆಂಬ , ಜ್ಯೋತಿರ್ಮಾರ್ಗವನ್ನು ಹಿಡಿದು ಆನಂದಮಯವಾದ ವೈಕುಂಠವನ್ನು ಸೇರುತ್ತಾನೆ . ಸರ್ವಜ್ಞತ್ವಾದಿ ಗುಣಗಳನ್ನು ಪಡೆಯುತ್ತಾನೆ. ಕರ್ಮಸಂಬಂಧದಿಂದ ಪಾರಾಗಿ ಅಪ್ರಾಕೃತ (ದಿವ್ಯ) ದೇಹ ಪಡೆದು 'ಸಾಲೋಕ್ಯ ; ಸಾಮೀಪ್ಯ ; ಸಾರೂಪ್ಯ ; ಸಾಯುಜ್ಯ'ಗಳೆಂಬ ಮುಕ್ತಿಯನ್ನು ಪಡೆಯುತ್ತಾನೆ . ವಿಶ್ವೇಶ್ವರತ್ವ , ಜಗತ್ಕೃತ್ವ ಬಿಟ್ಟು ಉಳಿದ ಎಲ್ಲಾ ಈಶ್ವರನ-ಶಕ್ತಿ ಪಡೆಯುತ್ತಾನೆ. ಆದರೆ ಪರಮಾತ್ಮನಲ್ಲಿ ಸೇರಲಾರ ; ಅವನ ಕೈಂಕರ್ಯದಿಂದ ಆನಂದ ಪಡೆಯುತ್ತಾನೆ. ಇದನ್ನು ಪಡೆಯಲು , ಜ್ಞಾನ ಕರ್ಮ ಭಕ್ತಿ, ಮಾರ್ಗಗಳನ್ನು ಅನುಸರಿಸಬೇಕು. ಭಕ್ತಿ ಶ್ರೇಷ್ಠವಾದುದು. ಇದನ್ನು ಪಡೆಯಲು ಈಶ್ವರನ ಅನುಗ್ರಹವೂ ಬೇಕು. '''ಜೀವನ್ಮಕ್ತಿ''' ಎಂಬುದಿಲ್ಲ ; ಇದು ರಾಮಾನುಜರ ಸಿದ್ಧಾಂತ.

::'''ಮಾಧ್ವಮತ-ದ್ವೈತ'''
ಮುಂದುವರಯುವುದು / ಮುಂದುವರೆದಿದೆ.
ಮುಂದುವರಯುವುದು / ಮುಂದುವರೆದಿದೆ.



೧೭:೨೩, ೧೬ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ಮೋಕ್ಷ ಯೋಗದಲ್ಲಿ ಒಂದು ಮುಖ್ಯ ಪರಿಕಲ್ಪನೆ.ಇಲ್ಲಿ ಇದು ಎಚ್ಚರದ,ಸ್ವಾತಂತ್ರ್ಯದ ಮತ್ತು ಬಿಡುಗಡೆಯ ಸ್ಥಿತಿ.[೧]

