ಮರಾಠಾ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Modifying ja:マラーター同盟
ಚು r2.7.2+) (Robot: Modifying el:Αυτοκρατορία των Μαράτα
೧೮ ನೇ ಸಾಲು: ೧೮ ನೇ ಸಾಲು:
[[da:Maratha-forbundet]]
[[da:Maratha-forbundet]]
[[de:Maratha]]
[[de:Maratha]]
[[el:Αυτοκρατορία των Μαράθα]]
[[el:Αυτοκρατορία των Μαράτα]]
[[en:Maratha Empire]]
[[en:Maratha Empire]]
[[eo:Maratha Imperio]]
[[eo:Maratha Imperio]]

೧೯:೧೧, ೨೧ ಅಕ್ಟೋಬರ್ ೨೦೧೨ ನಂತೆ ಪರಿಷ್ಕರಣೆ

ಸುಮಾರು ೧೭೫೮ರಲ್ಲಿ ಸಾಮ್ರಾಜ್ಯದ ಉತ್ತುಂಗದಲ್ಲಿ ವ್ಯಾಪ್ತಿ

ಮರಾಠ ಸಾಮ್ರಾಜ್ಯ ಅಥವಾ ಮರಾಠ ಒಕ್ಕೂಟವು ಇಂದಿನ ಭಾರತದಲ್ಲಿ ೧೬೭೪ ರಿಂದ ೧೮೧೮ ರವರೆಗೆ ಇದ್ದ ಒಂದು ಹಿಂದೂ ರಾಜ್ಯ. ತನ್ನ ತುತ್ತತುದಿಯನ್ನು ಮುಟ್ಟಿದಾಗ ಅದು ೨೫೦ ದಶಲಕ್ಷ ಎಕರೆ ( ೧ ದಶಲಕ್ಷ ಚದರ ಕಿ.ಮೀ) ಗಳಷ್ಟು ಅಂದರೆ ದಕ್ಷಿಣ ಏಷ್ಯಾದ ಮೂರನೇ ಒಂದು ಭಾಗದಷ್ಟು ಪ್ರದೇಶವನ್ನು ಹೊಂದಿತ್ತು.

ಸಂಕ್ಷಿಪ್ತ ಇತಿಹಾಸ

ಧ್ವಜ

ಬಾಳಿನುದ್ದಕ್ಕೂ ಬಿಜಾಪುರದ ಆದಿಲಶಾಹ ಮತ್ತು ಮುಘಲ್ ಚಕ್ರವರ್ತಿ ಔರಂಗಜೇಬರೊಂದಿಗೆ ಗೆರಿಲ್ಲಾ ಹೋರಾಟ ಮತ್ತು ಅನೆಕ ಸಾಹಸಗಳ ಮೂಲಕ ರಾಯಗಢವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ ಶಿವಾಜಿಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. ಶಿವಾಜಿಯ ಮೊಮ್ಮಗ ಶಾಹುವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು ಪೇಶ್ವೆ ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ ನಂತರ ಬಂದವರು ಸತಾರಾದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. ಭಾರತೀಯ ಉಪಖಂಡದ ಬಲುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಬೆಳವೆಣಿಗೆಗೆ , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ಕಡಿವಾಣ ಹಾಕಿತು.

ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ ಮೊದಲನೇ ಬಾಜೀರಾವ್ ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ ಮೂರನೆಯ ಪಾಣಿಪತ್ ಯುದ್ಧದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. ಶಿಂಧೆ , ಹೋಳ್ಕರ್ , ಗಾಯಕವಾಡ್ , ಪಂತಪ್ರತಿನಿಧಿ ಮತ್ತು ನೇವಳ್ಕರ್ ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: ಪುಣೆಯ ಪೇಶ್ವೆಗಳು ; ಮಾಳವ ಮತ್ತು ಗ್ವಾಲಿಯರ್ಸಿಂಧಿಯಾರು (ಮೂಲದಲ್ಲಿ ಇವರು ಶಿಂಧೆ);ಇಂದೂರ್ಹೋಳ್ಕರ್ ರು ;ನಾಗಪುರಭೋಂಸ್ಲೆ ಗಳು ; ಬರೋಡಗಾಯಕವಾಡ್ ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಜತೆಗಿನ ಮೂರು ಆಂಗ್ಲೋ ಮರಾಠಾ ಯುದ್ಧಗಳು ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . ಮೂರನೇ ಆಂಗ್ಲೋ ಮರಾಠಾ ಯುದ್ಧದಲ್ಲಿ ಕೊನೆಯ ಪೇಶ್ವೆಯಾದ ಎರಡನೇ ಬಾಜೀರಾಯನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು ಬ್ರಿಟಿಷ್ ಭಾರತವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.