ಮೋಕ್ಷ - ಪೀಠಿಕೆ

ಮೋಕ್ಷವೆಂದರೆ, ಹಿಂದೂ ಮತ್ತು ಜೈನ ಧರ್ಮದ ಪ್ರಕಾರ, ಜನನ-ಮರಣದ ಚಕ್ರಗಳಿಂದ ಜೀವಚರಗಳಿಗೆ ಸಿಗುವ ಮುಕ್ತಿ. ಪ್ರತಿಯೊಬ್ಬನ ಪರಮೋಚ್ಚ ಗುರಿ ಇದಾಗಿರುತ್ತದೆ. ಇದು ಭಾರತೀಯ ದರ್ಶನನಗಳ ಪ್ರಕಾರ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದು-ಮೋಕ್ಷ ಕೊನೆಯದು. ಧರ್ಮ,ಅರ್ಥ ಮತ್ತು ಕಾಮ ಉಳಿದ ಮೂರು.ಮನುಷ್ಯನ ಮರಣ ಸಂಭವಿಸಿದಾಗ ದೇಹದೊಳಗಿನ ಆತ್ಮ ಮರುಹುಟ್ಟು ಪಡೆಯದೆ ಪರಮಾತ್ಮನಲ್ಲಿ ಐಕ್ಯ ಹೊಂದುವುದು. ಈ ಸ್ಥಿತಿ ಸ್ವರ್ಗಕ್ಕಿಂತ ಶ್ರೇಷ್ಠ. ಎಕೆಂದರೆ ಸ್ವರ್ಗ ಪ್ರಾಪ್ತಿ ಕೇವಲ ಮನುಷ್ಯನ ಪಾಪ ಪುಣ್ಯಗಳನ್ನು ಆಧರಿಸಿದ್ದು ಅದು ಮುಗಿದ ಮೇಲೆ ಕರ್ಮಾನುಸಾರ ಮರು ಹುಟ್ಟು ಪಡೆಯಬೇಕಾಗುತ್ತದೆ.ಆದರೆ ಮುಕ್ತಿ ಅಥವಾ ಮೋಕ್ಷದ ಸ್ಥಿತಿ ಅನಂತಕಾಲ ಅನಂದಾತಿಶಯದಲ್ಲಿ ಇರುವಂತಹ ಸ್ಥಿತಿ.ಈ ವಿಚಾರಸಲ್ಲಿ ಭಾರತೀಯ ದರ್ಶನಗಳಲ್ಲಿ ಒಮ್ಮತವಿಲ್ಲ ; ಒಂದೊಂದು ದರ್ಶನದಲ್ಲಿ ಒಂದೊಂದು ರೀತಿ ಹೇಳಿದೆ. (ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ);ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷವು ಒಂದು ಚರ್ಚಾವಿಷಯವಾಗಿದೆ.

ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಮೋಕ್ಷವೆಂದರೆ ಬಿಡುಗಡೆ; ಜನ್ಮಾಂತರ ಚಕ್ರದ ಅಂತ್ಯ.ಅಂತ್ಯವಿಲ್ಲದ ಆನಂದ ಮಯ ಸ್ಥಿತಿ . ಭಾರತೀಯ ತಾತ್ವಿಕ -ಧಾರ್ಮಿಕ ಜೀವನದ ಅಂತಿಮ ಗುರಿ. ಅದು ಪರಮ (ಅಂತಿಮ) ಪುರುಷಾರ್ಥ.

ನಿರೀಶ್ವರವಾದಿಗಳಲ್ಲಿ ಮೋಕ್ಷ

ಚರ್ವಾಕರು ಮೋಕ್ಷವೆನ್ನುವುದು ಕೇವಲ ಕಲ್ಪನೆ ಎನ್ನುತ್ತಾರೆ . ಅವರ ದೃಷ್ಟಿಯಲ್ಲಿ ಸಾವೇ ಬಿಡುಗಡೆ . ಏಕೆಂದರೆ ಅವರಿಗೆ ಪುನರ್ಜನ್ಮದಲ್ಲಿ ಮತ್ತು ದೇವರಲ್ಲಿ ನಂಬುಗೆ ಇಲ್ಲ.
ಜೈನರು
ಜೈನರು ದೇವರು ಅಥವಾ ಮೂಲಚೈತನ್ಯ ಪರಬ್ರಹ್ಮವನುಪ್ಪುವುದಿಲ್ಲ . ಅವರ ಮೋಕ್ಷದ ವ್ಯಾಖ್ಯೆ ಬೇರೆಯೇ ಇದೆ.
ಜೈನರು ಕರ್ಮ ಕ್ಷಯವೇ ಮೋಕ್ಷವೆನ್ನುತ್ತಾರೆ. ಕರ್ಮ ಒಂದು ಭೌತವಸ್ತು -ಪುದ್ಗಲ. ರಾಗ, ದ್ವೇಷ, ಅಜ್ಞಾನ , 'ಆಶ್ರವ' ರೀತಿಯಲ್ಲಿ (ಕೊಳವೆ ನೀರಿನಂತೆ ) ಜೀವ ನಲ್ಲಿ ತುಂಬುವುದು. 'ಸಮ್ಯಕ್ ಜ್ಞಾನ' , 'ಸಮ್ಯಕ್ ದರ್ಶನ' , 'ಸಮ್ಯಕ್ ಚಾರಿತ್ರ್ಯ'ದಿಂದ ಈ ಕರ್ಮದ ಆಸ್ರವ ನಿಂತು (ನೀರು ತುಂಬುವುದು ನಿಂತಂತೆ.) 'ಸಂವರ' ಸ್ಥಿತಿ ತಲುಪುವುದು. ನಂತರ 'ನಿರ್ಜರಾ'ದಿಂದ -ಕಾಯ ಕ್ಲೇಶಗಳಿಂದ , ಒಳಗಿರುವ ಕರ್ಮವನ್ನು ಹೊರಹಾಕಿ ಕರ್ಮ ಕ್ಷಯವಾದ ಮೇಲೆ ಮುಕ್ತಿ . ಈ ಮುಕ್ತ ಜೀವವು ಲೋಕಾಕಾಶದಲ್ಲಿ 'ಶಿದ್ಧಶಿಲೆ' ಯೆಂಬ ಅತ್ಯುನ್ನತ ಸ್ಥಾನವನ್ನು ಪಡೆಯುತ್ತದೆ. ಅಲ್ಲಿ 'ಅನಂತ ಜ್ಞಾನ' , 'ಅನಂತ ದರ್ಶನ' , 'ಅನಂತ ವೀರ್ಯ(ಶಕ್ತಿ)' , ಸಂಪನ್ನರಾಗಿ ಜೀವವು, ಅನಂತ ಶಾಂತಿ ಪಡೆಯುತ್ತದೆ. ಸಾಧನೆಯಿಂದ ಇದನ್ನು ಎಲ್ಲರೂ ಪಡೆಯಬಹುದು.
ಬೌದ್ಧರು
ಬೌದ್ಧರು ಜೈನರಂತೆ ದೇವರು ಅಥವಾ ಮೂಲಚೈತನ್ಯ ಪರಬ್ರಹ್ಮವನುಪ್ಪುವುದಿಲ್ಲ . ಅವರ ಮೋಕ್ಷದ ವ್ಯಾಖ್ಯೆಯೂ ಬೇರೆಯೇ ಇದೆ.
ಬೌದ್ಧರು ನೋಕ್ಷವನ್ನು 'ನಿರ್ವಾಣ' ಎನ್ನುತ್ತಾರೆ. ನಿರ್ವಾಣನ್ನುವುದಕ್ಕೆ ಅಕ್ಷರಾರ್ಥ -ಅಳಿಸಿಹೋಗುವುದು / ನಂದಿಹೋಗುವುದು.
ಆರ್ಯಸತ್ಯ ಗಳಲ್ಲಿ 'ಅಜ್ಞಾನ'ವೇ ಬಂಧಕ್ಕೆ ಕಾರಣ. ದುಃಖ , ದುಃಖಮೂಲ, ದುಃಖ ನಿವಾರಣಾ ಮಾರ್ಗ , ದುಃಖ ನಿವಾರಣ- 'ಈ ನಾಲ್ಕನ್ನು' ಚೆನ್ನಾಗಿ ತಿಳಿದು -'ಆರ್ಯ ಅಷ್ಟಾಂಗ ಮಾರ್ಗ'ವನ್ನು ಅನುಸರಿಸಿದರೆ ದುಃಖದಿಂದ ಬಿಡುಗಡೆ ದೊರೆಯುತ್ತದೆ. ಸಂಸಾರಕ್ಕೆ ಕಾರಣವಾದ , ವಾಸನೆಗಳೆಲ್ಲಾ ಅಳಿದು ಜ್ಞಾನೋದಯವಾಗುತ್ತದೆ . ಈ ಹಂತ ಪಡೆದವನು ಅರ್ಹತ್ ಆಗುತ್ತಾನೆ. ವೈಬಾಷಿಕರು ಅರ್ಹತನು ಆಸ್ರವ ಕ್ಷಯ ನಂತರ ಜೀವಿಸಿದ್ದರೆ ಅದು 'ಸೋಪಧಿಶೇಷ ಸ್ಥಿತಿ' ; ಮರಣಾನಂತರದ್ದು 'ನಿರುಪಧಿಶೇಷ ಸ್ಥಿತಿ'. ಹೀಗೆ ಎರಡು ಬಗೆ 'ಮೋಕ್ಷ' ವಿದೆ ಎನ್ನುತ್ತಾರೆ. ವಿಜ್ಞಾನವಾದಿಗಳು 'ಕ್ಲೇಷಾವರಣ', 'ಜ್ಞೇಯಾವರಣ' , ನಾಶವೇ ಮೋಕ್ಷ ವೆನ್ನುತ್ತಾರೆ ; ಮಾದ್ಯಮಿಕರು 'ಶೂನ್ಯತಾ ಪ್ರಾಪ್ತಿ'ಯೇ ಮೋಕ್ಷವೆನ್ನುತ್ತಾರೆ.

ಷಡ್ದರ್ಶನಗಳಲ್ಲಿ ಮೋಕ್ಷ

ಸಾಂಖ್ಯದರ್ಶನ
ಸಾಂಖ್ಯದರ್ಶನದ ಪ್ರಕಾರ ಪುರುಷನು ಪ್ರಕೃತಿಯ ಸಂಪರ್ಕವನ್ನು ಪೂರ್ತಿಯಾಗಿ ಕಳೆದು ಕೊಳ್ಳುವುದೇ ಮೋಕ್ಷ . ಪ್ರಕೃತಿಸಂಬಂಧದಿಂದ ಬದ್ಧತೆ ಯಾಗುತ್ತದೆ ; ಕರ್ತೃತ್ವ ಭೋರ್ಕ್ತೃತ್ವ ದಿಂದ ದುಃಖ ; ಪ್ರಕೃತಿಯೇ ಬಂಧಕ್ಕೆ ಕಾರಣವೆಂಬ ಅರಿವೇ ಅಪವರ್ಗ ಅಥವಾ ಕೈವಲ್ಯಕ್ಕೆ ದಾರಿ. ಕೈವಲ್ಯ ಪುರುಷನ ನಿಜ ಸ್ವರೂಪ ಸ್ಥಿತಿ . ದುಃಖದ ಲೇಶವೂ ಇಲ್ಲರ ಸ್ಥಿತಿ. ಅಲ್ಲಿ ಆನಂದವೂಇಲ್ಲ ದುಃಖವೂ ಇಲ್ಲ. ಜೀವನ್ಮುಕ್ತಿ ವಿದೇಹ ಮುಕ್ತಿ ಎಂಬ ಅರಡೂ ಬಗೆಯ ಮುಕ್ತಿ ಇದೆ.
ಯೋಗ ದರ್ಶನ
ಯೋಗ ದರ್ಶನವೂ ಸಾಂಖ್ಯ ಮತವನ್ನೊಪ್ಪುತ್ತದೆ.Sದರೆ ಧ್ಯಾನ ಮಾಡುವ ವಸ್ತುವಿನಲ್ಲಿ ಮನಸ್ಸು ಲೀನವಾದರೆ -ಅದು ಸಂಪ್ರಜ್ಞಾತ ಸಮಾಧಿ -ಅದೇ ಕೈವಲ್ಯ. ವಿಶುದ್ಧ ಚೈತನ್ಯವು ತಾನೇತಾನಾಗಿರುವುದು -ಅಸಂಪ್ರಜ್ಞಾತ ಸಮಾಧಿ . ಇದು ನಿಜವಾದ ಕೈವಲ್ಯ ಸ್ಥಿತಿ. ಇದು ಯೋಗದ ಗುರಿ. ಇದಕ್ಕೆ ಯಮ, ನಿಯಮಾದಿಗಳು ಸಾಧನೆಯ ದಾರಿ.
ನ್ಯಾಯ ದರ್ಶನ
ನ್ಯಾಯದರ್ಶನವೂ ಯೋಗ ದರ್ಶನದ ಸಾಧನೆಗಳನ್ನು ಒಪ್ಪಿದೆ ; ದುಃಖದ ನಿವೃತ್ತಿಯನ್ನು -ಅಪವರ್ಗ ಅಥವಾ ಮೋಕ್ಷವೆನ್ನುತ್ತದೆ. ಇದು-ಮೋಕ್ಷ , ಅಜ್ಞಾನದ ನಿವೃತ್ತಿ ಅಥವಾ ಜ್ಞಾನ ಪ್ರಾಪ್ತಿಯಿಂದ ಸಾಧ್ಯ. ಮುಕ್ತಾವಸ್ಥೆಯಲ್ಲಿ ಆತ್ಮನಲ್ಲಿ ಯಾವ ಗೂಣಗಳೂ ಇರುವುದಿಲ್ಲ. ಎಲ್ಲಾ ಸಂಸ್ಕಾರ , ಭಾವನೆಗಳಿಂದ ಅತೀತವಾಗಿದ್ದು -ಆತ್ಮನ ವಿಶುದ್ಧ ರೂಪ. ಆನಂದವೂ ಇಲ್ಲ -ದುಃಖವೂ ಇಲ್ಲ. ಆತ್ಮನಲ್ಲಿ ಚೈತನ್ಯವುಂಟಾಗುವುದು ಶರೀರ ಸಂಪರ್ಕದಿಂದ ಮಾತ್ರಾ .
ವೈಶೇಷಿಕ ದರ್ಶನ
ವೈಶೇಷಿಕ ದರ್ಶನವೂ ಮೋಕ್ಷ ವಿಚಾರದಲ್ಲಿ , ನ್ಯಾಯ ದರ್ಶನದ ಮತವನ್ನೇ ಅನುಸರಿಸುತ್ತದೆ. ಆತ್ಮನಲ್ಲಿ ಆನಂದವೂ ಇಲ್ಲ , ದುಃಖವೂ ಇಲ್ಲ. ಆದರೆ ಈ ಅಭಿಪ್ರಾಯವು ಟೀಕೆಗೆ ಒಳಗಾದ್ದರಿಂದ ನಂತರದ ವೈಶೇಷಿಕರು ಮೋಕ್ಷದಲ್ಲಿ ನಿರತಿಶಯ ಸುಖವಿದೆಯೆಂದು ಹೇಳಿದ್ದಾರೆ.
ಪೂರ್ವ ಮೀಮಾಂಸಕರು (ಕರ್ಮವಾದಿಗಳು)
ಕರ್ಮವಾದಿಗಳಾದ ಪೂರ್ವ ಮೀಮಾಂಸಕರ ಪ್ರಕಾರ ಜಗತ್ತಿನೊಡನೆ, ಆತ್ಮ ಸಂಬಂಧ ನಾಶವೇ ಮೋಕ್ಷ. ಭೋಗಾಯತ ನವಾದ ಶರೀರ, ಭೋಗ ಸಾಧನವಾದ ಇಂದ್ರಿಯಗಳು ಭೋಗ ವಿಷಯಗಳಾದ ಪದಾರ್ಥಗಳು ,ಈ ಮೂರೂ ಸಂಸಾರದ ಬಂಧನಕ್ಕೆ ಆತ್ಮವನ್ನು ಸಿಲುಕಿಸಿವೆ. , ಇವುಗಳಾತ್ಯಂತಿಕ ನಾಶವೇ ಮೋಕ್ಷ . ಪ್ರಭಾಕರ ಮುಂತಾದವರುನಿಯೋಗ ಸಿದ್ಧಿಯೇ ಮೋಕ್ಷವೆನ್ನುತ್ತಾರೆ. ಎಂದರೆ ಫಲಾಪೇಕ್ಷೆಯಿಲ್ಲದ ನಿತ್ಯಕರ್ಮ,ಕರ್ತವ್ಯ ದೃಷ್ಟಿಯಿಂದ ಮಾಡುವುದು , -ಕರ್ತವ್ಯ ಕ್ರಿಯೆಯಿಂದ ಮೋಕ್ಷ. ಆನಂದಾನುಭವದ ವಿಚಾರವಿಲ್ಲ. ನ್ಯಾಯ ದರ್ಶನದಂತೆ ಚೈತನ್ಯವು ಆತ್ಮನ ಸ್ವಭಾವ ಗುಣವಲ್ಲ. ಮೋಕ್ಷಕ್ಕೆ ಕರ್ಮ ಮತ್ತು ಜ್ಞಾನ ಎರಡೂ ಅವಶ್ಯ . ಇದು ಜ್ಞಾನ ಕರ್ಮ ಸಮುಚ್ಚಯ ವಾದ. ಪ್ರಾಚೀನ ಮೀಮಾಂಸಕರು ಸ್ವರ್ಗವೇ ಕೊನೆಯ ಹಂತವೆನ್ನುವರು. ನಂತರದವರು ಮೋಕ್ಷ ವಿಚಾರವನ್ನು ಸೇರಿಸಿದರು.
ಅದ್ವೈತ ದರ್ಶನ
ಅದ್ವೈತದ ಪ್ರಕಾರ ಮೋಕ್ಷವು ,ಸತ್-ಚಿತ್-ಆನಂದದ ಸ್ಥಿತಿ/ ಸ್ವರೂಪಿ. ಅವಿದ್ಯೆಯ (ಮಾಯೆಯ) ಕಾರಣ ,ಆತ್ಮನಿಗೆ ಬಂಧನವಾಗಿದೆ ;ಎಂದರೆ ಅವನು ಸ್ವಸ್ವರೂಪವನ್ನು ತಿಳಿದಿಲ್ಲ. ಮಿಥ್ಯಾಭಾಸದ ನಿವಾರಣೆಯಾಗಿ ನಾನೇ ಬ್ರಹ್ಮವೆಂದು ಜ್ಞಾನ ಉದಯವಾದಾಗ ಮುಕ್ತಿ. ಬ್ರಹ್ಮವನ್ನು ತಿಳಿದವನು ಬ್ರಹ್ಮವೇಆಗುತ್ತಾನೆ ಎಂದು ಶ್ರುತಿಯು ಹೇಳುತ್ತದೆ . ಅಜ್ಞಾನದ ನಿವಾರಣೆಯು ದೇಹವಿದ್ದಾಗಲೂ , ಬಿಡುವಾಗಲೂ ಯಾವಾಗ ಬೇಕಾದರೂ ಆಗಬಹುದು. 'ಜೀವನ್ಮುಕ್ತಿ' ಯೂ ಉಂಟು , 'ವಿದೇಹಮುಕ್ತಿ'ಯೂ ಉಂಟು. ಕರ್ಮದಿಂದ** ಮುಕ್ತಿಯಿಲ್ಲ -ಚಿತ್ತ ಶುದ್ದಿಯಿಂದ ಮಾತ್ರಾ ಮುಕ್ತಿಯನ್ನು ಪಡೆಯಬಹುದು . ಜ್ಞಾನದಿಂದ ಮಾತ್ರಾ ಮುಕ್ತಿ ಪಡೆಯಯಬಹುದು (**ಹೋಮ,ಹವನ, ಯೋಗ ಪ್ರಾಣಯಾಮ, ಜಪ,ತಪ, ಪಾರಾಯಣ.ಭಕ್ತಿ-ಭಜನೆ, ಪೂಜೆ, ಯಾತ್ರೆ. ಸೇವೆ-ದಾನ-ಧರ್ಮ ಇತ್ಯಾದಿ ಕರ್ಮಗಳು ; ಜ್ಞಾನವೆಂದರೆ ತಾನೇ ಆತ್ಮನೆಂಬ -ಬ್ರಹ್ಮವೆಂಬ ಅರಿವು-ಅನುಭವ ; ಆತ್ಮವು ಮೂಲ ಚೈತನ್ಯದಲ್ಲಿ ಸೇರಿಹೋಗುವುದು.). (ಮೋಕ್ಷದ ವ್ಯಾಖ್ಯೆಯು ಉಳಿದ ದರ್ಶನಕ್ಕಿಂತ ಬೇರೆ ಮತ್ತು ಸ್ಪಷ್ಟ)

ಭಕ್ತಿಪಂಥದಲ್ಲಿ ಮೋಕ್ಷ

ವಿಶಿಷ್ಟಾದ್ವೈತ ಮತ್ತು ಮೋಕ್ಷ
ವಿಶಿಷಾದ್ವೈತದ ಪ್ರಕಾರ ವೈಕುಂಠವೆಂಬ ಅಪ್ರಾಕೃತ ಲೋಕದಲ್ಲಿ ಪರಮಾತ್ಮನಿಗೆ ಸಮನಾದ ಆನಂದವನ್ನು ಪಡೆಯುವುದೇ ಮುಕ್ತಿ. ಜೀವನು ದೇವಯಾನವೆಂಬ , ಜ್ಯೋತಿರ್ಮಾರ್ಗವನ್ನು ಹಿಡಿದು ಆನಂದಮಯವಾದ ವೈಕುಂಠವನ್ನು ಸೇರುತ್ತಾನೆ . ಸರ್ವಜ್ಞತ್ವಾದಿ ಗುಣಗಳನ್ನು ಪಡೆಯುತ್ತಾನೆ. ಕರ್ಮಸಂಬಂಧದಿಂದ ಪಾರಾಗಿ ಅಪ್ರಾಕೃತ (ದಿವ್ಯ) ದೇಹ ಪಡೆದು 'ಸಾಲೋಕ್ಯ ; ಸಾಮೀಪ್ಯ ; ಸಾರೂಪ್ಯ ; ಸಾಯುಜ್ಯ'ಗಳೆಂಬ ಮುಕ್ತಿಯನ್ನು ಪಡೆಯುತ್ತಾನೆ . ವಿಶ್ವೇಶ್ವರತ್ವ , ಜಗತ್ಕೃತ್ವ ಬಿಟ್ಟು ಉಳಿದ ಎಲ್ಲಾ ಈಶ್ವರನ-ಶಕ್ತಿ ಪಡೆಯುತ್ತಾನೆ. ಆದರೆ ಪರಮಾತ್ಮನಲ್ಲಿ ಸೇರಲಾರ ; ಅವನ ಕೈಂಕರ್ಯದಿಂದ ಆನಂದ ಪಡೆಯುತ್ತಾನೆ. ಇದನ್ನು ಪಡೆಯಲು , ಜ್ಞಾನ ಕರ್ಮ ಭಕ್ತಿ, ಮಾರ್ಗಗಳನ್ನು ಅನುಸರಿಸಬೇಕು. ಭಕ್ತಿ ಶ್ರೇಷ್ಠವಾದುದು. ಇದನ್ನು ಪಡೆಯಲು ಈಶ್ವರನ ಅನುಗ್ರಹವೂ ಬೇಕು. ಜೀವನ್ಮಕ್ತಿ ಎಂಬುದಿಲ್ಲ ; ಇದು ರಾಮಾನುಜರ ಸಿದ್ಧಾಂತ.
ಮಾಧ್ವಮತ-ದ್ವೈತ

ಮುಂದುವರಯುವುದು / ಮುಂದುವರೆದಿದೆ.

ನೋಡಿ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಗೀತೆ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಉಲ್ಲೇಖಗಳು

  1. see:
    • Mircea Eliade (1958, Reprinted: 2009), Yoga: Immortality and Freedom, Princeton University Press, ISBN 978-0691142036, pp 33-34;
    • Sarah Strauss (2005), Positioning Yoga, Berg/Oxford International, ISBN 1-85973-739-0, pp 15



"https://kn.wikipedia.org/w/index.php?title=ಮೋಕ್ಷ&oldid=425520" ಇಂದ ಪಡೆಯಲ್ಪಟ್ಟಿದೆ